ಒಟ್ಟು 1732 ಕಡೆಗಳಲ್ಲಿ , 109 ದಾಸರು , 1404 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲನೇನೆ ನಿನ್ನ ಮಗನು ಗೋ- ಪಾಲಕೃಷ್ಣನು ಪ. ಬಾಲನೇನೆ ನಿನ್ನಮಗನು ಬಾಲಕಿಯರಾಲಯ ಪೊಕ್ಕು ಶೀಲಗೆಡಿಸಿ ಸಾಲದೆ ಗೋ- ಕುಲವನು ಸೂರೆಮಾಡಿದ ಅ.ಪ. ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ ಎರವು ಮಾಡಿದ ವಲ್ಕಲವನುಟ್ಟು ಅಡವಿ ಆಲಯವ ತಿರುಗಿದ ಶ್ರೀರಾಮಚಂದ್ರ ವೇಲಾಪುರದ ಸೋರುಮುಡಿಯ ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ 1 ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು 2 ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ ಪಾದ ಭೂಮಿ ಬೇಡಿದ ವಿಪ್ರರ ಕರೆಸಿ ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ 3
--------------
ವಾದಿರಾಜ
ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1 ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2 ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3 ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4 ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ5
--------------
ಚಿದಾನಂದ ಅವಧೂತರು
ಬಿಡುಮನವೆ ಬಿಡದಿಹ್ಯ ಸಂಸಾರ ಪಡಕೊಂಬುದು ಮಾಡು ನೀ ಸುವಿಚಾರ 1 ವಿಚಾರದೊಳಗದ ಬಲು ವಿವೇಕ ಸೂಚಿಸಿಬಾಹುದು ಸ್ವಾತ್ಮದ ಸುಖ2 ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ ಮತ್ತೆಲ್ಲಿಹದವಗೆ ಭವಬಂಧ 3 ಭವಬಂಧವ ತಿಳಿಯಲುಪಾಯ ಭುವನದಲ್ಯದ ಶುಕನಳಿಕನ್ಯಾಯಾ 4 ನ್ಯಾಯವ ತಿಳಿದರೆ ನೋಯವನೆಂದು ಶ್ರಯ ತಿಳಿಯಲು ತಾ ಬಂಧು 5 ಬಂಧು ಹಗೆಯು ತನಗೆ ತಾಯೆಂದು ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು 6 ಹರಿವಾಕ್ಯವೆ ಗುರುಗುಹ್ಯದ ಗುಟ್ಟು ಪರಮಾನಂದದ ಹೆಜ್ಜೆಯ ಮೆಟ್ಟು 7 ಹೆಜ್ಜೆಲೆ ನಡೆವನು ಕೋಟಿಗೊಬ್ಬವನು ಸಜ್ಜನ ಶಿರೋಮಣೆನಿಸಿಕೊಂಬುನು 8 ಶಿರೋಮಣೆನಿಕೊಂಬುದು ಗುರುಕರುಣ ಗುರುಚರಣಕೆ ಬ್ಯಾಗನೆಯಾಗು ಶರಣು 9 ಶರಣ ಹೊಕ್ಕವಗೆಲ್ಲಿಹುದು ಮರಣ ಮರಣಕ ಮರಣವ ತಂದವ ಜಾಣ 10 ಜಾಣನೆ ಜನ್ಮರಹಿತ ವಾದವನು ಜನವನ ಸಕಲ ಸಮವಗಂಡವನು 11 ಸಮಗಂಡವಗಳದಿಹ್ಯ ಶ್ರಮವೆಲ್ಲಾ ರಾಮ ವಸಿಷ್ಠರೊಳಾಡಿದ ಸೊಲ್ಲ 12 ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ ಎಲ್ಲರೊಳಗ ವಂದಾದವ ಬಲ್ಲ 13 ಬಲ್ಲವನೆ ಬಲ್ಲನು ಬಯಲಾಟ ಎಲ್ಲರಿಗಿದೆ ಅಗಮ್ಯದ ನೋಟ 14 ನೋಟಕ ನೀಟ ಮಾಡಿದವನು ಧನ್ಯ ನೀಟಿಲೆ ನಡೆದವ ಕೋಟಿಗೆ ಮಾನ್ಯ 15 ಕೋಟಿಗೆ ಒಬ್ಬನು ತತ್ವಜ್ಞಾನಿ ನೋಟವಗಂಡಿಹ್ಯ ಮಹಾ ಸುಜ್ಞಾನಿ 16 ಸುಜ್ಞಾನಿಗೆ ಘನಮಯ ಸುಕಾಲ ಸುಗಮ ಸುಪಥವಾಗಿಹುದನುಕೂಲ 17 ಅನುಕೂಲದ ನಿಜ ಮಾತನೆ ಕೇಳು ಅನುದಿನ ಘನಗುರು ಸೇವಿಲೆ ಬಾಳು 18 ಪರಿ ಲೇಸು ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು 19 ಸೋಸ್ಹಿಡಿದರ ಇದೊಂದೇ ಸಾಕು ವೇಷವದೋರುವದ್ಯಾತಕೆ ಬೇಕು 20 ಬೇಕೆಂಬ ಬಯಕೆಯ ಈಡ್ಯಾಡು ಸೋಕಿ ಶ್ರೀ ಸದ್ಗುರು ಪಾದದಿ ಕೂಡು 21 ಪಡೆವುದಿದೇ ಸ್ವಸುಖ ಸಾಧನ 22
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಿದಿಗೆಯ ದಿವಸ (ಹನುಮಂತನನ್ನು ಕುರಿತು) ರಂಭೆ : ಕಮಲದಳಾಕ್ಷಿ ಪೇಳೆಲೆ ಈತನ್ಯಾರೆ ಸಮನಸನಾಗಿ ತೋರುವನಲ್ಲೆ ನೀರೆಪ. ಧನ್ಯನಾಗಿರುವ ದೊರೆಯ ಧರಿಸುತ್ತ ಚೆನ್ನಿಗನಾಗಿ ತೋರುವನಲ್ಲೆ ಈತ1 ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವ ಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2 ಸೋಮಾರ್ಕಶಿಖಿಯಂತಿರುವುದು ತ್ರಿನಾಮ ರಾಮಣೀಯಕ ಮನೋಹರ ಪೂರ್ಣಕಾಮ3 ವೀರವೈಷ್ಣವ ಮುದ್ದು ಮೋಹನಕಾಯ ಭೂರಿಭೂಷಣಭುಜಬಲ ಹರಿಪ್ರಿಯ4 ರೂಪ ನೋಡಲು ಕಾಮರೂಪನಂತಿರುವ ಚಾಪಲ ಪ್ರೌಢ ಚಿದ್ರೂಪನಂತಿರುವ 5 ಬಾಲವ ನೆಗಹಿ ಕಾಲೂರಿ ಶೋಭಿಸುವ ನೀಲದುಂಗುರದ ಹಸ್ತವ ನೀಡಿ ಮೆರೆವ 6 ಗೆಜ್ಜೆ ಕಾಲುಂಗರ ಪದಕ ಕಟ್ಟಾಣಿ ಸಜ್ಜನನಾಗಿ ತೋರುವನು ನಿಧಾನಿ 7 ಊರ್ವಶಿ : ತರುಣಿ ಕೇಳೀತನೆ ದೊರೆ ಮುಖ್ಯಪ್ರಾಣ ವರ ನಿಗಮಾಗಮ ಶಾಸ್ತ್ರಪ್ರವೀಣ 1 ಮಾಯವಾದಿಗಳ ಮಾರ್ಗವ ಖಂಡಿಸಿದ ರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆ ಚಟುಳ ಹನುಮನ ಉತ್ಕಟರೂಪ ಕಾಣೆ 1 ವಾಮನನಾದ ಕಾರಣವೇನೆ ಪೇಳೆ ನಾ ಮನಸೋತೆ ಎಂತುಂಟೊ ಹರಿಲೀಲೆ 2 ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳು ಸಾಗಿತು ಸೇವೆಯೆಂಬುದು ಮನಸಿನೊಳು1 ವಾದವ ಮಾಡಿ ವಿನೋದದಿ ಹರಿಯ ಪಾದಸೇವೆಗೆ ಮನನಾದ ಕೇಳಿದೆಯೊ2 ವೀರ ವೇಷವನಿದ ಕಂಡು ಶ್ರೀಹರಿಯ ದೂರವಾದನೋ ಎಂದು ಮನದೊಳು ನಿಜವು3 ಭೂರಿಭೂಷಣ ಸುಂದರ ರೂಪವಾಂತ4 ಇಂದಿನ ಸೇವೆಯೆನ್ನಿಂದತಿ ದಯದಿ ಮಂದರಧರಿಸಿಕೊಳ್ವುದು ಎಂದು ಭರದಿ5 ಒಯ್ಯನೆ ಪೇಳುತ್ತ ವಯ್ಯಾರದಿಂದ ಕೈಯನು ನೀಡಿ ಸಾನಂದದಿ ಬಂದ6 ಕಂತುಪಿತನು ಹನುಮಂತ ಮಾನಸಕೆ ಸಂತಸ ತಾಳಿ ಆನಂತನು ದಿಟಕೆ7 ಭೂರಿ ವೈಭವದಿ ಸ್ವಾರಿಯು ಪೊರಟ ಸಾಕಾರವ ಮುದದಿ8 ತೋರಿಸಿ ಭಕ್ತರ ಘೋರ ದುರಿತವ ಸೂರೆಗೊಳ್ಳುವನು ವಿಚಾರಿಸಿ ನಿಜವ9 ಹದನವಿದೀಗೆಲೆ ಬಿದಿಗೆಯ ದಿನದಿ ಮದನಜನಕನು ಮೈದೋರುವ ಮುದದಿ10 ಪ್ರತಿದಿನದಂತೆ ಶ್ರೀಪತಿ ದಯದಿಂದ ಅತಿಶಯ ಮಂಟಪದೊಳು ನಲವಿಂದ11 ಎಂತು ನಾ ವರ್ಣಿಪೆ ಕಂತುಜನಕನ ಅಂತ್ಯರಹಿತ ಗುಣಾನಂಮಹಿಮನ12 ಏಕಾಂತದಿ ಲೋಕೈಕನಾಯಕನು ಶ್ರೀಕರವಾಗಿ ನಿಂದನು ನಿತ್ಯಸುಖನು13 * * * ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾಪ. ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆ ತವಕದಿ ಬರುವತ್ತಿತ್ತವರನ್ನು ನೋಡದೆ 1 ಅಂದಣವೇರಿ ಮತ್ತೊಂದ ತಾ ನೋಡದೆ ಒಂದೇ ಮನದಿ ಬೇಗ ಮುಂದೆ ಬರುವನಮ್ಮಾ2 ಬಾಲಬ್ರಹ್ಮಚಾರಿ ಶಿಲೆಯಂತಿರುವನು ಅಲೋಚಿಸಲಿವ ಮೂಲಪುರುಷನಮ್ಮಾ3 ಪುಟ್ಟನಾದರು ಜಗಜಟ್ಟಿಯಂತಿರುವನು ದಿಟ್ಟನಿವನವನ ಮುಟ್ಟಿ ನೋಡಮ್ಮ 4 ಊರ್ವಶಿ : ನಾರೀ ಇವನೀಗ ಹೊಂತಕಾರಿ ಲೋಕಕ್ಕಾಧಾರಿ ಪ. ಕೊಬ್ಬಿದ ದೈತ್ಯರಿಗೀತನೆ ಕಾಲ ಹಬ್ಬುವದಾತ್ಮಕ್ಕೀತನೆ ಮೂಲ ಉಬ್ಬುವ ಹರಿಯೆಂದರೆ ಮೈಯೆಲ್ಲ ಒಬ್ಬನಿಗಾದರೂ ಬಗ್ಗುವನಲ್ಲ1 ಎಲ್ಲಿರುವನು ಹರಿ ಅಲ್ಲಿಹನೀತ ಬಲ್ಲಿದ ನಾರಾಯಣಗಿವ ದೂತ ಖುಲ್ಲರ ಮನಕತಿ ಝಲ್ಲೆನುವಾತ ಸುಲ್ಲಭನೆಯಿವ ಮುಂದಿನ ಧಾತ2 ಭೇದವಿಲ್ಲೆಂಬುದವರಿಗೆಯಿವ ತುಂಟ ಮೇದಿನಿ ಬಾಧಕರಿಗೆ ಯಿವ ಕಂಟ ಆದಿ ಮೂರುತಿ ಕೇಶವನಿಗೆ ಬಂಟ ಮಾಧವಭಕ್ತರಿಗೀತನೆ ನೆಂಟ 3 ದುರಿತಾರಣ್ಯದಹನ ನಿರ್ಲೇಪ ವರ ವೆಂಕಟಪತಿಯಿದಿರೊಳಗಿಪ್ಪ ಪರಮಾತ್ಮನ ಪರತತ್ತ್ವ ಸ್ವರೂಪ ಮರೆಮಾತೇನಿವ ದೊರೆ ಹನುಮಪ್ಪ4
--------------
ತುಪಾಕಿ ವೆಂಕಟರಮಣಾಚಾರ್ಯ
ಬಿನ್ನಹಕೆ ಬಾಯಿಲ್ಲ ಭೂತನಾಥ ಪ ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ. ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ ಧೇನು ವತ್ಸನ ತೆರದಿ ಪಾಲಿಸೆನ್ನ ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ ನಾನು ನನ್ನದು ಬಿಡದು ಎನಗಾವ ಗತಿಯಿನ್ನು 1 ನೀಲಕಂಠನೆ ನಿನ್ನ ನೀಳಪಾದದ ಧೂಳಿ ಮೂರ್ಲೋಕದಘತೂಲಕಗ್ನಿ ಸತತ ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು 2 ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ ಉಣಿಸುವುವು ಮಹದುಃಖ ಎನ್ನ ಮೀರಿ ತುಂಬಿ ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ 3 ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ ವೃಷ್ಟೀಶನಲಿ ಎನ್ನ ಪೋಗಬಿಡದೊ ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು 4 ಶತಕೋಟಿ ಶ್ರುತಿಯಲಿ ಜಯೇಶವಿಠಲ ನತಬಂಧು ಎಂತೆಂದು ಸಾರುತಿಹುದು ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ ಪತಿತಪಾವನ ನನ್ನ ಹರಿಭಕ್ತನ ಮಾಡು5
--------------
ಜಯೇಶವಿಠಲ
ಬಿನ್ನೈಸಲೇನಿನ್ನು ಎನ್ನ ಗುರುವೇ ನಿ ಮ್ಮ ನಿತ್ಯಾನಂದನಿರುವ ಬಗೆಯನ್ನ ಪ. ತನ್ನ ಕಾರ್ಯಗಳನ್ನು ನಿಮ್ಮ ಮೇಲೊರಗಿಸಿ ಬೆನ್ನಿನಂದದಿ ನಿಮ್ಮ ಕಾಡುತಿಹನು ತನ್ನಿಂದಲಾಗದ ಕಾರ್ಯಗಳು ಇನ್ನುಂಟೆ ತನ್ನನೆ ತಾನು ಮರೆತಂತೆ ಇರುತಿಹನು 1 ತನ್ನ ಮಾರ್ಗಕೆ ಬರುವ ಜೀವರುಗಳೆಲ್ಲರನು ನಿಮ್ಮ ವಶಕೊಪ್ಪಿಸಿ ಓರೆಯಾಗಿಹನು ತಾನೊಬ್ಬ ನಿಮ್ಮಿಂದ ತೇರ್ಗಡೆಯಾದಮೇಲ್ ತನ್ನವರ ತಾನು ಸಲಹದಲೆ ಇರುತಿಹರೆ 2 ಬನ್ನಬಡುತಲಿ ಇರುವ ಘನ್ನ ಜೀವರುಗಳನು ಮನ್ನಿಸಿ ಕರೆದು ಅಂಕಿತವಿತ್ತಿರಿ ಇನ್ನಾದರೂ ತಾನು ನಿಮ್ಮ ಕಾರ್ಯಕೆ ನಿಂತು ನಿಮ್ಮ ಸೇವೆಯನು ಮಾಡದಲೆ ಇರುತಿಹನು 3 ಒಂದೊಂದು ಸೇವೆಗೆ ಒಬ್ಬೊಬ್ಬರಿಹರೆಂದು ಮುಂದೆ ತನಗಾವುದೂ ತಿಳಿಯದೆಂದು ಇಂದು ಈ ಪರಿಯಿಂದ ಇರುತಿಹುದು ನ್ಯಾಯವೆ ತಂದೆ ಮುದ್ದು ಮೋಹನಗುರುವೆ ನೀವ್ ಪೇಳಿ 4 ಸಾಕು ನಿಮ್ಮಯ ಶ್ರಮವ ನೋಡಲಾರೆ ನಾನು ಈ ಕಂದನಿಗೆ ಇನ್ನು ವರವ ಕೊಟ್ಟು ಲೋಕಕಾರ್ಯವ ನಡೆಸಿ ನೋಡಿ ಸಂತಸಪಡಿರಿ ಲೋಕೇಶ ಗೋಪಾಲಕೃಷ್ಣವಿಠ್ಠಲ ಪ್ರಿಯರೆ 5
--------------
ಅಂಬಾಬಾಯಿ
ಬೆದರದಿರು ಚಿನ್ನಾ ನೀ ಬೆದರದಿರು ಪ ಮ್ಮುದವನಿತ್ತು ವಿಪದವ ಕಳೆವನು ಅ.ಪ ಆದಿಯಲಿ ಬೆದರಿಸಿ ಮನದ ಹದುಳವ ನೋಡುವ ಪದವಿ ಪೊಗಿಪÀ ಸಂಪದವೀಯನಿವನು 1 ಒಂದೆ ಮನದಿ ಗೋವಿಂದನ ಪದ ನಂಬು ಹಿಂದಾಗುವುದು ಚಿಂತೆ ಮುಂದುಳಿಯದು 2 ಇಂದಿರೆ ಅರಸ ವಿಜಯ ರಾಮ- ಚಂದ್ರವಿಠಲ ನಿನ್ನ ಬೆನ್ಹಿಂದೆ ಇರುವನು 3
--------------
ವಿಜಯ ರಾಮಚಂದ್ರವಿಠಲ
ಬೆರಗದಿರು ಮನವೇ ನೀ ತತ್ವವನು ತಿಳಿಯದೆ ಮರುಗಬೇಕಾಗುವುದು ಅವಿವೇಕಕೆ ಪ ಸಿರಿಯರಸ ನರಹರಿಯ ಮರೆತು ಬಾಳುವ ನರನು ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ ತನುಭೋಗವಲ್ಲವೊ ಅದರ ಫಲವು ವನಜನಾಭನ ಮನದಿ ನೆನೆನೆನೆದು ದಿವ್ಯ ಸ ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1 ಭವಮೋಹದಿಂದ ನೀ ಘನ ಪಾಪಗಳ ಮಾಡಿ ಧನಿಕನೆಂದೆನಿಸಿದರೆ ಎಣಿಕೆ ಬಾರದೋ ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2 ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ ಕಾಮಿತಕೆ ಬಿದ್ದು ನಿರ್ನಾಮವಾಗದಿರೊ ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3 ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ ನಿನ್ನವರು ಯಾರೆಂದು ಪೇಳಲಳವೇ ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು ಪನ್ನಗಶಯನ ಪ್ರಸನ್ನನಾಗುವನು 4
--------------
ವಿದ್ಯಾಪ್ರಸನ್ನತೀರ್ಥರು
ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ ಝಳಿಸುತಿಹದು ಜಗದೊಳಗೆ ಧ್ರುವ ಬೆಳಗಾಯಿತು ಎನ್ನೊಳಗೆ ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ 1 ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ ಗುಹ್ಯ ತಾರ್ಕಣ್ಯ ಬೆಳಗು ಬೈಗಿಲ್ಲದ ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ 2 ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ ನಿಜ ಒಡಮೂಡಿ ಭವ ಪಾದವ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗಿರೆ ಹರುಷದಿ ಆರುತಿಬೇಗ | ಸತಿ ಮುದದಿ ಶಿರಿ ನಿಲಯನಿಗೀಗ ಪ ನಿರಂಜನ | ನಿರಾಮಯ | ನೀರೇರುಹದಳ ಲೋಚನ ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ 1 ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು ಮಾನಿನಿಯಳ ಅಭಿಮಾನ ಕಾಯ್ದವಗೆ 2 ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು ಶುಭಮೂರುತಿಗೀಗ ಆರುತಿ ಬೇಗ 3
--------------
ಶಾಮಸುಂದರ ವಿಠಲ
ಬೆಳಗಿರೇ ಆರತಿಯ ಮುತ್ತೈದೆರೆಲ್ಲರೂ ಕೂಡಿಬೆಳಗಿರೇಆರತಿಯ ಪ ಶ್ರೀ ಗುರು ಗಣಪತಿ ಚರಣಾರವಿಂದಕೆ ಬಾಗಿ ಮಣಿದು ಶಾರದಾಂಬಿಕೆ ಅಮ್ಮನ ಆಗಮೋಕ್ತದಿ ಪೂಜಿಸುವೆ ಚರಿತವನೀಗಳು ಕರುಣಿಸುತಿಹ ವಿಘ್ನರಾಜಗೆ ಮೊದಲ ಆರತಿಯ ಬೆಳಗಿರೆ 1 ಸರಸಿಜೋದ್ಭವನ ರಾಣಿ ಕಲ್ಯಾಣಿ ವಿದ್ಯೆಗಧಿಕಾರಿ ಸುರವಂದ್ಯೆ ಸುಪ್ರದಾಯಕಿ ಶಾರದಾಂಬಿಕೆಗೆ 2 ಶಾರದಾಂಬಿಕೆಗೆ ಹರಳಿನಾರತಿಯ ಬೆಳಗಿರೆ 3 ಬಿರು ಮುಗುಳಿನ ಚಂಪಕದಂತೆ ನಾಸಿಕ ಕದಪು ಕನ್ನಡಿಯವೇಲ್ ಲೋಕಮಾತೆಗೆ ಪರಿಮಳ ದಾರತಿ ಬೆಳಗಿರೆ 4 ಮರೆಯಲು ಗರಳಸ್ವರವು ಕೋಗಿಲೆಯಂತೆ ನಳಿದೋಳೆರಡು ಬೆರಳು ಸಂಪಿಗೆಯ ಸರಳಿರುವಂತೆ ಮೆರೆವ ಈ ಶಾರದಾಂಬಿಕೆಗೆ ಹವಳದಾರತಿ ಬೆಳಗಿರೆ 5 ಕಿರುಬಸುರಿನ ಸುಳಿನಾಭಿ ಇಟ್ಟ ವೋಲೆ ತ್ರಿವಳಿಯ ಹರಿಮಧ್ಯ ನಡುವಿಗೆ ಉಟ್ಟ ಪೀತಾಂಬರದ ಶ್ರೀ ಶಾರದಾಂಬಿಕೆಗೆ ಬಟ್ಟಲಾರತಿ ಬೆಳಗಿರೆ 6 ಮಂದಗಮನೆ ಜಗದ್ವಂದ್ಯೆಗೆರಗಿ ನಾ ಮುಂದೆ ಪೇಳುವ ಪರಿಪರಿ ವಸ್ತ್ರ ಭೂಷಣದಿಂದ ಮೆರೆವ ಮಣಿ ಮಕುಟ ಫಣಿಗೆ ಶ್ರೀಗಂಧ ಕುಂಕುಮವಿಟ್ಟ ಶಾರದಾಂಬಿಕೆಗೆ ಕುಂದಣ ದಾರತಿ ಬೆಳಗಿರೆ 7 ಪುತ್ಥಳಿ ಹಾರಹೀರಾವಳಿ ಮುತ್ತಿನಸರ ಚಿನ್ನದಸರ ಚಕ್ರಸರ ಜ್ವಲಿಸುತ್ತಲಿರುವ ಮೆರೆವ ಶ್ರೀ ಶಾರದಾಂಬಿಕೆಗೆ ಮುತ್ತಿನಾರತಿ ಬೆಳಗಿರೆ 8 ರತ್ನದಸರ ಪದಕದಸರವು ಏಕಾವಳಿಸರ ಕೊರಳೊಳಗಳ ನಳಿನ ದಾರತಿ ಬೆಳಗಿರೆ 9 ಹರಳು ಮೌಕ್ತಿಕದಿಂದ ಮೆರೆವ ಮೂಗುತಿ ಚಂದ್ರನ ಹರಳು ಚೌಲಿಯ ತುಂಬುಪರಿಮಳಿಸುವ ಪೂವು ಕರಿ ಮಣಿ ಹರಳಿನಾರತಿ ಬೆಳಗಿರೆ 10 ಮೆರೆವಚೂಡವು ಕೈ ಚಳಕಿಗೆ ಕೆತ್ತಿದ ಹರಳಿನ ವಡ್ಯಾಣ ನಡುವಿಗೆ ಅಳವಟ್ಟು ರೂಢಿಸಿ ಬಕುತರ ಪಾಲಿಪ ಶಾರದಾ ದೇವಿಗೆ ಆರತಿ ಬೆಳಗಿರೆ 11 ಥರಥರ ನವರತ್ನ ಖಚಿತದಿಂದೊಪ್ಪುವ ಕರವೆರಡರ ಭುಜ ಕೀರ್ತಿ ವಜ್ರದೊಳ್ ಬಿರಿದ ತೋಳ್ ಬಳೆವಾಲೆ ಶಾರದಾದೇವಿಗಾರತಿ ಬೆಳಗಿರೆ 12 ಚಿನ್ನದ ಕಿರುಗೆಜ್ಜೆ ಅಂದಿಗೆ ಗಿಲಿಗಿಲಿರೆನ್ನಲು ಹಾರ ಹೊಯ್ದೊಡರು ಬಿರಿಚೊಕ್ಕ ಚಿನ್ನದ ಸರಪಳಿ ಭಾರಿಗಳ ನೆಳೆವ ಸುಪ್ರಸಂಗನೆಗಾರತಿಯ ಬೆಳಗಿರೆ 13 ಪಿಲ್ಲಿಯುಕಿರು ಬೆರಳಲಿ ಮಿಂಚಿನಂತಿಹುದಿಲ್ಲಹರಳು ಮಂಚಿಕೆ ಕೊಡೆ ಹೊಳೆಯುವ ಚೆಲುವ ಕಾಲುಂಗರ ವರ ವೀರ ಮುದ್ರಿಕೆಯಲಿ ಒಪ್ಪುತಲಿಹ ಶಾರದಾಂಬಿಕೆಗೆ ಮಲ್ಲಿಗೆ ಯಾರತಿಯ ಬೆಳಗಿರೆ 14 ಭಾರಕೆ ಶಾರದೆ ಒಲಿಯುತ ದೇಹದ ಕಾಂತಿ ಯಿಂದ ದಿಕ್ಕನು ಮುತ್ತೀನಾರತಿಯ ಬೆಳಗಿರೆ 15 ಕರುಣಾಂಬೆ ಕಾಶ್ಮೀರ ಪುರವರಧೀಶ್ವರಿ ಪರಮಹಂಸವರ್ಯ ಪರಿ ಪರಿ ರುದ್ರನ ಪೋಲ್ವ ನಿಶದದುತಿ ಮೂರ್ತಿ ಪರಿಪರಿ ಆರತಿಯ ಬೆಳಗಿರೆ 16 ಪುಷ್ಪ ಧೂಪ ದೀಪಗಳಿಂದ ಸಡಗgದಿಂದಲಿ ಸಮರ್ಪಿಸಿ ಜಯ ಜಗದರೂಪೆ ರಕ್ಷಿಸು ಮಾತಾಯೆ ಕರುಣಿಸು ಎಂದು ಕಡು ಬೆಡಗಿನ ಆರತಿಯ ಬೆಳಗಿರೆ 17 ಕಡುಬು ಕಜ್ಜಾಯ ಪಾಯಸಕ್ಷೀರ ದಧಿಘೃತತಡೆಯಿಲ್ಲ ತುಂಬಿ ದೇವಿಗೆ ಕರಿಯ ಕಬ್ಬಿನ ಕೋಲು ಆರತಿಯ ಬೆಳಗಿರೆ 18 ಹರಿವಾಣ ನೇವೇದ್ಯಜಗನ್ಮಾತೆ ತಾಬೂಲವನಿತ್ತು ಶರಣೆಂದು ನೂತರದಾರತಿಯ ಬೆಳಗಿರೆ 19 ತಮ್ಮಟೆ ಭೇರಿ ಬುರುಗು ಶಂಖ ಮೃದಂಗವು ನೀಲದಾರತಿಯ ಬೆಳಗಿರೆ 20 ಭೋರಿಡುವವಾದ್ಯವು ಉಡುಕು ಕೊಳಲು ತಂಬೂರಿ ತಾಳಗಳಿಂದ ಸ್ವರವೆತ್ತಿಪಾಡಿ ಆರತಿಯ ಎತ್ತಿರೆ 21 ಬೇಡುತ ಪೂಮಳೆಗರೆಯುತ ಹೊಡೆದು ಕೊಂಡಾಡಿ ವಂದಿಸಿದರು ಶಾರದಾಂಬಿಕೆಗೆ ಹೂವಿನಾರತಿಯ ಎತ್ತಿರೆ 22 ವರದಾಂಬೆ ಶಾರದಾಂಬಿಕೆಯನು ಪೂಜಿಸಿದವರಿಗೆ ಪರಿಪರಿ ವಿದ್ಯವ ಕರುಣಿಸೆ ನರರಿಗೆ ಇಷ್ಟಾರ್ಥದ ವರವಿತ್ತು ಕೊಡುವಳು ಮರಕತದಾರತಿ ಬೆಳಗಿರೆ 23 ಹಿರಿಯಮಗನ ರಾಣಿ ಶಾರದಾಂಬಿಕೆಯ ಸುರಮುನಿ ಜನರಿಗಿಷ್ಟಾರ್ಥವ ವರವಿತ್ತು ಮಂಗಳಾರತಿಯ ಬೆಳಗಿರೆ 24
--------------
ಕವಿ ಪರಮದೇವದಾಸರು
ಬೇಗ ಬಾರೊ ಬೇಗ ಬಾರೊ ನೀಲಮೇಘವರ್ಣ ಪ. ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನಅ.ಪ. ಇಂದಿರ ರಮಣ ಗೋವಿಂದ ಬೇಗ ಬಾರೊನಂದನ ಕಂದ ಮುಂಕುಂದ ಬೇಗ ಬಾರೊ 1 ಅನಿರುದ್ಧ ಬೇಗ ಬಾರೊಹದ್ದನೇರಿದ ಪ್ರಸಿದ್ಧ ಬೇಗ ಬಾರೊ 2 ರಂಗ ಉತ್ತುಂಗ ನರಸಿಂಗ ಬೇಗ ಬಾರೊಕಂಗಳಿಗೆಸೆವ ಶುಭಾಂಗ ಬೇಗ ಬಾರೊ 3 ಧೀರ ಉದಾರ ಗಂಭೀರ ಬೇಗ ಬಾರೊಹಾರಾಲಂಕಾರ ರಘುವೀರ ಬೇಗ ಬಾರೊ4 ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೋ ಉ-ದÀಯಾದ್ರ್ರಿವಾಸ ಹಯವದನ ಬೇಗ ಬಾರೊ 5
--------------
ವಾದಿರಾಜ