ಒಟ್ಟು 903 ಕಡೆಗಳಲ್ಲಿ , 96 ದಾಸರು , 717 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳುಪ್ರಸನ್ನ ಶ್ರೀ ಮತ್ಸ್ಯಾವತಾರ4ಲೀಲಾವತಾರನೇ ಪ್ರಳಯಾಬ್ದಿ ಸಂಚರನೇಮಾಲೋಲ ಸುಖಚಿತ್ ತನು ಮತ್ಸ್ಯರೂಪಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪಪ್ರಳಯದಲಿ ಭೂರಾದಿ ಲೋಕಂಗಳುಮುಳಗಿರಲು ಹುಯಗ್ರೀವನಾಮ ದಾನವನುಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1ಗೋವಿಪ್ರಸುರ ಸಾಧು ಜನರ ವೇದಂಗಳ-ಕಾವಸರ್ವೇಶ್ವರನೇ ಪುರುಷಾರ್ಥದಾತಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2ಹಂಸ ಐರಾವತ ತಿತ್ತಿರಾ ಶುಕಗಳುಈ ಪಕ್ಷಿಗಳಲ್ಲಿ ತರತಮ ಉಂಟುಸುಸುಖ ಐಶ್ವರ್ಯೋನ್ನಾಹ ಅದರಂತೇವೇಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3ಗುರುರ್ಗುರ್ರೋಗುರುಮನುಶುಕಮಧ್ವಾಂತಸ್ಥಪರಮಾತ್ಮಹರಿವಿಷ್ಣೋ ಉದ್ದಾಮಸಾಮಅರದೂರಅನಂತೋರು ನಿಜಶಕ್ತಿ ಪರಿಪೂರ್ಣಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4ಸರ್ವೋತ್ತಮನು ನಾರಾಯಣನೇ ಎಂದರಿತುದ್ರವಿಡ ದೇಶಾಧಿಪನು ಸತ್ಯವ್ರತರಾಯಸುವಿವೇಕದಿ ನಿನ್ನ ಕುರಿತು ತಪವಚರಿಸಿದನುಭಾವಶುದ್ಧನು ಸಲೀಲಾಶನ ದೃಢವ್ರತನು5ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತವೈವಸ್ವತಮನುವೇ ಇಂದಿನ ಮನುವುಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0ಅವನಿಗೆ ನಮೋ ಎಂಬೆ ನಿನ್ನವನೆಂದು 6ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿನಿಜ ಭಕ್ತಿಯಿಂದ ಜಲತರ್ಪಣವ ಚರಿಸೆಅಂಜಲಿಉದಕದಲಿ ಮುದ್ದು ಮರಿ ಮೀನೊಂದುಸರಿಜ್ಜಲ ಸಹಿತದಿ ಬಂದದ್ದು ಕಂಡ 7ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆಅರುಹಿತು ತನ್ನ ವೃತ್ತಾಂತವ ಆ ಮೀನುಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದುನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡುಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದಮರುದಿನ ಉದಯದಲಿ ಕಂಡ ಆಶ್ಚರ್ಯವ 9ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇಆಮತ್ಸ್ಯಮರಿ ಬೆಳೆದಿದ್ದು ಆಶ್ಚರ್ಯ ಕಂಡಕಮಂಡಲು ಸಾಲದೇ ವಿಸ್ತಾರವಾದ ಸ್ಥಳನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10ಉದಕತುಂಬಿದ ಕುಂಟೆ ಸರೋವರವನ್ನುಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯಅತಿಶಯ ಲೀಲಾ ವಿನೋದವ ಕಂಡ ರಾಜಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದುಮಹಾರಾಜನಿಗೆ ಆ ಮೀನು ಹೇಳಿ ತಾನುಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನುಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆಮೀನು ಮತ್ತೂ ದೊಡ್ಡದಾಯಿತು 12ಶತಯೋಜನ ಮಹಾವೀರ್ಯ ಜಲಚರಗಳುಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿಕಾವಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇಸರ್ವದಾ ನಮೋ ಜಗಜ್ಜ£್ಮ್ಞಧಿಕರ್ತ14ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನಪೂರ್ವಕ ನಿನ್ನಲ್ಲಿ ಸುಸ್ನೇಹರತನಾದವಿವೇಕಿ ಪ್ರಪನ್ನರ ಸಲಹಿಗತಿಈವಿ15ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲುಮುದದಿಂದ ಇನ್ನೂನು ನಿನ್ನವೃತತಿಜೇಕ್ಷಣ ಜಗತ್ಪತಿಯೇ ನೀನು ಆಮತಿವಂತನಿಗೆ ಪೇಳಿದಿ ಅವತಾರಕಾರ್ಯ 16ಏಳುದಿನವಾಗಲು ಭೂರಾದಿ ಲೋಕಗಳುಪ್ರಳಯಜಲದಲ್ಲಿ ಮುಳುಗಿ ಹೋಗುವವುಒಳ್ಳೇ ಓಷಧಿ ಸರ್ವವೀರ್ಯತರ ಬೀಜ -ಗಳಸಪ್ತಋಷಿ ಸಹ ಕಾದಿರು ಎಂದಿ17ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದುಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದುಅದರಲಿ ಅರೋಹಿಸಬೇಕು ಬೀಜಗಳಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18ಎಲ್ಲೆಲ್ಲೂ ಪ್ರಳಯಜಲತುಂಬಿತುಳಕಾಡುವುದುಲೋಲ್ಯಾಡುವುದು ನೌಕ ಗಾಳಿರಭಸದಲಿಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19ನಾವೆಯನು ಬಂಧಿಸಲುರಜ್ಜುಸರ್ಪವು ಎಂದುಸುವ್ರತ ರಾಜನಿಗೆ ಉಪಾಯ ಪೇಳಿದಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮವಿಶ್ವವಿಷ್ಣೋ ಸೃಷ್ಟಾ ಪಾತಾ ರಮೇಶ20ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆಹರಿನೀನು ಬೋಧಿಸಿ ಅಂತರ್ಧಾನವು ಆಗೇಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವುಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರುಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22ಚಂಡಮಾರುತ ಪ್ರಚಂಡ ಮೇಘವುಕರಿಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆಕಂಡು ನಾವೆಯ ರಾಜಕೊಂಡು ಬೀಜಗಳಕರಕೊಂಡು ಋಷಿಗಳ ಏರಿಕೊಂಡನು ಬೇಗ 23ಕೇಶವನೇ ನಿನ್ನ ಧ್ಯಾನಿಸಲು ಆಗಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲುಈಶ ನಿನ್ನಯ ಶೃಂಗಕ್ಕೆ ನೌಕವಕಟ್ಟಿಸಂಸ್ತುತಿಸಿದನು ಮಧುಸೂಧನನೇ ನಿನ್ನ 24ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯಶುಭತಯವಿಜ್ಞಾನಬೋಧಕವು ಅದರಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದಅನಾದಿಅವಿದ್ಯಾಪೀಡಿತ ಜನ ಸಂರಕ್ಷನ್ನ26ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನಮೇರು ಇತರಾ ದೇವಹೂತಿ - ಸುತ ಶರಣುಘೋರಸಂಸಾರ ಬಂಧಮೋಚಕಹರಿಯೇವರಸುಖಪ್ರದ ಸಂರಕ್ಷಕ ಮಾಂಪಾಹಿ27ಶಕ್ರಾದಿ ಜಗತ್ತಿಗೆಗುರುಗಂಗಾಧರನುಗಂಗಾಧರನಿಗೆಗುರುಪ್ರಾಣ ಪದ್ಮಜರುಪಂಕಜಾಸನ ಪ್ರಾಣರಿಗೆಗುರುರಮೇಶನು ಹರಿಯೇಆಗುರುಮೂಲಗುರು ಪರಮಗುರ್ರೋಗುರುವು28ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರುಎಂದು ತಿಳಿದುಬದ್ಧಜೀವರ ಮೋಕ್ಷ ಪುರುಷಾರ್ಥಅವಿದ್ಯಾsಜ್ಞಾನ ಕಳೆದು ಪುಟವಿಟ್ಟಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯುನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನುಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನುಶರ್ವಅಜಶಕ್ರಾದಿಗಳ ನಿಯಾಮಕನುಸರ್ವಾದಾನಂದಮಯ ಗುಣನಿಧಿ ಆತ್ಮನುಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31ದೇವದೇವೋತ್ತಮನೇ ಆದಿಪೂರುಷ ಶ್ರೀಶವಿಶ್ವೇಶ್ವರ ಮತ್ಸ್ಯರೂಪ ಭಗವಂತನೀ ವಿಹಾರವು ಮಾಡಿ ಪ್ರಳಯಾರ್ಣವದಲಿಕವಿವರ್ಯ ರಾಜನಲಿ ಸುಪ್ರೀತನಾದಿ 32ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದುಯುಕ್ತ ಕಾಲದಿ ಈಗ ಪ್ರಳಯವು ತೀರೆಸಾಧುವರ್ಯನು ಜ್ಞಾನವಿಜ್ಞಾನ ಕೋವಿದನುಸತ್ಯವ್ರತನಿಗೆ ಮನು ಪದವಿಯನು ಇತ್ತಿ 33ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯುಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಾಣೇಶ ದಾಸರ ತಾತ್ವಿಕಹಿನ್ನೆಲೆಯ ರಚನೆಗಳು219ಶ್ರೀಪೂರ್ಣಬೋಧಮತವಾ ನಂಬಿ |ಶ್ರೀ ಪತಿಯ ಒಲಿಸುವವರು ಕೇಳೀ ಪಆದಿಯಲಿಯಾದ ಚರಿತೆಯನ್ನುಪರ|ಮಾದರದಿಕೇಳಿಸುಜನಾ ||ರಾದವರು ಭಕುತಿಯಿಂದಾ ಮಹ ಪ್ರಳಯ |ವಾದ ತರುವಾಯ ಸೃಷ್ಟಿಯಾಗೇ 1ಸುರರೆಲ್ಲ ತಮ್ಮ ತಮ್ಮಾ ಸ್ಥಾನದಲಿ |ಸ್ಥಿರರಾಗಿ ಯುವರಾಜ್ಯಕೇ ||ಅರುಹನಾರೆನಲು ಅದಕೇ ಪೇಳಿದನು |ಹರಿಯು ಇಂತುಪಾಯವ ಕೇಳೀ 2ಒಂದು ದೇಹದಿ ಸರ್ವರೂ ಕ್ರಮನುಸಾರ- |ದಿಂದ ತೆರಳಿರಿ ಚೇತನಾ ||ಕುಂದುವದು ಆವನಿಂದಾ ಅವ ಶ್ರೇಷ್ಠ |ನೆಂದರಿವದೆಂದು ಸರಿದಾ ಕೇಳೀ 3ಹರಿಆಜÕದಂತೆ ತ್ಯಜಿಸೇ | ಕುಂಟನೂ |ಕುರುಡ ಮೂಕನು ಯನಿಸಿತೂ ||ಹಿರಿಯ ಪವಮಾನ ಬಿಡಲೂ ಎಲ್ಲರೂ |ಅರಿತರೂ ಕುಣುಪವೆಂದೂ ಕೇಳೀ 4ಮತ್ತೆ ಮೊದಲಂತೆಲ್ಲರೂ ವ್ಯಾಪಿಸಲು |ಬಿತ್ತು ಏಳಲಿಲ್ಲವದೂ ||ಸತ್ಯ ಸಂಕಲ್ಪ ಮರುತಾ ಸೇರಲದು |ತತ್ತಲಿಲ್ಲದೆ ಚಲಿಸಿತೂ ಕೇಳೀ 5ಅಂದಿನಾರಭ್ಯವಾಗೀ ತಿಳಿಸಿದನು |ಇಂದಿರೇಶನು ಈತನಾ ||ವಂದಿಪರಿಗೊಲಿವೆನೆಂದೂ ಇನ್ನಿದಕೆ |ಸಂದೇಹಉಂಟೆ ಬಂದೂ ಕೇಳಿ 6ಸ್ವಾಮಿ ಶ್ರೀ ರಾಮನಾಗೇ ಅವತಾರ |ವಾ ಮಾಡಿದನು ಮಾರುತಾ ||ಭೂಮಿಜೆಯದನುಜಒಯ್ಯಲೂ ಆ ಪುರಕೆ |ಪ್ರೇಮದಿಂದಲಿ ಚಿಗಿದನು ಕೇಳೀ 7ರಾಘವನ ಉಂಗುರವನೂ ವನದೊಳಗೆ |ಬ್ಯಾಗೆ ಇಂದಿರಿಗೆ ಕೊಟ್ಟೂ ||ಆಗಾ ಪೊಳಲನೇ ಸುಟ್ಟೂ ಹಾರಿತ್ವರ|ರಾಗಟಿಯ ಒಡಿಯಗಿತ್ತಾ ಕೇಳೀ 8ಇಂದ್ರಜಿತು ಮೋಹನಾಸ್ತ್ರಾ ಬಿಡಲಾಗಿ |ಅಂದಗೆಟ್ಟಿತು ಕಪಿ ಕುಲಾ ||ಇಂದಿರೇಶನ ಆಜÕದಿಂ ಆಗ ತ್ವರ- |ತಂದ ಸಂಜೀವನವನೂ ಕೇಳೀ 9ಅನಿಮಿಷರುಕಪಿಗಳಾಗೀ ನಿರುತ ರಾ- |ಮನ ಭಜಿಪರೀ ಕೆಲಸಕೇ ||ಅನುಕೂಲರೊಬ್ಬರಲ್ಲಾ ಒಬ್ಬ ಅಂ- |ಜನಿ ಸುತನೆ ಸೇವಿ ಮಾಡ್ದಾ ಕೇಳಿ 10ಉಪಕಾರ ಒಂದಕೆನ್ನಾ ಕೊಟ್ಟ ಮ್ಯಾ- |ಲೆ ಪರಿಮಿತ ಸೇವಿಗುಚಿತಾ ||ಸು ಪರೀಕ್ಷಿಸಿದರು ಕಾಣೇ ಭಳಿರೆ ಯಂ- |ದ ಪರಾಜಿತನು ಮೊಗಳಿದಾ ಕೇಳೀ 11ಈ ವಾಯು ಒಲಿದನೆಂದೂ ಒಲಿದ ಸು- |ಗ್ರೀವ ವಿಭೀಷಣಗೆ ರಘುಜಾ ||ಶ್ರೀವರನೆ ಕೃಷ್ಣನಾಗೀ ಅವತರಿಸೆ |ಐವರೊಳು ಭೀಮನಾದಾ ಕೇಳೀ 12ತರಣಿಮೊಮ್ಮಗನ ಸೇವೀ ಈ ವೃಕೋ- |ದರಮಾಳ್ಪನೆಂದುಶೌರಿ||ನರನ ರಥವನು ನಡಿಸಿದಾ ಇಲ್ಲದಿರೆ |ಥರವೆ ಇದು ಪಾಂಡವರಿಗೇ ಕೇಳೀ 13ಜೀವೇಶರೊಂದೆ ಎಂದೂ ವಾದಿಗಳು |ಭಾವಿಸಿರೆ ಮಧ್ವಮುನಿಯೂ ||ತಾ ವಿರಚಿಸಿ ಸುಗ್ರಂಥವಾ ನಿರ್ದೋಷ |ಗೋವಿಂದನೆಂದರುಹಿದಾ ಕೇಳೀ 14ಈತ ಮಾಡಿದ ಚರಿತೆಯಾ ಕಡೆಯಾಗಿ |ನಾ ತುತಿಸಲಾರೆ ಸ್ವಲ್ಪಾ ||ವಾತಸ್ಮರಣಿಯ ಮಾಡಲೂ ವೈಕುಂಠ |ಆತು ಇಪ್ಪದು ತಪ್ಪದೂ ಕೇಳೀ15ದೇಶದೊಳುತುಂಬಿಇಹ್ಯದೂ ಶ್ರೀ ಭಾರ- |ತೀಶ ಮಾಡಿದ ಮಹಿಮಿಯೂ ||ಲೇಶವಾತನ ಚರಿತ್ರೇ ಸ್ಮರಿಸೆ ಪ್ರಾ- |ಣೇಶ ವಿಠ್ಠಲ ಒಲಿವನೂ ಕೇಳೀ 16ಪ್ರಾಣದೇವರ ಕಥಿಯನು ಕೇಳಿದರೆ |ತಾನೆ ಇಹಪರದಿ ಬಿಡದೇ ||ಪ್ರಾಣೇಶ ವಿಠಲ ಕಾಯ್ವಾ ಇದಕೆ ಅನು- |ಮಾನಲೇಸಿನಿತವಿಲ್ಲವೂ ಕೇಳೀ13
--------------
ಪ್ರಾಣೇಶದಾಸರು
ಶ್ರೀ ರಾಜಸೂಯಾ ಅಗ್ರಪೂಜಾ ಸ್ತೋತ್ರ59ರಾಜನ ಭಾಗ್ಯವಿದು | ಧರ್ಮರಾಜನ ಭಾಗ್ಯವಿದು ಪರಾಜೀವಜಾಂಡದ ಏಕಸ್ವರಾಟ್ ಶ್ರೀಕೃಷ್ಣನರಾಜೀವಅಂಘ್ರಿಸುಯುಗ್ಮವರಾಜಸೂಯದಿ ತಾ ಪೂಜಿಸಿದ ಅ.ಪಚಿತ್ರವಿಚಿತ್ರವು ಸ್ತಂಭತೋರಣಗಳುರತ್ನ ಮಾಣಿಕ್ಯ ಮರುಗದದಿಚಂದ ಹೊಳೆವ ಸಭೆ ರಾಜರು ಸುತಪೋಧನರು ಕುಳಿತಿರೆ ಮಾಧವಗೆಮೊದಲು ಪೂಜೆಯ ಮಾಡಿ ಯಜÕವಾಚರಿಸಿದವಿಧಿಪೂರ್ವಕದಿ ಶ್ರಧ್ಧೆಯಲಿ1ಶಂತನುಸುತ ಗಾಂಗೇಯರು ನೆರೆದಿದ್ದಸಾಧು ಸನ್ಮುನಿಜನ ಮನದಂತೆಇಂದಿರೆಯರಸ ಶ್ರೀ ಕೃಷ್ಣಗೆ ಸಮರುಅಧಿಕರು ಇಲ್ಲದ ಜಗದೀಶವಿಧಿಈಶಾನದಿ ಸರ್ವನಿಯಾಮಕಕೃಷ್ಣನೇ ಪೂಜ್ಯನು ಎಂದರು ದೃಢದಿ 2ಗಂಗಾಜಲವ ಜಾಂಬೂನದ ಕಲಶದಿಮಾದ್ರೇಯನು ತಾ ತಂದೀಯೇಗಂಗಾಜನಕವರಾಂಗಿ ಸುವಕ್ಷ ಐಶಂಗವಾಸನ ಅರಿಶಂಖವ ಪಿಡಿದವನಅಂಘ್ರಿಸುಕಂಜದ್ವಯವ ಯುದಿಷ್ಠಿರಅವನೀಜನಗೈದ ಭಕ್ತಿಯಲಿ 3ಮನುಷ್ಯವತ್ ಲೀಲಾ ದ್ವಿಭುಜನು ಚಿನ್ಮಯಭಜಕಗೆ ಚತುರ್ಭುಜ ಕಾಣಿಸುವಜ್ಞಾನರೂಪದಿಹರಿವನಜಸಂಭವನಲಿಇಹ ಕ್ರಿಯಾರೂಪದಿ ವಾಯುನಲಿವಾಣೀ ಭಾರತಿಯಲಿ ಇಚ್ಚಾಶಕ್ತಿರೂಪದಿ ಪ್ರಚುರನು ಸರ್ವೇಶ 4ರಥನಾಭಿಯಲಿ ಅರಗಳ ತೆರದಿಸಮಸ್ತವು ಪ್ರತಿಷ್ಠಿತ ವಾಯುನಲಿಕ್ಷಿತಿಯಲಿ ಸ್ವಯಮೇವ ವಾಯುವೆಜನಿಸಿ ಜಗದಂತರಾತ್ಮ ಭೀಮನಾಗಿಯುಧಿಷ್ಠಿರನಲಿ ಸಮಾಭಿಷ್ಟನಾಗಿಹ ಸೌಮ್ಯರೂಪದಿ ಕೃಷ್ಣನ ಸೇವಿಸಲು 5ಸೌಮ್ಯರೂಪದಿ ಒಳಗಿದ್ದು ಶ್ರೀ ಕೃಷ್ಣಗೆಅಗ್ರ ಪೂಜಾದಿ ರಾಜಸೂಯತಾ ಮಾಡಿ ಸ್ವಯಂ ತನ್ನ ಅವತಾರಭೀಮಗೆ ಅಣ್ಣನೆಂದೆನಿಸುತಿಪ್ಪಧರ್ಮರಾಜನ ಕೈಯಿಂದ ಮಾಡಿಸಿದನುಭಕ್ತಾನುಕಂಪಿ ಶ್ರೀಹರಿಯ ಪ್ರೀತಿಸಿದ 6ಮನಶುಚಿಯಲಿ ಈ ನುಡಿಗಳ ಪಠಿಸುವಶ್ರವಣವ ಮಾಡುವ ಸುಜನರಿಗೆವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪಾಂಡವ ಪ್ರಿಯ ಶ್ರೀ ರುಕ್ಮಿಣೀಶಮನಶೋಕಾದಿ ತಾಪತ್ರಯ ನೀಗಿಸಿಯೋಗ್ಯವಾಂಛಿತವೀವ ಬಹುದಯದಿ 7
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶನೈಶ್ಚರ ಸ್ತೋತ್ರ96ಪಾಹಿಶ್ರೀನರಸಿಂಹಪ್ರಿಯ ಶನೈಶ್ಚರನೆ ನಮೋ ಸಂತತಪಾಹಿನಮೋ ಗ್ರಹರಾಜಶೌರಿ ಮಹೇಶ್ವರನೇ ಕೃಪಾಕರಪಪೃಥ್ವಿ ತತ್ವಾಭಿಮಾನಿಯೇ ನಮೋ ಕರ್ಮಪನು ಎಂಬಪುಷ್ಕರಮತ್ತು ಅಜಾನಜರು ಋಷಿಗಂಧರ್ವ ಮಹಾಸಮುದಾಯಕೆಮೇದಿನೀ ರಾಜರು ಮನುಷ್ಯರು ಸರ್ವರಿಗೂಗುರುಈಶ್ವರನೀ ದಯದಿ ಹರಿದಾಸರನ್ನ ಸಲಹುತಿಯೋ ಶರಣೆಂಬೆನೋ 1ಸೂರ್ಯಛಾಯಸೂನು ಕಾಲರೂಪಿ ಮಹಾಗ್ರಹ ನಮೋಕಾಯೊ ಜಟಿಲನೇವಜ್ರರೋಮನೇ ದಾನವರಿಗೆ ಭಯಂಕರತ್ರ್ಯಯಂಬಕ ನಾರದರಿಗುಪದೇಶಿಸಿ ಕೊಂಡಾಡಿದ ನಿನ್ನನ್ನುಖ್ಯಾತ ರಘುವಂಶೋತ್ಥ ಅತಿ ವಿಖ್ಯಾತ ದಶರಥ ಕೀರ್ತಿತ 2ಜ್ಞಾನ ಚಕ್ಷುರ್ನಮಸ್ತೇಸ್ತು ಕಶ್ಯಪಾತ್ಮಜಸೂನವೇತುಷ್ಟೋದದಾಸಿ ವೈರಾಜ್ಯಂ ರುಷ್ಟೋ ಹರಸಿ ತಕ್ಷಣಾತ್ನಿನ್ನನು ದಶರಥನು ಸ್ತುತಿಸಿ ನಮಿಸೆ ವರಗಳನಿತ್ತು ನೀಕ್ಷೋಣಿಜನ ಸಂರಕ್ಷಣೆಗೆ ಬಗೆ ಪಾದ್ಮ ಉಕ್ತದಿ ಅರುಹಿದಿ 3ಗಂಗಾ ಮಹಿಮ ರಕ್ಷೋಭುವನಪ್ರಸ್ಥಾನೋಕ್ತವು ತ್ವತ್‍ಕೃತತುಂಗಮಹಿಮ ಶ್ರೀಲಕ್ಷ್ಮೀ ಭೂಮಾನಾರಸಿಂಹನ ಸ್ತೋತ್ರವುರಾಘವಕೃತ ತ್ವತ್‍ಕೃತ ಈ ನುಡಿಗಳ್ ಪಠಿಸಿ ಕೇಳ್ವರ್ಗೆಶೋಕನೀಗಿ ಇಷ್ಟ ಲಭಿಸುವುದು ನೃಹರಿಪ್ರಿಯ ನೀ ಒದುಗುವಿ 4ವನರುಹಾಸನನತಾತಪ್ರಸನ್ನ ಶ್ರೀನಿವಾಸ ನೃಕೇಸರಿಘನ್ನದಯದಿ ಪ್ರಸನ್ನನಾಗಿ ಒಲಿಯೆ ಸಾಧನವಾಗುವಜ್ಞಾನ ಭಕ್ತಿ ವೈರಾಗ್ಯ ಸಂಪತ್ ಅಯುರಾರೋಗ್ಯ ಇತ್ತು ನೀಎನ್ನ ತಪ್ಪುಗಳ ಮನ್ನಿಸಿ ಎನ್ನಪಾಹಿಸತತ ಶನೈಶ್ಚರ5ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ128ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿನಾ ಶರಣು ಎನ್ನ ಪಾಲಿಪರು ಎಡಬಿಡದೆಅಸಮ ಅನುಪಮ ಸರ್ವಗುಣ ಗುಣಾರ್ಣವಅನಘಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪಹಂಸನಾಮಕ ವಿಷ್ಣುವನರುಹಾಸನಸನಕದೂರ್ವಾಸಮೊದಲಾದ ಗುರುವಂಶಜಾತದಶಪ್ರಮತಿಸರಸಿಜನಾಭನರಹರಿ ತೀರ್ಥಬಿಸಜಚರಣಂಗಳಲಿ ಸತತ ನಾ ಶರಣು1ಮಾಧವಅಕ್ಷೋಭ್ಯಜಯ ವಿದ್ಯಾಧಿರಾಜರಾಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸುತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆವೇದನಿಧಿಗಳಿಗೆ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವಸತ್ಯಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4ಸತ್ಯವರತೀರ್ಥರಿಗೆ ಸತ್ಯವರ ಕರಜಾತಸತ್ಯಧರ್ಮರಿಗೆ ನಾ ಮನಸಾ ಆನಮಿಪೆಸತ್ಯಧರ್ಮರ ಮಹಿಮೆ ಬಹು ಬಹು ಬಹಳವುಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5ಉದ್ದಾಮ ಪಂಡಿತರು ನವರತ್ನ ವಂಶಜರುವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರುವೈದಿಕ ಸದಾಚಾರಿ ತ್ರಿಕರಣದಿ ಶುದ್ದರುನಂದಿನಿಧರ ಮಧ್ವಮಾಧವ ಪ್ರಿಯರು 6ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆಸತ್ಯಧರ್ಮದಿರತರು ಸಂತತ ಇವರುಸದಾಗಮಿಕಭಾಗವತಮಾಧ್ವ ಸಚ್ಛಾಸ್ತ್ರದಿಮುದದಿಂದಕಾಲಉಪಯೋಗ ಮಾಡುವರು7ಇಂಥಾ ಭಾಗವತರಲ್ಲಿ ಗಂಗಾಧರನೇವೇಬಂದು ಔತಣ ಉಂಡು ಉಡುಗೊರೆಯಕೊಂಡುಸಂತತ ತಾ ಧ್ಯಾನಿಸುವ ರಾಮನ್ನ ಇವರುಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿಉಣಲಿಕ್ಕೆ ಸಾಲದೆ ಇರುವಾಗ ಬಂದಬ್ರಾಹ್ಮಣ ಓರ್ವನು ಭಸ್ಮಧರ ಅವನುಅನ್ನಬೇಕೆಂದನು ಮಧ್ಯಾಹ್ನಕಾಲ 9ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತಅಣ್ಣಾಚಾರ್ಯರು ಅಡಿಗೆ ತಾಮಾಡಿಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರುಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನಮಂದಿರದಿವಿಪ್ರಅಂತರ್ಧಾನನಾದಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳುಚಂದದಿ ಇದ್ದವು ದಕ್ಷಿಣೆ ಸಮೇತ 11ಸವಣೂರು ರಾಜ್ಯದ ಮಂತ್ರಿ ಖಂಡೇರಾಯದಿವಿಜರ ಲೋಕಯಾತ್ರೆಯು ಮಾಡಲಾಗದೇವರ ನೈವೇದ್ಯಯಕ್ಕಾದರಣೆ ತಪ್ಪಲುಸವಣೂರು ಪ್ರಾಂತವ ಬಿಟ್ಟು ತೆರಳಿದರು 12ದೇವತಾಂಶರು ಇವರು ಮಾನುಷ ಜನ್ಮವಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13ಔದಾರ್ಯಗುಣನಿಧಿ ಶ್ರೀ ರಾಘವೇಂದ್ರತೀರ್ಥರ ವೃಂದಾವನ ಸೇವೆ ಮಾಡಿಕೃತಕೃತ್ಯರಾದರು ಅಣ್ಣಾಚಾರ್ಯರುಒದಗಿ ಅನುಗ್ರಹಿಸಿದರು ಗುರುಗಳು ಬೇಗ 14ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳುತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆದೊರೆಯುವುದು ಇಷ್ಟಾರ್ಥ ಎಂದು ಪೇಳಿದರುಹೊರಟರು ಆಚಾರ್ಯರು ಸತ್ಯವರರಲ್ಲಿ 15ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂಶ್ರೀ ಸ್ವಾಮಿ ಮಂಜೂಶ ಕಳವು ಆಗಿವ್ಯಸನದಲಿ ಉಪೋಶಣದಿ ಸತ್ಯವರರಿದ್ದರುಭಾಸವಾಗದೆ ಮೂರ್ತಿಗಳಿರುವ ಸ್ಥಳವು 16ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರುಹೇಗೆ ವರ್ಣಿಸುವೆ ಆ ಗುರುಗಳ ಆನಂದ 17ನಿಗಮಘೋಷಂಗಳು ವಿಪ್ರಜನ ಮುಖದಿಂದಮಂಗಳ ಧ್ವನಿ ಮೇಳ ತಾಳವಾದ್ಯಗಳುಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆಗಂಗಾಜನಕನ ಮೂರ್ತಿಗಳ ತಂದರು 18ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳುಸತ್ಯವರರ ಅಮೃತ ಹಸ್ತಾಭಿಷೇಕಯತಿ ಆಶ್ರಮ ಸತ್ಯಧರ್ಮತೀರ್ಥರೆಂದು ನಾಮಾಪ್ರಣವಉಪದೇಶಕೊಂಡರು19ಪ್ರಣವೋಪದೇಶಗುರುಹಸ್ತದಿಂ ಅಭಿಷೇಕಘನಮಹಾವೇದಾಂತ ಪೀಠವು ಲಭಿಸಿಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯಜ್ಞಾನೋಪದೇಶ ಹರಿಪೂಜಾ ಮಾಡಿದರು 20ಭಾವುಕರ ಪ್ರಿಯತಮಸನತ್ಸುಜಾತೀಯವುಭಾವದೀಪಿಕ ಶ್ರೀಮದ್ ಭಾಗವತಕೆತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21ವಾಗ್ವಜ್ರ ಧಾರಾವುದುರ್ವಾದಿಗಿರಿಕುಲಿಶಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶಜಗಕ್ಷೇಮಕರ ಪೂಜಾ ವರವು ದೀನರಿಗೆ 22ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠಸುವಿತರಣಿಯಿಂದ ಆಡಳಿತ ಮಾಡಿಸುವರ್ಣ ರತ್ನಾಭರಣ ಮಠತೋಟಂಗಳದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23ಹದಿನೇಳನೂರು ಐವತ್ತೆರಡು ಶಾಲಿಶಕತ್ರಯೋದಶಿಶ್ರಾವಣಕೃಷ್ಣಪಕ್ಷಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯಪಾದವನೈದಿದರು ಹರಿಯಧ್ಯಾನಿಸುತ 24ಮತ್ತೊಂದು ಅಂಶದಲಿ ವೃಂದಾವನದಲ್ಲಿಬಂದು ಸೇವಿಸುವವರ ವಾಂಛಿತವೀಯುತ್ತನಂದಿನಿಧರ ಮಧ್ವ ಮಾಧವನ ಒಲಿಮೆಯಿಂನಿಂತಿಹರು ಸ್ಮರಿಪರ ಗೋಕಲ್ಪತರುವು 25ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆಹೊನ್ನೂರು ಕ್ಷೇತ್ರದಲಿ ವೃಂದಾವನಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳುಜಾಹ್ನವಿಧರ ಉಸುವು ಕಣರೂಪದೊಳಗೆ 26ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲುಒಲಿವರು ಮಧ್ವಮುನಿ ಶಿವನು ನಮಗೊಲಿಯೆಒಲಿವನುಅಜಪಿತ`ಶ್ರೀ ಪ್ರಸನ್ನ ಶ್ರೀನಿವಾಸನು'ಒಲಿವ ಬೋಧರು ಮಧ್ವಮುನಿ ಒಲಿದರೇವೇ 27 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸೌಭಾಗ್ಯ ಪ್ರದ ಹನುಮಂತ(ಅಣು ಸುಂದರ ಕಾಂಡ)67ಶರಣು ಪಾಲಿಸೋ ಹನುಮ |ಕರುಣಾಳು ಅಂಜನಾಸೂನು ನಿನ್ನ ಮಹಿಮೆವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮಜೀವರಲಿ ನೀ ಉತ್ತಮ |ಶರಣು ಫಲ್ಗುಣಸಖಪಿಂಗಾಕ್ಷನೇಶರಿಧಿ ದಾಟಿದಿಅಮಿತವಿಕ್ರಮವಾರ್ತೆ ಸೀತೆಗೆ ಪೇಳಿ ದಶಮುಖಸರ್ವತರದಿ ಸೌಮಿತ್ರಿ ಪ್ರಾಣ ಪ್ರ -ದಾತಹರಿವರಶರಣು ಶರಣು ಮಹಾತ್ಮ ಸಹೃದನೇಶರಣು ಪಾಲಿಸೋ ಹನುಮ ಪಪೂರ್ಣಪ್ರಜÕನೀನೆಂದು ಬಹು ಹರುಷ ತೋರಿದ |ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀಸಿಂಧು|ದಾಟುತ್ತ ಮೈನಾಕನ್ನೇ | ಶ್ಲೇಷಿಸಿನಿಂದುವಿಶ್ರಾಂತಿ ಕೊಳ್ಳದೆ ಮುಂದು |ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು -ಸುರರುಪೂಮಳೆಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟುಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟುಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯಚೂಡಾರತ್ನವನಿಟ್ಟು ರಾಮಾಲಿಂಗನ ನೀಕೊಂಡಿಯೋ ಸೌಭಾಗ್ಯ ನಿಧಿಯೇಶರಣು ಪಾಲಿಸೋ ಹನುಮ 1ಜಯತು ಶರಣು ಶ್ರೀರಾಮ | ಶರಣೆಂದವಿಭೀಷಣನನ್ನ | ಅತಿ ಪ್ರೇಮದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |ಬಂದು ಅಭಯವ ನಿತ್ತ ಪೂರ್ಣಕಾಯ |ಅಮಿತ ಸುಗುಣ ಸುಧಾಮ|ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |ಸುಜನರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣಭಂಜನವ ರಘುರಾಮ ಮಾಡಿ ಅಯೋಧ್ಯೆಬರುವುದು ಪೇಳಿ ಭರತಗೆ |ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ -ಶುಭಸುಚರಿತನೆ ಶರಣು ಪಾಲಿಸೋ ಹನುಮ2ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |ನೀನಗೀವುದು ನಿನ್ನ ಸೇವೆ ಸಮ ಬಹುಮಾನ |ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರುರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕನಿತ್ಯಪ್ರವೃದ್ಧವಾದಪರಮಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀರಾಮಮಂತ್ರ22ಶ್ರೀರಾಮ ಸೀತಾರಮಣ ಮಾಂಪಾಹಿಪಉರು ಜ್ಞಾನ ಸುಖರೂಪ ನಮೋವಾಸುದೇವಅ.ಪಶ್ಯಾಮ ರಮಣೀಯ ಉರು ಆಮ್ನಾಯಕೂ ಅಮಿತರಮೆ ಸೀತಾಯುತ ನಮೋ ಹನುಮಾದಿಸೇವ್ಯವಾಮಹಸ್ತದಿಚಾಪಚಿನ್ಮುದ್ರೆ ಶರಬಲದಿಅಮಿತಾರ್ಕಸೋಮ ಸ್ವಕಾಂತಿ ಶ್ರೀರಾಮ 1ಪರಮೇಶ ಏಕಾತ್ಮಅರದೂರಪರಿಪೂರ್ಣಉರು ಸುಗುಣವಾರಿನಿಧಿ ನೀನೇ ಸ್ವತಂತ್ರಅರವಿಂದಜಾಂಡಾದಿ ಜಗತ್ಸರ್ವ ಕರ್ತಜಸುರರ ಮೊರೆಕೇಳಿದಶರಥನ ಸುತನಾದೆ2ಚತುರ್ವದನ ಸಂಸೇವ್ಯ ಹಯವದನ ಷಡ್ರೂಪಚತುರ್ವಿಂಶಾಕ್ಷರ ಸುಮಂತ್ರ ಪ್ರತಿಪಾದ್ಯತ್ರಾತಪ್ರೇರಕಸ್ವಾಮಿ ರಾಮನೇ ಎಂದರಿತುಸಂಧ್ಯಾಸುಮಂತ್ರ ಋಷಿ ಬಂದು ಪ್ರಾರ್ಥಿಸಿದ 3ಸುದುಪಾಸ್ಯ ನಿನ್ನ ಋಷಿ ಆಶ್ರಮಕೆ ಕರದೊಯ್ಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯಪ್ರತ್ಯಕ್ಷ ಅವತಾರರೂಪ ನೀನೆಂದರಿತುಸಿದ್ಧರು ಭಕ್ತಿಯಿಂದಲಿ ವಂದಿಸಿದರು 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿ ಬೋಧಯನ್ಅಸ್ತ್ರದೇವತೆಗಳೀ ತತ್ವವನು ಅರಿತುಸತ್ತಾದಿದಾತನೇ ಶಾಸ್ತ್ರಸ್ವಾಮಿ ವಿಷ್ಣೋಪ್ರತ್ಯಗಾತ್ಮನೆ ರಾಮ ನಿನಗೆ ನಮಿಸಿದರು 5ಯಜÕಗೆ ಯಜÕಗೆ ವಿಶ್ವಾಮಿತ್ರಗೆ ನಮೋಯಜÕಭುಕ್ ಯಜಮಾನ ಯಜÕ ಯಜೆÕೀಶಇಜ್ಯ ಪೂಜ್ಯಗೆ ಸ್ವಾಮಿ ಮನ್ಮನೋವಾಕ್ಸಂಸ್ಥಯಜÕಸ್ಥಯಜÕ ಮಾಂಪಾಹಿನಮೋ ನಮಸ್ತೆ6ವೇದವತಿತ್ವದಧೀನೆ ಸರ್ವಜಗದಾಧಾರೆಭೂದೇವಿ ಸುಖಪೂರ್ಣೆ ಅಜೆ ನಿತ್ಯಮುಕ್ತೆವೈದೇಹಿ ಜಾನಕಿ ಸೀತಾನಾಮದಿ ತಾನೆಈ ಧರೆಯೊಳ್ ತೋರಿಹಳು ನಿನ್ನನನುಸರಿಸಿ 7ಸುರಾಜಗಜಇಕ್ಷುಜಲ್ಲೆಯನು ಮುರಿವಂತೆಪರಫಲಿಬಲಿನೀನು ಶಿವಚಾಪ ಮುರಿಯೆಸುರರುನರವರ್ಯರು ಹರುಷದಿಂದಲಿ ನೋಡೆಸಿರಿಸೀತೆ ವರಮಾಲೆ ನಿನಗೆ ಹಾಕಿದಳು8ಶರಭಂಗಶಬರಿ ಜಟಾಯು ಮೊದಲಾದವರವರಭಕ್ತಿಗೆ ಮೆಚ್ಚಿ ಯೋಗ್ಯ ಗತಿಯಿತ್ತೆಮಾರುತಿಗೆ ಪ್ರಿಯರೆಂದು ರವಿಜಗೆ ವಿಭೀಷಣಗೆಕರುಣಿಸಿದೆ ನಿರಪೇಕ್ಷ ನೀ ಪೂರ್ಣಕಾಮ 9ಕ್ರೂರ ಪೌಲಸ್ತ್ಯಾದಿ ರಕ್ಕಸರ ತರಿದು ನೀಧರೆಯಲಿ ಸುಕ್ಷೇಮ ಧರ್ಮ ಸ್ಥಾಪಿಸಿದೆಸರಸಿಜಾಸನ ಲೋಕದಂತಾಯಿತೀ ಲೋಕವರವಿಷ್ಣುಭಕ್ತಿಯು ಸೌಖ್ಯ ಎಲ್ಲೆಲ್ಲೂ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸನೆಸರಿ ಮಿಗಿಲು ನಿನಗಿಲ್ಲ ಯಾರು ಎಂದೆಲ್ಲೂಸಿರಿಸೀತಾಯುತರಾಮ ಎಂದೂನು ಎಲ್ಲೆಲ್ಲೂಮಾರುತಿ ಸೌಮಿತ್ರಿ ಭರತಾದಿಸೇವ್ಯ11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಿಜಯದಾಸಾರ್ಯ ಚರಿತ್ರೆ135ಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಅಶೇಷ ಗುಣಗಣಾರ್ಣವಅನಘಶ್ರೀರಮಣಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣಹಂಸ ನಾಮಕ ಪರಂ ಬ್ರಹ್ಮವಿಧಿಸನಕಾದಿದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1ವ್ಯಾಸರಾಜರ ಮುಖ ಕಮಲದಿಂದುಪದಿಷ್ಟದಾಸರಾಜರು ಪುರಂದರದಾಸಾರ್ಯವಸುಧೆಯಲ್ಲಿ ನಾರದರೇಪುರಂದರದಾಸರು ಎನಿಸಿಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2ಹರಿಸಮೀರರೂ ಸದಾ ಪ್ರಚುರರಾಗಿಹಪುರಂದರದಾಸಾರ್ಯರವರಶಿಷ್ಯರೇವೆಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರುಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರುಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4ನಮೋ ಬ್ರಹ್ಮ ವಾಯು ವಿಪ ಫಣಿಪಶುಕಸಂಕ್ರಂದಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿಕಾಮಯುಕ್ ಸೂತ ಗಂಧರ್ವನೃಪಶ್ರೇಷ್ಠರಿಗೆಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5ಸ್ವರ್ಣಾಂಡ ಬಹಿರಂತವ್ರ್ಯಾಪ್ತತೇಜಪುಂಜಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆತಾನೇ ಸೇವಿಸಿದನು ಭೃಗು ಋಷಿಯು ಅಂದು 6ಸುರ ನದಿತೀರದಲಿ ಭೂಸುರರು ಋಷಿಗಳುಸತ್ರಯಾಗ ಎಂಬಂಥ ಜ್ಞಾನಕರ್ಮಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7ಶೃತಿಸ್ಮøತಿಪುರಣೇತಿಹಾಸಾದಿಗಳಲ್ಲಿಅದ್ವಿತೀಯನು ಸರ್ವೋತ್ತಮಹರಿಶ್ರೀಶಪದುಮಭವ ರುದ್ರಾದಿಸುರರುತಾರ ತಮ್ಯದಲಿಸದಾ ಅವರಂಬುದನು ಪರಿಕ್ಷೆ ಮಾಡಿದರು 8ನೇರಲ್ಲಿ ತಾ ಪೋಗಿ ಅರಿತು ಪೇಳಿದರುಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರಸರಸಿಜಾಸನ ವಾಣಿ ರುದ್ರಾದಿಸುರರುತರತಮದಿ ಅವgವÀರು ಸಂಶಯವಿಲ್ಲ ಎಂದು 9ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿಅರುಹಿದಂತೆ ಈಗವಿಜಯದಾಸಾರ್ಯನಾರದಪುರಂದರದಾಸಾರ್ಯರನ್ನನುಸರಿಸಿಹರಿಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ10ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನುಧೂರ್ಜಟೆ ಉಮಾಸುತನುಕ್ಷಿಪ್ರಪ್ರಸಾದಗಜಮುಖನೆ ಗೋಪಾಲ ದಾಸಾರ್ಯರಾಗಿಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11ಪುರಂದರದಾಸಾರ್ಯರು ವಿಜಯರಾಯರಲ್ಲಿಇರುವರು ಒಂದಂಶದಿಂದ ಜ್ವಲಿಸುತ್ತಬರೆಸಿಹರು ಇಪ್ಪತ್ತು ಮೇಲೈದು ಸಾವಿರಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂಸುತಪೋನಿಧಿ ಭೃಗು ಮೂಲ ರೂಪದಲುತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲುಗಾಯತ್ರಿ ನಾಮನ್ನ ಸಂಸೇವಿಸುವರು 13ಪುರಂದರಾರ್ಯರ ಮನೆಯಲ್ಲಿ ಗೋವತ್ಸತರುವಾಯು ಸುಕುಮಾರ ಮಧ್ವಪತಿಯಾಗಿಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದುಹೆಸರುಂಟು ರೂಢಿಯಲಿ ಚೀಕಲಾಪುರಿಯುಕುಸುಮಭವಪಿತಅಂಭ್ರಣಿಪತಿಎನ್ನಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15ಶ್ರೀಪದ್ಮನಾಭತೀರ್ಥರಕರಕಂಜದಿಂದಉದ್ಭೂತ ಲಕ್ಷ್ಮೀಧರರ ವಂಶಜರುಶ್ರೀಪಾದ ರಾಜರೂ ಈ ಕ್ಷೇತ್ರದಲಿಸ್ಥಾಪಿಸಿದರು ಅಶ್ವತ್ಥÀ ನರಹರಿಯ 16ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂಸಂಭೂತ ತುಂಗಾ ಸರಿದ್ವರದ ತೀರಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವುಸಂರಕ್ಷಿಸುವ ನಾರಸಿಂಹ ಭದ್ರದನು 17ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳುಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆಶರಣಾದೆ ಪೊರೆಯುತಿಹವಾಂಛಿತಪ್ರದನು18ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿಭೂಸುರವರರು ಶ್ರೀನಿವಾಸಾಚಾರ್ಯರಲಿಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರುಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19ಕುಸುಮಾಲಯ ಪದ್ಮಾವತಿ ನೆನಪು ಕೊಡುವಕುಸುಮಕೋಮಲ ಮುಖಿ ಆದ ಕಾರಣದಿಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯಈ ಶ್ರೀನಿವಾಸ ಆಚಾರ್ಯಕರಹಿಡಿದರು20ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭಅಬ್ಧಿಯಿಂ ಹುಟ್ಟಿತು ಉತ್ತಮ ರತ್ನಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆದಾಸಪ್ಪನಲ್ಲದೆ ಇನ್ನೂ ಕೆಲಪುತ್ರರುಕೇಶವಾನುಗ್ರಹದಿ ಹುಟ್ಟಿ ಸಂಸಾರದಿಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯುಹರಿದತ್ತ ಧನದಲ್ಲಿ ತೃಪ್ತರಾಗುತ್ತಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿಹರಿಮಹಿಮೆ ಹೇಳುತ್ತ ಭಕ್ತಿ ಬೆಳಸಿದರು23ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆಕರ್ಮಸುಳಿಯು ಮೆಲ್ಲ ಮೆಲ್ಲನೆ ತೋರಿಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24ಬದರಮುಖ ಬ್ರಹ್ಮವರ್ಚಸ್ವಿ ದಾಸಪ್ಪಹದಿನಾರುವತ್ಸರದ ಬ್ರಹ್ಮಚಾರಿಮಾಧವನೆ ಹಾದಿ ತೋರುವ ತನಗೆ ಎಂದುಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯಜಲಜಪಾದಗಳಿಗೆ ಬಾಗಿದರು ಶಿರವ 26ಆದವಾನಿನಗರನವಾಬನ ಸರ್ಕಾರಅಧಿಕಾರಿ ಡಾಂಭಿಕ ಓರ್ವನ ಗೃಹದಿಮದುವೆ ಪೂರ್ವದ ದೇವರ ಸಮಾರಾಧನೆಯುಹೋದರು ಆ ಮನೆಗೆ ದಾಸಪ್ಪ ಆರ್ಯ 27ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆಇಂದುಆದವಾನಿ ಗೃಹಸ್ಥ ದಾಸಪ್ಪನಉದಾಸೀನ ಮಾಡಿದ್ದು ನೂತನಾನುಭವ 28ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದುಆದವಾನೀಯಿಂದ ಹೊರಟು ಮಾರ್ಗದಲಿಇದ್ದ ಛಾಗಿ ಎಂಬ ಗ್ರಾಮ ಸೇರಿದರು 29ಉಪೋಷಣದಿ ತನುವು ಬಾಡಿದ್ದರೂ ಮುಖಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿಬಪ್ಪ ದಾಸಪ್ಪನ್ನ ನೋಡಿ ಕೇಶವರಾಯಎಂಬ ವಿಪ್ರನು ಕರೆದ ತನ್ನ ಮನೆಗೆ 30ಛಾಗಿ ಗ್ರಾಮದ ಪ್ರಮುಖ ಕೇಶವರಾಯನುಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾಭಗವಂತನ ಶ್ರೇಷ್ಠ ಪ್ರತೀಕ ಇವರೆಂದುಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿಶ್ರೀ ಮನೋಹರನಿಗೆ ದಾಸಪ್ಪ ಅದನ್ನಸಂಮುದದಿ ನೈವೇದ್ಯ ಅರ್ಪಿಸಿ ಉಂಡರುರಮಾಪತಿನಿತ್ಯತೃಪ್ತಗೆ ತೃಪ್ತಿ ಆಯ್ತು32ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿಭಿನ್ನ ಕರ್ಮವ ಮಾಡಿ ಮಾಡಿಸುವಅನಘಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿದೇವದೇವೋತ್ತಮ ದೇವಶಿಖಾಮಣಿಯಮೂವತ್ತೆರಡು ಮುವತ್ತಾರುಬಾರಿಮೇಲೆಸೇವಿಸಿಹರು ಎಂದು ಕೇಳಿಹೆನು 34ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂದೇಶದೇಶದಿ ಹರಿಕ್ಷೇತ್ರ ಪೋಗಿಹರುಕಾಶೀಗೆ ಮೂರು ಸಲ ಪೋಗಿ ಬಂದಿರುವರುಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35ಪಂಕೇರುಹೇಕ್ಷಣವರಾಹವೆಂಕಟ ಪತಿಯವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃತಾ ಕಂಡು ಆನಂದಪುಲಕಾಶ್ರು ಸುರಿಸಿಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36ತಿರುಗಿ ಚೀಕಲಪುರಿ ಬಂದು ಹೆತ್ತವರಚರಣಪದ್ಮಗಳಲ್ಲಿ ನಮಿಸಿ ಅಲ್ಲಿನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತಪರಿತೋಷಿಸಿದರು ಗಾರ್ಹ ಧರ್ಮದಲಿ 37ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 38-ಇತಿಃ ಪ್ರಥಮಾಧ್ಯಾಯಃ-ದ್ವಿತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪತಿರುಪತಿ ಘಟಿಕಾದ್ರಿ ಕಾಶಿ ಮೊದಲಾದಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರುವಿಪ್ರರ ಮುಂದೆಶುಭಮುಹೂರ್ತದಲಿ ತಂದೆ1ಗುಣರೂಪವಂತಳು ವಧು ಅರಳಿಯಮ್ಮಘನಮಹಾ ಪತಿವ್ರತಾ ಶಿರೋಮಣಿಯು ಈಕೆತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿಅನವರತಮಾಡುವ ಸೌಭಾಗ್ಯವಂತೆ2ಪುತ್ರೋತ್ಸವಾದಿಶುಭಸಂಭ್ರಮಗಳು ಆದುವುನಿತ್ಯಹರಿತುಳಸೀಗೆ ಪೂಜಾ ವೈಭವವುತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತುಶ್ರೀದಹರಿವಿಠ್ಠಲನು ತಾನೇವೆ ಒಲಿದ 3ಧನಸಂಪಾದನೆಗಾಗಿ ಅನ್ಯರನು ಕಾಡದೆಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇದಿನಗಳ ಕಳೆದರು ಹೀಗೆ ಇರುವಾಗಫಣಿಪಗಿರಿವೇಂಕಟನು ಮನದಲ್ಲಿ ನಲಿದ 4ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದುಹೊರಟರು ವೇಂಕಟನಾಥನ್ನ ನೆನೆದುಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿಏರಿದರು ಎರಗಿದರು ನಾರಸಿಂಹನಿಗೆ 5ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿಕರೆವರು ಬಾಷಿಂಗನರಸಿಂಹನೆಂದುಹರಿದಾಸರಿಗೊಲಿವ ಕಾರುಣ್ಯಮೂರ್ತಿಯುಕರುಣಿಸಿದ ಜಗನ್ನಾಥದಾಸರಿಗೆ ಪೀಠ 6ದಾಸಪ್ಪ ವಿಜಯದಾಸರು ಆದ ತರುವಾಯಈಶಾನುಗ್ರಹವ ಬ್ಯಾಗವಟ್ಟಿಯವರ್ಗೆಶಿಷ್ಯರದ್ವಾರಾ ಒದಗಿ ಜಗನ್ನಾಥದಾಸರಾಗಿ ಮಾಡಿಹರು ಪರಮದಯದಿಂದ 7ನರಸಿಂಹನಪಾದ ಭಜಿಸಿ ಅಲ್ಲಿಂದಗಿರಿ ಅರೋಹಣವನ್ನ ಮುಂದುವರಿಸಿಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆವರಅಂಜನಾಸೂನು ಹನುಮಗೆರಗಿದರು8ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿಮಹಾದ್ವಾರದಲಿ ಕರಮುಗಿದು ಉತ್ತರದಿಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9ಭೂರ್ಭುವಃ ಸ್ವಃಪತಿಭೂಧರವರಾಹನ್ನಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯಇಭರಾಜವರದನ್ನ ಸ್ಮರಿಸುತ್ತ ಸುತ್ತಿಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನಭೂಧರನ್ನ ನೋಡುತ್ತ ನಿಂತ ಹನುಮನ್ನವಂದಿಸಿ ಮಹಾದ್ವಾರ ಸೇರಿ ಕೈಮುಗಿದುಇಂದಿರೇಶನ ಆಲಯದೊಳು ಹೋದರು 11ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದುಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿಒಳಹೋಗೆ ಅಪ್ಪಣೆ ಜಯವಿಜಯರಕೇಳಿಬಲಗಾಲ ಮುಂದಿಟ್ಟು ಹೋದರು ಒಳಗೆ 12ಬಂಗಾರ ಬಾಗಿಲ ದಾಟಲಾಕ್ಷಣವೇಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟಗಂಗಾಜನಕವೆಂಕಟೇಶನ್ನ ನೋಡಿದರು13ಆನಂದಜ್ಞಾನಮಯ ಪಾದಪಂಕಜತತ್ರಸುನೂಪುರ ಉಡಿವಡ್ಯಾಣಕೌಶೇಯಮಿನುಗುವಾಂಬರ ಸಾಲಿಗ್ರಾಮದ ಹಾರಘನಮಹಾ ಹಾರಗಳು ಸರಿಗೆ ವನಮಾಲೆ14ಶ್ರೀವತ್ಸ ಕೌಸ್ತುಭಮಣಿ ವೈಜಯಂತೀದಿವ್ಯ ಪ್ರಜ್ವಲಿಸುವ ಪದಕಂಗಳುಕಿವಿಯಲ್ಲಿ ಮಿಂಚಿನಂದದಿ ಪೊಳೆವಕುಂಡಲಸರ್ವಾಭರಣಗಳ ವರ್ಣಿಸಲು ಅಳವೇ 15ಅಕಳಂಕ ಪೂರ್ಣೇಂದು ಮುಖಮುಗುಳುನಗೆಯುಕಂಗಳುಕಾರುಣ್ಯ ಸುರಿಸುವನೋಟಕಾಕುಇಲ್ಲದ ನೀಟಾದ ಫಣೆ ತಿಲಕವುಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನಮಹಾನಂದದಿ ನೋಡಿ ಸನ್ನಮಿಸಿ ಮುದದಿಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿಮಹಾಪ್ರಾಕಾರದಲಿ ಕೊಂಡರು ಪ್ರಸಾದ 17ಹೇಮಮಯ ಆನಂದನಿಲಯ ವಿಮಾನ ಗೋಪುರದಿಶ್ರೀಮನೋಹರ ಶ್ರೀ ಶ್ರೀನಿವಾಸನ್ನ ಪುನಃನೆಮ್ಮದಿದಿ ನೋಡಿ ಸನ್ನಮಿಸಿ ಶ್ರೀನಾರಸಿಂಹನ್ನ ವಂದಿಸಿ ಹೋದರು ಒಳಗೆ 18ಏಕಾಂತ ಸೇವೆ ಶಯ್ಯೋತ್ಸವವ ನೋಡಿಅಕಳಂಕ ಭಕ್ತಿಯಲಿ ಮನಸಾ ಸ್ತುತಿಸಿಶ್ರೀಕರಾಲಯ ಪ್ರಕಾರ ಮಂಟಪದಲ್ಲಿಭಕುತವತ್ಸಲನ್ನ ನೆನೆದು ಮಲಗಿದರು 19ಬಂಗಾರಬಾಗಿಲು ಅರ್ಧಮಂಟಪವುಪುರಂದರದಾಸಾರ್ಯರುಯೋಗ ನಾರಸಿಂಹನ ಸ್ಥಾನ ಬಲಪಾಶ್ರ್ವಏಕಾಂತ ಮಂಟಪವುಪುರಂದರದಾಸಾರ್ಯರುಶ್ರೀಕರನ ಭಜಿಸುತ್ತಾ ಇರುವರು ಅಲ್ಲಿ 20ಅರ್ಧ ಮಂಟಪ ಹೊರಗೆ ಉತ್ತರ ಪ್ರಾಕಾರದಿಎತ್ತರ ಮಂಟಪದ ಜಗುಲಿಯಲ್ಲೂಆಸ್ಥಾನ ಮಂಟಪಕೆ ಪಶ್ಚಿಮ ಮಂಟಪದಲ್ಲೂಆಸ್ಥಾನ ಶ್ರೇಷ್ಠರು ಕುಳಿತದ್ದು ಉಂಟು 21ಮನುಷ್ಯ ಲೋಕದಿ ಹುಟ್ಟಿ ಮಾನುಷಾನ್ನವನುಂಡುಮಾನುಷಾನ್ನದ ಸೂಕ್ಷ್ಮ ಭಾಗ ಪರಿಣಮಿಸಿಮನಖಿನ್ನನಾದಂತೆ ಇದ್ದ ದಾಸಪ್ಪನಿಗೆಶ್ರೀ ಶ್ರೀನಿವಾಸನು ಬಂದು ತಾ ಒಲಿದ 22ಶ್ರೀನಿಧಿಃ ಶ್ರೀ ಶ್ರೀನಿವಾಸವೇಂಕಟಪತಿಘನದಯದಿ ಸೂಚಿಸಿದ್ದು ತಿಳಕೊಂಡರುಸ್ವಪ್ನದಿ ಭಾಗೀರಥಿಯಪುರಂದರದಾಸಾರ್ಯರಬಿಂದುಮಾಧವ ಅಂಭ್ರಣೀಶನ್ನ ನೋಡಿದರು 23ಭೂವರಾಹವೆಂಕಟರಮಣನ್ನ ಮರುದಿನಸೇವಿಸಿ ಹನುಮಂತನಿಗೆ ನಮಸ್ಕರಿಸಿದೇವಾನುಗ್ರಹದಿ ಐದಿದರು ವಾರಣಾಸಿದೇವ ತಟಿನೀಸ್ನಾನ ಮೂರ್ತೀ ದರ್ಶನವು 24ಜಾಗ್ರತೆ ಅಲ್ಲ ನಿದ್ರೆಯೂ ಅಲ್ಲ ಸಂಧಿಆ ಕಾಲದಲಿ ಆನಂದ ಅನುಭವವುಹೇಗೆಂದರೆ ವಿಠ್ಠಲ ಶ್ರೀನಿವಾಸನುಝಗಿಝಗಿಸಿ ತೋರ್ವನು ವಿಜಯಸಾರಥಿಯು 25ತೃಟಿಮಾತ್ರದಲಿ ಮುಂದೆ ನಿಂತರುಪುರಂದರವಿಟ್ಠಲ ದಾಸರು ಕೃಪೆಯ ಬೀರುತ್ತತಟ್ಟನೇ ಎದ್ದರು ದಾಸಪ್ಪ ಆರ್ಯರುಸಾಷ್ಠಾಂಗ ನಮಿಸಿದರು ಗುರುವರ್ಯರೆಂದು 26ಕರಕೊಂಡು ಹೋದರು ಆಚೆದಡದಲ್ಲಿರುವಕ್ಷೇತ್ರಕ್ಕೆ ಅಲ್ಲಿ ಶ್ರೀಪತಿವ್ಯಾಸನ್ನತೋರಿಸಿದರು ಆ ವ್ಯಾಸ ಮೂರ್ತಿಯಲ್ಲಿಸುಪ್ರಕಾಶಿಪಹರಿರೂಪಗಳ ಕಂಡರು27ವಿಜಯಸಾರಥಿಕೃಷ್ಣ ವಾಶಿಷ್ಠಮಾಧವಅಜಭುಜಗಭೂಷಣಾದಿಗಳಿಂದಸೇವ್ಯರಾಜರಾಜೇಶ್ವರಿ ಶ್ರೀನಿಧಿಯ ಮನದಣಿಯಭಜಿಸಿ ಸ್ತುತಿಸಲು ಯತ್ನಿಸಿದರು ದಾಸಪ್ಪ 28ಸೌದಾಮಿನಿಗಮಿತ ರಂಜಿಸುವ ಜ್ಯೋತಿಯುಬದರೀಶನಿಂ ಪುರಂದರದಾಸರ ದ್ವಾರಬಂದು ನೆಲಸಿತು ದಾಸಪ್ಪನ ಜಿಹ್ವೆಯತುದಿಯಲ್ಲಿ ವಿಜಯಾಖ್ಯ ಸುಶುಭನಾಮ 29ರಾಜೀವಜಾಂಡದೊರೆ ರಾಜೀವಾಲಯಪತಿವಿಜಯವಿಠ್ಠಲ ನಿಮ್ಮ ಹೃದ್‍ರಾಜೀವದಲಿಪ್ರಜ್ವಲಿಸುತಿಹ ಸರ್ವತೋಮುಖನೆಂದುನೈಜವಾತ್ಸಲ್ಯದಿ ಪೇಳಿದರು ಗುರುವು 30ಗುರುಗತುರಗಾಸ್ಯ ವಿಠ್ಯಲವ್ಯಾಸ ತನ್ನ ಹೊರವೊಳುಪ್ರಕಾಶಿಪುದು ಅನುಭವಕೆ ಬಂತುಎರಗಿದರುವಿಜಯದಾಸರು ಪುರಂದರಾರ್ಯರಿಗೆಸರಿ ಏಳು ಎಂದರು ಗುರುವರ್ಯ ಹಿತದಿ 31ಎದ್ದರು ಎಚ್ಚರಿಕೆ ಆಗಿ ವಿಜಯಾರ್ಯರುವೇದ್ಯವಾಯಿತು ಶ್ರೀಯಃಪತಿಯು ಗುರುವುಹಿತದಿ ತಾವೇ ಬಂದು ಅನುಗ್ರಹ ಮಾಡಿದ್ದುಇಂಥ ಭಾಗ್ಯವು ಎಲ್ಲರಿಗೂ ಲಭಿಸುವುದೇ 32ಶ್ರೀಕಾಂತ ಕಪಿಲ ಶ್ರೀ ಶ್ರೀನಿವಾಸನ್ನಹಿಂಕಾರ ಪ್ರತಿಪಾದ್ಯ ಕೃತಿಪತಿ ಪ್ರದ್ಯುಮ್ನಶ್ರೀಕರ ವಿಠ್ಠಲ ವ್ಯಾಸಹಯಮುಖನ್ನ ಸ್ಮರಿಸುತ್ತಗಂಗೆಯ ಸೇರಿದರು ಮಿಂದರು ಮುದದಿ 33ವಿಧಿಪೂರ್ವಕ ಸ್ನಾನ ಅಘ್ರ್ಯಾಧಿಗಳಿತ್ತು ಅಘ್ರ್ಯಾದಿಆ ದೇವತಟನೀಯ ದಡದಲ್ಲಿ ಕುಳಿತುಸದ್ವೈಷ್ಣವಚಿನ್ನಾಲಂಕೃತರು ಜಪಿಸಿದರುಮಧ್ವಸ್ಥ ವಿಜಯವಿಠ್ಠಲಶ್ರೀಪತಿಯ 34ಪದುಮಜನ ಸುತ ಭೃಗುವೆ ಅವನಿಯಲಿ ಅವತರಿಸಿಬಂದಿಹನು ಮಾಧವನು ಒಲಿದಿಹನು ಎಂದುಮಂದಾಕಿನಿವ್ಯಜನಚಾಮರಗಳ್ ಬೀಸುವಂತೆಬಂದು ಪ್ರವಹಿಸಿದಳು ದಾಸರ ಆವರಿಸಿ 35ಜನರೆಲ್ಲ ನೋಡುತಿರೆ ಪ್ರವಾಹವು ಉಕ್ಕಿಪೂರ್ಣ ಆವರಿಸಿತು ವಿಜಯರಾಯರನ್ನಏನು ಅದ್ಭುತ ಇದು ಶಾಂತವಾಗಲು ಕ್ಷಣದಿನೆನೆಯಲಿಲ್ಲ ವಸ್ತ್ರ ಊಧ್ರ್ವ ಪುಂಡ್ರಗಳು 37ಹರಿಆಜೆÕಯಲಿಸುರರುಸಜ್ಜನೋದ್ಧಾರಕ್ಕೂಪ್ರಾರಬ್ಧಕರ್ಮ ಕಳೆಯಲು ಜನಿಪರು ಭುವಿಯೋಳ್ಇರುವುವು ಅಣಿಮಾದಿಗಳು ಶಕ್ತ್ಯಾತ್ಮನಾಗುರುಒಲಿಯೆ ವ್ಯಕ್ತವಾಗುವುವು ಆಗಾಗಾ38ಸುರರುಭೃಗುದಾಸಪ್ಪ ಜಾತಾಪರೋಕ್ಷಿಗೆಪುರಂದರದಾಸ ನಾರದರೊಲಿದ ಮೇಲೆಇರುತ್ತಿದ್ದಅಪರೋಕ್ಷಅಣಿಮಾದಿ ಮಹಿಮೆಯುಸುಪ್ರಕಟವಾದವು ಶ್ರೀಶನ ದಯದಿ 39ವರ್ಣಪ್ರತಿಪಾದ್ಯಹರಿಒಲಿಯೆ ವರ್ಣಂಗಳುಆಮ್ನಾಯನಿಗಮತತಿ ಸತ್‍ತತ್ವಜ್ಞಾನಅನಾಯಸದಿಂದೊದಗಿ ವಿಜಯದಾಸಾರ್ಯರುಅನಿಲಸ್ಥ ಶ್ರೀವರನ್ನ ಸ್ತುತಿಸಿ ಹಾಡಿದರು 40ಜನಗಳು ವಿಜಯದಾಸಾರ್ಯರು ಶ್ರೀಹರಿಯಧ್ಯಾನಿಸಿ ಶ್ರೀಪತಿಯ ರೂಪಕ್ರಿಯೆಗಳನ್ನುಗುಣಗಳನ್ನು ಗಂಗಾದಡದಲ್ಲಿ ಕುಳಿತುಗಾನಮಾಡುವುದನ್ನ ಕೇಳಿದರು ಮುದದಿ 41ಘನಮಹಾತ್ಮರು- ಇವರು ಸಜ್ಜನೋದ್ಧಾರಕರುಶ್ರೀನಿಧಿಯ ಸತ್‍ತತ್ವಜ್ಞಾನ ಪೂರ್ವಕದಿಗಾನಮಾಡಿ ಲೋಕಕ್ಷೇಮಕೆÀ್ಕೂದಗುವರೆಂದುಧನ ದ್ರವ್ಯಕಾಣಿಕೆಇತ್ತರು ಜನರು42ಪೋದಕಡೆ ಎಲ್ಲೆಲ್ಲೂ ಮರ್ಯದೆ ಪೂಜೆಗಳುಸಾಧುಸಜ್ಜನರ ಕೈಯಿಂದ ತಾ ಕೊಂಡುಮಾಧವಮಧ್ವಮುನಿ ಪುರಂದರಾರ್ಯರ ಭಾಗ್ಯಎಂದು ಶ್ರಿ ಕೃಷ್ಣಂದೇ ಸರ್ವವೆಂಬುವರು 43ಭಾರಿ ಬಹು ಬಹುವುಂಟು ವಿಜಯರಾಯರ ಮಹಿಮೆಅರಿಯೆನಾ ಅಲ್ಪಮತಿ ಹೇಗೆ ವರ್ಣಿಸಲಿಹರಿಗೆ ಪ್ರಿಯತರ ಈ ಸುಮಹಾತ್ಮರು ತನಗೆಎರಗಿದವರನ್ನ ಕಾಯ್ವರು ಕೈಬಿಡದೆ 44ವಾರಣಾಸಿರಾಜ ಪೂಜಿಸಿದ ಇವರನ್ನಎರಗಿ ಜನರು ಶಿಷ್ಯ ರಾದರಲ್ಲಲ್ಲಿಊರಿಗೆ ಬರುವಷ್ಟರಲ್ಲೇ ಇವರ ಕೀರ್ತಿಹರಡಿತು ಹರಿದಾಸಜ್ಞಾನಿವರರೆಂದು 45ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 46-ಇತಿಃ ದ್ವಿತಿಯಾಧ್ಯಾಯಃ-ತೃತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಕಾಶಿ ಗಯಾ ಪಿತೃಕಾರ್ಯ ಪೂರೈಸಿ ಬರುವಾಗದೇಶ ದೇಶದಿ ಹರಿಯ ಮಹಿಮೆ ತೋರುತ್ತಾಅಸಚ್ಚಾಸ್ತ್ರ ವಾದಗಳ ಕತ್ತರಿಸಿ ಬಿಸುಡುತ್ತಸುಚ್ಛಾಸ್ತ್ರ ಬೋದಿಸುತ್ತ ಬಂದರು ಮನೆಗೆ 1ಸಕುಟಂಬ ತಿರುಪತಿಗೆ ಪೋಗಿ ಶ್ರೀನಿಧಿಯಭಕುತಿಯಿಂದಲಿ ಸ್ತುತಿಸಿ ಊರಿಗೆ ತಿರುಗಿಶ್ರೀಕರನ ಪ್ರೀತಿಕರ ಶಿಷ್ಯೋದ್ಧಾರಕ್ಕೆಬೇಕಾದ ಯತ್ನಗೈದರು ದಾಸ ಆರ್ಯ 2ಈ ಪುಣ್ಯ ಶ್ಲೋಕರು ಷಷ್ಠ್ಯುಪರಿಸಂಖ್ಯಾಸುಪುಣ್ಯ ಶಿಷ್ಯರಿಗೆ ಬಲುದಯದಿಂದಅಪರೋಕ್ಷಒದಗಲು ಉಪದೇಶವಿತ್ತಿಹರುಅಪವರ್ಗಯೋಗ್ಯರಿಗೆಮಾರ್ಗತೋರಿಹರು3ಮೊದಲು ಗೋಪಾಲ ವೇದವ್ಯಾಸ ಹಯವದನಶ್ರೀದನ ಈ ಮೂರು ಉತ್ಕøಷ್ಠನಾಮಅಂಕಿತವ ನಾಲ್ವರಿಗೆ ವಿಜಯದಾಸಾರ್ಯರುಉತ್ತುಂಗಮಹಿಮರು ಇತ್ತಿಹರು ದಯದಿ 4ಸಾಧುವರ್ಯ ತಮ್ಮನಿಗೆ ಹಯವದನಾಂಕಿತ ನಾಮಉತ್ತನೂರು ಭಾಗಣ್ಣ ರಾಯರ್ಗೆ ಗೋಪಾಲಆದವಾಣಿ ತಿಮ್ಮಣ್ಣರ್ಗೆ ವೇಣುಗೋಪಾಲಆದವಾಣಿಯವರದ್ವಾರಾ ವ್ಯಾಸ ಸುಬ್ಬಣ್ಣರ್ಗೆ 5ಗುರುವರ್ಯ ಗೋಪಾಲದಾಸಾರ್ಯರಚರಣಸರಸಿಜಯುಗ್ಮನಾ ನಂಬಿದೆ ನಿಶ್ಚಯದಿಕಾರುಣ್ಯ ಔದಾರ್ಯ ನಿಧಿಗಳು ಇವರಲ್ಲಿಶರಣಾದೆ ಸಂತತಸ್ಮರಿಸೆ ಪಾಲಿಪರು 6ಗಾಯತ್ರಿಯಲಿ ಕೇಶವಾದಿ ಇಪ್ಪತ್ತನಾಲ್ಕುಹಯಗ್ರೀವರೂಪಗಳು ಆರನ್ನೂ ಸ್ಮರಿಸಿಗಾಯತ್ರಿನಾಮ ಶ್ರೀವೇಂಕಟಕೃಷ್ಣನಿಗೆಪ್ರಿಯಗಾಯತ್ರಿಮಂತ್ರ ಸಿದ್ಧಿಪಡೆದವರು 7ಇಂಥಾ ಮಹಾಭಕ್ತ ಭಾಗಣ್ಣನ ಬಳಿಬಂದು ವಿಜಯಾರ್ಯರು ಇತ್ತರು ದಯದಿಸೌಂದರ್ಯಸಾರ ಗೋಪಾಲವಿಠ್ಠಲ ನಾಮಇಂದಿರಾಪತಿ ಅಖಿಳಪ್ರದನ ಅಂಕಿತವ 8ಆದವಾಣಿಸುಲ್ತಾನನ ಮಂತ್ರಿಯುಸಾಧುಶೀಲನು ತಿಮ್ಮಣ್ಣರಾಯಈತನು ವೀರ ವೈಷ್ಣವಮಾಧ್ವಬ್ರಾಹ್ಮಣನುಭಕ್ತಿಮಾನ್ ಜ್ಞಾನವಾನ್ ವೈರಾಗ್ಯಶಾಲಿ 9ಹಿಂದಿನ ಜನ್ಮದಿ ಆದಿಕೇಶವನನ್ನವಂದಿಸಿ ಸ್ತುತಿಸಿದ ರಾಮಾನುಜೀಯಇಂದುಸದ್ವೈಷ್ಣವಕುಲದಲ್ಲಿ ಹುಟ್ಟಿಹನುಇಂದಿರೇಶನ ನಾಮಾಂಕಿತ ಬೇಡಿದ್ದ ಮೊದಲೇ 10ಮೊದಲೇವೆ ತಾಳೆಂದು ಹೇಳಿ ಈಗ ವಿಜಯಾರ್ಯಇತ್ತರೂ ಶ್ರೀ ವೇಣುಗೋಪಾಲವಿಠ್ಠಲ ಈಉತ್ತಮ ಈ ನಾಮ ಉಪದೇಶ ಮಾಡಿದರುಈ ತಿಮ್ಮಣ್ಣ ರಾಯರಿಗೆ ನಮೋ ನಮೋ ಎಂಬೆ 11ಕಲ್ಲೂರು ಸುಬ್ಬಣ್ಣಾಚಾರ್ಯರು ನ್ಯಾಯಸುಧಾಮಂಗಳ ಅನುವಾದ ಚರಿಸಿ ವಿಜಯಾರ್ಯಅಲ್ಲಿ ಪಾಚಕ ವೇಷದಲಿ ಪೋಗಿ ಮಂಡಿಗೆಗಳಮಾಡಿದರು ಮಧುಸೂದನನ ಪ್ರೀತಿಗೆ12ಸುಬ್ಬಣ್ಣಾಚಾರ್ಯರು ಮಹಾದೊಡ್ಡ ಪಂಡಿತರುಶುಭತಮಸುಧಾಮಂಗಳದ ಅನುವಾದಸಂಭ್ರಮದಿ ಕದಡಿದ್ದ ಬಹು ಬಹು ಮಂದಿಯಸಭೆಯೊಳು ಪ್ರವೇಶಿಸಿದರು ವಿಜಯಾರ್ಯ 13ನೆರೆದಿದ್ದವರಲ್ಲಿ ವಿಜಯರಾಯರ ಮಹಿಮೆಅರಿತಿದ್ದಜನ ನಮ್ರಭಾವದಲಿ ಎದ್ದುಮರ್ಯಾದೆ ಮಾಡಿದರು ಅದನೋಡಿ ಆಚಾರ್ಯಪ್ರಾಕೃತಹಾಡುವವಗೆ ಪೂಜೆಯೇ ಎಂದ14ವ್ಯಾಸಪೀಠದ ಮುಂದೆ ವಿಜಯರಾಯರು ಪೋಗಿವ್ಯಾಸಗೆ ಮಧ್ವಗೆ ಜಯಾರ್ಯಗೆ ನಮಿಸಿಸಂಶಯ ಕಳೆದು ಯಥಾರ್ಥಜ್ಞಾನವನೀವಶ್ರೀಸುಧಾ ಕೇಳುವೆ ಎಂದು ಪೇಳಿದರು 15ಕನ್ನಡ ಕವನಮಾಡುವ ನಿಮಗೆ ಈ ಸುಧಾಘನವಿಷಯಗಳು ತಿಳಿಯಲಿಕೆ ಬೇಕಾದಜ್ಞಾನನಿಮಗೆ ಏನು ಇದೆ ಹೇಳಿ ಎಂದು ಆಚಾರ್ಯತನ್ನ ಪಾಂಡಿತ್ಯದ ಗರ್ವದಿ ಕೇಳಿದನು 16ಸುಬ್ಬಣ್ಣಾಚಾರ್ಯನ ಈ ಮಾತುಕೇಳಿಒಬ್ಬ ಪರಿಚಾರಕನ ಕರೆದು ವಿಜಯಾರ್ಯಅವನಿಗೆ ವಿಧ್ಯಾಭ್ಯಾಸ ಉಂಟೇ ಎನ್ನೆಅಪದ್ಧಅಡದೇ ಅವ ವಿದ್ಯಾಹೀನನೆಂದ17ಸಭ್ಯರು ನೋಡುತಿರೆ ವಿಜಯದಾಸಾರ್ಯರುಕಪಿಲ ಖಪತಿ ಗರುಡಾಸನ ಘರ್ಮಶ್ರೀಪತಿ ಆಜ್ಞಾಸಾರ ವರಾಹನ್ನ ಸ್ಮರಿಸಿದರುಆ ಪರಮದಡ್ಡನ ಶಿರದಿ ಕರವಿಟ್ಟು 18ಕರವಿಡಲು ವಿಜಯರಾಯರ ಜ್ಞಾನಪೀಯೂಷಧಾರೆ ಆ ಪುರುಷನ ಶರೀರದೊಳು ಪೊಕ್ಕುರುಧಿರನಾಳಂಗಳು ತನುನರನಾಡಿ ಶಾಖೆಗಳುತೀವ್ರಸುಪವಿತ್ರವಾದವು ತತ್ಕಾಲ 19ವರ್ಣಾಭಿಮಾನಿಗಳು ಭಾರತೀ ಸಹವಾಯುವರ್ಣಪ್ರತಿಪಾದ್ಯ ಹರಿರಮಾಸಮೇತತನು ಮನವಾಕ್ಕಲ್ಲಿ ಪ್ರಚುರರಾಗಿ ಅವನುಘನತರ ಸುಧಾಪಂಕ್ತಿಗಳ ಒಪ್ಪಿಸಿದನು 20ಅಣುವ್ಯಾಖ್ಯಾನ ಸುಧಾ ನ್ಯಾಯ ರತ್ನಾವಳೀಇನ್ನು ಬಹುಗ್ರಂಥಗಳ ವಾಕ್ಪ್ರವಾಹದಲಿಘನಮಹ ವಿಷಯಗಳಸಂದೇಹಪರಿಹರಿಪಅನುವಾದಮಾಡಿದ ಅದ್ಭುತ ರೀತಿಯಲ್ಲಿ 22ಸುಬ್ಬಣ್ಣಾಚಾರ್ಯರು ದಾಸಾರ್ಯರಲ್ಲಿಉದ್ಭಕ್ತಿಗುರುಭಾವದಿಂದೆದ್ದು ನಿಲ್ಲೆಸೌಭಾಗ್ಯ ಪ್ರದಸುಧಾ ಮಂಗಳವ ಪೂರೈಸುಶುಭೋದಯವು ನಿನಗೆಂದು ಪೇಳಿದರು ದಾಸಾರ್ಯ 23ಮಂಗಳಪ್ರಸಾದವ ಸಭ್ಯರಿಗೆ ಕೊಟ್ಟಮೇಲ್ಕಂಗಳಲಿ ಭಕ್ತಿಸುಖ ಬಾಷ್ಪ ಸುರಿಸುತ್ತಗಂಗಾಜನಕಪ್ರಿಯ ವಿಜಯರಾಯರಪಾದಪಂಕಜದಿ ಶರಣಾದರು ಸುಬ್ಬಣ್ಣಾರ್ಯ 24ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೆ ಶರಣು 25-ಇತಿಃ ತೃತೀಯಾಧ್ಯಾಯಃ-ಚತುರ್ಥ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪರಾಜರು ಸ, ಂಸ್ಥಾನ ಮಂಡಲೇಶ್ವರರೆಲ್ಲವಿಜಯದಾಸಾರ್ಯರಿಗೆ ಎರಗಿ ತಮ್ಮರಾಜಧಾನಿಗೆ ಕರೆದು ಕೃತಕೃತ್ಯರಾದರುವಿಜಯಸಾರಥಿಒಲುಮೆ ಏನೆಂಬೆ ಇವರೊಳ್1ಅಲ್ಲಲ್ಲಿ ಪೋದ ಸ್ಥಳದಲ್ಲಿ ನರಹರಿ ಮಹಿಮೆಎಲ್ಲ ಸಜ್ಜನರಿಗೂ ಕೀರ್ತಿಸಿ ತೋರಿಸಿಕಲಿಕಲ್ಮಷ ಪೀಡಿತ ಜನರ ಕಷ್ಟಗಳಎಲ್ಲವ ಪರಿಹಾರ ಮಾಡಿ ಕಾಯ್ದಿಹರು 2ಹರಿನಾಮಾ ಐನೂರು ಸಾವಿರ ಕೀರ್ತನೆ ಗ್ರಂಥಗಳೊಳುತಾನೇ ಸ್ವತಮಾಡಿದ್ದಲ್ಲದೆ ಮಿಕಿಲಾದ್ದುಇನ್ನೂರೈವತ್ತುನೂರು ವಿಜಯರಾಯರಲಿ ನಿಂತುಪೂರ್ಣ ಮಾಡಿಸಿಹರು ಶ್ರೀ ಪುರಂದರದಾಸಾರ್ಯ 3ಹರಿನಾಮ ಜಿಹ್ವೆಯಲಿ ಭೂತದಯಾ ಮನಸಿನಲ್ಲಿಹರಿಮೂರ್ತಿ ಗುಣರೂಪ ಅಂತಃಕರಣದಲಿಪುರಂದರಾರ್ಯರು ಇವರು ರಚಿಸಲೆ ಬಿಟ್ಟಿದ್ದಭಾರಿ ಸಂಕೀರ್ತನೆಗಳನ್ನ ಹಾಡಿಹರು 4ಪ್ರಿಯತಮ ಶಿಷ್ಯರು ಗೋಪಾಲ ದಾಸರೊಡೆತೋಯಜಾಕ್ಷನ ಸ್ಮರಿಸಿ ನಡಿಯುತಿರುವಾಗಬಾಯಾರಿಕೆ ಪೀಡಿತ ಕತ್ತೇಗೆ ದಯಮಾಡಿತೋಯವನು ಕುಡಿಸಿಹರು ಕಾರುಣ್ಯಶರಧಿ5ಬಹುಕಾಲದ ಹಿಂದೆ ತಾ ಕೇಶವರಾಯನಗೃಹದಲ್ಲಿ ಹುಗ್ಗಿಯ ಉಂಡದ್ದು ನೆನಪಾಗಿಆ ಗೃಹಕ್ಕೆ ಪೋದರು ಗೋಪಾಲ ದಾಸರ ಸಹಹಾಹಾ ಅಲ್ಲಿಸ್ಥಿತಿ ಏನೆಂಬೆ ಆಗ 6ಏಳು ಜನ್ಮದಕರ್ಮಗತಿಸುಳಿಯಲ್ಲಿಸಿಲುಕಿ ಆ ಮನೆಯ ಯುವಕನುಅಸುಬಿಟ್ಟತಲೆ ಸ್ಫೋಟನವಾಗಿ ತಾಕಿ ಬೋದಿಗೆಗೆಅಳುತ್ತಿದ್ದರು ಜನರು ದುಃಖದಲಿ ಮುಳಗಿ 7ಕರುಣಾ ಸಮುದ್ರರು ಭೂತದಯಾ ಪರರುಎರದರು ತಮ್ಮ ಆಯುಷ್ಯದಿ ಮೂರು ವರುಷವರಾಹಭಿಷಕ್ ನರಹರಿಯ ಜಪವನ್ನು ಗೈದುನರಸಿಂಹನ ಸ್ತುತಿಸಿ ಬದಕಿಸಿದರು ಯುವಕನ್ನ 8ಅಳುತ್ತಿದ್ದ ಜನರೆಲ್ಲ ಆನಂದ ಬಾಷ್ಪದಮಳೆ ಸುರಿಸಿ ಬಲು ಕೃತಜÕತೆ ಭಾವದಿಂದಮಾಲೋಲ ಪ್ರಿಯವಿಜಯದಾಸರ ಪದಯುಗಳನಳಿನದಲಿ ನಮಿಸಿದರು ಭಕ್ತಿ ಪೂರ್ವಕದಿ 9ಚೀಕಲ ಪರವಿಯಿಂದಲಿ ನಾಲಕು ಕ್ರೋಶನಗರವು ಮಾನವಿ ಎಂಬುದು ಅಲ್ಲಿಪ್ರಖ್ಯಾತ ಪಂಡಿತನು ಶ್ರೀನಿವಾಸಾಚಾರ್ಯನುಪುಷ್ಕಲ ಶ್ರೀಮಂತ ಬಹು ಶಿಷ್ಯಸೇವ್ಯ10ಸುರಗಂಧರ್ವಾಂಶರು ಬ್ಯಾಗವಟ್ಟೀಯವರುನರಸಿಂಹ ದಾಸರುಅವರಮಗನುಈ ಶ್ರೀನಿವಾಸನು ಕೇಳಿದ್ದ ಮೊದಲೇವೇಹರಿದಾಸವರ್ಯ ವಿಜಯಾರ್ಯರ ಪ್ರಭಾವ 11ಹರಿಭಕ್ತಾಗ್ರಣಿ ಪ್ರಹ್ಲಾದನ ಭ್ರಾತನುಧೀರ ಸಂಹ್ಲಾದನೆ ಈ ಧೀರ ಶ್ರೀನಿವಾಸಭಾರಿ ಸಾಧÀನೆ ಇವಗೆ ಒದಗಿಸ ಬೇಕೆಂದುಹರಿದಾಸವರ್ಯರು ಪೋದರು ಮಾನವಿಗೆ 12ಮಾನವಿಯಲ್ಲಿ ವಿಜಯಾರ್ಯರು ಮುಖಾಂ ಹಾಕಿಜನರಲ್ಲಿ ಹರಿಭಕ್ತಿ ಜ್ಞಾನ ಬೆಳಸುತ್ತದೀನರಿಗೆ ಯೋಗ್ಯ ವಾಂಛಿತವ ಒದಗಿಸುತ್ತಘನಮಹಿಮಹರಿಸೇವೆ ಮಾಡುತ್ತ ಇದ್ದರು13ಶ್ರೀನಿವಾಸಾಚಾರ್ಯನಿಗೆ ಉದ್ಧಾರ ಕಾಲವುಶ್ರೀನಿಧಿಯ ನಿಯಮನದಿ ಬಂದಿಹುದು ಎಂದುಶ್ರೀನಿವಾಸಾಚಾರ್ಯನಲಿ ಪೋಗಿ ವಿಜಯಾರ್ಯರುಬನ್ನಿರಿ ಹರಿಪ್ರಸಾದ ಕೊಳ್ಳಿರಿ ಎಂದರು 14ವಿಜಯದಾಸಾರ್ಯರ ಆಹ್ವಾನ ಲೆಕ್ಕಿಸದೆರಾಜಸದಿ ತಾನು ಪಂಡಿತನೆಂಬ ಗರ್ವದಿವಿಜಯಾರ್ಯರ ಕುರಿತು ಅವಜÕ ಮಾಡಿದನುಬೊಜ್ಜೆಯಲಿ ರೋಗವು ತನ್ನಿಮಿತ್ತ ಬಂತು 15ಸೋತ್ತಮಾಪರಾಧದಿಂ ವ್ಯಾಧಿ ಪೀಡಿತನಾಗಿಸೋತು ತತ್ ಪರಿಹಾರ ಯತ್ನ ಸರ್ವದಲೂಬಂದು ವಿಜಯಾರ್ಯರಲಿ ಶರಣಾಗಿ ಕ್ಷಮಿಸೆನ್ನೆಹಿತದಿಂದ ವಿಜಯಾರ್ಯರು ಕರುಣಿಸಿದರು 16ಗೋಪಾಲ ದಾಸರು ಉದ್ಧರಿಸುವರು ಪೋಗೆಂದುಕೃಪೆಯಿಂದಲಿ ವಿಜಯಾರ್ಯರು ಪೇಳಿ ಶ್ರೀನಿವಾಸಗೋಪಾಲದಾಸರಲಿ ಪೋಗಿ ಶರಣಾಗಲು ದಾಸಾರ್ಯರಲಿಶ್ರೀಪನ್ನ ಸ್ತುತಿಸೆ ಗುರುಗಳು ಒಲಿದರು ಆಗ 17ಗೋಪಾಲವಿಜಯವಿಠ್ಠಲನನ್ನ ವಿಜಯಾರ್ಯಸುಪವಿತ್ರ ಚೀಕಲಪರವಿಯಲಿ ಸ್ತುತಿಸೆಗೋಪಾಲ ದಾಸಾರ್ಯರು ಅರಿತು ಶ್ರೀನಿವಾಸನಿಗೆಉಪದೇಶ ಮಾಡಿದರು ತನ್ನಗುರುಪೇಳ್ದ ರೀತಿ18ಶ್ರೀನಿವಾಸಾಚಾರ್ಯರು ಗೋಪಾಲ ದಾಸಾರ್ಯರ ದಯದಿಪುನರಾರೋಗ್ಯ ಆಯುಷ್ಯವು ಹೊಂದಿಶ್ರೀನಿಧಿ ಭೀಮರತಿ ತೀರಸ್ಥ ವಿಠ್ಠಲನ್ನಸನ್ನಮಿಸಿ ಸಂಸ್ತುತಿಸಿ ಖ್ಯಾತರಾದರು ಜಗನ್ನಾಥ ದಾಸರೆಂದು 19ವಿಜಯನಗರಾದಿ ರಾಜ ಜಮೀನುದಾರಗಳುವಿಜಯರಾಯರನ್ನ ತಮ್ಮ ಸ್ಥಳಕ್ಕೆ ಕರೆತಂದುನಿಜಭಕ್ತಿಯಲಿ ಮರ್ಯಾದೆಗಳ ಮಾಡಿದರುವಿಜಯದಾಸರ ಮಹಿಮೆ ನೇರಲ್ಲಿ ಕಂಡು 20ತಿರುಗಿ ಬರುವಾಗ ಶ್ರೀದಾಸ ಮಹಂತರುಚಕ್ರತೀರ್ಥದಿ ಸತ್ರಯಾಗ ಮಾಡಿದರುಪುರಂದರದಾಸಾರ್ಯರು ಇದ್ದ ಸ್ಥಳ ಈ ಕ್ಷೇತ್ರಹರಿಶಿರಿಗೆ ಹನುಮಗೆ ಶಿವಗೆ ಆನಮಿಪೆ 21ಸತ್ರಯಾಗ ಕಾಲದಲಿ ಒಂದು ದಿನ ರಾತ್ರಿವಿಧವೆ ಓರ್ವಳು ತನ್ನ ಕಜ್ಜಿ ಮಗು ಸಹಿತನದಿಯಲ್ಲಿ ಬೀಳಲು ಯತ್ನಿಸಲು ಅದು ಕಂಡುಇತ್ತು ಅಭಯವ ವಿಜಯಾರ್ಯರು ಕಾಯ್ದರು 22ಭೀಮಪ್ಪನಾಯಕಧನವಂತ ಬ್ರಾಹ್ಮಣನಧರ್ಮಪತ್ನಿಯು ಆಕೆ ಪತಿಯ ಕಳಕೊಂಡ್ಲುತಾಮಸಪ್ರಚುರಮೈದುನ ಬಂದು ಬಹಳ ಕ್ರೂರಹಿಂಸೆ ಕೂಡಲು ನದಿಯೊಳು ಬೀಳೆ ಬಂದಿಹಳು 23ಸಾಧ್ವಿಯೂ ಆಕೆಯೂ ಶಿಶು ಮಹಾಭಾಗವತಎಂದು ಜ್ಞಾನ ದೃಷ್ಟಿಯಲಿ ಅರಿತರು ವಿಜಯಾರ್ಯಎಂಥವರು ಆದರೂ ಆತ್ಮಹತ್ಯೆ ಶಿಶುಹತ್ಯಯತ್ನ ತಡೆದು ರಕ್ಷಿಪುದು ಭೂತದಯವು 24ತಾಯಿಶಿಶು ಈರ್ವರನು ಮಠಕೆ ಕರಕೊಂಡು ಹೋಗಿಭಾರ್ಯೆ ಅರಳಿಯಮ್ಮ ಕೈಲಿ ಒಪ್ಪಿಸಿ ಆಕೆಹಯವದನ ಆಕೆಯ ಮೃತಮಗನ ಪ್ರತಿಯಾಗಿದಯದಿ ಕೊಟ್ಟಿಹ ಶಿಶುವ ಎಂದು ಪೋಷಿಸಿದಳು 25ಔದಾರ್ಯ ಕರುಣದಿ ಶಿಶುವನ್ನು ತಾಯಿಯನ್ನುಆದರಿಸಿ ದಾಸಾರ್ಯೆ ದಂಪತಿಯು ಮಗುವಹಿತದಿ ಮೋಹನನೆಂದು ಹೆಸರಿಟ್ಟು ಆಶಿಸಿಒದಗಿದರು ಇಹಪರಉದ್ಧಾರವಾಗೆ26ಯುಕ್ತ ಕಾಲದಿ ಮುಂಜಿ ಮದುವೆ ಮೋಹ ಮೋಹನನಿಗೆಶ್ರೀಕರನ್ನ ಅನುಗ್ರಹದಿ ಮಾಡಿಸಿ ಹರಿಯುಉತ್ಕøಷ್ಠ ನಾಮಾಂಕಿತ ಮೋಹನ ವಿಠಲ ಎಂದುಕೃಪಾಕರ ದಾಸಾರ್ಯರು ಇತ್ತರು ಮುದದಿ 27ಒಂದು ಸಮಯದಿ ಮೋಹನನಿಗೆ ಅಪಮೃತ್ಯು ಬರಲಿರಲುಶ್ರೀ ದಾಸರಾಯರು ಮೊದಲೇ ಹೇಳಿದರುಶ್ರೀ ಬಿಂದು ಮಾಧವನ್ನು ಸೇವಿಸೆ ಹೋಗಿ ನಾ ಬರುವೆಮೃತನಾದ ದೇಹವ ಕಾಪಾಡು ಹರಿಯ ಸ್ಮರಿಸೆಂದು 28ಅದರಂತೆ ಮೋಹನಗೆ ಅಪಮೃತ್ಯು ಸೋಕಲುಸಾಧ್ವಿಸತಿ ದೇಹವ ಹೊರತಂದು ರಕ್ಷಿಸೆಕದನಗೈದು ಓರ್ವ ಸಾಗಿಸಲು ಯತ್ನಿಸೆಸತಿಯು ವಿಜಯಾರ್ಯರನ್ನು ಸ್ಮರಿಸಿ ಮೊರೆಯಿಟ್ಟಳು 29ಶ್ರಿಬಿಂದುಮಾಧವನ್ನ ಸೇವಿಸಿ ದಾಸಾರ್ಯರುತಾಪೋಗಿ ಧರ್ಮರಾಜನಲಿ ಅರಿಕೆ ಮಾಡಿಕ್ಷಿಪ್ರದಲಿಅಸುತಿರುಗಿ ತÀರಿಸಿ ಬದುಕಿಸಿದರುಆರ್ಭಟದಿ ಬಲುತ್ಕಾರ ಮಾಡಿದವ ಬಿದ್ದ 30ಈ ರೀತಿ ಅಪಮೃತ್ಯು ಪರಿಹರಿಸಿದ್ದನ್ನಕೇಳಿಮೋಹನಭಾರಿ ಕರುಣಾಳು ವಿಜಯಾರ್ಯರ ಸ್ತುತಿಸಿಉತ್ಕøಷ್ಟ ಕೀರ್ತನೆ ಹಾಡಿರುವುದು ಲೋಕಅರಿವುದು ಅದ್ಯಾಪಿ ಹೋಗಳುವರು ಜನರು 31ಶ್ರೀ ವಿಜಯದಾಸರ ಅನುಗ್ರಹದಿ ಮೋಹನಕೋವಿದವರ್ಯನು ಶ್ರುತಿಯುಕ್ತ ಯುತವಾದತತ್ವಬೋಧಕ ಕೀರ್ತನೆಗಳು ಶ್ರೀಹರಿಯಅವತಾರಲೀಲಾನು ವರ್ಣನ ಮಾಡಿಹರು 32ರಾಜೀವಾಸನ ಪಿತ ಪ್ರಸನ್ನ ಶ್ರೀನಿವಾಸ ಶ್ರೀರಾಜೀವಾಲಯ ಪತಿಗೆ ಪ್ರಿಯಕರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣು ಶರಣಾದೆ 33- ಇತಿ ಚತುರ್ಥಾಧ್ಯಾಯ ಸಮಾಪ್ತಿ -ಪಂಚಮ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿವಿನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪವಿಜಯದಾಸಾರ್ಯರು ದೇವ ವೃಂದದವರೆಂದುನಿಜವಾಗಿ ಅರಿವುದಕೆ ಇತಿಹಾಸ ಬಹು ಉಂಟುನಿಜಭಕ್ತರಲ್ಲದೆ ಪಾಮರರು ಸಹ ಅರಿತಸಜ್ಜನರು ಹೊಗಳುವ ಇತಿಹಾಸಕೇಳಿ1ಬಾಲ ವಿಧವೆಯುಕರ್ಮಸುಳಿಯಲ್ಲಿ ಸಿಲುಕಿಬಲು ನೀಚ ವೃತ್ತಿಯವಳಂತೆ ತೋರಿಕಲುಷವಂತಳು ಎಂದು ಬಹಿಷ್ಕøತಳಾದವಳಆಲಯದಿ ವಿಜಯಾರ್ಯ ಕೊಂಡರು ಅವತನವ 2ತಮ್ಮ ಆಹ್ವಾನವ ಲೆಕ್ಕಿಸದೆ ಮೊದಲೇ ಈಆಧಮಳ ಆಹ್ವಾನ ಮನ್ನಣೆÉ ಮಾಡಿಆ ಮನೆಯಲ್ಲಿ ಪೂಜಾನೈವೇದ್ಯ ಮಾಡಿದರೆಂದುಶ್ರೀಮಠದ ಭೂಸುರರು ಕೋಪ ಹೊಂದಿದರು 3ಶ್ರೀವರನು ವಿಧಿವಾಯು ಅಮರ ಶ್ರೇಷ್ಠರ ಸಹಯಾವ ದಾಸಾರ್ಯರಲಿ ಪ್ರಚುರನಾಗಿಹನೋಯಾರನ್ನ ಸ್ಮರಿಸಲು ದುರಿತಹರ ಪುಣ್ಯದವೋಅವರು ಭೋಜನ ಮಾಡುತಿರೆ ನಿಂತಳು ಬಾಲೆ 4ಮಹಾನ್ ದಾಸರಿಗೆ ಆಕೆ ಮಾಡಿಸಿದ ಪೂಜೆಯಿಂದೇಹಜದುರಿತಗಳು ಪರಿಹಾರವಾಗಿಶ್ರೀ ಹರಿಯದಾಸರಿಗೆ ಮನಸಾ ಸನ್ನಮಿಸಿದೇಹೇಂದ್ರಿಯಗಳ ಲಯವ ಚಿಂತಿಸಿದಳು 5ದಾಸಾರ್ಯರು ಭೋಜನವ ಪೂರೈಸಲುಅಸುಆಕೆಗಾತ್ರಬಿಟ್ಟು ಹೊರಟು ಹೋಯಿತುದಾಸವರ್ಯರು ತಾವೇ ಆಕೆಗೆ ಸಂಸ್ಕಾರಶ್ರೀಶಹರಿಪ್ರೀತಿಯಾಗಲಿಕೆ ಮಾಡಿದರು6ದೂಷಿತ ಬಹಿಷ್ಕøತ ಸ್ತ್ರೀ ಮನೆಯಲ್ಲಿ ಉಂಡುದೂಷಣಾರ್ಹ ಕ್ರಿಯಾ ಚರಿಸಿಹರು ಎಂದುದೀಕ್ಷಾ ಪ್ರವರ್ಧಕ ಶ್ರೀ ಮಠಾಧಿಕಾರಿಗಳುಬಹಿಷ್ಕಾರ ಮಾಡಿದರಂತೆ ದಾಸಾರ್ಯರಿಗೆ 7ತಪೋನಿಧಿಗಳುಸೂರಿವರಸ್ವಾಮಿಗಳುಶ್ರೀಪನ್ನ ಪೂಜಿಸಿ ಪ್ರತಿಮೆಯಲ್ಲಿಅಪರೋಕ್ಷಜ್ಞಾನದಿ ಸರ್ವವ ಅರಿತುಶ್ರೀಪ ಪ್ರಿಯ ವಿಜಯಾರ್ಯರನ್ನು ಬರಮಾಡಿದರು 8ಜ್ಞಾನಿವರ್ಯ ದಾಸಾರ್ಯರು ಇದು ಮೊದಲೇ ಅರಿತುತನ್ನ ಶಿಷ್ಯರೊಡೆ ಹೇಳೆ ಆಹ್ವಾನ ಬಂದುತನ್ನವರ ಸಹ ಶ್ರೀ ಮಠಕೆ ಪೋಗಿ ಸ್ವಾಮಿಗಳಅನುಗ್ರಹ ಹೊಂದಿ ಸಂಭಾಷಿಸಿದರು ಮುದದಿ 9ಪ್ರತಿಮೆಯಲಿ ಶ್ರೀಹರಿಯ ಸಾನ್ನಿಧ್ಯ ಲಕ್ಷಣವೇದ್ಯವಾಗುವಿಕೆ ದಾಸಾರ್ಯರು ಒದಗಲಿಕ್ಕೇ ಎಂದುಸುತಪೋನಿಧಿ ಸ್ವಾಮಿಗಳು ಹೇಳಿ ದಾಸಾರ್ಯರುಇಂದಿರೇಶ ಸುಪ್ರಚುರ ವ್ಯಾಪ್ತನೂ ಎಂದರು 10ಪ್ರತಿಮೆಯಲಿ ಹಿಂದಿನ ದಿನಕ್ಕಿಂತ ಆಗಆದಿಯಂತೇವೆಯೇ ಶ್ರೀಯಃಪತಿ ಜ್ವಲಿಸಿಮುದಮನದಿ ಶ್ರೀಗಳು ಪೂಜಾದಿ ಪೂರೈಸಿಕೇಳ್ದರು ದಾಸರನ್ನ ಬಾಲೆಯ ವೃತ್ತಾಂತವ 11ದಾಸವರ್ಯರು ಹೇಳಿದರು ಆ ಬಾಲೆಯುಸುಮನಸವೃಂದದಿ ಓರ್ವಳು ಪೂರ್ವವಸುಧೆಯಲಿ ಪುಟ್ಟುವೆನು ಎನ್ನನುದ್ಧರಿಸಿರಿವಾತ್ಸಲ್ಯದಿ ಎಂದು ಬೇಡಿದ್ದಳೆಂದು 12ತತ್ಕಾಲ ಮುಗಿಯಬೇಕಾದ ಪ್ರಾರಬ್ಧಕರ್ಮಆಕೆಗೆ ಮುಗಿಯುವ ಸಮಯ ವಿಜಯಾರ್ಯಆಕೆ ಮನೆಗೆ ಹೋಗಿ ಸಾಧನ ಸಂಪತ್ತೊದಗಿಆಕೆಗೆ ಗತಿಯ ಕಲ್ಪಿಸಿಹರು ದಯದಿ 13ಪ್ರಾರಬ್ಧ ಕಳೆಯಲಿಕೋ ಶಾಪ ನಿಮಿತ್ತವೋಸುರರುಭುವಿಯಲ್ಲಿ ಪುಟ್ಟಿ ಒಮ್ಮೊಮ್ಮೆ ನಿಷಿದ್ದಕರ್ಮಚರಿಸಿದರೂ ಪಾಪ ಲೇಪವಾಗವುಇತರರಿಗೆ ಲೇಪವುಂಟುಹರಿಪರಾನ್ಮುಖರ್ಗೆ14ಹರಿಗೆ ಪ್ರಿಯಕರ ವಿಜಯರಾಯ ಪ್ರಭಾವತೋರಿಸಿದ ಈವೃತ್ತಾಂತದಿಕ್ಕು ದಿಕ್ಕುಹರಡಿತು ಜನರೆಲ್ಲ ವಿಜಯದಾಸಾರ್ಯರುಸುರರೇವೇ ನರರಲ್ಲೆಂದು ನಿಶ್ಚಯಿಸಿದರು 15ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ ರಥದಾರಿಯಲ್ಲಿ ನಿಲ್ಲಲು ವಿಜಯದಾಸಾರ್ಯರುಹರಿತತ್ವ ಮಹಿಮೆಯ ಕವನ ರೂಪದಿ ಸ್ತುತಿಸೆಗರುಡ ಗಮನನು ರಥದಿ ಸರಸರನೆ ಬಂದ 16ಮೂರುಬಾರಿಕಾಶಿಗೆ ಹೋದಾಗಲೂ ಗಂಗೆಅರಿತು ಭೃಗುಮುನಿ ಅವತಾರವೆಂದುಹರುಷ ತೋರಿ ಉಕ್ಕಿದಳು ಭೃಗು ವಿಜಯರಾಯರುವರಅತಿಥಿ ಶಿವತಾತ ಪ್ರಿಯರೆಂದು17ವೇದ ವೇದಾಂತ ಪುರಾಣಾರ್ಥ ರಹಸ್ಯಗಳುಸದಾಗಮ ಸರ್ವರ್ಥಗಳ ಸಾರೋದ್ಧಾರವುಈ ದಾಸ ಮಹಂತರ ಗ್ರಂಥ ಸುಳಾದಿಗಳುಓದಿ ಕೇಳ್ವವರಿಗೆ ಇಹಪರಉದ್ಧಾರ18ಇಂದ್ರಾದಿ ಜಗದ್ಗುರು ಸದಾಶಿವನ್ನ ಸೇವಿಸುತ್ತರುದ್ರಾಂತರ್ಯಾಮಿ ನರಹರಿಯ ಅರ್ಚಿಸುತ್ತವಂದಿಸುತ್ತ ಚಿಪ್ಪಗಿರಿ ವಾಸಿಷ್ಠ ವಿಜಯವಿಠ್ಠಲ ಕೃಷ್ಣನ್ನಹೊಂದಿದರು ದಾನವಾಗಿ ಆಕ್ಷೇತ್ರವನ್ನು ಮೂರ್ತಿಯನ್ನು 19ಪಾಲಸಾಗರಪೋಲು ಆ ವಾಪಿ ಸುಪವಿತ್ರತಟದಲ್ಲಿಯೇ ವಾಸಸ್ಥಾನ ಮಾಡಿಕೊಂಡುಅಲ್ಲೇ ಇದ್ದರು ದಾಸಾರ್ಯರು ಪಾಠ ಪ್ರವಚನ ಭಜನೆಮಾಲೋಲ ಸುಪ್ರೀತಿಕರವಾಗಿ ಮಾಡುತ್ತ 20ಮೋದಮಯ ಶ್ರೀ ಶ್ರೀನಿವಾಸನ್ನ ಸೇವಿಸುತಮೇದಿನಿಯಲಿ ಸುಜರನ್ನ ಉದ್ಧರಿಸಿಕಾರ್ತೀಕ ಶುಧ್ಧ ದಶಮಿಯಲ್ಲಿ ಸ್ವಸ್ಥಾನಯೈದಿದರು ಹರಿಪಾದ ಧ್ಯಾನಿಸುತ್ತ ಧೀರ 21ವಿಜಯರಾಯರ ನೆನೆದರೆ ಆಯುಷ್ಯ ಆರೋಗ್ಯಶ್ರೀನಿಜಭಕ್ತಿ ಜ್ಞಾನವುವಿಜಯಎಲ್ಲೆಲ್ಲೂವಿಜಯದಾಸಾಂತಸ್ಥ ಮಧ್ವಾಂತರ್ಗತ ಶ್ರೀಶವಿಜಯಸಾರಥಿ ಶ್ರೀನಿವಾಸನುಈವ22ಧೀರ ಭಕ್ತಾಗ್ರಣಿ ಶ್ರೀಮದ್ ಗುರುವರ್ಯರುಭೂರಿಕರುಣಿಯು ಗೋಪಾಲದಾಸಾರ್ಯಹರಿದಾಸವರ ಹಯವದನ ವಿಠ್ಠಲವಿರಾಗಿ ವೇಣುಗೋಪಾಲ ಜಗನ್ನಾಥದಾಸರು 23ಹರಿದಾಸ ವೃಂದದಿ ಖ್ಯಾತ ಸೂರಿಗಳೆಲ್ಲರೂಗುರುಶ್ರೀಶ ವಿಠ್ಠಲಾಂಕಿತ ಕುಂಠೋಜಿ ಆರ್ಯಶ್ರೀ ರಘುಪತಿ ವಿಠ್ಠಲ ಇಂಥ ಸರ್ವರೂನೂಪರಿಪರಿ ವಿಧದಿ ಸ್ತುತಿಸಿಹರು ವಿಜಯಾರ್ಯರನ್ನ 24ವಿಜಯಾರ್ಯ ರಕ್ಷಿತ ಪೋಷಿತ ಉಪದಿಷ್ಟನಿಜದಾಸವರ್ಯ ಮೋಹನ್ನ ದಾಸಾರ್ಯವಿಜಯದಾಸಾರ್ಯನುಗ್ರಹದಿ ಬಹುಕವನಗಳಭುಜಗಭೂಷಣ ಈಡ್ಯನ್ನ ಸ್ತುತಿಸಿ ರಚಿಸಿಹರು25ಉತ್ತಮಶ್ಲೋಕ ಸ್ತುತಿಶತ ಸಹಕೀರ್ತನೆಗಳ್ಭಕ್ತಿಜ್ಞಾನ ವರ್ಧಿಪುದು ಮಹಾನ್ ಮೋಹನ್ನ ರಚಿಸಿದ್ದುಗ್ರಂಥಗಳುಪಂಡಿತಪಾಮರರಿಗೂ ಸಹ ಸುಬೋಧಕವುಸುಧಾರಸ ಪೋಲು ಹಾಡಿ ರಸಿಕರೇ ಪಠಿಸಿ 26ನಿರ್ಮತ್ಸರ ಸಾತ್ವಿಕನು ಹರಿಭಕ್ತನುವಿಮಲ ಹರಿದಾಸ ಸಾಹಿತ್ಯ ಸೂತ್ರಭಾಷ್ಯಕ್ರಮದಿ ಕಲಿತ ಆನಂದಾಚಾರ್ಯ ಎನ್ನಲಿ ಬಂದುಪ್ರೇಮದಿಂ ಪಠಿಸೆ ನಾಕೇಳಿಸುಖಿಸಿಹೆನು27ಪ್ರಸನ್ನರಾಮ ಶ್ರೀನಿವಾಸಅಖಿಳಸದ್ಗುಣನಿಧಿಯೇದೋಷದೂರನೇ ಗುರಗ ದಯದಿ ಸಲಹೋ ಇವನ್ನದಾಸದೀಕ್ಷೆ ಜ್ಞಾನ ಪ್ರವಚನ ಪಟುತ್ವವೀಯೋಕುಸುಮಭವ ಪಿತ ನಮೋ ಶ್ರೀ ಪ್ರಸನ್ನ ಶ್ರೀನಿವಾಸ 28 ಪ- ಇತಿ ಪಂಚಮೋದ್ಯಾಯ ಸಮಾಪ್ತ-
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವ್ಯಾಸರಾಜರು105ಪಾಲಿಸೋ ಯತಿರಾಜ ಪಾಲಿಸೋಪಾಲಿಸೋ ಮುನಿ ವ್ಯಾಸ ರಾಜ | ಜಗ -ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |ಕಾಲಲ್ಲಿ ಶರಣಾದೆ ಶ್ರೀಲೋಲಪ್ರಿಯ ನಿನ್ನಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪದಿನಪ ಸುತೇಜ ಬ್ರಹ್ಮಣ್ಯ | ತೀರ್ಥಮುನಿಸಾರ್ವಭೌಮರ ದಿವ್ಯ |ಚಾರುವನರುಹಕರದಿಂದ ಉದಯ | ಇನ್ನುಏನೆಂಬೆ ನಿನ್ನ ಪ್ರಾಬಲ್ಯ | ಅಹ |ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನುಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1ಕರುಣಿ ಸುಶಾಂತ ಸುವರ್ಣ | ವರ್ಣತೀರುಥಕರ ಕಂಜೋತ್ಪನ್ನ | ಸುಸ್ಥಿರ ವರಭಕ್ತಿವಿಜ್ಞಾನ| ಸಂ-ಪನ್ನ ಶ್ರೀ ಪಾದಾರ್ಯರನ್ನ | ಅಹ |ಸೇರಿ ಸೇವಿಸಿ ವಾದಿಕರಿಪಂಚಾನನಾದಸೂರಿಸಜ್ಜನನುತ ವ್ಯಾಸ ಮುನೀಂದ್ರ2ಮಾಲೋಲ ಕೃಷ್ಣಸುಪ್ರಿಯರು |ನಿತ್ಯಕಾಳೀಶ ನಿಮ್ಮೋಳ್ ಪ್ರಚುರರು | ಮತ್ತುವ್ಯಾಳೇಶ ಅಂಶ ಸಂಯುತರು | ಎಂದುಹೇಳೋರು ಹೀಗೆ ವಿಬುಧರು | ಅಹ |ಕೀಳುವಿಷಯದಿ ಎನ್ ಮನ ಸೋಲದೇ ಹೊರಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3ದ್ವಾಸಪ್ತತಿ ಸºಸ್ರ | ನಾಡಿತತ್ರಸ್ಥರೂಪಸಮೀರ| ಅವನವಿಂಶತಿ ಮೇಲೇಳು ನೂರು | ಪ್ರತಿಮನೀ ಸ್ಥಾಪಿಸದಿಯೋ ಹೇ ಧೀರ | ಅಹಈ ಸಮಸ್ತ ಹನುಮರೂಪ ಒಂದೊಂದರೊಳ್ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4ಸಾತ್ಯವತೀಯ ವೇದಾರ್ಥ | ಅರಿತುಮಧ್ಯಗೇಹನು ವಿವರಿಸಿದ | ಆಗಜಯರಾಯ ತತ್ ಟೀಕೆ ಬರೆದ | ಈಗವ್ಯಾಸರಾಯನು ವಿವರಿಸಿದ | ಅಹಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿನಿತ್ಯಸುಖವನೀವ ತತ್ವ ಬೋಧಿಸಿದಿ5ಮಾರ್ತಾಂಡಕತ್ತಲೆ ಕಳೆವ | ತರ್ಕತಾಂಡವ ದುಸ್ತರ್ಕ ತರಿವ |ಬಂಡುಮಿಥ್ಯಾವಾದಿಗಳ ದುರ್ಮತವ | ತುಂಡುತುಂಡುಮಾಡಿದ ನ್ಯಾಯಾಮೃತವ | ಅಹಕೊಂಡಾಡಳಲವೇ ಚಂದ್ರಿಕಾಈವಆಹ್ಲಾದವಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6ಪ್ರಣವಮಂತ್ರದಿ ಲಕ್ಷ್ಮೀರಮಣ | ಎಂಟುವರ್ಣ ಮಂತ್ರದಿ ಶ್ರೀರಮಣ | ವಿಷ್ಣುಷಡ್ವರ್ಣದಲ್ಲಿ ಸತ್ಯಾರಮಣ ಹಾಗೂವರ್ಣ ಸರ್ವದಿ ರಮಾ ರಮಣ | ಅಹಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿದಾತಅನುತ್ತಮಹರಿರೂಪಗುಣಕ್ರಿಯಾ ಹಾಡಿದಿ7ಭೂಪನ ಹರಿಯಾಸನವ ನೀ ಏರ್ದಿ | ಏರಿನೃಪವರನಪಮೃತ್ಯು ತರಿದಿ | ಯತಿತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವವಿಭುದರಿಂದಲಿ ಪೂಜ್ಯನಾದಿ | ಅಹ |ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8ನರಸಿಂಹ ಗೋಪಾಲ ಕೃಷ್ಣ | ಯಜÕವರಾಹಪಟ್ಟಾಭಿರಾಮನ್ನ | ಬಹುಪರಾಶರ್ಯಾದಿ ರೂಪನ್ನ |ನಿತ್ಯನಿರುತ ಸಂಪೂಜಿಪ ಘನ್ನ | ಅಹವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆಜೀಯ9 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸಖ್ಯವಿರಬೇಕು ಹರಿಭಕ್ತಜನಕೆಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.ಅನಾದ್ಯನಂತ ಕಾಲಕ್ಕು ಸಾಯುಜ್ಯಸಖಅನಂತಜೀವರಿಗೆ ಬಿಂಬರೂಪತಾನೆ ಜೀವರಿಗನ್ನಪಾನಿತ್ತು ಪಾಲಿಸುವಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ 1ಶ್ರೇಯಸವನೀವಪ್ರತಿಶ್ರೇಯಸದ ಬಯಕಿಲ್ಲಗೀಶ್ರೇಯಸವನೀವ ಔದಾರ್ಯಗುಣದಿಮಾಯ ದಾರಿದ್ರಾದ್ಯವಿದ್ಯತಮೋಭಾನುವಾಯುಸಖ ಜ್ಞಾನಿಜನಪ್ರಿಯ ಸಖನೊಳು 2ಕ್ಷುತ್ತøಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್ಶತ್ರು ಸಂಹಾರಿಪರಾತ್ಪರಸಖವೇತ್ತøಜನಧೇನು ವೇದೋಪನಿಷದ್ವೇದ್ಯಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ 3ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿದುರಿತಭವದೂರ ನಿರ್ದೋಷಗುಣದಿಸುರಮುನಿನಿಕರಸೇವ್ಯಶಾಶ್ವದೇಕೋಭವ್ಯವರಸಹಸ್ರಾನಂತ ವಿಗ್ರಹನೊಳು4ಪಾರ್ಥಸಖಗೋಪವಧೂಗೋತ್ರಸಖ ಸ್ತ್ರೀಪುತ್ರಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣಮಿತ್ರವರನೊಬ್ಬ ಸರ್ವತ್ರ ನಾರಾಯಣಾನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ 5
--------------
ಪ್ರಸನ್ನವೆಂಕಟದಾಸರು
ಸತ್ಯಭಾಮಾವಿಲಾಸಶ್ಲೋಕಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕಹರಿದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು 1ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ 2ಪದಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ 3ಒಂದು ಹೂವಿನ ಪರಿಮಳವುನಗರತುಂಬಿಇಂದುವದನೆಸತ್ಯಭಾಮೆಇಂದುಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ 4ಶ್ಲೋಕಅರ್ಧಾಂಗಿಯಲಿ ಸ್ನೇಹವೆಗ್ಗಳಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ 5ಸಾಕಿನ್ನಾತನ ಚಿತ್ತಪಲ್ಲಟಸಟೆಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ6ಪದಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ 7ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವಕಜ್ಜಲಜಲ ಸೂಸಿ 8ಶ್ಲೋಕವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ಅಕ್ಷಯಸೌಗಂಧಿಯಳ್ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು 9ಹಾ ಹಾ ಕೈತವ ಮೀನ ಜೃಂಭಕಮಠಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ಗøಹ ದೂರಕ ಪರಸಖ ಆಶಾಬ್ಧಿ ಸಂಶೋಷಕ10ಪದತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು 11ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ12ಶ್ಲೋಕಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್ಕೈವಲ್ಯಜÕರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ 13ಎತ್ತೊಯ್ದು ಮೃದುತಲ್ಪಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು 14ಪದದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು 15ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ 16ಶ್ಲೋಕಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನಮಣಿಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ 17ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನಶಿಖಾಮಣಿರಮಣಿ ಕೇಳ್ದುಶ್ಚಿತ್ತ ಮಾಣೆಂದನು 18ಪದಈಪರಿಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳುಸತಿತಾಪದ್ವಿಗುಣಿಸಿತು ಕೇಳಿ 19ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು 20ಶ್ಲೋಕಮಾನವಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆಮಾನಿನಿನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳುದಾವಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆವಿಶ್ವಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ 21ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು 22ಪದನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ 23ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆದಿವ್ಯಕುಸುಮಅಪಮಾನ ಸತ್ಯಳಿಗೆಮಾನಬಂಗಾರಿಗೆಚಪಲತೆ ತಿಳಿಯದು ನಿನ್ನ 24ಶ್ಲೋಕಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾಕುಸುಮಜೇಷ್ಠಳ್ಗೀಯೆ ನೀ ಮುನಿವರೆ25ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವiಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂನೋಡುನೀ26ಬಿನ್ನಣೆ ಮಾತಲ್ಲ ನಿನ್ನಾಣೆಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ 27ಎನ್ನ ಶಪಥÀವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದತರುನಿನಗೀವೆ ನಾ 28ಶ್ಲೋಕಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ 29ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆಬಾ ಸೌಂದರ್ಯದವಾರಿಧಿಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ 30ಪದನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ 31ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನಮುನಿಸುತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆನಿನ್ನ ಪುಣ್ಯದ ಬೆಳಸ ಬೆಳೆದೆ 32ಶ್ಲೋಕಶ್ರೀಶೌರಿಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು 33ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರಪ್ರವಾಳನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು 34ಪದಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ 35ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕಸೂತ್ರನಿರ್ಲಿಪ್ತ 36ಶ್ಲೋಕಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೆÉೂೀತಿಷ್ಮತಿಸ್ಥಾನಕೆ 37ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾಕುಂಡಲಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು 38ಪದಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆಮಂದರತರುವಮುಚುಕುಂದವರದನು ತರುತಿರೆ ಅಮರರನಿಚಯಸಹಿತ ಕಾದಿದಿಂದ್ರ 39ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧÀರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ 40ಶ್ಲೋಕಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವಹರಿನಾರೇರ ಮುಂದೆನ್ನನುಭೂರಿಮಾನಿಯಮಾಡುಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು 41ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀಅಂಬರಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು42ಪದಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು 43ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ 44ಶ್ಲೋಕಲಕ್ಷ್ಮೀ ಭೂರಮಣ ಭವಾಬ್ದಿಮಥನಪಕ್ಷೀಂದ್ರಸದ್ವಾಹನಮೋಕ್ಷಾಧೀಶವಿರಿಂಚಿವಾಯುಫಣಿಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ45ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡಜ್ಞಾನಿಪ್ರಸನ್ವೆಂಕಟ 46ಪದಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ 47ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆಹರಿನೀ ಸೋತ್ಯೊ ಪ್ರಸನ್ನವೆಂಕಟೇಶ 48ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವಪ್ರಕೃತಿ ಗೂಡಿಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ 49ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣಸಾಂದ್ರದೀನ ದಯಾನಿಧಿ ಪ್ರಸನ್ನÉಂಕಟ ಕೃಷ್ಣಮನುಷ್ಯಲೀಲೆಯ ತೋರಿದ 50ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ 51
--------------
ಪ್ರಸನ್ನವೆಂಕಟದಾಸರು