ಒಟ್ಟು 2845 ಕಡೆಗಳಲ್ಲಿ , 111 ದಾಸರು , 1881 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ಬ್ರಹ್ಮಾಸ್ತ್ರಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ ಉಟ್ಟಿಹ ಕಾಶಿಯ ಉಡಿಗೆತೊಟ್ಟಿಹ ಎದೆ ಕಟ್ಟುಕಟ್ಟಿದ ಖಡ್ಗ ಕಠಾರಿರಕ್ತದ ತಿಲಕವಿಟ್ಟುಮುಷ್ಠಿಯಲಿ ಮುದ್ಗರ ಶೂಲಧನು ಶರವಳವಟ್ಟುಬಿಟ್ಟ ಕಂಗಳ ಕಿಡಿಯುಛಟಛಟ ಛಟವಿಟ್ಟು 1 ಏರಿಸಿ ಪಟ್ಟೆಯ ಹಲಗೆಎಡಬಲ ನೋಡದೆಹರಿಯ ಘನ ಶತ್ರುವಿನನಾಲಗೆ ಹಿಡಿದೆಳೆಯೆವೀರ ಮಂಡಿಯ ಹೂಡಿಅವುಡನೇ ಕಡಿಕಡಿದೇಹಾರಿಸಿದೆ ತಲೆಗಳನುಹಾ ಎನುತಲಿ ಬಿಡದೆ 2 ಮುಕುಟ ಕಾಂತಿಯಮಿಹಿರಕೋಟೆಯ ಕಳೆಯು ಹಳಿಯೆಲಕಲಕನೆ ಬೆಳಗುತಿಹಕುಂಡಲ ಸರಪಳಿಯೆಚಕಚಕನೆ ಮೂಗುತಿಯಮುತ್ತು ಹೊಳೆಹೊಳೆ ಹೊಳೆಯೇಸಬಲೆ ಎನಿಪ ಚಿದಾನಂದಬಗಳಾಂಬ ತಿಳಿಯೆ3
--------------
ಚಿದಾನಂದ ಅವಧೂತರು
ದುರಿತ ವಿನಾಶನಾ ದುರಿತ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಉದ್ಧಾರ ಸಂದೇಹ ಸಲ್ಲದಿದಕೆ ಪ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾಲಗ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ನಾರದನು ಧರೆಗಿಳಿದನು 1 ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ ಮೂವತ್ತೆರಡು ರಾಗಗಳಲಿದಿರುನಿಂದು ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ ಸುರರು ಶಿರವನೆ ತೂಗಲು2 ಅಚ್ಚುತನು ಪರಮ ಭಾಗವತನ್ನ ಭಕುತಿಗೆ ಮೆಚ್ಚಿದನು ಬೇಡುವುದು ವರವಧಿಕವೆಂದೆನಲು ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ- ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ 3 ವರ ಪಡೆದು ನಾರದನು ಇರುತಿರಲು ತಾವಿತ್ತ ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ ಪುರಂದರವೆಂಬ ನಗರಿಯಲ್ಲಿ ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ 4 ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ- ದೆಂದು ಇಂದಿರೆಪತಿಯು ದಯದಿಂದ ವಲಿದವರ ಕುಣಿಕುಣಿದು ನಂದವನೆ ತೋರಿಕೊಳು ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ ಪರ ಬೊಮ್ಮ ಬಂದು ಸಿಲುಕಿದನೆಂಬುವುದೆ ಇದಕೆ ಪ್ರಾಮಾಣ್ಯವೆಂದು ತಿಳಿದು ಸುಜನರು 5 ವಾಸವನೆ ಮಾಡಿದರು ಪ್ರಹ್ಲಾದನವತಾರ ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ ಪುರಂದರ ದಾಸರೆಂಬುವ ಪೆಸರಲಿ ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು ವಸಿಸಿದರು ಧರ್ಮಬಿಡದೆ 6 ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ ತಟಿನಿಗಳು ತಪಸು ಫಲವಾಯಿತೆಂದು ತಪನ ಕಾಲದಲೆದ್ದು ದಾಸರಾ ಸದನದಲಿ ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ ಸುಪಥವನು ಇಚ್ಛಿಸುವರು 7 ಅವರೆಂದ ವಚನಗಳೆÀಲ್ಲ ವೇದಾರ್ಥವಾಗಿ ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ ಭುವನ ನಿಧಿಯೊಳಗೆ ಮುಳುಗಿ ಪವನ ಮತವಿಡಿದು ಪರಿಪೂರ್ಣಮಾಚಾರದಲಿ ತವಕದಿಂದಲಿ ಹರಿಯ ಪಾದವನೆ ಪಡಕೊಂಡು ನವರೂಪಿನಲಿ ಇಪ್ಪರು 8 ಏನು ಇದು ಎಂತೆಂದು ದೂಷಿಸದಿರಿ ದಾಸರ ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ ಕಾಣುವಾ ಜನ ಲಾಲಿಸೆ 9
--------------
ವಿಜಯದಾಸ
ದೂಡು ಧನಮಾನಗರ್ವವ ಅಭಿಮಾನವೆಲ್ಲವ ತರವಲ್ಲವೋ ಪ ಶಮೆದಮೆವೈರಾಗ್ಯ ದೃಢವಾಗಿಹ ಶೃತಿವಿದಿತಾಗಿಹ ಘನ ವಿನಯಾದಿ ಸಾಧನೆ ಪರಮಾರ್ಥಕೆ ಬೇಕು ತಿಳಿ ಜೀವನೇ 1 ಪರಿ ಪ್ರಶ್ನೆಯಾ ಮಾಡು ನಿಜ ಶೋಧವಾ ನೀಡು ಶಿರವನ್ನು ಗುರು ಶಂಕರನ ಪಾದಕೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು ಎಂದು ತಿಳಿದೆಯಾ ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮಚಾರಿಯೆಂದರಿತೆನೊ 1 ಅಂಗಸಂಗ ಯಾಚಿಸಲು ಎನ್ನ ಅ ನಂಗನೆಂದು ಭ್ರಮಿಸಿದೆಯಾ ಸಂಗದಿಂದ ಪಾಪಭಂಗ ಮಾಡುವ ಅ ನಂಗಜನಕನೆಂದರಿತೆ 2 ಪತಿಯನು ಬಿಟ್ಟು ನೀ ಬಂದು ಬಾಲೆ ಪತಿತಳಾಗದಿರು ಇಂದು ಪತಿತ ಪಾವನ ಜಗತ್ಪತಿಯು ಎನಗೆ ನೀನೆ ಪತಿಯೆಂದು ತಿಳಿದು ಬಂದಿರುವೆ 3 ನಿಂದಿಸರೇ ನಿನ್ನ ಜನರು ಬಾಲೆ ಹಿಂದು ಮುಂದು ನುಡಿಗಳಲಿ ಮುಕುಂದನೆ ಪ್ರಿಯಳನು ನಿಂದಿಪ ಜನರೆಲ್ಲ ಮಂದಮತಿಗಳಲ್ಲವೇನೊ 4 ನಿನ್ನ ನಡತೆ ತರವಲ್ಲ ಬಾಲೆ ಚೆನ್ನಾಗಿ ಯೋಚಿಸು ಎಲ್ಲ ಇನ್ನು ತಾಳಲಾರೆ ಕನ್ಯೆಯ ಮೇಲೆ ಪ್ರ ಸನ್ನನಾಗೋ ಶ್ರೀಕೃಷ್ಣ 5
--------------
ವಿದ್ಯಾಪ್ರಸನ್ನತೀರ್ಥರು
ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ದೇವ ಬೆಳಗಾಯಿತೋ ಎನ್ನಯ ಸೇವಾ ಪ ಸ್ವೀಕರಿಸೋ ಮಹಾನುಭಾವ ದೇವ ಅ.ಪ ಮಧುರ ಗಾನವೇ ಗಂಗಾಸ್ನಾನ ಹೃದಯ ಶುದ್ಧಿಯೇ ಬದರಿಸ್ನಾನ ಬದಿಯಲಿರುವ ಭಕುತರ ಸಹವಾಸವೇ ನದಿನದಗಳವಗಾಹನ ಸ್ನಾನವೋ 1 ಹಾಲಿಗೆ ಕರದಲಿ ಥಾಲಿಯ ಪಿಡಿದು ಕೋಲಾಹಲ ಕಲಭಾಷಣ ಮಾಡುವ ಬಾಲರ ನಗುಮೊಗ ನೋಡಲು ಕೃಷ್ಣನ ಲೀಲೆಯ ಸಂದರ್ಶನಾನಂದವೋ 2 ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಕುಸುಮ ರಾಶಿಯ ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3 ತಾತನೆಂದು ಮೊರೆಯಿಡುವರು ನೀ ಅನ್ನ ದಾತನೆಂದು ಮೊರೆಯುತಿಹರೋ ತಾತನ ಕಿವಿಗೀ ಮಾತನು ತಿಳಿಸಲು ದೂತನು ನಾ ಕಾದಿಹೆನೊ ಪ್ರಸನ್ನನೇ 4
--------------
ವಿದ್ಯಾಪ್ರಸನ್ನತೀರ್ಥರು
ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ದೇವತಾಸ್ತುತಿಗಳು ಅಂಧನೋ ನಾ ಬಲು ಅಂಧನೊ ಪ ಸುಂದರವಾದ ಹೃನ್ಮಂದಿರದಲಿ ನಿನ್ನಸುಂದರಮೂರ್ತಿಯ ಕಣ್ದೆರದು ಕಾಣದ ಅ.ಪ. ಕುಹಕ ಚಿಂತಿಸುವಅಹುದು ಸಜ್ಜನನೆಂದು ಬಹುಜನ ನುಡಿಯಲುಮಹಮೋದ ಮಡುವಿನೊಳ್ ಮಹದಜ್ಞನೆನಿಸಿದ 1 ವಿಷಮ ದುರ್ವಿಷಯಗಳಲಿ ಮನ ಹೊಗಿಸೀವಿಷವೆಂದು ತಿಳಿದು ವಿಷಯ ಸೇವಿಸೀಅಸಮ ಮಹಿಮ ನಮ್ಮ ಝಷಕೇತು ಜನಕನವಿಷಯಗಳ ಬಹು ವಿಷಯೀಕರಿಸಿದಂಥ 2 ಮಾನವ ನಾ3
--------------
ಗುರುಗೋವಿಂದವಿಠಲರು
ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ದೇವರ ದಿವ್ಯಗುಣಗಳ ಪೊಗಳುವದು ಜೀವರಿಗಿದುವೆ ಪ್ರಯೋಜನವು ಪ ಭಾವದಿ ತೋರುವ ವಿಷಯಗಳೆಲ್ಲವು ಭಕ್ತಿಯೊಳರಿತು ಸಮರ್ಪಿಸುತಂ ಅ.ಪ ನಡೆವದು ನುಡಿವದು ಕೊಡುವದು ಬಿಡುವದು ಒಡೆಯ ಹರಿಯ ಪ್ರೇರಣೆಯೆಂದು ದೃಢಮನದಲಿ ತಿಳಿದಾವಾಗಲು ತಾ ಮೃಢ ಸಖನಡಿ ಧ್ಯಾನಕೆ ತಂದು 1 ಅರಿಯದೆ ಪಾಮರರೊರಲುವ ಬೋಧೆಯ ತರತರದಿ ತಿರಸ್ಕರಿಸುತಲೀ ಭವ ಭಯಗಳನೀಡಾಡುತಲಿ 2 ಜನನ ಮರಣ ದೂರ ಪರಾತ್ಪರ ಪಾ- ವನ ಚರಿತ್ರ ಭಾಸುರ ಗಾತ್ರಾ ವನಜನಯನ ಗುರುರಾಮವಿಠಲ ಎಂ- ದನುದಿನ ಭಜಿಸುವನೆ ಪವಿತ್ರ 3
--------------
ಗುರುರಾಮವಿಠಲ
ದೇಶ ತಿರುಗಿಸಿ ಪರದೇಶಿ ಮಾಡಲು ಬೇಡೋ ಈಶ ನೀ ಘನ್ನಾ ಸಂಪನ್ನಾ ಪ ಜನಕನಂಶದಿ ಧ್ರುವನು ಸನುಮತವ ಮಂಡಿಸಲು ಘನರೋಷ ತಾಳಿ ಮಲಜನನಿ ಧೂರ್ತೆ ದೂಡಲು ವನವಾಸ ಲೇಸೆಂದು ತಿಳಿದು ನಿನ್ನ ನೆನೆಯೆ ತಾ ನಡೆದ ಘನಮಹಿಮ ಶ್ರೀಮನ್ನಾರಾಯಣ ಸ್ಥಿರಪಟ್ಟವ ನಾಡಿದ 1 ಖಳ ಕುರುಪಗೊಡೆತನವು ಭಲೆ ಧರ್ಮಗೆ ವನವಾಸವು ಬಲು ಮಾನವಂತೆ ದ್ರೌಪದಿಯು ಜಲಜನಾಭನೆ ನೀನೆ ಗತಿಯೆನಲು ಒಲಿದು ಬೆಂಬಲನಾಗಿ ಪಾಂಡವರ ಪೊರೆದೆ 2 ವರಮುನಿಯ ಶಾಪದಿಂದರಸನಿಂ ಪ್ರದ್ಯುಮ್ನ ಕರಿರಾಜನಾಗಿ ಮಡುವೊಳು ಕ್ರೀಡಿಸೆ ಭರದಿ ನೆಗಳಿಯು ಪೀಡಿಸೆ ಶ್ರೀ- ಹರಿಯೆಂದು ಮೊರೆಯಿಡÀಲು ಶ್ರೀ- ಕರದಿಯುದ್ಧರಿಸಿದೆ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು ಮಾ 1 ಆತನೇ ಶ್ರೀಹರಿಭಕ್ತನು ಮಾ2 ಲಿಂಗವಂತನು ಮಾ3 ಷಟಸ್ಥಳ ಶೋಧಿಸಿ ಸಾಧಿಸಿ ತಿಳದಿಹ ಆತನೆ ಶೀಲವಂತನು ಮಾ 4 ಶುದ್ಧಾತ್ಮ ಶಿವತತ್ವ ಸೂತ್ರವ ತಿಳದಿಹ ಆತನೆ ಶಿವಭಕ್ತನು ಮಾ 5 ದೃಢ ನಿರ್ವಾಣೆಯು ಮಾ 6 ಆತನೆ ಮಹಾಪಂಡಿತನು ಮಾ 7 ಆತನೆ ಆಚಾರ ನಿಷ್ಠನು ಮಾ 8 ಐದು ತತ್ವದ ಗತಿಗಳ ತಿಳದಿಹ ಆತನೆ ಮಹಾ ವೈದಿಕನು ಮಾ 9 ಪಂಚ ಮುದ್ರೆಯ ಸ್ಥಾನವು ತಿಳದಿಹ ಆತನೆ ಸುಬ್ರಾಹ್ಮಣನು ಮಾ 10 ಗುರುವೆಂದರುವದು ಮಾ 11 ಆತನೆ ಸಿದ್ದ ಶರಣನು ಮಾ 12 ಆತನೆ ಮಹಾ ಸತ್ಪುರುಷನು ಮಾಟ 13 ಆತನೆ ವರಗುರು ಮೂರ್ತಿಯು ಮಾ 14 ಅವತಾರ ಮಹಿಮನು ಮಾ 15 ಆತನೆ ಸಾಧು ಸಂತನು ಮಾ 16 ಸದ್ಗುರು ಮೂರ್ತಿಯು ಮಾ 17 ಮಹಾ ಜ್ಞಾನಿಪುರುಷನು ಮಾ 18 ಮರುಳಮಂಕ ಮನುಜರು ಮಾ 19 ಆತನೆ ಶ್ರೀ ಗುರುದಾಸನು ಮಾ 20 ಮಹಿಪತಿ ಭವನಾಶವಾಯಿತು ಮಾ 21
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇಹದ ಭಾವಾ ಮೋಹವಾ ಕಳೆ ನಾನೀನೆನ್ನುವ ಭೇದವಾ ಪ ತನು ಮೂರರ ಸಾಕ್ಷೀ ನೀನಿಹೆ ಘನ ಚಿನ್ಮಯರೂಪಾ ನೀನಿಹೆ ಅನುಮಾನಿಸದೀಪರಿ ಯೋಚಿಸು ನೀ ಮನವಾರೆ ಇದೇ ನಿಜವೆಂದೆನುತಾ ಅನುದಿನದಲಿ ನಿಶ್ಚಯಗೊಳಿಸುತಲಿ ಅನುಭವದಲಿ ತಿಳಿ ಈ ಬೋಧವಾ ಕಳೆ ನಾನೀನೆನ್ನುವ ಭೇದವಾ 1 ಇದು ತೋರಿ ಅಡಗುವಾ ಕಲ್ಪನೆ ಅದು ತೋರಿಕೆಯಳಿದ ಆತ್ಮನೇ ಪರಿ ಈ ಜಗವೆಲ್ಲ ಅದು ನೀನಿರುವಿ ಇದು ನೀನಲ್ಲ ಇದೆ ತಿಳಿವಿಕೆಯಿಂದಲಿ ಮುಕುತಿ ಕಣಾ ಇದೆ ಶಂಕರಗುರುವಿನ ಬೋಧವಾ ತಿಳಿದಾನಂದಿಸು ನೀನೇ ಶಿವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ