ಒಟ್ಟು 115 ಕಡೆಗಳಲ್ಲಿ , 37 ದಾಸರು , 97 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆ ಶ್ರೀನಾರಾಯಣನನು ಸ್ಮರಿಸದೆ ಮಾಯಾಪಾಶಕೆ ಸಿಲುಕುವರೇ ಪ. ವನಜನಾಭನ ಪದ ವನರುಹಯುಗ್ಮವ ಅನುದಿನ ನೆನೆಯದೆ ಒಣಗುವರೇ ವನಿತಾಲಂಪಟನಾಗುತ ಸಂತತ ಮನಸಿಜಯಂತ್ರಕೆ ಮನಮರಗುವರೇ ಅ.ಪ. ತುಂಡು ಸೂಳೆಯರ ದುಂಡುಕುಚವ ಪಿಡಿದು ಗಂಡಸುತನವನು ಕೆಡಿಸುವರೆ ದಂಡಧರನ ಬಾಧೆ ಹೆಂಡತಿಯನು ಪಡ ಕೊಂಡು ವೇದನೆಯನು ತಾಳುವರೆ ಕಂಡು ಕಂಡು ನೀ ಗುಂಡಿಗೆ ಬಾಳ್ವರೆ ಹೆಂಡಿರ ಸುಖರಸ ಉಂಡರು ಸಾಲದೆ 1 ಬಂದ ಸುಖಕೆ ನೀ ಮುಂದುವರೆಯುತಲಿ ಮಂದ ಅಸಮ ದುಃಖ ತಾಳುವರೇ ಬಂದುದೆನ್ನ ಕಣ್ಣ ಮುಂದೆಯನುಭವಿಪೆ ಎಂದಿಗೆನ್ನಾಜ್ಞೆಯು ಬಂದಪುದೋ ನಿಜ 2 ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ ಪಟ್ಟ ಭಾಗ್ಯವನೆಲ್ಲ ತೋರೊ ನೀನು ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ- ನಷ್ಟು ಸುಖವನ್ನು ಕಾಣೆನಿನ್ನು ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3 ವಿಷಯ ಪಳಂಚಿತನಾಗುವ ಸಂತತ ಪಂಚಡಕೀರನು ಆಗುವರೇ ಕರ್ಮ ಸಾಲದೆಂದೆನುತಲಿ ಸಂಚಿತ ಪಾಪವ ಸಂಗ್ರಹಿಸುವರೇ ಚಂಚಲಾಕ್ಷಿಯರ ಚಪಲದ ಮಾತನು ವಂಚನೆ ಎಂಬುದು ತಿಳಿಯದೆ ಇರುವರೆ 4 ಸಾರಿಸಾರಿ ಕೈ ಮುಗಿದು ಬೇಡುವೆನು ವಿ- ಕಾರ ದುರ್ಬುದ್ಧಿಯ ಬಿಡು ಎಂದು ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ ನಾರಾಯಣ ನೀನೇ ಗತಿಯೆಂದು ಪಾರಮಾರ್ಥಿಕ ವಿಚಾರವ ಮಾಡುತ ಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ 1 ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ 2 ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ3 ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ4 ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ 5
--------------
ಶ್ರೀಪಾದರಾಜರು
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿಯು ದಾಸರಿಗೆ ಒಲಿದ ಸ್ತೋತ್ರ ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು | ನಾರಿಯಂತೆ ಸವಿದು ಕೊಡಲರಿಯೆ ಪಣ್ಣು || ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ 1 ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು | ಮಮ ಅಹಂಕಾರ ದುಷ್ಟದಿ ರತಿ ಸಾಕು || ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ | ಕಾಯ ಕ್ರಿಯೆಗಳು ದೇವ ದೇವ 2 ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು | ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ || ನಿನ್ನಧೀನವು ನಾನುರಕ್ಷಕನು ನೀ ಶ್ರೀಶ || ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ. ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1 ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2 ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3 ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4 ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5 ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6 ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
--------------
ಗೋಪಾಲದಾಸರು
ಸನ್ನುತ ವಿಠಲಾ | ಹಿತದಿ ಪೊರೆ ಇವಳಾ ಪ ಮತಿವಂತಳೆಂದೆನಿಸಿ | ಅತಿಶಯದಿ ಹರಿಯೇ ಅ.ಪ. ಹರಿ ಗುರು ಸದ್ಭಕ್ತಿ | ನಿರುತ ಹಿರಿಯರ ಸೇವೆಗೆರಗಲೀಕೆಯ ಮನಸು | ಪರಮ ಪೂರುಷನೇ |ಪರಮಾತ್ಮ ಪರತತ್ವ | ದರಿವು ಆಗುತ ಭವದಪರಿಹರಕೆ ಮಾರ್ಗವನೆ | ತೋರೋ ಗುಣಪೂರ್ಣ 1 ಗಜ ಪಂಚಾಸ್ಯ | ಪರಮ ದಯ ಪೂರ್ಣಹರಿನಾಮ ನಿರುತದಲಿ | ಸ್ಮರಿಪ ಸೌಭಾಗ್ಯವನುಕರುಣಿಸುತ ಪೊರೆ ಇವಳಾ | ಮರುತಾಂತರಾತ್ಮ 2 ಪರಿ ಪರಿ ಪೋಷಿಸಿವಳಾ 3
--------------
ಗುರುಗೋವಿಂದವಿಠಲರು
ಸಮೀರನ ಮಹಿಮೆ ಪೇಳುವೆವಾಸುದೇವ ವಿಧೀರ ಮುಖಸುರರಾಶಿತಸ್ತ್ರೀ ಮುನಿಯತೀಶ ಸು-ದಾಸರಭಿ ನಮಿಪೆ ಪ ವಾರಿಧಿಯನು ದಾಟುಲೋಸುಗಶ್ರೀ ರಮೇಶನ ನಮಿಸಿ ಗಿರಿಯನುಚಾರು ಚರಣದಿ ಮೆಚ್ಚಿ ಮೇಲಕೆ ಹಾರಿದನು ಹನುಮಾ 1 ಹರಿಯ ಬಲವನು ಸರಿಸಿ ಪೋದುವುತರುಗಳಬ್ಧಿಯು ಯಾದಸಂಗಳುಶರಧಿ ತಳಗತ ಕಪಿಯಗೋಸುಗಗಿರಿಯು ಎದ್ದಿಹನು 2 ಧರಣಿಧರ ಪಕ ನಾಶ ಕಾಲದಿಮರುತ ರಕ್ಷಿತ ಪಕ್ಷ ಹೈಮನುಶರಧಿ ಭೇದಿಸಿ ಹನುಮ ವಿಹೃತಿಗೆತ್ವರದಿ ಬಂದಿಹನು 3 ಪರಮ ಪೌರುಷ ಬ ಲನು ಕಪಿವರಚರಿಸದಲೆ ವಿಶ್ರಮವನದರೊಳುಹರುಷದಿಂದಪ್ಯವನ ಕಂಡನುಉರಗ ಮಾತೆಯನು 4 ಸುರಸೆಯೆಂಬುವ ನಾಗಮಾತೆಗೆವರವ ನೀಡುತ ಕಪಿಯ ಬಲವನುಅರಿಯಲೋಸುಗ ಕಳುಹಿಸೀದರುಸುರರು ಶರಧಿಯಲಿ 5 ಯಾವ ವಸ್ತುವ ತಿನ್ನೋ ಇಚ್ಛೆಯು ೀವಿ ನಿನಗಾಗುವದೊ ಅದು ತವಬಾಯಿಗನ್ನಾಗಿರಲಿ ಎಂದರುದೇವತೋತ್ತುಮರು 6 ಸುರರ ವರವನು ಕಾಯೊಗೋಸುಗಸುರಸೆ ಮುಖದೊಳು ಹೊಕ್ಕು ಹೊರಡುತಪರಮಮಣು ರೂಪದಲಿ ದಿವಿಜರಹರುಷ ಬಡಿಸಿದನು 7 ಅಸುವರಾತ್ಮಜನುರು ಪರಾಕ್ರಮಹೃಷಿತರಾಗುತ ನೋಡಿ ದಿವಿಜರುಕುಸುಮವೃಷ್ಟಿಯ ಮಾಡುತವನಲಿಯಶಸು ಪಾಡಿದರು 8 ಛಾಯಾ ಪ್ರಾಣಿಗಳನ್ನು ಹಿಡಿಯುವಮಾಯಾ ಸಿಂಹಕೆ ನಾಮ ಕಸುರಿಯವಾಯುಸುತ ನೋಡಿದನು ಎದುರೆ ವಿಹಾಯ ಮಾರ್ಗದಲಿ 9 ವಿಧಿಯು ಲಂಕೆಯ ಕಾಯಲೋಸುಗಸುತಿಗ್ವರಗಳನಿತ್ತು ಕಾದಿಹಾಮದದಿ ಅಸುರಿಯು ತನ್ನ ಛಾಯವವದಗಿ ಪಿಡಿದಿಹಳು 10 ಆಗ ಆಕೆಯ ಪೊಕ್ಕು ಪೊಟ್ಟೆಯಯೋಗದಿಂದಲಿ ಪಾವಮಾನಿಯುಬೇಗ ಬಂದನು ಹೊರಗೆ ತತ್ತನುಭಾಗ ಮಾಡುತಲೆ 11 ಆತ್ಮಬಲವಮಿತೆಂದು ತೋರಿವಿಧಾತೃ ವರವುಳ್ಳವಳ ಕೊಲ್ಲುತವಾತನಂತೆ ತ್ರಿಕೂಟ ಪರ್ವತಕೀತ ಹಾರಿದನು 12 ಬೆಕ್ಕಿನಂದದಿ ಹನುಮ ತನ್ನಯಚಿಕ್ಕ ರೂಪವ ಮಾಡಿ ಲಂಕೆಯಪೊಕ್ಕು ನಿಶಿಯಲಿ ಮಧ್ಯಮಾರ್ಗದಿರಕ್ಕಸಿಯ ಕಂಡಾ 13 ಬಟ್ಟಿಯಲಿ ಬಂದಡ್ಡಗಟ್ಟುವದುಷ್ಟ ರಾಕ್ಷಸೀಯನ್ನು ಗೆಲ್ಲುತಮುಷ್ಟಿಯಿಂದಲಿ ಹೊಡೆದು ಲಂಕಾಪಟ್ಟಣವ ಪೊಕ್ಕಾ 14 ಪುರದ ಹೊರಗೊಳಗ್ಹೊಕ್ಕು ರಾಮನತರುಳೆ ಕಾಣದೆ ಹನುಮ ಶಿಂಶುಪತರುನ ಮೂಲದಿ ಕಂಡ ಸೀತೆಯಉರುತರಾಕೃತಿಯಾ 15 ನರಜನಂಗಳ ಮೋಹ ಮಾಡುವಪರಮ ಪುರುಷನ ಚೇಷ್ಟೆಗಳನನುಸರಿಸಿ ನಡೆಯುವ ದೇವಿ ಚರಿಯನುಸರಿಸಿ ಚೇಷ್ಟಿಸಿದಾ 16 ರಾಮನಿಂದಲಿ ಅಂಗುಲಿಯನುಪ್ರೇಮದಿಂದಲಿ ಕೇಸರಿಯ ಸುತಾಭೂಮಿ ಜಾತೆಗೆ ಕೊಟ್ಟು ಸುಖಿಸಿದಾನಾಮ ಹದ್ದನದಿ 17 ರುಚಿ ನೀಡಿದವು ರಾವಣನ್ಹರಣ ಕಾಲದಲಿ 18 ಧರಣಿದೇವಿಯ ಸುತೆಯ ತನ್ನಯಪರಮ ಚೂಡಾಮಣಿಯನಿತ್ತಳುಗುರುತು ತೋರಿಸು ರಾಮದೇವಗೆಮರುತಾ ಸುತನೆಂದು 19 ಸೀತೆ ಹನುಮರದೀ ವಿಡಂಬನಯಾತು ಧಾನರಿಗಲ್ಲಾ ನಾಕಗಭೂತ ವಿಡಂಬನ ಧೈತ್ಯವಂಚನಹೇತು ಆಗುವದು 20 ಇಂಥ ಕಾರ್ಯವ ಮಾಡಿ ತನ್ನಯಾನಂಥ ಪೌರುಷ ಪ್ರಕಟ ಮಾಡುವದಿಂತು ಮನವನು ಮಾಡಿದನು ಮತಿವಂತ ವಾನರನು 21 ಚಾರು ಶಿಂಶುಪ ಬಿಟ್ಟು ರಾಕ್ಷಸವಾರ ವಳಿಸುವ ಮನದಿ ಹನುಮನುಭೂರಿವನವನು ಮುರಿದು ಲಂಕೆಯತೋರಣೇರಿದನು 22 ಭೃತ್ಯ ಜನರಿಗೆಕಟ್ಟಿ ಹಾಕಿರಿ ಕಪಿಯನೆಂದನುರುಷ್ಟನಾಗುತಲೆ 23 ಹರನ ವರದಲಿ ಮರಣ ವರ್ಜಿತಸರವ ಭೃತ್ಯರು ರಾಕ್ಷಸೇಶನಮರುತ ಸೂನುನ ಮೇಲೆ ಬಂದರುಪರಮ ವೇಗದಲಿ 24 ಹತ್ತು ಒಂದು ಕೋಟಿ ಯೂಥವತತ್ಸಮಾನ ಪುರಃ ಸರಾನ್ವಿತಎತ್ತಿ ಆಯುಧ ಸೈನ್ಯ ಹನುಮನಸುತ್ತಿಕೊಂಡಿಹುದು 25 ಹಿಡಿದು ಕರದಲಿ ಆಯುಧಂಗಳಹೊಡೆವ ಸೈನ್ಯವ ನೋಡಿ ಹನುಮನುಹೊಡೆದು ಕರತಳದಿಂದಲೆಲ್ಲರಪುಡಿಯ ಮಾಡಿದನು 26 ನೀಲಕಂಠನ ವರಗಿರಿಪ್ರಭಏಳುಮಂದಿಯ ಮಂದಿ ಪುತ್ರರಕಾಲಿನಿಂದಲಿ ಒದ್ದು ಕೆಡಹಿದನಾಳು ಮಾಧವನಾ 27 ಧುರದಿ ಮುಂಭಾಗದಲಿ ಪೋಗುವಗರುವ ಮಾಡುವ ರಾಕ್ಷಸಂಗಳಮುರಿದು ಸೈನ್ಯದ ತೃತೀಯ ಭಾಗವಹರಿಯು ಕೊಂದಿಹನು 28 ಪೋರ ಬಲವನು ಕೇಳಿ ಹನುಮನಚಾರ ಮುಖದಲಿ ಸ್ವಾತ್ಮ ಸದೃಶರುಮಾರ ಕಾಕ್ಷಾಭಿಧನ ಕಳುಹಿದ ವೀರ ರಾವಣನು 29 ಉತ್ತುಮಾಸ್ತ್ರಗಳಿಂದ ಮಂತ್ರಿತವೆತ್ತಿ ಬಾಣಗಳ್ಹೊಡೆದು ಹನುಮನಕೆತ್ತಿ ಹಾಕಲು ಅಕ್ಷ ಸಾಲದೆಶಕ್ತಿ ನಿಂತಿಹನು 30 ಮಂಡ ಮಧ್ಯೆಯ ತನಯ ಅಕ್ಷನುಪುಂಡ ರಾವಣ ಸಮನು ಸೈನ್ಯದಹಿಂಡಿನೊಳು ತೃತೀಯಾಂಶ ಯಂದುದ್ದಂಡ ಚಿಂತಿಸಿದಾ 31 ಹತ್ತು ತಲೆಯವನನ್ನೆ ಕೊಲ್ಲುವದುತ್ತಮಾತ್ಮವು ಆದರೀತನುತುತ್ತು ರಾಮಗೆ ಕಾರಣಿಂಥಾಕೃತ್ಯ ಥರವಲ್ಲಾ 32 ಇಂದ್ರಜಿತನನು ನಾನು ಈಗಲೆಕೊಂದು ಹಾಕಿದರಿವನ ಕೃತಿಗಳಛಂದ ನೋಡುವುದಿಲ್ಲಾ ಕಪಿಗಳವೃಂದ ಯುದ್ಧದಲಿ 33 ತತ್ಸಮಾಗಿಹ ಮೂರನೆಯವನ್ಹತ್ಯೆ ಮಾಡುವೆನೆಂದು ಹನುಮನುಚಿತ್ತದಲಿ ಚಿಂತಿಸುತ ತತ್ವದ ವೆತ್ತಿ ಹಾರಿದನು 34 ತಿರುಹಿ ಚಕ್ರದ ತೆರನೆ ರಾಕ್ಷಸರರಸೀನಾತ್ಮಜನನ್ನು ಕ್ಷಣದಲಿಧರಿಯ ಮೇಲಪ್ಪಳಿಸಿ ಒಗೆದನುಮರುತನಾತ್ಮಜನು 35 ಹನುಮನಿಂದಲಿ ತನ್ನ ಕುವರನುಹನನ ಪೊಂದಲು ನೋಡಿ ರಾವಣಮನದಿ ಶೋಕಿಸುತಾತನಣ್ಣನರಣಕೆ ಕಳುಹಿದನು36 ಇಂದ್ರಜಿತು ಪರಮಾಸ್ತ್ರಯುತ ಶರವೃಂದದಲಿ ಹೊಡೆದು ಹನುಮನಹಿಂದಕಟ್ಟಲು ಶಕ್ತಿ ಸಾಲದೆನಿಂದು ಚಿಂತಿಸಿದಾ 37 ಸರವ ದುಃಸಹವಾದ ಬ್ರಹ್ಮನಪರಮಮಸ್ತ್ರವ ಬಿಡಲು ರಾವಣಿಹರಿಯು ವ್ಯಾಕುಲನಾಗದಲೆ ಈಪರಿಯ ಚಿಂತಿಸಿದಾ 38 ವಾಣಿನಾಥನ ಎಷ್ಟೊ ವರಗಳನಾನು ಮೀರಿದೆ ದುಷ್ಟ ಜನದಲಿಮಾನಿನೀಯನು ಕಾರಣಾತನಮಾನ ಮಾಡುವೆನು 39 ದುಷ್ಟ ರಾಕ್ಷಸರೆಲ್ಲ ಎನ್ನನುಕಟ್ಟಿ ಮಾಡುವದೇನು ಪುರಿವಳಗಿಷ್ಟು ಪೋಗಲು ರಾಕ್ಷಸೇಶನಭೆಟ್ಟಿಯಾಗುವದು 40 ಹೀಗೆ ಚಿಂತಿಸಿ ಹನುಮನಸ್ತ್ರಕೆಬಾಗಿ ನಿಲ್ಲಲು ಅನ್ಯ ಪಾಶಗಳಾಗೆ ಬಿಗಿದರು ಬ್ರಹ್ಮನಸ್ತ್ರವುಸಾಗಿತಾಕ್ಷಣದಿ 41 ಕಟ್ಟಿ ಕಪಿಯನು ರಾಕ್ಷಸೇಶನ ಭೆಟ್ಟಿಗೊಯ್ಯಲು ಆತನೀತನದೃಷ್ಟಿಯಿಂದಲೆ ನೋಡಿ ಪ್ರಶವನೆಷ್ಟೊ ಮಾಡಿದನು 42 ಕಪಿಯೆ ನೀನು ಕುತೋಸಿ ಕಸ್ಯವಾಕೃತಿಯ ಮಾಡಿದಿ ಯಾತಕೀಪರಿಕಿತವ ಕೇಳಲು ರಾಮನೊಂದಿಸಿ ಚತುರ ನುಡಿದಿಹನು 43 ಹೀನ ರಾವಣ ತಿಳಿಯೇ ಎನ್ನನು ಮಾನವೇಶ್ವರ ರಾಮದೂತನುಹಾನಿಮಾಡಲು ನಿನ್ನ ಕುಲವನುನಾನು ಬಂದಿಹೆನು 44 ಜಾನಕೀಯನು ರಾಮದೇವಗೆಮಾನದಿಂದಲಿ ಕೊಡದೆ ಹೋದರೆಹಾನಿ ಪೊಂದುವಿ ಕೇಳೊ ನೀ ನಿಜಮಾನವರ ನೀ ಕೂಡಿ 45 ಶಕ್ತರಾಗರು ಸರ್ವ ದಿವಿಜರುಮತ್ರ್ಯನಾತನ ಬಾಣ ಧರಿಸಲುಎತ್ತೋ ನಿನಗಿವಗಿನ್ನು ಧರಿಸಲುಹತ್ತು ತಲೆಯವನೆ 46 ಸಿಟ್ಟು ಬಂದರೆ ಆತನೆದುರಿಲಿಘಟ್ಟಿನಿಲ್ಲುವನಾವ ರಾಕ್ಷಸಇಷ್ಟು ಸುರದಾನವರೊಳಾತನದೃಷ್ಟಿಸಲು ಕಾಣೆ 47 ಇಂಥಾ ಮಾತನು ಕೇಳುತಾತನಅಂತ ಮಾಡಿರಿಯನ್ನೆ ವಿಭೀಷಣಶಾಂತ ಮಾಡಲು ಪುಚ್ಛ ದಹಿಸಿರಿಯಂತ ನುಡಿದಿಹನು 48 ಅರಿವೆಯಿಂದಲಿ ಸುತ್ತಿ ಬಾಲಕೆಉರಿಯನ್ಹಚ್ಚಲು ಯಾತುಧಾನರುಮರುತ ಮಿತ್ರನು ಸುಡದೆ ಹನುಮಗೆಹರುಷ ನೀಡಿದನು 49 ಯಾತುಧಾನರು ಮಾಡಿದಂಥಪಘಾತವೆಲ್ಲವ ಸಹನ ಮಾಡಿದವಾತಪೋತನು ಲಂಕೆ ದಹಿಸುವಕೌತುಕಾತ್ಮದಲಿ 50 ತನ್ನ ತೇಜದಿ ವಿಶ್ವಕರ್ಮಜಘನ್ನಪುರಿಯನು ಸುಟ್ಟು ಬಾಲಗವನ್ಹಿಯಿಂದಲೆ ಸರ್ವತಃ ಕಪಿಧನ್ಯ ಚರಿಸುತಲೆ 51 ಹೇಮರತ್ನಗಳಿಂದ ನಿರ್ಮಿಸಿದಾಮಹಾ ಪುರಿಯನ್ನು ರಾಕ್ಷಸಸ್ತೋಮದಿಂದಲಿ ಸಹಿತ ಸುಟ್ಟುಸುಧಾಮ ಗರ್ಜಿಸಿದಾ 52 ಹನುಮಸಾತ್ಮಜ ರಾಕ್ಷಶೇಶನತೃಣ ಸಮಾನವ ಮಾಡಿ ನೋಡಲುದನುಜರೆಲ್ಲರ ಭಸ್ಮ ಮಾಡುತಕ್ಷಣದಿ ಹಾರಿದನು 53 ಕಡಲ ದಾಟುತ ಕಪಿಗಳಿಂದಲಿಧಡದಿ ಪೂಜಿತನಾಗಿ ಮಧುವನುಕುಡಿದು ರವಿಜನ ವನದಿ ರಾಘವನಡಿಗೆ ಬಂದಿಹನು 54 ಸೀತೆ ನೀಡಿದ ಚೂಡಾರತ್ನವನಾಥನಂಘ್ರಿಯೊಳಿತ್ತು ಸರ್ವಶಗಾತ್ರದಿಂದಲಿ ನಮಿಸಿ ರಾಮಗೆಶಾತ ನೀಡಿದನು 55 ರಾಮನಾದರು ಇವಗೆ ನೀಡುವಕಾಮ ನೋಡದೆ ಭಕ್ತಿಭರಿತಗೆಪ್ರೇಮದಿಂದಲಿ ಅಪ್ಪಿಕೊಂಡನುಶ್ರೀ ಮನೋಹರನು 56 ಇಂದಿರೇಶನೆ ಎನ್ನ ಚಿತ್ತದಿನಿಂದುಮಾಡಿದ ನೀಸುಕವನವನಿಂದು ಭಕ್ತಿಲಿ ತತ್ಪುದಾಂಬುಜದ್ವಂದ್ವಕರ್ಪಿಸುವೆ 57 ಇತಿ ಶ್ರೀ ಸುಂದರ ಕಾಂಡಃ ಸಮಾಪ್ತಃ (ಪ್ರಾಕೃತ)ಶ್ರೀ ಗುರುವರದ ಇಂದಿರೇಶಾರ್ಪಣಮಸ್ತು ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ ನೋಡುವೆ ಮಾಡು ದಯ ಎನ್ನೊಳುರೂಢಿಯೊಳಗೆ ನಿಮ್ಮ ಪಾಡುತ ಮಹಿಮೆ ಅ.ಪ. ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1 ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2 ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3 ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4 ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ 5 ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6 ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7 ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8
--------------
ಇಂದಿರೇಶರು
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು