ಒಟ್ಟು 1331 ಕಡೆಗಳಲ್ಲಿ , 94 ದಾಸರು , 990 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯವರ ಯತಿಗಳ ಸ್ತೋತ್ರ ಮೂರ್ತಿ ಪ ಅಂದು ನರಹರಿ ಯತಿಯು ತಂದದ್ದು ನಾ ಕರ್ಣ-ದಿಂದ ಕೇಳಿ ಬಲ್ಲೆ ನಾ ಕಂಡದ್ದು ಇಲ್ಲ ||ಇಂದೆಮ್ಮ ಗುರು ಸತ್ಯಸಂಧ ಸುತರಿಗೊಲಿದುಬಂದ ರಾಮನ ಕಣ್ಣಿಂದ ಕಂಡೇ 1 ಅವರೊಯ್ದರಿವರೊಯ್ದರೆಂಬ ಮಾತುಗಳ್ ಪುಸಿಅವನ ಸತಿಯು ತನ್ನ ತವರು ಮನೆಗೆ ||ತವಕದಿಂದಲಿ ಕರದೊಯ್ಯೆ ಗುರುಗಳ ತಪಕೇಭುವನ ತಲ್ಲಣಿಸಲು ಭುವನೇಶ ಬಂದ 2 ಆಗ ಶ್ರೀ ರಘುನಾಥ ಯೋಗಿಗೊಲಿದುಸಾಗಿ ಬಂದುದು ನಾ ಕೇಳಿ ಬಲ್ಲೆ ಈ ನ- ||ಮ್ಮ ಗುರು ಸತ್ಯವರ ಯೋಗಿಗೊಲಿದು ರಾಮಬೇಗ ಬಂದುದು ಚೆನ್ನಾಗಿ ಕಣ್ಣಿಲಿ ಕಂಡೆ 3 ನಾಮಗೊಂಡಲು ಈ ಭೂಮಿದೇವಿ ಇಲ್ಲಿತಾ ಮಗಳ ಅಳಿಯನ್ನ ಕರೆದು ಒಯ್ದು ||ಪಾಮರರಿಗೆ ಪೋದರೆಂದೆಂಬ ಭ್ರಮೆಯ ತೋರಿಈ ಮುನಿಯ ಮಾನಸ ಹಂಸನಾಗಿದ್ದ 4 ಒಂದು ಮಾಸವುಪವಾಸ ಮಾಡಿದವರ್ಗೆಬಂದೊದಗುವ ಜಗದೊಳಗೆ ಖ್ಯಾತ ||ಸಂದೇಹವಿಲ್ಲದೆ ಅನಶನ ವ್ರತವನ್ನುಒಂದು ತಿಂಗಳು ಮಾಡಿ ಇಂದಿರೇಶನ ತಂದ 5 ನಳನಾಮ ಸಂವತ್ಸರ ಫಾಲ್ಗುಣ ಬಹುಳ ದ್ವಾದಶಿನಳಿನಾಕ್ಷ ರಾಮಸ್ವಾಮಿಯು ಹೊರಟು ||ಖಳರ ಖಂಡಿಸಿ ತಾನು ಇವರ ಭಾವಕೆ ಮೆಚ್ಚಿಲಲನೆ ಸಹಿತವಾಗಿ ಭುವನೇಶ ಬಂದ6 ಗಂಗಾದಿ ಸಕಲ ತೀರ್ಥಗಳಲ್ಲಿ ಮಿಂದು ಶ್ರೀರಂಗಾದಿಯಲ್ಲಿ ಮೋಹನ ವಿಠಲನ್ನ ||ಸಂಗೀತೆಗೆ ಸರ್ವದಾಧಿಕ ಫಲಸಂಘಟಿಸುವದು ಸಜ್ಜನರು ಕೇಳಿ 7
--------------
ಮೋಹನದಾಸರು
ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ | ನಾನಿನ್ನುದ್ಧಾರಾಗುವೆ | ದೇಹಾತೀತನಾಗಿ ಚರಣಕಮಲಕ್ಕೆರಗುವೆ ಪ ಮಾಯಾ ಮೋಹದ ಬೇಡಿ ಕಡಿದು |ಭ್ರಾಂತಿಯ ಸುಟ್ಟಾ 1 ಭವ ಭಯ ಬಿಡಿಸಿದಾ 2 ಸದ್ಗುರುನಾಥಾ ಭೃಂಗವಳ್ಳಿವಾಸಾ ಆತನ ದಯದಿಂದ | ಸಗುಣರೂಪನಾಗಿ ಮೆರೆವ ಸಹಜಾನಂದಾ 3
--------------
ಭೀಮಾಶಂಕರ
ಸನ್ನುತ ಪಾದ ಭಕುತಿಯ ಬಿತ್ತಿ 1ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3
--------------
ಗೋಪಾಲಾರ್ಯರು
ಸಫಲವಾಯಿತು ಜನುಮ ಸಫಲವಾಯಿತು ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ ಚತುರವೇದ ಸ್ಮøತಿ ಪುರಾಣ ತತಿಗಳೊಂದಾಗಿ ನೆರೆದು ತಮ್ಮ ಮತಿಗಳಿಂದ ನುತಿಸಿ ಮಹಿಮೋ ನ್ನತಿಯ ಕಾಣದ ಮಹಿಮನ ಕಂಡೇ 1 ಶಂಖ ಚಕ್ರ ಗದೆ ಪದುಮಾ ಲಂಕೃತವಾದ ಹಾರ ಕೇಯೂರ ಕಟಕ ಮುಕುಟಾ ಲಂಕೃತನಾದ ಹರಿಯ ಕಂಡೇ 2 ಕರವ ಜಘನದ ಮೇಲೆ ಮ ಕರವ ತಾನಿದ್ದಯಿರವೆ ಸಂದೇಹವೇಕೆ ವೈಕುಂಠ ವೆಂದು ಅಟ್ಟೈಸುವಂದದಿ ಹರಿಯ ಕಂಡೇ 3 ಲಕುಮಿಗುಣಗಳೆಣಿಪನೆಂದು ಪಿಡಿದು ಅಕಳಂಕದುಂಗುಟದುಗುರುರೆ ಧ್ಯಾನಿಸಿ ಪ್ರಕಟಿತವಾದ ಗುಣಗಳನಂತ ನಿಕರವ ತೋರಿದ ಹರಿಯ ಕಂಡೇ 4 ತನ್ನ ನಂಬಿದವರನೆಂದು ಮನ್ನಿಪೆನೆಂಬ ಬಿರಿದ ತೋರ್ಪ ಚನ್ನ ಶ್ರೀ ರಂಗನಾಥ ಘನ್ನ ವೈಕುಂಠೇಶನ ಕಂಡೇ 5
--------------
ಬೇಲೂರು ವೈಕುಂಠದಾಸರು
ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಸರಸ್ವತಿ ದೇಹಿ ಸನ್ಮತಿ ಪ. ವಿಧಿಸತಿ ಸುವ್ರತಿ ಶ್ರೀಮತಿ ಭಾರತಿ ಅ.ಪ. ನಿತ್ಯ ಪೊಗಳುತಿ ಜಗದೀಶ್ವರಿ ಜಲಜಾಯತನೇತ್ರಿ ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ ಸರಸ್ವತಿ ದೇಹಿ ಸನ್ಮತಿ 1 ಶರ್ವೇಂದ್ರಪೂರ್ವ ಗೀರ್ವಾಣತತಿ ಸರ್ವದಾಚರಿಸುವುದು ತವ ಸ್ತುತಿ ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ ಸರಸ್ವತಿ ದೇಹಿ ಸನ್ಮತಿ 2 ಲಕ್ಷ್ಮೀನಾರಾಯಣನ ಮೂರುತಿ ಲಕ್ಷಿಸಿ ಮನದೊಳಾನಂದದೊಳಿರುತಿ ಗುಣವತಿ ಸುಗತಿ ಸುಧೃತಿ ವಿಧಾತ್ರಿ ಸರಸ್ವತಿ ದೇಹಿ ಸನ್ಮತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ ಕಾಲ ಕರ್ಮ ಪ್ರಕೃತಿಯು ಸ್ವ ಭಾವಗಳನನುಸರಿಸಿ ಸುಖದುಃಖವಾ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ ದಾತ 1 ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ ಭೃತ್ಯವತ್ಸಲನೆಂಬ ಬಿರುದಲ್ಲವೇ ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ 2 ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು ಪಾಪಿಜನರಿಂದ ಬಂದಾಪತ್ತನು ನೀ ಪರಿಹರಿಸಿ ಸಲಹೋ ದ್ರೌಪದಿ ವರದ 3
--------------
ಜಗನ್ನಾಥದಾಸರು
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ ಜಲಜಾಂಬ ನೀನಲಸದೆ ಎನ್ನನು ಅ.ಪ ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಘಾತವು ಹೆಚ್ಚಿದ ಸೇರುವ ನೋಡಿ 1 ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ ಕೇಶರಂಧ್ರವಕಾಶದೊಳೂಧ್ರ್ವ ಬಲು ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2 ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ ನೋಯುತ ದೇಹದೊಳಾಯಾಸ ಹೆಚ್ಚಿತು 3 ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4 ಅನ್ನವರೋಚಕವು ಅಪ್ತರೊಳನ್ಯತೆಗೋಚರವು ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5 ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ ಭವ ರೋಗ ವೈದ್ಯ ನೀನೇಗತಿಯೆಂದಿಗು 6 ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ ವರದವಿಠಲದೊರೆ ವರದದಯಾನಿಧೆ7
--------------
ವೆಂಕಟವರದಾರ್ಯರು
ಸಾಕು ಸಾಕಿನ್ನು ಸಂಸಾರ ಸುಖವು ಪ ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆಅ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1 ಮಾಸ ಪರಿಯಂತ ಹರಿಯೆ2 ಮಾಸ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3 ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4 ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5 ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6 ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7 ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8 ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9 ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10 ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11 ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12 ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13 ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14 ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15
--------------
ಕನಕದಾಸ
ಸಾಧನವು ಮತ್ತೇನಾಗಬೇಕು ನಿನಗೇ ಪ ಮಾಧವನ ನಾಮವು ಮನದೊಳಿದ್ದರೆ ಸಾಲದೇ ಅ.ಪ. ಗೋಕೋಟಿ ದಾನವು ಗೋವಿಂದನ ಸ್ಮರಣೆಯ ತಾಕಲಾರದಿದಕೆ ಸಂದೇಹವೇ ಇಲ್ಲ ಸಾಕಲ್ಯದಿ ಮಾಳ್ಪ ಸಕಲ ದೇವತಾರ್ಚನೆಯು ಪಾದ ಭಜನೆಗೆಣೆಯು ಅಲ್ಲ 1 ಸ್ನಾನ ಸಂಧ್ಯಾವಂದನ ಜಪತಪಾದಿಗಳು ದಾನವೇ ಮೊದಲಾದ ನೇಮ ನಿಷ್ಟೆಗಳು ಆನುಪೂರ್ವಕ ಮಾಳ್ಪ ಸಕಲ ಕರ್ಮಗಳೆಲ್ಲ ಶ್ರೀನಿವಾಸನ ನಾಮಸ್ಮರಣೆಗೆ ಎಣೆಯು ಅಲ್ಲ 2 ರಾಸಿ ವಿದ್ಯ ವೇದಾಧ್ಯಯನ ಪಾಠಗಳು ಬೇಸರಿಲ್ಲದೆ ಪಠಿಪ ಮಂತ್ರ ತಂತ್ರಗಳೆಲ್ಲ ಈ ಸಮಸ್ತ ಭುವನಗಳೊಡೆಯನಾದ ಶ್ರೀ ರಂ ಗೇಶವಿಠಲನ ನಾಮದಲ್ಲಡಗಿರುವುದಲ್ಲ 3
--------------
ರಂಗೇಶವಿಠಲದಾಸರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1 ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2 ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿದೇ ಖೂನ ಸದಾಸದ್ಗುರು ಕೃಪೆ ಜ್ಞಾನ ಛೇದಿಸಲನುಮಾನ ಶೋಧಿಸ್ಯನುದಿನ ಭೇದಿಸಿ ನೋಡಿ ಸದೋದಿತಾತ್ಮಙÁ್ಞನ 1 ಹೇಳಿ ಕುಡುವದಲ್ಲ ಕೇಳಿ ಕೊಂಬುವುದಲ್ಲ ಹೇಳುವ ಮಾತಿನೊಳಿಲ್ಲ ಕೇಳುವ ಕಿವಿಯೊಳಿಲ್ಲ ತಿಳಿವಿನೊಳಿಹ ನಿಜಗುಟ್ಟು ತಿಳಿದವಬಲ್ಲ 2 ಸೋಹ್ಯ ಸೂತ್ರದ ಖೂನ ದೇಹಾತೀತನು ಬಲ್ಲನೆ ಪೂರ್ಣ ಗುಹ್ಯ ಗೊಪ್ಪದ ಧನ ಮಹಾನುಭವದ ಸ್ಥಾನ ಮಹಿಪತಿ ಮನೋನ್ಮನಲೀಯ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು