ಒಟ್ಟು 3326 ಕಡೆಗಳಲ್ಲಿ , 121 ದಾಸರು , 2343 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆ ಬಿಡಲಿಲ್ಲಾ ಎನ್ನಂತ ತಿಳಿಯಲಿಲ್ಲಾ ಪಾದ ಕಾಣದೇ ವ್ಯರ್ಥ ಸತ್ತೆನಲ್ಲಾ ಪ ನೀರಮೇಲಣಗುಳ್ಳೆ ಸಂಸಾರವೆಂಬುವ ಬಳ್ಳಿ ತೋರಿ ಯಡಗೋದಿಲ್ಲ ಆಧಾರ ಗತಿಗೆ ಅಲ್ಲಿ ನೀರಜದೆನೆ ನೀರಿನ ಸಂಗ ಪರಿ ಇರುತಿಹೆ 1 ಹೆಣ್ಣು ಹೊನ್ನು ಮಣ್ಣು ಜೀವ ಭವ ಪೆಣ್ಣು ಫಣಿಗಣ್ಣಗೆ ಬಿಡದಿನ್ನು ಬೆಣ್ಣೆ ಜಲವ ಉಣ್ಣದ ಪರಿ ಕುನ್ನಿ ವಿಷಯಗಣ್ಣಿಸದಿಹೇ 2 ಶುಭಗುಣಗಣ ಹೃದಯ ಎನಗಭಯವೀಯೋ ಸದಯಾ ಪ್ರಭು ನರಸಿಂಹ ವಿಠಲಯ್ಯಾ ನಿನ- ಗಭಿನಮಿಸುವೆನಯ್ಯಾ ಸುಭಗ ನಿನ್ನ ಪಿಡಿದೆನಯ್ಯಾ ಶುಭಕರ ಸಿರಿಮೊಗ ತೋರಯ್ಯಾ 3
--------------
ನರಸಿಂಹವಿಠಲರು
ಚಿಂತೆಯನು ಪರಿಹರಿಸು ಚಂದ್ರವದನೇ ಪ ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ. ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ 1 ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ2 ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ 3
--------------
ತಂದೆವರದಗೋಪಾಲವಿಠಲರು
ಚಿಂತೆಯಾತಕೊ ಮಾನವಾ ಭಜಿಸು ಶ್ರೀ- ಕಾಂತಾಖ್ಯ ಸುರಕಾಮಧೇನುವಾ ಅಂತಪಾರಗಳಿಲ್ಲದಾಸೆ ಕಡಲೊಳು ಬಿದ್ದು ಭ್ರಾಂತಿಗೊಳಿಸದೆ ಮನವ ಬಳಲಿಸದಿರು ತನುವ ಪ. ಸಂಸಾರವೆಂಬುವುದು ಸುಖ ದುಃಖ ಮಿಶ್ರಿತವು ಕಂಸಾರಿವಶದೊಳಿಹವು ಶೋಣಿತ ಪೂಯ ಕೇಶ ಕ್ರಿಮಿ ದಂಶ ಪೂರಿತ ದೇಹವು ಹಿಂಸೆಯಾಗುವ ಮೊದಲೇ ಹರಿಕೃಪಾಸುಧೆಯ ಲೇ- ಶಾಂಶ ಸಂಪಾದಿಸಿ ನಿಜಾಂಶ ಸುಖವನು ಸೇರು 1 ಹಿಂದಿನನುಭವ ಗ್ರಹಿಸು ಹರಿಯ ಮಹಿಮೆಯ ಸ್ಮರಿಸು ಮಂದ ಭಾವನೆ ವಾರಿಸು ಮುಂದಾಹದೇನೆಂದು ಕುಂದದಿರು ಧೈರ್ಯದಿಂ- ದಿಂದಿರೇಶನ ಪೂಜಿಸು ತಂದೆ ತಾಯಿಗಳು ತಮ್ಮ ಕಂದನನು ಪೊರೆವ ಪರಿ- ಯಿಂದ ಸಲಹೆಂದು ಗೋವಿಂದನಲಿ ಮೊರೆಯಿರಿಸು 2 ದೃಢ ಭಕುತಿಯಿಂದ ತನ್ನಡಿಯ ಸೇರಿದ ಜನರ ಬಿಡನು ಭಕ್ತಾರ್ತಿಹರನು ಪುಡಿಮಾಳ್ಪದುರಿತಗಳ ಪೂರ್ವದಲಿ ಪೊರೆದಂತೆ ಕೊಡವನಖಿಳಾರ್ಥಗಳನು ಮೃಡವಂದ್ಯ ಶೇಷಾದ್ರಿ ಒಡೆಯನಿರಲ್ಯಾಕೆ ಕಂ- ಗೆಡುವಿ ಎಂದಿಗು ನಿನ್ನ ಕಡೆ ಹಾಯಿಸುವ ಹರಿಯು 3
--------------
ತುಪಾಕಿ ವೆಂಕಟರಮಣಾಚಾರ್ಯ
ಚಿಂತೆಯಿಲ್ಲದ ನರನು ಧರೆಯೊಳಗಿಹನೇ ಅಂತರಂಗದಿ ನಮ್ಮ ರಂಗನಿಲ್ಲದಿರೆ ಪ ಅಂತರಂಗದಿ ಶುದ್ಧಿ ಇಲ್ಲದಿರೆ ರಂಗಯ್ಯ ಎಂತು ನೀನಿಹೆಯಯ್ಯ ಮಾನಸದಿ ಸ್ವಾಮಿ ಅ.ಪ ಧನಧಾನ್ಯಗಳ ಚಿಂತೆ ಕನಕದೊಡವೆಯ ಚಿಂತೆ ತನುಜ ತನುಜೆಯರನ್ನು ಪಡೆವ ಚಿಂತೆ ಅನಿಶ ಯೌವ್ವನವಾಂತು ಕನಸು ನನಸುಗಳಲ್ಲಿ ವನಿತೆಯರನೊಡಗೂಡಿ ಭೋಗಿಸುವ ಚಿಂತೆ 1 ಉಡಿಗೆ ತೊಡಿಗೆಯ ಚಿಂತೆ ಉಡುವೆನೆಂಬಾ ಚಿಂತೆ ಒಡಲ ಪೋಷಿಪ ಚಿಂತೆ ಕಡಲಲೆಗಳಂತೆ ಪಿಡಿದೆನ್ನ ಬಾಧಿಪುವು ಬಿಡಿಸೆಲ್ಲ ಚಿಂತೆಗಳ ಕೊಡು ನಿನ್ನ ಸೇವೆಯನು ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು
ಚಿತ್ತಜನಯ್ಯನ ಚಿಂತಿಸು ಮನವೇಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ಪ ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿಕಾಲಪಾಶದೊಳಿಟ್ಟು ಶೂಲದಿಂದಿರಿವಾಗಪಾಲಿಸುವರುಂಟೆ ಜಾಲವ ಮಾಡದೆ 1 ದಂಡಧರನ ಭಟರು ಚಂಡಕೋಪದಿ ಬಂದುಕೆಂಡದ ನದಿಯ ತಡಿಗೆ ಕೊಂಡೊಯ್ದುಖಂಡಖಂಡವ ಕಿತ್ತು ಕೆಂಡದೊಳಿಡುವಾಗಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ 2 ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡುಕಂಗಳಿಗೆ ಸೀಸವ ಕಾಸಿ ಪೊಯ್ಯಲುತಂಗಿ ಅಕ್ಕ ಬಂದು ಭಂಗವ ಬಿಡಿಸುವರೆಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ 3
--------------
ಶ್ರೀಪಾದರಾಜರು
ಚಿತ್ತಾಭಿಮಾನಿ ನೀನು ಮತ್ತೆ ನಾ ಬಲಗೊಂಡು ದುಷ್ಟವಿಷಯಕ್ಕೆ ಎರಗುವÀ ಮನವನ್ನು ಅಚ್ಚುತನ ಚರಣದಲಿ ಇರಿಸುವೆ1 ಮನದಭಿಮಾನಿಯೆ ಇವನ ನಾ ಬಲಗೊಂಡು ದುರುಳ ವಿಷಯಕೆ ಎರಗುವ ಮನವನ್ನು ನರಹರಿಯ ಚರಣದಲಿ ಇರಿಸುವೆ 2 ಅಚ್ಚುತನೆ ನಾ ನಿನ್ನ ಹೆಚ್ಚು ಬೇಡೋದಿಲ್ಲ ಕಷ್ಟಕಾಲದಲ್ಲಿ ಹರಿಯೆಂಬ ಸ್ಮರಣೀಯೊ ರಕ್ಷಿಸೋ ಲಕ್ಷ್ಮೀರಮಣನೆ 3 ನರಹರಿಯೆ ನಾ ನಿನ್ನ ಹಿರಿದ ಬೇಡೋಳಲ್ಲ ಸರ್ವಕಾಲದಲಿ ಹರಿಯೆಂಬೋ ಸ್ಮರಣೀಯ ಕರುಣಿಸೋ ಲಕ್ಷ್ಮೀರಮಣನೆ 4 ಪಾಲ್ಗಂಜಿಯೆಂದರೆ ಅರಗಂಜಿಯಾಹೋದೆ ಲಕ್ಷ್ಮೀರಮಣಗೆ ಎಂಟುಗುಣಳುಂಟೆಂದರೆ ಮೇಲಿದ್ದ ಗುಣಗಳಡಗೋದೆ 5 ಪಂಚಕನ ದೇಹದಲಿ ನಿಂತೆರಡು ಪಕ್ಷಿಗಳು ಸಂತತ ದುಃಖಿ ಸುಖಿಯೊಬ್ಬ ಜೀವಗೆ ನಿಂತು ಸುಖ ದುಃಖ ಕೊಡುತಿತ್ತು 6 ಪಂಚಮೂರುತಿ ಹರಿಯ ಅಂತರಂಗದಿ ಇಟ್ಟು ಸಂತತ ಸ್ವಪ್ನ ಸುಷುಪ್ತಿ ಏರಿಸುವ ಪ್ರಾರ್ಥಿಸಿ ಪ್ರಾಜ್ಞರಿಗೆ ಸರಿಯೆಂಬೆ7 ಈ ಜಾಗ್ರದವಸ್ಥೆಯಲಿ ನಾನಾವಿಧ ಕರ್ಮಗಳ ಪ್ರೇರಿಸಿ ಸಕಲ ಶ್ರೀಕಾರ ಮಾಡುವೊ ಸ್ವಾಮಿ ಶ್ರೀಹರಿಗೆ ಶರಣೆಂಬೆ 8 ನಡೆವುದು ನಿನ್ನ ಯಾತ್ರೆ ನುಡಿವುದು ನಿನ್ನ ನಾಮಸ್ಮರಣೆ ಅಡಿಯಿಡೋದೆಲ್ಲ ಹರಿಯಾತ್ರೆ ಗುರುಪೂಜೆ ಸ್ಮರಣೇಯ ಪಾಲಿಸೋ ಲಕ್ಷ್ಮೀರಮಣನೆ 9 ವಿಷ್ಣುಭಕ್ತಿಯಿಲ್ಲದೋರ ಹತ್ತಿರ ನಾನಿರೆ ಎಚ್ಚರಿತು ಮಾಡೆ ಗೆಳೆತನವ ಅವರ ಕಂಡರೆ ನಾನು ಕಿಚ್ಚ ಕಂಡಂತೆ ಕೊಲ್ಲಿಸುವೆ 10 ಹರಿಭಕ್ತಿಯಿಲ್ಲದೋರ ಹತ್ತಿರಲಿ ನಾನಿರೆ ಅರೆಘಳಿಗೆ ಮಾಡಿ ಗೆಳೆತನವ ಅವರ ಕಂಡರೆ ತಾನು ಉರಿಯ ಕಂಡಂತೆ ತೊಲಗುವೆ 11 ಕಾಶೀಪಟ್ಟಣ ಶ್ರೀ ವಾಸುದೇವರು ಭೂಮಿ ಹರಿದಾಸರು ಕಟ್ಟಿಸಿದ ಸ್ಥಳದಲ್ಲಿ ಹರಿಯ ನಿಜದಾಸಗೆ ವಿಶ್ವನಾಥನೆಂತೆಂಬೊ ಪೆಸರುಂಟು 12 ಹರಿದಾಸರ ಒಳಗೆ ಪರಮ ವೈಷ್ಣವನ್ಯಾರೆ ಕಿರಿಯ ಕೆಂಜೆÉಡೆಯ ಮಕುಟನೆ ಅಜನ ಸುತನಾ ಶಿವನು ಹರಿದಾಸಕಾಣೆ ಹುಸಿಯಲ್ಲ13 ಗುಣಮಣಿಧಾಮಗೆ ಮಣಿದೊಮ್ಮೆ ಇಕ್ಕದೆ ಹಲವು ದೈವಗಳ ಭಜಿಸಿದ ಪಾಪಿ ನೀನು ಮಣಿಮಂತ ಹೋದಗತಿಗ್ಹೋಗ್ವೆ 14 ಎದ್ದು ತಮಸಿಗೆ ಉರುಳುವೊ ಪಾಪಿ ನೀ ಅದ್ವೈತ ಹ್ಯಾಗೆ ಬಿಡದ್ಹೋದಿ 15 ಅಳಿದ್ಹೋಗೊ ಶರೀರವನು ನರಹರಿಗೆ ಸರಿಯೆಂಬೆ ಬಿಡದೆ ತಮಸಿಗೆ ಉರುಳವೊ ಪಾಪಿ ನೀ ಚಲಹವನು ಹ್ಯಾಗೆ ಬಿಡದ್ಹೋದಿ 16 ನಾಶ್ವಾಗೊ ಶರೀರವನು ವಾಸುದೇವಗೆ ಸರಿಯೆಂಬೆ ಹೇಸದೆ ತಮಸಿಗೆ ಉರುಳವೊ ಪಾಪಿ ನೀ ವಾಸನೆ ಹ್ಯಾಗೆ ಬಿಡದ್ಹೋದಿ 17 ಈ ಸೃಷ್ಟಿಯೊಳಗೆ ಅಚ್ಚುತಗೆ ಸರಿಯುಂಟೆ ಮೆಚ್ಚಿ ನೀ ಮನವೆ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 18 ಭೂಮಿಯೊಳಗೆ ಶ್ರೀರಾಮನಿಗೆ ಸರಿಯುಂಟೆ ಮಾನುನೀ ಮನವೇ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?)ಎಲೆಯ ಒತ್ತಿ ಹಿಂಡಿದರೆ ರಸವುಂಟೆ 19 ಭೂಮಂಡಲದೊಳಗೆ ರಂಗಗೆ ಸರಿಯುಂಟೆ ಅಂದು ನೀ ಮನವೆ ಕೆಡಬೇಡ ಅಲ್ಲಿತ್ತಾರಾ (ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 20 ವಿಷ್ಣು ಸರ್ವೋತ್ತಮನೆಂದು ಇಟ್ಟರೆ ಮುಂಡಿಗೆಯ ಮುಟ್ಟಲಂಜಿದನೆ ಪರವಾದಿ ಪರವಾದಿ ತತ್ವದ ಬಟ್ಟೇನೂ ಕಾಣದಿರುತಿದ್ದ21 ಹರಿಸರ್ವೋತ್ತಮನೆಂದು ಇರಿಸಿದರೆ ಮುಂಡಿಗೆಯ ಹಿಡಿಯಲಂಜಿದನೆ ಪರವಾದಿ ಪರವಾದಿ ತತ್ವದ ವಿವರವನು ಕಾಣದಿರುತಿಹ 22 ಅರಣ್ಯದ ಅಡವೀಲಿ ಗೋಡೇನು ಹಾಕಿದರೆ ಯಾರು ಕೂಲೀನಕೊಡುವೋರು ಸಂಕರನ ಮತವನು ಮಾಯದಿಂ ಮೆಚ್ಚಿ ಕೆಡಬ್ಯಾಡ 23 ಅತ್ತಿಹಣ್ಣಿನಂತೆ ಮಿಥ್ಯವಾದಿಮತ ಬಿಚ್ಚಿನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಮುತ್ತಿನ ಸರವ ತೆಗೆದಂತೆ 24 ಆಲಹಂಣೀನಸಂತೆ ಮಾಯಾವಾದಿಮತ ಸೀಳಿ ನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಹೂವ್ವಿನ ಸರವ ತೆಗೆದಂತೆ 25 ಭಾಗವತ ಅರ್ಥಸಾರವೆಲ್ಲವ ತಿಳಿದು ಹೇಳಿದನೆ ತತ್ವ ಕಥೆಗಳ ಜ್ಞಾನ ಭಕ್ತಿವೈರಾಗ್ಯವ ಈವನೆ ನಮ್ಮ ಹಯವದನ 26
--------------
ವಾದಿರಾಜ
ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1 ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು ಮತ್ಯಾರ ಭಯವೂ ನಮಗಿಲ್ಲ 2 ಯಮಧರ್ಮರಾಯಗೆ ನಮೋ ನಮೋ ನಾನೆಂಬೆ ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ ಅನುಮಾನವೇಕೆ ಸಲಹೆನ್ನ 3 ರಂಗ ರಂಗಾಯೆಂದು ರಂಗನ್ನ ನೆನೆದರೆ ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4 ಸಾಮಜವರದನು ಭೀಮೇಶಕೃಷ್ಣನು ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ ಪ್ರೇಮದಲಿ ಎನ್ನ ಸಲಹಲಿ 5
--------------
ಹರಪನಹಳ್ಳಿಭೀಮವ್ವ
ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ ಸರಸಿರುಹ ಸಖ ಶತಕೋಟಿ ತೇಜಾ ಪರಭಕ್ತ ಜನ ಸುರ ಭೂಜಾ ಕರುಣಾ ಸಾಗರ ಅತ್ರಿ ತನುಜಾ ಮೊರೆ ಹೊಕ್ಕವರ ರಾಜಾಧೀರಾಜಾ 1 ಪತಿತ ಜನರ ಮಾಡುತಿಹೆ ಉದ್ಧಾರಾ ಚತುರ್ದಶ ಭುವನಾಧಾರ ಅತಿಕೀರ್ತಿ ಸು ಶೋಭಿತ ದಿಗಂಬರಾ ನುತಗುಣ ಮಂಡಿತ ಮುನಿ ಮನೋಹರಾ 2 ಪರಮ ಪುರುಷ ಸದ್ಗುರು ಸಿರಿಲೋಲಾ ಸರಸಿಜ ನೇತ್ರ ದಯಾಳಾ ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ ಗುರುವರ ಮಹಿಪತಿ ನಂದನ ಪಾಲಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಬೆರೆಯಬೇಡ ಪರರ ಸತಿಯ ಸ್ವಪ್ನದಲೂ 1 ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ 2 ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ 3 ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ 4 ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ5
--------------
ವಿಜಯದಾಸ
ಚಿರಶಾಂತಿಯ ಪಡೆವುದಕೆ ಮನ ತ್ಯಾಗಮಾಡು ಜೀವಾ ಮನವೇ ಭವಬಂಧನಕೆ ಘನಕಾರಣವೈ ಜೀವಾ ಪ ತಿಳಿ ಈ ಮನದಾ ನಾಶಾ ಆದಾಗಲೆ ನಿಜಮುಕುತಿ ಮನ ಮೋಕ್ಷದ ಸಾಧನವೈ ಅನುಮಾನಿಸದಿರು ಜೀವಾ 1 ಮನವಿಲ್ಲದ ಆ ಸ್ವರೂಪ ಅದು ತಾನೆ ನಿರ್ವಿಕಲ್ಪ ಅದೆ ನಾನಿಹೆನೆಂದರಿಯೈ ಇದೆ ಮನದ ತ್ಯಾಗ ಜೀವಾ 2 ಪರಮ ಪದ ಆನಂದ ವೇದಾಂತದ ಘನಬೋಧಾ ಗುರುಪುಂಗವ ಶಂಕರನಾ ಪರಮಾರ್ಥ ಬೋಧಸಾರ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಚೆಲ್ವೇರಾರತಿಯ ತಂದೆತ್ತಿರೆ ಪ ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ 1 ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ 2 ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ 3 ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ 4 ಗರುಡವಾಹನನ್ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವ್ಹಿಡಿದುಕೊಂಡು ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ 5 ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ ಆದರದಿಂದೆನ್ನ ಮನೆಗೆ ಬಂದು ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ- ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
--------------
ಹರಪನಹಳ್ಳಿಭೀಮವ್ವ
ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ 1 ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು 2 ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು 3 ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ 4 ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತುಬಲ್ಲಾದಿಕೇಶವನು 5 |
--------------
ಕನಕದಾಸ
ಛಳಿಸದಿರು ಚಂಡಿ ತನುವೆ ನೀನುಒಳಗಾಗದೊರಟುತನವೆ ತರವೆ ಪಗರ್ಭವಾಸವಗಳಿಸಿದೆ ಹಾಗೆ ನೀನರ್ಭಕತ್ವದಲಾಡಿದೆ ಬಿಡದೆನಿರ್ಭಯದಿ ನೀ ಬದುಕಿದೆ ಭೋಗದಲಿದುರ್ಭಗರ ದಾರಿಗೊಲಿದೆ ನಲಿದೆ 1ಕಾಮಾಂಧಕಾರಕೆಳೆದೆ ನನ್ನ ನಿಷ್ಕಾಮದಲಿ ನಿಲಿಲೀಸದೆ ಕಳದೆನೇಮಕ್ಕೆ ನೀನಲಸಿದೆ ಶೀತೋಷ್ಣಭೀಮಕ್ಕೆ ನೀ ಬೆದರಿದೆ ಬರಿದೆ 2ಕಾಲಗಳ ಬಹು ಕಳಸಿದೆ ವ್ಯರ್ಥದಲಿಶ್ರೀಲೋಲನನುಸರಿಸದೇ ಹೋದೆಮೂಲವನೆವರೆ ಮಾಡಿದೆ ದೋಷಗಳಕೀಲುಗಳಿಗಳಿಕಾಲ್ನೀಡಿದೆ ಜಡಿದೆ 3ಮನವೀಗ ಮಾಡಿತಿನಿತಾ ನಾನಿದಕೆಮನೆ ಮಾತ್ರವಾಗೆ ಮಾತನಿಡುತಾತನುವಿನಲಿ ತಪ್ಪಿಡಿಯುತಾ ಯಾಕೆ ನೀನೆನುವೆಯನೆ ನೀನೆ ಚಿತ್ತವ್ರಾತಾ 4ಮನ ನೀನೆ ನೀನೆ ಮನವೂ ಕ್ರಿಯೆಯಮನ ಮಾಡೆ ಮೂಡ್ದೆತನುವೂ ಘನವೂನೆನೆಯಲೆರಡಿಲ್ಲ ನೀವು ಏಕತ್ವವೆನುತೆಂದೆನಿರೆ ಬಂಧವೂ ದಿಟವೂ 5ಕಾರಣವೆ ಮನವಾದರೆ ಅದರೊಡನೆಹೋರುವೆನು ನಾನು ಹೆದರೆನದರೆತೋರೆ ನೀ ಮುಂದೆ ಬೇರೆ ಬಂಧನವೂಬೀರಿತಿದು ನೀ ಕಯ್ಯಾರೆ ತಾರೆ 6ನೀ ಬಾರದಿರುವೆಯಲ್ಲ ುೀಮಾತನಾ ಬಾಯಲೆನ್ನೆನಲ್ಲಾ ಸೊಲ್ಲಾಆ ಬಗೆಯ ಮೂಡಿತಿಲ್ಲ ಇದಿರಾಗಿನೀ ಬಂದು ನಿಲಲು ಸಲ್ಲಾ ಹೊಲ್ಲಾ 7ನನಗುಂಟು ಮನಸಿಗುಂಟು ವ್ಯವಹಾರನಿನಗಾಗಬಾರದಂಟೂ ನಂಟುಜನಿಸಿಬರೆ ಬಂತುಗಂಟು ಆವರಣವೆನಗಾುತು ಪದರವೆಂಟೂ ಬಂಟೂ 8ಅನುಮಾನವಿಲ್ಲವಿಸಿದಕೆ ಪ್ರತ್ಯಕ್ಷವನುಭವಿಸಿ ಪೇಳ್ದೆನದಕೆ ಅಳುಕೆಜಿನುಗದಿರು ಮುಂದೆ ಜೋಕೆ ಹರಿಯಂಘಿü್ರಯನುಸರಿಸದಂದವೇಕೆ ಬೇಕೆ 9ಹರಿಪಾದಪದ್ಮವನ್ನು ನಾನುಬೆರೆವೆ ನೀ ಬಳಲಿಕೆಯನೂ ುನ್ನೂತರಬೇಡ ತಥ್ಯವನ್ನು ಪಡೆವದಕೆಬರೆ ಮುಂದೆ ಬಹುಮಿತ್ರನೂ ನೀನು 10ಶರೀರವಿರೆ ಶ್ರಮವು ನಿನಗೆ ಜನ್ಮಗಳಧರಿಸುತ್ತ ದಣಿವು ನಿನಗೆ ಹೀಗೆಸರಿಯಾಯ್ತು ದುಃಖ ನಮಗೆ ಇದಕಂಡುಇರುವ ಬಗೆ ವಿಶ್ವದೊಳಗೆ ಹೇಗೆ 11ಅದರಿಂದ ನೀನು ನಾನು ಒಂದಾಗಿಹುದುಗಲಾದಿಯನೀಶನೂ ತಾನುಪದವಿಯನು ಪಾಲಿಸುವನು ಬಳಿಕಲಿನ್ನುದುಸುವಕಷ್ಟಗಳನೂ ಕೊಡನೂ 12ಬರುವದಾನಂದ ನಮಗೆ ತಿರುಪತಿಯವರದ ವೆಂಕಟರಮಣಗೆ ಎರಗೆಭರಿತಾತ್ಮಗಾವು ಹೊರಗೆ ಹೀಗೆ ನಾವಿರಲುಂಟು ದೇವನೊಳಗೆ ಸಲುಗೆ 13ಕಂ||ಛಂದಾನುವೃತ್ತಿ ಮೂರ್ಖರಿಗೆಂದಾಡಿದ ನುಡಿಯು ಸತ್ಯವಾುತೀ ದೇಹವುಮುಂದೊರದೆ ಪೇಳಲುತ್ತರನೀಂದೊಡಬಡಿಸುತ್ತ ಕೇಳಿಕೊಳುತಿಹದೊಲವಿಂ
--------------
ತಿಮ್ಮಪ್ಪದಾಸರು
ಛೀ ನಿನ್ನ ಮೋರೆ ಮೇಲೆ - ಠೊಣ್ಯಛೀ ನಿನ್ನ ಮೋರೆ ಮೇಲೆ ಪ ನಿತ್ಯ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ 1 ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ2 ಮಾನವ ಜನ್ಮಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ದೆದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ 3
--------------
ಕನಕದಾಸ