ಒಟ್ಟು 857 ಕಡೆಗಳಲ್ಲಿ , 93 ದಾಸರು , 749 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದಉರ್ವಿಯೊಳು ಜನಿಸಿದೆನೊ ಕೃಷ್ಣ ಪಕಾರುಣ್ಯನಿಧಿಯನ್ನ ಕಾಯಬೇಕಯ್ಯಹರಿವಾರಿಜನಾಭನೇ ಮುದ್ದುಕೃಷ್ಣ ಅ.ಪಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆಕಷ್ಟನಾದೆನು ಕೇಳೊ ಕೃಷ್ಣತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂಗೆಟ್ಟು ಸೊರಗಿದೆನಯ್ಯ ಕೃಷ್ಣಮುಟ್ಟಲಮ್ಮರು ಎನ್ನಸತಿಸುತರು ಬಾಂಧವರುಅಟ್ಟಿ ಎಳೆಯುತ್ತಿಹರೋ ಕೃಷ್ಣಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರುಮುಟ್ಟುವುದು ನಿನಗಯ್ಯ ಕೃಷ್ಣ 1ಕಾಶಿಯಾವಾಸವನು ಬಯಸಿ ಬಹುದಿನದಿಂದಆಸೆಯೊಳಗಿದ್ದೆನಯ್ಯ ಕೃಷ್ಣಗಾಸಿಯನು ಮಾಡದಲೆ ದೋಷವನು ಪರಿಹರಿಸೊಸಾಸಿರನಾಮದ ಕೃಷ್ಣಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯಪಾಶದಿಂದಲಿ ಬಿಗಿದರೇ ಕೃಷ್ಣಕಂಸಮರ್ದನನೆ ನೀ ಕಾಯಬೇಕಯ್ಯಹರಿವಾಸುದೇವನೆ ಮುದ್ದು ಕೃಷ್ಣ 2ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನುನೀ ಕಂಡು ಬಲ್ಲೆಯಾ ಕೃಷ್ಣಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನೆ ಮಾಡಯ್ಯ ಕೃಷ್ಣರಾಕೇಂದುಮುಖಿ ದ್ರೌಪದಿಯಮಾನವಕಾಯ್ದೆಆಕೆಗಕ್ಷಯವಿತ್ತೆ ಕೃಷ್ಣ ಪಿನಾಕಿಸಖಪುರಂದರವಿಠಲನೆ ಉಡುಪಿಯ ವಾಸಸಾಕಿ ಸಲಹೈ ಎನ್ನ ಕೃಷ್ಣ
--------------
ಪುರಂದರದಾಸರು
ಪೋಗಿ ಬರುವೆನು ಎನ್ನ ಮನೆಗೆ ಜಗದೀಶಭಾಗವತಪ್ರಿಯ ಭಾಗೀರಥೀಜನಕ ಪ.ವರುಷವರುಷಕೆ ನಿನ್ನ ದರುಶನವನಿತ್ತೆನ್ನಕರುಣಿಸೈ ಶೇಷಾದ್ರಿವರ ಶ್ರೀನಿವಾಸದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾವರಪ್ರಸಾದವನೀಯೊ ಜನ ಮೆಚ್ಚುವಂತೆ1ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿನಿಯಮತಿಯೀಯೊ ನೀರಜನಾಭನೆದಯಮಾಡೊ ತವ ಪಾದಸೇವೆಯನ್ನಿತ್ತೆನಗೆಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ 2ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾಧೀನನೀನೆಂಬ ಬಿರುದುಂಟಾದಡೆಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಸನ್ನ ಶ್ರೀಕೂರ್ಮ5ಪ್ರಥಮ ಅಧ್ಯಾಯಶ್ರೀಕೂರ್ಮಪ್ರಾದುರ್ಭಾವಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ತನು ಕೂರ್ಮರೂಪಪಾಲಾಬ್ಧಿಜಾಪತಿಅನಘಅಜಿತ ಧನ್ವಂತರಿಲೀಲಾ ಮೋಹಿನಿಅನಘಶರಣು ಮಾಂಪಾಹಿಪವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶಪದುಮಜಾಂಡವ ಪಡೆದ ಜಗದೇಕಭರ್ತಾಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವವೇಧಮುಕ್ಕಣ್ಣಾದಿ ಸುರಸೇವ್ಯಪಾಹಿ1ಸತ್ಯ ಜ್ಞÕನಾನಂತ ಭೂಮಾದಿ ಗುಣನಿಧಿಯೇಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತುತತ್ಸøಷ್ಟಿ ಪಾಲನಾದಿಗಳೆಲ್ಲ ಸತ್ಯ 2ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂಘಟಾದಿ ಕಾರ್ಯಗಳ ಉಪಾದಾನ ಕಾರಣಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ 3ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂತೋಯಜಾಕ್ಷನೇ ನೀನು ನಿಮಿತ್ತ ಕಾರಣನುನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ 4ವಿಧಿಶಿವಾದಿ ಸರ್ವ ಸುರಾಸುರರುಗಳಿಗೆಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇಚೇತನಾ ಚೇತನಾಧಾರ ಸರ್ವತ್ರ 5ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿದೇವಶತೃಗಳ ಬಲ ಉನ್ನಾಹವಾಗಲುದೇವರಾಜನು ಬ್ರಹ್ಮನಲ್ಲಿ ಪೋದ 6ವಾಸವವರುಣಾದಿ ಸುರರ ಮೊರೆಕೇಳಿಬಿಸಜಸಂಭವ ಶಿವ ಶಕ್ರಾದಿಗಳ ಕೂಡಿಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದುಸಂಸ್ತುತಿಸಿದನುಪರಮಪೂರುಷ ನಿನ್ನನ್ನ7ಅವ್ಯಯನೇ ಸತ್ಯನೇ ಅನಂತನೇ ಅನಘನೇಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮಸುವಿನಯದಿ ಮಾಡಿದ ವೇದಾರ್ಥಸಾರ 8ಸಹಸ್ರಾರ್ಕೋದಯ ದ್ಯುತಿ ಸುಂದರರೂಪಮಹಾರ್ಹ ಭಗವಂತಹರಿಈಶ್ವರನೇ ನೀನುಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿಮಹಾನುಭಾವ ನೀ ಒಲಿದಿ ಕೃಪೆಯಿಂದ 9ಪದುಮನಾಭನೇನಿರ್ವಾಣಸುಖಾರ್ಣವನೇಪದುಮಭವ ಸನ್ನಮಿಸಿ ಪೇಳಿದ್ದಕೇಳಿಸಿಂಧುವಮಥನಮಾಡಲಿಕೆ ಬೇಕು ಎಂದಿಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ 10ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟುಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿಅಮೃತೋತ್ಪಾದನ ಯತ್ನಿಪುದು ಎಂದಿ 11ದೈತ್ಯ ದಾನವರೆಲ್ಲ ಶತೃಗಳು ಆದರೂಸಂಧಿಯ ಅವರೊಡೆ ಮಾಡಿ ಕೂಡಿಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದುಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ 12ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿಭೀತಿ ಪಡಬೇಡ ವಿಷ ಉಕ್ಕಿ ಬರುವಾಗಅದಿತಜರಿಗೇವೇ ಫಲ ಲಭಿಸುವುದು ಎಂದುದಿತಿಜರಿಗೆಕ್ಲೇಶಭವಿಸುವುದು ಎಂದಿ13ಪುರುಷೋತ್ತಮ ಜಗತಃಪತಿ ಅಜಿತನಾಮಾಸುರರಿಗೆ ಬೋಧಿಸಿದ ರೀತಿ ಅನುಸರಿಸಿಶಕ್ರಾದಿಗಳು ವೈರೋಚನಾದಿಗಳೊಡೆತ್ವರಿತ ಯತ್ನಿಸಿದರು ಕಡಲ ಮಥನಕ್ಕೆ 14ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನಸುರರುದಾನವರೆತ್ತಿ ಸಮುದ್ರ ತಟಕೆತರಲು ಬಹು ಯತ್ನಿಸಿದರು ವ್ಯರ್ಥದಿಗಿರಿಯ ಭೂ ಮೇಲೆತ್ತೆ ಅಸಮರ್ಥರು 15ಮೇರುಗಿರಿ ಬದಿ ಇದ್ದ ಮಂದರಾಚಲವುರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯಸುರದಾನವರು ಬೆರಗಾಗೇ ಒಂದೇ ಕರದಿಂಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ 16ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥಭಾರತಾಳದೇ ಸುರಾಸುರರು ಹತರಾಗೇಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ 17ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತುಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ 18ಪುಚ್ಛಭಾಗವು ಅಮಂಗಳವು ಬೇಡವೆಂದುಅಸುರರ ವಾದಾ ಮುಖಭಾಗ ಹಿಡಿಯೇವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದುಶ್ರೀಶ ನೀ ಸಹಕರಿಸೆ ಮಥನವ ಮಾಡಿದರು 19ಪರಮಯತ್ನದಿ ಅಮೃತಾರ್ಥ ಪಯೋನಿಧಿಯಗಿರಿಯಿಂದ ಮಂಥನ ಸುರಾಸುರರು ಮಾಡೆಪರಮಗುರುತರಅದ್ರಿಆಧಾರವಿಲ್ಲದೆಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು 20ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತುಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆಬಲು ಕೃಪೆಯಲಿ ನೀನು ಒದಗಿದಿ ಆಗ 21ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀಅಬ್ಧಿಯಲಿ ಬೇಗನೇ ಬಂದು ಮೇಲೆಎಬ್ಬಿಸಿದಿ ಆ ಮಂದರಾಚಲಗಿರಿಯಸುಬಲ ಪೂರುಷ ನಮೋ ಚಿನ್ಮೋದಗಾತ್ರ 22ಚನ್ಮೋದಮಯ ಮಹಾಕೂರ್ಮರೂಪನೇ ನಿನ್ನಅಮಿತ ಸುಬಲ ಲಕ್ಷ ಯೋಜನ ವಿಸ್ತಾರಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ 23ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸಧನ್ವಂತರೀ ಶರಣು ಅಜಿತ ಸ್ತ್ರೀಕೂರ್ಮ24-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-ದ್ವಿತೀಯ ಅಧ್ಯಾಯನೀಲಕಂಠವೃತ್ತಾಂತಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಸಿರಿವರಹರಿಕೂರ್ಮನ ಪೃಷ್ಠೋಪರಿನಿಂತಗಿರಿಯಿಂದ ಅಸುರರುಸುರರುಪುನರ್ಮಥಿಸೆಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯುಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು 1ವಾಸುಕಿತಾಳದೇ ಬುಸು ಬುಸು ಎಂದು ಮೇಲ್ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲುಅಸುರಬಲಿಇಲ್ವಾದಿಗಳು ಬಿಸಿ ಸಹಿಸದೇಘಾಸಿಹೊಂದಿದರುದಾವಾಗ್ನಿಪೀಡಿತರ ಪÉೂೀಲ್2ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂಸುಧಾ ಇನ್ನೂ ಪುಟ್ಟದೇ ಇರುವುದ ಕಂಡುದಂತ ಶೂಕವ ಆಗ ಸ್ವಯಂ ನೀನೇ ಹಿಡಿದುಮಥನಮಾಡಿದಿ ಸ್ವಾಮಿ ಕಾರುಣ್ಯದಿಂದ3ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗಸದಾ ನಮೋ ಶರಣಾದೆ ಲೋಹಿತಾಕ್ಷದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲುಲತಾ ಓಷಧಿ ಕಲುಕಿ ಉಕ್ಕಿತುಸಿಂಧು4ಹಾಹಾ ಭಯಂಕರವು ಇದೇನು ಲೋಕಗಳದಹಿಸುವಂದದಿ ಫೇಣ ಉಕ್ಕಿ ಬರುತಿದೆಯುಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದುಮಹೀಭರ್ತಾ ಮಹಾದೇವ ಮಹಾದ್ರಿದೃತ್ಪಾಹಿ5ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣವಿಶ್ವರಕ್ಷಕ ನೀ ವಿಷಭಯ ನಿವಾರಿಸೆಸ್ವಸಮರ್ಥನಾದರೂ ಭೃತ್ಯರ ಕೀರ್ತಿಯಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ 6ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದಮಹಾದೇವ ಎಂಬುವ ನಾಮ ನಿನ್ನದೇವೇಮಹಾದೇವ ಶಿವ ಈಶ ರುದ್ರಾದಿ ಶಬ್ದಗಳುಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು 7ಭಸ್ಮಧರ ದೇವನಿಗೆ ಮಹಾದೇವ ಎಂಬುವನಾಮ ಔಪಚಾರಿಕದಲ್ಲೇವೇ ರೂಢಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯುಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ 8ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯುರುದ್ರನೊಳು ಇದ್ದು ನೀ ಸಂಹಾರವ ಮಾಡುವಿತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್ರುದ್ರನಿಂ ವಿಷಪಾನ ನಿನ್ನ ನಿಯಮನವೇ 9ಶಕ್ರಾದಿ ಸರ್ವರಿಗೂಗುರುಆಶ್ರಯನು ಶಂಕರನುಶಂಕರನಿಗೆ ಆಶ್ರಯನು ಗುರುಮುಖ್ಯವಾಯುಮುಖ್ಯವಾಯುಗಾಶ್ರಯ ಶ್ರೀಕಾಂತ ನೀನುಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ 10ಯಾವ ಮಹಾದೇವನೊಲಿಯದೇ ವಾಯು ಒಲಿಯಆ ವಾಯು ಒಲಿಯದೇಹರಿತಾನೂ ಒಲಿಯಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲಆ ವಾಯು ಹರಿಧಾಮ ಮಹಾದೇವ ಸ್ತುತ್ಯ 11ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿಯಾವನ ಮೂಲಕ ಶಕ್ರಾದಿಗಳ ಕಷ್ಟತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರುಸುರರುಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ 12ಕರತಲೀಕೃತ್ಯಹಾಲಾಹಲವಿಷವಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡುಕರುಣಾಳು ಮಹಾದೇವ ಭೂತದಯಾಪರನು ಈಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು 13ಹರಿಬ್ರಹ್ಮ ಪಾರ್ವತಿ ಪ್ರಜೇಶ್ವರರುಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರುಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದುಸರೀಸೃಪ ವೃಶ್ಚಿಕಾದಿಗಳೊಳು ಸೇರಿತು 14ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆಸುಪ್ರಸಿದ್ಧನು ಆದ ನೀಲಕಂಠನೆಂದುಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈಗಿರಿಜೇಶನಿಗೆ ನಾ ನಮಿಪೆ ಶರಣೆಂದು 15ಈ ಕೃಪಾಕರ ನೀಲಕಂಠ ಕರತಲೀಕೃತ್ಯಆ ಕಾಲಕೂಟವಿಷ ಉಂಡ ಮಹತ್ಕಾರ್ಯಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ 16ಉರಗಭೂಷಣ ವಿಪ ಉರಗಪರುಗಳಿಗಿಂತನೂರುಗುಣ ಎಂಬುದಕೆ ಅತ್ಯಧಿಕ ಬಲಿಯುವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ 17ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ18-ಇತಿ ದ್ವಿತೀಯಾಧ್ಯಾಯಂ ಸಂಪೂರ್ಣಂ -ತೃತೀಯ ಅಧ್ಯಾಯಶ್ರೀ ಇಂದಿರಾ ಆವಿರ್ಭಾವಸಾರಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಗರಪಾನವ ವೃಷಾಂಕನು ಮಾಡೆ ಇಂದ್ರಾದಿಸುರರುದಾನವರು ಪುನರ್‍ಮಥನವ ಚರಿಸೆಕ್ಷೀರಸಾಗರದಿಂದ ಉತ್ಪನ್ನವಾದವುಪರಿಪರಿ ವಸ್ತುಗಳ್ ಒಂದರ ಮೇಲೊಂದು 1ಯಜÉೂÕೀಪಯೋಗಿಗಳಪ್ರದ ಕಾಮಧೇನುಉಚ್ಛೈಶ್ರವನಾಮ ಸುಲಕ್ಷಣ ಅಶ್ವಸಚ್ಛಕ್ತಿ ಶ್ರೇಷ್ಠತರ ಐರಾವತನಾಮಗಜೇಂದ್ರ ನಾಲ್ಕು ಚಂದದಂತ ಭೂಷಿತವು 2ಸರಸಿಜೋದ್ಭವಸೇವ್ಯಶ್ರೀಶವರಾಹಹರಿನಿನ್ನ ವಕ್ಷ ಸಂಬಂಧದಿ ಹೊಳೆವಸುಶ್ರೇಷ್ಠ ಕೌಸ್ತುಭರತ್ನ ಎಂಬುವಂತಹಸುಭ್ರಾಜಮಣಿ ಬಂತು ಆ ಸಿಂಧುವಿನಿಂದ 3ಸುರಲೋಕ ವಿಭೂಷಣವು ಸರ್ವವಾಂಛಿತ ಪ್ರದವುಪಾರಿಜಾತವು ಉದ್ಭವವಾಯಿತು ತರುವಾಯಸ್ಫುರದ್ರೂಪ ರಮಣೀಯ ಸುಂದರಾಂಗಿಗಳುಹಾರವಸನಭೂಷಿತ ಅಪ್ಸರಸರು 4ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್‍ವಿದಿಕ್ಕುಗಳ ರಂಜಿಸುವರೂಪ -ದಿಂದ ಆವಿರ್ಭವಿಸಿದಳು ಸಾಕ್ಷಾತ್ ಶ್ರೀಇಂದಿರೆಅಲೌಕಿಕ ಸೌಂದರ್ಯಪೂರ್ಣೆ5ಸರ್ವದಾ ಸರ್ವವಿಧದಿ ನಿನ್ನ ಸೇವಿಸಿ ನುತಿಪಸರ್ವಜಗಜ್ಜನನಿಯೇಸಿಂಧುಕನ್ಯಾದೇವ ದೇವೋತ್ತಮ ರಾಜರಾಜೇಶ್ವರ ನಿನಗೆದೇವ ಶ್ರೀ ರಾಜರಾಜೇಶ್ವರಿನಿತ್ಯನಿಜಸತಿಯು6ಇಂದ್ರಾದಿ ದೇವತೆಗಳು ಮುನಿಜನರುಇಂದಿರೆಯನ್ನು ವಿಧಿಯುಕ್ತ ಪೂಜಿಸಿದರುಸಿಂಧುರಾಜನು ವರುಣ ಏನು ಧನ್ಯನೋ ಜಗನ್ -ಮಾತೆ ನಿರ್ದೋಷೆ ರಮಾ ಮಗಳಾಗಿ ತೋರಿಹಳು 7ಅಲೌಕಿಕ ಮುತ್ತು ನವರತ್ನದ ಮುಕುಟಒಳ್ಳೇ ಪರಿಮಳ ಹೂವು ಮುಡಿದ ತುರುಬುಪಾಲದಲಿ ಶ್ರೇಷ್ಠತಮ ಕಸ್ತೂರಿತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬಟ್ಟು 8ಅಂಬುಜಾಕ್ಷಗಳು ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯಪ್ರದ ಕೃಪಾನೋಟಕಂಬುಕಂಠದಿ ಮಂಗಳಸೂತ್ರ ಕರಯುಗದಿಅಂಬುಜಾವರಕೊಡುವ ಅಭಯಹಸ್ತಗಳು9ಕಂದರದಿ ಎಂದೂ ಬಾಡದಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟಿವಸ್ತ್ರ ರಾಜಿಸುವಂತಹ ಸ್ವರ್ಣಹಾರಗಳುಕಾಂತಿಯುಕ್ ಭಂಗಾರ ಸರ್ವಾಭರಣಗಳು 10ಆನಂದಮಯಅಜಿತನಾಮಾ ನಿನ್ನನು ಮನ-ಮಂದಿರದಿ ಪೂಜಿಸುತ ಇಂದಿರಾದೇವಿಬಂದು ಸಭೆಯಲಿ ಸಾಲು ಸಾಲಾಗಿ ಕುಳಿತಿದ್ದವೃಂದಾರಕರನ್ನ ಮಂದಹಾಸದಿ ನೋಡಿದಳು 11ಒಬ್ಬೊಬ್ಬ ದೇವತೆಯಲೂ ಗುಣವಿದ್ದರೂಅಬ್ಬಬ್ಬ ಏನೆಂಬೆ ದೋಷಗಳೂ ಉಂಟುಅದ್ಭುತ ಗುಣನಿಧಿನಿರ್ದೋಷಸರ್ವೇಶ-ಅಂಬುಜನಾಭ ನೀನೇವೇ ಎಂದು ನಮಿಸಿದಳು 12ಕ್ಷರರಿಗೂ ಅಕ್ಷರರಿಗೂ ಎಂದೆಂದೂ ಆಶ್ರಯನುಪುರುಷೋತ್ತಮಹರಿವಿಷ್ಣು ಸ್ವತಂತ್ರಸರಿ ಅಧಿಕರು ಇಲ್ಲದ ಅನಘನು ಸರ್ವಗುಣಪರಿಪೂರ್ಣನಿಗೇವೇ ಅರ್ಪಿಸಿದಳು ಮಾಲೆ 13ಉತ್ತಮ ಸುತೀರ್ಥಗಳಿಂದ ಅಘ್ರ್ಯ ಚಮನಪಾದ್ಯಾದಿ ಅರ್ಚನೆ ವಿಧಿಯುಕ್ತವಾಗಿಸುತಪೂನಿಧಿ ವಸಿಷ್ಠಾದೀಯರು ವೇದೋಕ್ತಮಂತ್ರ ಪಠಿಸೆ ವರುಣ ಹರಿಯ ಪೂಜಿಸಿದ 14ಆನಂದಪೂರ್ಣಅಜನಿತ್ಯಮುಕ್ತೆ ಮಗಳುಇಂದಿರೆಯಆನಂದಮಯಹರಿನಿನಗೆಸಿಂಧುಧಾರೆ ಎರೆದು ಮದುವೆ ಮಾಡಿಕೊಟ್ಟಆನಂದ ನಿತ್ಯದಂಪತಿ ರಮಾ ಮಾಧವರು 15ಪೀತಾಂಬರ ದಿವ್ಯ ಆಭರಣ ಪೊಳೆಯುತ್ತಮೋದಮಯ ನೀ ಸಿಂಧುಜಾ ಸಹ ದಿವ್ಯರತ್ನ ಖಚಿತ ಮಂಟಪದಲಿ ಕುಳಿತರೆಮುದದಿ ವರ್ಷಿಸಿದರು ಪೂಮಳೆಸುರರು16ಸಂಭ್ರಮದಿ ಮಂಗಳವಾದ್ಯ ಸುಧ್ವನಿಗಳುತುಂಬಿತುಅಂಬರಅಂಬುಧಿಎಲ್ಲೂಗಂಭೀರ ಸುಸ್ವರ ವೇದಘೋಷಗಳುತುಂಬರ ನಾರದಾದಿಗಳ ಗಾಯನವು 17ದೇವಗಾಯಕರುಗಳ ದಿವ್ಯ ಕೀರ್ತನೆಗಳುದೇವನರ್ತಕ ನರ್ತಕಿಯರ ನರ್ತನವುದೇವತೆಗಳ ಆಭರಣಾದಿ ಕಾಣಿಕೆಗಳದೇವಿ ರಮೆಗೂ ನಿನಗೂ ಅರ್ಪಿಸಿದರು ಮುದದಿಂ 18ವನಜಭವ ರುದ್ರಾದಿಗಳು ಮುನಿವೃಂದವುಸನ್ನುತಿಸುತ ಸರ್ವ ಕೀರ್ತನವನ್ನುಆನಂದ ಭಕ್ತಿಯಂ ಶ್ರೀ ಲಕ್ಷ್ಮೀಯನ್ನು ನೋಡಿಧನ್ಯರಾದರು ನಮೋ ವಿಷ್ಣುಗೆ ಶ್ರೀರಮೆಗೆ 19ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ20- ಇತಿ ತೃತೀಯ ಅಧ್ಯಾಯ ಪೂರ್ಣಂ -ಚತುರ್ಥ ಅಧ್ಯಾಯಶ್ರೀ ಧನ್ವಂತರಿ ಹಾಗೂ ಮೋಹಿನಿವೃತ್ತಾಂತಸಾರಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪವಿಸ್ತಾರವಾಗಿ ಫೇಣವು ವ್ಯಾಪಿಸಿರುವಆ ಸಮುದ್ರದಿಂದ ವಾರುಣಿಯು ಬರಲಾಗಅಸುರರನು ತಮಗೇವೆ ಬೇಕೆಂದು ಕೊಂಡರುಈಶ ನೀ ಅವರಿಗೆ ಅನುಮತಿ ಕೊಡಲು 1ಸುಧೆಗಾಗಿ ಸಿಂಧುವ ಮತ್ತೂ ಮಥನಮಾಡೆಉದಿಸಿದನುಪರಮಅದ್ಭುತ ಪುರುಷನುಸುಂದರ ವಿಗ್ರಹ ಕಂಬುಗ್ರೀವ ಅರುಣೇಕ್ಷಣಅಂದ ಸುದೀರ್ಘ ಪೀವರದೋರ್ದಂಡ 2ಸಗ್ನಧರ ಶ್ಯಾಮಲಸ್ತರುಣ ಸರ್ವಾಭರಣ -ದಿಂದ ಒಪ್ಪುವ ರತ್ನಖಚಿತ ಕುಂಡಲವುಪೀತವಾಸ ಮಹಾಸ್ಕಂಧ ಸುಶುಭಾಂಗನುಸ್ನಿಗ್ದ ಕುಂಚಿತ ಕೇಶ ಸಿಂಹ ವಿಕ್ರಮನು 3ಅನುಪಮಾದ್ಭುತ ಈ ಮಹಾಪುರುಷ ಸಾಕ್ಷಾತ್ವಿಷ್ಣು ನೀನೇವೆ ಮತ್ತೊಂದವತಾರಆನಂದ ಚಿನ್ಮಾತ್ರ ಹಸ್ತದಲಿ ಹಿಡಿದಿರುವಿಪೂರ್ಣವಾಗಿ ಅಮೃತ ತುಂಬಿರುವ ಕಳಸ 4ಆಯುರ್ವೇದ ಮಹಾಭಿಷಕ್ ಶ್ರೀ ಧನ್ವಂತರಿ ನೀನುಕೈಯಲ್ಲಿ ಪಿಡಿದ ಪಿಯೂಷ ಕುಂಭವನುದೈತ್ಯರು ನೋಡಿ ಬಹು ಇಚ್ಛೈಸಿ ಅಪಹರಿಸೆಶ್ರೀಯಃಪತಿಯೇಸುರರುನಿನ್ನಲ್ಲಿ ಮೊರೆಇಟ್ಟರು5ದೇವತಾವೃಂದವಿಷ್ಣಮನಸ್ಸಿಂದಲಿದೇವವರೇಣ್ಯಹರಿನಿನ್ನ ಶರಣು ಹೋಗಲುಯಾವ ಮನಖೇದವೂ ಬೇಡ ಅನುಕೂಲವನೇಮಾಡುವಿ ಎಂದು ನೀ ಅಭಯವನ್ನಿತ್ತಿ 6ಅಮೃತಕಲಶವು ಎಂದು ನೆನೆದು ಆ ಅಸುರರುನಾಮುಂಚಿ(ಚೆ) ನಾಮುಂಚಿ (ಚೆ) ನೀ ಮುಂಚಿ (ಚೆ) ಅಲಲ್ತಮ್ಮೊಳಗೆ ಈ ರೀತಿ ಪರಸ್ಪರ ಕಾದಾಡೇನೀ ಮೋಹಿನಿ ರೂಪದಲಿ ತೋರಿ ನಿಂತಿ 7ಪರಮಅದ್ಭುತ ಅನಿರ್ದೇಶ್ಯ ಸ್ತ್ರೀರೂಪವಧರಿಸಿ ನಿಂತಿಯೋ ಆ ಅಸುರರ ಮುಂದೆಅರಳಿದಮಲ್ಲಿಗೆ ಮುಡಿದ ಕುಂತಳವುವರಾನನ ಕರ್ಣಕುಂಡಲಕಪೋಲ8ಸುಗ್ರೀವ ಕಂಠಾಭರಣ ಸುಭುಜಾಂಗದಸ್ಫುರತ್ ನವ ಯೌವನಗಾತ್ರ ಸೌಂದರ್ಯಉರದಿ ಪೊಳೆಯುವ ನವರತ್ನಪದಕಗಳುಭಾರಿ ಪೀತಾಂಬರವುದಿವ್ಯಒಡ್ಯಾಣ9ಸರ್ವಅವಯವಗಳು ಅನುಪಮ ಸುಂದರವುಸರ್ವಾಭರಣ ವಿಭೂಷಿತ ಸೊಬಗುಸರ್ವಾಕರ್ಷಕ ಮಂದಗತಿ ನೋಟವುಸರ್ವ ಆ ದೈತ್ಯರೊಳು ಕಾಮ ಪುಟ್ಟಿಸಿತು 10ಅಮರರೊಳು ದೈತ್ಯರೊಳು ಗಂಧರ್ವ ನರರೊಳುಈ ಮಹಾ ಸೌಂದರ್ಯರೂಪ ಕಂಡಿಲ್ಲಸುಮೋಹಿತ ದೈತ್ಯರು ಸುಧಾ ವಿಷಯದಲಿತಮಗೂ ಸುರರಿಗೂ ನ್ಯಾಯಮಾಡೆ ಕೋರಿದರು 11ಮಾಯಾಯೋಷಿದ್ವಪುಷಅಮೃತ ವಿನಿಯೋಗನ್ಯಾಯವೋ ಸರಿಯೋ ಸರಿಯಲ್ಲವೋನೀ ಹ್ಯಾಗಾದರೂ ಮಾಡಲಿಕೆ ಒಪ್ಪಿದರುಮಾಯಾಮೋಹವೃತ ಆ ದೈತ್ಯಜನರು12ಉಪವಾಸ ಸ್ನಾನ ಹೋಮಾದಿಗಳು ಆಗಿದೀಪಾವಳಿಗಳ ಹಚ್ಚಿಟ್ಟು ಮುದದಿತಪ್ಪದೇಮುಕ್ತಆಚರಣೆ ತರುವಾಯಸುಪವಿತ್ರ ಸುಧೆಗೆ ಕಾದರು ಸುರಾಸುರರು 13ಸುಧೆಗೆ ಕಾದಿರುವ ಸುರಾಸುರರ ನೋಡಿಸುಧಾ ಕಲಶ ನಿಜವಾದ್ದನ್ನ ಹಿಡಿದಿಮಂದಗಜ ಗತಿಯಲ್ಲಿ ಶೃಂಗಾರ ಸುರಿಸುತ್ತಬಂದಳು ಮೋಹಿನಿ ಚಂದ ನವಯುವತಿ 14ಅಸುರರು ಅರಿಯರು ಯೋಷಿದ್ ವಪುಹರಿಯೇವೇಆ ಸ್ಫುರದ್ರೂಪಿಣಿ ಮೋಹಿನಿ ಎಂತಅಸುರರು ಲೋಲುಪಮರು ಸುಧಾ ಅನರ್ಹರು ಎಂದುಶ್ರೀಶ ನೀ ನಿಶ್ಚಯಿಸಿದಿ ದೇವ ದೇವ 15ದೇವತೆಗಳ ಪಂಕ್ತಿ ಒಂದು ಸಾಲು ಮತ್ತುದೇವಶತೃಗಳ ಪಂಕ್ತಿ ಮತ್ತೊಂದು ಸಾಲುದೇವತೆಗಳಿಗೇವೇ ನೀ ಸುಧ ಉಣಿಸಿದಿದೇವಶತೃಗಳಿಗೆ ಸುಧಾ ಉಣಿಸಲಿಲ್ಲ 16ಕೂರ್ಮರೂಪದಲಿ ನೀ ಮಂದರಾಗಿರಿ ಪೊತ್ತುಅಮರರ ಸಹಿತಸಿಂಧುಮಥಿಸಿದಿ ಅಜಿತಅಮೃತ ಕಲಶವ ತಂದಿ ಶ್ರೀಶ ಧನ್ವಂತರಿಸುಮನಸಸುಧಾಪ್ರದ ಮೋಹಿನಿರೂಪ17ಹರಿಪಾದಾಶ್ರಿತರಾಗಿರುವ ಸುರರಿಗೆ ಅಮೃತಹರಿಪರಾನ್ಮುಖ ದ್ವೇಷಿ ದೈತ್ಯರಿಗೆ ಇಲ್ಲಸುರಾಸುರಗಣಕೆ ಸಮ ಕರ್ಮೋಪಕರಣಗಳುಆದರೂ ಯೋಗ್ಯತೆಯಿಂದ ಫಲ ಬೇರೆ ಬೇರೆ 18ಜ್ಞಾನಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ19- ಇತಿ ಚತುರ್ಥ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು
ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
--------------
ಪುರಂದರದಾಸರು
ಬಿಡೆ ನಿನ್ನ ಚರಣವಉಡುಪಿಕೃಷ್ಣನೆಭವಕಡಲ ದಾಟಿಸು ಕೈಯವಿಡಿದು ಪಾಲಿಸು ತಂದೆ ಪ.ಧÀ್ರುವಶುಕಪ್ರÀಹ್ಲಾದಬಲಿಅಜಾಮಿಳನುದ್ಧವ ಅಂಬರೀಷ ವಿದುರ ಮುಖ್ಯರುತವ ಪಾದವಿಡಿಯಲವರಿಗಿಂಬು ನೀಡ್ದಹವಣವ ಬಲ್ಲೆ ನಾನೇನ ಮಾಡಿದರೇನ 1ಪಾಂಚಾಲಿಮಾನವಕಾಯ್ದೆ ಪೆರರಿಗಂದುಅಚ್ಯುತನಿನ್ನಂಗುಟವು ಸೋಂಕಲುನಿಚ್ಚಳ ಸತಿಯಾದಳೆಂಬ ಸಾಹಸಕೇಳಿಮುಚ್ಚು ಮರೆಯ ಮಾಡಿದರೆ ನಿಮ್ಮ ಮರೆಯೆನು 2ನಿನ್ನ ಪಾದಾಂಬುಜ ಧ್ಯಾನ ಮರೆಯದಂತೆಎನ್ನ ಮನದ ವಕ್ರಗತಿಯ ತಿರ್ದುಮನ್ನಿಸು ತಂದೆ ಪ್ರಸನ್ನವೆಂಕಟ ಕೃಷ್ಣಪೂರ್ಣಪ್ರಜ್ಞಾರ್ಚಿತ ಚರಣಕಮಲನೆ 3
--------------
ಪ್ರಸನ್ನವೆಂಕಟದಾಸರು
ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು
ಭೇದ ಮುಕ್ತಾವಲಿ (ಕೋಲು ಹಾಡು)ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನಕೋಲು ಸುಖತೀರ್ಥಯತಿರಾಯನ ಕರದಂಡುಕೋಲು ಕೋಲೆನ್ನ ಕೋಲೆ ಪ.ಶ್ರೀದೇವಹೂತಿಜಾಜನಂಘ್ರಿಗೆ ನಮಿಸುವೆಶ್ರೀದೇವಿ ಪದಕೆ ಎರಗುವೆ ಕೋಲೆಶ್ರೀದೇವಿ ಪದಕೆ ಎರಗುವೆ ಮುಖ್ಯಗುರುವಾದಜವಾಯುರೊಂದಿಪೆ ಕೋಲೆ 1ವಾಣಿ ಭಾರತಿದೇವಿ ಗರುಡ ಮಹೇಶಾನಂತಜ್ಞಾನದಾತರಿಗೆ ನಮೋ ಎಂಬೆ ಕೋಲೆಜ್ಞಾನದಾತರಿಗೆ ನಮೋ ಎಂಬೆ ಶ್ರೀವಿಷ್ಣುಮಾನುನೆರಾರ್ವರ ಶರಣೆಂಬೆ ಕೋಲೆ 2ಗರುಡನ ರಂಭೆವಾರುಣಿಗಿರಿಜೇರಿಗೊಮ್ಮೆಕರಗಳ ಮುಗಿದು ಸ್ಮರಿಸುವೆ ಕೋಲೆಕರಗಳ ಮುಗಿದು ಸ್ಮರಿಸುವೆ ಇಂದ್ರ ಕಾಮವರಪ್ರಾಣಾನಿರುದ್ಧರ ಬಲಗೊಂಬೆÉ ಕೋಲೆ3ಇಂದ್ರಾಣಿರತಿಮುಖ್ಯರಾದ ತಾರತಮ್ಯದವೃಂದಾರಕಋಷಿನೃಪರನು ಕೋಲೆವೃಂದಾರಕಋಷಿನೃಪರಮನುಷ್ಯೋತ್ತಮರಂ ಧ್ಯಾನಿಸುವೆ ಮನದಲಿ ಕೋಲೆ 4ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲತಾನೀಶನೆಂದು ನುಡಿದವ ಕೋಲೆತಾನೀಶನೆಂದು ನುಡಿದವ ತಮಸನುತಾನುಂಬ ತನ್ನ ಬಳಗದಿ ಕೋಲೆ 5ಹರಿಯ ಗುಣಕೆ ಎಣಿಕೆನಿಟ್ಟವ ಕೆಟ್ಟವಹರಿನಿರ್ಗುಣೆಂಬ ಡಂಬರ ಕೋಲೆಹರಿನಿರ್ಗುಣೆಂಬ ಡಂಬರ ಸಂಗದಿಧರೆಯ ಸಜ್ಜನರು ಮತಿಗೆಡಲಿ ಕೋಲೆ 6ಕ್ಷೀರಾಂಬುಧಿಮನೆಯ ವಾಸುದೇವನ ಆಜ್ಞಾಧಾರಿಯೆನಿಪ ವಾಯುದೇವನು ಕೋಲೆ ಆಜ್ಞಾಧಾರಿಯೆನಿಪ ವಾಯುದೇವನು ಮೊದಲಿಗೆವೀರ ಹನುಮ ಭೀಮನಾದನು ಕೋಲೆ 7ಮೂರನೆ ಅವತಾರಿ ಮಧ್ವರಾಯನು ಮುಕ್ತಿದಾರಿಯ ತನ್ನವರಿಗೆಲ್ಲ ಕೋಲೆ ಮುಕ್ತಿದಾರಿಯ ತನ್ನವರಿಗೆಲ್ಲ ತೋರಿದುದಾರಿಯ ಪದವ ಹೊಂದಿದೆ ಕೋಲೆ 8ಗುರುಮಧ್ವ ಎನ್ನ ಮಾತೆ ಗುರುಮಧ್ವನೆನ್ನತಾತಗುರುಮಧ್ವನಾಥ ಸಖಭ್ರಾತ ಕೋಲೆಗುರುಮಧ್ವನಾಥ ಸಖಭ್ರಾತನೆಂದವರಿಗೊಲಿವನು ಗತಿಯ ಕೊಡುವನು ಕೋಲೆ 9ಸುಖತೀರ್ಥರಾಯನ ಹಿತವಾಕ್ಯಕೆಣೆಯಿಲ್ಲಶುಕತಾತ ಸಮನ ದೈವಿಲ್ಲ ಕೋಲೆಶುಕತಾತ ಸಮನ ದೈವಿಲ್ಲವೆಂದವರಭಕುತಿಯ ಬೇಡಿ ಬಯಸಿದೆ ಕೋಲೆ 10ಭಕುತ್ಯೆಂಬ ಮುಯ್ಯವ ಹರಿಪಾದಕರ್ಪಿಸಿದಅಕಳಂಕ ಮಧ್ವ ಮುನಿರಾಯ ಕೋಲೆಅಕಳಂಕ ಮಧ್ವಮುನಿರಾಯನಂಘ್ರಿಗೆಸಕಳ ಭಾರವ ಒಪ್ಪಿಸಿದೆನು ಕೋಲೆ 11ವಿಶಿಷ್ಠ ಸ್ವರೂಪಾನಂದರ್ಭಾವ ಮೋಕ್ಷ ಸುವಾಸಿನೇರೆಲ್ಲರೊಂದಾಗಿ ಕೋಲೆ ಸುವಾಸಿನೇರೆಲ್ಲರೊಂದಾಗಿ ಹೋಗುವಹೇಸಿ ನಾರೇರ ಗೆಲ್ಲುವ ಕೋಲೆ 12ನಮ್ಮ ಮುತ್ತಯ್ಯನಾದ ಮರುತರಾಯನ ಕೀರ್ತಿನಿರ್ಮಲ ಬುಧರಿಗಮೃತವು ಕೋಲೆನಿರ್ಮಲ ಬುಧರಿಗಮೃತವು ಧರೆಯೊಳುಹಮ್ಮಿನ ಖಳರಿಗೆದೆಗಿಚ್ಚು ಕೋಲೆ 13ಮುತ್ತಯ್ನಂಶದ ಒಳಗೊಬ್ಬ ಜನಿಸಿದಹೆತ್ತಯ್ನಮ್ಮ ಜಯರಾಯ ಕೋಲೆಹೆತ್ತಯ್ನಮ್ಮ ಜಯರಾಯ ತನ್ನ ಬಂಧುಮೊತ್ತದಿ ರಾಜ್ಯವಾಳಿದ ಕೋಲೆ 14ಜಯರಾಯ ಸಂತತಿಯ ಮಕ್ಕಳು ನಾವೀಗಜಯನವಭೇರಿ ಹೊಯಿಸುತ ಕೋಲೆಜಯನವಭೇರಿ ಹೊಯಿಸುತ ರವದ ಜಾಗಟೆಯ ಬಿರುದಲಿ ಬರುತೇವೆ ಕೋಲೆ 15ಬಯಲು ಮಾತಿನವ ಕಡೆಗಾಗಿ ತತ್ವವಿನಯ ವಾಕ್ಯ ನಿಮಗೆ ಸೊಗಸಲ್ಲ ಕೋಲೆ ವಿನಯವಾಕ್ಯ ನಿಮಗೆ ಸೊಗಸಲ್ಲ ಕೇಳಿದರೆಭಯಬಿಟ್ಟುಕೇಳಿಕವಿಯರು ಕೋಲೆ16ಲೌಕಿಕ ಮಾತಿನಂತಲ್ಲ ಮುಯ್ಯದ ಹಾಡುವೈಕುಂಠಪತಿಯ ಅರಮನೆಯ ಕೋಲೆವೈಕುಂಠಪತಿಯ ಅರಮನೆಯಾಸ್ಥಾನದಏಕಾಂತ ನಾರೇರೊಪ್ಪಿದ್ದು ಕೋಲೆ 17ಹಾದಿ ಬೀದಿಯ ಜನರ ಮೆಚ್ಚಿನ ಮುಯ್ಯಲ್ಲಮಾಧವನ ಶ್ವೇತದ್ವೀಪದ ಕೋಲೆಮಾಧವನ ಶ್ವೇತದ್ವೀಪದ ಮಂದಿರದಿಶ್ರೀದೇವಿಯಮ್ಮ ಕೇಳ್ವಳು ಕೋಲೆ 18ಭ್ರಾಂತಜನರಿಗೆ ವಿಶ್ರಾಂತಿದೋರದು ಮುಯ್ಯಾನಂತಾಸನದ ಅನಂತನ ಕೋಲೆ ಅನಂತಾಸನದ ಅನಂತನ ಮಡದಿ ಶ್ರೀಕಾಂತೆ ನಮ್ಮವ್ವ ಕೇಳ್ವಳು ಕೋಲೆ 19ಹಾಡುತ ಬರುತೇವೆ ಹರಸುತ ಬರುತೇವೆರೂಢಿಯ ಸಾಧುಜನರನು ಕೋಲೆರೂಢಿಯ ಸಾಧುಜನರ ಗುಣಂಗಳ ಕೊಂಡಾಡುತ ನಾವು ಬರುತೇವೆ ಕೋಲೆ 20ದರ್ಶನರಾಯರು ಮೂವತ್ತೇಳು ಮಂದಿಅರಸರು ನಮ್ಮ ಹಿರಿಯರು ಕೋಲೆಅರಸರು ನಮ್ಮ ಹಿರಿಯರ ಮಹಿಮೆ ಉಚ್ಚರಿಸುತ ನಾವು ಬರುತೇವೆ ಕೋಲೆ 21ನಮ್ಮ ತವರಿಗೆ ಕೀರ್ತಿತಂದ ಕನ್ಯೇರು ನಾವುನಮ್ಮ ನೆಳಲಿಗಂಜಿ ನಡೆದೇವು ಕೋಲೆನಮ್ಮ ನೆಳಲಿಗಂಜಿ ನಡೆದೇವು ದುರುಳೇರಉನ್ಮತ್ತನಮಗೆ ಎಣಿಕಿಲ್ಲ ಕೋಲೆ22ಜ್ಞಾನದೀವಟಿಗೆ ಬೆಳಗಲೆ ಬರುತೇವೆಜ್ಞಾನ ಕತ್ತಲೆಯ ಬೆದರಿಸಿ ಕೋಲೆ ಅಜ್ಞಾನ ಕತ್ತಲೆಯ ಬೆದರಿಸಿ ಬರುವಾಗಹೀನ ಬುಧ್ಯರು ಮೋರೆ ತೆಗೆದಾರು ಕೋಲೆ 23ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲನಿರ್ಮಳಾತ್ಮಕರು ಸಚಿವರು ಕೋಲೆನಿರ್ಮಳಾತ್ಮಕರು ಸಚಿವರು ಪರಿವಾರಧರ್ಮಶೀಲರು ವಿರತರು ಕೋಲೆ 24ಎತ್ತ ನೋಡಲಿ ನವಭಕ್ತಿರತ್ನದ ಬೆಳಗುಚಿತ್ರ ಮಂಟಪಕೆ ಎಣಿಕಿಲ್ಲ ಕೋಲೆಚಿತ್ರ ಮಂಟಪಕೆ ಎಣಿಕಿಲ್ಲ ಶಂಖಚಕ್ರಒತ್ತಿಡಿದವು ಭಿತ್ತಿಲಿ ಕೋಲೆ 25ಬ್ರಹ್ಮಸೂತ್ರದ ವಜ್ರಕಂಬದಿ ಕುಳಿತಿಹಬ್ರಹ್ಮಜÕಪರಮ ಹಂಸವು ಕೋಲೆಬ್ರಹ್ಮಜÕ ಪರಮಹಂಸವು ಪುಣ್ಯಶ್ಲೋಕಧರ್ಮಜÕರಾಯ ಗಿಳಿವಿಂಡು ಕೋಲೆ 26ಮ್ಯಾಗೆ ಮ್ಯಾಗೊಪ್ಪುವ ಸದ್ಗ್ರಂಥದುಪ್ಪರಿಗೇಲಿಕೂಗುವ ಸಾಮಕೋಗಿಲೆ ಕೋಲೆಕೂಗುವ ಸಾಮಕೋಗಿಲೆ ನವಿಲ್ಗಳುನಾಗಪಾಲಕಗೆ ಅತಿಪ್ರೀತಿ ಕೋಲೆ 27ಕಡುಭಕ್ತಿಪತಾಕೆ ಹರಿನಿಷ್ಠೆ ಕಳಸವುಕೊಡುವಅಭಯಛತ್ರ ಸಾಲ್ಗಳು ಕೋಲೆಕೊಡುವಅಭಯಛತ್ರ ಸಾಲ್ಗಳು ಶ್ರೀ ತುಲಸಿನಡುವೆ ಪ್ರಣತ ತೋರಣಗಳು ಕೋಲೆ 28ತಪವೆಂಬ ತಪಿತದರ ಮೈಸಿರಿಯನೃಪಜಯರಾಯನೆಸೆದನು ಕೋಲೆನೃಪಜಯರಾಯನೆಸೆದಾ ಸಿಂಹಾಸನದಿಶಶಿತೇಜದಂತೆ ಹೊಳೆದನು ಕೋಲೆ29ಆನೆಗಳೆಣಿಕಿಲ್ಲ ಕುದುರೆಯ ಗಣನ್ಯಿಲ್ಲಕಾಲಾಳು ರಥಕೆ ಮಿತಿಯಿಲ್ಲ ಕೋಲೆಕಾಲಾಳು ರಥಕೆ ಮಿತಿಯಿಲ್ಲ ಅನ್ಯೋಕ್ತಿಜಾಣೆ ದಾಸೇರಿಗೆ ಕಡೆಯಿಲ್ಲ ಕೋಲೆ 30ಕುವಿದ್ಯಾರಣ್ಯವ ಸವರಿ ಬೇಟ್ಯಾಡಿದಕೋವಿದನಮ್ಮ ಹಡೆದಪ್ಪ ಕೋಲೆಕೋವಿದನಮ್ಮ ಹಡೆದಪ್ಪ ರಚಿಸಿದದೇವವನಗಳ ವರ್ಣಿಪೆ ಕೋಲೆ 31ತತ್ವಪ್ರಕಾಶದ್ದಾಳಿಂಬೆ ಸುಧಾರಸಬಿತ್ತಿದ ಕಬ್ಬಮೋಘ ಮಾವು ಕೋಲೆಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆಉತ್ತತ್ತಿ ತೆಂಗು ಹಲಸನ್ನು ಕೋಲೆ 32ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದಸುತ್ತಿದ ಬಳ್ಳಿಮಂಟಪ ಕೋಲೆಸುತ್ತಿದ ಬಳ್ಳಿಮಂಟಪದಿ ಶುದ್ಧಮತ್ಯೌನ ಕೂಡಪ್ಪ ನಲಿದನು ಕೋಲೆ 33ದೇಶ ದೇಶದೊಳಿದ್ದದುರ್ವಾದಿಪೋಕರಘಾಸಿಸಿ ಜಯಪತ್ರ ದ್ರವ್ಯವ ಕೋಲೆಘಾಸಿಸಿ ಜಯಪತ್ರ ದ್ರವ್ಯವ ತಂದು ಮಧ್ವೇಶಗರ್ಪಿಸಿದ ಮುದದಿಂದ ಕೋಲೆ 34ಬಂಧು ಸುದರ್ಶನರಾಯರ ಒಡಗೂಡಿಮಂದಿರದೊಳಗಾನಂದಿಪ ಕೋಲೆಮಂದಿರದೊಳಗಾನಂದಿಪ ಶ್ರುತವೇಷತಂದೆಯನೇನ ಹೊಗಳುವೆ ಕೋಲೆ 35ಇಪ್ಪತ್ತೈದು ತತ್ವ ನಾಣ್ಯದಿ ರಾಮನಾಮಸುಪ್ಪಾಣಿಮುದ್ರೆ ನಡೆಸುವ ಕೋಲೆಸುಪ್ಪಾಣಿಮುದ್ರೆ ನಡೆಸುವ ತನ್ನವರಿಗೆತಪ್ತ ಮುದ್ರೆ ಕುರುಹಿಟ್ಟನು ಕೋಲೆ 36ಭೇದಿಸಿ ನೋಡಿರೊ ಭೇದವ ತಿಳಿಯಿರೊಮಾಧವಜೀವ ಜಡರೊಳು ಕೋಲೆಮಾಧವಜೀವ ಜಡರೊಳು ಎನುತಲಿಬೋಧಿಸಿದನು ಹಿತಮಾರ್ಗ ಕೋಲೆ 37ತನ್ನ ಹೊಂದಿದರಿಗೆ ಪ್ರೌಢವೃತ್ತಿಯನು ಶ್ರೀಮನ್ನಾಮಾಮೃತವನುಣಿಸುವ ಕೋಲೆ ಶ್ರೀಮನ್ನಾಮಾಮೃತವನುಣಿಸುವ ಹೊರೆವನುಉನ್ನತ ಮಹಿಮ ಜಯರಾಯ ಕೋಲೆ 38ಆವಾಗಸೂತ್ರಾರ್ಥ ನಿಸ್ಸಾಳ ವ್ಯಾಖ್ಯಾನತೀವಿದ ಶ್ರುತಿಯ ಕಹಳೆಯು ಕೋಲೆತೀವಿದ ಶ್ರುತಿಯ ಕಹಳೆ ಧ್ವನಿಯುಂಟುಶ್ರೀವ್ಯಾಸ ರಾಮಾರ್ಚನೆಯುಂಟು ಕೋಲೆ 39ಅಚ್ಚ ಸಾತ್ವಿಕನಾದ ರಾಜಾಧಿರಾಜನಹೆಚ್ಚಿನಸತಿಶುದ್ಧಮತಿಯಮ್ಮ ಕೋಲೆಹೆಚ್ಚಿನಸತಿಶುದ್ಧ ಮತಿಯಮ್ಮ ನಮ್ಮಮ್ಮನಿಚ್ಚನಮ್ಮನು ಹೊರೆವಳು40ತಾಯಿ ತಂದೇರ ಹಾಡಿ ದಣಿಯದು ನಮ್ಮ ಮನಭಯವು ಅದರಲ್ಲಿರುವುದು ಕೋಲೆಭಯವು ಅದರಲ್ಲಿರುವುದು ಶುಭಗುಣಬಾಯಿ ಮಾತಿಗೆ ತೀರವು ಕೋಲೆ 41ಬಂದೆವು ಬೀಗರ ಮನೆಗಿಂದೆ ಮುಯ್ಯವತಂದೇವು ಬಾಲೇರೊಡಗೂಡಿ ಕೋಲೆತಂದೇವು ಬಾಲೇರೊಡಗೂಡಿ ಬೀಗರಅಂದವ ಹೇಳಲಳವಲ್ಲ ಕೋಲೆ 42ಬಹುಕಾಲದ್ಹಿರಿಯರು ಬಾಳಿದ ಮನೆಯಿದುವಿವರಿಸಿ ನೋಡಲರಿಯದೆ ಕೋಲೆವಿವರಿಸಿ ನೋಡಲರಿಯದೆ ಕೆಡಿಸಿದರುಧವಳಾರವೆಲ್ಲ ಮಲಿನವು ಕೋಲೆ 43ಬೀಗರಿದ್ದ ಮನೆಯನೆತ್ತೆತ್ತ ನೋಡಲುಬಾಗಿಲು ಬಯಲು ಬರೆಹುಯಿಲು ಕೋಲೆಬಾಗಿಲು ಬಯಲು ಬರೆಹುಯಿಲು ನಮ್ಮವರುಹ್ಯಾಗೆಂತು ಹೆಣ್ಣು ಕೇಳುವರು ಕೋಲೆ 44ಸಂಖ್ಯಾವಿದನೆಂಬಾತ ಮಾವನಾತನ ರಾಣಿಬಿಂಕದ ಬೌದ್ಧದೇವ್ಯತ್ತಿ ಕೋಲೆಬಿಂಕದ ಬೌದ್ಧದೇವ್ಯತ್ತಿ ಭಾಟ್ಟ ನಿ:ಶಂಕ ಚಾರ್ವಾಕಭಾವಮೈದುನರು ಕೋಲೆ45ಮಿಥ್ಯನಮ್ಮತ್ತಿಗೆಮಾಯೆನಮ್ಮ ನಾದಿನಿಸುತ್ತಿನ ಬಳಗಕೆಣಿಕಿಲ್ಲ ಕೋಲೆಸುತ್ತಿನ ಬಳಗಕೆಣಿಕಿಲ್ಲ ಕೆಣಕಿದರೆಮತ್ತೇನಾದರು ಹುರುಳಿಲ್ಲ ಕೋಲೆ 46ಇಪ್ಪತ್ತೊಂದು ಮಂದಿ ಹೆಸರಾದವರ ಕೂಡಬಹುಕಾಲ ಕಜ್ಜವು ನಮಗುಂಟು ಕೋಲೆಬಹುಕಾಲ ಕಜ್ಜವು ನಮಗುಂಟು ಹಾಲಿಗೆಹೆಪ್ಪನೆರೆದಂತೆ ಹಿತಮಾತು ಕೋಲೆ 47ಅಂಗಳದೊಳು ಬಂದು ತಿಳಿದೇವು ಅತ್ತಿಗೇರಶೃಂಗಾರಗರತಿ ಸಿರಿಯನು ಕೋಲೆಶೃಂಗಾರಗರತಿ ಸಿರಿಯನು ಕಾಣುತಹಿಂಗದೆ ನಿಂತು ನುಡಿಬೇಕು ಕೋಲೆ 48ತಂಗಳೆಂಜಲು ಎಂಬೊ ಅಂಜಿಕೆ ತಮಗಿಲ್ಲಮಂಗಳಧಾತು ಕಾಣೆವು ಕೋಲೆಮಂಗಳಧಾತು ಕಾಣೆವು ಅತ್ತಿಗೇರುತಿಂಗಳಸ್ನಾನ ಅರಿಯರು ಕೋಲೆ 49ದಾವಮೂಲೆಲಿ ಬೂದಿ ಮನೆಗಸ ನೋಡಿರೆಭಾವಿ ಅತ್ತೆಯಕೆಲಸವ ಕೋಲೆಭಾವಿ ಅತ್ತೆಯ ಕೆಲಸಕೆ ಮೆಚ್ಚಿದೆವುನಾವೇನುಡುಗೊರೆಯ ಕೊಡಬೇಕು ಕೋಲೆ 50ಮಿಥ್ಯಾವಾದದಲಿ ನಮ್ಮತ್ತಿಗೆ ಬಲುಜಾಣೆಹೆತ್ತವ್ರನೆಲ್ಲ ಹುಸಿಯೆಂದು ಕೋಲೆಹೆತ್ತವ್ರನೆಲ್ಲ ಹುಸಿಯೆಂದು ಶಿವನೊಬ್ಬಸತ್ಯ ತಾನೆಂದು ನುಡಿವಳು ಕೋಲೆ 51ಕಚ್ಚೆ ಹಾಕಿದವರಿಗೆ ವಿಪ್ರರೆಂದ್ಹೆಸರಿಟ್ಟುನಿಚ್ಚಗೆಳತೇರ ಒಡಗೂಡಿ ಕೋಲೆನಿಚ್ಚಗೆಳತೇರ ಒಡಗೂಡಿ ಗೆಳೆತನಹೆಚ್ಚಾಗಿ ನಡೆಸುತಿಹಳು ಕೋಲೆ 52ದೊಡ್ಡಾಕಿ ನಾನೆಂದು ಅಡ್ಡಡ್ಡ ನಡೆವಳುದೊಡ್ಡವರ ಕಂಡರೋಡೋಳು ಕೋಲೆದೊಡ್ಡವರ ಕಂಡರೋಡೋಳು ನಡುಮನೆದೊಡ್ಡಿಗೆ ತಾನು ಹಿರಿಯಳೆ ಕೋಲೆ 53ಮಾಯಿನ ದನಿನೋಡಿ ಮಾವನ ಕಿರಿಮಗಳುಬಾಯಿ ಬಡಕಿಯು ಬಹುಭಾಷಿ ಕೋಲೆಬಾಯಿ ಬಡಕಿಯು ಬಹುಭಾಷಿ ವೆಡ್ಡಗೊಂಡನಾಯಿಯ ತೆರದಿ ಬಲುಕೋಪಿ ಕೋಲೆ 54ತಾಯಿ ತಂದೆಯರಿಗೆ ಗುಣವಂತೆ ಮಗಳೀಕೆನೋಯಿಯ ನುಡಿವಳುಂಡುಟ್ಟು ಕೋಲೆನೋಯಿಯ ನುಡಿವಳುಂಡುಟ್ಟು ಆ ಕ್ಷಣಬಾಯಾರುವಲ್ಲಿ ಬಲ್ಲಿದಳು ಕೋಲೆ 55ಮಹಾತ್ತುಮರ ಮಟಾಮಾಯ ಮಾಡುವ ಶಕ್ತಿಮಹಾಢಾಳಿಕಿಯ ಬಲ್ಲಳು ಕೋಲೆಮಹಾಢಾಳಿಕಿಯ ಬಲ್ಲಳು ಆ ಬುಧರಮಾಯಿ ಅಭದ್ರೆಘನಕ್ಷುದ್ರೆ ಕೋಲೆ56ತನ್ನ ಬದಿಯ ತನ್ನೆರೆಹೊರೆಯವರನುತನ್ನಂತೆ ಮಾಡಿಕೊಂಡಳು ಕೋಲೆತನ್ನಂತೆ ಮಾಡಿಕೊಂಡಳು ಮನದಲಿಉನ್ಮತ್ತವೃತ್ತಿಕಲಿಸೋಳು ಕೋಲೆ57ಪ್ರಸ್ತವ ಮಾಡುವ ಮನೆಯೊಳು ಹೋಗುವಳುಅಸ್ತವ್ಯಸ್ತದಲಿ ಬಲುಬೇಗ ಕೋಲೆಅಸ್ತವ್ಯಸ್ತದಲಿ ಬಲುಬೇಗ ಷಡ್ರಸನ್ನಹಸ್ತಲಾಘವದಿ ಕೆಡಿಸುವಳು ಕೋಲೆ 58ಒಳ್ಳೆ ಶಾಲ್ಯೋದನ ಭಕ್ಷ್ಷ್ಯಭೋಜನದೊಳುಕೊಳ್ಳಿಯಿಕ್ಕಿ ಕೆಡಿಸುವಳು ಕೋಲೆಕೊಳ್ಳಿಯಿಕ್ಕಿ ಕೆಡಿಸುವಳು ಪದಾರ್ಥವನೆಲ್ಲ ಏಕಾಕಾರ ಮಾಡುವಳು ಕೋಲೆ 59ಅತ್ತಿಗೆನಾದಿನೇರ ಗೋಡೆಯ ಮೇಲಿನಚಿತ್ತಾರದ ಗೊಂಬಿ ನೋಡಿರೆ ಕೋಲೆಚಿತ್ತಾರದ ಗೊಂಬಿ ನೋಡಿರೆ ಅಖಂಡಮತ್ತೆ ಭೇದಗಳು ತಿಳಿಯವು ಕೋಲೆ 60ಕಂಬ ಬೋದುಗಳೊಂದೆ ಕೆಳಮೇಲು ಕಟ್ಟು ಒಂದೆಅಂಬುಜಮದ್ದುಗುಣಿಕೊಂದೆ ಕೋಲೆಅಂಬುಜಮದ್ದುಗುಣಿಕೊಂದೆ ತುಲಸಿ ಕದಂಬವು ಎಕ್ಕೆ ಗಿಡವೊಂದೆ ಕೋಲೆ 61ಕಾಗೆ ಕೋಗಿಲೆ ಒಂದೆ ಗೂಗೆ ನವಿಲು ಒಂದೆನಾಗನೀರೊಳ್ಳಿಯ ಹಾವು ಒಂದೆ ಕೋಲೆನಾಗನೀರೊಳ್ಳಿಯ ಹಾವು ಒಂದೆ ಚಿತ್ತರದಾ ಗಿಳಿಹಿಂಡು ತಿಳಿಯವು ಕೋಲೆ 62ಕುದುರೆ ಕತ್ತೆಯ ಬಣ್ಣ ಆನೆ ಹಂದಿಯ ಬಣ್ಣಮದಹುಲಿಗೆ ನಾಯಿ ಬಣ್ಣವು ಕೋಲೆಮದಹುಲಿಗೆ ನಾಯಿ ಬಣ್ಣ ಒರ್ಸಿಟ್ಟಿಹಚದುರೆಯ ಕೈಗೆ ಕಡಗವು ಕೋಲೆ 63ಅತ್ತಿಗೆನಾದಿನೇರ ಚಿತ್ತಾರ ಬಲುಘನಮತ್ತೆ ತೀರದ ಗುಣಗಳು ಕೋಲೆಮತ್ತೆ ತೀರದ ಗುಣಗಳುಭಾವಮೈದುನರೆತ್ತೋಡಿದರು ಸುಳುಹಿಲ್ಲ ಕೋಲೆ 64ಗುರುಗಳ ಭಯವಿಲ್ಲ ಹಿರಿಯರ ಸ್ಮರಣಿಲ್ಲಹರಿಯೆ ತಾವೆಂದು ಬೆರೆತರು ಕೋಲೆಹರಿಯೆ ತಾವೆಂದು ಬೆರೆತರು ದಿಂಡೇರಿಗೊರೆವರು ತಮ್ಮ ಬುದ್ಧಿಯ ಕೋಲೆ 65ಲಗಳಿಯ ಕೋಣಗೆ ಲಘ್ವಾದ ಕೆಲಸೆತ್ತಜಗದೀಶನೆತ್ತ ತಾವೆತ್ತ ಕೋಲೆಜಗದೀಶನೆತ್ತ ತಾವೆತ್ತ ಭಾವರನಗೆಗೇಡು ನೋಡಿ ನಗುತೇವೆ ಕೋಲೆ 66ಹೆಗಲ ಕಾವಡಿಯವಗೆ ಹಗಲು ದೀವಟಿಗೇಕೆಮಿಗಿಲಾದ ಬಿರುದು ತಮಗೇಕೆ ಕೋಲೆಮಿಗಿಲಾದ ಬಿರುದು ತಮಗೇಕೆ ಮೈದುನರಮೊಗ ನೋಡಿದರೆ ಹೊಗೆಗೆಂಡ ಕೋಲೆ 67ಪಂಚದೇವನ ಪೂಜೆ ಮಾಡುವರೊಂದಾಗಿಹಿಂಚು ಮುಂಚುಗಳ ಅರಿಯರು ಕೋಲೆಹಿಂಚು ಮುಂಚುಗಳ ಅರಿಯರು ಬರಿದೆ ಪ್ರಪಂಚವ ಬಿಟ್ಟೆವೆನಿಸುವರು ಕೋಲೆ 68ಹಿಂಡುಬಾಂಧವರು ತಮ್ಮೊಳು ತಾವೆ ಕೊಂಡಾಡಿಮಂಡಿಕೆಸೂತ್ರಹರಕೊಂಡು ಕೋಲೆಮಂಡಿಕೆಸೂತ್ರಹರಕೊಂಡು ಕೊಂಡಾಡಿಮಂಡೆಯ ಬಿಟ್ಟು ತಿರುಗೋರು ಕೋಲೆ 69ಇವರ ಲೆಕ್ಕದೊಳಗೆ ಹರಿಶಿವನೊಬ್ಬನೆರವಿಗಣನಾಥನೊಬ್ಬನೆ ಕೋಲೆರವಿಗಣನಾಥನೊಬ್ಬನೆ ಎಲ್ಲೆಲ್ಲಿದಿವಿ ದೇವರೊಳಗೆ ಬೇರಿಲ್ಲ ಕೋಲೆ 70ವಿಧಿನಿಷಿದ್ಧಗಳಿಲ್ಲಪೋಕಮತದೊಳುಉದರ ತುಂಬಿದರೆ ಸಮದೃಷ್ಟಿ ಕೋಲೆಉದರ ತುಂಬಿದರೆ ಸಮದೃಷ್ಟಿ ಹರಿವ್ರತಮೊದಲಿಗಿಂದಿಗೆ ಸೊಗಸವು ಕೋಲೆ 71ಬದನೆ ನುಗ್ಗೆಯ ಕಾಯಿ ಸಲೆ ತೊಂಡೆ ತುಪ್ಹೀರೆಮೃದು ಮೂಲಂಗಿ ಗಜ್ಜರಿಗಳು ಕೋಲೆಮೃದು ಮೂಲಂಗಿ ಗಜ್ಜರಿಗಳು ಇವರಿಗೆಮುದದೂಟ ಆತ್ಮಾರಾಮನ ತೃಪ್ತಿ ಕೋಲೆ 72ಬಸಳೆ ಸಬ್ಬಸೆ ಸೊಪ್ಪು ಹುಳಿ ಚುಕ್ಕದ ಗೂಡೆಹಸನಾದ ಪುಂಡಿ ಬಲುಪ್ರೀತಿ ಕೋಲೆಹಸನಾದ ಪುಂಡಿ ಬಲುಪ್ರೀತಿಹಸಿವಿಗೆ ದೊರೆಯ ಪರಲೋಕ ಕೋಲೆ 73ಮಡಿ ಮೈಲಿಗೆಯು ಒಂದೆ ಸ್ನಾನಪಾನಗಳೊಂದೆಹುಡುಗ ಹಿರಿಯರ ಬಳಿಕೊಂದೆ ಕೋಲೆಹುಡುಗ ಹಿರಿಯರ ಬಳಿಕೊಂದೆನುಡಿಬೇರೆ ಪೋಕರ ನಡೆಬೇರೆ ಕೋಲೆ 74ನಮ್ಮ ನಗೆಯೊಳಗೆ ಉನ್ನತ ಸುಖವುಂಟುರಮ್ಮೆಯ ರಮಣ ಕರುಣಿಪ ಕೋಲೆರಮ್ಮೆಯ ರಮಣ ಕರುಣಿಪ ಒಡಲ್ಹೊಕ್ಕುನಮ್ಮವರಾಗಿ ಸುಖಿಯಾಗಿ ಕೋಲೆ 75ನಿಮ್ಮ ಹಿರಿಯರೆಲ್ಲ ನಮ್ಮ ಮನೆಯ ಹೊಕ್ಕುಧರ್ಮಾರ್ಥ ಸೂರೆಗೊಂಡರು ಕೋಲೆಧರ್ಮಾರ್ಥ ಸೂರೆಗೊಂಡರು ಜಗವರಿಯೆನಿರ್ಮಳರಾಗಿ ಸುಖಿಯಾಗಿ 76ಮಾವನೊಳಗೆ ನಮ್ಮ ನಗೆಯಿಲ್ಲ ಬೌದ್ಧದೇವೀರ ಕೂಡ ಸರಸಿಲ್ಲ ಕೋಲೆದೇವೀರ ಕೂಡ ಸರಸಿಲ್ಲ ಹಿರಿಯರುತಾವವರ ಗೆದ್ದು ನಗುವರು ಕೋಲೆ 77ನಿಪುಣೆಂದೆನಿಸುವಿರಿ ಚಪಳೆರೆಂದೆನಿಸುವಿರಿಅಪರಾತ್ರೆ ಆಯಿತು ಬಂದೀಗ ಕೋಲೆಅಪರಾತ್ರೆ ಆಯಿತು ಬಂದೀಗ ನಮಗಿನ್ನುಉಪಚಾರವುಂಟೊ ಗತಿಯಿಲ್ಲೊ ಕೋಲೆ 78ಮೋರೆ ತೋರದಿದ್ದರೆ ಮನೆಯೊಳಗಿರಿ ನೀವುಜಾರುತೇವೆ ನಮ್ಮ ಮನೆಗೀಗೆ ಕೋಲೆಜಾರುತೇವೆ ನಮ್ಮ ಮನೆಗೀಗೆ ಬೀದಿಲಿತೂರುತೇವೆ ನಿಮ್ಮ ಕರುಳನು ಕೋಲೆ 79ಈಪರಿನಾರೇರ ಹಿತವಾದ ನಗೆಗಳಕೋಪವ ಬಿಟ್ಟು ಕೇಳುತ ಕೋಲೆಕೋಪವ ಬಿಟ್ಟು ಕೇಳುತ ಬಂದು ಸವಿi್ಞಪಕ ಕೈಯವಿಡಿದರು ಕೋಲೆ 80ರತ್ನಗಂಬಳಿ ಹಾಸಿ ಒಳ್ಳೇರ ಮಕ್ಕಳೆಂದುಉತ್ತಮಗುಣವ ಕೊಂಡಾಡಿ ಕೋಲೆಉತ್ತಮ ಗುಣವ ಕೊಂಡಾಡಿ ಕುಳ್ಳಿರಿಸಿಚಿತ್ತಕೆ ಸುಖವ ಕೊಟ್ಟರು ಕೋಲೆ 81ಶ್ರೀಕಾಂತನರಮನೆಯ ಹೊಂದಿದವರು ನೀವುಏಕಾಂತ ಭಕ್ತಿ ಬಲ್ಲವರು ಕೋಲೆಏಕಾಂತ ಭಕ್ತಿ ಬಲ್ಲವರು ನಮ್ಮ ನೀವೆ ಕೂಡಿಕೊಳ್ಳಿ ದೂರ್ಯಾಕೆ ಕೋಲೆ 82ಸುಖದೂಟಸವಿಯನು ಅರಿಯದೆ ಕೆಟ್ಟೆವುಸುಖತೀರ್ಥಗುರುವು ನಮಗಾಗಿ ಕೋಲೆಸುಖತೀರ್ಥಗುರುವು ನಮಗಾಗಿ ಪರಲೋಕಸುಖ ಸೂರೆಗೊಂಡು ಬದುಕೇವು ಕೋಲೆ 83ಐದು ಭೇದವನರಿತು ನಡೆದೇವು ನಾವಿಪ್ಪತ್ತೈದು ತತ್ವಗಳ ತಿಳಿದೇವು ಕೋಲೆ ಇಪ್ಪತ್ತೈದು ತತ್ವಗಳ ತಿಳಿದೇವು ಮೇಲೆ ಮತ್ತೈದು ಮುಕ್ತಿಯ ಪಡೆದೇವು ಕೋಲೆ 84ಮುದ್ರೆ ಇಲ್ಲದ ನಾಣ್ಯ ಶುದ್ಧಲ್ಲ ಜಗದೊಳುಮುದ್ರಾಂಕರಾಗಿ ಬದುಕೇವು ಕೋಲೆಮುದ್ರಾಂಕರಾಗಿ ಬದುಕೇವು ಮಲೆತವರಗೆದ್ದೇವು ವಾಕ್ಯ ಬಲದಲ್ಲಿ ಕೋಲೆ 85ಇಂತೆಂಬ ನುಡಿಗೇಳಿ ಅಪಾರಾನಂದದಲ್ಲಿಕಾಂತೆಯರೆಲ್ಲ ಒಂದಾಗಿ ಕೋಲೆಕಾಂತೆಯರೆಲ್ಲ ಒಂದಾಗಿ ಮನದಿ ವಿಶ್ರಾಂತರಾದರು ತಮತಮಗೆ ಕೋಲೆ 86ಗುರುಭಕ್ತಿ ಅರಿಷಿಣ ಹರಿಭಕ್ತಿ ಕುಂಕುಮಪರಮಾರ್ಥ ಜ್ಞಾನಾಂಜನವನು ಕೋಲೆಪರಮಾರ್ಥ ಜ್ಞಾನಾಂಜನವನು ಇಟ್ಟರುಹರಿನಿರ್ಮಾಲ್ಯದ ಪುಷ್ಪ ಮುಡಿದರು ಕೋಲೆ 87ಸಸ್ಯ ಸಾರಾವಳಿಯ ಸೀರೆಯ ತೆಗೆದರುಅತ್ತಿಗೆಯವರ ಮನಮೆಚ್ಚು ಕೋಲೆಅತ್ತಿಗೆಯವರ ಮನಮೆಚ್ಚಿನುಡುಗೊರೆಅರ್ಥಿಲಿ ಕೊಟ್ಟು ನಲಿದರು ಕೋಲೆ 88ಮಾಧವಪ್ರತಿಷ್ಠಾನ ಪೇಟೆಯೊಳುದಿಸಿದಮಾದಳದ ಹಣ್ಣು ಬಣ್ಣದ ಕೋಲೆಮಾದಳದ ಹಣ್ಣು ಬಣ್ಣದ ಸೀರೆಯನಾದಿನಿ ಜಾಣೆಗಿತ್ತರು ಕೋಲೆ 89ಅಚ್ಚ ಬಂಗಾರದ ಶಂಖಚಕ್ರಂಗಳಅಚ್ಚನೆತ್ತಿದ ನಯವಾದ ಕೋಲೆಅಚ್ಚನೆತ್ತಿದ ನಯವಾದ ಬೇರೆ ಬೇರೆಹಚ್ಚಡಗಳು ಬಾವರಿಗಿತ್ತು ಕೋಲೆ 90ಭೇದ ಭೇದದ ಬಣ್ಣ ಬಗೆ ಬಗೆ ಚಿತ್ರದನಾದ ಸಮುದ್ರದ ಪೇಟೆಯ ಕೋಲೆನಾದ ಸಮುದ್ರದ ಪೇಟೆಯ ವಲ್ಲಿಗಳುಮೈದುನ ಜಾಣರುಡುಗೊರೆ ಕೋಲೆ 91ಹಿರಿಯ ಕಿರಿಯರ ನೋಡಿ ಮಾನ್ಯಾಮಾನ್ಯನ ನೋಡಿತರತಮ ಭಾವದುಪಚಾರ ಕೋಲೆತರತಮ ಭಾವದುಪಚಾರ ಮಾಡಿದರುಹರಿಗುರು ಮೆಚ್ಚಿ ನಲಿವಂತೆ ಕೋಲೆ 92ಈ ಪರಿಯಲಿವರ ಮನಮುಟ್ಟಿ ಮನ್ನಿಸಿಸುಗಂಧ ಪರಿಮಳ ದ್ರವ್ಯವ ಕೋಲೆಸುಗಂಧ ಪರಿಮಳ ದ್ರವ್ಯವ ಚೆಲ್ಲಾಡಿಶ್ರೀಪತಿಗವರರ್ಪಿಸಿ ಮುದದಿಂದ ಕೋಲೆ 93ಪರಸ ಮುಟ್ಟಿದ ಮೇಲೆ ಲೋಹ ಚಿನ್ನಾಗದೆಸುರನದಿಮುಟ್ಟಿ ಸಗರರ ಕೋಲೆಸುರನದಿಮುಟ್ಟಿ ಸಗರರುದ್ಧಾರಾದಂತೆಕರಗಿತುಅವರಮನಮೈಲಿಗೆ94ಶುಭಭರಿತಾದ ತಾಂಬೂಲ ಕೈಕೊಂಡುಶುಭವಾಕ್ಯ ನುಡಿದು ನಡೆವಾಗ ಕೋಲೆಶುಭವಾಕ್ಯ ನುಡಿದು ನಡೆವಾಗ ಬೀಗರುಅಬಲೇರಿಗೆ ಕೈಯ ಮುಗಿದರು ಕೋಲೆ 95ನಾಳೆ ನಿಮ್ಮಾಜÕ ಬರೆ ಮುಯ್ಯ ತರುವೆಆಳವಾಡದಿರಮ್ಮ ನಮ್ಮನು ಕೋಲೆಆಳವಾಡದಿರಮ್ಮ ನಮ್ಮನು ನೀವೀಗಏಳಿಲ ಮಾಡದಿರಿ ಕಂಡ್ಯಾ ಕೋಲೆ &ಟಿ;, bsಠಿ; 96ಹೀಗೆಂದ ಮಾತಿಗೆ ನುಡಿದರು ಹರಿಹರಿಭಾಗವತರೆಲ್ಲ ಧರೆಯೊಳು ಕೋಲೆಭಾಗವತರೆಲ್ಲ ಧರೆಯೊಳು ನಮ್ಮವರುಶ್ರೀಗಂಧ ಕರ್ಪೂರಕೆ ಮೈತ್ರವು 97ಅಪ್ಪ ಜಯತೀರ್ಥಗೆ ಹೆತ್ತವ್ವ ಶುದ್ಧಮತಿಗೆಒಪ್ಪುವ ಬಂಧು ಬಳಗಕೆ ಕೋಲೆಒಪ್ಪುವ ಬಂಧು ಬಳಗಕೆ ನಿಮ್ಮಗುಣಒಪ್ಪಣೆ ಹೇಳೇವು ಕೋಲೆ ಗನೀವು ಬಂದಾಕ್ಷಣ ಶ್ರೀವ್ಯಾಸರಾಯರನೈವೇದ್ಯ ತೀರ್ಥವು ಲಭ್ಯವು ಕೋಲೆನೈವೇದ್ಯ ತೀರ್ಥವು ಲಭ್ಯವು ನಮ್ಮಪ್ಪನಾವ ಪರಿಯಲಿ ಒಲಿಸೇವು ಕೋಲೆ 9ಮೆಲ್ಲನೆ ಹೊರವಂಟು ಫುಲ್ಲಭವ ಕೀರ್ತಿಸೊಲ್ಲುಸೊಲ್ಲಿಗೆ ಉಗ್ಗಡಿಸುತ ಕೋಲೆಸೊಲ್ಲುಸೊಲ್ಲಿಗೆ ಉಗ್ಗಡಿಸುತ ಹಾರುವಾಗಕ್ಷುಲ್ಲರ ಮನಕೆ ದಣಿವಾಯ್ತು ಕೋಲೆ 100ಮನೆ ಮುಟ್ಟಿ ಬಂದರು ಗುರುಪಾದ ಕಂಡರುಜನನಿಗೆ ಕೈಯ ಮುಗಿದರು ಕೋಲೆಜನನಿಗೆ ಕೈಯ ಮುಗಿದರುಕೈವಲ್ಯಕ್ಕನುಮಾನವಿಲ್ಲದೆ ನಡೆವರು ಕೋಲೆ 101ಧರೆಯ ಸಜ್ಜನರಿಗೆ ಸಕ್ಕರೆ ಸವಿಗಿಂತಉರೆ ಕಾಯ್ದ ಹಾಲ ಕೆನೆಗಿಂತ ಕೋಲೆಉರೆ ಕಾಯ್ದ ಹಾಲ ಕೆನೆಗಿಂತ ಸವಿಯುಂಟುಗುರುಭಕ್ತಿ ಉಂಟು ಪರವುಂಟು ಕೋಲೆ 102ಅಲ್ಪ ಕನ್ನಡದ ನುಡಿಯೆನ್ನಲಾಗದುಫಣಿತಲ್ಪನ ಪ್ರಿಯಗುರುಮಹಿಮೆ ಕೋಲೆಫಣಿತಲ್ಪನ ಪ್ರಿಯಗುರುಮಹಿಮೆ ನೋಡುವುದುತಪ್ಪನಾರಿಸದೆ ಶಿಷ್ಟರು ಕೋಲೆ 103ಜನ್ಮ ಜನ್ಮ ಬ್ರಹ್ಮ ವಾಯೂರೆ ಗುರುಗಳುರಮ್ಮೆಯ ರಮಣ ಮನೆದೈವ ಕೋಲೆರಮ್ಮೆಯ ರಮಣ ಮನೆದೈವವಾಗಲಿಶ್ರೀಮಧ್ವಾಚಾರ್ಯರು ಕೋಲೆ 104ಪ್ರಸನ್ನವೆಂಕಟಪತಿ ನಾಮದುಚ್ಚಾರಣೇಲಿಅಶುಭಕೋಟಿಗಳು ಉಳುಹಿಲ್ಲ ಕೋಲೆಅಶುಭ ಕೋಟಿಗಳು ಉಳುಹಿಲ್ಲ ಶುಭಮಸ್ತುಕುಶಲಾಯುರಾರೋಗ್ಯವಾಹುದು ಕೋಲೆ 105
--------------
ಪ್ರಸನ್ನವೆಂಕಟದಾಸರು
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು
ಮತ್ತವನಲ್ಲೊ ಮುರಾರಿ ನಿನಗೆ ನಾಮತ್ತವನಲ್ಲೊ ಮುರಾರಿ ನಿನ್ನಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿಗೆತ್ತಣ ಸ್ವಾತಂತ್ರ್ಯ ಸಲಹಯ್ಯಶೌರಿಪ.ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟನುಂಗುವ ಮತ್ತವನಲ್ಲೊರಂಗಾ ನಿನ್ನ ಮರೆದಂಗನೆಯರನಾಲಂಗಿಸಿ ಮತ್ತವನಲ್ಲೊರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆರಂಗದೆ ಮತ್ತವನಲ್ಲೊರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾಜಂಗಳನುಡುಗುವ ಬಡವ ನಾನಲ್ಲದೆ 1ನಾಥನೆ ನಾನೆಂದು ಮಾತು ಕಲಿತುಖಳವ್ರಾತಸಂಗದಿ ಮತ್ತವನಲ್ಲೊನಾಥ ನಿನ್ನ ಮೀರಿದಾತನುಂಟೆಂದು ನಿರ್ಭೀತಿಲಿ ಮತ್ತವನಲ್ಲೊನಾಥ ನಿನ್ನ ಗುಣಖ್ಯಾತಿ ಹೊಗಳದನ್ಯಸ್ತೌತ್ಯದಿ ಮತ್ತವನಲ್ಲೊನಾಥ ನಿನ್ನಡಿಯ ತೀರಥವೆ ಗತಿಯೆಂದುಯಾತನೆಗಂಜುವ ಬೆದರುಗುಳಿಯಲ್ಲದೆ 2ತಂದೆ ನೀ ಮಾರಿದರೊಂದೊಪ್ಪು ಕೊಂದರೊಪ್ಪೆಂದಿಗೆ ಮತ್ತವನಲ್ಲೊತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿಬಂಧಿಸು ಮತ್ತವನಲ್ಲೊತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿತಂದಿಡು ಮತ್ತವನಲ್ಲೊತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹುದೆಂದ ಸೊಕ್ಕೊಂದುಳ್ಳವನಲ್ಲದೆ 3
--------------
ಪ್ರಸನ್ನವೆಂಕಟದಾಸರು
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು
ಮನವ ಶೋಧಿಸಬೇಕುನಿಚ್ಚ - ದಿನ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ದಿನದಿ ಮಾಡುವ ಪಾಪ ಪುಣ್ಯದ ವೆಚ್ಚ ಪಧರ್ಮ ಅಧರ್ಮ ವಿಂಗಡಿಸಿ - ದು - |ಷ್ಕರ್ಮಕೆ ಏರಿದ ಬೇರ ಕತ್ತರಿಸಿ ||ನಿರ್ಮಲಾಚಾರದಿ ಚರಿಸಿ -ಪರ - |ಬೊಮ್ಮಮೂರುತಿ ಪಾದಕಮಲವ ಭಜಿಸಿ1ತನುವ ದಂಡಿಸಿ ಒಮ್ಮೆ ಮಾಣೊ - ನಿನ್ನ - |ಮನವ ಶೋಧಿಸಿ ಪರಮಾತ್ಮನ ಕಾಣೊ ||ನೀನು ನಿನ್ನೊಳಗೆ ಜಾಣನೊ - ಮುಕುತಿ - |ಯೇನೂ ದೂರಿಲ್ಲವೊ ಒಂದೇ ಗೇಣೊ 2ಆತನ ಭಕ್ತರಿಗೆ ಕೇಡಿಲ್ಲ - ಅವ - |ಪಾತಕ - ಪತಿತಸಂಗವ ಮಾಡ ಸಲ್ಲ ||ನೀತಿವಂತರು ಕೇಳಿರೆಲ್ಲ - ನಮ -|ಗೀತನೆ ಗತಿಯೀವ ಪುರಂದರವಿಠಲ 3
--------------
ಪುರಂದರದಾಸರು
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು