ಒಟ್ಟು 595 ಕಡೆಗಳಲ್ಲಿ , 90 ದಾಸರು , 453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಪ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ 1 ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ 2 ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ | ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು | ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ 3 ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು | ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು | ಉರ್ವಿಯೊಳು ಬಲು ಬಲವಂತನೆನಸೀ | ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು4 ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ | ಕರವ ಬಿಡದೆ | ಪತಿ ವಿಜಯವಿಠ್ಠಲರೇಯಾ | ಎನ್ನ ಭಾವವು ನಿನ್ನದಲ್ಲವೇನಯ್ಯಾ5
--------------
ವಿಜಯದಾಸ
ಆತ್ಮನಿವೇದನೆ ಇಂತು ಮರುಳಾದೆನು ಬಲು ಭ್ರಾಂತಿಗೊಳಗಾದೆನು ಲಕ್ಷ್ಮೀಕಾಂತಾ ಸರ್ವಾಂತರ್ಯಾಮಿ ಪ. ಕಾಮಪಾಶಕೆ ಶಿಲ್ಕಿದೆನು ಬಾಯಾರಿ ಬಳಲಿದೆನು ಹೀನ ಮತವೆನ್ನದೆ ಆಶಕೆ ಗುರಿಯಾದೆ 1 ನಾನು ನನ್ನದು ಎಂದೆ ಧರ್ಮಾಂಧಳಾದೆ ಮೆರೆದೆ ಗುರುಹಿರಿಯರಿಗೆ ಎರಗದೆ ಹರಿನಿನ್ನ ಮರೆದೆ 2 ಹಿಂದೇ ಸುಜನ್ಮಗಳು ಬಂದು ಪೋದವು ಮುಂದಿನ ಗತಿಯು ಎನಗೆ ತಿಳಿಯದು ಬಂಧನದೊಳು ಸಿಗಿಬಿದ್ದೆನು ಬಂದೆನ್ನ ಕಾಯೊ ಕಾಳಿಮರ್ಧನಕೃಷ್ಣಾ 3
--------------
ಕಳಸದ ಸುಂದರಮ್ಮ
ಆತ್ಮನಿವೇದನೆ ಇಂದೀವರಾಕ್ಷ ಬಾ ಮುಕುಂದ ಮರಹರ ಗೋವಿಂದಾ ಸುಂದರಾಂಗನೆ ಬಂದು ರಕ್ಷಿಸೋ ಚೆನ್ನಿಗರ ಚಂದಾ ಪ ತಂದೆ ತಾಯಿ ಬಂಧುಬಳಗ ಇಂದೆನಗೆ ನೀನೇ ಚಂದದೆನ್ಮನ ಮಂದಿರದಿ ನೀ ನಿಂದಿರು ದಯಾಮಯನೆ 1 ನಿನ್ನ ಪಾದವನ್ನು ಪಿಡಿದನೆನ್ನ ರಕ್ಷಿಸೋ ಸನ್ನುತ ವಿಚ್ಛಿನ್ನ ಭಕುತರನ್ನು ಸೇರಿಸಿಕೋ 2 ಬೆರಸ ಬ್ಯಾಡೆನ್ನರಸ ನಿನ್ನ ಸ್ಮರಿಸದಿರ್ಪರಾ ಶಿರಿವರ ನರಸಿಂಹವಿಠ್ಠಲ ಪೊರೆಯೋ ಭೌಮಾ 3
--------------
ನರಸಿಂಹವಿಠಲರು
ಆತ್ಮನಿವೇದನೆ ಏನಿದು ಎನ್ನಯ ಬಾಳು-ನರಹರೀ ಪ ಶ್ರೀನಿಧಿಯನು ಮನಮನೆಯೊಳು ನಿಲಿಸದಾ ಅ.ಪ. ಕಳೆಯಿತು ಆಯು-ಕಳೆಯಿತು ಕಾಯೊ ಬೆಳೆಯಿತು ಆಶೆ-ಉಳಿಯಿತು ಸಾಧನ 1 ಹೊಟ್ಟೆಗೆ ಹಾಕೇ-ಪುಟ್ಟಿದು ದಾಯ್ತೇ ಪೊಟ್ಟೆಯ ತುಂಬವೆ-ದುಷ್ಟ ಮೃಗಂಗಳು2 ಇಲ್ಲವು ತಾ ಹರಿ-ಎಲ್ಲವೂ ನೀನೇನೆ ಇಲ್ಲವು ಯಾಕೇ-ಎಲ್ಲ ಕಾಲದಿ ಸುಖ 3 ಪುಟ್ಟವುದೇ ಜಗ-ಪುಟ್ಟಿಸ ನಿಲ್ಲದೇ ಭ್ರಷ್ಠರ ಮತವಿದು-ಅಷ್ಟಕರ್ತನ ಬಿಡೆ 4 ಮಾನವಾ ತನುವಾ-ಬಾಹೋದೆ ದುರ್ಲಭ ಮಾನದ ಶ್ರೀ ಕೃಷ್ಣ ವಿಠಲನ ತೋರದಿಹ5
--------------
ಕೃಷ್ಣವಿಠಲದಾಸರು
ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ
ಆತ್ಮನಿವೇದನೆ ಕರುಣದಿಂದಲಿ ಪೊರೆಯೊ ನೀ ಎನ್ನ| ನರಹರಿಯೆ ಮುನ್ನ | ಚರಣಕಮಲವ ಸ್ಮರಿಸುವೆನು ನಿನ್ನ ಪ ಪೊರೆಯಬಾರದೆ ಶರಣು ಶ್ರೀಹರಿಅ.ಪ ಗೋಪಾಲಕೃಷ್ಣ| ಗೋಪಸ್ತ್ರೀಯರ ಹರುಷಗೊಳಿಸಿದೆ|| ವೃಂದದಿ ನಲಿದು ಮೆರೆದೆ| ದ್ರುಪದ ಸುತೆಯಳಿಗಿತ್ತ ಶ್ರೀಹರಿ 1 ಗೋವೃಂದ ಸಲಹಿ| ಗೋವಿಂದಾಭಿಧಾನವನು ಪಡೆದೆ|| ರವನು ಹೀರಿದ ಕರುಣಿ ಶ್ರೀಹರಿ 2 ಇಂದೀವರಾಭನೆ| ಬಂಧುಬಾಂಧವರಾರು ಹಿತರಲ್ಲ|| ಇಂದಿರೇಶನೆ ನಿನ್ನ ಚರಣ| ದ್ವಂದ್ವದೊಳು ಮನವಿತ್ತೆನಾಪ | ದ್ಬಂಧುವಾದರೆ ಪ್ರೇಮವಿರಿಸುತ || ಬಂಧಗಳ ಪರಿಹರಿಸುತೆನ್ನನು 3 ಪತಿತಪಾವನ ಈಶ ಸರ್ವೇಶ| ಮಹಶೇಷಶಯನ | ಹಿತವಿಧಾಯಕ ಸರ್ವಭೂತೇಶ|| ದೊರಕುವ ತೆರದೊಳನುದಿನ 4 ಶ್ರೀಕಾಂತ ಸಲಹೈ| ಲೋಕಭರಿತನೆ ಸುಖವಿಧಾಯಕನೆ|| ಲೋಕವಂದಿತ ಲೋಕನಾಥಾ | ನಾಕಿವಂದಿತ ಭಕ್ತವತ್ಸಲ 5 ನಿನ್ನ ಪಾದವ ನಂಬಿ ನಾನಿಹೆನು| ದೇವಾದಿದೇವಾ| ನಿನ್ನ ನಾಮಾವಲಿಯ ಸ್ಮರಿಸುವೆನು|| ಮುನ್ನ ಮಾಡಿದ ಪಾಪವೆಲ್ಲವ| ನಿನ್ನ ನಾಮ ಸ್ಮರಣದಲಿ ಸಂ| ಪೂರ್ಣ ಪರಿಹರಗೊಳಿಸಿ ನಿನ್ನಯ| ಸನ್ನುತಾಂಘ್ರಿಯ ಸೇವೆಗಿರಿಸುತ 6
--------------
ವೆಂಕಟ್‍ರಾವ್
ಆತ್ಮನಿವೇದನೆ ನೆಂತು ಪೂಜಿಸಿದೆನೈ ನೀರಜಾಕ್ಷ ಪ ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು ಮಂಗಳದ ನಾಮ ಮುದ್ರೆಗಳ ಧರಿಸೀ ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1 ನಿರ್ಮಲೋದಕದಿಂದ ಅಭಿಷೇಚನವ ಗೈದು ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2 ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ ಅರ್ಭಕನು ನಾ ಕನಕರತ್ನಾಭರಣಗಳನು ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3 ಧೂಪದೀಪಗಳಿಂದ ವಾದ್ಯ ವೈಭವದಿಂದ ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4 ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ ಭವರೋಗಪೀಡಿತನು ನಾ ನಿನ್ನ ಹವಣರಿತು ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5 ಸರ್ವಶಕ್ತನು ನೀನು ಸರ್ವಜ್ಞಪತಿ ನೀನು ಸರ್ವದಾ ತೃಪ್ತನೋ ನಿಗಮವೇದ್ಯಾ ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ ಗರ್ವಿಶಠನಜ್ಞತಮನೆನಗೆ ವಶವೇ 6 ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
--------------
ರಘುರಾಮವಿಠಲದಾಸರು
ಆತ್ಮನಿವೇದನೆ ಮನವೇ ನಿನ್ನಯ ನಿಜಮೂಲ ನೀನೋಡು ಸಮರಸವನೆಗೂಡು || ಚಾಲ || ವಿಷಯವಾಸನೆಗಳ ನಿಶಿದು ಹೋಗಲಿ ಕುಳ ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ ನಿಜದೊಳತಿ ಛಂದದಿ ನಿಲ್ಲೈ 1 ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ ಮೂಧ್ರ್ನಿಯಲಿ ಲೋಲ್ಯಾಡಿ ದೃಢತರವದಗಿ ನಿರಂತರ 2 ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು ಅನುರಕ್ತನಾಗಿ ನಿಜ 3 ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4
--------------
ಶಾಂತಿಬಾಯಿ
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆತ್ಮನಿವೇದನೆ ಮತ್ತು ಲೋಕನೀತಿ ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ ಪ ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ ಖೂನವಿಲ್ಲದೆ ಜ್ಞಾನ ಹೀನನಾಗಿ ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು ಶ್ವಾನನಂದದಿ ದಿನವ ನಾ ನೂಕಿದವನಯ್ಯ 1 ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು 2 ನೇಮಪೂರ್ವಕ ಒಂದು ಯಾಮವಾದರು ಮನದಿ ಶಾಮಸುಂದರ ಧ್ಯಾನ ಮಾಡದೆ ಕಾಮಾರಿ ಷಡ್ವೈರಿ ಸ್ತೋಮಕ್ಕೆ ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು3
--------------
ಶಾಮಸುಂದರ ವಿಠಲ
ಆತ್ಮನಿವೇದನೆಯ ಕೀರ್ತನೆಗಳು ಆತನೆಯನ್ನ ತಾತನು ಮೆರೆದಾತನೆಯನ್ನ ತಾತನು ಪ ತಂದಿನ ಅಗಲಿದ ಕಂದ ಕಾನನದೊಳು ಬಂದು ಅಂಗುಟ ಊರಿನಿಂದುತ್ವರಾ ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1 ದುರುಳತನಪರಿಹರಿಸ ಬೇಕೆನೆ ಮಾನವ ಪರಮಕರುಣಿ ಮುರಹರನೆ ತಡಿಯದಲೆ ಪೊರೆಯನೆ ತರುಣಿಯ ಮೊರೆ ಕೇಳಿದಂಥಾತನೆ 2 ಶಿರಿಗೋವಿಂದ ವಿಠಲ ವೇದ ವಂದಿತ ಪತಿ ಹರಿಪರನೆನ್ನುತ ಪರಮ ಭಕುತಿಯಿಂದ ಸ್ಮರಿಸುವವರ ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3
--------------
ಅಸ್ಕಿಹಾಳ ಗೋವಿಂದ
ಆತ್ಮನಿವೇದನೆಯ ಕೀರ್ತನೆಗಳು ಕರವ ಸುಖಪೊಂದಲು ಪ ಬಹು ಜನ್ಮದಿ ಅ.ಪ ಹರಿ ತೋಷಕ ಬಿದಿರಿನಕೊಳಲು 1 ಪ್ರಸಾದವ ಕಮಲೋಧ್ಬವ ವಿಭವ ವಂಶೋದ್ಬವ 2 ಸುಧೆ ಸವಿಯಲು ನಿಂದಿರುವಳು 3
--------------
ಕಾರ್ಪರ ನರಹರಿದಾಸರು
ಆತ್ಮನಿವೇದನೆಯ ಹಾಡುಗಳು ಅಗಣಿತ ಗುಣ ಸಮುದ್ರ ನೀನು ಪ ಕಮಲಭವಗೆ ಮಿಕ್ಕವರ ಪಾಡೇನು ಅ.ಪ ಕಮಲ ನಿವಾಸನೆ 1 ಎನ್ನನಾದಿಕರ್ಮ | ಕಳೆಸುವುದು ಮುನ್ನು ನಿನಗೆ ಧರ್ಮ ಭವ ವಾರಿಧಿಯೊಳು ಭಿನ್ನೈಸುವುದೇತಕೆ ನೀನರಿಯಾ 2 ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ ದಾಸನು ನಾನೈಯ್ಯ ಓ ಸೀತಾಪತಿ ಗುರುರಾಮ ವಿಠಲ ಶ್ವಾಸ ಬಿಡುವದಕೆ ಸ್ವತಂತ್ರವೆನಗಿಲ್ಲ 3
--------------
ಗುರುರಾಮವಿಠಲ
ಆತ್ಮನಿವೇದನೆಯ ಹಾಡುಗಳು ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ. ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ 1 ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ 2 ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ 3
--------------
ಮೋಹನದಾಸರು
ಆತ್ಮಲಿಂಗ ಭವನದಿಆತ್ಮಲಿಂಗ ಭವನದಲಿ ವಿಚಿತ್ರವನೆ ಕಂಡುಆತ್ಮನೆಂತಿಹನೆಂದು ಅರಸನಾ ಬಲಗೊಂಡುಆತ್ಮನಾನೆರಡೆಂಬ ಅವಿ ವಾಚ್ಯನಳಿಗೊಂಡುಆತ್ಮನಾಗಿರುತಿಪ್ಪನು ಪ ಪರಿ ಪರಿಯ ಸರಗಳನೆ ಕಂಡೆಮಾತಿಗುತ್ತರಿಸದಿಹ ಮಹಾ ಮಹಿಮೆಯ ಕಂಡೆ 1 ಈಕ್ಷಿಸಿಯೆ ವಸ್ತುವನ ಏಳು ಬಾಗಿಲು ಕಂಡೆದಕ್ಷಿಣೋತ್ತರ ಎಂಬುದರ ಬಾಗಿಲನು ಕಂಡೆಅಕ್ಷಯಾಗಿಹ ಲಕ್ಷವಹ ದಿಡ್ಡಿಯನೆ ಕಂಡೆರಕ್ಷಕನಾಗಿಹನ ರಾಗದಲಿ ಕಂಡೆ 2 ಪಂಚಇಂದ್ರಿಯಗಳೆಂಬ ಪರಿಚಾರಕರನು ಕಂಡೆಕಿಂಚ ಕೆಲಸಕ್ಕಿರುವ ಕರ್ಮೇಂದ್ರಿಯರ ಕಂಡೆಸಂಚರಿಪ ಮೂರೆರಡು ಸತ್ಪ್ರಾಣಿಗಳ ಕಂಡೆವಚನಾಂತಃಕರಣ ವರ್ತಕರ ಕಂಡೆ 3 ಸತ್ಯಗುರು ಪೂರಿತಹ ಸಾರಣೆಯ ಕಂಡೆತಥ್ಯವೆನಿಸುವ ಶಾಂತ ತೋರಣವ ಕಂಡೆಅತ್ಯಧಿಕ ಬುದ್ಧಿಯ ರಂಗವಲ್ಲಿಯ ಕಂಡೆಎತ್ತ ನೋಡಿದಡತ್ತ ಎಸೆದಿಹುದ ಕಂಡೆ 4 ಆರು ಅಂತಸ್ಥನು ಕಂಡೆ ಅಲ್ಲಿರುವವರ ಕಂಡೆಬೇರೆ ಮೂರಿಹ ಮಧ್ಯ ರಂಗಗಳ ಕಂಡೆಘೋರ ಘೋಷಣ ಪ್ರಣವ ಘಂಟನಾದವ ಕಂಡೆಸಾರವಮೃತ ಕಲಶ ಪಾನಕವ ಕಂಡೆ 5 ಜ್ಯೋತಿ ಎಂದೆನ್ನುತಿಹ ಜ್ಯೋತಿರ್ಮಯನ ಕಂಡೆಸಾತಿಶಯ ಗರ್ಭಗುಡಿ ಶೀಘ್ರದಲಿ ಕಂಡೆಆತುರದಲೊಳ ಪೊಕ್ಕು ಆತ್ಮಲಿಂಗವ ಕಂಡೆಪೂತು ರಕ್ಷಿಸು ಎಂದು ಪೂಜೆ ಕೈಗೊಂಡೆ 6 ನಿತ್ಯ ನಿಶ್ಚಲ ನಿಷ್ಕಲಂಕ ನಿಜನೆ ಎಂದುಪ್ರತ್ಯಗಾತ್ಮ ಪರಬ್ರಹ್ಮನೆ ಸ್ಥಿರವೆಂದುಸತ್ಯ ಸಂವಿದ್ರೂಪ ಸಕಲಕಧಿಪತಿ ಎಂದುಅತ್ಯಧಿಕ ಚಿದಾನಂದ ಆತ್ಮ ತಾನೆಂದು7
--------------
ಚಿದಾನಂದ ಅವಧೂತರು