ಒಟ್ಟು 2968 ಕಡೆಗಳಲ್ಲಿ , 112 ದಾಸರು , 1882 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ
ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ | ಹೊಳೆವ ಚರಣದಲ್ಲಿ ನೆಲೆಗೊಂಬುವಂದದಿ ಪ ಯರಳಿಯು ಘಂಟಾನಾದಕೆ ಬಲೆ ಹೋಗುವಂತೆ | ಮರುಳಾಗಿ ತರಣಿಯರಾಳಾಪದಿ | ಭರದಿಂ ದೀವಿಗೆ ಕಂಡು ಪತಂಗ ಮಡಿವಂತೆ | ಹರಿದು ರೂಪ ವಿಷಯದಲಿ ಮುಗ್ಗುತಿಹುದೋ1 ಕರಿ ಅಂಗ ಸಂಗದೀ ಕುಣಿಯಾ ಬೀಳುವಂತೆ | ಸ್ಪರುಶ ವಿಕ್ಷಯದಲಿ ಮೈಮರೆದು | ಯರಗಿ ಮಾಂಸಕ ಗೋಣ ನೀವ ಮಚ್ಛದಂತೆ | ನಿರುತ ಜಿವ್ಹಾಸ್ವಾದಕ ತೊಳಲುತಲಿಹುದೈಯ್ಯಾ2 ಪರಿಮಳಕಾಗಿ ಬ್ರಮರ ಸೆರೆ ಬಿದ್ದಂತೆ | ಹರುಷ ಪಡುತ ಭೋಗ ದ್ರವ್ಯದಲಿ | ತರುವರಿ ತನಲಿಂತು ಮಾಡಿ ವಿಷಯದಿ ಬಂದು | ದುರಿತ ಮೊನೆಗೆಯನ್ನ ಗುರಿ ಮಾಡಿತಿಹುದೈಯ್ಯಾ3 ಐದು ಮೋರೆಯಲಂತು ಹರಿಗುಡದೆವೆ ಮತ್ತ | ಐದು ಪರಿಯ ಕಾವಲಿಯ ನಿರಿಸೋ | ಮಾಧವ ನಿಮ್ಮ ಸತ್ಕಥೆಗಳ ಶ್ರವಣಕ | ಪಾದ ಧ್ಯಾನದಿ ಹಿಂಗದಂದದಿ ನಯನದಿ 4 ನಿನ್ನ ದಾಸರ ಸಂಗ ವನುದಿನ ದೇಹಕ | ನಿನ್ನ ನಾಮಾಮೃತ ಜಿವ್ಹೆಯಲಿ | ನಿನ್ನ ನಿರ್ಮಾಲ್ಯ ತುಳಸಿಯಾ ಫ್ರಾಣಿಸುವ ತಾ | ಯನ್ನನುದ್ದರಿಸು ಮಹಿಪತಿ ಸುತ ಪ್ರಭುವೆ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಲ್ಲು ನಿಲ್ಲು ಕೃಷ್ಣ ನಿನ್ನ ಸೊಲ್ಲ ಮುರಿಯ ಬಂದೆವು ಸೊಲ್ಲ ಮುರಿಯ ಬಂದೆವು ಈ ಕಳ್ಳತನವ ಸಹಿಸೆವು 1 ದಿಕ್ಕು ರಕ್ಷಿಪರಿಗೆ ದಿಕ್ಕು ಕಾಣದಂತೆ ಇರುವುದು ಸೊಕ್ಕು ಮುರಿದು ನಿಮ್ಮ ಕಾರ್ಯ ಧಿಕ್ಕರಿಸುವೆ ಕ್ಷಣದಲಿ 2 ಈಡುಮಾಡಲೇಕೆ ಇಂಥ ಕೇಡಿಗೆ ಈ ಅಬಲೆಯ ನೋಡಿ ಎಮ್ಮ ಅವಿತುಕೊಂಡ ಹೇಡಿ ಇವನ ಬಿಡುವೆನೆ 3 ಎಂಟು ಜನ ದಿಕ್ಪಾಲಕರು ಸೊಂಟ ಮುರಿವ ರಾಣಿಯ ಶೌರಿ ತಂಟೆಗಾರು ಬರುವರು 4 (ಸತ್ಯಭಾಮೆ ಮತ್ತು ದೇವೇಂದ್ರನ ವನಪಾಲಕರ ಸಂವಾದ)
--------------
ವಿದ್ಯಾಪ್ರಸನ್ನತೀರ್ಥರು
ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ ಗೋಕುಲಗಣನಾಯಕ ಪ ಲೋಕೈಕ ನಾಥನೆಂದಾ ರೈಉಸುರಿದ ಮುನಿಯ ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ ವ್ಯಾಕುಲಾಂತ ಪರಾತ್ಮ ಸತ್ಯ ಸ ಲೊಕ ಸರ್ವಸಯೇಕ ಭೀಮಾ 1 ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ ಸುಮನ ಸತ್ಯ ಸಮಾಜ ಭೌಮನೆ ಅಮರಗುಣ ಕಟಕಾಮಣಿಯೆ ಸ ದ್ವಿಮಲ ಚರಿತ ವಿಶಾಲ ಭೂಪಾ2 ಕಿಂತುಭವದ್ಧರ್ಶನೇನಆಹಂಬೆಲ್ಲ ಕಥಯಾಮಿಕಾಲಾಂತಕೋ ಚಕ್ರಸುಧಾರ ತ್ವರಿತದಿ ಕಂತು ಜನಕನೆ ಪಾಲಿಸೆನ್ನು ಪಂಥವೇತಕೊ ಪರಮಜೀಯಾ 3 ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ ಶಿಷ್ಟಾದ್ವೈತನೆ ಕೃಷ್ಣನಾಮನೆ ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ 1 ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ 2 ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ3
--------------
ಜಯೇಶವಿಠಲ
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು
ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ ಪನ್ನಂಗಶಯನ ಕಾಯೋ ಪ ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ ಸನುಮತಿವಿನಿತಿಲ್ಲದೆ ಮನಸಿನೊಳು ಘನತರ ಭ್ರಮಿಪೆ ಬರಿದೇ ಶುನಕನ ಕನಸಿದು ಅನಿತ್ಯ ಜಗತ್ಸುಖ ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ 1 ಘಳಿಗೆಸಂತಸವಿಲ್ಲದೆ ಬಳಲುವೆ ಬಲು ಇಳೆ ಸುಖದಿ ಮನ ನಿಲ್ಲಿಸಿ ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ 2 ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್ ವ್ಯರ್ಥ ಬಳಲಿಪರೆ ಎನ್ನ ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್ ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ 3
--------------
ರಾಮದಾಸರು
ನೀನೆ ತಾಯಿಯು ನೀನೆ ತಂದೆಯು ನೀನೆ ಬಾಂಧವನು ರಂಗ ಪ ನೀನೆ ನಿತ್ಯನನಾದಿದೇವನು ನೀನೆ ಸತ್ಯಲೋಕೇಶನೀಶನು ಅ.ಪ ಲೋಕಭರಿತ ಅನೇಕಚರಿತ ಲೋಕಪಾಲಕನು ವಿಭವ ಲಯಗಳೇಕಕರ್ತನು ಶ್ರೀಕರಾ ಕೃಪಾಕರಾಸುರ ಭೀಕರಾಂಗನು ಪಿನಾಕಿ ವಿನುತನೂ ಕಳತ್ರನು 1 ನಂದಗೋಪನ ಕಂದ ಕೃಷ್ಣ ನೀನೆಂದು ನಂಬಿದೆನೋ ಮಂದಹಾಸವದನವ ನಾನೆಂದು ನೋಡುವೆನೋ ಸುಂದರಾರವಿಂದ ಪಾದವನೆಂದು ಪೂಜಿಪೆನೋ ತಂದೆ ಮಾಂಗಿರಿರಂಗನೊಲವನೆಂದು ಪಡೆದೇನೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ನೀನೆನಗೆರವೆ ನಾನಿನ್ನೆಂತಗಲುವೆಬಾ ನನ್ನ ತನುವೆ ಸದ್ಗುರುವಿಗೊಂದಿಸುವರೆ ಪಮೊದಲಿಗಮಿತ ದುಷ್ಟತನುಗಳ ಸಂಗದಿಕುದಿದು ಸಂಸಾರಾಗ್ನಿಯೊಳು ಬಳಲಿದೆನುಅದರಿಂದ ನಿನ್ನ ನಿಗ್ರಹಿಸಿದೆನಲ್ಲದೆಪದರದಿರೆನ್ನೊಳು ಪಡೆಯೆ ನಿನ್ನೊಂದನೂ 1ಗುರುಸೇವೆಗಲಸದೆ ಛಳಿಮಳೆಯೆನ್ನದೆಬರಿಯ ಬಯಲ ಸಂಸಾರ ಭೋಗದಲಿಎರಗದಿರೆನ್ನ ದಾರಿಗೆ ಬಾ ನಿನ್ನಾರೈಕೆುರಲೆನ್ನೊಳಿನ್ನು ತಪಿಸಿ ಕಂಗೆಡಿಪುದಿಲ್ಲ 2ಶ್ರವಣ ಸುಖದಿ ನನ್ನ ಬೆರೆದು ಬೇರಾಗದೆಭವಶರಧಿಯ ದಾಂಟುನಂತೆ ನೀ ಮಾಡುವಿವರಿಸಿ ಹರಿಗುಣ ಕಥೆಗಳನೆಮ್ಮೊಳುಕವಿದಿಪ್ಪ ತಮವ ತೊಲಗಿಸಿಕೊಂಬ ನಾವಿನ್ನು 3ನಿನ್ನಿಂದ ಸಂಸಾರ ವಿಷಯ ಸುಖದ ಲಾಭನಿನ್ನಿಂದ ಕೃಛ್ರಾದಿ ತಪಸಿನ ಲಾಭನಿನ್ನಿಂದ ಸತ್ಕರ್ಮತೀರ್ಥಯಾತ್ರೆಯ ಲಾಭನಿನ್ನಿಂದ ವೈರಾಗ್ಯ ಭಾಗ್ಯದ ಲಾಭ 4ನಿನ್ನೊಳಗಿರುವಿಂದ್ರಿಯಂಗಳಿಂದ್ರಿಯಗಳೊಳುಣ್ಣುವ ಮನ ಮನದೊಳು ಕೂಡ್ವ ಜೀವಎನ್ನುವರೆನ್ನನೆನ್ನಿರವನರಿಯೆನಿದನಿನ್ನಿಂದ ಗುರುಕೃಪೆವಡೆದು ತಿಳಿಯಬೇಕೂ 5ನೆವವಿಲ್ಲದುಪಕಾರಗೈವೆ ನೀನೆನಗಾಗಿವಿವಿಧ ಭೋಗದ ಸುಖವೆನಗೆ ನಿನ್ನಿಂದವಿವರಿಸೆ ನಿನಗೆ ಉಂಟು ಲಾಭವು ಮತ್ತೆನವೆವೆಯಲ್ಲದೆ ವೃದ್ಧಿಯಾಗುವೆಯಾ ಪೇಳು 6ನಿನ್ನಿಂದ ಸುಖಬಟ್ಟು ನಿನ್ನ ಬಾಳಿಸಲಾರದೆನ್ನನುಳುಹುವದೆಂತನ್ಯಾಯ ಸುಖವುಉಣ್ಣುವರಾರಿದನುಂಡು ಬದುಕಿರುವಅಣ್ಣನ ತಿಳಿಯಲು ಗುರುವೆ ಗತಿ ಕಂಡ್ಯಾ 7ವಂದಿಸಿಯೂಳಿಗಗೈವಲ್ಲಿಯಲಸದೆದಂದುಗ ಸುಖಕಾಗಿ ದಾರಿದೆಗೆಯದೆಒಂದಾಗಿ ಯೆನ್ನೊಳಿದ್ದರೆ ನನ್ನ ಸುಖವ ನಾಹೊಂದಲು ನಿನಗಾನಂದವಪ್ಪುದೆ ಕೇಳು 8ಮರುಗಿ ಮನದಿ ನಮ್ಮ ಮರವೆಯಾಟವ ಕಂಡುತಿರುಪತಿ ವೆಂಕಟರಮಣನು ತಾನೆಗುರುವಾಸುದೇವಾರ್ಯನಾಗಿಹನಾತನಚರಣವ ಮರೆಯೊಕ್ಕು ಬದುಕುವ ನಡೆಬೇಗ 9ಕಂ||ಜೀವನ ನುಡಿಯನು ಲಾಲಿಸಿಭಾವದಿ ಸರಿಬಂದ ಬಗೆಯ ಕಾಣದೆ ಗರ್ವದಿತಾವೊಲಿವರೆ ಮನಬಾರದುನೀವೊಬ್ಬನೆ ಸಾಧಿಸೆನೆ ಮನ ಕೆರಳಿ ನುಡಿದುದೂ
--------------
ತಿಮ್ಮಪ್ಪದಾಸರು
ನೀನೇ ಘನ್ನ ಪಾವನ್ನ ಗುರುವರ ಪ ದಾನಿ ಅದಕನುಮಾನ ಮಾಡದೆ ನಾನಭೀಷ್ಟೆಯ ನೀನು ಕೊಡೋದಕೆ ಅ.ಪ ನಿನ್ನ ನಂಬಿದೆ ನಾನು ಯತಿಕುಲಾಗ್ರಣಿ ರನ್ನ ಪಾಲಿಸೊ ನೀನು ಅನ್ಯನಲ್ಲವೊ ನಿನ್ನ ತನುಜನು ಧನ್ಯನಾಗುವದನ್ನು ಸಲಿಸೋ ಘನ್ನ ಮಹಿಮಾಪನ್ನ ಪಾಲಕ 1 ಆರ್ತಜನಮಂದಾರಾ ಮೋಕ್ಷಾದಿ ಸತ್ಪುರು - ಷಾರ್ಥ ಮಹÀದಾತಾರ ತೀರ್ಥಪದಯುಗ ಪಾರ್ಥಸೂತಗೆ ವಾರ್ತೆ ತಿಳಿಸಿ ಆರ್ತಸತಿಯಾ ಅರ್ತಿ ಕಳೆದಿಹÀ ಕೀರ್ತಿ ಕೇಳಿ ಪ್ರಾರ್ಥಿಪೆನೊ ಕೃತಾರ್ಥನೆನಿಸೋ 2 ಮಾತಾ ಪಿತ ಗುರುದೂತಾ ಎನಗೆ ಭಾವಿ ವಿ - ಧಾತಾ ಭ್ರಾತ ಸುಪೋತ ಭೂತಪತಿ ಸುರಯೂಥ ವಂದ್ಯನೆ ದಾತ ಗುರುಜಗನ್ನಾಥ ವಿಠಲನ ದೂತ ಮನ್ಮನೋಜಾತ ಕಾಮಿತ ವ್ರಾತ ಸಲಿಸೋ 3
--------------
ಗುರುಜಗನ್ನಾಥದಾಸರು
ನೀನೇ ಸಕಲವೆನಗೆ ಶ್ರೀರಾಮಚಂದ್ರ ನೀನೇ ದೊರೆಯರಸನೊ ಪ ಶ್ರೀನಿಧಿಯೆ ನಿನ್ನವರುಸತತ ಸಾನುರಾಗದ ಬಳಗವಹುದೈ ದೀನಜನಮಂದಾರ ನೇಹಂ ಶ್ರೀನಿಕೇತನ ಸತ್ಯಸಾರ ಅ.ಪ ತಾಮತಿಯು ಶ್ರೀ ಮನೋಹರ ಸಹಜರೆಲ್ಲ ಪ್ರೇಮ ಪಂಚ ರಾಮರೂಪವ ತೋರ್ಪನಾಡಿಯು 1 ಧನ್ಯ ಶರೀರವು ಮಾನ್ಯಗೆ ತಾಮಸದ ಸರೃಹವೂ ಕಣ್ಣನಿದ್ರೆಯು ಯೋಗಮುದ್ರೆಯು ಚಿಣ್ಣನ ಸಂಚರಂಗಳು ಸ್ವಾಮಿ ನಿನಗೆ ಪ್ರದಕ್ಷಿಣೆ 2 ಬಾಲನ ಮಾತುಗಳು ವೇದೊಕ್ತ ಸಶೀಲನ ಸ್ತೋತ್ರಗಳು ಕಾಲಂಕಾಲಗಳಲ್ಲಿ ಗೈಯುವ ಕಾರ್ಯಗಳು ಪರಮಾತ್ಮ ಸೇವೆಯು ಶ್ರೀಲತಾಂಗಿಯ ಲೋಲ ಧ್ಯಾನಿಪೆ ಪಾಲಿಸೈ ಜಾಜೀಶ ಕೇಶವ3
--------------
ಶಾಮಶರ್ಮರು
ನೀನೊಲಿಯಬೇಕು ನೀನೊಲಿಯಬೇಕು 'ಜ್ಞಾನ'ೀನನಿಗೆ ನಿತ್ಯಾನಂದ ಮೂರುತಿಯೆ ವಾಸುದೇವಾರ್ಯ ಪನರಳಿ ಬಹುಭವದಿ ನಾನಾ ಯೋನಿಮುಖಗಳಿಂದುರುಳಿ ಕೋಟಲೆಗೊಂಡು ಪುಳು ಪಕ್ಷಿ ಪಶು ಜಲಜತರು ಶಿಲೆಗಳೆನಿಪ ಹಲವಲಿ ನವೆಸವೆದು ಸ್ತ್ರೀಪುರುಷತ್ವ ಭೇದವಹ ನರಜನುಮ ಬಹರೆ 1ಪುರುಷನೆನಿಸಿದರು ಪಾದೋರು ಬಾಹುಜ ಭೇದವರಿತು 'ಪ್ರತ್ವ 'ದ್ಯಾ ನಯ 'ಜ್ಞಾನಶರಧಿಯೆನಿಸುವ ಭಾಗ್ಯ ಬರುವ ಸಾಧನಗಳನುಕರುಣಿಸುವ ಪರಮೇಶನೊಲಿವಂತೆನಗೆ 2'ವೃತ ಫಲವಹ ಸಶಾಸ್ತ್ರ ನಿಗಮಾಧೀತಿಯೊಪ್ಪದಿತದುಕ್ತ ಕರ್ಮಾಚರಣೆಗೈಯುತ ಸಮರ್ಪಿಸುತ್ತೀಶ್ವರಗೆ ತತ್ಫಲವ ಬಯಸದೆತೆಪ್ಪಗಿರುವಧಿಕಾರಿಯಪ್ಪ ಸತ್ಪಥಕೆ3ಶೃತಿಯುಕ್ತಿ ಸ್ವಾನುಭವಗಳ ಬಲದಿ ಮನನಗೈಯುತಲಿ ನಿತ್ಯಾನಿತ್ಯ ವಸ್ತುಗಳ ತಿಳಿದನರ್ಥತೆಯರ್ಥಗಳೊಳು ವೈರಾಗ್ಯ ಭಾಗ್ಯವನೀವಮತಿ ಬಂದು ಭಕತಿ ಜ್ಞಾನಗಳಳವಡುವರೆ 4ಬಂದ ವೈರಾಗ್ಯ ನೆಲೆಗೊಂಡು ಬಳಸಿದ ಕ್ರಿಯಾದಂದುಗವು ಸಡಿಲಿ ಬ'ರಂಗ ವ್ಯಾಪಿಸಿ ಕನಸೆಂದು ಕಾಣುತಲೂಡಲುಣುತಲುಡಿಸಿದರುಡುತತಿಂದು ತೇಗುವ ಕರ್ಮ ಬೆಂದು ಸುಖಿಯಹರೆ 5ಹೊರಗೊಳಗುಗಾಣದಾಗಸದಂತೆ ಬಯಲಾಗಿಕರಣಗಳ ಕಾಲಾಟವುಡುಗಿ ಸ್ವ ವ್ಯತಿರಿಕ್ತವರಸಿದರು ಸಂತೃಪ್ತಿ ತೋರದೆ ಸ್ವಾನುಭವಬರಿಯರಿವೆ ನೆಲೆಯಾಗಿ ತಾನೆ ತಾನಹರೆ 6ನಿಂತವೇದಾಂತ ಪದ್ಧತಿಯ ನಿಲಿಸುವರೆ ಮೊದಲಂತೆ ಕೃಷ್ಣಾವತಾರದಿ ಪಾರ್ಥಗೊರೆದ ಕೃಪೆವಂತ ನೀ ಮರಳಿ ಚಿಕನಾಗಪುರದಲಿ ಹೊಳೆದನಂತಮ'ಮನಾಗಿರುವೆ ವಾಸುದೇವಾರ್ಯ 7
--------------
ತಿಮ್ಮಪ್ಪದಾಸರು
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ ಪಾದ ಪೊಂದಿದ್ದರೆ ಸಾಕೊ ಅ.ಪ ಜೀವೋತ್ತಮರ ಭಾವವನನುಸರಿಸಿ ನೋವಾಗುವ ಮಾರ್ಗವ ಜರಿದು ಭಾವಜನಯ್ಯ ನಿನ್ನ ಭಾವವ ಕಂಡು ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು 1 ದೇಹಸ್ಥಿರವಲ್ಲ ದಹನಶೀಲಭವ ಇಹಸುಖ ಹೇಯವೆಂದು ಮೋಹಪಾಶಕೆ ಸಿಗಿಸದೆ ನಿನ್ನನುಪಮ ಮಹಿಮೆಗಳ ಕೇಳುತ ಆನಂದವಾದರೆ ಸಾಕು 2 ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು ಆದಿ ವಿಜಯ ರಾಮಚಂದ್ರವಿಠಲನೆ ಅಗಾಧಮಹಿಮ ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ3
--------------
ವಿಜಯ ರಾಮಚಂದ್ರವಿಠಲ