ಒಟ್ಟು 1166 ಕಡೆಗಳಲ್ಲಿ , 101 ದಾಸರು , 935 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಳಿ ಕೊಗಿತಲ್ಲಾ - ಲಕ್ಷ್ಮೀಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.ಮೊದಲ ಜಾವದಲಿ ಮುಕುಂದನೆಂದು ಕೂಗಿಎರಡಲಿ ಶ್ರೀ ವೆಂಕಟಾದ್ರಿಯೆಂದು ||ಉರಗಗಿರಿಯ ವಾಸ ಯಾದವ ಕುಲ ಗೊಲ್ಲಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು 1ಮೂರು ಜಾವದಲಿ ಮುರಾರಿಯೆಂದು ಕೂಗಿನಾಕರಲಿ ನಾರಾಯಣಯೆನಲು ||ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋನೇರಿವಾಸ ವೆಂಕಟಕೃಷ್ಣರಾಯನೆಂದು 2ಪರಮಪುರುಷ ಮುಖ್ಯ ಆಧಾರಭೂತಕರುಣದ ಪುಂಜನು ಜಗದಾದಿ ತಾ ||ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು 3ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದಕೊಕ್ಕನು ಮೇಲೆ ನೆಗಹಿಕೊಳುತ ||ಚಕ್ಕನೆ ಕೇರಿ ಕೇರಿಯಗುಂಟ ಸಾಗುತಮುಕುಂದನಲ್ಲದೆ ಅನ್ಯರಾರಿಲ್ಲವೆಂದು 4ಐದು ಜಾವದಲಿ ಅನಂತನೆಂದು ಕೂಗಿಆರರಲ್ಲಿ ಅಳಗಾದ್ರೀಶಯೆಂದು ||ಏಳರಲ್ಲಿ ಕಾಶಿಯ ಬಿಂದುಮಾಧವಎಂಟಕೆ ಪುರಂದರವಿಠಲರಾಯನೆಂದು 5
--------------
ಪುರಂದರದಾಸರು
ಗಂಡಬಿಟ್ಟ ಗೈಯಾಳಿ ಕಾಣಣ್ಣ - ಅವಳಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.ಊರೊಳಗೆ ತಾನು ಪರದೇಶಿಯೊನ್ನವಳುಸಾರುತ ತಿರುಗುವಳು ಮನೆಮನೆಯಕೇರಿ - ಕೇರಿಗುಂಟ ಕಲೆಯತ ತಿರುಗುವಳುನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ 1ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿನೆತ್ತಿಗೆ ಮದ್ದನೆ ಊಡುವಳುಸತ್ಯರ ದೇವರ ಸತ್ಯ ನಿಜವಾದರೆಬತ್ತಲೆ ಅಡ್ಡಂಬಲೂಡೇನೆಂಬುವಳು 2ಹಲವು ಜನರೊಳು ಕಿವಿಮಾತನಾಡವಳುಹಲವು ಜನರೊಳು ಕಡಿದಾಡವಳುಹಲವು ಜನರೊಳ ಕೂಗಿ ಬೊಬ್ಬೆಯನಿಡುವಳುತಳವಾರ ಚಾವಡಿಯಲಿ ಬರಲಿ ಹೆಣ್ಣು 3ಪರಪುರುಷರ ಕೂಡಿ ಸರಸವಾಡುತ ಹೋಗಿನೆರೆದಿದ್ದ ಸಭೆಯಲಿ ಕರೆಯುವಳುಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳುಕರಿರೂಪದವಳ ನೀ ಕೆಣಕದಿರಣ್ಣ 4ಏಸು ಗೃಹಗಳೆಂದು ಎಣಿಸಿ ನೋಡಿಬಂದುಬೇಸರದೆ ಜನಕೆ ಹೇಳುವಳುಲೇಸಾಗಿ ಪುರಂದರವಿಠಲನು ಹೇಳಿದಹೇಸಿ ತೊತ್ತನು ನೀನು ಕೆಣಕದಿರಣ್ಣ 5
--------------
ಪುರಂದರದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು
ಚತುರ್ದಶಿಯ ದಿನ(ಹನುಮಂತನನ್ನು ಕುರಿತು)ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.ಇವನ್ಯಾರೆ ಮಹಾಶಿವನಂದದಿ ಮಾ-ಧವನ ಪೆಗಲೊಳಾಂತು ತವಕದಿ ಬರುವವ 1ದಾಡೆದಂತಮಸಗೀಡಿರುವದು ಮಹಾಕೋಡಗದಂತೆ ಸಗಾಢದಿ ಬರುವವ 2ಕಡಲೊಡೆಯನು ಮೃದುವಡಿಯಡರಿಸಿ ಬಿಡದಡಿಗಡಿಗಾಶ್ರೀತರೊಡಗೂಡಿ ಬರುವವ 3ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿನಾರಾಯಣನಿಗೀತ ಬಂಟನಾದಾದರಿದಿವೀರ ರಾಮವತಾರದಿ ಹಿಂದೆ ಹರಿಯಚಾರಕನಾಗಿ ಸೇವೆಯ ಗೈದ ಪರಿಯಕ್ರೂರ ದಶಾಸ್ಯನ ಗಾರುಗೆಡಿಸಿನೃಪವೀರನ ಪೆಗಲಿನೊಳೇರಿಸಿ ದೈತ್ಯರಭೂರಿವಧೆಗೆ ತಾ ಸಾರಥಿಯಾದವಕಾರುಣೀಕ ಮಹಾವೀರ್ಹನುಮಂತ 1ಆಮೇಲೆ ವೀರಾವೇಶದಿ ವಾರಿಧಿಯನುರಾಮನಪ್ಪಣೆಯಿಂದ ದಾಟಿದನಿವನುಭೂಮಿಜೆಗುಂಗುರ ಕೊಟ್ಟ ನಂತರದಿಕಾಮುಕರನು ಸದೆಬಡಿದನಾ ಕ್ಷಣದಿಹೇಮಖಚಿತ ಲಂಕಾಮಹಾನಗರವಹೋಮವ ಗೈದು ಸುತ್ರಾಮಾರಿಗಳ ನಿ-ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-ಡಾಮಣಿ ತಂದ ಮಹಾಮಹಿಮನು ಇವ 2ವಾರಿಮುಖಿ ನೀ ಕೇಳಿದರಿಂದ ಬಂದವೀರ ಹನುಮಂತನನೇರಿ ಗೋವಿಂದಸ್ವಾರಿಗೆ ಪೊರಟ ಚಾತುರ್ದಶಿ ದಿವಸಆರತಿಯನು ಕೈಕೊಳ್ಳುವ ಶ್ರೀನಿವಾಸಭೇರಿಮೃದಂಗ ಮಹಾರವದಿಂದ ಸ-ರೋರುಹನಾಭ ಮುರಾರಿ ಶರಣರುದ್ಧಾರಣಗೈಯುವ ಕಾರಣದಿಂದ ಪಾ-ದಾರವಿಂದಗಳ ತೋರಿಸಿ ಕೊಡುವ 3ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿನಲವಿಂದ ವೇದಘೋಷವ ಕೇಳ್ವಶೌರಿಜಲಜಭವಾದಿ ನಿರ್ಜರರಿಗಸಾಧ್ಯಸುಲಭನಾದನು ಭಕ್ತಜನಕಿದುಚೋದ್ಯಸುಲಲಿತ ಮಂಟಪದೊಳೊ ನೆಲಸುತ ನಿ-ಶ್ಚಲಿತಾನಂದ ಮಂಗಲದ ಮಹೋತ್ಸವಗಳನೆಲ್ಲವ ಕೈಕೊಳುತಲಿ ಭಕ್ತರಸಲಹುವ ನಿರುತದಿ ಮಲಯಜಗಂಧಿನಿ 4ಶ್ರೀಕಾಂತ ಬಳಿಕ ಭಕ್ತರ ಒಡಗೂಡಿಏಕಾಂತ ಸೇವೆಯಗೊಂಡ ಕೃಪೆಮಾಡಿಸಾಕಾರವಾಗಿ ತೋರುವ ಕಾಣೆ ನಮಗೆಬೇಕಾದ ಇಷ್ಟವ ಕೊಡುವ ಭಕ್ತರಿಗೆಶ್ರೀಕರ ನಾರಾಯಣ ಶ್ರೀನಿವಾಸ ಕೃ-ಪಾಕರ ವಿಬುಧಾನೇಕಾರ್ಚಿತ ರ-ತ್ನಾಕರಶಯನ ಸುಖಾಕರ ಕೋಟಿ ವಿ-ಚಾರಕ ಭಾಸತ್ರಿಲೋಕಾಧಿಪನಿವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು
ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ಪಸತ್ಯಭಾಮೆಯ ರಮಣನ ಕ್ರಿಯೆಗಳುಉತ್ತಮ ಋಷಿವರರರಿಯರೆನಲು ಬಹು ಅ.ಪಮಿತ್ರೆ ರುಕ್ಮಿಣಿ ಕೂಡುತಹರಿಇರಲು ಪಾರಿಜಾತದ ಹೂಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹಉತ್ತಮ ಶ್ರೀಹರಿ ಸಮರದಿ ಸೋಲಲುಮತ್ತೆ ಇಂದ್ರ ಜಯಭೇರಿಯ ಹೊಡಿಸಲುಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪವೃಕ್ಷಸಹಿತ ದ್ವಾರಕಿಗೈತರೆ ಬಹು 1ದುರುಳದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲುಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದುತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆಜರದವಲ್ಲಿ ಹೊದಿಸುತ ಮಾಯವಾಗಲುಖಳರು ಬಂದೊದ್ದರು ಮಚುಕುಂದಗೆತೆರೆದು ಕಣ್ಣ ನೋಡಲು ಖಳರೆಲ್ಲರುಉರಿದು ಭಸ್ಮವಾದರು ಕೇಳಿರಿ ಬಹು 2ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲುಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದಪರಿಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲುಸುತ್ತಲು ನಿಂತರು ಖಳರೆಲ್ಲರುಹರಿಒತ್ತಿ ತುಳಿಯೆ ಪರ್ವತ ಕುಸಿಯಲು ಜಲಎತ್ತಿ ಮುಖಕೆರಚಲು ಖಳರೋಡಲುಮೆತ್ತನಿಳಿದುದ್ವಾರಕಿ ಸೇರಿದ ಬಹು 3ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉೂಳುಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲುಅಕ್ಕರದಲಿ ದೇವಕಿತನಯ ತನ್ನಮಿತ್ರನ ಸುತನ ವಿಯೋಗ ದು:ಖದತಕ್ಕ ಉಪಾಯದಿ ಪರಿಹರಿಸಲು ಸಾ-ಮಥ್ರ್ಯನಾಗಿರಲು ನರನಂತೆ ನಟಿಸಿದ 4ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲುದೈತ್ಯದಾನವಜರೆಸುತ ಬರುತಿರಲು ಶ್ರೀಹರಿತಾ ತಿಳಿದುಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲುಪಟ್ಟದರಿಸಿ ಅಷ್ಟ ಸತಿಯರು ಸೌಳಸಾಸಿರ ಸತಿಯರ ಕೂಡುವ ಹರುಷದಿಕರ್ತೃಕಮಲನಾಭ ವಿಠ್ಠಲ ಭಕುತರಇಚ್ಛಿಸಲಿಸಲೀಪರಿ ನಟಿಸಿದ ಬಹು 5
--------------
ನಿಡಗುರುಕಿ ಜೀವೂಬಾಯಿ
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ಜನನೀ ತ್ರಿಜಗತಿ ಜನಾರ್ದನೀ ಜನನೀಜಯತು ಶ್ರೀಪದ್ಮಾವತೀ ಪ.ಗುಣಗಣಾರ್ಣವೆ ವಿಶ್ವಪೂಜಿತಜನನಮರಣವಿದೂರೆ ಪದ್ಮಾಸನೆಸನಾಥೆ ಸದಾ ಸುಮಂಗಲೆಘನಗಗನಭೂಪಾಲನಂದಿನಿ ಅ.ಪ.ಶ್ರೀನಿವಾಸನ ರಾಣಿ ಸರ್ವಾರ್ಥ ನಿ-ದಾನಾಂಬುಜಪಾಣಿಭಾನುಕೋಟಿಸಮಾನ ತೇಜೆ ಸ-ದಾನುರಾಗಪ್ರದಾನೆ ವಿಬುಧ-ಶ್ರೇಣಿನುತೆ ಮಹದಾದಿಮಾಯಾ-ಮಾನಿ ಮಾಧವಮನವಿಲಾಸಿನಿ 1ಸುಂದರಿ ಸುಮನೋಹರಿ ಸುಜ್ಞಾನಾ-ನಂದೆ ಸಿಂಧುಕುವರಿಚಂದ್ರವದನೆ ಚರಾಚರಾತ್ಮಕಿವಂದನೀಯೆ ಪರೇಶಪರಮಾ-ನಂದರೂಪೆ ಸನತ್ಸುಜಾತ ಸ-ನಂದನಾದಿಮುನೀಂದ್ರವಂದಿತೆ 2ಅಂಬೆ ಶ್ರೀಹರಿಪ್ರೀತೆಶಂಭುಸಂಭಾವಿತೆ ತ್ರಿಲೋಕಾ-ರಂಭಸೂತ್ರೆ ಪವಿತ್ರೆ ವಿಶ್ವಕು-ಟುಂಬೆ ಕಮಲಯನೇತ್ರೆ ಸಾಧ್ವೀಕ-ದಂಬಮಸ್ತಕಮಣಿಪ್ರಭಾಶಿನಿ 3ಪದ್ಮ ಸರೋವಾಸಿನೀ ಪಾವನಹೃತ್ಪದ್ಮನಿತ್ಯಭಾಸಿನಿಪದ್ಮನವಕ್ರೀಡಾವಿಲಾಸಿನಿ ಮ-ಹನ್ಮನೋಧ್ಯಾನಾಧಿರೂಢೆ ಸು-ಪದ್ಮಹಸ್ತೆ ನಮಸ್ತೆ ಪಾವನೆಪದ್ಮನಾಭನರಮಣಿ ಕರುಣಿ 4ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-ಕರೆ ಕಾಳಾಹಿವೇಣಿಧರೆಯೊಳುತ್ತಮ ಕಾರ್ಕಳದಿ ಸು-ಸ್ಥಿರನಿವಸವ ಗೈದೆ ಕರುಣಾ-ಶರಧಿಭಕ್ತರ ಪ್ರಾರ್ಥನೆಯ ಸ್ವೀ-ಕರಿಸಿ ಪೊರೆವಿಷ್ಟಾರ್ಥದಾಯಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಡಿಂಗುಡಿಂಗಾಯ್ತು ಶ್ರೀಹರಿಸೇವೆ ಪ.ರಂಗರಾಯನ ಚರಣಂಗಳ ಸೇವಿಪಡಿಂಗರಿಗೆಲ್ಲ ಸುಮಂಗಲವಾಯ್ತು 1ಎಲ್ಲಿ ಪೋದರು ಭಯವಿಲ್ಲದ ತೆರನಾಯ್ತುಫುಲ್ಲನಾಭನ ದಯದಲ್ಲಿದ್ದ ಕಾರಣ 2ಬದ್ಧವಾಗಿಹ ದಾರಿದ್ರಾವಸ್ಥೆಯಛಿದ್ರಿಸಿ ಹರಿದಯವಿದ್ದ ಕಾರಣದಿಂದ 3ಏನಾರಾಗಲಿ ಎಂತಾದರಿನ್ನೇನುಶ್ರೀನಿವಾಸನು ದಯ ತಾನೆ ಗೈದರಿಂದ 4ಮಾರಜನಕಲಕ್ಷ್ಮೀನಾರಾಯಣನೊಳುತೂರಿಯಾನಂದಕೆ ಸೇರಿದ್ದ ಕಾರಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
--------------
ಪ್ರಸನ್ನವೆಂಕಟದಾಸರು
ತ್ರಿಜಗದ್ವಾ ್ಯಪಕಹರಿಎನುವರು ಸುಜನರುನಿಜದಲಿ ಪೇಳಿವದಾರಕ್ಕಾಅಜಭವಾದಿಗಳಿಗರಸನಾದಹದಿನಾಲ್ಕು ಲೋಕಕೆ ದೊರೆ ತಂಗಿ 1ನೀರೊಳು ಮುಳುಗುತ ಮೀನರೂಪದಿಸಾರುವ ಮಯ್ಯವದಾರಕ್ಕನೀರೊಳು ಮುಳುಗಿ ವೇದವ ತಂದು ಸುತಗಿತ್ತಧೀರ ಮತ್ಸ್ಯಮೂರುತಿ ತಂಗಿ 2ಭಾರಬೆನ್ನಿಲಿ ಪೊತ್ತು ಮೋರೆ ಕೆಳಗೆ ಮಾಡಿನೀರೊಳು ವಾಸಿಪದಾರಕ್ಕವಾರಿಧಿಮಥಿಸಿದಮೃತ ಸುರರಿಗೆ ಇತ್ತಧೀರಕೂರ್ಮಮೂರುತಿ ತಂಗಿ3ಕೋರೆದಾಡಿಯಲಿ ಧಾರುಣಿ ನೆಗಹಿದಫೋರನೆನುವರಿವದಾರಕ್ಕಕ್ರೂರ ಹಿರಣ್ಯಾಕ್ಷನ ಕೊಂದು ಭೂಮಿಯ ತಂದಶೂರ ವರಹ ಮೂರುತಿ ತಂಗಿ 4ಕ್ರೂರರೂಪತಾಳುತ ಕರುಳ್ವನಮಾಲೆ ಹಾಕಿದವದಾರಕ್ಕಪೋರನ ಸಲಹಲು ಕಂಬದಿಂದುಸಿದನಾರಸಿಂಹ ಮೂರುತಿ ತಂಗಿ 5ಮೂರಡಿ ಭೂಮಿಯ ದಾನವ ಬೇಡಿದಹಾರ್ವನೆನುವನಿವದಾರಕ್ಕಧೀರ ಬಲಿಯ ಭಕ್ತಿಗೆ ಮೆಚ್ಚಿ ಬಾಗಿಲು ಕಾಯ್ದವಾಮನ ಮೂರುತಿ ಇವ ತಂಗಿ 6ಮೂರು ಏಳುಬಾರಿಧಾರುಣಿ ಚರಿಸಿದಶೂರನೆನುವರಿವದಾರಕ್ಕವೀರ ಕ್ಷತ್ರಿಯರ ಮದವನಡಗಿಸಿದ ಪರಶು-ರಾಮ ಮೂರುತಿ ತಂಗಿ 7ಕೋತಿಗಳೊಡನಾಡಿ ಸೇತುವೆ ಕಟ್ಟಿದ ಪ್ರ-ಖ್ಯಾತನೆನುವರಿವದಾರಕ್ಕಮಾತರಿಶ್ವನಿಗೆ ಒಲಿದಂಥ ದಶರಥರಾಮ ಚಂದ್ರ ಮೂರುತಿ ತಂಗಿ 8ಗೋಕುಲದೊಳು ಪಾಲ್ಬೆಣ್ಣೆ ಮೊಸರುನವನೀತಚೋರನಿವದಾರಕ್ಕಲೋಕಗಳೆಲ್ಲಾ ತಾಯಿಗೆ ಬಾಯೊಳುತೋರ್ದಗೋಪಾಲಕೃಷ್ಣ ಮೂರುತಿ ತಂಗಿ 9ತ್ರಿಪುರರ ಸತಿಯರ ವ್ರತಗಳನಳಿದನುಗುಪಿತನೆನುವರಿವದಾರಕ್ಕಕಪಟನಾಟಕ ಸೂತ್ರಧಾರಿ ಶ್ರೀ-ಹರಿಬೌದ್ಧ ಮೂರುತಿ ತಂಗಿ10ಅಶ್ವುವನೇರುತ ಹಸ್ತದಿ ಖಡ್ಗ ಪುರು-ಷೋತ್ತಮನೆನುವರಿವದಾರಕ್ಕಸ್ವಸ್ತದಿ ಕಲಿಯೊಳು ಸುಜನರ ಪಾಲಿಪಕರ್ತೃ ಕಲ್ಕಿ ಮೂರುತಿ ತಂಗಿ 11ಶಂಖು ಚಕ್ರ ಗದೆ ಪದುಮವು ಸಿರದಿ ಕಿ-ರೀಟಧಾರಿ ಇವದಾರಕ್ಕಪಂಕಜಾಕ್ಷಿ ಪದ್ಮಾವತಿಪತಿಶ್ರೀ-ವೆಂಕಟೇಶ ಮೂರುತಿ ತಂಗಿ 12ಮಮತೆಲಿ ಸುಜನರ ಶ್ರಮ ಪರಿಹರಿಸುವಕಮಲಾಪತಿ ಇವದಾರಕ್ಕಕಮಲಪತ್ರಾಕ್ಷ ಶ್ರೀ ಕಮಲನಾಭ ವಿ-ಠ್ಠಲ ಮೂರುತಿ ಕೇಳಿವ ತಂಗಿ 13
--------------
ನಿಡಗುರುಕಿ ಜೀವೂಬಾಯಿ
ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |ದಾಸನನು ಕರೆದೊಯ್ದು ||ಸಾಸಿರನಾಮ ವಿಲಾಸನ ಮೂರ್ತಿಯ |ಲೇಸಾಗಿ ತೋರೆನಗೆ ಪಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |ಶಿರದ ಅಂದದ ದೇವನ ||ಉರುವ ಶಾಪಕೆ ತಾನು ಕಿರಿದಾಗಿ ಇರುವನ |ಶಿರದೊಳು ಧರಿಸಿದನ ||ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |ಸ್ಥಿರವಾಗಿ ನೆಲಸಿಪ್ಪನ ||ಕರುಣವಾರಿಧಿ ವೆಂಕಟೇಶನ ಚರಣವ |ಕರೆದೊಯ್ದು ತೋರೆನಗೆ 1ವಾರಿಯೊಳುದಿಸಿದ ನಾರಿಯ ಮಧ್ಯದಿ |ಏರಿಯೆ ಕುಳಿತವನ ||ವಾರಿಜವದನದಿ ತೋರಿದ ಸಾರದಿ |ಮೂರೊಂದು ಪೆಸರವನ ||ಮೇರುವಿನಗ್ರದಿ ಊರಿದ ಚರಣವ |ಸಾರಿದವರ ಜೀವನ ||ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||ದಾರವಿಂದವ ತೋರೆನಗೆ 2ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |ಮಾತೆಯ ಸಲಹಿದನ ||ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |ಘಾತಿಸಿ ತರಿದವನ ||ನೂತನವಾಗಿಹ ನಾಮ ಶೈಲದ ಮೇಲೆ |ಕಾತರದೊಳು ನಿಂದನ ||ಪಾತಕನಾಶನ ಶ್ರೀವೆಂಕಟೇಶನ |ರೀತಿಯ ತೋರೆನಗೆ 3ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |ವಶತಪ್ಪಿ ನಡೆವವನ ||ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |ಎಸೆವ ಮಹಾವೀರನ ||ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |ಕುಶಲದಿ ನಿಂದವನ ||ನಸುಮುದ್ದು ಶ್ರೀ ವೆಂಕಟೇಶನ ಚರಣದ |ಬಿಸರುಹ ತೋರೆನಗೆ 4ಪಾದನಾಲ್ಕನು ಮೋದಿನಿಯೊಳಗೂರಿಯೆ |ಆದರಿಸುತ ಬಪ್ಪನ ಮೇ ||ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |ಕಾದು ಕೊಳ್ಳುತಲಿಪ್ಪನ ||ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |ಹಾದಿಯನಿತ್ತವನ ||ಸಾಧಿಸಿ ಇಂತಹ ಶ್ರೀ ವೆಂಕಟೇಶನ |ಪಾದವ ತೋರೆನಗೆ 5ಆದಿನಾರಾಯಣನೆಂಬ ಪರ್ವತನು |ಭೇದಿಸಿ ನಿಂತವನ ||ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |ಪಾದವನೂರಿದನ ||ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |ಕಾದುಕೊಳ್ಳುತಲಿಪ್ಪನ - ವಿ ||ನೋದ ಮೂರುತಿಯಾದ ಶ್ರೀ ವೆಂಕಟೇಶನ |ಪಾದವ ತೋರೆನಗೆ 6ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |ಪುತ್ರಿಯ ತಂದವನ ||ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |ನಿತ್ಯದೊಳಿರುತಿಪ್ಪನ ||ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |ಪುತ್ರನೆಂದೆನಿಸಿದನ ||ಹತ್ತಿರ ಕರೆದೊಯ್ದು ಪುರಂದರವಿಠಲನ |ನಿತ್ಯದಿ ತೋರೆನಗೆ 7
--------------
ಪುರಂದರದಾಸರು
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು