ಒಟ್ಟು 8035 ಕಡೆಗಳಲ್ಲಿ , 127 ದಾಸರು , 4382 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೊ ಜೀವ ನನ್ನ ನುಡಿವ ನಾಲಗೆಯು ನಿನ್ನದೇನೊ ಕಾಣೆ ನಿನ್ನಾ ಬಣ್ಣವನೆನ್ನಾಣೆ ಕೇಳು ಪೇಳುವೆನೂ ಪಭೂತಂಗಳು ಪುಸಿಯೇನೊ ಮಾತೆ ಮಾಯೆಯಲ್ಲವೇನೊಏತಕೀಗರ್ವವು ನೀನು ಜಾತನಾದ ಬಗೆಯೇನೊಕೈತವವ ಬಿಡುುನ್ನೂ ಹೇತು ಹೀನೋಕ್ತಿಗಳೇನುನೀತಿಯಾಗಿ ಪೇಳು ನಾನು ತಾತಪ್ಯಮಾನನಪ್ಪೆನೂ 1ಬಿಸಿಲು ದೊರೆದೇರನೆ ನಾನು ಮಸಿಯಮಾತ ನುಡಿವೆ ನೀನುನಶಿದು ಪೋಪೆನಹುದು ನಾನು ಹಸದೊಳಿಪ್ಪುದುಂಟೆ ನೀನುಸಸಿನೆ ತಿಳಿದುಸುರಿನ್ನು ಕುಸಿಯ ಹಾಕದಿರೆನಿನ್ನೂನುಸುಳುದಾರಿ ಮನವನ್ನು ಹೊಸದು ಕೊಂಡಾಡಿದರೇನು 2ನೋಡುವ ಕಣ್ಣು ನಿನ್ನದೇನೊ ಆಡುವಾಟನಿನ್ನದೇನೊಓಡುವ ಕಾಲು ನಿನ್ನದೇನೊ ನೀಡುವ ಕೈ ನಿನ್ನದೇನೊಬೀಡ ಬಿಡುವರೆ ನೀನು ಗೂಡಾಗಿುದ್ದೆ ನಾನುಕೂಡಲಿಂದ್ರಿಯ ಕರಣ ತಾನು ಕಾಡುಪಾಲಾಗುವೆನೀನು 3ಎದ್ದು ನಡೆದಾಡುವೆ ನಾನು ನಿದ್ರೆಗೈವೆ ಮಲಗಿ ನಾನುಹೊದ್ದುಕೊಂಬೆ ಹೊದಿಕೆಗಳನು ಗದ್ದುಗೆಗಧಿಕಾರಿ ನಾನುಸಿದ್ದಿಯೆನ್ನಿಂದಲೆ ತಾನು ನಿರ್ಧರಿಪುದಿದ ನೀನುಬುದ್ದಿಹೀನನಾಗದಿರಿನ್ನು ಬದ್ಧವಾಡು ಕೇಳ್ವೆ ನಾನು 4ತಿರುಪತೀಶನಂಘ್ರಿ ನಾನು ಬರಿಯ ಪ್ರತಿಬಿಂಬ ನೀನುಗುರುವಾಸುದೇವಾರ್ಯರನ್ನು ಎರಗಿ ಸಂಪಾದಿಸಿದೆ ನಾನುಕರೆದು ಬಿಗಿದಪ್ಪಿದರೆನ್ನುವನು ಒರೆಯೆ ಕಿವಿಯೊಳ್ಮಂತ್ರವನ್ನುಭರದಲೆನ್ನ ಜಿಹ್ವೆ ಜಪಿಸಿ ಅಂತೆನೆಂಬೆ ನಿನ್ನ ನೀನು 5ಕಂ||ಒರಟುತ್ತರದಿಂದ ದೇಹವು ಬರಿ ಜಗಳವ ತೆಗೆಯೆ ಜೀವನರಿತಿದರಂದವ ನೆರೆಮೂರ್ಖರ ದಾರಿಯೊಳಗೆಬರುತರುಪುವ ಜಾಣನೆಂದು ನೀತಿಯ ನುಡಿದಂ
--------------
ತಿಮ್ಮಪ್ಪದಾಸರು
ಏಸುಬಾರಿ ಬೇಡಿದರೆ ಹೇಗಾಯಿತು ಹರೇ ವಾಸುದೇವನೆ ನಿನ್ನ ಧ್ಯಾನಕೆ ಸರಿಬಾರದಿರೆ ಪ ಪರಿ ಘಾಸಿಗೊಳಗಾಗಿ ಬಹು ಕ್ಲೇಶದಿಂದಲಿ ನಿನ್ನ ಆಶಿಸಿದವನಾ ಭೂಸುರ ಧೊರಿಯೆ ಶ್ರೀನಿವಾಸ ವೇಣುಗೋಪಾಲ ಕೂಸಿನಂದದಿ ಎತ್ತಿ ಪೋಷಿಸುವುದು ನಿನಗೆ ಹುಟ್ಟದೊ 1 ಸಂಸಾರ ವೆಂಬಂಥ ಶರಧಿಯೊಳು ಮುಳುಗಿ ಬಹು ಹಿಂಸೆ ಬಡುತಲಿ ಬಹಳ ಹೀನನಾಗಿ ಕಂಸಮರ್ದನನಾದ ಘನಮಹಿಮಗೋವಿಂದ ಸಂಶಯವಿಲ್ಲದೆ ನಿಮ್ಮ ಸ್ಮರಿಸುತಲಿ ಅನುದಿನವೂ 2 ಅಘಹರನೆ ನಗಧರನೆ ಆದಿ ಪರಾಕ್ರಮನೆ ನಿಗಮಗೋಚರನಾದ ಘನ 'ಹೊನ್ನ ವಿಠ್ಠಲ 'ನೆ ಜಗತ್ಕರ್ತನೆ ನಿನ್ನ ಚಿಂತನೆಯೆ ಅನುದಿನವೂ ಕರುಣಹುಟ್ಟದೇನು 3
--------------
ಹೆನ್ನೆರಂಗದಾಸರು
ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ ಭಾಳ ಹೊತ್ತಾಯಿತು ವೈಕುಂಠವಾಸೆ ಪ. ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ ಸೃಷ್ಟಿಕಾರ್ಯಕೆ ಅನುವಾಗಬೇಕು 1 ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು ಮುಕುತಿಯೋಗ್ಯರ ಸೇವೆ ಕೊಳ್ಳಬೇಕು ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು ಅಕಳಂಕÉ ಆದಿದೇವತೆ ಎನಿಸಬೇಕು 2 ಶ್ರೀ ಪದ್ಮಭವೆ ವೆಂಕಟೇಶನ ಕೂಡುತ ನೀ ಪರಿಪರಿ ಲೀಲೆಗೈಯ್ಯಬೇಕು ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ ವ್ಯಾಪಿಸಿ ಭಕ್ತರ ಕಾಪಾಡಬೇಕು 3
--------------
ಅಂಬಾಬಾಯಿ
ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ ಕಾಲನಾಮಕ ಸೂರ್ಯದೇವನ ರಥದ ಕೆಂ- ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ. ಮರುತಸುತನೆದ್ದು ಪರಾಕ್ಹೇಳುತಿಹನು ಗರುಡನು ಹೊರಬಾಗಿಲೊಳು ಕಾದಿರುವನು ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು1 ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು ಭೂರಿ ಕುತೂಹಲದಿ ನಿನ್ನ ದರುಶನಕಾಗಿ ವಾರಿಜಭವ ಮುಖ್ಯ ಸರುವ ದೇವತೆಗಳು ಸಾರಿ ಬರುತಿರುವರು ನೀನೇಳಮ್ಮಯ್ಯಾ 2 ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ ಶ್ರೀಪತಿಯು ಶೇಷತಲ್ಪದಿಂದೇಳನು ಅಪಾರಮಹಿಮ ಶ್ರೀ ರಂಗೇಶವಿಠಲನ ವ್ಯಾಪಾರಂಗಳನರಿತವರಿನ್ನ್ಯಾರಮ್ಮ 3
--------------
ರಂಗೇಶವಿಠಲದಾಸರು
ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ ಬಾಗಿಲಲಿ ಕೂಗುವರು ಸನಕಾದಿ ಮುನಿವರರು ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು ಯೋಗಿಗಳು ಪೊಗಳುವರು ನಿನ್ನಂಘ್ರಿಯ 1 ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ ಗಂಗೆಯನು ಬಿಟ್ಟೇಳು ಜಗದೀಶನೆ | ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ 2 ಥಟ್ಟನೆ ಏಳು ಯಾದವರಿಗರಸ | ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ ಪುಟ್ಟ ವಾಲೆಯ ತಂದ ನೀ ನೋಡು ನೋಡು 3 ಕೋಪಿಗಳರಸಾದಿ ದುರ್ವಾಸ ಮುನಿ ಬಂದ | ಇಂಪಾಗಿ ಪಾಡುತಿಹ ಸುರಮುನಿಯು ಬಂದ | ಕೋಪದೊಳೊದೆದ ಮುನಿ ಬಂದ ಬೇಗೇಳು ಪುಷ್ಪಶರ ಮಗ ಬಂದ ಬೇಗೇಳು ರಂಗ 4 ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ | ಮಾರುತಿಯ ಜಪವಿನ್ನು ಮುಗಿಯಲಿಲ್ಲೊ | ನರರೆಲ್ಲ ನಗುವಂತೆ ಮಾಡದಿರೊ ರಂಗ 5
--------------
ವಿಶ್ವೇಂದ್ರತೀರ್ಥ
ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ ಏಳಯ್ಯ ರಾಜೀವನಯನ ನವನೀತಚೋರ ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ ಕನಕಭೂಷಣದ ಕಾಂತೆಯರು ಆರತಿಪಿಡಿಯೆ ಅನುಪಮಗೆ ಜಯವೆಂದು ಬಂದು ನಿಂದೈದಾರೆ ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ 1 ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು ಬಹುವಿಧದಿ ಕಶ್ಯಪರು ಹನುಮಂತ ತುಂಬುರರು ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು 2 ದೇವಗಂಗೆಯಕೊಂಡು ದೇವರ್ಕಳೈದಿದರು ದೇವತಾವಳಿ ಬಂದು ದೇವ ಜಯವೆನುತಿಹರು ದೇವಪುರದಲಿ ನಿಂದ ದೇವಕಿಯ ವರಕಂದ ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ 3
--------------
ಕವಿ ಲಕ್ಷ್ಮೀಶ
ಏಳಯ್ಯ ಸ್ವಾಮಿ ಏಳಯ್ಯ ಪ ಏಳು ಇಂದ್ರಾದಿ ಸುರಾಳಿಗಳೆಲ್ಲ ನಿ- ನ್ನೂಳಿಗ ಬಯಸಿ ಕಾದಿರುವರೊ ಕೃಷ್ಣಾ ಅ.ಪ ವಕ್ಕಿತನಯ ಬೇಗ ಏಳಯ್ಯ ಜಾಕೃತಿ ತೋರುವೆ ಏಳಯ್ಯ 1 ಮುರಿದ ಮಹಾತ್ಮನೆ ಏಳಯ್ಯ ತರುಣಿಯರೊಡನೆ ರಾಸಕ್ರೀಡೆಯಾಡಿದ ಪರಮ ರಸಿಕನೀನು ಏಳಯ್ಯ 2 ಬಲ್ಲಿದನು ನೀನಂತೇಳಯ್ಯ ನಿಲ್ಲಿಸುವರೆ ಬೇಗ ಏಳಯ್ಯ 3 ದೇವಿ ಕೈ ಪಿಡಿಯಲು ಏಳಯ್ಯ ಭಾವಜಪಿತ ಕೃಷ್ಣ ಏಳಯ್ಯ 4 ನರಗೆ ಸಾರಥಿಯಾಗಿ ಜಯವ ಕೊಡಿಸಿ ಯುಧಿ | ಷ್ಠಿರಗೆ ಪಟ್ಟವಗಟ್ಟು ಏಳಯ್ಯ ನರನಂತೆ ನಟಿಸಿ ದಾಸರ ಪರಿಪಾಲಿಪ | ಗುರುರಾಮ ವಿಠಲನೆ ಏಳಯ್ಯ 5
--------------
ಗುರುರಾಮವಿಠಲ
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಝಂಕರಿಸಿ ಶುಕಪಿಕ ಮೃಗಾದಿ ಯೆ-| ಕರುಣಾಳುಗಳ ದೇವನೆ 1 ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ಕಲಿಸಿ ಮಂದಿರದೊಳಗೆ ಎಳೆಬಾಳೆ | ಶೃಂಗರಿಸಿದರು ಅರವಿಂದನಾಭ ಚೆಲುವ 2 ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3 ಪರಮ ಭಾಗವತರು ಬತ್ತೀಸರಾಗದಲಿ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಪರಿ ಪರಿ ಕೊಂಡಾಡುತಿರಲು | ಕುಣಿಯುತಿದೆ ಸುರನಿಕರ ಪರಿಪಾಲಿಕ 4 ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಕಿನ್ನರ ಸಾಮ | ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5 ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6 ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ 8 ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ9
--------------
ವಿಜಯದಾಸ
ಏಳು ಏಳು ಕೇಶವಾ ಶ್ರೀಮಾಧವಾ ಏಳು ಏಳು ಕೇಶವಾ ಪ ಏಳಯ್ಯ ಮಧುಸೂದನ ಚಕ್ರಧಾರೀ ಏಳಯ್ಯ ನಿಜಶೌರಿ ದಶರೂಪಧಾರೀ ಏಳಯ್ಯ ದೇವಕಿಕಂದ ಉದಾರೀ ಏಳಯ್ಯ ಮುರಹರ ಕೌಸ್ತುಭಧಾರೀ1 ತ್ರಿಜಗವನ್ನು ಬೇಗ ಪಾಲಿಸಲೇಳು ಭಜಕರ ಕರುಣದಿ ರಕ್ಷಿಸಲÉೀಳÀು ಸುಜನರ ಮರೆಯದೆ ವರದೆತ್ತಲಿಕೆ ಯೇಳು ಕುಜನರ ಹರುಷದಿ ತರಿಯಲೇಳು 2 ದಾಸದಾಸರು ಬಂದು ಸೇವಿಸುತಿಹರೇಳು ತಾಸು ತಾಸಿಗೆ ತತ್ವವರುಹಲೇಳು ದಾಸಗೆ ನಿತ್ಯದಿ ಭಾಸವಾಗಲೇಳು ದಾಸಗೆ ಮುಕ್ತಿಯ ಪಾಲಿಸಲೇಳು 3 ಅರುಣೋದಯವಾಯ್ತು ಕಿರುಣೋದಯವಾಯ್ತು ಭರದಿಂದ ಸೂರ್ಯನು ಮೇಲೇರುತಿಹನು ಚರಣ ಕಿಂಕರರೆಲ್ಲ ಸಂಸಾರ ಶರಧಿಯ ಸರಸದಿ ದಾಂಟಿ ನಿಂನನು ಸೇರುತಿಹರು 4 ವಿದ್ಯೆಯರುಹಲು ಯೇಳು ಜ್ಞಾನವೀಯಲು ಯೇಳು ಬುದ್ದಿಯ ಕಲಿಸಿ ಆತ್ಮವ ಸೇರಲೇಳು ಮದ್ದು ಭವರೋಗಕ್ಕೆ ಬೇಗನೀಯಲು ಯೇಳು ಎದ್ದು ಲೋಕಕ್ಕೆ ನೀ ಬೆಳಗಲೇಳು 5 ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ ದೀನದಾಸರು ಬಂದು ಘನಭಕ್ತಿಯಿಂದ ನಿತ್ಯ ಮಾಡುವರಯ್ಯ ಚನ್ನಕೇಶವಾ ಸೇವೆ ಸ್ವೀಕರಿಸೇಳು 6
--------------
ಕರ್ಕಿ ಕೇಶವದಾಸ
ಏಳು ನಾರಾಯಣನೆ - ಏಳು ವಾಸುದೇವಏಳು ಕೃಷ್ಣಾಚ್ಯುತನೆ _ ಏಳು ಹೇ ಮಾಧವಾ ಪ ಏಳು ವೈಕುಂಠನೇ - ಏಳು ಕಾರುಣ್ಯನೇಏಳು ಲಕ್ಷ್ಮೀಶನೇ - ಏಳು ಭಗವಂತ ನಮಿಪೇ 1 ಏಳು ಮಧ್ವೇಶನೇ _ ಏಳು ಪ್ರಾಣೇಶನೇಏಳು ರುದ್ರೇಶನೇ - ಏಳಾಂಬಿಕೇಶಾ 2 ಏಳು ಇಂದ್ರೇಶನೇ - ಏಳು ಶಚಿಗೀಶನೇಏಳು ವಿಪ್ರೇಕ ಭ - ಕೇಶನೆ ಗೋಪತೇ 3 ಕಾರುಣಿಕ ಮೂರ್ತೇ4 ಏಳು ಸಾಮ ಪ್ರಿಯನೆ - ಸರ್ವ ಕಾರಣ ಮೂರ್ತೆಏಳು ವೇದಾರ್ಥ ಪ್ರಿಯ - ಸರ್ವದಾ ಇಹನೇ 5 ಏಳು ಗದ್ಯ ಪ್ರಿಯನೆ - ಪುರಾಣ ಪುರುಷನೇಏಳು ಸ್ತೋತ್ರ ಪ್ರಿಯನೆ - ಸರ್ವದಾ ವಿಶ್ವಮೂರ್ತಿ 6 ಏಳು ಗುರು ಹೃದಯನೇ - ಪವನಾಂತರಾತ್ಮನೇಏಳು ಗುರು ಗೋವಿಂದ - ವಿಠಲ ಹಯವದನ 7
--------------
ಗುರುಗೋವಿಂದವಿಠಲರು
ಏಳು ನಿದ್ದೆಯು ಸಾಕು ರಂಗನಾಥ ಪ ತಾಳು ತಾಳೆನಲೇಕೆ ಮಾಂಗಿರಿ ನಿವಾಸ ಅ.ಪ ಜಗವ ಪೋಷಿಪಚಿಂತೆ | ಮಿಗಿಲಾದ ದೇವಂಗೆ ಸೊಗಸಾದ ನಿದ್ದೆಯಾಪರಿವುಂಟೇ ನಗಜಗವ ಪೊತ್ತವನ ಬಳಗವು ಏನೆಂಬೇ ನಗೆಬೇಡ ಕಣ್ತೆರೆಯೊ ಮಾಂiÀiಕಾರ 1 ನಿದ್ದೆಗೆಡಿಸಲು ಪಾಪ ಇದ್ದರೆ ನನಗಿರಲಯ್ಯ ಸದ್ದಿಲ್ಲದಿಹುದೇ ಭಕ್ತರು ಹಾಡಿ ಕುಣಿಯೇ ಒದ್ದಮುನಿಗಾ ಪಾಪವಿದ್ದಿತೇ ಕರುಣಾಳು ಎದ್ದು ಬಾ ಬಾರೈಯ ಮಾರನಯ್ಯ 2 ಬಲ್ಲೆ ಬಲ್ಲೆನು ನಿನ್ನ ಚೆಲ್ಲಾಟಗಳನೆಲ್ಲ ಬೆಲ್ಲವನು ಕಂಡಿರುವೆ ಮುತ್ತದಿಹುದೇ ಸಿರಿ ಮಾಂಗಿರಿಯ ರಂಗ [ಒಲ್ಲೆನದೆ ಈಯಯ್ಯ ಎನಗು ಬೆಲ್ಲದಸವಿಯ]3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಳು ಪಂಡರಿವಾಸ ಏಳು ಶ್ರೀ ದೇವೇಶ ಏಳು ಮುಕ್ತ ಗಿರೀಶ ಏಳು ಹೃದೇಶ ಪ. ಏಳು ಮೂಲೋಕದೀಶ ಏಳು ಹೃತ್ಪದವಾಸ ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ. ಗಂಗಾ ಭಾಗೀರಥಿ ತುಂಗಭದ್ರಾ ಯಮುನ ಸಂಗಮ ತ್ರೀವೇಣಿ ಸರಸ್ವತಿ ಸರಯೂ ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ 1 ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ ನಿನಗೆ ತೈಲವನೊತ್ತಿ ಎರೆವೆನೆಂದು ಕನಕ ರತ್ನದಿ ಭೂಷಿತರಾದ ದೇವ ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ 2 ಪಂಚಬಾಣನ ಪಿತನೆ ಪಂಚಾಮೃತ ತಂದು ಪಂಚಕನ್ನೆಯರು ಎರೆವೆನೆಂದು ಮಿಂಚು ಕೋಟಿಯತೇಜಾಭರಣ ಪೀತಾಂಬರ ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು 3 ಕಸ್ತೂರಿ ತಿಲಕವು ಕನಕಾಂಬರದ ಶಾಲು ಸುತ್ತಿದ ಮುಂಡಾಸು ಶೃಂಗರಿಸಿ ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ 4 ಪಾಪರಹಿತ ಏಳು ಪಾವನ್ನ ರೂಪ ಏಳು ಗೋಪಾಲಕೃಷ್ಣವಿಠಲ ಹರಿ ಏಳು ಶ್ರೀಪದ್ಮಭವಮುಖರಾಪಾರ ಮುನಿಗಳು ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ5
--------------
ಅಂಬಾಬಾಯಿ
ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ ಏಳಯ್ಯ ಬೆಳಗಾಯಿತು ಹರಿಯೇ ಪ. ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಲಕ್ಷ್ಮಿಯೊಡನಿರಲೂ ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು 1 ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸೀ ದಳ ತಂದು ವಾಸುಕೀಶಯನಗೆಂದು ಭೂಸುರರು ನಿಂದಾರೆ ವೇದ ಘೋಷದಿಂದ ಈಸು ನುಡಿಗಳು ನಿನ್ನ ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ ನಿನ್ನ ಸರಸದೊಳು ವಾಸುಕೀಶಯನ ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು2 ಕರುಣಾಸಾಗರ ನಿನಗೆ ಕರುಣೆ ಬರುವಾತೆರ ಪರಿಪರಿಯ ಸ್ತೋತ್ರದೊಳು ನಾರಿಯೇರು ಕರೆವರೋ ಕರಗತ ಕಾಮಧೇನು ನೀನೆಂದು ಕರದೊಳಾರತಿಯ ಪಿಡಿದೂ ತರತರದ ಉಡಿಗೆ ತೊಡಿಗೆ ನಿನಗೀಯಲು ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ ಶರಧಿ ಗಂಭೀರನೆ ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ ಏಳಯ್ಯ ಬೆಳಗಾಯಿತು 3
--------------
ಸರಸ್ವತಿ ಬಾಯಿ
ಒಡಲಿಗೊಡೆಯನೆ | ಬೇಡಿಕೊಂಬೇಮಡದಿ ಮಕ್ಕಳ ಮೋಹ | ನೀನಾಗಿ ಬಿಡಿಸೋ ಪ ಚತ್ವಾರಿಂಶತ್ ಸಪ್ತ | ವರುಷ ಸಂದವು ಇಂದುಚತುರಾಸ್ಯ ಪಿತ ನೀನೆ | ಸಲಹೋ ಎನ್ನಚತುರ ಮೂತ್ರ್ಯಾತ್ಮಕನು | ಹರಿ ನಿನ್ನ ನೆನೆಯದಲೆಚತುರ ನಾರಿಯ ರೂಪ | ನೆನೆಸುತ್ತಲಿರುವೇ 1 ತತುವಾಭಿಮಾನಿ ದೇ | ವತೆಗಳೆಲ್ಲರು ಎನಗೆಮತಿ ಭ್ರಾಂತಿ ಬಡಿಸುವರೊ | ಹೃಷಿಕೇಶನೇ |ವಿತತ ಮೂರುತಿ ನಿನ್ನ | ಸತತ ನೆನಸೂವಂಥಮತಿಯನಿತ್ತಾದರಿಸೊ | ಕೃತಿರಮಣ ದೇವ 2 ಸದನ ಭವ ಭಂಗ 3
--------------
ಗುರುಗೋವಿಂದವಿಠಲರು