ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು
ಮಹಾಲಕ್ಷ್ಮಿ50ದಯಮಾಡಮ್ಮ ದಯಮಾಡಮ್ಮಹಯವದನನ ಪ್ರಿಯೆ ಪವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪಶಂಬರಾರಿಪಿತನ ರಾಣಿ ನಂಬಿಸ್ತುತಿಸುವೆಅಂಬುಜನಾಭನ ಧ್ಯಾನಸಂಭ್ರಮಎನಗೀಯೆ1ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ 2ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ 3ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ 4ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ 5
--------------
ನಿಡಗುರುಕಿ ಜೀವೂಬಾಯಿ
ಮಾಡುಸಂಸಾರ ಅಂಟದಂದದಿ ಮನುಜಮಾಡಿದರೆ ಸತ್ಪುರುಷರೊಳಗೆ ನೀ ಕುಲಜಪಜಾರೆ ಹೆಂಡತಿಯಾಗೆ ಮನಸಿಗೆ ತರಬೇಡಆರಾದರಭಿಮಾನ ಹಚ್ಚಿಕೊಳಬೇಡಶರೀರ ನಿನ್ನದು ಈಗ ಎಂದು ಎನಬೇಡನೂರು ದೂಷಣವಾಡೆ ನೋಯಬೇಡ1ಎನ್ನ ಮನೆ ಪಶು ಬಂಧು ಇಂದೀಗ ಬೇಡಅನ್ಯರನು ಬೇರೆಯವರೆಂದು ನುಡಿಬೇಡಭಿನ್ನ ಪರಮಾತ್ಮನೆಂದು ಜಗವ ಕಾಣಲು ಬೇಡನೀ ಬ್ರಹ್ಮೆಂಬುದನು ಮರೆಯಬೇಡ2ಮಾಡಬೇಕೆನಿಸಿದರೆ ಸಂಸಾರವನುಮಾಡುಕೂಡಿದರೆ ಹತ್ತುವುದು ನಿನಗೆ ಭವಕೇಡುಪೀಡೆಯಿದು ಮಮತೆಯ ಬಿಟ್ಟು ಬೆರದಾಡುಗೂಢ ಚಿದಾನಂದ ನೀನಹುದಲ್ಲವೇನೋಡು3
--------------
ಚಿದಾನಂದ ಅವಧೂತರು
ಮಾಡುಸಾಧು ಸೇವೆಯ ಬೇಡು ಆಭಯಕೂಡು ನಂತರ ನೀ ನಿರಂತರೀಡಾಡಿದರೆಅಂಜಿ ಓಡದೆ ಆತ್ಮ ಪ.ಸಂತರೊಳು ಕುತರ್ಕ ಕಲ್ಪಾಂತ ರೌರವನರ್ಕಸಂತರೊಳು ಉಗ್ರ ಮನಸು ಆದ್ಯಂತ ಪಾಪದ ಬೆಳಸುಸಂತರ ಕೂಡ ದುಶ್ಚಿತ್ತ ದೇಹಾಂತ ಪ್ರಾಯಶ್ಚಿತ್ತಸಂತರಾಧೀನನಾದರೆಹರಿತಾ ಸಂತೋಷದಿಂದ ಒಲಿವನುನಿತ್ಯ1ತೀರ್ಥ ಸ್ನಾನವು ಹಲವು ಕಾಲೋತ್ತರಕಾಹುದು ಫಲವುಮೂರ್ತಿಔಪಾಸನವು ಧರ್ಮಾರ್ಥ ಮುಂದಣ ಅನುವುಅರ್ಥಗಳ ವಿತರಣವು ಶೂನ್ಯಾರ್ಥ ಸಮಯಕೆ ದಣಿವುಸಾಥರ್Àಕವು ಸಧ್ಯ ಸಾಧುನಿಕರದಗಾತ್ರಕ್ಷೇತ್ರಯಾತ್ರೆಯ ಬಿಡದೆ2ಸಾಧುಸಂಗವಗಿಲ್ಲ ಮುಕ್ತಿಯ ಹಾದಿ ಅವನಿಂಗಿಲ್ಲಸಾಧುರದಾವಹಳಿವ ತಮಸಕೈದುವುದು ಅವನ ಕುಲವುಸಾಧುಕೃಪೆ ದಾವಗುಂಟು ಎಲ್ಲಿ ಹೋದರಾನಂದದ ಗಂಟುಸಾಧುಪ್ರಿಯ ಪ್ರಸನ್ವೆಂಕಟರಮಣನು ಸಾಧುರ ಮೆಚ್ಚಿದವರಿಗೆಮೆಚ್ಚುವನು 3
--------------
ಪ್ರಸನ್ನವೆಂಕಟದಾಸರು
ಮಾಡೋ ಸುವಿಚಾರ ಸಾಧನಾ |ಹವಣಿಕಿಯಲಿ ನಿನ್ನ ಮಾಡೊಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಮಾಡಿ ನಿನ್ನ ಕಡಿ ಮೋಹ ಬೇಡಿ ಘನಗೂಡಿನಲ್ಲಿಒಡಗೂಡಿಸರ್ಕನೆ| ಮಾಡೊಅ. ಪ.ಶ್ರುತಿತತಿಯ ಪೇಳಿಹ ವಚನ ಸತತ ಮಾಡೊನೀ ಮಥನದನಾ | ಇತರ ಭಾವನತಿಗಳೆದು |ಶಾಂತಿನಿಜ ಸ್ಥಿತಿಯ ತಾಳಿ ಸದ್ಗತಿಪಡೆಯೊ ನೀ ಮಾಡೊ1ಪರಿಪರಿಯ ಜನ್ಮಂಗಳನು | ಧರಿಸಿ ಬಟ್ಟಿಬಹುಕ್ಲೇಶವನು ಪರಿಹರಿಸಿಗುರುವರನ ಕರುಣದಿಂದರಿತುಕೊಳ್ಳೊನಿನ್ನರಿವು ನೋಡಿ ನೀ ಮಾಡೊ2ಸ್ಥೂಲ ಸೂಕ್ಷ್ಮ ಕಾರಣದುದಯಾ |ಮೂಲಉನ್ಮನಿಕೀಲ ಸಾಕ್ಷಿಯನುಕೂಲಶಂಕರನ ಲೀಲೆ ನೋಡಿ ನೀ ಮಾಡೊ3
--------------
ಜಕ್ಕಪ್ಪಯ್ಯನವರು
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಧವಜಯಮಾಧವಜಯಯಾದವ ಕುಲಮಣಿ ಭೂದೇವೀಪ್ರಿಯ ಪ.ವಿದ್ಯಾಧರಮುನಿ ಸದ್ಯೋಜಾತ ವಿರಿಂಚಾದ್ಯರ್ಚಿತ ವೇದವೇದ್ಯ ಮುಕುಂದ 1ಸ್ವರ್ಣಗಿರೀಶ ಸುಪರ್ಣಗಮನವಿಶ್ವನಿರ್ಣಯ ಶೀಲ ದಯಾರ್ಣವ ಪೂರ್ಣ 2ಪುಣ್ಯ ಸತ್ಪುರುಷವರೇಣ್ಯದನುಜಜನಾರಣ್ಯಪಾವಕ ದೋಷಶೂನ್ಯಗುಣಾಂಕ3ಕಠಿಣ ದಂಡಕ ದೇಶಾಟಣ ಸುಪ್ಲವಗ ಸಂಘಟಣಾಹಿಫಣ ತಟನಟಣ ಶ್ರೀಮೂರ್ತೆ 4ಕಿಂಕರರಕ್ಷ ನಿಶ್ಯಂಕ ಸದಾದೇವಸಂಕಟಹರ ಪ್ರಸನ್ವೆಂಕಟವರದ 5
--------------
ಪ್ರಸನ್ನವೆಂಕಟದಾಸರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು
ಮಾನಭಂಗವಮಾರಿ ಮೇಲುಪಚಾರವ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಏನ ಮಾಡಿದರಿಲ್ಲಿ ಇರಬಾರದಯ್ಯ ಪ.ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
--------------
ಪುರಂದರದಾಸರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ಮಾಮವ ಮಮ ಕುಲಸ್ವಾಮಿ ಗುಹನತಜನ ದುರಿತಾಪಹ ಪ.ಭೀಮವೀರ್ಯ ನಿಸ್ಸೀಮಪರಾಕ್ರಮಧೀಮತಾಂವರ ನಿರಾಮಯ ಜಯ ಜಯ ಅ.ಪ.ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನಪಾವನ್ನಮೀನಕೇತನಸಮಾನ ಸಹಜ ಲಾವಣ್ಯಗಾನಲೋಲ ಕರುಣಾನಿಧಿ ಸುಮನಸ-ಸೇನಾನಾಥ ಭಾವನಿಸುತ ಸುಹಿತ 1ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯನಿಟಿಲಾಕ್ಷತನಯ ನಿಗಮಜÕ ಬಾಹುಲೇಯಕುಟಿಲ ಹೃದಯ ಖಲಪಟಲವಿದಾರಣತಟಿತ್ಸಹಸ್ರೋತ್ಕಟರುಚಿರಮಕುಟ2ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಮವ ಯತಿಕುಲೋತ್ತುಂಗ ಪಶ್ರೀಮನೋಹರ ರಘು - ರಾಮ ಪದದ್ವಯತಾಮರಸ- ಯುಗ-ಭೃಂಗಅ.ಪಭರ್ಜಿತ ದೋಷತರಂಗ1ಸಾಧಿತ ಹರಿಮತ - ಭೇದಿತಪÀರಮತಛೇದಿತ - ಮಾಯಿ - ಪತಂಗ 2ತೋಷಿತಯದುವರ - ಪೋಷಿತದ್ವಿಜಕುಲದೂೀಷಿತ - ದುರ್ಜನ - ಸಂಘ 3ಮೋದಿತಸುಜನಾ - ರಾಧಿತ ಸುರಗಣಾ -ಸಾದಿತ ಶ್ರೀಹರಿಯಂಗ 4ದಾತಗುರುಜಗ- ನ್ನಾಥವಿಠಲಪದಪಾಥೋದ್ಭವ ಯುಗ ಸಂಗಾ 5
--------------
ಗುರುಜಗನ್ನಾಥದಾಸರು
ಮಾಯಾಮಯ ಜಗವೆಲ್ಲ ಇದ-ರಾಯತ ತಿಳಿದವರಿಲ್ಲ ಪ.ಕಾಯದಿಂ ಜೀವನಿಕಾಯವ ಬಂಧಿಸೆನೋಯಿಸುವಳು ಸುಳ್ಳಲ್ಲ ಅ.ಪ.ತಿಳಿದು ತಿಳಿಯದಂತೆ ಮಾಡಿ ಹೊರ-ಒಳಗಿರುವಳು ನಲಿದಾಡಿಹಲವು ಹಂಬಲವ ಮನದೊಳು ಪುಟ್ಟಿಸೆನೆಲೆಗೆಡಿಸುವಳೊಡಗೂಡಿ 1ಯೋಷಿದ್ರೂಪವೆ ಮುಖ್ಯ ಅ-ಲ್ಪಾಸೆಗೆ ಗೈವಳು ಸಖ್ಯದೋಷದಿ ಪುಣ್ಯದವಾಸನೆತೋರ್ಪಳುಜೈಸಲಾರಿಂದಶಕ್ಯ 2ಕರ್ತಲಕ್ಷ್ಮೀನಾರಾಯಣನಭೃತ್ಯರ ಕಂಡರೆ ದೂರಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-ರಾರ್ಥಕೆ ಕೊಡಳು ವಿಚಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಯೆಎನ್ನ ಕಾಯವನ್ನುಪಾಯದಿಂದ ಮೋಹಿಸಿ |ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
--------------
ಪುರಂದರದಾಸರು
ಮಾರಿತೋರೆ ನೀರೆ ಕರೆಯ ಬಾರೆ ಪ.ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆಹ್ಯಾಂಗ ಮಾಡಲಿಯೆಂದುಹೋಗಿ ಕೋಣಿಯನ್ಹೊಕ್ಕೆ 1ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆಒದರಿ ಆಣಿಯನಿಟ್ಟೆಕದನತೆಗೆದ್ಹೋಗಿ ಗದಗದ ನಡಗುವಿ2ವಾಸುದೇವರ ತಂಗಿ ಸೋಸಿಲಾಣಿಯನಿಟ್ಟುಸೋಸಿಲಾಣಿಯನಿಟ್ಟ ಶ್ರೀಶನಸತಿಯರು ದಾಸಿ ಎನಿಸುವರೇನ 3ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟುಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕತಪ್ಪು ತಪ್ಪೆನ ಬಾರ 4ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲುಎದೆ ಝಲ್ಲು ಝಲ್ಲೆನುತಿರೆ 5ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆಇಲ್ಲಿಗೆಬಂದ ಪುಟ್ಟ ಸುಭದ್ರಾಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ 6ಪೋರಬುದ್ದಿಯಿಂದ ಸಾರಿ ಆಣೆಯನಿಟ್ಟೆಸಾರಿ ಆಣಿಯನಿಟ್ಟೆನಾರಿರುಕ್ಮಿಣಿ ಬರಲು ಹಾರುತಿದೆ ಎದೆ 7ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆಆಣಿಸೊಕ್ಕಿನಿಂದÀಲೆ ಇಟ್ಟೆ 8ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆಆಣಿಯನಿಟ್ಟೆ ನಮ್ಮ ಕಾಣುತಒಳಗೆ ಗುಮ್ಮನಂತಡಗಿದಿ 9
--------------
ಗಲಗಲಿಅವ್ವನವರು