ಒಟ್ಟು 16362 ಕಡೆಗಳಲ್ಲಿ , 134 ದಾಸರು , 7361 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಕ್ಕ ನಿನ್ನ ನಡತೆ ನೋಡೋಮುಕ್ಕ ನಿನ್ನ ನಡತೆ ನೋಡೋತಕ್ಕ ಯಮನ ಶಿಕ್ಷೆಯಿಹುದುಸೊಕ್ಕ ಬೇಡವೋ ಮುಂದೆ ದುಃಖಗಳಿಸಿಹರೊಕ್ಕ ಕಕ್ಕಸಬಡುವೆಯೋ ಕಾಸದು ಹೋದರೆದಕ್ಕಿಸಿಕೊಂಬೆಯಾ ಎಲೆ ಹುಚ್ಚು ಮೂಳಪಗುರುಹಿರಿಯರ ನಿಂದೆ ಮಾಡಿಅವರಚರಣಸ್ಥಳವ ಜರೆದಾಡಿ ದುಷ್ಟದುರುಳರ ಜೋಡುಗೂಡಿ ನೀನುಬರಿದೆ ಆಯುಷ್ಯ ಕಳೆದೆ ಓಡಾಡಿ ಎಲೆಖೋಡಿಭರಭರದಿಂದಿಳಿವರು ಕಾಲನ ದೂತರುಕೊರಳನೆ ಕಡಿವರು ಎಲೆ ಹುಚ್ಚು ಮೂಳ1ನಿನ್ನನು ನೀನೇ ನೋಡಿಕೊಂಬೆ ನಾನುಚೆನ್ನಾಗಿ ಇಹೆನು ಎಂದೆಂಬೆ ಹುಚ್ಚುಕುನ್ನಿಯಂತೆ ಓಡಾಡಿ ಒದರಿಕೊಂಬೆಜಾರಕನ್ನೆಯರ ಜೋಡುಗೊಂಬೆ ನಾಕಾಣೆನೆಂಬೆಇನ್ನೇನು ಹೇಳಲಿ ಕಾಲನ ದೂತರುಬೆನ್ನಲಿ ಸುಳಿವರು ಎಲೆ ಹುಚ್ಚು ಮೂಳ2ಹೆಂಡತಿ ನೋಡಿ ಹಲ್ಲು ತೆರೆವೆ ಆಕೆಯಗೊಂಡೆ ಚವುರಿ ನೋಡಿ ಬೆರೆವೆಕಂಡ ಕಂಡ ವಿಷಯಕ್ಕೆ ಮನವೊಲಿದೆ ಅಂಟಿಕೊಂಡಿವೆ ಅಜ್ಞಾನ ಮರೆವೆಚಂಡ ಯಮದೂತರುಚಂಡಿಕೆಹಿಡಿದುಮಂಡೆಗೆ ಒದೆವರು ಎಲೆ ಹುಚ್ಚು ಮೂಳ3ಬಾಲೆಯ ಸುತರ ನಂಬುವೆಯೋ ಕೊಪ್ಪವಾಲೆಗಳ ಮಾಡಿಸಿ ಇಡುವ ಯಮನಾಳುಗಳು ಕೈ ಬಿಡುವರೇನೋ ನಿನ್ನಬಾಳು ವ್ಯರ್ಥವಾಯಿತು ಬಿಡಿಪರಿಲ್ಲವೋಸೀಳುವೆನೆನುತಲಿಕಾಲದೂತರುಕಾಲ್ಹಿಡಿದೆಳೆವರೋ ಎಲೆ ಹುಚ್ಚು ಮೂಳ4ಇನ್ನಾದರೂ ಜ್ಞಾನವ ತಿಳಿಯೋಚೆನ್ನಾಗಿ ಧ್ಯಾನದಿ ಬಲಿಯೋ ಕಂಡುನಿನ್ನೊಳು ಥಳಥಳ ಹೊಳೆಯೋನಿನ್ನ ಜನ್ಮ ಜನ್ಮವೆಲ್ಲ ಕಳೆಯೋಬ್ರಹ್ಮನಾಗಿ ಬೆಳೆಯೋರತ್ನದೊಳಗೆ ರತ್ನ ಬೆಳಗಿದಂತೆಚೆನ್ನ ಚಿದಾನಂದ ನೀ ನಿತ್ಯನಾಗೋ5
--------------
ಚಿದಾನಂದ ಅವಧೂತರು
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಕ್ತನಾಗುವೆನಿತ್ಯಮುಕ್ತನಾಗುವೆಭಕ್ತಿಯಿಟ್ಟು ಗುರುವಿನಲ್ಲಿ ಭಜಿಸಿ ಬಗಳೆ ನೀನೆಯಾಗಿಪಮುರುಕಿ ಮೂಳಿಯರ ಜೊಲ್ಲು ಮಧುವೆಂದು ಸವಿದಂತೆಹಿರಿಯರಂಘ್ರಿ ತೀರ್ಥವನು ಕುಡಿದು ತೃಪ್ತನಾಗೋ ನೀನು1ಏಣಲೋಚನೆಯನ್ನು ನೀನು ಬಿಡದೆ ಬಿಡದೆ ನೋಡಿದಂತೆಜ್ಞಾನಿಗಳ ಮೂರ್ತಿಯನ್ನು ಘಳಿಗೆ ಘಳಿಗೆ ನೀನು ನೋಡೋ2ಕಾಮ ಕೇಳಿಗಾಗಿ ಹಲ್ಲ ಕಿರಿದು ಕಾಲಿಗೆರಗಿದಂತೆಪಾಮರೋದ್ಧಾರನಾದ ಗುರುಪದಕ್ಕೆ ಶರಣು ಹೋಗೋ3ನಾರಿಯಲ್ಲಿ ಲೋಲನಾಗಿ ನೀಚಮಾತು ಕೇಳಿದಂತೆವೀರ ಸಾಧು ತತ್ವವನ್ನು ವಿವರವಾಗಿ ನೀನು ತಿಳಿಯೋ4ಚದುರೆ ಮೇಲೆ ನಿನ್ನ ಚಿತ್ತ ಚದುರದಂತೆ ಇದ್ದ ಹಾಗೆಚಿದಾನಂದ ಬಗಳೆಯಲ್ಲಿ ನೆಲಸೆ ಚೇತನಾತ್ಮ ಶುದ್ಧನಹೆಯೋ5
--------------
ಚಿದಾನಂದ ಅವಧೂತರು
ಮುಖ್ಯ ಪ್ರಾಣನೆ ಕೈಯ ಮುಗಿದು ಬೇಡುವೆನಯ್ಯಭಕ್ತಿಪಾಲಿಸು ಹರಿಯ ಪಾದಬಳಿಯನಿನ್ನ ಮತ ಪೊಂದಿಸು ನಿನ್ನ ಚಿಹ್ನೆಯ ಧರಿಸುನೀನು ಪಿಡಿಯಲು ಹರಿಯು ತಾನು ಪಿಡಿವನುನವವಿಧ ನೀನು ಮುಖ್ಯಾಭಿಮಾನಿ
--------------
ಗೋಪಾಲದಾಸರು
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿಪಂಚಬಾಣನ ಜನಕನೆ ಪ.ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರಪಂಚವನು ಬಿಡಿಸು ತಂದೆ ನೊಂದೆ ಅ.ಪ.ಭವಬವಣೆಗಳನು ಅನುಭವಿಸಿದನ ಸತ್ಕುಲೋದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎನ್ನವಗುಣವ ಬಿಡಿಸು ದಾನವವೈರಿನರಮುರಾರಿಶೌರಿ1ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ 2ಸ್ಮøತಿಯೊಳಗೆ ಕೂಡಿ ವಿಸ್ಮøತಿಯ ಕೂಡೋಡಾಡಿಸ್ಮøತಿದಾರಿ ಕೊಳದು ಮನವು ಸ್ಮøತಿವಂದ್ಯ ಪ್ರಸನ್ವೆಂಕಟಸ್ಮಿತವದನದಾತಅಸ್ಮತ್ ಪಾಪ ಪಂಕಶೋಷ ನಿರ್ದೋಷ3
--------------
ಪ್ರಸನ್ನವೆಂಕಟದಾಸರು
ಮುತ್ತು ರತ್ನದಕೋಲಮತ್ತಮಲ್ಲಿಗಿಕೋಲತತ್ವ ಸೂಸ್ಸಾಡುವಕೋಲಮಿತ್ರೆಯರು ಹರುಷದಿ ಎತ್ತಿ ಕೋಲ್ಹಾಕುವಅತ್ಯಂತ ಸೊಬಗಿನಕೋಲಪ.ನಳಿನಾಕ್ಷಿಯರ ಮನ ಕೊಳಲೂದಿ ರಾತ್ರಿಲೆಸೆಳಿದೆಲ್ಲ್ಯೊಕಪಟಭಾವದಲೆ ಕೃಷ್ಣಸೆಳಿದೆಲ್ಲ್ಯೊಕಪಟಭಾವದಲೆಎಳೆಯ ಮಕ್ಕÀಳುಗಂಡಉಳಿದ ಭಾಗ್ಯವ ಬಿಟ್ಟುಅಳೆದೆಲ್ಲೊಅವರಒಗೆತನವ1ಕಂಜಾಕ್ಷ ಶ್ರೀಕೃಷ್ಣ ರಂಜಿಸಿ ಕೊಳಲೂದಿಮಂಜುಳ ಸ್ವರಕೆ ಮೋಹಿಸುತ ಬಾಲೆಮಂಜುಳ ಸ್ವರಕೆ ಮೋಹಿಸುತಕುಂಜರಗಮನೆಯರು ಸಂಜಿಲೆ ಬಂದರುಅಂಜದೆ ಅತ್ತೆಮಾವರಿಗೆ 2ಭಾವಮೈದುನರನ್ನ ಕೇವಲ ತುಚ್ಛಿಸಿಧಾವಿಸಿ ಬಂದ ಬಾಲೆಯರ ಕೃಷ್ಣಧಾವಿಸಿ ಬಂದ ಬಾಲೆಯರಪಾವನ ಮಾಡದೆ ದೇವ ರಾತ್ರಿಯೊಳುಯಾವ ಪಾಶವ ಬಿಡಿಸಿದಯೊ 3ತಂದೆತಾಯಿ ಬಳಗ ಬಂಧು ಜನರ ಬಿಟ್ಟುಹೊಂದಲು ನಿನ್ನಂಘ್ರಿಗಾಗಿ ಕೃಷ್ಣಹೊಂದಲು ನಿನ್ನಂಘ್ರಿಗಾಗಿಬಂದ ಕಾರಣವ ಒಂದೂ ಮಾತಾಡದೆಕಂದಿಕುಂದಿಸಿದೆಲ್ಲಾ ಅವರ 4ಚಿತ್ತ ಚಂಚಲವಾಗಿ ಎತ್ತಿಗೆ ಮುರವಿಟ್ಟುಮತ್ತೊಂದು ಹೋರಿಯ ತರಿಸೆ ಬಾಲೆಮತ್ತೊಂದು ಹೋರಿಯ ತರಿಸೆಹತ್ತಿರಿದ್ದವರೆಲ್ಲ ಅತ್ಯಂತ ನಗುವರುಒಂದು ಅರ್ಥಿಯು ಮಾಡಿಸಿದೆಲ್ಲೊ 5ಮಂಗನ ಮರಿಯೆತ್ತಿ ಅಂಗಿಯ ತೊಡಿಸುತರಂಗನ ಬಳಿಗೆ ಬಾರೆಂದು ಕಂದರಂಗನ ಬಳಿಗೆ ಬಾರೆಂದುಅಕ್ಕ ತಂಗಿಯರು ಕಂಡು ಹಂಗಿಸಿ ನಗುವರುಶ್ರೀರಂಗ ಮಾಡಿದ ಕೌತುಕವ 6ಬೆಕ್ಕಿನ ಬಾಯೊಳಗೆ ಇಕ್ಕುತ ತುತ್ತನೆಚಿಕ್ಕ ಕಂದಯ್ಯ ಉಣ್ಣೆನುತ ಬಾಲೆಚಿಕ್ಕಕಂದ ಉಣ್ಣೆನುತ ನಕ್ಕರುಗೆಳತಿಯರು ಚಕ್ಕನೆ ಜರಿದರುಚಕ್ಕಂದವೇನು ಮಾಡಿದೆಯೊ 7ಪಟ್ಟಿ ಮಂಚದ ಮೇಲೆ ಬಿಟ್ಟು ಕಂದನ ಬಾಲೆತೊಟ್ಟಿಲ ತೂಗಲು ಭರದಿ ಬಾಲೆತೊಟ್ಟಿಲ ತೂಗಲು ಭರದಿಬಟ್ಟಿ ಬಂದವರು ಅಷ್ಟೂರು ನಗುವಂತೆಎಷ್ಟು ಸೋಜಿಗವ ಮಾಡಿದೆಯೊ 8ಉಟ್ಟ ಪೀತಾಂಬರ ಬಿಟ್ಟು ಹಾಕಿಸಿ ಮ್ಯಾಲೆಕೃಷ್ಣನ ಕೊಳಲು ಲಾಲಿಸುತ ಬಾಲೆಕೃಷ್ಣನ ಕೊಳಲು ಲಾಲಿಸುತ ಧಿಟ್ಟನಕೊಳಲೊಳು ಧಿಟ್ಟೆ ಲಾಲಿಸಿದಳುಶ್ರೀಕೃಷ್ಣ ಮಾಡಿದ ಕೌತುಕವ 9ಕಾಲಿನ ಗೆಜ್ಜೆಯು ಮ್ಯಾಲೆ ಕೊರಳಿಗೆಕಟ್ಟಿಮೇಲಾದ ಸರ ಕಾಲಿಗ್ಹಾಕಿ ಬಾಲೆಮೇಲಾದ ಸರ ಕಾಲಿಗ್ಹಾಕಿಶಾಲೆ ಹಂಬಲ ಬಿಟ್ಟು ಲೋಲಾಕ್ಷಿ ನಡೆದಳುಕೋಲಾಹಲವ ಮಾಡಿಸಿದಿಯೊ 10ಹಣೆಗೆ ಕುಂಕುಮ ಗಲ್ಲಕ್ಕೆ ಕಾಡಿಗೆಚಲ್ವ ಫಣಿಗೆ ಅರಿಷಿಣವು ಬಾಲೆಚಲ್ವ ಫಣಿಗೆ ಅರಿಷಿಣವುನಲ್ಲೆಯರೆಲ್ಲರು ತಮ್ಮ ವಲ್ಲಭರನ ಬಿಟ್ಟುಅಲ್ಲೆ ರಾತ್ರಿಲೆ ಒರಗಿದರು 11ಕಜ್ಜಲ ನೇತ್ರಿಯರ ಲಜ್ಜವಗೈಸಿದೆಸಜ್ಜಾಗಿ ಕೊಳಲೂದಿದೊಮ್ಮೆಸಜ್ಜಾಗಿ ಕೊಳಲೂದಿಗುಜ್ಜಿರಮಾದೇವಿಹೆಜ್ಜೆ ಹೆಜ್ಜೆಗೆ ಹಂಗಿಸುವಳುಅರ್ಜುನ ಆಡಿದ ನಗುತ ರಾಮೇಶ ಇದಕೆ ಮೆಚ್ಚಿದ12
--------------
ಗಲಗಲಿಅವ್ವನವರು
ಮುದಕಿಯ ಕಂಡರೆ ಸೇರದೆನಗೆ ಮುದಕಿಯ ಕಂಡರೆ ಸೇರದೋಸದಮಲಪರತತ್ವದ ಗುರಿಯ ತೋರದಂತೆ ಮಾಡಿದಪಒಬ್ಬನನೊಯ್ದಿಬ್ಬರ ಮಾಡಿ ಓಡಿಶ್ಯಾಡುವ ಮುದಕಿಹಚ್ಚಿಕೊಂಡು ಜಗವೆನಲ್ಲ ಹರಿದು ಆಡುವ ಪಾಡುವ ಮುದುಕಿ1ನಿಲ್ಲದೆ ಸ್ವರ್ಗಕೆ ನರಕಕೆ ಮನಜರನೆಲ್ಲರ ತಿರುಗಿಪ ಮುದುಕಿಎಳ್ಳಷ್ಟೂ ಎಚ್ಚರ ಹುಟ್ಟಿಸದ ಎಡವಟ್ಟಾದ ಮುದುಕಿ2ಇಂದ್ರಜಾಲವ ಖರೆಯಂದದಲಿ ಎಸಗಿಕೊಂಡಿಹ ಮುದುಕಿಬಂಧಿಸಿಯಿಹಳು ಊನವಿಲ್ಲದಲೆ ಬಾಜಿಗಾರ ಮುದುಕಿ3ಏನೇನಿಲ್ಲವು ತನಗದು ರೂಪವು ಎಲ್ಲವು ಆದ ಮುದುಕಿತಾನಾರೆಂದು ತನ್ನನ್ನು ತಿಳಿಯೆ ತನ್ನೊಳಗಡಗಿಹ ಮುದಕಿ4ಮುನ್ನ ಅನಾದಿಯು ಎನಿಸಿಕೊಂಡರು ಮೂಲಮಾಯೆ ತಾ ಮುದುಕಿತನ್ಮಾತ್ರಾದ ಚಿದಾನಂದ ಬ್ರಹ್ಮದಿ ತೋರುತ ಅಡಗುವ ಮುದಕಿ5
--------------
ಚಿದಾನಂದ ಅವಧೂತರು
ಮುಂದೋರುವನು ಮುರಾರಿಎಂದೆಂದು ಕುಜನಕೆ ದೂರನುಶೌರಿಪ.ಘನಭಾಗವತಶ್ರವಣವ ಮಾಳ್ಪರಿಗೆವನಜನಾಭನ ಸಂಕೀರ್ತನೆ ಕಾಮೇಷ್ಟರಿಗೆಮುನಿವಂದ್ಯ ಕೃಷ್ಣನ ಮನಸಲಿ ಮರಿಯದೆಗುಣಕರ್ಮನಾಮ ಸ್ಮರಣೆಯಲಿಹರಿಗೆ1ಶ್ರೀ ವಾಸುದೇವಾಂಘ್ರಿ ಸೇವಾಸಕ್ತರಿಗೆಶ್ರೀವರನರ್ಚನೆ ಸದ್ಭಾವಯುಕ್ತರಿಗೆಸಾವಿರಭಿದಾನದ ದೇವದೇವಗೆ ಸರ್ವದಾ ವಂದಿಸುವ ವ್ಯಾಸಂಗವಿಡಿದರಿಗೆ 2ಶೇಷಶಯನನ ಸದ್ದಾಸರಾದರಿಗೆದೋಷದೂರನ ಸಖರಹ ಸಜ್ಜೀವರಿಗೆಪ್ರಸನ್ವೆಂಕಟವಾಸಗೆ ತನ್ನನರ್ಪಿಸಿ ಮುಕುತಿ ಮನೆಯಾಸೆವಂತರಿಗೆ 3
--------------
ಪ್ರಸನ್ನವೆಂಕಟದಾಸರು
ಮುಸ್ತೈದು ಮಾಡಿದಮದನನಾರಿಯನೆತ್ತಿವಸ್ತು ತಿಳಿದವರಿಗೆ ಆಯಿತದು ಕತ್ತಿಪಎರಡು ಸ್ತನಗಳು ಎಂಬ ಎರಡು ಬಿರಡೆಯ ಮಾಡಿಪರಿಶುದ್ಧ ಪಚ್ಚಾಳವೆಂಬ ಪರಜು ಮಾಡಿಮುಕುರ ಮುಖವೆಂಬ ಮೂಲಮನೆ ಮಾಡಿಗರಿಯವೇಣಿಯು ಎಂಬ ಗೊಂಡೆಗಳನೇ ಮಾಡಿ1ದೇಹ ನಿಡಿದು ಎಂಬ ದೊಡ್ಡ ಅಲಗನೆ ಮಾಡಿಮೋಹವೆಂದೆಂಬ ಮೊನೆಯ ಮಾಡಿಸಾಹಸವೆಂದೆಂಬ ಸಾಣೆಯನೆ ಮಾಡಿಗಹಗಹಿಕೆ ಎಂದೆಂಬ ಘನತರಹದನ ಮಾಡಿ2ಭೋ ಎನುತ ಕೂಗಿ ಕೈಗೆ ಕತ್ತಿಯ ಕೊಂಡುಬಾಯ ಬಿಡಲು ಜಗವ ಬಿದಿರುತ್ತಲಿಮಾಯೆಹರಿದು ಚಿದಾನಂದ ಭಕ್ತರ ಮುಟ್ಟದೆದಾಯವರಿತು ಜಗವ ಧಾತುಗೆಡಿಸಿದನು3
--------------
ಚಿದಾನಂದ ಅವಧೂತರು
ಮೂಡ ಬಲ್ಲನೆ ಜ್ಞಾನ - ದೃಢ ಭಕುತಿಯ ?ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ ? ಪ.ಕೋಣ ಬಲ್ಲುದೆ ವೇದಗಳನೋದಿ ಪಠಿಸಲೇಕೆಗೋಣಿ ಬಲ್ಲುದೆ ಎತ್ತಿನಾ ದುಃಖವಪ್ರಾಣ ತೊಲಗಿದ ಹೆಣವು ಕಿಚ್ಚಿಗಂಜಬಲ್ಲುದೆಕ್ಷೋಣಿಯೊಳು ಕುರುಡ ಬಲ್ಲನೆ ಹಗಲು - ಇರಳ ? 1ಬಧಿರ ಕೇಳುವನೆ ಸಂಗೀತವನು ಪಾಡಿದರೆ ?ಚದುರ ಮಾತುಗಳಾಡುವನೆ ಮೂಕನು ?ಕ್ಷುದೆಯಿಲ್ಲದವನು ಅಮೃತಾನ್ನವನು ಸವಿಯುವನೆ ?ಮಧುರ ವಚನವ ನುಡಿವನೇ ದುಷ್ಟ ಮನುಜ 2ಅಜ ಬರೆದ ಬರಹವನು ತೊಡೆಯಬಲ್ಲನೆ ಜಾಣ?ನಿಜಭಕುತಿ ಮುಕುತಿ ಸುಖವನ್ನು ಕೊಡುವಭುಜಗೇಂದ್ರಶಯನ ಶ್ರೀ ಪುರಂದರವಿಠಲನಭಜಿಸಲಕ್ಕರಿಯದವ ಕಡು ಪಾಪಿ ಮನುಜ 3
--------------
ಪುರಂದರದಾಸರು
ಮೂರ್ಖರಾದರು ಇವರು ಲೋಕದೊಳಗೆಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
--------------
ಪುರಂದರದಾಸರು
ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ ಪ.ತಿರುಗಾಡುತ ಮನೆಯೊಳಗಾದರು ಒಮ್ಮೆ - ಕೃಷ್ಣಾಪರಿಪರಿ ಕೆಲಸದೊಳಿದುವೊಂದು ಕೆಲಸವು - ಕೃಷ್ಣಾ 1ಮಲಗಿಯೆದ್ದು ಮೈಮುರಿದೇಳುತಲೊಮ್ಮೆ - ಕೃಷ್ಣಾಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ - ಕೃಷ್ಣಾ 2ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾಕಂದನ ಬಿಗಿದಪ್ಪಿ ಮುದ್ಧಾಡುತಲೊಮ್ಮೆ - ಕೃಷ್ಣಾ 3ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ - ಕೃಷ್ಣಾಮಂದಗಮನೆಯೊಳು ಸರಸವಾಡುತಲೊಮ್ಮೆ - ಕೃಷ್ಣಾ 4ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾದ್ವಾರಕಾ ಪುರವಾಸಪುರಂದರವಿಠಲ ಕೃಷ್ಣಾ5
--------------
ಪುರಂದರದಾಸರು
ಮೋಕ್ಷೋಪಾಯಕಾನಂದ ಮುನೀಂದ್ರನಶಿಕ್ಷಾ ಮಾರ್ಗಹುದಯ್ಯಲಕ್ಷ್ಷ್ಯಶ:ಲಕ್ಷಣವಾರ್ಹೇಳೇನುಲಕ್ಷದಿ ಗುಣವಿಲ್ಲಯ್ಯ ಪ.ಸುಕೃತತಾನಾದರೆ ಚಿರಕಾಲಕೆ ಒಮ್ಮೆಧಿಕೃತವಾಹುದು ಭವತುಷ್ಟಿಸುಖವೆಂಬುದು ಸ್ವರೂಪಾನಂದಾನುಭವವಿಕಸವಾಗುವ ಜ್ಞಾನದೃಷ್ಟಿ ಆಸುಖವಾಪೇಕ್ಷಿಸಿ ಪ್ರಕೃತವುದಾಸಿಪದಖಿಳ ಮಹಾತ್ಮರಭೀಷ್ಟಿಸಕಳಾನಿಷ್ಟವ ಸಾಗಿಸುವ ಶ್ರೀಸುಖತೀರ್ಥರ ಶುಭಗೋಷ್ಟಿ 1ಕಿವಿಯಲಿ ಸತ್ಶಾಸ್ತ್ತ್ರವಕೇಳಿಧ್ಯಾನಮನನವ ಸಾಧಿಪುದೆ ದೇವಸಾರ್ಥಿಕುವಲಯಪ್ರಿಯಕುಲತಿಲಕನು ಮೆಚ್ಚಿಹನವಭಕುತಿಯಪಥಕೀರ್ತಿಅವಿರಳ ಎದೆಗದ್ದಿಗೆಯೊಳು ಮೆರೆವನಸವಿಗುಣ ನಿರ್ಣಯವಾರ್ತಿವಿವರಿಸಿ ವಾರಂವಾರ ವರದ ಮದ್ಧವ ಜಗದ್ಗುರು ವರಮೂರ್ತಿ 2ಈಶ್ವರ ಸಾಕ್ಷಾತ್ಕಾರದ ಭೇದರಹಸ್ಯ ವಿಚಾರವಂತಯೋಗಿನಶ್ವರಾನಶ್ವರವರಿತ ವೈರಾಗ್ಯದಐಶ್ವರ್ಯಾನ್ವಿತಭೋಗಿಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣಭಾಷ್ಯಕ ಶ್ರೀಪದಯೋಗಿವಿಶ್ವದೊಡೆಯ ಪ್ರಸನ್ವೆಂಕಟಪತಿ ಪದವಿಶ್ವಾಸಿಕ ಮುನಿಯೋಗಿ 3
--------------
ಪ್ರಸನ್ನವೆಂಕಟದಾಸರು
ಮೋಸ ಹೋದೆನಲ್ಲ - ಸಕಲವು-|ವಾಸುದೇವಬಲ್ಲಪಭಾಸುರಂಗ ಶ್ರೀ ವಾಸುಕಿಶಯನನ |ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪದುಷ್ಟಜನರ ಕೂಡಿ - ನಾನತಿ-|ಭ್ರಷ್ಟನಾದೆ ನೋಡಿ ||ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ 1ಕಾಯವು ಸ್ಥಿರವಲ್ಲ-ಎನ್ನೊಳು-|ಮಾಯೆತುಂಬಿತಲ್ಲ ||ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |ಕಾಯಜಜನಕನ ಧ್ಯಾನವ ಮಾಡದೆ2ಕಂಗಳಿಂದಲಿ ನೋಡೊ-ದೇವಾನಿ-|ನ್ನಂಗ ಸಂಗವ ನೀಡೋ ||ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|ನ್ನಂಗದೊಳಿರುವಂತೆ ದಯವನು ಮಾಡೊ 3
--------------
ಪುರಂದರದಾಸರು
ಮೋಸ ಹೋದೆನಲ್ಲ -ವಿಠಲ- ಮೋಸ ಹೋದೆನಲ್ಲಾ ಪಆಸೆಬಿಟ್ಟು ಹಂಬಲಿಸಿ |ಹೇಸಿ ನರಕದೊಳಗೆ ಸಿಲುಕಿ ಅ.ಪಪುಷ್ಪ ಶ್ರೀ ತುಳಸಿಯನ್ನು |ಒಪ್ಪದಿಂದ ಮನೆಗೆ ತಂದು ||ಅಪ್ಪ ಕೃಷ್ಣನ ಪೂಜೆಯ ಮಾಡಿ - ಮೇ-|ಲಿಪ್ಪ ಲೋಕದ ಸೂರೆಗೊಳದೆ 1ಕಾಯದಾಸೆಗೆ ಕಂಡುದ ಬಯಸಿ |ನಾಯಿಯಂತೆ ಮನೆಮನೆ ತಿರುಗಿ ||ಮಾಯಾಪಾಶದೋಳಗೆ ಸಿಲುಕಿ |ಜೀಯನಿನ್ನನು ಧ್ಯಾನಿಸಲರಿಯದೆ2ಸತಿಸುತರು- ಪಿತೃ-ಬಾಂಧವರು |ಪಥವ ತೋರಿಸಬಲ್ಲರೆ ಇವರು ||ಗತಿನೀನೇಪುರಂದರವಿಠಲ |ಹಿತವ ತಾಯಿ ತಂದೆ ನೀನು 3
--------------
ಪುರಂದರದಾಸರು