ಒಟ್ಟು 1100 ಕಡೆಗಳಲ್ಲಿ , 102 ದಾಸರು , 994 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸಕಲಕಾರ್ಯಾಂತರ್ಗತನಾಗಿ ಹರಿ ಭಕುತರ ಹೃದಯದಲಿ ನೆಲಸಿ ಭಕುತರ ಮನ ಬಂದಂತೆ ಕುಣಿಸೆ ಅವರನು ಹರಿ ಸಕಲಕಾಲದಲ್ಲೂ ಕಾದು ಕೊಂಡಿದ್ದು ಸಲಹುವ ಶ್ರೀ ಶ್ರೀನಿವಾಸ ಪ. ಯಾವಾಗ ಬರುವನೋ ಭಕ್ತರೆಡೆಗೆ ಹರಿ ಹರಿ ಆವಾಗಲಾಗಮಿಸುವುದೇ ಪರ್ವಕಾಲ ಹರಿಯ ಆವಾಗಲೇ ನೆನದು ಮಿಂದು ಧ್ಯಾನಿಸೆ ಆವಾಗಲೇ ಸಂಧ್ಯಾಸಕಲ ಕರ್ಮವ ನಡೆಸೆ ಯಾವಾಗಲೂ ಹರಿ ತಾ ತನ್ನ ಭಕ್ತರ ಕೈ ಬಿಡ ಯಾವ ಕಾಲದಲ್ಲೂ ಶ್ರೀ ಶ್ರೀನಿವಾಸ 1 ನಾನು ದೊಡ್ಡವ ನೀನು ದೊಡ್ಡವನೆಂದು ಹೊಡೆದಾಡದೇ ನಿಮಗೂ ನಮಗೂ ಮತ್ತೊಬ್ಬನಿಹನು ಹರಿ ನಿಮಗ್ಯಾತಕೀ ಛಲದ ವಾದ ಮನುಜರೇ ಅನುದಿನವೂ ನೆನೆಯಿರಿ ಶ್ರೀಹರಿ ಶ್ರೀ ಶ್ರೀನಿವಾಸನ್ನ ಸಕಲರಿಗೂ ದೊಡ್ಡವನವನೇ ಕೇಳಿ ಸಜ್ಜನರೇ 2 ಕಾಲ ಆ ಕಾಲವೆಂದಿಲ್ಲ ಹರಿಗೆ ತನ್ನ ಭಕ್ತರ ಸಾಕಲು ಈ ಸಮಯ ಆ ಸಮಯವೆಂದು ನೋಡನು ಹರಿ ಇಂಥಾ ಈ ಕರುಣದೊರೆಯೆಲ್ಲಾದರುಂಟೆ ಜಗದಿ ಈ ತನುವಿರುವ ತನಕ ಈ ಪರಮ ಪುರುಷನನು ಬೇಕಾದ ಕಾಲದಲಿ ಈ ಮನುಜ ಜಪಿಸುತಿರೆ ಕಮಲನಾಭ ಶ್ರೀ ಶ್ರೀನಿವಾಸ ಸಲಹದಿರನೇ ನಿನ್ನ ಆಪತ್ತಿಗಾಹ ಶ್ರೀಶ ಶ್ರೀ ವೆಂಕಟೇಶಾ 3 ಜಾಗರದಲೂ ಹರಿ ಕಾವ ನಿದ್ರೆಯಲೂ ಹರಿಕಾವ ಜಾಗರ ಸುಷುಪ್ತಿಯಲಿ ಹರಿ ಜಾಗರಮೂರುತಿ ನಿನ್ನ ಕಾವ ಜಾಗು ಮಾಡದೆ ಭಜಿಸು ಜಾನಕಿರಮಣ ಶ್ರೀ ರಾಮಚಂದ್ರನ್ನ ನಿತ್ಯ ಶ್ರೀ ಶ್ರೀನಿವಾಸನ್ನ ಮನವೆ 4 ಬುದ್ಧಿ ಬಂದಿದ್ದು ಅವನಿಂದ ಬುದ್ಧಿ ಅರಿವುದು ಅವನಿಂದ ಅಪ್ರಬುದ್ಧನಾಗದೇ ಬುದ್ಧಿ ಪೂರ್ವಕ ನೀ ನೆನೆದರೆ ಹರಿ ಬದ್ಧಕಂಕಣ ತೊಟ್ಟಿಹನು ಭಕ್ತರ ಕಾಯೆ ಆ ಶ್ರೀ ಶ್ರೀನಿವಾಸನ ಶುದ್ಧ ಮನದಿ ನೆನೆಮನವೆ 5 ವೈರಿ ಗೆಲ್ಲು ಮೊದಲು ನೀನವರ ವಶವಾಗದೆ ನಿನ್ನ ಮನ ಶುದ್ಧಮಾಡಿಕೊ ಮೊದಲು ನಿನ್ನ ಮನಸಿನಶ್ವಕ್ಕೆ ಬುದ್ಧಿಲಗಾಮು ಹಾಕು ನಿನ್ನ ಬುದ್ಧಿಯಲಿ ಮೊದಲನೆ ಕಾರ್ಯವಿದು ಎಂದರಿ ಈ ಮೊದಲು ನನಿಕಾರ್ಯ ನೋಡಿ ಶ್ರೀ ಶ್ರೀನಿವಾಸ ಒಲಿವ ನಿನಗೆಂದೆಂದು ಮನವೆ6 ಈ ತನವು ಈ ನುಡಿ ಈ ಕಾರ್ಯ ಈ ವಾರ್ತೆ ಈ ಕೃಪೆಯು ಶ್ರೀ ಶ್ರೀನಿವಾಸಗಲದೆ ಅನ್ಯತ್ರವಿಲ್ಲ ಹರಿ ಭಕ್ತರ ಸುಳಾದಿ ಭಕ್ತವತ್ಸಲ ಶ್ರೀ ಶ್ರೀನಿವಾಸಗರ್ಪಿತವೆಂದು ತಿಳಿ ಮನವೆ 7
--------------
ಸರಸ್ವತಿ ಬಾಯಿ
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ 1 ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ 2 ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ 3 ತುಂಬಿ ತುಳುಕದ ತನಕ 4 ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ 5 ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ 6 ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ7 ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ 8 ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ 9 ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ 10
--------------
ಶಿವರಾಮರು
ಸಂತರ ನೋಡಿರೈ ಅನಂತನ ಪಾಡಿರೈ | ತಂತುವಿಡಿದು ನಿಶ್ಚಂತದಿ ಮುಕ್ತಿಯ | ಪಡೆದವರಾ ನಿಂದವರಾ ಪ ದ್ವಿತಿಯೋ ಭಾಗೀರಥಿಯೋ | ಹರಿಪ್ರಸಾದವಕೊಂಬುವ ಸಂತರ | ಉದರೋ ಶ್ರೀ ಕೇದಾರೋ | ಹೃದಯೋ ವೇದದ್ಭುಧವೋ | ಕಂಠೋ ಭೂವೈಕುಂಠೋ ಮ 1 ಕರವೋ ಕಾಶಿಪುರವೋ | ವರವೋ ರಾಮೇಶ್ವರವೋ | ಕಿವಿಯೋ ಶಾಸ್ತ್ರದ ಗವಿಯೋ | ಅಮೃತ ಸದನೋ 2 ಹರಿಪದಧ್ಯಾಯಿಸಿ ನೋಡುವ ಸಂತರ | ನಯನೋ ಸ್ವಸುಖದಯನೋ | ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ | ಧರೆಯೊಳು ಮತ್ತೊಂದನ್ಯಕ ಯರಗದ | ಹಣಿಯೋ ಮುತ್ತಿನ ಮಣಿಯೋ | ಶಿರವೋ ಕಂಚಿಪುರವೋ 3 ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ | ಧರೆಯೊಳು ಮಾಡುವ ಸಂತರ ವ್ಯವಹಾ | ರಗಳೋ ಹರಿಶೇವೆಗಳೋ | ನುಡಿಯೋಭವದಿಕ್ಕೆಡಿಯೋ | ಹರಿಪ್ರೇಮದಿ ತುಳಕ್ಯಾಡುವ ಜಲಬಿಂ | ದುಗಳೋ ಭಕ್ತಿಯ ಮುಗಳೋ 4 ನುಡಿಯೋ ಸದ್ಗತಿಯಡಿಯೋ | ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ ನಂದನವನವೋ | ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ | ಕ್ರಮವರುಹಿದ ಗುರುಮಹಿಪತಿ ನಂದನ | ಪ್ರಿಯನೋ ಕರುಣಾಲಯನೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ
ಸತ್ಯ ಭಕ್ತೇಶ | ನತೋಸ್ಮ್ಯಹಂ | ಸತತಂ ಪ ಪ್ರತ್ಯುಹರರ್ಥಿತ ಸಜ್ಜನ ನಿವಹಂಸ್ತುತ್ಯ ಸದ್ವೈಷ್ಣವ ಸನ್ಮತ ಪ್ರಚುರಂ |ದೈತ್ಯಹರಂ | ಪೃಥೆ ಕುವರಂ || ಆರ್ತಿದ ಮಾಯ್ಮತ ಧ್ವಂಸಕರಂಪ್ರಾರ್ಥಿತ ಫಲ್ಗುಣ ರಥ ಸ್ಥಿತಂ | ಭೋ ಸುಮತಿ ಜ್ಞಂ ಅ.ಪ. ಭವ ಭಯ ನಿರ್ಗಮೋಪಾಯಂ |ಕರ್ಗಳು ಶೀರ್ಷ ಸಮಗ್ರೋಪಾಂಗ ನಿ |ರರ್ಗಳ ವ್ಯಾಪ್ತ ಶ್ರೀ ಹರಿ ರೂಪಂ ||ವಿತತ ಸಂದರ್ಶನ ಸಚ್ಚಿತ್ಸುಖಮಯ ದೇಹಂ | ನಮಾಮಿ ಧರ್ಮಂ 1 ಹಸ್ತಿ ಭವಾರ್ಣವ ಊರ್ಜಿತ ಸ್ವಜನಗರ್ಜನೆ ಮಿಶ್ರರ ಲಿಂಗಪಸರಣಂ |ಕಲಿವಪು ಹರಣಂ | ಭೋಪ್ರಥಮಾಂಗಂ 2 ರಜತ ಪೀಠ ಪುರವರ ದಾಸಂ |ಹೃತ್ಸರೋಜದೃತ ವೇದವ್ಯಾಸಂ |ತತ್ವ ? ವಿಚಾರೆ ಅಸದೃಶ ಮಹಿಮಂ |ಭಕ್ತಾಭಯ ಪ್ರದ ವಿತತ ತ್ರೈಭುವಂ |ಕರ್ಮೆಂದೀಂದ್ರಂ | ಮುಕ್ತ ಸುಸೇವ್ಯಂ ದೋಷ ರಹಿತ ಹರಿ ತೋಷಿತ ಹೃದಯಂ | ಸದ್ಗುಣಾರ್ಣವಂ |ವಿತತಾತಥ್ಯ ಸಚಾದ್ಧ ಜೈನ | ದುರ್ಮತನಿವಹ ವಿಧ್ವಂಸನ ಶೀಲಂ |ಆಸ್ತಿಕ ಹರಿಮತ ಸುಸ್ಥಿರ ಸ್ಥಾಪಿಸುವ್ಯಕ್ತ ಭಕ್ತ ಹೃತ್ಸರಸಿಜ ಪೀಠ ವಿನ್ಯಸ್ತ | ಸುರೂಪ |ಗುರು ಗೋವಿಂದ ವಿಠಲಜ | ಮಹಿಮಾ ಗಾಧಂ | ಸ್ತೋತ್ರಾ ಸೌಧ್ಯಂ 3
--------------
ಗುರುಗೋವಿಂದವಿಠಲರು
ಸತ್ಯಸುಧಾರ್ಣವ ನಿತ್ಯಸ್ವಯಂಭುವ ನುತ್ಯಸ್ವಭಾವಗುಣ ರಮಾಧವ ಪ ಭವ ಭಂಜನ ರಾಘವ ಅತ್ಯಂತ ಸುಖವೀವ ದೇವ ಕೃಪಾರ್ಣವ ಅ.ಪ ಪವನನಂದನನುತ ಭುವನಾರಾಜಿತ ಧೃವ ಪರಿಭಾವಿತ ಮುನಿಸೇವಿತ ಕವಿಹೃದಯಾನತ ದಿವಿಜಾರಾಧಿತ ನವಘನಸುಂದರ ವಿಧಿವಿನುತಾ 1 ರಥಾಂಗ ಶ್ರೀಕರ ತುಂಗ ಕೃಪಾಕರ ಧರಣೀಧರಾ ಮಾಂಗಿರಿ ವರನರಸಿಂಗ ಪರಾತ್ಪರ ಅಂಗಜಜನಕ ಭುಜಂಗ ಶೃಂಗಾರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ ಚಕ್ರಮಂಡಲದೊಳು ಪ್ರತಿಪಾದ್ಯ ಪ ಮುದದಿಂದ ಜ್ಞಾನೇಛ್ಛಾ ಕ್ರಿಯಾ ಶಕ್ತಿ ತ್ರಯಗಳು ತದಭಿಮಾನಿಗಳ ನೆನೆದುದಳದಿ ಸೂರ್ಯ ಕರಿ ಅಜ ರಥ ವೀಥಿಗಳಧಕರಿಸಿ ಅದರ ಮೇಲೊಂದು ಮಂಡಲ ನಿರ್ಮಿಸಿ ಷÀಟ್ಸರೋ- ಜದಳಗಳನೆ ರಚಿಸಿ ಇದರೋಳು ಪೂರ್ಣ ಜ್ಞಾನ್ವೆಶ್ವರ್ಯ ಪ್ರಭಾನಂದ ತೇಜ ಸತ್ಯಮೂರ್ತಿಗಳ್ಚಿಂತಿಸೀ ಮಾಸ ತಾರಾರಾಶಿಗಳ ಗುಣಿಸಿ ಬದಿಯಲಿ ಏಕಾ ಪಂಚಾಶದ್ವರ್ಣ ತಿಳಿಯೋದಿದು ವ್ಯಾಪ್ತಿ 1 ಮೇಲೊಂದು ಮಂಡಲದ ಅಷ್ಟದಳಗಳಲಿ ಅಷ್ಟ ಬೀಜಾಕ್ಷರಗಳನೆ ರಚಿಸೀ ಶನಿ ರಾಹು ಗುರು ಬುಧ ಶುಕ್ರ ಸೋಮ ಮಂಗಳ ಕೇತುಗಳ ನಿರ್ಮಿಸಿ ವಲಯದಿ ಪ್ರಣವದಷ್ಟಕ್ಷರಗಳ ನಿರ್ಮಿಸಿ ವಿಶ್ವಾದ್ಯಷ್ಟರೂಪನನೆ ಚಿಂತಿಸಿ ಅದರಿಂದಭಿವ್ಯಕ್ತ ವರ್ಣಗಳ್‍ಭಜಿಸೀ ವರ್ಗಕೆ ತತ್ವತನ್ಮಾನಿಗಳನೆ ಚಿಂತಿಸಿ ಅಷ್ಟಾಕ್ಷರಾತ್ಮಕನ ದೃಢಮನಸಿನಿಂದ ಸ್ತುತಿಸಿ ಇದು ವ್ಯಾಪ್ತಿ2 ಮೇಲೊಂದು ಮಂಡಲ ದ್ವಾದಶದಳದೊಳ್ ದ್ವಾದಶ ಬೀಜಾಕ್ಷರ ಕೇಶವಾದಿ ದ್ವಾದಶನಾಮ ವರ್ಣವಿಭಾಗವು ರಾಶಿಗಳ ವಿವರ ವಲಯದಿ ತಾರಾಯೋಗಗಳ್ವಿಸ್ತಾರ ಮೇಲ್ಮಂಡಲದೊಳು ಚತುರ್ವಿಂಶತಿ ಬೀಜಾಕ್ಷರ ಕೇಶವಾದಿನಾಮ ತಾರೆರಾಶಿಗಳೆಣಿಸೀ ಮೇಲೆ ಐವತ್ತೊಂದು ಅಜಾದಿಗಳ ಚಿಂತಿಸಿ ಅಲ್ಲಿಹ ಶ್ರೀ ವೇಂಕಟೇಶಾತ್ಮಕ ಶ್ರೀ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಸಂಪ್ರದಾಯದ ಹಾಡುಗಳು ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು 1 ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ 2 ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ 3 ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ 4 ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ 5
--------------
ಚಿದಾನಂದ ಅವಧೂತರು
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸ್ವತಿಮಾತೆ ಪರತರಚರಿತೆ ವರ ಪುಣ್ಯನಾಮಳೆ ಪ ಕರುಣಿಸಿವರವ ಕರುಣಾಕರಳೆ ಕರುಣದಿ ಕಾಯೆ ಅ.ಪ ಪದುಮಾಸನನ ಸುವದನ ನಿವಾಸೇ ತ್ರಿಭುವನಾರ್ಚಿತೆ ಸತತವಾಗಿ ಸುದಯೆ ಹೃದಯೆ ಸ್ಥಿರ ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ 1 ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ ಬ್ರಹ್ಮನ ಜನನಿಯೆ ಜಗದಜಾಣೆ ಸುತ್ರಾಣೆ ನಿಜ ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ 2 ಪಾಮರತನ ನಿವಾರಣೆಗೊಳಿಸೆ ಪ್ರೇಮದೆನಗೆ ಸುಜಾಣೆ ನುಡಿಗಲಿಸಿ ವಿಮಲೆ ಅಮಲಸುಖ ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ 3
--------------
ರಾಮದಾಸರು
ಸರೋಜಜಾತೆ ಜಗನ್ಮಾತೆ ಪಾಲಿಸು ಜನಕಸುತೆ ಜನನಮರಣರಹಿತೆ ಪ ಬನ್ನಬಡಿಸುವುದೇ ನಮ್ಮ ಸೀತಮ್ಮ ಅ.ಪ ಪತಿಹೃದಯನಿವಾಸಿನಿ ಸುವಾಸಿನಿ ಭ- ವತ್ಪಾದಾಂಬುಜ ಭಜಿಸುವ ಜನರು ಸತತವಿಹಪರದಿ ಸೌಖ್ಯ ಪಡುವರೆಂದು ಸಾ- ರುತಿಹವು ಶೃತಿ ಸ್ಮøತಿ ಪುರಾಣ 1 ಭವ್ಯ ಚರಿತರಾದ ಬ್ರಹ್ಮಾದಿಗಳಿಗಳವೆ ನಿನ್ನ ದಿವ್ಯಾಂಘ್ರಿ ದರ್ಶನವಾಗುವುದು ಸೇವ್ಯನಾದ ಪತಿಚಿತ್ತಾನುಸಾರದಿ ಜೀವನಿಕರವ ಕರುಣದಿ ನೋಡುವ 2 ಕೃತಿ ಶಾಂತಿ ರುಕ್ಮಿಣಿ ಲಕುಮಿ ನಿರುತವು ನೆನೆವರ ದುರಿತಗಳ ಕಳೆದು ಗುರುರಾಮವಿಠಲನ ಚರಣವ ತೋರಿಸೆ 3
--------------
ಗುರುರಾಮವಿಠಲ
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಸಲಹು ಸಲಹು ಹರಿಯೇ ದಯದಿಂದಲಿ| ಇಳೆಯೊಳು ನಾನತಿ ದೀನನು ಪ ಸನ್ಮತಿದಾಯಕ ಸನ್ಮನ ಮುನಿಜನ|ಸನ್ಮತ ಮಾ ಮನೋಹಾರಿ| ಮನ್ಮಥನಯ್ಯನೇ ಉನ್ಮತ ಸುರಹರ| ಚಿನ್ಮಯ ರೂಪ ಉದಾರಿ1 ನಿವಾರಣ ಮಾಡಿದೆ ಶೌರಿ| ಹರಣ ಸಹದಾರುಣ ವಲ್ಲಭ ಕಾರುಣ ಸುರಸಹಕಾರಿ2 ತುಹಿನ ಕಿರಣ ಕುಲಮೌಳಿ| ಮಹಿಪತಿ ನಂದನ ಹೃದಯ ಸರೋವರ| ಹಂಸಪರಮ ವನಮಾಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು