ಒಟ್ಟು 81 ಕಡೆಗಳಲ್ಲಿ , 29 ದಾಸರು , 77 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ 1 ವೇದಗಳ ನಾನೋದಿ ಅರಿಯೇ ಸಾಧು ಸಂಗಮ ಭೇದಗೈದೆ ಗರ್ವದಿಂದೆ ವೇದವೇದ್ಯನೆ 2 ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ ಮಾಂಗಿರೀಶ ನಿನ್ನ ನಾಮಭೃಂಗವ ತೋರೈ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಣಿನಾಥ ನಿನ್ನ ಮಹಿಮೆಕ್ಷೋಣಿಯೊಳಗೆ ಪೊಗಳುವೆನು ಪ ಶ್ರೀನಿವಾಸನಮಲ ಮುಖವಾಮಾನಸಾದಿ ತೋರಿಸೀಗ ಅ.ಪ. ಹರಿಯ ನಾಭಿ ಕಮಲದಲ್ಲಿ ಧರಿಸಿ ತನುವ ತಪತಪೆಂದುಎರಡುವರ್ಣ ಕೇಳಿ ಚರಿಸೆಪರಮಪುರುಷನನ್ನು ಕಂಡೆ 1 ಸಣ್ಣಬಾಲ ನಾಮ ಹರಿಯತಿನ್ನಬೇಡ ನಿನಗೆ ಬಹಳಅನ್ನಮಾಡಿಕೊಡುವೆನೆಂದುಧನ್ಯ ಜಗವ ನಿರ್ಮಿಸಿದೆಯಾ 2 ಕರ್ಮ ಮಾಡದಲೆಇಂದಿರೇಶ ನಿನ್ನ ಮನದಿಪೊಂದಿ ಭಜಿಪೆ ಪಾವನಾತ್ಮಾ 3
--------------
ಇಂದಿರೇಶರು
ವಿಮಲಮಹಿಮನೆ ದಾಸನಾಸೆಪೂರೈಸೊ ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ 1 ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ ಗಾನಲೋಲಹುದೆ ನೀ ಜ್ಞಾನವನು ನೀಡೊ ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ ಧ್ಯಾನಿಕಧೇನಹುದೇ ಆನಂದ ನೀಡೊ 2 ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ ಕಾವದೇವ ನೀನಹುದೇ ಭಾವದ್ವಾಸಿಸೆನ್ನ 3 ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್ ಚಿತ್ತ ನೀನಹುದೇ ಸತ್ಸಂಗ ನೀಡೊ ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ ಕರ್ತನು ನೀನಹದೇ ಸತ್ಪಥದೆನ್ನಿರಿಸೊ 4 ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ ದೋಷಹರ ನೀನಹುದೇ ಹಸನೆನಿಸು ಎನ್ನ ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ5
--------------
ರಾಮದಾಸರು
ಶರಣು ಶಿರೀಶ ಹರೇಗೋವಿಂದಾ ಪ ದಾನವ ಕುಲಸಂಹಾರಕಾ ದೀನ ತಾರಕಾ ದೀನ ತಾರಕಾ ಪರಮ ಪಾವನ ರೂಪಾ 1 ಈರೇಳು ಲೋಕದ ಜೀವನಾ ವರಪಾವನಾ ವಿನುತ ದಯಚರಣಾ2 ಭಯಹರ ಆನಂದಸಾಗರಾ ದಯ ಸಾಗರಾ ದಯಸಾಗರಾ ಗರುಡಗಮನ ವರ ಫಣಿಶಯನಾ3 ದುರಿತ ಕುಲಾಂಬುಧಿ ಶೋಷಣಾ ಖರದೋಷಣಾ ಖರದೋಷಣಾ ತನು ಪರ್ವತ ಕುತಿಲಿಶಾ4 ಸುರವರ ಮುನಿಜನ ಪಾಲನಾ ಧರಿಲೋಲನಾ ಧರಿ ಲೋಲನಾ ರಾಯಣ ಸರಜ ನೇತ್ರಾ5 ರವಿಕೋಟಿ ನಿಧನಂದ ನಂದನಾ ಭವಬಂಧನಾ ಪತಿ ಜನಕಾ6 ಅಸಮ ಪಯೋಧರ ಸುಂದರಾ ದಶಕಂಧರಾ ದಶಕಂಧರಾ, ಮರ್ಧನ ನಿರುಪಮ ಚರಿತಾ7 ಸಕಲ ವ್ಯಾಪಕ ಯದುನಾಯಕಾ ಸುಖದಾಯಕಾ ಸುಖದಾಯಕಾ ಮಹಿಪತಿ ನಂದನ ಪ್ರೀಯಾ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು 1 ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ 2 ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ 3 ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ 4 ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ 5 ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ 6 ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ 7 ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು 8 ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು 9 ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ 10|| ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ 11
--------------
ಗುರುರಾಮಲಿಂಗ
ಶ್ರೀ ತುಳಸಿ ಸ್ತುತಿಗಳು ಇಂದಿರೇಶನ ಅರ್ಧಾಂಗಿ ಬೃಂದೆ ಪಾಲಿಸು ಪ ಸಿಂಧುಶಯನನೊಡನೆ ಬಂದು ಮಂದಹಾಸವನೀಡು ಅ.ಪ ದೇವಿ ನಿನ್ನ ಕೃಪೆಯನೆಳಸಿಭಾವ ಭಕ್ತಿಯಿಂದ ಭಜಿಸಿ ಪಾವನಾಂಘ್ರಿಗಳಿಗೆ ನಮಿಸಿ ಕಾವುದೆಂಬೆವು ತಾಯೆ ತುಳಸಿ 1 ಕಾಮಿತಾರ್ಥದಾತೆ ಮಾತೆ ಪ್ರೇಮಪೂರ್ಣ ಜಗವಿಖ್ಯಾತೆ ಸೂರ್ಯ ವಿನುತೆ ಚರಿತೆ ಭಾವೆ ಮಾಂಗಿರೀಶ ದಯಿತೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಧರಾಕರ ಕಂಜ ಸೇವಿತ ಪಾದ ಪದ್ಮಜ ಪದದ ಪುರು ಕರು- ಣೋದಧಿಯೆ ಲಾಲಿಪುದು ಪಾಮರನೆಂಬ ಬಿನ್ನಪವ ಸೋದರ ಸ್ಥಿತ ಸಕಲ ಬ್ರಹ್ಮಾಂ- ಪತಿ ನೀನರಿವಿಯಾದರು ಮಾಧವನೆ ಮನದಿರವ ಪೇಳ್ವೆನು ಮನುಜಭಾವದಲಿ 1 ಸುಕೃತ ಫಲವೋ ದೋಷದೂರನೆ ನಿನ್ನ ಪದವನು ಮೀಸಲಳಿಯದೆ ಸೇವೆ ಮಾಳ್ವದು ಲೇಸುಲೇಸೆಂದು ದಾಸಕೂಟದಿ ಸೇರಿ ಮನೆಯಲಿ ವಾಸವಾಗಿರಲಿದರ ಮಧ್ಯಮ ರಾಶೆ ಬಲೆಯಲಿ ಸಿಲುಕಿದೆನು ಕರುಣಾ ಸಮುದ್ರಹರಿ 2 ತನ್ನಿಕೃಷ್ಟ ಮನೋವಿಕಾರಗ- ಳಿನ್ನು ಬಿಡದಲೆ ಪೀಡಿಸುವ ಪರಿ ಯನ್ನು ಪರಮ ಕೃಪಾಳು ನೀನೆಂದೊರವೆನಖಿಳೇಶ ಮಾನ್ನವರ ಮಧ್ಯದಲಿ ಮಾನದಿ ಎನ್ನ ಕಾಪಾಡುವದು ಭಾರವೆ ತನ್ನ ಫಲಗಳ ತಾನೆ ಕೆಡಹುವದುಚಿತವೇ ತೆಗೆ 3 ಯುಕ್ತಿಯಲಿ ನಿನ್ನಂಥ ದೇವರ ರೆತ್ತಿ ವೈದಮೃತವನು ಸುಲಭದೊಳಿತ್ತೆ ದಿವಿಜರಿಗೆ ಔತ್ತರೇಯನ ಕಾಯ್ದ ದ್ರೌಣಿಯ ನೆತ್ತಿಯೊಳಗಿನ ರತ್ನ ಭೀಮನಿ ಗಿತ್ತ ಪರಿಯನು ಪಠಿಸಿ ತಿಳಿದೆನು ಪಾವನಾತ್ಮಕನೆ 4 ಬ್ರಹ್ಮತೇಜೋ ವೃದ್ಧಿ ಬಲಿಯೊಳು ಬ್ಯಾಡ ಸಂಗರ ನಮಗೆನುತ ನಿ- ಮ್ಮಮ್ಮನೊಳ್ ನುಡಿದಂದು ಕಶ್ಯಪನಿಂದಲವತರಿಸಿ ಬ್ರಹ್ಮಚಾರಿಯ ರೂಪದಿಂದೀ ಕ್ಷಮ್ಮೆಯನು ಸೆಳೆದಿಂದ್ರಗಿತ್ತಮ- ಹಾನ್ಮಹಿಮ ನಿನಗಾವದಘಟಿತ ನೀರಜಾರಮಣ5 ನಾರದರ ನುಡಿ ನಿಜವೆನುತ ಮೂ- ರಾರು ಭಕ್ತಿಯ ತಾಳ್ದ ಮನುವಿನೊ- ಳಾರುಭಟಿಸುತ ಕಾಶ್ಯಪನು ಮದವೇರಿ ನಿಂದಿರಲು ಯಾರು ತಿಳಿಯದ ತೆರದಿ ಕಂಭದಿ ಮೃಗ ರೂಪವನು ಹೆ- ಮ್ಮಾರಿ ದೈತ್ಯನ ತರಿದು ತ್ವತ್ಪದವಿತ್ತೆ ದಾಸನಿಗೆ 6 ಏನು ಶ್ರಮವಿಲ್ಲದಲೆ ಪಿಡಿದು ದ- ಶಾನನನ ತೊಟ್ಟಿಲಿಗೆ ಕಟ್ಟಿ ಪ್ರ- ವೀಣತೆಯ ತೋರಿಸಿದ ವಾಲಿಯ ಪಕ್ಷವನು ತ್ಯಜಿಸಿ ದೀನ ಬಾಂಧವನೆಂಬ ಬಿರುದನು ದಿಟವೆ ನಿಶಿತದ್ರಾಜ್ಯ ಪದವಿಯ ಭಾನುಜನಿಗೊಲಿದಿತ್ತ ಭಕ್ತಜನಾರ್ತಿ ಭಂಜನನೆ 7 ಶಬ್ದಗೋಚರವಾದ ಕಥೆಗಳು ಬದ್ಧವೆಂಬುದು ಪೂರ್ವದನುಭವ ಸಿದ್ಧವಾಗಿಹುದೆನಗೆ ಸಜ್ಜನಲಬ್ಧಪದ ಪದ್ಮ ಬುದ್ಧಿಹೀನತೆಯಿಂದ ನುಡಿದರು ಮಧ್ವವಲ್ಲಭ ನಿನ್ನ ದಾಸನ- ನುದ್ಧರಿಸು ನೀನಲ್ಲದೆನಗಿನ್ನಾರು ಗತಿ ಹರಿಯೆ8 ಒಡೆಯರೆಂಬರನೆಲ್ಯುಕಾಣದೆ ಉಡುವದುಂಬುದಕೇನು ದೊರೆಯದೆ ಗಿಡವ ನಿಲುಕದ ಬಳ್ಳಿಯಂದದಿ ಬಡುವ ಕಷ್ಟವನು ತಡೆಯಲಾರದೆ ತಳಮಳಿಸುತಿರೆ ಪಿಡಿದು ಕರವನು ಕಾಯ್ದೆಯೆನ್ನನು ನುಡಿವದೇನಖಿಳಾಂಡ ನಾಯಕ ನಿನ್ನ ಮಹಿಮೆಯನು 9 ಮಾರಿಯಂದದಿ ಮಧ್ಯದೊಳಗೊ- ಬ್ಯಾರುವೇನೆಂಬಧಮ ಹೂಣನು ತೀರಿಸುವೆನೆಂದೆನ್ನೊಳಿಲ್ಲದ ದೂರ ಸಂಗ್ರಹಿಸಿ ಗಾರಗೊಳಿಸುವದರಿತು ಕಕ್ಷವ ಹಾರಿಸುತ ಸುರವಂದ್ಯ ಮೂರ್ತಿಯ ತೋರಿ ತಂದಿಲ್ಲಿರಿಸಿ ಪೊರೆದವನ್ಯಾರು ಪೇಳ್ದೊರೆಯೆ 10 ಶ್ರೀಶ ನಿನ್ನ ಪದಾಬ್ಜ ಪೊಗಳುವ ದಾಸ ಕೂಟದಿ ಸೇರಿ ಸೇವೆಯ ಬ್ಯಾಸರದೆ ನಡೆಸುತಿರೆ ಮತ್ತೊಬ್ಬಾಸುರನ ತೆರದಿ ದ್ವೇಷದಿಂದಿರೆ ದೂರ ಓಡಿಸಿ ದುರಿತ ಭಯಗಳ ಪರಿಹರಿಸಿದ ಮ- ದೀಶ ನೀನೆಂದನವರತ ನಂಬಿರುವೆ ಶ್ರೀಪತಿಯ 11 ಇಷ್ಟು ಪರಿಯಿಂದೆನ್ನ ರಕ್ಷಿಸು- ತಿಷ್ಟ ಫಲಗಳನೀವ ವೆಂಕಟ ಬೆಟ್ಟದೊಡೆಯನೆ ಬೇಡಿಕೊಂಬುವೆ ಒಂದು ಕೃತ್ಯವನು ಮಾನವ ನುಡಿಯಕಾಡನು ಸುಟ್ಟು ಸೂರೆಯಗೈದು ನಾ ಮನ ಸಿಟ್ಟ ತೆರದಲಿ ತೋರು ಚಿತ್ತವ ಸೃಷ್ಟಿಕರ ಶ್ರೀಶ 12
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ ಪ ಸತ್ಪಾತ್ರ ವಿನುತ ಶುಭಗಾತ್ರ ಪವಿತ್ರ ಅ.ಪ. ರಾಮಪದ ಭೃಂಗಾ | ರಾವಣ ಮದಭಂಗ | ಗಜಸಿಂಗಾತಾಮಸ ಕುಲಕೆ ನೀ ಧೂಮಕೇತು ಬುಧಸೌಮನಸಾಗ್ರಣಿ ಕಾಮಿತ ಫಲದಾ 1 ಪಾಂಡುನಂದನಾ | ಪಾಲಿಸು ಯನ್ನಾ | ಖಂಡ ಪಾವನಾಅಂಡಜಾಧಿಪನ ಕಂಡು ಭಜಿಸಿ ದೋ-ರ್ದಂಡ ಖಳ ಕುಲ ಚಂಡ ಪ್ರಚಂಡಾ 2 ಜ್ಞಾನದಾಯಕಾ | ಆನಂದತೀರ್ಥ | ದೀನ ಪೋಷಕಭಾನುಕೋಟಿ ತೇಜ ವ್ಯಾಸ ವಿಠಲನಧ್ಯಾನದೊಳಿಹ ಮಮ ಮಾನಸ ಹಂಸಾ 3
--------------
ವ್ಯಾಸವಿಠ್ಠಲರು
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು
ಹರಿ ಶ್ರೀ ರಘುರಾಯಾ ಸಂಸಾರ ಮಾಯಾ ಭವ ಜೀಯಾ ತೋರೊ ನಿನ್ನಯ ದಿವ್ಯ ಕಾಯಾ ಕೊಡು ನೀ ಸುಮತಿಯಾ ಪ ಗರುಡವಾಹನಾ ಪರಮಪಾವನಾ ಶಿರಿಯ ಸುಖದಿ ಮರೆಯಬ್ಯಾಡೊ ಚರಣದಾಸನಾ 1 ಇಷ್ಟದಾಯಕಾ ಕಷ್ಟತಾರಕಾ ಸೃಷ್ಟಿ ಪತಿಯೆ ಕೊಟ್ಟು ಸಲಹೊ ಮೋಕ್ಷದಾಯಕಾ2 ನಾಶರಹಿತನೇ ವಾಸುದೇವನೇ ಪೋಷಿಸೊ ತವ ದಾಸನಾ ಹನುಮೇಶ ವಿಠಲನೇ3
--------------
ಹನುಮೇಶವಿಠಲ
ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ ಕರುಣಿಸೆನ್ನೊಳು ದೊರೆಯೆ ಪ. ನಾನಾ ಯೋನಿಗಳಲ್ಲಿ ಪೋಗುವ ಸೂನುಗಳಿಂತು ಮಾಳ್ಪ ಶಿವ ಭಾನು ನಾಮಗಳಿಂದಲಿ ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ 1 ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ ವಾಸುದೇವ ನೀನುದ್ಧರಿಸೆನ್ನನುತ ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ 2 ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಮಂಗಳೂರಿನ ಪ್ರಾಣದೇವರನ್ನು ನೆನೆದು)ಪಾಲಿಸೆನ್ನಪಾವಮಾನಿಪಾವನಾತ್ಮ ಸುಜ್ಞಾನಿಪ.ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ.ಮೂರವತಾರವ ಗೈದು ಮುರಾರಿಯ ಪೂಜಿಸಿದೆಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳುಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2ಪುರಹೂತಾದ್ಯಮರಾರ್ಚಿತ ಪೂರ್ವಮಧ್ವಂಸಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3ಸರ್ವಾಪರಾಧಗಳನು ಸಾಧುವರದ ಕ್ಷಮಿಸುಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶವರಲಕ್ಷ್ಮೀನಾರಾಯಣ ಶರಣಾಗತರೀಶ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ