ಒಟ್ಟು 1285 ಕಡೆಗಳಲ್ಲಿ , 108 ದಾಸರು , 1133 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದ್ದು ಮೋಹನರಾಯಾ | ಅಸ್ಮದ್ಗುರೋರ್ಗುರುಶುದ್ಧ ಜನ ಸಂಪ್ರೀಯ | ನಿಮಗೊಂದಿಸುವೆ ಭವಬಂಧ ಪರಿಹರಿಸಯ್ಯಾ | ಬುಧರಿಂದಗೇಯಾ ಪ ಪಂಕಜ ಮೋದ ಪಾದ ನಂಬಿದೆ ಅ.ಪ. ದೇವಮುನಿನುತ ಪೀಠಾ | ವರ ಚಿಪ್ಪಿಗಿರಿಯಲಿ ದಿವ್ಯ ಭವಹರ ಮಂತ್ರಾ | ಅಂಕಿತ ಸುತಾರಕಪ್ರವರ ಪೊಂದಿದೆ ಪೋತ | ಜಪಿಸುತ್ತ ಮನದೀಶರ್ವವಂದ್ಯ ವಿಧಾತಾ | ಪಾದಾಬ್ಜ ಭಕುತಾ ||ಶ್ರೀ ವರರ ಕರಕಮಲಜಾತನೆ ಭುವಿಯ ಸತ್ತೀರ್ಥಗಳ ಚರಿಸುತ ಪಾವಮಾನಿ ಮತಾಬ್ಧಿಜಾತರ | ಪಾವನವ ಮಾಡ್ಯವನಿಯಲಿಮೆರೆದೆ 1 ಭೃಂಗ ಮುದ್ದು ಮೋಹನಾರ್ಯ ಗುರುರೂಪದೇಶವ ವಿಹಿತ ಮಾರ್ಗದಿಗೈದು ತಂದೆ ಮುದ್ದು ಮೋಹನಾಭಿಧನೆಂದು ಕರೆದೆಯೊ 2 ಗುರುವಿನಾಣತಿಯನ್ನಾ | ಪೊಂದುತಲಿಸ್ವಪ್ನದಿಸಿರಿವಿಜಯ ವಿಠಲನ್ನಾ | ನಿಜಪುರದಿ ನಿಲಿಸಿನಿರುತ ಅರ್ಚನೆಯನ್ನಾ | ಸ್ಥಿರಪಡಿಸಿ ಮುನ್ನಅರಿತು ಮನದಲಿ ನಿನ್ನ | ಉತ್ಕ್ರಮಣವನ್ನಾ ||ಶೌರಿ ದಾಮೋದರನ ಮಾಸದಿ | ವರದತುರ್ದಶಿ ಅಸಿತಪಕ್ಷದಿಸಿರಿ ಗುರೂ ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದೆ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನರೇಯ | ಅಸ್ಮದ್ಗುರೋರ್ಗುರುಮುದ್ದು ಮೋಹನ ಪ್ರೀಯ | ಲೋಕೈಕ ವಂದ್ಯನೆಮಧ್ವಮುನಿ ಸಂಪ್ರೀಯ | ಕಾಯಯ್ಯ ಜೀಯ ಪ ಉದರ ವಾಸಿತ ಸೃಜ್ಯ ಜೀವರ | ಸದಯದಿಂದಲಿ ಸೃಜಿಸಲೋಸುಗಮುದದಿ ಬಯಸುತ ಶ್ರೀಧರ ಹರಿ | ವದಗಿ ಚತುರ ವ್ಯೂಹ ರಚಿಸಿದ ಅ.ಪ. ಮಾಧವಗೆ ಪ್ರಿಯೆ ಅಂಭ್ರಣೀ | ಪ್ರಲಯಾಬ್ದಿ ಶಯನನಆದರದಿ ತ್ರಯಕಭಿಮಾನಿ | ತುತ್ತಿಸಲು ಜಗವನುಮೋದದಲಿ ಸೃಜಿಸುವ ಹವಣೀ | ಶ್ರೀಹರಿಯು ತಾನುಗೈದು ರೂಪ ಸುಧಾರಣೀ | ವಾಸುದೇವಭಿಧಾನಿ ||ಆದಿ ಸೃಷ್ಟಿಯ ಮಾಡಲೋಸುಗ | ಆದಿ ಮಾಯಾತ್ಮಿಕೆಯು ಲಕ್ಷ್ಮಿಯಮೋದದಿಂದಲಿ ಕೂಡುತಲೆ ತಾ | ಸಾಧಿಸಿದ ತಾರತಮ್ಯ ಸೃಷ್ಟಿಯ 1 ಕೃತಿ ಕೃತಿ ಶ್ರದ್ಧೆಯರಾಗ ಸೃಜಿಸಿದ 2 ಸೂತ್ರ ಶ್ರದ್ಧೆಯರಿಂದ | ಕಾಲಮಾನಿಯ ನಂದಗರುಡನ್ನ ಸೃಜಿಸುತ ನಂದ | ಬೆರೆದು ಶಾಂತಿಯಲಿಂದ ||ಧೀರ ಗುರು ಗೋವಿಂದ ವಿಠಲನು | ಶೂರ ಅನಿರುದ್ದಾಭಿಧಾನದಿನಾರ ವಾಣಿ ಬ್ರಹ್ಮರಿಂದಲಿ | ಮೂರು ವಂದರ ವ್ಯೂಹ ರಚಿಸಿದ 3
--------------
ಗುರುಗೋವಿಂದವಿಠಲರು
ಮುಳಬಾಗಲುರಂಗಸ್ವಾ'ುೀ ಯಮ್ಮನುಳುಹಬೇಕು ಭಕ್ತಪ್ರೇ'ುೀ ಪನಳಿತೋಳು ಕಳೆಮುಖ ತಲೆಗೆ ಕಿರೀಟವುನಳಿನಲೋಚನಮೂರ್ತಿ ಕಳೆುಂದ ಬೆಳಗುವೆಅ.ಪಅದ್ವೈತ ಶಾಸ್ತ್ರಾನುಭವರು ನಮ್ಮಅಣ್ಣಯ್ಯಸ್ವಾ'ುಯ ಸುತರೂಸಾಧ್ವೀಗುರ್ರಮಗರ್ಭಾಂಬುಧಿ ಶಶಿಯಾಗಿಸದ್ವಿಲಾಸದೊಳು ಸಂಜನಿಸಿದ ಚಲುವ 1ಕೃತ್ತಿಕಾನಕ್ಷತ್ರ ಪ್ರಥಮಾ ಪಾದತಿಥಿಯು ದ್ವಾದಶಿ 'ಭವನಾಮಾ'ತವಾದ ಧನುರ್ಮಾಸ ಸ್ಥಿರವಾರದುದಯದೊಳ್‍ಪೃಥಿ'ೀಪಥನವಾದ ಪರಮಪುರುಷಮೂರ್ತಿ 2ಸದ್ಗುಣದಾಟಿನೋಟಗಳೂ ಶಾಸ್ತ್ರ'ದ್ಯ ಸಂಯೋಗಪಾಠಗಳೂ ಸದ್‍ವೃದ್ಧಿ ಸ'ಯ ವ್ಯಾಪಾರ ವರ್ಜಿತಮಾಡಿಶುದ್ಧವೈಷ್ಣವ ತುಲಸಿರಾಮರ ಭಜಿಸುವ 3ಹರಸೀ ವಾಗೀಶಕಿರೀಟಾ ಗುರುಪರಂಪರೆ ಕಥೆನುಡಿದಾಟ ಹರುಷದಿ ಮೆಚ್ಚಿಸಿ ಧರಿಸಿ ಕಿರೀಟಾ ನಿರುಪಮ ಪರತತ್ವದೊಳಗೆ 'ಶೇಷಾ 4ಪರಕಾಲಮಠಕಾಗಾ'ುಸಿದೇ ಜನರತರುಣೋಪಾಯಗಳ ಮಾಡಿಸಿದೇತಿರುಮಂತ್ರಸಂಸ್ಕಾರ ಚರಮಾರ್ಥದೊರಕಿಸಿಪರಮಪಾವನರಾಗಿ ಮಾಡುತಲಿರುತಿಹ 5ವರಯತಿಗುರುಗಳ ಭಾಷಾ ಪೂರ್ಣಪರತತ್ವಬೋಧೆ ಗುಣಭೂಷಪರಮಾನುಭವಜ್ಞಾನ ಅರು' ಭಕ್ತರನೆಲ್ಲ ಪರಲೋಕಸಾಧನ ಅರಿವು ತೋರಿಸುವಂಥಾ 6ಚನ್ನಪಟ್ಣಾದಿರಾಮಕೋಟಿ ಅಲ್ಲಿಜನಕೆನೀ ತುಂಬಿದೆ ನಾಟಿಮುನ್ನುಮಾಡಿದ ಪಾಪವೆಲ್ಲವು ಪರಿಹಾರವುನ್ನತಮಾರ್ಗವ ತೋರಿದ ಗುರುದೇವ 7ರಾಮಕೃಷ್ಣೋತ್ಸವಗಳನೂ ಬಹುಪ್ರೇಮದಿನಡೆಸಿದಾದರನೂಆಮಹಾ ಕಾರ್ಯಕಾತುರದುರಂಧರನೂುೀಮ'ಯೊಳು ಪ್ರಖ್ಯಾತನಾಗಿಹನೂ 8ಪುರಪುರಗ್ರಾಮಗಳಲ್ಲಿ ಗುರು ತಿರುನಕ್ಷತ್ರೋತ್ಸವವಲ್ಲಿಪರಮವೈಭವದಿಂದ ಸ್ಥಿರವಾಗಿ ನಡೆಯಲುಹರುಷದಿ ಸೌಲಭ್ಯ ದೊರಿಕಿಸಿ ಇರುವಂಥಾ 9ಪ್ರತಿವರ್ಷ ಧನುರ್ಮಾಸ ಭಜನೇ ಒಳ್ಳೆಶೃತಿಮೃದಂಗವು ತಾಳರಚನೇಸತತವು ಹರಿಕಥೆ ತೀರ್ಥಪ್ರಸಾದವು'ತಕರಗುರುಸೇವಾ ದುರಂಧರಬಿರುದುಳ್ಳ 10ಭರತಪುರೀವಾಸಶ್ರೇಷ್ಟಾ ಗುರುವರತುಲಸಿರಾಮ ಪ್ರತಿಷ್ಠಾಪರಿಪರಿತತ್ಸೇವಾನಿರತ ಸಂತುಷ್ಟಾಗುರುಪಾದಸರಸಿಜ ಭೃಂಗಾವೆ ಸ್ವಷ್ಟಾ 11ಅಪರೋಕ್ಷಜ್ಞಾನ ಸಂಪೂರ್ಣ ಜನ್ಮಸಫಲಮಾರ್ಗದಲ್ಲಿ ಉತ್ತೀರ್ಣಾ ಅಪರಾಧಗಳನು ಮನ್ನಿಸಿ ಶ್ರಿತಜನರನ್ನುಸಫಲಗೊಳಿಸಿ ಜನ್ಮಸಾರ್ಥಕಪಡಿಸುವ 12ಪತಿತಪಾಮರರಿಗೆಯೆಲ್ಲಾಪ್ರತಿಫಲ'ಲ್ಲಾದುಪದೇಶ ಬಲ್ಲಾ'ತಕರವಾಗಿ ತೋರ್ಪುದು ಶಿಷ್ಯಜನಕೆಲ್ಲಾ ಸತತವು ತವಪಾದ ಗತಿಮೋಕ್ಷದಾಯಕ 13ಜ್ಞಾನಭಕ್ತಿಯು ವೈರಾಗ್ಯ ಸುಜ್ಞಾನದಿ ತುಳುಕುವ ಭಾಗ್ಯಮಾನವ ಜನ್ಮದಿ ಅವತರಿಸಿರುತಿಹದೀನರ ಮುಕ್ತಿಗೆ ಕಾರಣವಾಗಿಹ 14ಅಂಗ ದ್ವಾದಶನಾಮಧಾರಾ ಬಹುಶೃಂಗಾರತರ ಮಕುಟಾಂಬರಾರಂಗುಮಂಟಪದಿ ಲಂಘಿಸಿ ರಾಗ ಪಾಡುತ್ತಮಂಗಳಕರ ತುಲಸಿನಳಿನಾಕ್ಷಹಾರುಳ್ಳ 15ಗೃಹಮಣಿ ಸುಬ್ಬಾಂಬನವರೂ ನಿಮ್ಮಮಹದಾಂಶ ಸುಗುಣವಂತೆಯರುಸಹಚರಿಸುತ ಪುರಗ್ರಾಮ ಮಾದರಿಯಾಗಿಸಹಪತ್ನಿಸ'ತ ಭಕ್ತರನು ಪಾಲಿಸತಿರ್ಪಾ 16ದಿನಚರಿಬರುವ ದಾಸರನೂ ಮನದನುವಾರಿತಾನ್ನದಾನವನೂಮನದೊಳು ಭಕ್ತರವೊಡಲ ಪರೀಕ್ಷಿಸಿಘನವಾದ ಮೋಕ್ಷಾರ್ಹವಾದನರ ಕೈಪಿಡಿದ 17ಅಂಕಿತಮಾಡದೆ ುಹೆನೂ ಚಕ್ರಾಂಕಿತ 'ಲ್ಲದ್ಯೋಚಿಪೆನೂ ಕಿಂಕರನಾಗಿ ಬೇಡುವೆ ಪಾದವನೂಅಂಕಿತಕನುವiತಿ ಆಗಹೊಂದುವೆನೂ 18ಸೋಮೆಗೌಡನ ಪುರವಾಸಾ ರಂಗಸ್ವಾ'ುದಾಸರ ದಾಸದಾಸಪ್ರೇಮಭೈರವಗೌಡನೊಳಗೆ ತೋರಿಸಬೇಕು ಸ್ವಾ'ುನಿನ್ನಾಜ್ಞೆಗೇ ಬಾಗಿದಂಕಿತ'ದು19
--------------
ಮಳಿಗೆ ರಂಗಸ್ವಾಮಿದಾಸರು
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು
ಮೃಡನ ಜಟಾಂತರವಾಸಿ ನಾಮಕಳೆ ಪ ನಿರುತ ಹರಿ ಗುರು ಕರುಣಾ ಪಾತ್ರೆ ಪರಮ ಪುರುಷ ದೂಷಿ ನಿಚಯ ವೀತಿ ಹೋತ್ರೆ 1 ದುರಿತ ಮಾರ್ಗಚರಿತ ಜನ ಹೃತ್‍ಶೂಲೆ ಮದನ ಶರಜಾಲೆ 2 ನಿವಾರಿತ ಮಮತಾ ಪಾಶ ವಾರಂ ವಾರೆ ಹರಿಕಥಾಶ್ರವಣ ದಳಿತ ಅಶ್ರುಧಾರೆ 3 ವರಸತ್ಕಲಾಪ ಮಂದಾಯು ಹರಣೆ ಪರಿಪರಿ ಸುಕ್ಷೇತ್ರ ಚರಿತ ಚರಣೆ 4 ಗುರುದತ್ತಾಶ್ರೀತ ವರಸುಪಥೆ ಹರಿಸ್ಮರಣಾವಿನಾ ನ ಜೀವಿತ ಶಪಥೆ 5 ಪರಿಕರಾ ಪರಿತದಾಕಾರ ವೀಕ್ಷಿತ ನೇತ್ರೆ ಸರಿತಶ್ವಾಸ ಸಾವೃತ ಪರಿಮಳಗಾತ್ರೆ 6 ಲಜ್ಜೋದಧಿ ನಕ್ಷೇಪಿತ ಗಜಗಮನೆ ಅರ್ಜಿತಾಂಗಾರ ವಿಲಸಿತ ಶೃಂಗಾರ ವದನೆ 7 ರುಜು ಜ್ಞಾನಭಕ್ತಿ ವಿಧಾರಣ ಶಕ್ತೆ ವಿಜಯ ರಾಮಚಂದ್ರವಿಠಲ ಪದ ಸೇವಾಸಕ್ತೆ 8
--------------
ವಿಜಯ ರಾಮಚಂದ್ರವಿಠಲ
ಮೇಲು ಕೋಟೆ ತಿರುನಾರಾಯಣ ಚರಣಂ ಶರಣಂ ಸುರ ಮುನಿ ವಲಯಂ ಯದುಗಿರಿನಿಲಯಂ ಪ ಗುರುರಾಮಾನುಜ ಹೃದಯಭರಣಂ ಸ್ಮರವರ ಸುಂದರಮನಿಶಂ ಸದಯಂ ಅ.ಪ ಯತಿರಾಮಾನುಜ ಶೆಲ್ವಕುಮಾರಂ ಪತಿತಪಾವನ ಮಾಯುತ ಮಣಿಹಾರಂ ಸತತಾನಂದದ ಪುಣ್ಯಶರೀರಂ ಶತಪತ್ರಾಯುತ ನೇತ್ರಮುದಾರಂ 1 ವಿರಾಜಿತ ಮಸ್ತಕಮಮಲಂ ಪರಮ ವೈಭವೋತ್ಸವ ರಾರಾಜಿತ ಪುರುಷೋತ್ತಮ ಕೇಶವ ಮಾಲೋಲಂ 2 ಪರಮ ಪುಣ್ಯತೀರ್ಥಾಕರ ಶೋಭಿತ ನರಹರಿ ಗಿರಿಸಂಭೂಷಿತ ಧಾಮಂ ನಿರುತ ದಯಾಕರ ಮಾಂಗಿರಿಪತಿ ಭೂ ಮಾಧವ ಜಗದಭಿರಾಮಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ ಮೇಲು ಮೂಜಗಸೂತ್ರ ಹರಿನಾಮ ಪ ಕಾಲಕುಜನಕುಲ ಹರಿನಾಮ ಪಾಲಸುಜನಗಣ ಹರಿನಾಮ ಜಾಲಮಾಯ ದರ್ಪಣ್ಹರಿನಾಮ ವಿಶ್ವ ಹರಿನಾಮ ಅ.ಪ ಶರನಿಧಿಮಂದಿರ ಹರಿನಾಮ ಶರಧಿಮಥನ ಮುರಹರಿನಾಮ ಪುರತ್ರಯಸಂಹರ ಹರಿನಾಮ ಸುರಗಣಭೋಜನ ಹರಿನಾಮ ಶರಣರ ಸಿರಿತಾನ್ಹರಿನಾಮ ಪರತರ ಪಾವನ ಹರಿನಾಮ1 ಶಾಪವಿಮೋಚನ ಹರಿನಾಮ ತಾಪತ್ರಯಗಳ್ಹರ ಹರಿನಾಮ ಗೋಪೇರಾನಂದ ಲೀಲ ಹರಿನಾಮ ಕಪಾಲಧರನುತ ಹರಿನಾಮ ಗೌಪ್ಯಕೆ ಗೌಪ್ಯದ ಹರಿನಾಮ 2 ದುರಿತ ದಾರಿದ್ರ್ಯ ದೂರ್ಹರಿನಾಮ ಪರಿಹರ ಜರಾಮರಣ್ಹರಿನಾಮ ನರನ ಸಿರಿಯ ಭಾಗ್ಯ ಹರಿನಾಮ ಸುರತರು ಹರಿನಾಮ ಅರಿವಿನ ಅರಮನೆ ಹರಿನಾಮ ಪರಕ ಪರಮಸಿರಿ ಹರಿನಾಮ 3 ನಿಜಮತಿ ಭಂಡಾರ ಹರಿನಾಮ ಕುಜಮತಿ ಖಂಡನ ಹರಿನಾಮ ಭಜಕರನಿಜಧೇನ್ಹರಿನಾಮ ಭುಜಗಾದ್ರಿ ಪರ್ಯಂಕ ಹರಿನಾಮ ದ್ವಿಜರಿಗಮೃತನಿಧಿ ಹರಿನಾಮ ಅಜನಿಗುತ್ಪತ್ತಿ ಮಂತ್ರ ಹರಿನಾಮ 4 ವೇದಗಳಾಧಾರ ಹರಿನಾಮ ಸಾಧುಸಂತ ಪ್ರೇಮ ಹರಿನಾಮ ಭೇದವಾದÀರಹಿತ್ಹರಿನಾಮ ಸಾಧಿಸಲಸದಲ ಹರಿನಾಮ ಆದಿ ಅನಾದಿವಸ್ತು ಹರಿನಾಮ ಭೋಧ ಸ್ವಾದಸಾರ ಹರಿನಾಮ 5 ಕಾಲ ಹರಿನಾಮ ಕೀಳರ ಎದೆಶೂಲ್ಹರಿನಾಮ ಶೀಲರ ಜಪಮಾಲ್ಹರಿನಾಮ ಲೋಲಗಾನಪ್ರಿಯ ಹರಿನಾಮ ಕೀಲಿ ವೇದಾಂತದ ಹರಿನಾಮ ಫಾಲನೇತ್ರಗೆ ಶಾಂತಿ ಹರಿನಾಮ 6 ಪ್ರಳಯಕೆ ಅಳುಕದ ಹರಿನಾಮ ಪ್ರಳಯ ಪ್ರಳಯಗೆಲುವ್ಹರಿನಾಮ ಮಲಿನದಿ ಸಿಲುಕದ ಹರಿನಾಮ ಚಲಿಸದ ನಿರ್ಮಲ ಹರಿನಾಮ ಬೆಳಗಿನ ಬೆಳಗೀ ಹರಿನಾಮ ಕುಲಮುನಿ ಪಾವನ ಹರಿನಾಮ 7 ವಿಷಮಸಂಸಾರಖಡ್ಗ ಹರಿನಾಮ ವ್ಯಸನಕಾಷ್ಠಕಗ್ನಿ ಹರಿನಾಮ ವಿಷಕೆ ಮಹದಮೃತ ಹರಿನಾಮ ಮಸಣಿಮಾರಿಧ್ವಂಸ ಹರಿನಾಮ ಅಸಮಸುಖದ ಋಣಿ ಹರಿನಾಮ ವಸುದೇಜೀವಜೀವಳ್ಹರಿನಾಮ8 ಧರ್ಮಶಾಸ್ತ್ರದ ಗುಟ್ಟು ಹರಿನಾಮ ಮರ್ಮ ತಿಳಿಸುವ ರಟ್ಟು ಹರಿನಾಮ ಕರ್ಮ ಕಡಿಯುವ ಶಸ್ತ್ರ ಹರಿನಾಮ ನಿರ್ಮಲಾನಂದ ಪದವೀ ಹರಿನಾಮ ನಿರ್ಮಾಣ ನಿಜಜ್ಞಾನ ಹರಿನಾಮ ಬ್ರಹ್ಮಕಿಟ್ಟಿಗುರಿ ಹರಿನಾಮ 9 ಭವಗುಣಮರ್ದನ ಹರಿನಾಮ ಭವನಿಧಿ ಸೇತುವೆ ಹರಿನಾಮ ಭವನ ಭೀತಿಹರ ಹರಿನಾಮ ರವಿಕುಲ ಪಾವನ ಹರಿನಾಮ ಬುವಿತ್ರಯ ಪವಿತ್ರ ಹರಿನಾಮ ಸಾಯುಜ್ಯಪದಸ್ಥಾನೀ ಹರಿನಾಮ 10 ಸತ್ಯಕ್ಕೆ ಬಹು ನಿರ್ಕು ಹರಿನಾಮ ಮಿಥ್ಯಕ್ಕೆ ಅನರ್ಥ ಹರಿನಾಮ ನಿತ್ಯಕ್ಕೆ ಮಹಸುರ್ತು ಹರಿನಾಮ ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ ಅರ್ತವರಿಗೆ ಗುರ್ತು ಹರಿನಾಮ ಭೃತ್ಯಜನರ ಮತ್ತು ಹರಿನಾಮ 11 ಮಾಯಕ್ಕೆ ಪ್ರತಿಮಾಯ ಹರಿನಾಮ ಮಾಯ ಕತ್ತಲುನಾಶ ಹರಿನಾಮ ಕಾಯಕ್ಕೆ ಶೋಭಾಯ ಹರಿನಾಮ ಭಾವಕ್ಕೆ ಪರಿಶುದ್ಧ ಹರಿನಾಮ ತಾಯಿತಂದೆ ಜೀವಕ್ಹರಿನಾಮ ಅಮೃತ ಹರಿನಾಮ 12 ಪುಣ್ಯ ಶರಧಿಗೆ ಚಂದ್ರ್ಹರಿನಾಮ ಮನ್ನಣೆ ಮೂಲೋಕದ್ಹರಿನಾಮ ಧನ್ಯರಿಗೆ ಧನ್ಯ ಹರಿನಾಮ ಉನ್ನತ ಸಾಮ್ರಾಜ್ಯ ಹರಿನಾಮ ಮುನ್ನ ಕೈವಲ್ಯಪದ ಹರಿನಾಮ ಸನ್ನಿಧಿ ವೈಕುಂಠ ಹರಿನಾಮ 13 ನಿಗಮಕೆ ಸೊಬಗಿನ ಹರಿನಾಮ ಸುಗುಣರೊಳ್ನೆಲೆಗೊಂಡು ಹರಿನಾಮ ಅಗೋಚರ ಆಗಮಕ್ಹರಿನಾಮ ಸೊಗಸುವ ಭಕ್ತರಲ್ಹರಿನಾಮ ಅಗಜೇಶ ಪೊಗಳುವ ಹರಿನಾಮ ಅಗಜೆಯು ಒಪ್ಪಿದ ಹರಿನಾಮ 14 ವಿಮಲ ಗುಣಗಣ ಹರಿನಾಮ ದಮೆ ದಯಾನ್ವಿತ ಹರಿನಾಮ ಶಮೆ ಶಾಂತಿಮಂದಿರ ಹರಿನಾಮ ಸುಮನಸ ಕಲ್ಪದ್ರುಮ ಹರಿನಾಮ ನಮಿತ ಸುರಾದ್ಯರಖಿಲ ಹರಿನಾಮ ಅಮಿತ ವಿಶ್ವರೂಪ ಹರಿನಾಮ 15 ಮೂರು ಕಾಲದರಿವದ್ಹರಿನಾಮ ಮೂರಾರಿಕ್ಕಡಿಗೈವುದ್ಹರಿನಾಮ ಪಾರಪಂಚ ಪರುಷ್ಹರಿನಾಮ ಸಾರಸೌಖ್ಯಾಂಬುಧಿ ಹರಿನಾಮ ದಾರಿ ವೈಕುಂಠಕ್ಕೆ ಹರಿನಾಮ ಸೇರಿ ದಾಸರನಗಲದ್ಹರಿನಾಮ 16 ಭಕ್ತವತ್ಸಲ ಜಯ ಹರಿನಾಮ ಮುಕ್ತಿದಾಯಕ ಜಯ ಹರಿನಾಮ ಹತ್ತಾವತಾರ ಜಯ ಹರಿನಾಮ ಸತ್ಯ ಶೀಲ ಜಯ ಹರಿನಾಮ ನಿತ್ಯ ನಿರುಪಮ ಜಯ ಹರಿನಾಮ ಕರ್ತು ಶ್ರೀರಾಮ ಜಯ ಹರಿನಾಮ 17
--------------
ರಾಮದಾಸರು
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ಮೊದಲಿಂದ ನೀ ಕೆಟ್ಟೆ ಮನುಜ ಪ ಬುಧರಾಡುತಿಹ ನುಡಿಯನು ಕೇಳದೆ ಅ.ಪ ಹಗಲಿರುಳು ದುರ್ವಿಷಯದಲಿ ಬಿದ್ದು ಮಿಗೆ ದುರಿತಗಳ ಗಳಿಸಿ ಮುಂದೆ ಯ- ಮಗೆ ನಿರುತ್ತರನಾದೆಯಲೊ 1 ಹೆಣ್ಣು ಹೊನ್ನು ಮಣ್ಣುಗಳ ಬಯ ಸಿನ್ನು ದುರ್ಜನ ಸೇವೆಯಿಂ ಜನ್ಮವ ನಿರರ್ಥಕವ ಗೈಯುತಾ ರಣ್ಯದೊಳಿಹ ಪಿಶಾಚದೋಲ್ 2 ನಿರತವು ಸಜ್ಜನರಡಿಯ ಕಿಂ- ಕರನೆನಿಸಿ ನೀ ಬಾಳೆಲೊ ಕರುಣದಲಿ ಗುರುರಾಮ ವಿಠ್ಠಲ ಕಾಯುವನು ಸಂದೇಹ ಬಿಡು 3
--------------
ಗುರುರಾಮವಿಠಲ
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಮೋಹನ ನವ ಭವನ ಪರೇಶನ ಪ ದುರಿತ ಭವ ಭಯ ವಿಮೋಚನನ ನೇಹದ ಗೇಹವು ಸಕಲ ಭುವನ ಸನ್ ಅ.ಪ. ಮಣಿ ಸ್ತಂಭಗಳು ಲಲಿತಕಾಂತಿಗಳ ಬೀರುತಲಿರ್ಪ 1 ನಿರುಪಮಾದ್ಭುತ ಶರೀರವಾಂತಿಹ ಉರಗಾಧಿಪನಿರವು ಕಾಣುವ ತ್ರಿಜಗನ್ 2 ಭೋಗಿರಾಜಶಯನೆ ವರಮೇಘಕಾಯನೆನಿಸಿ ಯೋಗಿವಿನುತ ನಿಜ ಲೀಲೆಯ ಪಾರ್ಥನಿ ಗಾಗಿ ತೋರಿಸಿದ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯತಿರಾಜ ಯತಿರಾಜ ಮಾಧವೇಂದ್ರ ಗುರು ಸಾರ್ವಭೌಮ ಪ್ರಭು ಪ ಧಾರುಣಿಯೊಳಗಪಾರವಾದ ವಿದ್ಯಾ ವಾರಿಧಿಚಂದ್ರಮ ವೈರಾಗ್ಯಮೂರುತಿ1 ಶಿಷ್ಟಶಿರೋಮಣಿ ಕಟ್ಟಳೆಯಿಂದ ಬಲು ದಿಟ್ಟತನದಿ ಯತಿಪಟ್ಟವೇರಿದನೀತ 2 ಭೇದದಿಂದತಿಶಯ ವಾದಿಪ ಮಹದು ರ್ವಾದಿಗಳನು ಗೆದ್ದು ನೀ ಸಾಧಿಸಿದಧಿಕಾರ 3 ಅಧಮರ ಉಪಟಳಕೆದೆಪೊಡೆಯದೆ ನಿಜ ಸದಮಲ ವೈಕುಂಠಪದವಿಗೆ ನಡೆದನು 4 ಮಧ್ವಶಾಸ್ತ್ರ ಪ್ರಸಿದ್ಧ ಪದ್ದತಿಗಳ ಸಿದ್ಧಿಪಡೆದು ಪರಿಶುದ್ಧನೆನಿಸಿಕೊಂಡ 5 ಗುರುವೆಂದೆನಿಸಿ ಭೂಸುರರನುದ್ಧರಿಸೀತ ಸ್ಥಿರವಾಗಿ ನಿಂತನು ಮೆರೆವ ಬುದ್ಧಿನ್ನಿಯೊಳು 6 ಪರಮಭಕ್ತಿಯಿಂದ ನಿರುತ ಸೇವೆಗೈದು ವರವ ಬೇಡಿರೆಲೋ ಭರದಿ ಕೊಡುವ ಮೆಚ್ಚಿ 7 ಆಸೆರಹಿತನನುಮೇಷ ಪೂಜಿಸಿರೊ ದೋಷ ದಾರಿದ್ರ್ಯವ ನಾಶಮಾಡುವನು 8 ಸ್ವಾಮಿ ಕೃಷ್ಣ ಶ್ರೀರಾಮನಾಮಾಮೃತ ಪ್ರೇಮದಿಗರೆಯುವ ಕಾಮಧೇನು ಸತ್ಯ 9
--------------
ರಾಮದಾಸರು
ಯತಿರಾಜಾ - ಪಾಲಿಸೊ ಎನ್ನ - ಯತಿರಾಜಾ ಪ ಯತಿರಾಜಾ ಪಾಲಿಸೊ ಎನ್ನ - ಅಹಂಮತಿಯ ಕಳೆದು ಗುರುವರೇಣ್ಯ | ಆಹ ಸತತದಿ ಹರಿ ಧ್ಯಾನ | ರತನನ ಮಾಡಿ ಸದ್ ಗತಿಯ ಸೇರುವಂಥ | ಪಥದಲ್ಲಿರಿಸೊ ರಾಜಅ.ಪ. ವೀಣಾ ವೆಂಕಟ ನಾಮಾಭಿಧ | ಕುಂಭಕೋಣ ಪುರದೊಳು ಮೆರೆದಾ | ಓವಿಜ್ಞಾನಿ ಸುಧೀಂದ್ರರೊಲಿಸಿದಾ | ಬಹುಮಾನವಾಗಿ ಶಾಲು ಪಡೆದಾ | ಆಹಏನು ಇದಾಶ್ಚರ್ಯ | ಮಾನ ಉಳಿವದೆಂತುನಾನೊಂದು ಕಾಣೆ | ನೆನುತಾವಸನ ಮುಂದಿಟ್ಟ 1 ಅಂದಿನಂದಿನ ಪಾಠಕ್ಕೆಲ್ಲ | ಟೀಕೆಛಂದಾಗಿ ಬರೆದಿರುವಲ್ಲ | ನಮ್ಮಹಿಂದಿನ ಸಂಶಯವೆಲ್ಲ | ನೀಗಿಮುಂದೆ ಜರುಗಿತು ಪಾಠವೆಲ್ಲ | ಆಹಎಂದು ನಮ್ಮ ವಸನ | ಕಂದ ನಿನ್ನಯ ಮೇಲೆಹೊಂದಿಸಿ ಮುದದಿಂದ | ಬಂದೆವೆಂದರ ಶಿಷ್ಯ 2 ಗುರುವು ಪಟ್ಟರು ಬಲು ಮೋದಾ | ಸುಧಾಪರಿಮಳಾರ್ಯರೆಂಬ ಬಿರುದಾ | ಪೊಂದಿಇರಲು ಕಾಲಾಂತರದಿಂದಾ | ಪಡೆದೆವರ ಯತ್ಯಾಶ್ರಮವವರಿಂದಾ | ಆಹಮೆರೆಸಿದೆ ರಾಮರ | ವರ ವೈಭವದಿಂದದುರುಳ ಮಾಯ್ಗಳಮತ | ತರಿದಿಟ್ಟೆ ವಾದದಿ 3 ಬೇಗೆಯಿಂದಳುತಿದ್ದ ಶಿಶುವಿಗೆ | ಚೈಲಆಗಸದೊಳು ನೀನು ನಿಲಿಸಿದೆ | ಹಾಂಗೆಮಾರ್ಗದಿ ಪ್ರಸವಿಸದವಳೀಗೆ | ನೀರನುಗಮಿಸುತ ನೀನು ಪೊರೆದೇ | ಆಹನಿಗಮಾಲಯ ವಾಸ | ರಾಘವೇಂದ್ರ ಗುರುವೆಬಗೆ ಬಗೆ ಗ್ರಂಥವ | ಮಿಗಿಲಾಗಿ ರಚಿಸೀದೆ 4 ಪಂಗು ಬಧಿರ ಮೂಕ ಜನರು | ನಿಮ್ಮಹಿಂಗದೆ ಬಂದು ಸೇವಿಪರು | ಬಂದಭಂಗಗಳೆಲ್ಲ ನೀಗುವರು | ಯತಿಪುಂಗನೆ ನಿನಗೆ ಸರಿಯಾರು | ಆಹಗಂಗಾ ಜನಕ ರೂ | ಪರಿಗಳು ನಾಲ್ಕರಿಂಅಂಗಲಾಚಿಪ ಜ | ನಂಗಳ ಪೊರೆಯುವ 5 ಅಘ ಪತಿ ಗೋ | ವಿಂದನ ಮಂದಿರಬಂದು ಸೇರುವುದಕ್ಕೆ | ಅಂದ ಸೋಪಾನವು 6 ವರಹಸುತೆ ತೀರ ವಾಸಾ | ಭಕ್ತಸುರತರುವೆ ನಿನ್ನ ದಾಸಾ | ನಾಗಿಇರಿಸೊ ಭೂ ತಳಾಧೀಶ | ಬೇಡ್ವೆವರ ಒಂದ ನಾನಿನ್ನ ಅನಿಶ | ಆಹಗುರುಗೋವಿಂದ ವಿಠಲನ | ಚರಣಾರವಿಂದವನಿರುತ ಭಜಿಸುವಂಥ ವರಮತಿ ಕೊಟ್ಟನ್ನ7
--------------
ಗುರುಗೋವಿಂದವಿಠಲರು