ಒಟ್ಟು 88 ಕಡೆಗಳಲ್ಲಿ , 43 ದಾಸರು , 88 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ ಜಗದೇಕವೀರ ನಿನ್ನ ಕೊಮಾರ ನೀ ದುಃಖದೂರ ಸುಖಕರ ಎಲೆ ನಾರಾಯಣ ಜಗದ್ಧರ ಮುಕ್ತಿದಾ-ತಾರ ಎನಗೆ ನಿನ್ನ ತೋರ ಇನ್ನುಬಾರಾ ನಾನರಿಯೆ ಸಿರಿಧರ ಪ. ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1 ಕಂಡಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸಿ ದುರುಳರಸಂಗವ ಬಿಡಿಸು 2 ಶ್ರೀ ಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರ ಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಡಿದುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
--------------
ವಾದಿರಾಜ
ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ ಸುಜನ ಮಂದಾರ ಅನೇಕದಿವ್ಯರೂಪ ಪ. ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ ಬಿಡಿಸೊ ನೀ ಎನ್ನ 1 ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ ಸತಿಯನು ಹಿಂಸಿಸಿ ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ ಸಕಲಾಗಮಸುತ್ತ್ಯಾ ಸಾಮಗಾನ ಲೋಲ 2 ಸನ್ನುತ ಶಾಶ್ವತ ಗುಣಭಾಸ ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ 3
--------------
ಹೆಳವನಕಟ್ಟೆ ಗಿರಿಯಮ್ಮ
ಲಕ್ಷ್ಮೀಶ ನರಹರಿ ವಿಠ್ಠಲನೆ ಸಲಹೊ ಪ ಪಕ್ಷೀಂದ್ರ ವಾಹನನೆ ಈಕ್ಷಿಸುತ ಕರುಣದಿಂರಕ್ಷಿಸಲಿ ಬೇಕಿವಳ ಲಕ್ಷ್ಮಣಾಗ್ರಜನೇ ಅ.ಪ. ದೀನಜನ ಮಂದಾರ ಜ್ಞಾನದಾಯಕನೆ ಸುರ-ಧೇನು ಭಕ್ತರಿಗೆ ಕಾಮಿತವ ಕೊಡುವಲ್ಲಿ |ನೀನಿವಳಿಗೇ ಮೋಕ್ಷಜ್ಞಾನವನೇ ಪಾಲಿಸುತಸಾನುರಾಗದಿ ಸಲಹೊ ಪ್ರಾಣಾಂತರಾತ್ಮ 1 ಸೃಷ್ಟಿ ಸ್ಥಿತಿ ಸಂಹಾರ ಕರ್ತನೀನೆಂದೆನಿಪೆವೃಷ್ಟಿಕುಲ ಸಂಪನ್ನ ಜಿಷ್ಣು ಸಖ ಹರಿಯೇ |ಕಷ್ಟನಿಷ್ಠೂರಗಳ ಸಹಿಸುವಡೆ ಧೈರ್ಯವನುಕೊಟ್ಟು ಕೈ ಪಿಡಿಯುವುದು ಕೃಷ್ಣ ಮೂರುತಿಯೇ2 ಪತಿಯೆ ಪರದೈವ ವೆಂಬುನ್ನತದ ಮತಿಯಿತ್ತುಹಿತದಿಂದ ಹರಿಗುರು ಸೇವೆಯಲಿ ರತಿಯಸತತ ನಿನ್ನಯ ನಾಮ ಸ್ಮøತಿಯನ್ನೇ ವದಗಿಸುತಕೃತಿಪತಿಯೆ ನೀನಿವಳ ಉದ್ಧರಿಸು ಹರಿಯೇ 3 ತಾರತಮ್ಯ ಜ್ಞಾನ ವೈರಾಗ್ಯ ಭಕುತಿ ಕೊಡುಮೂರೆರಡು ಭೇಧಗಳ ಅರಿವಿತ್ತು ಹರಿಯೇಮಾರಪಿತ ಇವಳ ಹೃದ್ವಾರಿಜದಿ ತವ ರೂಪತೋರುತಲಿ ಸನ್ಮುದವ ಬೀರುವುದು ಹರಿಯೇ 4 ಸರ್ವಾಂತರಾತ್ಮನೆ ಗುರುಡವಾಹನ ದೇವಸರ್ವಜ್ಞ ಸರ್ವೇಶ ಮಮ ಕುಲ ಸ್ವಾಮೀ |ನಿರ್ವಿಘ್ನದಿಂದೆನ್ನ ಪ್ರಾರ್ಥನೆಯ ಪೂರೈಸೊಸರ್ವಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದೇಂದ್ರ ಮುನಿಪ ದಿಕ್ಷತಿಗಳಂತೆ ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ಪ ಸುರರಾಜನಂತೆ ಭೂಸುರಗಡಣ ಮಧ್ಯದಲಿ ಮೆರೆವ ದುರ್ವಿಷಯಕೆ ಪಾವಕಾ ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ ಧರನಂತೆ ಇರುವ ದಿಗ್ವಜಿಯಿಸುವ 1 ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ ಪಾನೀಯಧರಗಳಿಗೆ ಪವಮಾನನೆನಿಪ ದೀನಜನರಿಗೆ ಧನದ ವೈರಾಗ್ಯ ತಪದಲಿ ಕೃಶಾನು ಕೇತನ ತೆರದಲೊಪ್ಪುವನಜಸ್ರ 2 ಸೂರಿಕುಲವರಿಯ ವಸುಧೀಂದ್ರರಾಯ ಕರಸ ರೋರುಹದಿ ಜನಿಸಿ ಪರಮೋತ್ಸಹದಲಿ ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ ಣಾರವಿಂದರ್ಚನೆಯ ಪಡೆದು ಸಂತೋಷಿಸುವ3
--------------
ಜಗನ್ನಾಥದಾಸರು
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1 ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2 ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ ಸಿಂಧುಶಯನ ಆನಂದನ ಕಂದನೆ ವೆಂಕಟೇಶ ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3 ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4 ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5
--------------
ರಾಮದಾಸರು
ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ ಪ ಕಳಿಯುವಂಥ ಅ.ಪ ಮಾನವರೂಪಾ ಮಹಾಜ್ಞಾನದ ಪಾಪಾ ಕಾನನ ದಾವಾಗ್ನಿಎನಿಸಿ ದೀನಜನರ ಪೊರೆಯವಂಥ 1 ಮಂಗಳ ಚರಿತಾ ಪಾಂಡುರಂಗನ ದೂತ ತಿಂಗಳ ಸಮ ಕಾಂತಿವಂತ ಡಿಂಗರಿಗರ ಪೊರೆಯುವಂಥ 2 ನರಜಗಮಾವಾ ಲಕುಮಿಗೆ ವರನೆನಿಸುವಾ ವರಶಿರಿ ಗೋವಿಂದ ವಿಠಲನ್ಹರುಷದಿಂದ ಸ್ಮರಿಸುತಿರುವ 3
--------------
ಅಸ್ಕಿಹಾಳ ಗೋವಿಂದ
ಶ್ರೀನರಹರಿ ಕರುಣಾಜಲಧೆ ತವಚರಣವ ನಂಬಿದೆ ಪ ದೀನಜನರು ಪ್ರತಿದಿನ ಮೊರೆಯಿಡುತಿರೆ ನಿಕರ ಕುಲಿಶಾಯುಧ ಧುರಧೀರಾ ಶೂರಾ ಹಿರಣ್ಯ ಕಶಿಪು ಪುರಂದರ ಸನ್ಮುನೀಂದ್ರ ನುತಿ ಪಾತ್ರಸುಚರಿತ 1 ಉಗ್ರರೂಪ ಸಕಲಗ್ರಹಭಯ ಪರಿಹಾರೀ ಶೌರೀ ಮುರ ವೈರಿ ಜಲಜನಾಭ ನಿನ್ನಯ ಚಿಂತನೆ ಕೊಡು 2 ಕ್ಷುದ್ರರೋಗಗಳುಪದ್ರಪಡಿಸುತಿಹದೈಯ್ಯ | ಜೀಯಾ ಕ್ಷೇಮವಿತ್ತು ನಿನ್ನವರ ದಾಸನೆನಿಸೈಯ್ಯಾ ರುದ್ರಾಂತರ್ಗತ ಗುರುರಾಮ ವಿಠಲ ಭದ್ರಮೂರುತಿ ಘಟಿಕಾಚಲನಿಲಯ 3
--------------
ಗುರುರಾಮವಿಠಲ
ಶ್ರೀಮಾಧವ ತೀರ್ಥರ ಸ್ತೋತ್ರ ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ 1 ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ 2 ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ 3
--------------
ಗುರುಗೋವಿಂದವಿಠಲರು
ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸಂಗತ ತುಝೇ ಕೋಯೀ ನಹೀ ಸಬ್ಹೀ ಮಾಯ ಹೈ ಪ ಆತಾ ಅಕೇಲs ಜಾತಾ ಅಕೇಲs ಮಾತಾಪಿತ ಭಾರ್ಯ ಬಂಧು ಜಾತೇ ಕೋಯೀ ಆತೇ ನಹೀ ಸಬ್ಹೀ ಮಾಯ ಹೈ 1 ಪಾಯಾಹುವೇ ಸುಂದರ ಜನುಮ ಖೋಯೇ ಜಾಯೇ ಮಿಲ್ತಾನಹೀ ಜೀವ ದುನಿಯs ಧನದೌಲತ್ತ ಸಬ್ಹೀ ಮಾಯs ಹೈ 2 ಮಾನೋ ಮನ ತೇ ಜ್ಞಾನ ಬಚನ್ ಹಾನಿ ನ ಪಾವ ದೀನಜನಾಭಿ ಮಾನಿ ಶ್ರೀರಾಮಧ್ಯಾನ ಕÀಮಾವ ಸಬ್ಹೀ ಝೂಟ ಹೈ 3
--------------
ರಾಮದಾಸರು
ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು
ಸುರವೃಂದ ವಾರಿಧಿಶಯನ ಗೋವರ್ಧನೋದ್ಧರಣ ಚಾರುಚರಣ ಪ ವಾರಿಜದಳ ನಯನ ವಾರಿಧಿಶಯನ ಉರ್ವಿಭಾರಾಪಹರಣ ಸಾರಿದಜನ ಸಂಸಾರಿಸಿರಿಯಣ 1 ಭಂಜನ ಹರಣ ಪಾರ್ಥಿವ ಕುಲರಂಜನ ಚಾತುರ್ಯತರ ಜಾಣ ಚೇತನಾತ್ಮಕ ಸುಗುಣ ಜಾತ ರಹಿತ ಜನಜಾತ ಸಂಜೀವನ 2 ದೇವಕಿ ವರನಂದನ ದಿವಿಜನುತ ರಾವಣಾಸುರ ಬಂಜನ ಮಾವ ಕಂಸಾಂತಕ ಮಾವಧುನಾಯಕ ಸೇವಿತ ರಕ್ಷಕ ಶರ್ವಾಣೀವರ ಸಖ 3 ಭಂಜನ ನಾರದ ನುತ ವಾನರಪತಿ ಪರಿಪಾಲನ ದೀನಜನರ ಪೋಷ ಭಾನು ಕೋಟಿ ಪ್ರಕಾಶ ಮನಮೋಹನ ರೂಪ ಲೀಲಾರ ಮಾಲೋಲ 4 ಚಿಂತತ ಫಲದಾಯಕ ಭಕ್ತರ ಹೃದಯಾಂತರಂಗದ ನಾಯಕ ಕಂತು ಜನಕ ಲಕ್ಷ್ಮೀಕಾಂತ ಭೀಮನ ಕೋಣೆ ಸಂತತವಾಸ ತಕ್ಷಕಾಂತಕಾರೂಢ ಹರಿ 5
--------------
ಕವಿ ಪರಮದೇವದಾಸರು