ಒಟ್ಟು 978 ಕಡೆಗಳಲ್ಲಿ , 101 ದಾಸರು , 848 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು
ಹಸ್ತವ ಕರುಣಿಸು ವಿಸ್ತಾರ ಮಹಿಮದ ಪ ಹಸ್ತವ ಕರುಣಿಸೋ ರಂಗಯ್ಯ ಹಸ್ತ ಕರುಣಿಸೆನ್ನ ಮಸ್ತಕದ ಮೇಲೆ ಹಸ್ತವ ಕರುಣಿಸೊ ಅ.ಪ ಸೋಮಕಾಸುರನ ವಧಿಸಿ ವೇದತಂದ ಹಸ್ತವ ಕರುಣಿಸೋ ರಂಗಯ್ಯ ತಾಮಸ ದೈತ್ಯನ ಉದರವ ಬಗಿದ ಹಸ್ತವ ಕರುಣಿಸೊ ರಂಗಯ್ಯ ಭೂಮಿಭಾರ ಶಿವಧನುವನು ಮುರಿದ ಹಸ್ತವ ಕರುಣಿಸೊ 1 ಎಸೆದು ಬಾಣ ವಾಲಿಗಭಯ ಪಾಲಿಸಿದ ಹಸ್ತವ ಕರುಣಿಸೋ ರಂಗಯ್ಯ ಅಸಮಮೂರುತಿಗೆ ಒಸೆದು ಉಂಗುರವಿತ್ತ ಹಸ್ತವ ಕರುಣಿಸೊ ಅಸುರನಿಗೊಲಿದು ಸ್ಥಿರ ಮುಕುಟವನಿಟ್ಟ ಹಸ್ತವ ಕರುಣಿಸೋ ರಂಗಯ್ಯ ವಸುಧೆ ಭಾರಿಳುಹಲು ನಿರುತದಿಂದೆತ್ತಿದ ಹಸ್ತವ ಕರುಣಿಸೊ 2 ಸುರಗಣಕಮೃತ ಹರುಷದಿ ನೀಡಿದ ಹಸ್ತವ ಕರುಣಿಸೋ ರಂಗಯ್ಯ ಪರಮಗೋವರ್ಧನ ಗಿರಿಯೆನೆತ್ತಿದ ಹಸ್ತವ ಕರುಣಿಸೊ ಸಾರಸ ಗಂಧಿಯರುಟ್ಟಿರ್ದ ಸೀರೆಯ ಕದ್ದ ಹಸ್ತವ ಕರುಣಿಸೋ ರಂಗಯ್ಯ ಮೆರೆವ ರುಗ್ಮನ ಮಹಗರುವವ ಮುರಿದ ಹಸ್ತವ ಕರುಣಿಸೊ 3 ಜನನಿ ಜನಕರ ಸೆರೆಯನು ಬಿಡಿಸಿದ ಹಸ್ತವ ಕರುಣಿಸೋ ರಂಗಯ್ಯ ಜನನಿಮುಂದಾಡುತ ಕಡಗೋಲು ಪಿಡಿದ ಹಸ್ತವ ಕರುಣಿಸೊ ವರರುಗ್ಮಿಣಿಕೈಯ ಸರಸದಿ ಪಿಡಿದ ಹಸ್ತವ ಕರುಣಿಸೋ ರಂಗಯ್ಯ ನರಗೆ ಸಾರಥಿಯಾಗಿ ಕುದುರೆ ತಿರುವಿದ ಹಸ್ತವ ಕರುಣಿಸೊ 4 ವಿದುರನ ಮನೆಯಲಿ ಹಾಲೆತ್ತಿ ಕುಡಿದ ಹಸ್ತವ ಕರುಣಿಸೋ ರಂಗಯ್ಯ ಸುದತಿಗೆ ಮೆಚ್ಚಿ ಅಕ್ಷಯಾಂಬರವಿತ್ತ ಹಸ್ತವ ಕರುಣಿಸೊ ಮುದದಿ ಧ್ರುವಗೆ ಮೆಚ್ಚಿ ಸದಮಲ ಪದವಿತ್ತ ಹಸ್ತವ ಕರುಣಿಸೋ ರಂಗಯ್ಯ ಸುದಯದಿಂದ ಅಂಬರೀಷನುದ್ಧರಿಸಿದ ಹಸ್ತವ ಕರುಣಿಸೊ 5 ದಿನವಿರೆ ದಿನಮಣಿಯನು ಮಾಯಮಾಡಿದ ಹಸ್ತವ ಕರುಣಿಸೋ ರಂಗಯ್ಯ ರಣದಿ ಭಕ್ತರ ಶಿರ ಕನಿಕರದೆತ್ತಿದ ಹಸ್ತವ ಕರುಣಿಸೊ ಸೆಣದಾಡಿ ಭಕ್ತನಿಂ ದಣಿದು ಕಟ್ಟಿಸಿಕೊಂಡ ಹಸ್ತವ ಕರುಣಿಸೋ ರಂಗಯ್ಯ ಸನಕಾದಿಗಳು ಘನ ಅನಂದದ್ಹೊಗಳಿಸುವ ಹಸ್ತವ ಕರುಣಿಸೊ 6 ಫಡ ಫಡ ಎನ್ನುತ ತೊಡೆಯ ಚಪ್ಪರಿಸಿದ ಹಸ್ತವ ಕರುಣಿಸೋ ರಂಗಯ್ಯ ಬಿಡದೆ ಸೋಳಸಹಸ್ರ ಮಡದಿಯರ್ಹಿಡಿದ ಹಸ್ತವ ಕರುಣಿಸೊ ಅಡಿಯ ದಾಸರ ಪಿಡಿದಪ್ಪಿ ರಕ್ಷಿಸುವ ಹಸ್ತವ ಕರುಣಿಸೋ ರಂಗಯ್ಯ ಒಡೆಯ ಶ್ರೀರಾಮ ನಿನ್ನಡಿ ನಂಬಿ ಬೇಡುವೆ ಹಸ್ತವ ಕರುಣಿಸೊ 7
--------------
ರಾಮದಾಸರು
ಹಳೆಯವಾಸನೆ ನಿನ್ನ 'ೀರುವದಣ್ಣಬಳಸಿದೆ ಬಹುವಾಗಿ ಬಿಡುವದೆಂತಣ್ಣ ಪಭವರೋಗಿಯಾಗಿದ್ದು ಬಾಯ ಸ'ಗಾಗಿಅ'ವೇಕ ಪಥ್ಯಗಳ ಸ'ದು ಮೂರ್ಛೆದೋಷವುಮೂರ್ಛೆಯ ಕ'ದು ಮನ ತೇಲಿ ಬಂತಾಗಿಸು'ವೇಕ ಮುಚ್ಚೋುತೆ ತೋರದಾಗಿ 1ರಾಮನ ನಾಮ ರಸಾಯನವನ್ನುನೇಮದಿಂ ಸೇ'ಸು ಬಿಡದಿರುುನ್ನುಕಾಮಾಲೆ ಬರದಂತೆ ಕರಣಗಳನ್ನು ಸದಾ ಮನಗುತೆುಂದರಿತರೆ ಸುಖಿುನ್ನು2ಕರುಣದಿಂ ಚಿಕ್ಕನಾಗಪುರದೊಳಗಿರುವಗುರುಪರವಾಸುದೇವಾರ್ಯನ ಪದವ ಪಿಡಿದರೆ ಸುಜ್ಞಾನಾಮೃತವ ನಿನಗೆರೆವಮರೆವೆ ಹಳೆಯ ವಾಸನೆಯ ನಿನ್ನಿರವ3
--------------
ವೆಂಕಟದಾಸರು
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಹುಟ್ಟಿ ಹುಟ್ಟಿ ಹೊಂದಲಾರೆನಯ್ಯ ಕೃಷ್ಣನೆ ುೀಕಷ್ಟವನ್ನು ಬಿಡಿಸಿ ಕಾಯಬೇಕು ಕೃಷ್ಣನೆ ಪಇಷ್ಟು ದಿವಸ ನಿನ್ನನರಿಯದಿದ್ದೆ ಕೃಷ್ಣನೆ ನೀನುದ್ಟೃುಟ್ಟು ಹುಟ್ಟದಂತೆ ಮಾಡು ಕೃಷ್ಣನೆಅ.ಪಗರ್ಭದೊಳು ನವಮಾಸ ಸಿಕ್ಕಿ ಕೃಷ್ಣನೆ ನೊಂದೆನರ್ಭಕತ್ವದಲ್ಲಿ ಮುಗ್ಧನಾದೆ ಕೃಷ್ಣನೆನಿರ್ಬಂಧವಾುತು ವಿದ್ಯದಲ್ಲಿ ಕೃಷ್ಣನೆ ಮತ್ತೆನಿರ್ಭರದ ಪ್ರಾಯದಲ್ಲಿ ಬೆರೆತೆ ಕೃಷ್ಣನೆ 1ಮದಗಳೆಂಟರಿಂದ ಮೈಯ ಮರೆತೆ ಕೃಷ್ಣನೆ ಬೇಗಹುದುಗಿ ಕ್ಲೇಶವೈದರಲ್ಲಿ ಬಿದ್ದೆ ಕೃಷ್ಣನೆವೊದಗಿ ಪಾಶವೆಂಟರಿಂದ ಬಿಗಿದೆ ಕೃಷ್ಣನೆ ಹಮ್ಮುಇದಕೆ ಮೂಲವಾುತು ಕರ್ಮದಿಂದ ಕೃಷ್ಣನೆ 2ಅರಿಗಳರುವರಿಂದ ಕೊರಗುತಿಹೆನು ಕೃಷ್ಣನೆ ಮುಂದನರಿಯದವರ ಸಂಗವನ್ನು ಮಾಡಿ ಕೃಷ್ಣನೆಉರುಳಿಬಿದ್ದೆ ವಿಷಯಕೂಪದಲ್ಲಿ ಕೃಷ್ಣನೆ ುದನುಪರಿವ ಶಕ್ತಿಯನ್ನು ಕಾಣೆನಯ್ಯ ಕೃಷ್ಣನೆ 3ಮಾಯಾಕಾರ್ಯ ದೇಹವೆನ್ನದೆಂದು ಕೃಷ್ಣನೆ ಅದುಹೇಯವೆಂದು ಕಾಣದಾದೆನಯ್ಯ ಕೃಷ್ಣನೆ ನೋಯದಂತೆ ಪೋಷಣೆಯ ಮಾಡಿ ಕೃಷ್ಣನೆ ುೀಗ ನೋಯಲಾಗಿ ಭಯವು ಜನಿಸಿತಯ್ಯ ಕೃಷ್ಣನೆ 4ಹರಿವ ನದಿಯ ನಡುವೆ ಪರ್ಣ ಸಿಕ್ಕಿ ಕೃಷ್ಣನೆ ಸುಳಿಯಬೆರಸಿ ತಡಿಯ ತಾನು ಸೇರದಂತೆ ಕೃಷ್ಣನೆಕುರುಡ ಕೂಪವರಿಯದುರುಳುವಂತೆ ಕೃಷ್ಣನೆ ಕಾಲಶರಧಿಯಲ್ಲಿ ಮುಳುಗಿ ನೆಲೆಯ ಕಾಣೆ ಕೃಷ್ಣನೆ 5ಇರುಹೆ ಕಡೆಯು ಬ್ರಹ್ಮನಾದಿಯಾಗಿ ಕೃಷ್ಣನೆ ಲೋಕಮರುಳುಗೊಂಡು ಮಾಯೆುಂದ ಮರುಗಿ ಕೃಷ್ಣನೆ ಕೊರಗುತಿದೆ; ಮಾಯೆಯನ್ನು ದಾಟಿ ಕೃಷ್ಣನೆ ಬೇಗಪರಮನೊಳು ಬೆರೆಸಿ ಕೊರಗ ಬಿಡಿಸು ಕೃಷ್ಣನೆ 6ರಜ್ಜು ಸರ್ಪನಾಗಿ ತೋರಿ ಬೆದರೆ ಕೃಷ್ಣನೆ ಅದರಬೆಜ್ಜರವ ಪರಿವ ಮಂತ್ರವುಂಟೆ ಕೃಷ್ಣನೆರಜ್ಜುವೆಂದು ತಿಳಿವುದೊಂದೆ ಮಂತ್ರ ಕೃಷ್ಣನೆ ಹಾಗೆರಜ್ಜು ಸ್ಥಾನ ನಿನ್ನ ನಿಜವ ತೋರು ಕೃಷ್ಣನೆ 7ಕರ್ಮವೆ ಜನ್ಮಕ್ಕೆ ಹೇತುವೆನಲು ಕೃಷ್ಣನೆ ಅಂದುಬ್ರಹ್ಮವತ್ಸಪಾಲರಪಹರಿಸೆ ಕೃಷ್ಣನೆಕರ್ಮವಿತ್ತೆ ಬದುಲ ನಿರ್ಮಿಸಲು ಕೃಷ್ಣನೆ ಹಾಗೆಕರ್ಮವೆನ್ನದೀಗಲೆನ್ನ ಸಲಹು ಕೃಷ್ಣನೆ 8ದುರಿತ ದುಃಖದಿಂದ ನೋವ ಜನರ ಕೃಷ್ಣನೆ ಅವರದುರಿತಗಳ ನೂಕಿ ನಿನ್ನೊಳಿರಿಸು ಕೃಷ್ಣನೆತಿರುಪತೀಶ ದೇವ ವೆಂಕಟೇಶ ಕೃಷ್ಣನೆ ಮಾಯಾತೆರೆಯ ತೆಗೆದು ನಿನ್ನ ನಿಜವ ತೋರು ಕೃಷ್ಣನೆ 9ಓಂ ಸತ್ಯಸಂಕಲ್ಪಾಯ ನಮಃ
--------------
ತಿಮ್ಮಪ್ಪದಾಸರು
ಹುಡದಿಯಾಡುವದೇನು ಮಡದಿಯೋರ್ವಳು ನಾನು ಮಮತೆಯದು ಸರಿಯಲ್ಲಾ ಪ ನಾರೊಮೈಯವನಾಗಿ ಭಾರಪೊತ್ತವನಾಗಿ ಭಾರಿ ಸೂಕರನಾಗಿ ಬೆದರಿಪ ಕ್ರೂರಡವಿ ಮೃಗರಾಜನಾಗಿ 1 ಪೋರಪಟು ತಾನಾಗಿ ಶೀರ್ಪರ ಶುದ್ರತನಾಗಿ ಆರ್ಭಟಿಪ ಕೋದಂಡ ಕರನಾಗಿ ಧೃತ ಚಕ್ರನಾಗಿ2 ತೀರ ಬತ್ತಲೆಯಾಗಿ ಆರೂಢಹಯ ತಾನಾಗಿ ಪಾಯ [?] ಕಾಣೆ ಧೀರನರಸಿಂಹವಿಠಲನಾಗಿ 3
--------------
ನರಸಿಂಹವಿಠಲರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನÀ ಅರ್ಜುನಸಾರಥಿ ಮೂರ್ಜಗದೊಡೆಯನ ಪ. ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ[ಭೂಧರ]ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ 1 ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ2 ಮಾತೃದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನ ಕೃಷ್ಣಾವತಾರನಬೌದ್ಧ ಸ್ವರೂಪನ ಹಯವÀನೇರಿದ ಕಲ್ಕಿಹಯವದನನ ದಿವ್ಯ 3
--------------
ವಾದಿರಾಜ
ಹೇ ಪಾಪಿ ಮನಸೇ ನೀ ನಾರಾಯಣೆನೆಲೋ ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ ‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ ನಾಲಿಗೆಯಿಂದ್ಹೊರಡುವನಿತರೊ ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು ನಿವೃತ್ತಿಯಾಗಿ ಮಹ ಪಾವನನೆನಿಪುದು 1 ‘ರಾ’ ಎಂದು ಮುಖದಿಂದ ಹೊರಟ ಕೂಡಲೆ ಸರ್ವ ರವರವನರಕದ ಯಾತನಳಿದು ಭವ ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು ರಾಜಿಪ ಪರಲೋಕ ಸದರವೆನಿಸುವುದೆಲೊ 2 ‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3 ‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ ಕರತಲ ಮಾಗಿ ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ ನಿತ್ಯಾನಂದದ ಪದವಿ ಕೈವಶವಹದೆಲೊ 4 ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ ನಿಜಗುಣನನುಪಮಮಹಿಮೆ ನಿಜಮತಿಯಿಂದರಿತು ನಿರ್ಮಲ ಮನಸಿನಿಂ ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5
--------------
ರಾಮದಾಸರು
ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಹೊಂದದಿರುವಿ ಯಾಕೆ ಮನವೆ ಇಂದಿರೇಶನ ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ. ಸುತ್ತಿ ಬರುವಿ ನೀ ಮತ್ತೆ ವಿಷಯದಿ ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1 ತೋಷಗೊಳುವೆನೆಂಬಾಸ್ಥೆ ತಾಳುವಿ ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2 ಅರಿಯದಾದಿ ನೀ ಹರಿಯ ಗುಣಗಳ ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3 ಕೇಳು ನುಡಿಯನು ಕರುಣಾಳು ಒಡೆಯನು ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4 ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ