ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇಕೆ ಯಮನ ಬಾಧೆಗಳು? |ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2ಹದಿನಾಲ್ಕು ಲೋಕವಾಳುವ - ನಮ್ಮ |ಮದನಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3
--------------
ಪುರಂದರದಾಸರು
ಇರಬರಲಿಲ್ಲ ಬಂದರು ಇರಲಿಲ್ಲ ಈಶರೀರ ಯಮನವಶಹರಿಮೊರೆ ಹೋಗು ನೀಪ.ಘಟಪಟಗಳಿವು ದಿಟಕೀಟಕ ಹೂವು ಕಪಟನಾಟಕನಪಾದಬಿಟ್ಟು ಕೆಟ್ಟೆಯಲ್ಲೊ1ನಗುನಗುತಭವಸೊಗಸೆಂದು ಸವಿವೆ ಬಹುತಗೆಬಗೇಸಯ್ಯ ನಿನಗೆ ಭವದ ಭಯ 2ಶರಣರ ಕಂಡು ಜರಿದರೆ ಕೇಡು ತಂದೆಸಿರಿಪ್ರಸನ್ನವೆಂಕಟ ಅರಸನ್ನ ನಂಬು 3
--------------
ಪ್ರಸನ್ನವೆಂಕಟದಾಸರು
ಇಲ್ಲಿಯೇ ಕುಳಿತಿದ್ದ ಭೂತವು - ಒಂದುಹಲ್ಲಿಯು ನುಂತು ಹದಿನಾಲ್ಕು ಲೋಕವ............. ಪಸೂಳೆಯ ಮನೆಯಲಿ ಇದೆಯೊಂದು ಕೋಳಿ |ಕೋಳಿಯ ನಾಲಗೆ ಏಳು ತಾಳೆಯುದ್ಧ ||ಕೋಳಿ ನುಂಗಿತು ಏಳು ಕಾಳಿಂಗ ನಾಗನ |ಮೇಲೊಂದು ಬೇಡಿತು ಸಿಂಹದ ಮರಿಯ 1ಕಾನನದೊಳಗೊಂದು ಇರುವದು ಕೋಣ |ಕೋಣನ ಕೊರಳಿಗೆ ಮುನ್ನೂರು ಬಾವಿ ||ಕೋಣ ನೀರಿಗೆ ಹೋಗಿಕ್ಷೋಣಿ ಕಪಿಯ ಕೊಂದು |ಟೊಣ್ಣನ ಮನೆಯೊಳಗೌತನವಯ್ಯ...................... 2ವುಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |ಪಕ್ಷಿಭಕ್ಷಣವಾದ ಅಮೃತದ ಹೆಣ್ಣು ||ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |ಶಿಕ್ಷೆಯ ಮಾಡಿದ ಪುರಂದರವಿಠಲ............ 3
--------------
ಪುರಂದರದಾಸರು
ಇಲ್ಲೆ ಕರೆಯ ಬ್ಯಾಡ ಕ್ಷುಲ್ಲಕರ ತಾಸುನಿಲ್ಲಿಸಿ ಹಾಸ್ಯ ಮಾಡಿ ಅಕ್ಕಯ್ಯ ಪ.ನಲ್ಲೆ ದ್ರೌಪತಿ ನಿನ್ನ ನಿಲ್ಲಿಸಿದವಗುಣಎಲ್ಲಮನಕೆತಾರೆ ಅಕ್ಕಯ್ಯ 1ವÀಂಚಕ ಗುಣದವರ ಮುಂಚೆ ನಿಲ್ಲಿಸಬೇಕುಪಾಂಚಾಲಿಬೇಡಿಕೊಂಬೆ ಅಕ್ಕಯ್ಯ 2ಬೂಟಕಗುಣದವರಪಾಟುಬಡಿಸುವಿ ತಾಸÀುಕೋಟಿ ಜನರು ನೋಡ ಅಕ್ಕಯ್ಯ 3ಗರುವಿನ ಗೊಂಬೆಯರ ಹಿರಿಯತನ್ಹಾಂಗಿರಲಿಕರವಮುಗಿಯೋಣವಂತೆ ನಾಳೆಗೆ ಅಕ್ಕಯ್ಯ4ಕೃಷ್ಣನ ಮಡದಿಯರ ಶ್ರೇಷ್ಠತನ ಹಾಂಗಿರಲಿಸಾಷ್ಟಾಂಗಕ್ಕೆರಗೋಣವಂತೆ ನಾಳಿಗೆ ಅಕ್ಕಯ್ಯ 5ನಿಂದಕರನ ತಾಸು ನಿಂದಿಸೋದುಚಿತವಂದಿಸುವೆನು ನಿನಗೆ ಅಕ್ಕಯ್ಯ 6ಸಿರಿರಮಿ ಅರಸನು ಭರದಿ ನಗುವಂತೆಇವರ ಗರವು ಮುರಿಯಬೇಕು ಅಕ್ಕಯ್ಯ 7
--------------
ಗಲಗಲಿಅವ್ವನವರು
ಇವ ಬಲು ಕಳ್ಳ ನಮ್ಮಮಾಧವಬಲು ಸುಳ್ಳನವನವÀ ಗುಣಗಳ ಹಿಡಿಸಿದನ್ಹಳ್ಳ ಪ.ನಿತ್ಯತೃಪ್ತನೆಂಬೊ ಸ್ತುತ್ಯಾರ್ಥ ನಿನ್ನ ಬಿಟ್ಟುಎತ್ತ ಹೋದವಯ್ಯ ನಮಗ್ಹೇಳೊ ಯದುಪತಿಎತ್ತ ಹೋದವಯ್ಯ ನಮಗ್ಹೇಳೊ ಯದುಪತಿತುತ್ತನ್ನ ನಿನಗೆ ಫನವೇನೊ ಯದುಪತಿ 1ಮುನ್ನಶಬರಿ ಎಂಜಲಪನ್ನಿಪಾವನ್ನೊ ನಿನಗೆಅನಸ್ತಾವೆಂಬೊ ಶೃತಿಗಳು ಯದುಪತಿಅನಸ್ತಾವೆಂಬೊ ಶೃತಿಗಳು ಹೊಗಳುತ ನಿನ್ನಲ್ಲೆಹ್ಯಾಂಗ ಇರಬೇಕೊ ಯದುಪತಿ 2ಪಟ್ಟದ ರಾಣಿ ಲಕುಮಿ ಎಷ್ಟು ಗುಣವಂತಳಲ್ಲೊಅಷ್ಟು ಭಾವದಲೆ ಚಲುವಳೊ ಯದುಪತಿಅಷ್ಟು ಭಾವದಲೆ ಚಲುವಳೊಕುಬ್ಜಿಯಂಥಸೊಟ್ಟ ಹೆಣ್ಣಿಗ್ಯಾಕೆ ಮನಸೋತೆÀ್ಯೂ ಯದುಪತಿ 3ಎಷ್ಟು ಸೃಷ್ಟಿಯ ಮಾಡಿಪುಟ್ಟ ಲವಕುಶರ ಪಡೆದಿಸೃಷ್ಟಿ ಮಾಡಿದ್ದು ಮರೆತೆನೊ ಯದುಪತಿಸೃಷ್ಟಿ ಮಾಡಿದ್ದು ಮರೆತೆನೊ ನಾಭಿಯಲ್ಲಿಪುಟ್ಟಿದ ಬೊಮ್ಮನಗುತಾನೊ ಯದುಪತಿ 4ರುದ್ರನ ಭಜನೆ ಮಾಡಿ ಪ್ರದ್ಯುಮ್ನನ ಪಡೆದಿವಿದ್ವಜ್ಜನರೆಲ್ಲ ನಗುತಾರೊ ಯದುಪತಿವಿದ್ವಜ್ಜನರೆಲ್ಲ ನಗುತಾರೊ ಶ್ರೀಧ ಶ್ರೀಧವಿದ್ಯವನೆÀಲ್ಲ ಮರೆತೇನೋ ಯದುಪತಿ 5ಸ್ವರಮಣನೀನೆಂಬೊ ಸ್ವರ ಗೈವ ಶೃತಿಗಳುಹರಿದಾವೇನೊ ಜಲದೊಳುಹರಿದಾವೇನೊ ಜಲದೊಳು ಗೊಲ್ಲತಿಯರ ಬೆರೆದಕಾರಣವ ನಮಗೆ ಹೇಳೊ ಯದುಪತಿ 6ಧೀರ ಗಂಭೀರನೆಂದು ಸಾರುವ ಶೃತಿಗಳುಹಾರಿದವೇನೊ ಮುಗಿಲಿಗೆಹಾರಿದವೇನೊ ಮುಗಿಲಿಗೆ ರಮಿಯರಸುಪೋರತನವೆಂದು ನಗತಾರೊ ಯದುಪತಿ 7
--------------
ಗಲಗಲಿಅವ್ವನವರು
ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು
ಈ ಕಾರಣ ಹರಿನಾಮವ ನೆನೆಯಲಿಬೇಕಾಲಸ್ಯವಿಲ್ಲದಲೆಭೀಕರ ಯಮಭಟರಂತ್ಯದಿ ಕವಿಯಲಿನೂಕುವುದೀ ಅಸ್ತ್ತ್ರದಲಿ ಪ.ಷೋಡಶ ಉಪಚಾರದ ಪೂಜಾವಿಧಿಮಾಡುವ ಪಕ್ವಗೆ ಸಾಧ್ಯ ತಾಮಾಡೇನೆಂದರಗಾಧಮಾತಾಡಿದರೇನದಸಾಧ್ಯರೂಢಿಲಿ ಶ್ರೀಹರಿಗುಣ ಸಂಕೀರ್ತನೆಪಾಡಿದರತಿ ಆಹ್ಲಾದ 1ಸುಜ್ಞಾನಿಗಳ್ಹರಿ ಮೆಚ್ಚಿಸಿದರೆ ಅನಭಿಜÕರಿಗೆಲ್ಲಿಯ ಜ್ಞಾನಭವಸುಗ್ಗಿಯೊಳೆಲ್ಲಿ ಧ್ಯಾನ ವೈರಾಗ್ಯದ ನಡೆಯು ಕಠಿಣ ಅನಘ್ರ್ಯದ ಭೋಜನ ದೊರೆತಿದೆ ಹರಿನಾಮಂಗಳೆ ಅಮೃತದ ಪಾನ 2ಈ ಜನುಮವು ಜಗುಳುವ ಮುನ್ನಖಗರಾಜಗಮನ ರಂಗನ್ನ ಸರ್ವದಾ ಜಪಿಸುವನೆ ಧನ್ಯ ಸುಖಬೀಜವಿದೆನ್ನಿತ್ರಿಜಗತ್ಪತಿ ಪ್ರಸನ್ವೆಂಕಟರಾಯನಸೋಜಿಗನಾಮಂಗಳಣ್ಣ3
--------------
ಪ್ರಸನ್ನವೆಂಕಟದಾಸರು
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |ಮಾಧವನೆ ಇಂದಲ್ಲ ಜನುಮ ಜನುಮದಲೀ ಪಮಾತಾ ಪಿತರರ ಆಜೆÕ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||ಈತುಚ್ಛವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ 1ಹರಿದಿನದಲಿ ಬಿಂದುಉದಕಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ 2ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ 3ಉತ್ತಮರ ಪೂಜೆಗೆಜಾಗುಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||ನಿತ್ಯಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ 4ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನಭಕುತಿಯನ್ನು ಕೊಡಲಿಬೇಡ 5
--------------
ಪ್ರಾಣೇಶದಾಸರು
ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ ದುರ್ಗದಿ ||ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1ದಾರಿಯಲಿ ಹೋಗಿ ಬರುವವರಉಪಟಳಘನ|ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |ಮಿರಿ ನಿನ್ನಲಿ ಮನವನೂರಿ ನಿಲಗೊಡರು 2ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |ಸ್ವಾಮಿತ್ವವೋನೋಡುಮನೆಮನೆಯಲಿ ||ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |ಪಾಳೆಯವನೊಪ್ಪಿಸಿ ಕೊಡುವೆವೆಂದು ||ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |ಅನುವಾದ ದಿವಸವೊಂದಾದರಿಲ್ಲ ||ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |ಅನುಗಾಲಬದುಕುವೆನೊ ಪುರಂದರವಿಠಲ7
--------------
ಪುರಂದರದಾಸರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |ವಾಸುದೇವನ ನೆನೆದು ಸುಖಿಯಾಗು ಮನವೆ ಪ.ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |ಮೇಲೆ ಜವ್ವನ ಹೋಗಿ ಜರೆಯಾದಗಿತು ||ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1ದಂತಗಳು ಸಡಿಲಿದುವು ಧಾತುಗಳು ಕುಂದಿದುವು |ಕಾಂತೆಯರುಜರಿದು ಓಕರಿಸುವರು ||ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |ಸಾರುತಿದೆ ನೀ ಮೆಚ್ಚಿ ಮರುಳಾಗದೆ ||ಶ್ರೀರಮಣ ಪುರಂದರವಿಠಲನ ನೆನೆ ನೆನೆದು |ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3
--------------
ಪುರಂದರದಾಸರು
ಈ ಸಮಯಕಲ್ಲದಿನ್ನೆಲ್ಲಿ ಕಾಯೊದೋಷರಹಿತ ವಸುದೇವ ನೀ ಕಾಯೊ ಕೃಷ್ಣ ಪನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೊ |ಎನ್ನಸತಿಸುತರು ನಿನ್ನವರೆ ಕಾಯೊ ||ನೀನಲ್ಲದನ್ಯರನು ಕಾಣೆ ಕವಳಿಯ ಕಾಯೊ |ಮುನ್ನ ಸ್ಥಿರವಾಗಿ ನೀನೆಂಬೆ ಕಾಯೊ 1ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೊ |ದುರಿತದುಷ್ಕರ್ಮ ಮುಂಚಿಲ್ಲ ಕಾಯೊ ||ಕರೆಕರೆಯ ಸಂಸಾರಕಷ್ಟು ಕಡಲಿಯ ಕಾಯೊ |ದುರಿತಭವಶರಧಿಗೆ ತಾರೆ ಕಾಯೊ2ತ್ರಿವಿಧಪಾಪಂಗಳಿಗೆ ಪದವು ಉದ್ದಿನ ಕಾಯೊ|ಭವಸಾಗರದೊಳೀಸೆಂಬೆ ಕಾಯೊ ||ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೊ |ನವ ಮುಕ್ತಿಪುರಂದರವಿಠಲ ನೀ ಬಿಡದೆ ಕಾಯೊ3
--------------
ಪುರಂದರದಾಸರು
ಈ ಸಿರಿಯ ನಂಬಿ ಹಿಗ್ಗಲಿ ಬೇಡ ಮನವೇ ಪ.ವಾಸುದೇವನ ಭಜಿಸಿ ಸುಖಿಯಾಗು ಮನವೇ ಅಪಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ 1ವೈಕುಂಠನ ಭಜಿಸು ನೀ ಭ್ರಷ್ಟ ಮನವೆ 2ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ* 3
--------------
ಪುರಂದರದಾಸರು
ಈಗ ಕಾಯೋ ಎನ್ನ ಜೀಯಾ ಪತ್ಯಜಾನೆಗೈಸಿ ಎನ್ನ- ನಿಜಾಮನದಿಪಾದಭಜಾನೆಗೈವಂತೆ - ನಿಜಾಮನವನಿತ್ತು 1ಮರೂಳು ಭವದೊಳು - ಉರೂಳುತೀಪರಿತರಾಳೆ ಸಂಗದಿ ಮನ - ಮರೂಳುಗೊಂಡೆನೊ 2ದಾತಾನೀನೆ ಎನ್ನಾ ಇನ್ನಾತಾತಾಗುರುಜಗನ್ನಾಥಾ ವಿಠಲಪಾದಪಾಥೋಜ ಮನ ನಿಕೇತನದಲಿ ತೋರಿ 3
--------------
ಗುರುಜಗನ್ನಾಥದಾಸರು
ಈಗಲೆ ಭಜಿಸಲೆಜಿಹ್ವೆ - ನೀ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಾಗುಮಾಡದೆಶ್ರೀ ಹರಿಪಾದಾಂಬುಜವಪ.ದೇಹದೇಹ ಸಂಬಂಧಿಗಳು - ಅವರು |ಮೋಹಬದ್ಧರಾಗಿ ಕುಳಿತಿಹರು ||ಆಹಾರ ಗುಹ್ಯೇಂದ್ರಿಯವೆಂಬ ಎರಡರ |ಬೇಹಾರದಲಿ ನೀನು ಮುಳುಗಿಸದಲೆ ಮನ 1ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |ತರುಣಿ ಪುತ್ರ ಮಿತ್ರರಳುತಿರಲು ||ಕೊರಳೊಳು ಗುರುಗುರು ಗುರುಗುಟ್ಟುವಾಗನರ - |ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2ಅಸಿಪತ್ರವನದೊಳು ಹೊಗಿಸಿ - ನಿನ್ನ - |ಬಸೆವಸೆಖಂಡ ಹೊರವೊಡಿಸಿ |ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |ಕುಸುಮನಾಭನ ನಾಮ ನೆನೆಯಗೊಡದು ಮನ 3ತಪ್ತಲೋಹದ ಮೋಲೊರಗಿಸಿ - ನಿನ್ನ - |ಕತ್ತರಿಸಿದ ಖಂಡ ಬೇಯಿಸುವರು ||ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |ಚಿತ್ತಜನಯ್ಯನ ನೆನೆಯಗೊಡದು ಮನ 4ಕುಂಭಿಪಾಕದೊಳಗೆ ಕುದಿಸಿ - ನಿನ್ನ |ಅಂಬುಮೊನೆಗಳಿಂದಿರಿಯಿಸಿ ||ಅಂಬರಕೊಗೆಯ ಕಾಗೆಯು ಕಚ್ಚಿ ಕಡ್ಞಿಗ |ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5ದುರುಳ ಯವದೂತರಾರ್ಭಟಿಸಿ - ನಿನ್ನ - |ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||ಪರಿಪರಿ ಭವದೊಳು ಬಳಲಿಸುತಿರುವಾಗ |ಪುರುಷೋತ್ತಮನ ನಾಮ ನೆನೆಯಗೊಡದು ಮನ 6ದುರಿತಕೋಟಿಗಳ ಹರಿಸುವ - ನಿನ್ನ - |ನರಕಬಾಧೆಗಳ ತಪ್ಪಿಸುವ ||ಪರಮ ಪುರುಷ ನಮ್ಮ ಪುರಂದರವಿಠಲನ |ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7
--------------
ಪುರಂದರದಾಸರು