ಒಟ್ಟು 1173 ಕಡೆಗಳಲ್ಲಿ , 101 ದಾಸರು , 907 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ ಅರುಣ ಉದಯದೊಳೆದ್ದು ಮರುದ್ವøಧೆ ಸ್ನಾನವ ಮಾಡಿ ಪರಮಪುರುಷನ ವಿಶ್ವರೂಪ ನೋಡಿ ಪರವಾಸುದೇವರ ಪ್ರಣವವಿಮಾನದಿ ನೋಡಿ ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು 1 ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ 2 ಮಾರ್ಗಶಿರ ಮಾಸದಿ ಪವಿತ್ರ ಕೊ ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು 3 ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು ವೈಶಾಖಮಾಸದಿ ವಸಂತೋತ್ಸವವು ಜೇಷ್ಠಮಾಸದಲಿ ಜೇಷ್ಠಾಭಿಷೇಕವು ಆಷಾಢಮಾಸದಿ ಕಾವೇರಿ ವೈಭೋಗವು 4 ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ ನಾಶವಾಗುವುದವರ ಪಾಪರಾಶಿಗಳು ಆ ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ] ವಾಸುಕಿಶಯನ ವೆಂಕಟರಂಗನ ನೋಳ್ಪರು 4
--------------
ಯದುಗಿರಿಯಮ್ಮ
ಶ್ರೀರಂಗಶಾಯಿ ವಿಠಲ ಪೊರೆಯ ಬೇಕಿವಳ ಪ ಭವ ಶರಧಿ ದಾಂಟಿಸುತ ಅ.ಪ. ಕಾರಾಣಾತ್ಮಕ ನಿನ್ನ | ಗುಣರೂಪ ಕ್ರಿಯೆಗಳಧಾರಣೆಗಳಿಲ್ಲದಲೆ | ಧ್ಯಾನರತಳಾಗಿಮೂರಾರು ದ್ವಾರಗಳ | ಬಂಧಿಸುತ ಯೋಗದಲಿಆರಾಧ್ಯ ಮೂರ್ತಿಯನೆ | ಮರೆತ ಯೋಗಿಣಿಯ 1 ತೈಜಸ ಸು | ವ್ಯಕ್ತ ಅಂಕಿತವಾ 2 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತತ್ವಗಳರುಹಿ | ಪೊರೆಯ ಬೇಕಿವಳ |ಕಾರುಣಿಕ ಕಂಕಣಾ | ಕಾರ ಚಕ್ರಾಕೃತಿಯತೋರಿರುವೆ ತನ್ಮಹಿಮೆ | ಅರಿಯ ಕಾತುರಳಾ 3 ಸಿರಿ ಸತ್ಯ ನರೆಯಣನೆಪರಿಪರಿಯಲಿಂದಿವಳ | ಪೊರೆಯ ಬೇಕೋಗರುಡಗಮನನೆ ದೇವ | ಸರ್ವಜ್ಞ ನೀನಿರಲುಒರೆವೆನೆಂಬಪರಾಧ | ಮರೆದು ಪಾಲಿಪುದೋ 4 ಅದ್ವೈತ ಉಪದೇಶ | ತಿದ್ದಿನಿನ ಪದದಲ್ಲಿಶುದ್ಧ ಭಕ್ತಿಜ್ಞಾನ | ವೃದ್ಧಿಯನೆ ಗೈಸೀಮಧ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆಅದ್ವಿತೀಯನು ಯೆಂಬ | ಬುದ್ಧಿ ಸ್ಥಿರ ಮಾಡೋ 5
--------------
ಗುರುಗೋವಿಂದವಿಠಲರು
ಶ್ರೀರಾಮ ಜಯರಾಮ ಜಯ ಜಯತು ರಾಮ ಶ್ರೀರಾಮ ಜಯರಾಮ ಜಯ ಜಯತು ರಾಮ ಪ ನಮೋ ರಾಮಚಂದ್ರ ಸದಾಪೂರ್ಣಾನಂದ ನಮೋ ಸುಗುಣ ಸಾಂದ್ರ ಕೌಸಲ್ಯಕಂದ ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ 1 ನಿನ್ನ ಉದಯದಿರವಿಯು ಉನ್ನತಿಯನೈದಿಹನು ಘನ್ನತೆಯ ಪೊಂದಿಹರು ಕೌಸಲ್ಯದಶರಥರು ನಿನ್ನ ಅನುಜರು ಜಗದಿ ಪರಮ ಪಾವನ್ನರು ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ 2 ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು 3 ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ ನಿನ್ನ ಪದಕರ್ಪಿಸಲು ಘನಪದವಿಯಿತ್ತೆ ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು ಧನ್ಯವಾಗಿರುತಿಪ್ಪ ನಿಹಪರಂಗಳಲಿ 4 ನಿನ್ನ ದಾಸ್ಯವನೈದಿ ಅನಂತ ಕಪಿವರರು ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು ನಿನ್ನ ದ್ವೇಷದಿ ರಾವಣಾದಿಗಳು ಮಡಿದರು ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ 5 ಸುರರು ಕೃತ ಪುಟಾಂಜಲಿಯಲ್ಲಿ ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು ವ್ರತವನೇ ಕೈಕೊಂಡು ವನಕೈದಿದೆ 6 ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು ವಾನರರ ಭಲ್ಲೂಕಗಳ ಸೇನೆನೆರಹಿ ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು 7 ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ ನೇಮದಿಂ ಕೈಕೊಂಡು ರಾಜ್ಯವನ್ನು ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ ತಾಮರಸಜನ ಪ್ರಾರ್ಥನೆಯ ಮನ್ನಿಸಿ 8 ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು ನಿನ್ನನಂತವತಾರಗಳ ಚರಿತೆ ಸೋಜಿಗವು ನಿನ್ನಯವತಾರಕ್ಕು ಮೂಲಕ್ಕಭೇದವು 9 ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು ನಿನ್ನನೇ ಪಾಡುವರು ಅಜಪವನ ಪತ್ನಿಯರು 10 ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ ಖಗರಾಜ ರತಿ ವರ್ಣಿಸುವರು ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು ಚನ್ನಾಗಿ ಪಾಡುವರು ನಿನ್ನ ಗುಣಗಳನು 11 ಸುರರು ನಾರದಾದಿ ಋಷಿವರರು ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ ಅಂದದಲಿ ವೀಣಾ ಸುಗಾನ ಸಂಗೀತದಲಿ ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು 12 ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ ಅಕಳಂಕ ವgದೇಂದ್ರ ಯತಿಸಾರ್ವಭೌಮರು ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು 13 ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು 14 ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು ನಿನ್ನ ನಾಮದ ಮಹಿಮೆ ನಿಗಮಗಮ್ಯ ನಿನ್ನ ಚರಣೋದಕವು ತ್ರಿಜಗಪಾವನ್ನವು ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು 15 ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು) ನಿನ್ನ ರೋಷದಿ ಅಜಭವಾದ್ಯರು ತೃಣರು 16 ಮೂರ್ತಿ ಕಣ್ಣಿಗಲ್ಹಾದಕರ ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು ನಿನ್ನ ನಾಮದ ರುಚಿಯು ಅಮೃತಕಿಂತಧಿಕ 17 ನಿನ್ನ ಧ್ಯಾನವೆ ಸಕಲ ಸಾಧನದ ಸಾರವು ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ 18 ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು ನಿನ್ನ ನಾಮವೆ ದುರಿತರಾಶಿಗೆ ಪಾವಕವು ನಿನ್ನ ನಾಮವೆ ಸಕಲಭವಬಂಧ ಮೋಚಕವು 19 ರೇಣು ತೃಣ ಕಾಷ್ಟದಲಿ ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು ನಿನ್ನಲ್ಲಿ ಮಮತೆಯಿಲ್ಲದವದೂಷಿತನು 20 ಅಜಭವಗಿರೀಶಾ ಭಜಕÀಜನ ದಾಸಾ ಸುಜನಮನತೋಷಾ ಕುಜನ ಮನಕ್ಲೇಶ ದ್ವಿಜತತಿಯ ಪೋಷ, ರಜನಿಚರನಾಶ ರಜತಪುರಧೀಶ, ಭುಜಗÀಗಿರಿ ವಾಸ 21 ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ ಹಿಂದು ಮುಂದು ನೀನೆ, ಎಂದೆಂದು ನೀನೆ ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ - ಬಂಧಿಗನÀು ಆಪ್ತ ಗೋವಿಂದ ನೀನೆ 22 ಸೃಜಿಸಿದವನು ನೀನೆ ಪೋಷಿಸಿದವನು ನೀನೆ ನಿಜಗತಿಯ ಜೀವರಿಗೆ ನೀಡುವವÀನು ನೀನೆ ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ 23 ಕೊಡುವವನು ನೀನೆ ಕೋಳುವವನು ನೀನೆ ಅಡಿಗಡಿಗೆ ಸುಖದುಃಖ ನೀಡುವವ ನೀನೆ ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ 24 ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ ಕೌಪೀನ ಸಹ ಯನ್ನ ಸಂಗಡಿರಲಿಲ್ಲ ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ 25 ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು ಕೇಡುಯಿಲ್ಲದವಾ ಭರಣ ವಸ್ತುಗಳು ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ ಕೂಡಬರಬಹುದಾದುದೊಂದುಯಿಲ್ಲ 26 ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ ದುಷ್ಟತನದಿಂದ ನಾನಿಷ್ಟುಪರಿಗಳಿಸಿ 27 ದಾನಧರ್ಮಗಳಿಲ್ಲ ವÀ್ರತನೇಮಗಳುಯಿಲ್ಲ ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು ಶ್ವಾನನÀಂದದಿ ಕಾದು ಕೊಂಡು ಕುಳಿತಿಪ್ಪೆ 28 ವಾರನಾರಿಯರಲ್ಲಿ ವೇಷಧಾರಿಗಳಲ್ಲಿ ಸೊರೆಮಾಡಿದೆ ಕರ್ಣನೆನಿಸ ಬೇಕೆಂದು ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ 29 ಸತಿಸುತರು ಹಿತÀದವರು ಹಿತವ ಮೇಲ್ತೋರಿದು - ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ ಪರ - ಗತಿಗೆ ಸಾಧನ ತೋರ್ಪರಾರು ಯನಗಿಲ್ಲ 30 ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆÉ ನಾಮಹಾಭಕ್ತಿಯಲಿ ನಂಬಿದವನಲ್ಲ ನಾ ಮಾಡಿದ ಪಾಪರಾಶಿಗಳ ಪರಿಹರಿಸಿ ಪ್ರೇಮದಿಂದಲಿ ಪೊರೆಯೋ ಪರಮಕರುಣಿ 31 ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ ರೋಗದಿಂದಗತೀ ಕಡೆದಾಂಟಿಸು ಯೋಗಿವರ ನಿನ್ನಿಚ್ಛೆ ಹೇಗೆÀಮಾಡಿದರುಸರಿ ಆಗದೆಳ್ಳಿನಿತು ಸಂಕೋಚವೆನಗೆ 32 ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ ನಾಕೆಟ್ಟುದುದುಯೇನು ಕರುಣಾಳುವೆ ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ ನೂಕಬೇಡೆನ್ನ ಮನ ಪಾಪಗಳ ಕಡೆಗೆ 33 ತನುಮನವು ನಿನ್ನದು ಧನಧಾನ್ಯ ನಿನ್ನದು ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ ಎನಗಾಪ್ತರೆಂಬುವರು ನಿನ್ನದಾಸರು ರಾಮ ಎನದೆಂಬ ವಸ್ತುವೆಲ್ಲವು ನಿನ್ನದು 34 ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ ಪುಣ್ಯದಾಶೆಯು ಇಲ್ಲ ಪರಮಪುರುಷ ನಿನ್ನ ಪ್ರೇರಣೆಯಿಂದ ಯನಿ
--------------
ವರದೇಶವಿಠಲ
ಶ್ರೀರಾಮ ಜಯರಾಮ ಶ್ರೀರಾಮರಾಮ ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ ಜಾನಕೀ ಪತಿರಾಮ ಜಯರಘುರಾಮ ಜಾನ್ಹವೀ ಪಿತರಾಮ ಸರ್ವೇಶರಾಮ 1 ಭಯ ನಿವಾರಣರಾಮ ಪಾವನರಾಮ ನಯಗುಣ ಶ್ರೀರಾಮ ನರಹರೇ ರಾಮ 2 ತ್ರಿಜಗ ಮೋಹನ ರಾಮ ದಿವಿಜೇಶರಾಮ ಅಜಭವನುತರಾಮ ಆನಂದರಾಮ 3 ಭುವನ ಪಾಲಕರಾಮ ಭೂಪತೆ ರಾಮ ಸವನ ರಕ್ಷಕರಾಮ ಶತ್ರುಘ್ನ ರಾಮ 4 ಭವ ವಿಮೋಚನ ರಾಮ ಪದ್ಮಾಕ್ಷರಾಮ 5 ವೈದೇಹಿ ಪತಿರಾಮ ವೈಕುಂಠರಾಮ ವೇದಗೋಚರ ರಾಮ ವೆಂಕಟೇಶರಾಮ 6 ಮಂಗಳಾತ್ಮಕರಾಮ ಮಾಧವರಾಮ ಶೃಂಗಾರ ಶೇಖರರಾಮ ಶ್ರೀರಾಮ ರಾಮ7 ದಶರಥಸುತರಾಮ ದನುಜಾರಿರಾಮ ಕುಶಲವ ಪಿತರಾಮ ಕೋದಂಡರಾಮ 8 ಕರುಣಸಾಗರ ರಾಮ ಕಾಕುಸ್ಥರಾಮ ಶರಧಿಶಯನ ರಾಮ ಶಾಶ್ವತರಾಮ9 ಶ್ರೀಕರಾವ್ಹಯರಾಮ ಶ್ರೀಧರರಾಮ ಪಾಕಾರಿಸುತ ರಾಮ ಪರಮೇಶರಾವÀು 10 ಮಧುರ ಭಾಷಣರಾಮ ಮಧುವೈರಿರಾಮ ಮದನಾರಿನುತರಾಮ ಮೌನೀಶರಾಮ 11 ಸತಿ ಶಾಪ ಖಂಡನ ರಾಮ ಪಾತಕ ಹರ ರಾಮ ಪ್ರಖ್ಯಾತ ರಾಮ12 ರಾಮ ಗರ್ವವಿರಾಮ ರಾಮಾಭಿರಾಮ ಸೌಮಿತ್ರಿವರರಾಮ ಸೌಂದರ್ಯರಾಮ 13 ಸುಗ್ರೀವಸಖರಾಮ ಶುಭಕರ ರಾಮ ಅಗ್ರಜಾಧಿಪ ರಾಮ ಅಮಿತಬಲರಾಮ 14 ಅನ್ಯಮಾನಸರಾಮ ರಘುರಾಮ ಇನಕುಲೇಶ್ವರ ರಾಮ ವಿಭುದೇಂದ್ರರಾಮ 15 ಚಾರು ಚರಿತ ರಾಮ ಜಯಜಯ ರಾಮ ಮಾರುತಾತ್ಮಜ ವಂದ್ಯ ಮಾನಿತರಾಮ 16 ವಾಲಿ ಮರ್ದನರಾಮ ವರದಶ್ರೀರಾಮ ಫಾಲಾಕ್ಷ ಸಖರಾಮ ಭದ್ರಶ್ರೀರಾಮ 17 ಸೇತುಬಂಧನ ರಾಮ ಚಿನ್ಮಯರಾಮ ಸೀತಾಪತೆ ರಾಮ ಜಿತದೈತ್ಯ ರಾಮ 18 ನತವಿಭೀಷಣರಾಮ ನಗಧರ ರಾಮ ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ 19 ಮಾರೀಚ ಮದಭಂಗ ಮಹಾದೇವರಾಮ ವೀರಾಗ್ರಣೀರಾಮ ವಿಶ್ವೇಶರಾಮ 20 ರಾಮರಾಮ ರಾಮರಾಮ ಶ್ರೀರಾಮ ಕಾಮಿತಾರ್ಥಪ್ರದ ಕಲ್ಯಾಣರಾಮ 21 ಅಗಣಿತ ಮಹಿಮ ವಿಲಾಸ ಶ್ರೀರಾಮ ನಿತ್ಯ ಶ್ರೀರಾಮ 22 ಕಂಬುಕಂಧರ ರಾಮ ಘನತರರಾಮ ಕುಂಭಕರ್ಣಾಂತರ ಗೋವಿಂದರಾಮ 23 ಸುಜನ ಹೃತ್ಕಮಲ ಭಾಸುರ ಸೂರ್ಯರಾಮ ನೃಪತಿ ಶ್ರೀರಾಮ 24 ಲೀಲಾ ಮನುಜ ವೇಷ ರಿಪು ಜೈತ್ರರಾಮ ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ 25 ಅಕಲಂಕ ನಿರುಪಮಾನ ಸಹಾಯ ರಾಮ ಭಕ್ತವತ್ಸಲ ದೀನ ಬಂಧು ಶ್ರೀರಾಮ 26 ಮುಕ್ತಿದಾಯಕ ರಾಮ ಪೂಜಿತರಾಮ ದಶಕಂಠ ಮರ್ದನ ತಾರಕನಾಮ 27 ಶಶಿಬಿಂಬ ವದನ ದಾಶರಥಿ ಶ್ರೀರಾಮ ನಾರಾಯಣಾಚ್ಯುತಾನಂತ ಶ್ರೀರಾಮ 28 ವಾರಿಜೋದರ ಶ್ರೀನಿವಾಸ ಶ್ರೀರಾಮ ಹರಧನುರ್ಭಂಗ ದಯಾನಿಧೆ ರಾಮ 29 ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ ಸರ್ವಲೋಕ ಶರಣ್ಯ ಸೌಭಾಗ್ಯರಾಮ 30 ಶರ್ವರೀಚರ ಹರಕ್ಷ್ಮಾಪತೇರಾಮ ಸರಶಿಜನಾಭ ದಾಶಾರ್ಹ ಶ್ರೀರಾಮ 31 ಶರಣಾಗತ ತ್ರಾಣ ಶರಣು ಶ್ರೀರಾಮ ಮೂರ್ತಿ ಶ್ರೀರಾಮ 32 ಬುಧ ಜನಾಧಾರ ಸರ್ವೋತ್ತಮರಾಮ ವರ ಹೆನ್ನೆಪುರನಿವಾಸ ಶ್ರೀರಾಮ 33 ನರಸಿಂಹ ಭಕ್ತ ಚಿಂತಾಮಣಿ ರಾಮ ಇಷ್ಟದಾಯಕ ಹೆನ್ನೆ ವಿಠಲರಾಮ 34 ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ ಕುಜನವನ ಕುಠಾರ ಕೋವಿದ ರಾಮ 35
--------------
ಹೆನ್ನೆರಂಗದಾಸರು
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ ಹದಿನೆಂಟುಪದ್ಯಗಳೊಳಾಲಿಸುವುದು ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ ಧನಪಾಂಡುತನಯರಂ ಸೈರಿಸದೆಭೇದಮಂ ಕಟ್ಟಿಸಿಯರಗಿನಮನೆಯೊಳವರನಿಡಲು | ವನಜಲೋಚನನ ಕೃಪೆಯಿಮದದಂದಾಟಿಕಾ ನನದಲಿ ಹಿಡಿಂಬಬಕರಂ ಮುರಿದುದೃಪದರಾ ಪುತ್ರರಪಡೆದರಾದಿಪರ್ವದಲ್ಲಿ 1 ರಾಜಸೂಯಾಭಿಧಾನದ ಯಾಗಕಾರಣದೊ ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ ಜೂಜಿನಲಿಸೋಲಿಸಲು ಪಂಚಪಾಂಡವರಂ ಸ ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ- ಸಭಾಪರ್ವದಲಿ 2 ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ ಘೋಷಯೊಳಹಿತನ ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ ಅರಣ್ಯಪರ್ವದೊಳಗೆ 3 ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ ಗಂದುಪಾಂಡವರಿರಲ್ ಕೀಚಕಾಧಮನು ಸೈ- ಭೀಮಗಂಧರ್ವ ವ್ಯಾಜದಿಂದ ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ ಪಾರ್ಥಗೆ ವಿರಾಟಪರ್ವದಲ್ಲಿ 4 ದೇವಕೃಷ್ಣಸಂಧಿಗೆ ತರಲ್ ಕುರುಪದು ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ ಕೌರವಸಭೆಗೆಪೋಗಿ ಈವುದೈದೂರುಗಳ ಪಾಂಡವರಿಗೆನೆ ಭೇದ ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ 5 ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು ತರುವಾಯ ಹತ್ತುದಿನಕಾದುತಿರಲಾಗಭೀ ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ ಭೀಷ್ಮಪರ್ವದಿಕಥೆಯಿದು 6 ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ- -ದೊಳುಮಡಿಯಲು ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ ದಿನದಲಿದ್ರೋಣಪರ್ವದೊಳಗೆ 7 ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ ಮಾಡಲು ಶಲ್ಯನ ನರನವಿಕ್ರಮಪೊಗಳಿ ಕರ್ಣನಬಲವನುಧಿ ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ ಕರ್ಣಪರ್ವದಲಿ 8 ಸೂತಜನಮರಣದಲಿ ಶಲ್ಯಗಾಯಿತು ಪಟ್ಟ ಶಕುನಿಯಂಸಹದೇವಸಂಹರಿಸಲು ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು ಕುರುಪನು ಶಲ್ಯಪರ್ವದೊಳಗೆ 9 ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ ಶಿರವತಹುದೆನುತಲಶ್ವತ್ಥಾಮಪಾಳಯದಿ ಜೀವಬಿಡಲು ನರಭೀಮಸೇನರಾವಾರ್ತೆಯಂ ಕೇಳುತಲೆ ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್ ಸುಪ್ತಪರ್ವದಲಿ 10 ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ ತಮ್ಮಪತಿಗಳನಪ್ಪಲು ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ ಸ್ತ್ರೀಪರ್ವದಲಿ 11 ತನಗೆ ಕರ್ಣಸಹೋದರನೆಂಬ ವಾರ್ತೆಯಮ ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ ಘನಬಂಧುವಧೆ ಮಹಾದೋಷವೆಂತೆಂದು ಭೀ ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ 12 ಅತಿಶಯ ದಾನಧರ್ಮದ ಲಕ್ಷಣಗಳಂ ನಿ ಯತಮಾದ ವರ್ಣಾಶ್ರಮಾಚಾರಕ್ರಮದಸಂ ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ ಕಥೆಗಳರುಹಿಸಿ ನದೀಸುತಧರ್ಮಜನ ಮನೋ ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು- -ಮಾನುಶಾಸನ ಪರ್ವದಿ 13 ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ ನೇಮದಿಂದ ಪರಿಪರಿಸುವಸ್ತುಗಳನೆಲ್ಲ ತಂದುಯೈ ವರು ಮಹಾಸಂತಸದಿಹರಿ ಸಹಾಯದಿ ಮಾಡಿ ಸಂಪೂಜಿಸಿದರಶ್ವಮೇಧಕಪರ್ವದಿ 14 ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ ಮುವ್ವರುಪವಾಸದೊಳಿರೆ ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್ ಪೊಂದಿದರ್ ವಿದುರಧರಾತ್ಮಜನಕೂಡಿದಂ ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ- -ವಾಸಪರ್ವದೊಳಗೆ 15 ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ ಬರುಬರುತಲುತ್ಪಾತಗಳುಪುಟ್ಟಿದವು ಯಾದ ಮಡಿದರೆಂಬವಾರ್ತೆಯನು ಕೇಳಿ ನರನು ನಡೆತಂದು ಶೋಕದೊಳುಳಿದವರನುತಾ ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್ ಮುಸಲಪರ್ವದಕಥೆಯಿದು 16 ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ ನಕುಲನುಂ ಸುರಪಸುತನು ವರಭೀಮಸೇನನುಂ ಬಿದ್ದರಾನೃಪತಿಯೋ ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ ಪ್ರಸ್ಥಾನಪರ್ವದೊಳಗೆ 17 ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ ತನ್ನವರೆಲ್ಲರ ನೋಡುತ ಪೊಂದಿದಂ ಯಮನೊಡನೆ ಪವನನೋಳ್ ಭೀಮನರ ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್ ಸ್ವರ್ಗಾರೋಹಣಪರ್ವದಿ 18 ಈಮಹಭಾರತ ಶತಸಹಸ್ರಗ್ರಂಥವನು ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು ಸಂಕ್ಷೇಪಭಾರತವನು ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ ಕಾಮಿತಾರ್ಥವನಿಹಪರಂಗಳೊಳ್ಸುಖವಗುರು ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ- -ನಿಲಯನರಹರಿಕರುಣದಿ 19
--------------
ಗುರುರಾಮವಿಠಲ
ಶ್ರೀವರ ಶುಭಗುಣನಿಚಯ ರಮಾಸ್ವದ ಪಾಲಯ ಮಾಂ ಸತತಂ ಪ. ನೀಲ ಮೇಘ ಶೋಭ ಸುಖ ಕಲ್ಲೋಲ ನಿತ್ಯಲಾಭ ಲೋಲಾಂಬಕ ಕಮಲಾಲಯವರ ಕರು ಣಾಲವಾಲ ಮಾತಾಲಿಸು ತ್ವರಿತದಿ 1 ಮಂದಹಾಸದಿಂದ ಮೆಚ್ಚಿದ ಸುಂದರೇಶ ವೃಂದ ಹೊಂದುತ ಹೊಸ ಪರಿಯಿಂದ ರಮಿಸಿ ಸ್ವಾ- ನಂದವಿತ್ತ ಗೋವಿಂದ ಮುಕುಂದ 2 ದಾಸಾನಂದಕರ ನಿತ್ಯವಿಲಾಸಿತ ಸುರನಿಕರ ಶ್ರೀಶಯನ್ನನಕಲುಷಿತ ಪೂರಿಸು ಶೇಷಗಿರಿಯ ಶ್ರೀವಾಸ ಪರಾತ್ಪರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು
ಶ್ರೀಶ್ರೀಪ್ರಾಣೇಶದಾಸರಾಯರ ಸ್ತೋತ್ರ ದಾಸರಾಯರ ದಿವ್ಯ ಚರಣ ಭಜಿಸಿ ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ಪ ಪಾದ ಭಜಿಪ ಸದ್ಭಕ್ತರ ಏಸುಜನುಮದ ಪಾಪರಾಶಿ ಪರಿಹರವು ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತಮತ ತತ್ವದ ತೆರೆಗಳಿಂ ಸೂಸುತ ಧರಣಿಸುರರಿಗೆ ರಾಮನಾಮಾಮೃತ ನಿರುತಭಜಿಸಲು ಙÁ್ಞನವೈರಾಗ್ಯ ತರುಮಣಿಯ ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ ಅಜ್ಞಾನತಿಮಿರವನು ದೂರೋಡಿಪ ಸೂಜ್ಞರೆಂಬುವ ತಾವರೆಗಳರಳಿಸುವಂಥ ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ 3 ನಮಿಪಜನ ಭವತಾಪಕಳೆದು ಸದ್ಭಕ್ತಿಯಂ - ಬಮಿತ ಅಹ್ಲಾದವನು ಬೀರುವಂಥ ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸಕುಲತಿಲಕ ಪ್ರಾಣೇಶರಾಯನ ಕವನ ಶ್ರೀಶಕಥೆಗಳ ರಾಶಿಮೀಸಲಾಗಿರಲು ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ5 ಈ ಗುರುಗಳ ಪಾದಕೆರಗಿದ್ದ ಶಿರಧನ್ಯ ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ ಈ ಗುರುಗಳನು ಮನದಿ ನೆನೆವÀನರ ಧನ್ಯ 6 ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ ಶ್ರೀಗುರುಪ್ರಾಣೇಶ ಭಜಕರೆನಿಪ ನಾಗಪರಿಯಂತ ವರದೇಶ ವಿಠಲನ ಪ್ರೀಯ ಪಾದ ಭೃಂಗ 7
--------------
ವರದೇಶವಿಠಲ
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು
ಸಕಲ ಸದ್ಗುಣಪೂರ್ಣ ಶ್ರೀನಿವಾಸ ವಿಕಸಿತ ಕಮಲವದನ ಮಕರ ಕುಂಡಲಮಣಿ ಮಕುಟ ಕೌಸ್ತುಭಾ ಹಾರ ಅಖಿಳ ಜಗದಾಧಾರ ಅಂಬುಜಾಕ್ಷ ಸಿರಿ ನಲ್ಲ ನಿನ್ನ ಸಮಾನ ರಿಲ್ಲವೆಂಬುದ ಸರ್ವ ಶ್ರುತಿ ತತ್ವವ ಬಲ್ಲ ಬುಧರಿಂದರಿದು ಸೊಲ್ಲಸೊಲ್ಲಿಗೆ ತ್ರಿಜಗ ಪಾದ ಪಲ್ಲವವÀ ನಂಬಿದೆನು 1 ಚಕ್ರ ಶಂಖಾಬ್ಜಧರ ವಿಕ್ರಯ ವಿರಾಟರೂ- ಪಾ ಕ್ರಾಂತ ಸಕಲ ಭೂಚಕ್ರವನ್ನು ಶಕ್ರಗೊಲಿದಿತ್ತತಿಪರಾಕ್ರಮ ತ್ರಿವಿಕ್ರಮನೆ ಶುಕ್ರ ಶಿಷ್ಯನಿಗಧಿಕ ಶುಭವ ಪಾಲಿಸಿದಿ 2 ಜಯ ಜಯ ಜಗನ್ನಾಥ ಜಾನಕೀವರ ಸರ್ವ ಭಯ ನಿವಾರಣ ಭಕ್ತ ಕಲ್ಪತರುವೆ ಲಯದೂರ ಲಾವಣ್ಯ ಚಯಮಮಾಲಯದಲ್ಲಿ ದಯವಾಗು ಜ್ಞಾನ ಸುಖಮಯ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ