ಒಟ್ಟು 2084 ಕಡೆಗಳಲ್ಲಿ , 116 ದಾಸರು , 1437 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀ ವೇದವ್ಯಾಸ ಪ್ರಥಮ ಆಧ್ಯಾಯ ಪ್ರಾದುರ್ಭಾವಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ನಾರಾಯಣ ಸರ್ವ ಉರು ಗುಣಾರ್ಣವ ನಮೋ ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ 1 ವಾಸುದೇವ ವೈಕುಂಠ ನಮೋ ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ 2 ಕೂರ್ಮ ಕ್ರೋಢ ನರಸಿಂಹ ವಾಮನ ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ ಆನಂದ ಜ್ಞಾನಾದಿ ಗುಣಮಯ ರೂಪಗಳು ನಿತ್ಯ 3 ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು ಕೃತಿ ನಡೆಸಿ ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ 4 ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ 5 ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ ಇಳೆಯಲಿ ಸುಜನರಲಿ ಕಡಿಮೆ ಆಗಿ ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು 6 ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು ದೇವ ದೇವೋತ್ತಮ ನೀ ಅಭಯವನಿತ್ತು ಭುವಿಯಲಿ ಪರಾಶರ ಸತ್ಯವತಿ ಸುತನೆಂದು ಅವತಾರ ಮಾಡಿದಿ ಸಜ್ಜನೋದ್ಧಾರ 7 ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು ಅಜ ನೀ ತನ್ನಲವತರಿಸು ಎಂದು 8 ವೇದ ವೇದಾಂಗ ಕೋವಿದ ಪರಾಶರರ ಶ್ರದ್ಧೆ ಶೀಲತ್ವವ ಮೆಚ್ಚಿ ನೀನು ಪೇಳ್ದಿ ವಸುರಾಜನ ಸುತೆ ಸತ್ಯವತಿಯ ಸುತನೆನಿಸಿ ಅವತಾರ ಮಾಡುವಿ ಎಂದು 9 ವಸುರಾಜ ಅಡವಿಯಲಿ ಬೇಟೆಯಾಡುವಾಗ ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ ವಿಸರ್ಜನೆ ಆಯಿತು ರೇತಸ್ಸು ಅದನ್ನ ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ 10 ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ- ಶೇನಪಕ್ಷಿ ತಡೆದು ಯುದ್ಧ ಮಾಡಿತು 11 ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು 12 ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ 13 ಮತ್ಸದ ಗರ್ಭವು ವರ್ಧಿಸಿತು ಆಗ ಬೆಸ್ತರು ಆ ಮೀನ ಹಿಡಿದು ಸೀಳೆ ಅದರ ಉದರದಿ ಎರಡು ಶಿಶುಗಳ ಕಂಡರು ಒಂದು ಹೆಣ್ಣು ಮತ್ತೊಂದು ಮಗು ಗಂಡು 14 ತಮ್ಮ ನಾಯಕ ದಾಸರಾಜನಲಿ ಪೋಗಿ ಆ ಮೀನುಗಾರರು ಶಿಶುಗಳ ಕೊಡಲು ಆ ಮತಿವಂತನು ವಸುರಾಜನಲಿ ಪೋಗಿ ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ 15 ವಸುರಾಜನು ವಿಷಯವ ಚೆನ್ನಾಗಿ ಅರಿತು ಶಿಶುಗಳು ತನ್ನದೇ ಎಂದು ತಿಳಿದು ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ 16 ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ ಬೆಳೆಯುತಿಹಳು ದಾಸರಾಜನ ಗೃಹದಿ ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು ಬಲು ಪುಣ್ಯವಂತಳು ಸುಶುಭ ಲಕ್ಷಣಳು 17 ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ ದಾಸನು ನಾವಿಗನು ಆದ್ದರಿಂದ ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ 18 ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ ಯಮುನೆಯ ದಾಟಲು ಹಡಗಿನಲ್ಲಿ ಕುಳಿತ ಆ ಮುನಿ ಪರಾಶರರಿಗೆ ಒದಗಿದಳು ಕಾಲ 19 ಶ್ರೀಶ ನಿನ್ನಯ ಮಾತು ನೆನೆದು ಪರಾಶರರು ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ ವಸುರಾಜನು ಧಾರೆ ಎರೆದಿತ್ತ ಮಗಳ 20 ನಾರದರ ವೀಣೆ ಸಂಗೀತ ಗಾಯನವು ಸುರ ಗಂಧರ್ವರ ಸುಸ್ವರ ಗಾನ ಸುರನಾರಿ ನರ್ತಕರ ಆನಂದ ನರ್ತನವು ಸರಸಿಜಾಸನ ಮುಖ ಸುರರ ಸ್ತೋತ್ರಗಳು 21 ನೀಲ ಮೇಘ ಶ್ಯಾಮ ಇಂದಿರಾಪತಿಯು ಕಲಿ ವಿದಾರಕ ವಿಜ್ಞಾನ ಭೋದಕನು ಇಳೆಯಲಿ ವ್ಯಾಸ ಅವತಾರ ಸಮಯವೆಂದು ಸುರರು ಕೂಡಿ ತುಂಬಿದರು 22 ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು ಮರಗದ ವರ್ಣದಲಿ ಜ್ವಲಿಸುವ ರೂಪ ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ ಸೂರ್ಯತೇಜಃ ಪುಂಜ ಅವತಾರ ಮಾಡಿದಿ 23 ಶೋಣಿತ ಸಂಬಂಧ ಇಲ್ಲವೇ ಇಲ್ಲ ಅಪ್ರಾಕೃತ ಚಿದಾನಂದ ಕಾಯ ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ ಶ್ರೀಕಾಂತ ನರಸಿಂಹ ಅವತಾರದಂತೆ 24 ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ ಅಂದು ಕಂಬದಿಂದ ಸ್ವೇಚ್ಛದಿ ಬಂದಿ ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ ಬಂದು ಪ್ರಕಟಿಸಿದಿ ವ್ಯಾಸ ಅವತಾರ 25 ಶೋಣಿತ ರಹಿತ ಅಲೌಕಿಕವಾದರೂ ನೀ ಲೋಕ ರೀತಿಯಲಿ ಪುಟ್ಟಿದ ತೆರದಿ ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ ಮಾಲೋಲ ನೀ ವಿಡಂಬನ ಮಾಡಿ ತೋರ್ದಿ 26 ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ ತಟಿತ್ ಪ್ರಭಾ ಜಟಾಮಕುಟ ಶಿರವು ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ 27 ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ ಇಷ್ಟಪ್ರದ ಅನಿಷ್ಟ ನಿವಾರಕ ನೋಟ ಕರ್ಣ ಕುಂಡಲದ್ವಯವು ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ 28 ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ ಸಂದರ್ಶನ ಸುಖ ಸಂದೋಹ ಈವುದು ಮಂದಹಾಸವು ನತಜನ ಶೋಕ ಕಳೆವುದು ಶುಭ ಲೋಹಿತೋಷ್ಟ್ರಗಳು 29 ಸುಂದರ ರೇಖಾತ್ರಯಯುತ ಕುಂಬುಗ್ರೀವದಿ ಕೌಸ್ತುಭ ಮಣಿಯು ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ ಚಿದ್ದಮಲ ಮೋದಮಯ ಶ್ರೀವತ್ಸ ಅಂಕ 30 ಪೊಳೆವ ರತ್ನದ ಹಾರಗಳು ಉರದೇಶದಲಿ ವಲಿತ್ರಯಾಂಕಿತ ಉಳ್ಳ ಉದರ ಸುಂದರವು ಕೀಲಾಲಜ ಭವಾಂಡವ ಪಡೆದ ನಾಭಿಯು ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ 31 ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು ಶ್ರೀಪ ನಿನ್ನಯ ದಿವ್ಯ ಯೋಗ ಅಸನವು ಉಪಮವಿಲ್ಲದ ಸುಂದರ ಕಟಿಜಾನು 32 ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂiÀರ್i ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ 33 ತಿಮಿರ ಮಾರ್ತಾಂಡ ನೀ ರವಿ ಕೋಟಿ ಅಮೃತ ಇಂದು ಕೋಟಿ ಅತ್ಯಧಿಕ ತೇಜ ಈ ದಿವ್ಯ ಸುರೂಪದಿ ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ 34 ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ ರೂಪ ಪೂಜೆ ಪರಾಶರರು ಮಾಡಿದರು ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ ಆ ಪರಾಶರ ಸತ್ಯವತಿಗೆ ಮುದಕರವು 35 ಸತ್ಯವತೀ ಪರಾಶರರ ಸುತನೆಂದು ನೀ ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ ಸಾತ್ಯವತೇಯ ಪರಾಶರ್ಯ ನಾಮದಿಂ ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ 36 ಯಾವ ಯಾವಾಗ ಸತ್ಯವತಿ ಪರಾಶರರು ದೇವತಾ ಸಾರ್ವಭೌಮನೇ ವ್ಯಾಸ ನಿನ್ನ ತಾವು ನೋಡಲು ಇಚ್ಛೈಸಿ ನೆನೆಯುವರೋ ಆವಾಗ ತೋರುವಿ ಎಂದಿ ಮಾತೆಗೆ 37 ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ ನಗ ಮೇರುಗಿರಿಗೆ ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ 38 ಜ್ಞಾನ ಸುಖಪೂರ್ಣ 'ಪ್ರಸನ್ನ ಶ್ರೀನಿವಾಸ' ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ ಆ ನಮಿಪೆ ಬದರೀಶ ಜ್ಞಾನಮುದ ಧನದ 39 - ಇತಿ ಪ್ರಥಮಾದ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ರಾಜ ರಾಜೇಶ್ವರನೇ ರಾಜೀವಾಲಯ ಪತೇ ರಾಜೀವಭವ ಭವಾದ್ಯಮರ ವಿನುತ ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ ರಾಜೀವನಯನ ಔದಾರ್ಯ ಕರುಣಾಬ್ಧಿ 1 ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ ಉತ್ಕøಷ್ಟ ಉಪದೇಶ ಮಾಡಿದಿ ಮೇರುವಿಲಿ 2 ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು ಸುಮಹಾ ವೇದಾರ್ಥ ನಿರ್ಣಯಕವಾದ ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ 3 ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ ಅಮಿತ ಬಲಯುತ ಶರದಿಂ ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ ಕ್ರೂರ ಕಲಿಮೃತನಾದವನಂತೆ ಆದ 4 ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ ಉದ್ಭೂತವಾದ ಉತ್ತಮ ಜ್ಞಾನ ರೂಪ ಸುಧೆಯ ದೇವತೆಗಳು ಭುಂಜಿಸಲು ಆಗ ವಿದೂರರಾದರು ಕಲಿಯ ಕಲ್ಮಷದಿಂದ 5 ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು ಬಂದ ರುದ್ರಾದಿಗಳು ಮುಂದೆ ಕುಳಿತು ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ- ಸೂತ್ರಾದಿ ಅಮೃತವ ಪಾನ ಮಾಡಿದರು 6 ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ ದೀನ ದಯಾಳು ನೀ ದಿಗ್ವಿಜಯಗೈದಿ ಮಂದಾಧಿಕಾರಿಗಳ ಉಪಕಾರಕಾಗಿ ನೀ ನಿಗಮ ವಿಭಾಗ ಮಾಡಿದಿಯೋ 7 ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ ಅವರು ವಾಸಿಸುವ ಸ್ಥಳಗಳಿಗೆ ಪೋಗಿ ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ ನಿವಾರಣ ಮಾಡಿದಿ ಕರುಣಾಂಬು ನಿಧಿಯೇ 8 ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ 9 ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ ಕರ್ಮ ನಿಮಿತ್ತ ನರ ನರೇತರ ಜನ್ಮ ಅಸಂಭವವು ಅಲ್ಲವು ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ 10 ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು ಆದರೂ ಆ ಕ್ರಿಮಿಗೆ ರಾಜಪದವಿತ್ತಿ 11 ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ 12 ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ ಮಗನೆಂದು ತಾ ಜನಿಸಿ ಸೇವಿಸಬೇಕೆಂದು ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ ಹಾಗೆ ನಿನ್ನಿಂದ ವರ ಪಡೆದು ಮಗನಾದ 13 ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ ರುದ್ರಗೆ ವರವಿತ್ತು ಅಧಮರ ಮೋಹಿಸಿದಿ ಒಂದೊಂ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಣ ಬಿಟ್ಟು ನಾನಿರಲಾರೆ ಪ ನಿನ್ನ ಪಿಡಿದು ರಘು ರನ್ನದಶಾಸ್ಯ- ನನ್ನೆ ಸವಿದು ದಾನವ ಕುಲಬೇರಾ- ವನ್ನೆ ಕಿತ್ತಿ ಜಾನಕಿಯನೆ ತಂದಾ ನಿನ್ನುಳಿದಿನ್ನುಂಟೆ ಮನ್ನಿಸಿ ಕೇಳ್ವರು ಕುನ್ನಿಯ ಮಾನವರೇನು ಬಲ್ಲರು 1 ವಿಕ್ರಮ ಭೀಮನೆನಿಸಿ ದ್ವಾಪರದಿ ದುರುಳ ಮಲ್ಲರ ಭೂ- ಚಕ್ರಕಪ್ಪಳಿಸಿ ಬಕನನ್ನೇಕ- ಚಕ್ರಾಖ್ಯನಗರದಿ ಹಿಂಡಿ ಬಿಸÀುಟೆ ಕುರು- ಚಕ್ರವರ್ತಿಯ ಕುಲವಳಿದೀ 2 ಶ್ರೀಶಾನುಜ್ಞದಿ ಧರೆಯೋಳವತರಿಸಿ ಈಶಮಧ್ವನೆಂಬಭಿದಾನವ ವಹಿಸಿ ದೋಷೆನಿತಿಲ್ಲದ ಮತವನೆ ಸೃಜಿಸಿ ಈಶ ನಿನ್ನಾಣೆ ಜಗದುದ್ಧಾರ ಮಾಡಿದಿ ದಾಸನಹುದೋ ನೀ ನರಸಿಂಹವಿಠಲನ 3
--------------
ನರಸಿಂಹವಿಠಲರು
ಪ್ರಾಣದೇವರ ಸ್ತೋತ್ರ ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ || ನೋಡಿದ್ಯಾ ಹನುಮನಾರ್ಭಟವ - ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. || ಮಾತೆ ನಿನ್ನಾಜ್ಞೆಯ ಕೊಂಡು - ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ 1 ಸೊಕ್ಕಿ ರಾವಣನೆಂಬ ಗಂಡ - ಮಹ ಲಕುಮಿಯನೆ ಕರಕೊಂಡ - ರಾಮ ರಕ್ಕಸಾಂತಕ ಆಕೆ ಗಂಡ - ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ 2 ಎಷ್ಟೇಳ್ಹಲವನ ಪ್ರತಾಪ - ನೋಡುಸುಟ್ಟನೆಂಬ ಲಂಕಾ ದ್ವೀಪ - ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ
--------------
ಕೇಶವವಿಠ್ಠಲರು
ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ ನೂರು ಯೋಜನ ಶರಧಿಯ ಹಾರಿ ಲಂಕಾಪುರವ ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ 1 ದುಷ್ಟ ದಶಕಂಧರನನು ಮುಷ್ಟಿತಾಡನದಿಂದ ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ 2 ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ ಪಾದ ದ್ವಂದ್ವಕೆರಗಿದ ಮುಖ್ಯ 3 ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು ಮೂರು ಜಗಂಗಳ ಮೀರಿದ ಕೀರುತಿಯ ಪೊಂದಿದ 4 ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ 5
--------------
ವಿದ್ಯಾಪ್ರಸನ್ನತೀರ್ಥರು
ಪ್ರಾಣಪತೇ ಗುರುವರೇಣ್ಯಾಗ್ರಗಣ್ಯ ಪ ಕಾಣೇ ನಿನಗೆ ಸರಿಜಾಣರ ತ್ರಿಜಗದೊಳು ಅ.ಪ ರಾಮಕೃಷ್ಣ ವೇದವ್ಯಾಸ ನೀ ಮೂರವತಾರದಿ ಪ್ರೇಮದಿ ಮಾಡಿದೆ ನಿಷ್ಕಾಮ ಮಾರ್ಗಸ್ಥಾಪಕನೆ 1 ಧಾರಾಳವಾಗಿ ನಿಲ್ಲಿಸಿ ಕ್ರೂರರೆದೆಯವೊಡೆದೆ 2 ನಿನ್ನ ನಂಬಾದವ ಬನ್ನಬಡುವ ಭವದಿ ಚೆನ್ನಗುರುರಾಮವಿಠಲನ್ನ ಮಚ್ಚಿಸಿದೆ ಧೀರಾ 3
--------------
ಗುರುರಾಮವಿಠಲ
ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ ರ್ಪುರದ ವೀಳಯದ ಮಡುಪುಗಳನೇ ಕೊಟ್ಟು ಪರಿಯಂತ ಕಾಲನೊತ್ತುತ ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ 1 ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ 2 ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ 3
--------------
ಬೇಲೂರು ವೈಕುಂಠದಾಸರು
ಬಡವನ ಮನೋರಥ ಪೂರೈಸು ಸಿರಿಕೃಷ್ಣ ಒಡೆಯ ನೀನಲ್ಲದೆ ಪೂರೈಸುವರಿಲ್ಲ ಪ ಕಿವಿಯು ನೀಡಿದುದಕೆ ಎನಗೊಮ್ಯಾದರು ಮನೋ ಕುವರಿಯ ಭೃತ್ಯತನ ಕೊಡು ಕಂಡ್ಯ ಸುವಿಮಲತರ ಮತಿಯಾದ ವಿಷ್ಣುರಾತೋ ದ್ಭವನ ಬಳಿಯಲೊಮ್ಮೆ ನಿಲಿಸಯ್ಯಾ ಹರಿಯೆ 1 ನಯನವು ಕೊಟ್ಟದಕೆ ಎನ್ನೊಮ್ಮೆ ರಣದಿ ವಿ ಜಯನ ಬಳಿಯಲೊಮ್ಮೆ ನಿಲಿಸಯ್ಯಾ ಭಯದಿ ಸೂತರ ಸುಮ್ಮನಿಹ ಭೀಷ್ಮಕ ಕುರುಪ ತಿಯರ ಸಭೆಯಲೊಮ್ಮೆ ನಿಲಿಸಯ್ಯ ಹರಿಯೆ 2 ರಸನವು ಎನಗಿನ್ನು ಕೃಪೆಮಾಡಿದುದಕೆ ಗೋ ರಸವ ಕದ್ದು ಮೆಲುವ ಕಾಲದಲ್ಲಿ ಇಸಕೊಂಬ ಗೋವಳರ ಒಳಗೆ ಎನ್ನನು ಒಬ್ಬ ಶಿಶುವಿನ ಮಾಡಿ ಪುಟ್ಟಿಸು ಕಂಡ್ಯ ಹರಿಯೆ 3 ಎನಗೆ ತ್ವಗೇಂದ್ರಿಯವ ದಯಮಾಡಿದದಕಿನ್ನು ಕರ ಕಂಜರದಿ ಅನುವಾದಿಷ್ಟಕ ಭಾವ ಸರಯು ಯಮುನಾ ತೀರ ಜನಿತವಾಳುಕ ಭಾವವನು ಕೊಡು ಹರಿಯೆ 4 ನಾಶಿಕವು ಇತ್ತದಕೆ ಗೋಪಿಯ ವಿಹಾರದಿ ವಾಸುದೇವವಿಠಲ ನಿನ್ನ ಕೊರಳೊಳಿದ್ದ ಸೂಸಿ ಬಿದ್ದ ಮಾಲಿಕೆಯ ಕುಸುಮಂಗಳ ಬಲು ವಾಸನ ಲÉೂೀಲುಪ ಮಧುಕರ ಭಾವ ನೀಡೊ 5
--------------
ವ್ಯಾಸತತ್ವಜ್ಞದಾಸರು
ಬಂಡು ಮಾಡುವರಲ್ಲೊ ರಂಗೈಯ್ಯ ಪ ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ ಬಿಡುಗಂಣನಿವನೆಂಬರೋ ರಂಗೈಯ್ಯಾ 1 ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2 ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ ಕೋರೆದಾಡಿಯನೆಂಬರೊ ರಂಗೈಯ್ಯಾ 3 ತರಳನ ಸಲಹಲು ಸಿರಿಗೆ ಪೇಳದೆ ಬಂದ ಉರಿಮೋರೆಯವನೆಂಬರೊ ರಂಗೈಯ್ಯಾ 4 ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ ಕಪಟ ತಿರುಕನೆಂಬರೊ ರಂಗೈಯ್ಯಾ 5 ಪಿತನ ಮಾತನು ಕೇಳಿ ಮಾತೃಹತ್ಯವಗೈದ ಪತಿತ ಹಾರುವನೆಂಬರೊ ರಂಗೈಯ್ಯಾ 6 ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ ಹತಭಾಗ್ಯನಿವನೆಂಬರೊ ರಂಗೈಯ್ಯಾ 7 ನೆರೆಹೊರೆ ಹೆಂಗಳ ಸುರತದಿ ಕೂಡಿದ ಜಾರ ಚೋರನು ಎಂಬರೊ ರಂಗೈಯ್ಯಾ 8 ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9 ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ ದುಷ್ಟ ರಾಹುತನೆಂಬರೊ ರಂಗೈಯ್ಯಾ 10 ಕಂದಾ ನೀ ನಿರ್ದೋಷ ರಂಗೇಶವಿಠಲ ನೆಂದು ತಿಳಿದು ದೂರುವರೊ ರಂಗೈಯ್ಯಾ 11
--------------
ರಂಗೇಶವಿಠಲದಾಸರು
ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1 ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2 ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಪ ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ 1 ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ 2 ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ ನಾನೊ 3 ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು ಪ್ರೀತಿಯಲಿ ಅತಿಥಿಗಳ ವಂದಿಸದೆ ಯಾತಕ್ಕೆ ಬಾರದಾ ಚರಿತೆ ನಡೆವಂಥ ಚೇತನ ಕಲ್ಪಿಸಿದ ಕೃಷ್ಣನೊ ನಾನೊ 4 ಆವಾವ ದುಷ್ಕರ್ಮಗಳ ಮಾಡಿ ಉತ್ತಮ ದೇವ ಬ್ರಾಹ್ಮಣರ ಪೂಜಿಸಲಿಲ್ಲವು ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ 5
--------------
ವಿಜಯದಾಸ
ಬಂದಾಳು - ಬಂದಾಳು ಕನ್ನಿಕೆಯಾಗ || ಮೋಹನ್ನ ರೂಪದಿ ಪ ಪತಿ ಸುರವೃಂದ ಪೊರೆಯಲುಮಂದರಧರ ಆನಂದವ ಬೀರುತ ಅ.ಪ. ಪರಿ ಪರಿ ಭಾವದಿ 1 ಘಲು ಘಲ್ಲು ಘಲಿರೆನ್ನಲು ಗೆಜ್ಜೆಯನಾದ | ಅಸುರರಿಗುನ್ಮಾದ |ಕೆಲಸಾರಿ ಕೆಲ ಸಾರೆನ್ನುತಲೀ ನಾದ | ಆಯಿತು ವಿವಾದ ||ಘಳಿಗೆಯೊಳಮೃತದ | ಕಲಶ ಕನ್ನಿಕೆ ಕರತಲದೊಳಗಿರಿಸುತ | ಬಲು ಬಲು ವಂದಿಸೆ 2 ಸಾಲು ಸಾಲಾಗಿ ಕುಳ್ಳಿರಲಾಗ | ಕಣ್ಮುಚ್ಚಿರೆಂದಳಾಗ ಕಾಲಾಲಂದಿಗೆ ಝಣಿ ಝಣಿಸುವ ಸೋಗ | ಹಾಕಿದಳ್ ತಾನಾಗ | ಕೈಲಿ ಕಲಶ ಸೌಟು | ಚಾಲಿಸುತಲಿ ಸುರಪಾಳಯ ಕುಣಿಸುತ | ಜಾಲ ಮಾಡಿದ ಹೆಣ್ಣು3 ದಿವಿಜಾರ ಮಧ್ಯದಿ ರಾಹುವು ತಾನು | ಎತ್ತಲು ತನ ಗೋಣುರವಿಯು ಚಂದ್ರಮರ ಸೂಚನೆಗಳನು | ಅನುಸರಿಸುತ ಪೆಣ್ಣುಹವಣಿಸಿ ಚಕ್ರದಲವನ ಕೊರಳನೂಜವದಿ ಕಡಿಯೆ ಗ್ರಹವೆರಡೇರ್ಪಟ್ಟವು 4 ಸುರರು ಅಸುರರಿಗೇ | ಆದಾವು ಫಲ ಬೇರೊಬ್ಬಬ್ಬರಿಗೆ | ಸ್ವರ್ಯೂಪ್ಯೋಗ್ಯತೆಗೇ ||ವೇದ ವೇದ್ಯ ಗುರು ಗೋವಿಂದ ವಿಠಲನುಸಾಧು ಪೆಣ್ಣು ಸಮ ವೈಷಮ್ಯ ರಹಿತ 5
--------------
ಗುರುಗೋವಿಂದವಿಠಲರು
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು