ಒಟ್ಟು 92 ಕಡೆಗಳಲ್ಲಿ , 35 ದಾಸರು , 88 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸುಮತೀಶ ವಿಠ್ಠಲನೇ ನೀನಿವಗೆ | ಎಸೆವ ಜ್ಞಾನವನಿತ್ತುಹಸನಾಗಿ ಕಾಪಾಡಬೇಕೊ ಹರಿಯೆ ಪ ಕುಸುಮ ಸಂಭವ ಪಿತನೆ | ವಾಸುದೇವನೆ ಕೃಷ್ಣನಸು ನಗೆಯಲೀ ನಿನ್ನ ಉಪಾಸನವ ಕೊಡೊ ಹರಿಯೆ ಅ.ಪ. ತರತಮವು ಪಂಚಭೇದದ ಜ್ಞಾನ | ನಿರತಿಶಯ ಹರಿಭಕ್ತಿಗುರುಭಕ್ತಿಗಳ ಕರುಣಿಸೀ ಕಾಪಾಡಬೇಕೊ ಹರಿಯೇ |ವರ ಪ್ರದಾಯಕ ಸ್ವಾಮಿ ವೈರಾಗ್ಯ ಭಾಗ್ಯಗಳ ನೀನಿವರಿಗಿತ್ತುಕರುಣದಿಂ ಕಾಪಾಡಬೇಕೊ ಹರಿಯೇ 1 ನಿನ್ನ ಮೊರೆ ಹೊಕ್ಕವನ | ಇನ್ನು ಕೈ ಪಿಡಿಯುವುದುನಿನ್ನ ಧರ್ಮವಲ್ಲವೆ ಸ್ವಾಮಿ ರಾಮಚಂದ್ರ |ನನ್ನೆಯಿಂದಲಿ ಇವನ ಪಾಪಗಳ ಪರಿಹರಿಸಿನಿನ್ನ ಪದ ಸೇವಕನ ಮಾಡೊ ವೈಕುಂಠ ಪತಿಯೇ 2 ಖಗವರಧ್ವಜ ದೇವ ಜಗಜ್ಜನ್ಮಾದಿ ಕಾರಣನೆಬಗೆಬಗೆಯ ಮಹಿಮೆಗಳ ತೋರಿ ಕಾಪಾಡೊ ಹರಿಯೇ |ಸುಗುಣ ಮೂರುತಿ ದೇವ ತ್ರಿಗುಣ ವರ್ಜಿತ ಸ್ವಾಮಿಹಗರಣಗಳೀಯದಲೆ ಕಾಪಾಡೊ ಹರಿಯೇ 3 ಇಷ್ಟಮೂರುತಿ ದೇವ ಸೃಷ್ಟ್ಯಾದಿ ಕಾರ್ಯಗಳದೃಷ್ಟಿಯಿಂದಲಿ ಮಾಳ್ಪ ಮಹಮಹಿಮ ಹರಿಯೇ |ಕೃಷ್ಣಮೂರುತಿ ಹೃದಯ ಅಷ್ಟದಳ ಮಧ್ಯದಲಿದೃಷ್ಟಿಗೋಚರನಾಗಿ ಕಾಪಾಡೊ ಹರಿಯೇ 4 ಮೂರ್ತಿ ಹಯ ಮೊಗಾತ್ಮಕನೇ |ವೇದಾಣಿ ವಂದ್ಯ ಗುರುಗೋವಿಂದ ವಿಠ್ಠಲನೇನೀ ದಯದಿ ಕೈ ಪಿಡಿದು ಕಾಪಾಡೊ ಹರಿಯೇ 5
--------------
ಗುರುಗೋವಿಂದವಿಠಲರು
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1 ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2 ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
--------------
ರಾಮದಾಸರು
ವೆಂಕಟ ಗಿರಿ ವಿಠಲ | ಲೆಂಕಳನ ಪೊರೆಯೋ ಪಪಂಕಜಾಸನ ವಂದ್ಯ | ಆಕಳಂಕ ಮಹಿಮಾ ಅ.ಪ. ಸಾಧ್ವಿಮಣಿ ತವದಾಸ್ಯ | ಬುದ್ದಿಯಲಿ ಮೊರೆಯಿಟ್ಟುಉದ್ಧರಕೆ ಕಾದಿಹಳೊ | ಅಧ್ವರೇಡ್ಯ ಹರೀ |ಮಧ್ವಮತ ಪೊತ್ತಿರುವ | ಶುದ್ಧಕಾರಣದಿಂದಉದ್ಧಾರ ಗೈಯ್ಯುವುದೊ | ಶ್ರದ್ಧ ಪತಿನುತನೇ 1 ಖೇಚರೋತ್ತಮ ದೇವ | ವಾಚಾಮ ಗೋಚರನೆಪ್ರಾಚೀನದುಷ್ಕರ್ಮ | ಮೋಚನವಗೈಸೇಯಾಚಿಸುವೆ ನಿನ್ನಲ್ಲಿ | ಕೀಚಕಾರಿ ಪ್ರಿಯನೇಮೋಚಕೇಚ್ಛೆಯ ಮಾಡಿ | ಸೂಚಿಸೋ ಕರುಣಾ 2 ಕರ್ಮ ಪಥಸವೆಸೋ 3 ಹರಿನಾಮ ಸ್ಮøತಿಗಿಂತ | ಪರಮ ಸಾಧನ ಕಾಣೆವರಕಲೀಯಲಿಯೆಂದು | ಸಾರತಿವೆ ಶಾಸ್ತ್ರಾತುಣಿಗಂತೆಯೆ ಮತ್ತೆ | ವರ ಸ್ವಪ್ನವನುಸರಿಸಿಬರೆದಿಹೆನೊ ಅಂಕಿತವ | ಕರುಣ ರಸ ಪೂರ್ಣಾ 4 ಕೈವಲ್ಯ ಫಲದಾತಸೇವಕಳ ಕೈಪಿಡಿಯೆ | ಓವಿ ಪ್ರಾರ್ಥಿಸುವೇ |ಭಾವುಕರ ಪಾಲ ಸಂ | ಭಾವಿಸೀಕೆಯ ಕಾಯೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶಿವಸ್ತುತಿ ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ ತನುಮನಕಾಧಾರನಾದ ಘನಪರಾನಂದಾರ್ತ ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ 1 ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ 2 ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ 3 ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ 4
--------------
ಶಾಂತಿಬಾಯಿ
ಶ್ರೀದ ನರಹರಿ ವಿಠಲ | ಕಾದುಕೊ ಇವಳಾ ಪ ಸಾಧು ವಂದಿಯ ಹರಿಯೆ | ವೇದಗೋಚರನೆಅ.ಪ. ವಾಹನ ಹರಿಯ | ನಿರ್ಧಾರವನು ಸರಿಸಿಬದ್ದೆಳೆನಿಸಿಹೆ ದಾಸ | ಪದ್ದತಿಯ ಅವಳಾ 1 ಕರ್ಮನಿಷ್ಕಾಮನದಿ | ಪೇರ್ಮೆಯಲಿ ಗೈಯುತ್ತಭರ್ಮಗರ್ಭನ ಪಿತನ | ನಾಮ ಸುಧೆಯುಣುತಾಕರ್ಮಕ್ಷಯವನು ಪೊಂದಿ | ನಿರ್ಮಲಾತ್ಮಕಳಾಗಿಧರ್ಮಾಖ್ಯ ತವಪಾದ | ಪದ್ಮರತಳೇನಿಸೋ 2 ಪತಿ ಸೇವೆ ಹಿಂದೇಈತರದ ಸುಜ್ಞಾನ | ಮತಿಯಿತ್ತು ಪಾಲಿಸುತಕೃತಕಾರ್ಯಳೆಂದೆನಿಸೊ | ನತಜನ ಸುಪಾಲ 3 ವಜ್ರ ಕವಚವನೆಕರುಣಾದಿಂ ತೊಡಿಸೊ ಹರಿ | ಮರುತಂತರಾತ್ಮ 4 ಮೃಡ ವಂದ್ಯ ಹರಿಯೇಕಡು ಕರುಣಿಮನ್ಮಾತ | ಬಿಡದೆ ನೀ ಸಲಹಯ್ಯಬಡವಿಪ್ರಗೊಲಿದ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀದೇವಿ ಪ್ರಿಯ ವಿಠಲ | ಮೋದವಿತ್ತಿವನೀಗೆ ||ಕಾದುಕೋ ನೀ ದಯದಿ | ವೇದಾಂತ ವೇದ್ಯಾ ಪ ಮಾಧವನೆ ಬೇಡುತಿಹ | ಆದರದಿ ತವದಾಸ್ಯಸಾಧಿಸೋ ಇವನಲ್ಲಿ | ತದ್ಧರ್ಮ ಬಿಡದೇ ಅ.ಪ. ದುರಿತ ಗಜ ಸಿಂಹಾ 1 ಪ್ರಾಚೀನ ಕರ್ಮಾಳಿ | ಯೋಚಿಸಲು ಅಳವಲ್ಲವಾಚಾಮ ಗೋಚರನೆ | ಮೋಚ ಕೇಚ್ಛೆಯನೂಯಾಚಿಸುವೆ ಇವಗಾಗಿ | ಖೇಚರೋತ್ತಮ ಸವ್ಯಸಾಚಿ ಸಖನೇ ಹರಿಯೇ | ಸಚ್ಛಿದಾನಂದಾ 2 ಮೃಡ ಕರಿ | ಎಡರ ಪರಿಹರ್ತಾ 3 ನಿತ್ಯ ನಿತ್ಯ ನಿಗಮಾತೀತಭೃತ್ಯರೊಳು ವಾತ್ಸಲ್ಯ | ಪೊತ್ತ ನಗಧೀಶ4 ಬೋವ ನೀನಾಗುತಲಿಭಾವ ಮೈದುನಗೊಲಿದೆ | ದೇವ ದೇವೇಶಾ |ಭಾವುಕರ ಪಾಲಗುರು | ಗೋವಿಂದ ವಿಠ್ಠಲನೆತಾವಕನ ಪೊರೆಯೆಂಬ | ಭಾವ ಸಲಿಸುವುದೋ 5
--------------
ಗುರುಗೋವಿಂದವಿಠಲರು
ಶ್ರೀರಂಗ ಶ್ಯಾಮಲಕೋಮಲಾಂಗ ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ. ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ 1 ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ 2 ನಿತ್ಯಾನಂದನೆ ನಿಗಮಗೋಚರನೆ ಮದನ ಶ್ರೀಗೋಪಾಲನೆ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ3
--------------
ಹೆಳವನಕಟ್ಟೆ ಗಿರಿಯಮ್ಮ
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಸರಾಗದಿಂದೆನ್ನ ನೀಕ್ಷಿಸೈ ಪರಾಪರೇಶನೆ ಪರಾತ್ವರನೆ ನೀ-ಪರಾಕು ಮಾಡದೆ ಪಾಲಿಸೈ ಪ ವಿರಾಜಮಾನ ಸುವೀರಾಜವಾಹನ ವಿರಾಟ್ಪುರುಷ ವಿಶ್ವಂಭರ ಕರಾರವಿಂದದಿ ಕರಾದಿಗಳ ಪಿಡಿದರಾತಿ ಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹು ಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾ ಭರಣ ಗುಣಭೂಷಣ ಸುರಾರಿ ಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರೀಸುಕೋಮಲ ಶರೀರ ನಿನ್ನದು ಈಪರಿ ಪರಿಯದೆಂತುಟೋ ಕೇಳ್ಹರಿ 4 ಧಯಾನಿಧಿಯೇಧರ್ಮಾತ್ಮನೆ ನಿಯಾಮಿಸುವ ನಿರ್ಮಾಯನೆ 5 ವರೇಣ್ಯಸಜ್ಜನ ಶರಣ್ಯಪುಲಿಗಿರಿಯರಣ್ಯಮಧ್ಯ ವಿರಾಜಿತ ಹಿರಣ್ಯಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ6 ವ್ಯಾಘ್ರನೆಂಬುವತ್ಯುಗ್ರದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪಸುರಾಗ್ರಗಣ್ಯ ಪುಣ್ಯಾತ್ಮನೆ 7 ನಿರುತವು ಸನ್ನುತಿಗೈವರೆ ಪರಿಪರಿ ನಿನ್ನನೆ ಪೊಗಳ್ವರೆ 8 ನೀಜಗದಲ್ಲಿ ಒಲಿದಿರ್ಪೆಯ ನೀ ಕೈಗೊಂಬೆಯ 9 ನಿಜಪರದೊಲುನೀ ನಜಭವಮುಖಸುರವ್ರಜ- ಗೋಚರನಾಗಿಲ್ಲವೈ ತ್ರಿಜಗಕ್ಕೆ ಗೋಚರನಾಗಿಹೈ 10 ನಿತ್ಯತೃಪ್ತನೀನತ್ಯುತ್ತಮ ನಿಜ ಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಫಣಿಭೂಧರದೊಳು ನಿರುತವು ಭಕ್ತರ ಕರುಣದಿ ಪೊರೆಯುವ ಧೊರೆ ಸಿರಿವಲ್ಲಭವರದ ವಿಠಲ ಕರುಣಾಕರ 12
--------------
ಸರಗೂರು ವೆಂಕಟವರದಾರ್ಯರು
ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಸಾಧು ಸಂತರಾಶ್ರಯ ಮಾಡಿ | ಇದೇ ಮಾಡಿ ಹಿತ ನೋಡಿ ಪ ಅವರ ವಚನಕಾಗಿ ಅಗೋಚರನಾದಾ | ದೇವ ಬಹನು ಒಡಮೂಡಿ 1 ಎಡಬಲದಲಿ ರಿದ್ದಿ ಶಿದ್ಧಿ ನಿಂದಿರಲು | ನೋಡಲು ನುಡಿಸರು ಕೂಡೀ 2 ಮಹಿಪತಿ ನಂದನು ಸಾರಿದ ನಿಜವಾ | ಇಹಪರ ಸುಖವ ಸೂರ್ಯಾಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಯಗ್ರೀವ ವಿಠಲ | ಪೊರೆಯ ಬೇಕಿವನಾ ಪ ಭಯ ಭರಿತ ಭಕ್ತಿಯಿಂ | ಪ್ರಾರ್ಥಿಸುತ್ತಿಹನು ಅ.ಪ. ಗುರುತಂದೆ ಮುದ್ದು ಮೋಹ | ನರಿತ್ತಂಕಿತ ಪದಮರೆಯಾಗಿ ಕಾಣದಲೆ | ಪೋದುದಕ್ಕಾಗೀಪರಿತಪಿಸಿ ಬಹುವಾಗಿ | ಮೊರೆಯನಿಡುತಿಹ ಹರಿಯೆಕರುಣಿಗಳು ಗುರು ಪರವು | ಪದರಚಿಸಿ ಇತ್ತೇ 1 ಪರಿ ಪರಿಯಸೂಚಿಸೋ ಸನ್ಮಾರ್ಗ | ಸಾಧನಕೆ ಹರಿಯೇ ವಾಚಾಮ ಗೋಚರನೆ | ನೀಚೋಚ್ಚ ತರತಮವವಾಚಿಸುತ ಇವನಲ್ಲಿ | ಮೋಚಕನು ಆಗೋ 2 ಭವ ಶರಧಿ ದಾಟಿಸಲುತವನಾಮ ಸಂಸ್ಮøತಿಯ | ಶ್ರವಣ ಸುಖವಿತ್ತೂಭವರೋಗ ವೈದ್ಯ ಗುರು | ಗೋವಿಂದ ವಿಠ್ಠಲನೆಹವಣದಲಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 3
--------------
ಗುರುಗೋವಿಂದವಿಠಲರು
ಹಯಾನನ ವಿಠಲಾ ನೀ ದಯದಿ ಸಲಹೊ ಇವಳಾ |ದಯಾಪಯೋನಿಧಿ ಎಂದು ನಿನಗೆ ಭಿನ್ನೈಪೇ ಪ ಕುಕ್ಷಿಯೊಳು ಜಗಧರಿಪ ಪಕ್ಷಿವಾಹನದೇವಲಕ್ಷಿಸದಲೇ ದೋಷ | ಲಕ್ಷವನು ಇವಳಾಈಕ್ಷಿಪುದು ಕರುಣಾಕಟಾಕ್ಷದಲ್ಲೆಂದೆನುತಲಕ್ಷ್ಮೀರಮಣನೆ ಹರಿಯೆ ಪ್ರಾರ್ಥಿಸುವೆ ನಿನಗೇ 1 ವಿನುತ | ಬಾಗಿ ಬೇಡುವೆನೋ |ಜಾಗುಮಾಡದೆಲೆ ವೈ | ರಾಗ್ಯ ಭಕ್ತಿಜ್ಞಾನಯೋಗ ಕೊಟ್ಟುದ್ದರಿಸು | ಸಾಗರಜೆ ರಮಣಾ 2 ವಾಚಾಮ ಗೋಚರನೆ | ನೀಚೋಚ್ಚಕ್ರಮ ತಿಳಿಸಿಮೋಚ ಕೇಚ್ಛೆಯ ಮಾಡೊ | ಪಾಚಕಸುವಂದ್ಯಾಪ್ರಾಚೀನ ಕರ್ಮಾಳಿ ಯೋಚಿಸಲು ಅಳವಲ್ಲಆಚರಿತ ಸಂಚಿತವ | ಮೋಚಿಸಾಗಾಮೀ 3 ಸಿರಿ | ನಲ್ಲ ನಿನಗೀಪರಿಯಸೊಲ್ಲ ಪೇಳುವುದುಚಿತೆ | ಚೆಲ್ವ ಹಯವದನಾಬಲ್ಲಿದನೆ ನೀನಾಗಿ | ಚೆಲ್ವ ರೂಪವ ತೋರೆಸಲ್ಲಲಿತ ಅಂಕಿತವ | ಸಲ್ಲಿಸಿಹೆ ದೇವಾ 4 ಭಾವುಕಾರ್ಜುನ ಬಂಡಿ | ಬೋವನಾಗುತ್ತ ಭವನೋವಕಳೆವೋಪಾಯ | ನೀವಲಿದು ಪೇಳೀತಾವಕರ ಪೊರೆದಂತೆ | ಭಾವುಕರ ಪೊರೆ ಬೇಡ್ವೆಗೋವುಗಳ ಪಾಲ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
--------------
ಪ್ರಾಣೇಶದಾಸರು