ಒಟ್ಟು 1873 ಕಡೆಗಳಲ್ಲಿ , 107 ದಾಸರು , 1497 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನವಗ್ರಹ ಸ್ತೋತ್ರ) ಸತ್ಕಟಾಕ್ಷವಿರಿಸು ದಕ್ಷನಖವಜ್ರಿರಿಪುಪಕ್ಷದಹಿಸು ವಿರೂಪಾಕ್ಷ ಶರಣು ಪಕ್ಷವೃತ್ವಯನ ಸಂವತ್ಸರಾಖ್ಯ ದಯಮಾಡು ಶರಣೆಂದು ನಮಿಪೆ ನಿನ್ನ 1 ತೇಜೊರಾಶಿಯಾಗಿ ಮೆರೆವ ಕಮಲ ಘೂಕ ತಸ್ಕರರ ಗಣವ ನಾದಿಪತಿ ಗ್ರಹರಾಜ ನಿನ್ನ ಪದವ ವ್ಯಾಧಿಗಳ ಪರಿಹರಿಸು ಪಾವನಾತ್ಮ ಸಲಹೆನ್ನ ನಿರ್ಮಲಾತ್ಮ2 ನೀರುಮರಬಳ್ಳಿಸಕಲೌಷಧಿಗಳ ತಾರೆಗೊಲಿದಾಕೆಯಲಿ ಬುಧನಪಡದೇ ರಾಶಿ ಸಂಚಾರ ಮಾಳ್ಪೆ ಮೋಹದ ಬಲೆಯ ನೀರಜಾಕ್ಷ ಸಮನೋಜ ಮಾದೇವಿಸಹಜ 3 ಗುರುಮಿತ್ರ ಸಜ್ಜನತ್ರ ವ್ಯಾಮೋಹಗೊಳಿಸದಿರು ದಂಡಪಾಣಿ ರಾಜಕರುಣಾ ಪಾತ್ರನೆ ಕಾಮಚಾರಜ ಬಹುವಿಧಾಮಯವ ಪರಿಹರಿಸಿ ನೀ ಮನೋಹರ್ಷ ಪಾಲಿಸು ಧೀರನೆ ಕಮನೀಯ ಕಾಂತಿ ಕುಹಕಜನವಾರಿ4 ಪದುಮಗಳಿಗೆರಗುವೆನು ಪಾಲಿಸೆಂದು ಮಧು ವಿರೋಧಿಯ ಮನೋಭವನಣುಗ ಮಾತಿನಲಿ ಚದುರತೆಯನಿತ್ತು ಚಾತುರ್ಯಗೊಳಿಸು ಸದಯಾವಲೋಕ ನೀನೆಂದು ತಿಳಿದೆ ಮಾತ್ಸರ್ಯವೆಲ್ಲಬಿಡಿಸು ಪಾದ ಸ್ವರ್ಣವರ್ಣ ಸುಲಲಿತಾಂಗ 5 ಮಂತ್ರಜ್ಞ ಚೂಡಾಮಣಿ ಸದುಪಾಯಗಳ ತಿಳಿಸಿ ಸುರರ ಕಾವ ಉದಿತನಾಗಿರೆ ಸಕಲ ಬುಧರಿಗನುಕೂಲ ನಿತ್ಯದಲಿ ನಿಖಿಳ ಗ್ರಹೋನ್ನತ ಶಕ್ತಿಯೇ ಸಕಲಾರ್ಥ ಪಡದೀವನೆ ನಿನ್ನ ನಮಿಸುವೆನು ನೀನೊಲಿದು ಸಲಹೊ6 ಭಾರ್ಗವನೆ ಭಜಿಪೆ ನಿನ್ನ ತಪ್ಪು ಮರತು ಮುಖ್ಯವೆಂಬರ್ಥವರಿತು ಸೇವೆಗನುಕೂಲನಾಗಿರುವೆ ಕುರಿತು ಕಾಪಾಡು ಕರುಣ ವಹಿಸು7 ಮುನಿಸದಿರು ನಮ್ಮಮೇಲೆಂದೆಂದಿಗು ನಿನ್ನ ಘನವ ತ್ಯಜಿಸು ಭಂಗ ಶಕ್ತರಹರೆ ಪೇಳು ಮನ್ನಿಸುವ ಮಮತೆ ತಾಳು ಕನಸಿಲಾದರು ಕ್ರೋಧವಿಡದೆ ಕಾಪುವುದೆಂದು ನಿರುತದಿಂ ಕೈ ಮುಗಿದು ಬೇಡಿಕೊಳುವೆ 8 ವೀರ್ಯ ವಹಿಸಿದ ರಾಹು ಕೇತುಗಳನು ಶೌರ್ಯಾದಿಗಳ ದಯ ಮಾಡಿರಿ ಧಾರವೆಂದಿತ್ತಹರ್ಯಜ್ಞೆಯಿಂದ ನಾರ್ಯತನವೇನಿವರೊಳಿದ್ದರರಿತು ಮಂಗಳವಿತ್ತು ಸೌಖ್ಯ ಪಾಲಿಸಲಿ9
--------------
ತುಪಾಕಿ ವೆಂಕಟರಮಣಾಚಾರ್ಯ
(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
(ಲಾಲಿ ಹಾಡು) ಲಾಲಿ ರಘುಕುಲವೀರ ರಾಕ್ಷಸಗಣಾರಿ ಲಾಲಿ ಜಗದೇಕ ಸುಂದರ ಸೇತುಕಾರಿ ಲಾಲಿ ನಗಚಾಪ ಹೃತ್ಕಮಲ ಸಂಚಾರಿ ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ. ಧರಣಿ ಭಾರವನು ಬೇಗಿಳುಹಬೇಕೆಂದು ಸುರರು ನಡೆತಂದು ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು 1 ದರಚಕ್ರ ಶೇಷರನು ಸರಿಯಾಗಿ ತನ್ನಾ ವರಜಪದವೈದುತವತರಿಸಿರಲು ಮುನ್ನ ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ ಚರಣ ಸೇವಕರೆನಿಸಿ ಪೊರದಿ ಗುಣರನ್ನ 2 ಶ್ರೀ ರಾಮ ಸೀತಾವರಾಶ್ರಿತ ಪ್ರೇಮ ಮಾರುತಿಗೆ ವಿಧಿಪದವನಿತ್ತ ಗುಣಧಾಮ ಘೋರ ರಾವಣ ಮುಖ್ಯ ದಿತಿಜ ನರ್ದೂಮ ಭೂರಮಣ ಶೇಷಗಿರಿವರ ಪೂರ್ಣಕಾಮ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ವಿಷ್ಣುತೀರ್ಥರು) ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ. ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1 ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2 ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3
--------------
ತಂದೆವರದಗೋಪಾಲವಿಠಲರು
(ಸರಸ್ವತಿ) ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ 1 ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ 2 ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ 3 ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ 4 ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ 5 ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ 6
--------------
ತಂದೆವರದಗೋಪಾಲವಿಠಲರು
* ಹ್ಯಾಂಗಿರಲಿನ್ನು ರಂಗನ ಬಿಟ್ಟಿನ್ನಹ್ಯಾಗಿರಲಿಂನು ಮಂಗಳಾತ್ಮಜ ಹೆಳವನಕಟ್ಟೆರಂಗನ ಬಿಟ್ಟು ಹ್ಯಾಂಗಿರಲಿಂನು ಪ. ಸಿರಿಮನೋಹಾರಿ ಶರಣರಿಗಂತ:ಕರಣವ ತೋರಿ ತ್ವರಿತದಿದಿವ್ಯರಥಗಳನ್ನು ನೀಡಿ ಪರಮಾ ಸಂಭ್ರಮದಿಂದಾಯಿರುವೋನ ಮರದು ನಾ ಹ್ಯಾಂಗಿರಲಿನ್ನೂ 1 ಗಿರಿಮನಿ ಮಾಡಿ ಶರಣಗರಿತ:ಕರುಣವ ನೀಡಿ ಸರಸದಿ ಮನೋರಥಗಳ ತೋರಿ ಪರಮಾ ಸಂಭ್ರಮದಿಂದಾ ಇರುವನ ಮರದು ನಾ ಹ್ಯಾಂಗಿರಲಿನ್ನೂ 2 ಶರಣು ಪೊಕ್ಕಿರುವಾ ಗಿರಿಯಮ್ಮಗಾ ತುರದಿ ವಲಿದಿರುವ ಸರಕಿರಿಗೆಜ್ಜೆ ಧರಿಸಿ ಕುಣಿದಿರುವ ಸಿರಿನಾರಸಿಂಹನ ಚರಣವಾ ಮರೆದು ನಾ ಹ್ಯಾಂಗಿರಲಿನ್ನೂ 3
--------------
ಹೆಳವನಕಟ್ಟೆ ಗಿರಿಯಮ್ಮ
*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ. ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ 1 ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ ಹದಿನಾಲ್ಕು ಲೋಕನಾಳುವವನ ಹೊತ್ತು ಇರುವವಗಾಯಿತು ಮನೆಯು ಮರದ ಮೇಲೆ 2 ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು ರಾವಣನ ಗರ್ವಮುರಿದು ಬಂದೂ ರೋಮರೋಮಕೆ ಕೋಟಿಲಿಂಗಧರಿಸಿದ ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ 3 ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು ಸಾರುತಿದೆ ವೇದ ಸಟೆಯಲ್ಲವಿದು ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ 4 ಮೀರಲಳವಲ್ಲಾ ಮುನ್ನಿನಾ ಕರ್ಮವನು ಕಾರಣಕರ್ತನಿಗಲ್ಲದೆ ಮಾರಪಿತ ಹೆಳವನಾಕಟ್ಟೆರಂಗೈಯ್ಯನ ಸೇರದ ಕಾಲವ್ಯರ್ಥವ್ಯಾದಿತೈಯ್ಯಾ 5
--------------
ಹೆಳವನಕಟ್ಟೆ ಗಿರಿಯಮ್ಮ
|| ಶ್ರೀ|| ಪದ್ಯ|| ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ ಅಭಯದ ಕೂಟ್ಟಂದಳೀಪರಿಯ||1 ಪದ ರಾಗ:ಕಾನಾಡ ಆದಿತಾಳ ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ|| ನೀಡುವೆ ನಾನು|| ಪ ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು|| ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ ಅನುಮಾನವ ಬಿಟ್ಟು|| 1 ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ|| ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು ಕಷ್ಟಗಳುಂಟೆ|| 2 ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು|| ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು ಚಿಂತೆಯನು ಬಿಟ್ಟು|| 3 ಆರ್ಯಾ ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ ಮಾತಾಡಿದಳು ಹೀಗೆಂದು|| 1 ಪದ ರಾಗ:ಮುಖಾರಿ ಆದಿತಾಳ ತುಳುಜಾದೇವಿಯೇ|| ಪ ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ|| ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1 ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2 ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ ಚಿಂತಿಯು ಮಾಡಬ್ಯಾಡಂತಿಯೇ|| ಎಂಥಾಕಿ ನೀನು ದಯಾವಂತಿಯೇ || ವರದಾ ನಂತಾದ್ರೀಶನ ಸಖನ ಕಾಂತಿಯೇ|| 3 ಆರ್ಯಾ ಕರ ಮುಗಿದು|| 1 ಪದ ರಾಗ :ಆನಂದ ಭೈರವಿ ವರಕೊಡು ಎನಗಿದು ತ್ವರಿತದಿ ತಾಯಿ|| ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ ಮಂದ ಮತಿಯು ದೈತ್ಯ ಬಂದಿಹನೋಡು|| ಕೊಂದವನ ಎನಗಾನಂದವ ನೀಡು 1 ಮಾಡುವ ತಪಸ್ಸಿಗೆ ಕೇಡು ತಂದಿಹನು|| ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2 ಪತಿಯ ಸೇವಿಸುವಂಥ ಸತಿಯು ಬೇಡುವೆನೂ|| ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3 ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1 ಮಾಡಿದಳು|| ಹುಂಕಾರ|| 2 ಒಗೆದಾನು ಯುದ್ಧದಲ್ಲಿ ಜಾಣಾ|| 3 ಸಾರಶಕ್ತಿಯನು ತೆಗೆದಾ ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4 ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು|| ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ ನಿಂತಾಗ ಮುಂದ ಖ್ಯಾಕರಿಸಿ|| 5 ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6 ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು| ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7 ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8 ಅವನ ಮುರದೊತ್ತಿ 9 ಕಡೆದಳು ಆಗವನ ಬಿಲ್ಲುಬಾಣದಲೆ|| 10 ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ ಬಂತು ಭೂತಗಳಿಗೆಲಾ||್ಲ 11 ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ ಕಡೆದಳು ಮತ್ತವನ ಶಿರವು ಖಡ್ಗದಲೇ|| 12 ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13 ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ ಓಡಿ xಟ್ಟನೆ ಹಿಡಿದರಾಗ|| 1 ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು|| ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2 ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3 ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು|| ಯಮದೂತರಸಮರವರು|| 4 ರಕ್ತ ಪಾನವ ಮಾಡಿದರು|| 5 ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು| ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6 ಹಾಕಿಕೊಂಡು ಕುಣಿದಾಡಿದರು||7 ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು|| ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8 ಅವನಂತವ ಅರಿಯೇ ನಾನು|| 9 ಆರ್ಯಾ ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ
279ಹನುಮ ಭೀಮಾನಂದ ಮುನಿರಾಯ ಎನ್ನದು ಸಲಹೆಂದು ಬಿನ್ನೈಪೆವಿ ಜ್ಞಾನ ರೂಪ ವಿಜಿತಾತ್ಮ 1 280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ ಬದಿಗನಾಗಿದ್ದು ಸಲಹುವಿ 2 281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ ಭಯಹಾರಿ ರಣದೊಳು ಕಿ ರೀಟಿಯ ಕಾಯ್ದಿ ಧ್ವಜನಾಗಿ 3 282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ ಪರಮೇಷ್ಟಿ 4 283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ ಕೃತ ಕೃತ್ಯನೆನಿಸೊ ಕೃಪೆಯಿಂದ 5 284ಮೂರೇಳು ಸಾವಿರದ ಆರ್ನೂರು ಮಂತ್ರವ ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ ದ್ಧಾರ ಗೈಸುವಿಯೊ ಸುಜನರ 6 285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ 7 286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ ಮಿಶ್ರಗತಿಗಳನೆ ಕೊಡುತಿಪ್ಪೆ 8 287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ ದಣಿಸುವಿಯೊ ಅವರ ದಿವಿಜೇಶ 9 288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ ಕಾಲ ಕರ್ಮ ಅನುಸಾರ | ಅನುಸಾರವಿತ್ತು ಪಾಲಿಸುವಿ ಜಗವ ಪವಮಾನ10 289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ ತೀಕಾಂತ ನಿನಗೆ ಬಹದೆಂತೊ 11 290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ ನೆಲ್ಲ ಕಾಲದಲ್ಲಿ ಸಲಹಯ್ಯ 12 291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ ರಿನ್ನಾರು ಲೋಕದಲಿ ಜಯವಂತ 13 292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸೊ 14 293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ ಎಂದೆಂದು ವಿಷಯ ಚಿಂ ತನೆಯ ಕೊಡದೆನ್ನ ಸಲಹೆಂದು 15 294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು 16 295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ ದ್ಧರಿಸಬೇಕೆನ್ನ ಪರಮಾಪ್ತ 17 296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ ತಸದಿ ಕಾಯೆನ್ನ ಮರುದೀಶ 18 297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ ವೀಯನೆಂದೆಂದು ಭಗವಂತ 19 298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ ಭೀತಿಯನು ಬಿಡಿಸೊ ಭವ್ಯಾತ್ಮ 20 299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ ದ್ಬೊಮ್ಮಪದವಿಯಲಿ ಸುಖಿಸುವಿ 21 300ಮೂರೇಳು ಸಾವಿರದ ಆರುನೂರು ಹಂಸ ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ ಮೀರನ ಅಡಿಗೆ ಶರಣೆಂಬೆ 22 301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ ಭಂಜಿಸಿ ಕಾಯೊ ಬಹುರೂಪ 23 302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ ಧವನಲ್ಲಿ ಕೊಟ್ಟು ಸಲಹಯ್ಯ24 303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ ಸಿಂಧು ನಿ ನ್ನೊಲುಮೆಯೊಂದಿ ಹರಿಕಾಯ್ವ 25 304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ ಸಿಂಧು ಎಂದೆಂದು 26 305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು ಶ್ವಾಸ ಜಪಮಾಡಿ ಹರಿಗೀವಿ 27 306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ ತೀಶ ನಿನ್ನಡಿಗೆ ಶರಣೆಂಬೆ 28 307ಬಲದೇವ ನೀನೆ ಬೆಂಬಲವಾಗಿ ಇರಲು ದು ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ ಬಲು ಉಳ್ಳ ಜನರ ಜಗದೊಳು 29 308ಹಾಲಾಹಲವನುಂಡು ಪಾಲಿಸಿದೆ ಜಗವ ಕರು ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ ಲೋಲನಲಿ ಕೊಟ್ಟು ಸಲಹಯ್ಯ 30 309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ ಪೊರೆದಂತೆ ಪೊರೆಯೆನ್ನ ನೀನಿಂತು ಕ್ಷಣದಿ ಕೃಪೆಯಿಂದ 31 310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಸುಖವೀಯೊ ಭಾವಿ ಲೋ ಕಪಿತಾಮಹನೆ ಎನಗೆ ದಯವಾಗೊ 32 311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ
--------------
ಜಗನ್ನಾಥದಾಸರು
351ಆದಿತ್ಯದೇವ ತ್ವತ್ಪಾದಯುಗಳಕಭಿ ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ ವ್ಯಾಧಿಯ ಕಳೆದು ಸುಖವೀಯೊ 1 352ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ ಹ್ಮಜ್ಞಾನ ಭಕುತಿ ಕರುಣೀಸೊ 2 353 ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ ನಾರಾಧನೆಯನಿತ್ತು ಕರುಣೀಸೊ 3 353 ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ ವಾಹನನ ಸ್ಮರಣೆಯನು ಕರುಣೀಸೊ 4 354ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ ಹಾರ ಗೈಸೆನ್ನ ಭವತಾಪ 5 355 ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದು ಸಂತೈಸೊ 6 356 ಕೋಲ ಭೂನಂದನ ಪ್ರವಾಳ ಸಮವರ್ಣ ಕರ ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ ಮೌಳಿ ನೀಯೆನ್ನ 7 357 ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ ಅನುದಿನ 8 358 ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ ಕಾಮಿತಾರ್ಥವನೆ ಕರುಣೀಸೊ 9 359 ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನೆ ಕರುಣೀಸೊ 10 360 ಚಂದ್ರನಂದನ ಸತತ ವಂದಿಸುವೆ ಮನ್ಮನದ ಮಮದೈವ ಸರ್ವ ಗೋ ವಿಂದನಹುದೆಂದು ತಿಳಿಸಯ್ಯಾ 11 361 ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ ದ್ಧಾರಗೈಸೆನ್ನ ಭವದಿಂದ 12 362 ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ ಪತಿಯ ತೋರೆನ್ನ ಮನದಲ್ಲಿ 13 363 ಸುರರಾಜಗುರುವೆ ತ್ವಚ್ಚರಣಾರವಿಂದಗಳಿ ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ ಣರ ಸಂತೈಸೋ ದಯದಿಂದ 14 364 ತಾರಾರಮಣನೆ ಮದ್ಬಾರ ನಿನ್ನದೊ ಮಹೋ ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ ವಾರಿಸಿ ತೋರೊ ತವರೂಪ 15 365 ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೊ ಪ್ರತಿದೀನ 16 366 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣೀಸೊ | 17 367 ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ ಲಗದಲ್ಲಿ ಬುದ್ಧಿಯಿರಲೆಂದು 18 368 ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ ತ್ವರಿತದಿಂದಿಳಿಸಿ ಪೊರೆಯೆಂದು 19 369 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ ಸಮಯದಿ ಶ್ರೀ ಲಕ್ಷ್ಮೀನಾ ರಾಯಣನ ಸ್ಮರಣೆ ಕರುಣೀಸೊ 20 370 ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ ಹರಿಮೂರ್ತಿ ಕೀರ್ತನೆಗೆ ಳೊದಗಲೆನಗೆಂದು ಬಿನ್ನೈಪೆ 21 371ಅಹಿಕ ಪಾರತ್ರಿಕದಿ ನರಹರಿಯದಾಸರ ನವ ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು ಅಹಿತರೆಂದೆನುತ ಕೆಡಬೇಡಿ22 372 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು 23
--------------
ಜಗನ್ನಾಥದಾಸರು
ಅಂಕಿತ ರಹಿತ ಹಾಡುಗಳು ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು 1 ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ 2 ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು 3 ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು4 ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ 5 ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ಮøತ್ತಿಕೆಯತಳೆವುದು ಬಲ್ಲ ಸುಜನರು 6 ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ 7 ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು 8 ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ9
--------------
ಕೆಳದಿ ವೆಂಕಣ್ಣ ಕವಿ