ಒಟ್ಟು 1946 ಕಡೆಗಳಲ್ಲಿ , 107 ದಾಸರು , 1460 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು ಜ್ಞಾನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ 1 ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ2 ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು ವಿಷವುಂಬ ಪಾತಕಿಗೆ 3 ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ ಮತ್ತೆ ಕುಲಹೀನದಲಿ ಅನ್ನ ತಿಂದು ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ 4 ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ಕಾಯ ವಿಜಯವಿಠ್ಠಲರೇಯ ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು 5
--------------
ವಿಜಯದಾಸ
ಫಲವಿದು ಬಾಳ್ದ್ದುದಕೆ ಪÀ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ ಅ.ಪ. ಸ್ವೋಚಿತ ಕರ್ಮಗಳಾಚರಿಸುತ ಬಹು ನೀಚರಲ್ಲಿಗೆ ಪೋಗಿ ಯೊಚಿಸದೆ ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪುದೆ 1 ನಿಚ್ಚ ಸುಭಕುತಿಯಲಚ್ಯುತನಂಘ್ರಿಗ ತುಚ್ಚ ವಿಷಯಗಳ ಇಚ್ಛಿಸದೆ ಯ ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2 ಮನೋವಾಕ್ಕಾಯದನುಭವಿಸುವ ದಿನ ದಿನದಿ ವಿಷಯ ಸಾಧನಗಳಿಗೂ ಅನಿಶಾಂತರ್ಗತ ವನರುಹದಳ ಲೋ ಚನಗರ್ಪಿಸಿ ದಾಸನು ನಾನೆಂಬುದೇ 3 ವಾಸವ ಮುಖ ವಿಬುಧಾಸುರ ನಿಚಯಕೆ ಈ ಸಮಸ್ತ ಜಗಕೀಶ ಕೇಶವಾ ನೀಶ ಜೀವರೆಂಬ ಸುಜ್ಞಾನವೆ 4 ಪಂಚ ಭೇದಯುತ ಪ್ರಪಂಚವು ಸತ್ಯ ವಿ ಭವ ಮುಖ ಬಲಿ ವಂಚಕಗೆ ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದ ಲಾಂಭಿತನಹುದೆ 5 ಪಂಚ ಋತುಗಳಲಿ ಪಂಚಾಗ್ನಿಗಳಲಿ ಪಂಚ ಪಂಚರೂಪವ ತಿಳಿದು ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ ಪಂಚ ಕರಣದಲಿ ಪಂಚಕನರಿವುದೆ 6 ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ ಸದನ ಹೆಗ್ಗದವ ಕಾಯುವುದೆ 7 ಪಾತ್ರರ ಸಂಗಡ ಯಾತ್ರೆ ಚರಿಸುತ ವಿ ಧಾತೃ ಪಿತನ ಗುಣ ಸ್ತೋತ್ರಗಳಾ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೆದು ಪರತ್ರವ ಪಡೆವುದೆ 8 ಹಂಸ ಮೊದಲು ಹದಿನೆಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ ಸಂಸೇವಿಸುವ ಮಹಾಪುರುಷರ ಪದ ಪಾಂಸುವ ಧರಿಸಿ ಅಸಂಶಯನಪ್ಪುದೆ 9 ವರ ಗಾಯಿತ್ರೀ ನಾಮಕ ಹರಿಗೀ ರೆರಡಂಘ್ರಿಗಳ ವಿವರವ ತಿಳಿದು ತರುವಾಯದಿ ಷಡ್ವಿಧ ರೂಪವ ಸಾ ಅನುದಿನ ಧ್ಯಾನಿಸುತಿಪ್ಪುದೆ 10 ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ ನಗೆ ಮೊಗದಿಂ ರೋಮಗಳೊಗೆದು ಮಿಗೆ ಸಂತೋಷದಿಂ ನೆಗೆದಾಡುತ ನಾ ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11 ಗೃಹಕರ್ಮವ ಬ್ಯಾಸರದಲೆ ಪರಮೋ ತ್ಸಹದಲಿ ಮಾಡುತ ಮೂಜಗದ ಮಹಿತನ ಸೇವೆ ಇದೆ ಎನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪುದೆ12 ಕ್ಲೇಶಾನಂದಗಳೀಶಾಧೀನ ಸ ಮಾಸಮ ಬ್ರಹ್ಮ ಸದಾಶಿವರೂ ಈಶಿತವ್ಯರು ಪರೇಶನಲ್ಲದೆ ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13 ಏಕೋತ್ತರ ಪಂಚಾಶದ್ವರ್ಣಗ ಳೇಕಾತ್ಮನ ನಾಮಂಗಳಿವು ಸಾಕಲ್ಯದಿಯಿವರರಿಯರೆಂಬುದೆ 14 ಒಂದು ರೂಪದೊಳನಂತ ರೂಪವು ಪೊಂದಿಪ್ಪವು ಗುಣಗಳಾ ಸಹಿತ ಇಂದು ಮುಂದೆಂದಿಗು ಗೋ ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15 ಮೇದಿನಿ ಪರಮಾಣಂಬು ಕಣಂಗಳ ನೈದಬಹುದು ಪರಿಗಣನೆಯನು ಮಾಧವನಾನಂದಾದಿ ಗುಣಂಗಳ ನಾದಿ ಕಾಲದಲಿ ಅಗಣಿತವೆಂಬುದೆ 16 ಹರಿಕಥೆ ಪರಮಾದರದಲಿ ಕೇಳುತ ಮರೆದು ತನುವ ಸುಖ ಸುರಿವುತಲೀ ಉರುಗಾಯನ ಸಂದರುಶನ ಹಾರೈ ಸಿರುಳು ಹಗಲು ಜರಿ ಜರಿದು ಬಾಳ್ವುದೆ 17 ಆ ಪರಮಾತ್ಮಗೆ ರೂಪದ್ವಯವು ಪ ರಾಪರ ತತ್ತ್ವ ಗಳಿದರೊಳಗೆ ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ ವ್ಯಾಪಿಸಿಹನೆಂದೀಪರಿ ತಿಳಿವುದೆ 18 ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ ನಸರೊಳು ನಿಂದು ನಿಯಾಮಿಸುತಾ ವಾಸುದೇವ ತಾ ವಿಷಯಂಗಳ ಭೋಗಿಸುವನೆಂದರಿವುದೆ 19 ಮೂಜಗದೊಳಗಿಹ ಭೂ ಜಲ ಖೇಚರ ಈ ಜೀವರೊಳೊ ಮಹೌಜಸನ ಪೂಜಿಸುತನುದಿನ ರಾಜಿಸುತಿಪ್ಪುದೆ 20 ಗುಣಕಾಲಾಹ್ವಯ ಆಗಮಾರ್ಣವ ಕುಂ ಭಿಣಿ ಪರಮಾಣ್ವಾಂಬುಧಿಗಳಲಿ ವನಗಿರಿ ನದಿ ಮೊದಲಾದದರೊಳಗಿಂ ಧನಗತ ಪಾವಕನಂತಿಹನೆಂಬುದೆ 21 ಅನಳಾಂಗಾರನೊಳಿದ್ದೋಪಾದಿಯ ಲನಿರುದ್ಧನು ಚೇತನರೊಳಗೆ ಕ್ಷಣ ಬಿಟ್ಟಗಲದೆ ಏಕೋ ನಾರಾ ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22 ಪಕ್ಷಗಳಕ್ಷಿಗಳಗಲದಲಿಪ್ಪಂ ತ್ಯಕ್ಷರ ಪುರುಷನಪೇಕ್ಷೆಯಲಿ ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23 ಕಾರಣ ಕಾರ್ಯಾಂತರ್ಗತ ಅಂಶವ ತಾರಾವೇಶಾಹಿತ ಸಹಜಾ ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ ಕಾರವಿಲ್ಲದಲೆ ತೋರುವನೆಂಬುದೆ 24 ಸ್ತುತಿಸುತ ಲಕ್ಷ್ಮೀ ಪತಿಗುಣವ ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25 ಪವನ ಮತಾನುಗರವ ನಾನಹುದೆಂ ದವನಿಯೊಳಗೆ ಸತ್ಕವಿ ಜನರ ಭವನಂಗಳಲಿ ಸಂಚರಿಸುತ ಸುಕಥಾ ಶ್ರವಣವ ಮಾಡುತ ಪ್ರವರನಾಗುವುದೆ26 ಪನ್ನಗಾಚಲ ಸನ್ನಿವಾಸ ಪಾ ವನ್ನಚರಿತ ಸದ್ಗುಣಭರಿತಾ ಜನ್ಯಜನಕ ಲಾವಣ್ಯೇಕನಿಧಿ ಜ ಗನ್ನಾಥವಿಠಲಾನಾನ್ಯಪನೆಂಬುದೆ 27
--------------
ಜಗನ್ನಾಥದಾಸರು
ಫಲಹಾರವ ಮಾಡೋ ಪದುಮಲೋಚನನೆ| ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ ಕದಳೀ ಕಪಿಥ್ಥಶರ್ಕರ ಮೋದದಿಂದಲೀ| ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1 ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ| ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2 ವಸುಧೆಯೊಳುಳ್ಳ ಸಕಲ ಫಲಸಾರವಾ| ಬಿಸಿಯಾದ ಪಲ್ಗೆನೆಯ ಮಧುಸಹಿತಾ 3 ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ| ಸುರರಿಗಮೃತವೆರೆದಾನಂದ ಕರದಲಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಣ್ಣ ಬಣ್ಣದ ಬುಗುರಿಯಾಟವ ಅಡುತಿಯರುವೆಯಾ ರಂಗ ಗಿಣ್ಣು ಗಿಣ್ಣಲಿ ಕನಿತುನಿಂತಿಹ ಹಣ್ಣನಿದನು ಕಾಣೆಯಾ ಪ ಮಮತೆ ಇಲ್ಲವೆ ಹೇದೇವ ಮಾತಿಗೆ ಮರುಳುಹೋಗಿ ಅ.ಪ ನಿನ್ನ ಊರಲಿ ನೀನು ಕುಳಿತರೆ ಭಾಗ್ಯವೆನಗದು ಆಯಿತೆ ನನ್ನ ಇಳಿಯಿಸಿ ಅರಿವು ಕೊಟ್ಟು ನಡೆಯ ಕಲಿಸಿದೆ ಏತಕೆ ಇನ್ನು ಬರದೇ ಇರುವೆಯಾ ನನ್ನಲ್ಲಿ ಸಹನೆ ಇಲ್ಲವೆಂದು ಅರಿಯಲಾರೆಯಾ ದೇವನೇ 1 ನೆನಪು ಕೊಟ್ಟಿಹೆ ರಂಗ ಆಸೆ ಮತಿಯು ದಾರಿ ನೋಡಿದೆ ದೂರ ದಡವನು ದಾಟಿಸೈ ನಾನು ಅದರೊಳು ನಿಂತಿಹೆ ಮಾಧವ ಮತ್ತೆಯಾರನು ಕೇಳಲಿ 2
--------------
ಸಂಪತ್ತಯ್ಯಂಗಾರ್
ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1 ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2 ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದ ಜನ್ಮ ಬರಲಂಜಲ್ಯಾತ ಕಗೋ ವಿಂದ ನಿನ್ನೆಚ್ಚೆರ ವೆನಗಿದ್ದರ ಸಾಕು ಗೋವಿಂದ ಗೋವಿಂದ ಪ ಒಂದೆರಡಲ್ಲಾ ಶತ ಸಹಸ್ರವಾಗಲಿ ಛಂದದಿನಿನ್ನ ನಾಮಾ ಜಿವ್ಹೆಯ ಲಿರಲಿ1 ಹರಿಪರಂದೈವೆಂದು ಅರುಹಿನಾ ಮನೆಲಿದ್ದು ಹರಿಯದಿರಲಿ ಮನ ವಿಷಯಕ ಬಿದ್ದು 2 ಮುಕುತಿಗಿ ಕುತಿಯಂಬಾ ಹಂಗಿನ ನೆಲೆಯಾಕ ಭಕುತಿ-ಯನಿ ಪನಿಜ ಸುಖವಿರಲಿಕ್ಕೆ 3 ಗುರುಮಹಿಪತಿ ಸ್ವಾಮಿ ನಿನ್ನ ಶರಣರಾ ಮೃಗ ಪಶುವಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದ ಶ್ರೀ ಹರಿ ಬಂದ ಪ ಬಂದ ಬಂದ ಮುಚುಕುಂದ ಪರದ ಅರ- ವಿಂದನಯನ ಗೋವಿಂದ ಪರಾತ್ವರ ಕಂದನೆನ್ನ ಮನ ಮಂದಿರಕೀಗಲೆ ನಂದವ ನೀಡುತ ಇಂದಿರೆಸಹಿತದಿ ಅ.ಪ. ಪೊತ್ತವ ಬಂದ ಅಜಿತನುಬಂದ ಚಾರುವರಾಹನು ಭೂಸಹಬಂದ ಪೋರನ ಸಲಹಿದ ಘೋರನು ಬಂದ ಭಾರ್ಗವ ಬಂದ ಕೌರವವಂಶಕುಠಾರನು ಬಂದ ಕಲ್ಕಿಯು ಬಂದ 1 ಉಸುರಲು ಹಯಮುಖಬಂದ ದತ್ತನುಬಂದ ನೀಡಲು ಯಜ್ಞನುಬಂದ ಸಾಧುಹರಿನಾರಾಯಣ ಬಂದ ಶಿಂಶುಮಾರನು ಬಂದ ಧನ್ವಂತ್ರಿಯು ಬಂದ 2 ಶ್ರೀ ವಿಷ್ಣುವು ಬಂದ ಉಲ್ಲಾಸದಿ ಬಂದ ಸಂತೋಷನು ಬಂದ ತೈಜಸ ಕರುಣದಿ ಬಂದ ಮುಕ್ತೇಶನು ಬಂದ ಪರಾದ್ಯನಂತನು ಬಂದ 3 ಜಗನೂಕೂವ ಬಂದ ಪುರುಹೂತ ವಿನುತ ಸಕಲಾರ್ತಿಹರ ತಾ ಬಂದ ವೈರಾಜ್ಯನು ಬಂದ ಶೃತಿ- ನೀಕ ಸುವಂದಿತನಿರುಪಮ ಬಂದ ವಾಕುಮನಕೆ ಸಾಕಲ್ಯಸಿಗದ ಪುಣ್ಯ- ವಿವರ್ಜಿತ ಭಗಲೋಕೈಕ ವಂದ್ಯ ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4 ಸರ್ವಸಾಕ್ಷಿಗಭೀರ ಪರಾಕು ಸ್ವತಂತ್ರನೆ ಪರಾಕು ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು ಪ್ರತಿಪಾದ್ಯಪರಾರು ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು ಸಮನೆ ಪರಾಕು ಪರಾಕು 5 ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು ನಿಖಿಳಪ್ರದಾಯಕ ಪರಾಕು ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು ಪರಾಕು 6 ಪರಾಕು ರೂಪಾತ್ಮ ಪರಾಕು ಪುರುಷ ಸೂಕ್ತ ಸುಗೇಯ ಪ್ರಖ್ಯಾತ ಮಹಾಮಹಿಮ ಪರಾಕು ನಾಮಕ ಪರಾಕು ಸುನಾಮ ಓಂಕಾರಾಧಿಪ ಪರಾಕು ವಿಭೂತಿ ಪರಾಕು 7 ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ ಕರುಣಾಮಣಿ ಶ್ರೀಕಾಮ ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ ವಿನುತ ಗುಣಲಲಾಮ ಸುನಾಮ ಮೇಘಶ್ಯಾಮ 8 ಸುಂದರ ಬಂದ ಸೃಷ್ಠಿಸ್ಥಿತಿಲಯಗೈವ ಮು- ವೃಂದಕಳೆದು ನಿಜ- ಸುಧಾರ್ಣವ ಬೃಹತೀನಾಮಗ ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು ಭವ ಪರಿವಾರದ ಕೂಡಿಯೆ ಬಂದಾ 9
--------------
ಕೃಷ್ಣವಿಠಲದಾಸರು
ಬಂದನಿಂದು ರಾಘವೇಂದ್ರನು ಆನಂದದಿಂದಲಿ ಬಂದನಿಂದು ರಾಘವೇಂದ್ರನು ಪ. ಕಂದರಾದ ಭಕ್ತ ಜನರ ಚಂದದಿಂದ ಪೊರೆವೆನೆಂದು ಅ.ಪ. ಪರಿಪರಿಯ ವೈಭವವನು ಪಡಲಿಬೇಕೆಂದು ಕರದು ತರಲು ಕರಕರಿಯ ಕರದು ಮನವ ನೋಡಬೇಕೆಂದು 1 ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು ಪರಿಪರಿಯಲಿ ಸ್ತುತಿಸುತಿರಲು ಸ್ಥಿರವಾರದಿ ಹರುಷ ತೋರಲು 2 ಬಂದ ಬುಧರಿಂದ ಪೂಜೆನಂದಗೈಸ ಬೇ ಕೆಂದು ತುಂಗಜಲವ ತರುತಿರÉ ಬಂದ ಮಾಯದಿಂದ ಹರಿಯು 3 ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು ದ್ವಿಜರು ಕೊಡಲು ಗುರುಗಳನ್ನು ಪೂಜೆಗೈದೆನೆಂದು ನುಡಿದ 4 ಈ ತೆರದ ಕೌತುಕವ ಶ್ರೀನಾಥ ತೋರುತ ಆ ತಕ್ಷಣದಿ ಮಾಯವಾಗೆ ರೀತಿಯಿಂದ ಪೂಜೆಗೈಯ್ಯಲು 5 ಮಂತ್ರಾಲಯದ ಮಂದಿರನಿಗೆ ಪಂಚಾ ಮೃತದಿಂದ ಸಂತೋಷದಲಿ ಪೂಜೆ ಗೈದು ಪಂಚಮೃಷ್ಟಾನ್ನ ಬಡಿಸೆ6 ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು ಸಾನುರಾಗದಿ ಸೇವೆಕೊಂಡು ನಾನಾ ವಿಧದ ಹರುಷಪಡಿಸೆ 7 ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ ನಿನ್ನ ಮನಕೆ ಬಾರದಿರ್ದೊಡೆ ಮುನ್ನೆ ಪೋಗಿ ಬಾರೆಂದೆನಲು 8 ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ ಕಂಗಳೀಗೆ ತೋರಿ ಅಂತ ರಂಗದಲ್ಲಿ ಹರುಷವಿತ್ತು 9 ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು ಭಾಗವತರ ಪೊರೆವೆನೆಂದು ಯೋಗಿ ಶೇಷಾಂಶ ಸಹಿತ 10 ಇಂತು ರಾಘವೇಂದ್ರ ಗುರು ತಾ ಶಾಂತನಾಗುತ ಶಾಂತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ತೋರ್ವೆನೆಂದು 11
--------------
ಅಂಬಾಬಾಯಿ
ಬಂದರು ಹರಿಯ ವಾಲಗಕೆ ಭಕ್ತ | ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ಪ ನಾಗಾರಿ ಸುತ ಬಂದ | ನಾಗಾರಿ ಬಂದಾ | ನಾಗಾನ ಧನು ಬಂದ ನಾಗಪುಂಗವ ಬಂದ | ಗಮನ ಬಂದ | ನಾಗ ಬಂದಾ || 1 ನಾಗಶಯ ಮುಖವಾದ ನಾಗವಾಹನ ಮಿತ್ರ | ನಾಗ ಚರ್ಮಾಂಬರ ಸಖನು ಬಂದಾ | ನಾಗಾರಿ ಸುತೆಯಳನಾಳಿದವನು ಬಂದಾ | ನಾಗಾರಿ ಬಾಂಧವ ಬಂದಾ || 2 ನಾಗದ್ವೇಷಿಕನು ನಾಗಾನಾದನನುಜ | ನಾಗಕೇತನನ ಕೊಂದಗ್ರಜನು ಬಂದಾ | ಸಿರಿ ವಿಜಯವಿಠ್ಠಲರೇಯ | ನಾಗವಾಹನನಾಗಿ ಬರುವ ಸಂಭ್ರಮದೊಳು ||3
--------------
ವಿಜಯದಾಸ
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ ಬಂದೆನ್ನ ಮನಮಂದಿರದಲಿ ನಿಲ್ಲೊ ಪ. ಇಂದಿರೇಶ ವೈಕುಂಠದಿಂದ ನೀ ಬಂದು ಈಗ ಎನ್ನ ಹೃದಯ ಕಮಲದಿ ಅ.ಪ. ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ ಪೊಗಳಬಲ್ಲೆನೆ ನಾ ಖಗವಾಹನನೆ 1 ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ ಅರಘಳಿಗೆ ನಿನ್ನಗಲಿರಲಾರೆನೊ ಸಿರಿಸಹಿತದಿ ನಿನ್ನರಮನೆಯಿಂದಲಿ 2 ಇಂದು | ನೀ ರಕ್ಷಕನೆಂದು ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು ಸರಿಯಲ್ಲವು ಈ ತೆರದಲಿ ತೊರೆವುದು ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3 ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ ಇಂತು ನಿನಗೆ ಒಪ್ಪಿಸಿದರೊ ಗುರುಗಳು ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4 ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಬಂದೊದಗಿತು ಪುಣ್ಯಫಲವು ಮುಚುಕುಂದವರದ ವಾಸುದೇವಾರ್ಯರೊಲವು ಪಸಂಚಿತಾಗಾಮಿಪ್ರಾರಬ್ಧವೆಂಬ ಕಂಚುಕಿಯಾದ ಕರ್ಮದ ಬಹುಬದ್ದದಂಚುಗಾಣುವುದಾವ ಸಿದ್ಧ ಇದು ಕಿಂಚಿದಾದುದು ಗುರುಚರಣರೇಣಿಂದ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೊನೀನೆ ಕರುಣವಿತ್ತುದೇನೊ ನಾನು ಜ್ಞಾನವೆಂತೆಂಬ ಸ್ವರೂಪವನರಿಯೆನೊ 2ಪರಿಹರಿಸಿತು ಜನ್ಮ ಮರಣ ದುಃಖ ದುರವಣೆ ದಹಿಸಿತು ಲಕ್ಷ್ಮಿಯರಮಣತಿರುಪತಿ ವೆಂಕಟರಮಣ ನೀನೆ ಗುರು ವಾಸುದೇವರೂಪಿನಲಿತ್ತೆ ಕರುಣ3ಓಂ ನರನಾರಾಯಣಾತ್ಮಕಾಯ ನಮಃಕಂ||ಭೃಗುವಾರದರ್ಚನೆಯನಿದನಿಗಮಾಗಮವೇದ್ಯ ಗ್ರಹಿಸಿ ಸಿರಿ ಧರಣಿಯು ಸಹಭಗವಂತ ನಿನ್ನ ಭಕ್ತರೊಳಗಲದೆ ನಾನಿಹುದ ಮಾಡು ವೆಂಕಟರಮಣಾ
--------------
ತಿಮ್ಮಪ್ಪದಾಸರು