ಒಟ್ಟು 22462 ಕಡೆಗಳಲ್ಲಿ , 136 ದಾಸರು , 9185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಸಂಗಡ ಬಾಹೊರೆಲೆ ಮನುಜ ನಿನಗೆ ಹಾರೈಸಿ ಬಳಲುವೆ ಬರಿದೆ ಭವದೊಳಗೆ ಪ ಗುರುಹಿರಿಯರಗ್ನಿಯ ಪರಿಮುಖದಿ ನಿನ್ನಯ ಕರಪಿಡಿದು ಮಾಂಗಲ್ಯ ಧರಿಸಿಕೊಂಡರ್ಧ ಶರೀರವೆನಿಸುವ ಸತಿಯು ಮರಣ ಕಾಲದಿ ನಯನ ತಿರುಗುವುದ ಕಂಡಂಜಿ ತಿರಿಗಿನಿಂತಳುತಿಹ್ಯಳು 1 ತನುಜಮನುಜರಿವರೆಲ್ಲ ನಿನಗತಿಹಿತ ಬಂಧು ಮಣಿದು ಸೇವಿಪರು ನಿನ್ನನುದಿನವು ಬಿಡದೆ ತನುಬಿಟ್ಟ ಕ್ಷಣದಿ ನನನಿನಗೆನುತ ಮನೆಕೀಲಿ ಘನ ಜಗಳ ಕಾಣು ಬಿದ್ದ್ಹೆಣದ ಪರಿವಿಲ್ಲದೆ 2 ಕುಲವಿದ್ಯವ್ಯವಹಾರ ಕಳವುಕೊಲೆ ನೃಪಸೇವೆ ತಲೆ ಬಾಗಿ ಜನರಲ್ಲಿ ಬಲುದೈನ್ಯ ಬಟ್ಟು ಗಳಿಸಿ ಹೂಳಿದ ದ್ರವ್ಯ ಎಳೆದೊಯ್ಯಲ್ಯಮ ನಿನ್ನ ತಲೆಯೆತ್ತಿ ನೋಡದಲೆ ನೆಲದಿ ನಿಲ್ಲುವುದು 3 ಭೂಮಿ ನಿನ್ನದು ಎಂದು ನೇಮವನು ಬರಕೊಂಡು ಕೋಮಲ ಮನೆಕಟ್ಟಿ ತಾಮಸದಿ ನಲಿವಿ ಭೂಮಿಯ ರಿಣತೀರಿ ನೀ ಮಡಿದಾಕ್ಷಣ ಬಹಿ ರ್ಭೂಮಿಯೋಳ್ಹುತಿವರೆಲೆ ಪಾಮರ ಮನುಜ 4 ಬಂಧುಬಾಂಧವರೆಲ್ಲ ಹಿಂದೆ ಉಳಿಯುವರು ಮಂದನಾಗದೆ ತಂದೆ ಶ್ರೀರಾಮ ಪಾದಾರವಿಂದಮಂ ನಂಬಿ ಭವಬಂಧವನು ಗೆಲಿಯೊ 5
--------------
ರಾಮದಾಸರು
ಆರು ಹಿತವರು ಎಂದು ನಂಬಬೇಡ ಪ ಆರಿಗಾರಿಲ್ಲ ಆಪತ್ತು ಬಂದೊದಗಿದಡೆ ಅ ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿತನಯ ರಾಧೇಯನಿಗೆ ಎರಡೆಣಿಸಿದ ಮೇಲೆ 1 ಅನುಜ ಕೊಲಿಸಿದ ಮೇಲೆ2 ತನಗೆ ದೇಹಾನುಬಂಧಿಗಳೆ ಬಂಧುಗಳೆಂದುಮನದಿ ನಿಚ್ಚಳವಾಗಿ ನಂಬಬೇಡಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನಅನುದಿನದಿ ನಂಬಿದವಗಿಹಪರದಿ ಸುಖವು 3
--------------
ಕನಕದಾಸ
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ
ಆರುತಿ ಮಾಡಿದೆವೆ ನಾರಿಯಮಣಿಯರು ಪ ಚಾರು ಪುಸ್ತಕದಿಭೂರಿ ಶೋಭಿಪ ಪರಾಶರ ತನುಜಗೆ ಅ.ಪ. ಚಿತ್ರ ಮಂಟಪದೊಳು ಮುತ್ತಿನಂದದಿ ಕೂತುಭಕ್ತ ಪೂಜಿತನಾಗಿ ಭಾಗ್ಯವ ತತ್ವ ಪೇಳಿದವಗೆ 1 ಅಖಿಳ ದುರ್ವಾದಿ ವಿಜಯಗೆ2 ಭಾರತ ಮುಖ ಬಹುಸಾರ ಶಾಸ್ತ್ರವ ಮಾಡಿಧಾರುಣಿಯೊಳು ಮುಕ್ತಿದಾರಿ ತೋರಿದವಗೆ 3 ನಾರದ ಶುಕಪೈ ಸೇರಿ ವೈಶಂಪಾಯನದ್ವಾರಪಾಲಕರಿಂದ ನಿರುತ ಪೂಜಿತಗೆ 4 ವಾಸವೀ ತನುಜಾ ವ್ಯಾಸನ ಸ್ತುತಿಸಿದಾಭಾಷಿ ಭಾಷಿಗೆ ಇಂದಿರೇಶ ಪಾಲಿಸುವನು 5
--------------
ಇಂದಿರೇಶರು
ಆರುತಿ ಮಾಡುವೆ ನಾ ಪ್ರಲ್ಹಾದಗೆ ಪ ಆರುತಿ ಮಾಡುವೆ ಧಾರುಣಿಯೊಳು ರಘುವರನರ್ಚಿಪ ಯತಿವರ ವಂದಿಪಗೆ ಅ.ಪ. ಸಾಲಿಯೊಳಗೆ ಕೂತು ಬಾಲಕರಿಗೆ ಹರಿಲೀಲೆ ಪೇಳಿದ ಭಕ್ತ ಲೋಲನಾದವಗೆ 1 ಪಾದ ಕಂಡವಗೆ 2 ಬಂದು ಭೂಮಿಲಿ ರಾಘವೇಂದ್ರ ನಾಮದಿ ಪೂಜಿಸಿಂದಿರೇಶ ಪುಟ್ಟ ಬೃಂದಾವನದಿ ಕೂತ3
--------------
ಇಂದಿರೇಶರು
ಆರುತಿ ಮಾಡೆವೆವು ನಾವು ಆನಂದನಿಲಯಗೆ ಆನಂದದಿಂದಲಿ ಪ ಗೋಕುಲದಲಿ ಪುಟ್ಟಿ | ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ 1 ನಂದಕುವರಗೆ | ಸಿಂಧುಶಯನಗೆ | ಇಂದೀವರಾಕ್ಷನಿಗೆ ನಾವು 2 ಶಾಮಸುಂದರಗೆ ದಾಮೋದರನಿಗೆ | ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ 3
--------------
ಶಾಮಸುಂದರ ವಿಠಲ
ಆರುತಿಯ ತಾರೆ ಹರಿಗೆ | ರಾಧಾಕೃಷ್ಣಗೆ ಶ್ರೀಹರಿಗೆ ಪ ಬೆಟ್ಟವ ಎತ್ತಿದವಗೆ ಪುಟ್ಟಸೀತೆಯಚಿq ತಂದ ಹರಿಗೆ | ಶ್ರೇಷ್ಟ ರಾಮನಿಗೆ ಶ್ರೀಹರಿಗೆ 1 ಅಮಿತ ಕರುಣಾಶಾಲಿಗೆ ವಿಮಲ ಸುಜನ ಪಾಲನಿಗೆ ಕಮಲನಾಭನಿಗೆ ಶ್ರೀಹರಿಗೆ 2 ಶಂಖಚಕ್ರಧಾರನಿಗೆ ಪಂಕಜಾಕ್ಷ ಕೃಷ್ಣನಿಗೆ ಶಾಮಸುಂದರ ವಿಠಲನಿಗೆ ಶ್ರೀ ಹರಿಗೆ 3
--------------
ಶಾಮಸುಂದರ ವಿಠಲ
ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ ಪ ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ1 ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ2 ಬೊಮ್ಮ ಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ 3 ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ 4 ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ5
--------------
ಕನಕದಾಸ
ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಆರೋಗÀಣೆಯ ನೀ ಮಾಡಯ್ಯಾ ಯದುಕುಲ ವಾರಿಧಿ ಚಂದ್ರಮನೆ ಪ ಸಾರಸನಯನ ಅಪಾರಮಹಿಮ ಕರು ಣಾರಸ ಪರಿಪೂರ್ಣಸಾರ ಭೋಕ್ತನೆ ಸ್ವಾಮಿ ಅ.ಪ. ಬಡವನು ನಾ ನಿನಗೆ ಕೊಡಲರಿಯೆನೊ ಸ್ವಾಮಿ ಪೊಡವಿಗೊಡೆಯ ನಿನ್ನ ಅಡಿಭಕ್ತ ನಾನಯ್ಯ ಕಡಲಶಯನ ಒಂದು ಕುಡಿತೆ ಪಾಲನು ನಿನಗೆ ಕೊಡುವೆನು ನಿತ್ಯತೃಪ್ತ ಒಡನೆ ಸ್ವೀಕರಿಸಯ್ಯಾ ಮೃಡವಂದಿತ ಪದಜಡಜಯುಗಳದಲಿ ದೃಢಭಕ್ತಿಯ ನೀ ಕೊಡು ಕೈ ಬಿಡದಲೆ ನುಡಿಗೆ ನುಡಿಗೆ ನಿನ್ನ ನಾಮವ ನುಡಿಸಯ್ಯ ಬಡವರ ಬಂಧುವೆ ಕರಿಗಿರೀಶನೆ 1
--------------
ವರಾವಾಣಿರಾಮರಾಯದಾಸರು
ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ಆರೋಗಣೆ ಮಾಡೊ ಆನಂದಮೂರುತಿ ಪ. ರÀನ್ನದ ತಳಿಗೆಯನ್ನು ಶೋಭನವಾದ ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ- ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ 1 ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ ಸಾರಸ ಭಕ್ಷ್ಯಗಳ ದಧಿ ಪಕ್ವಫಲಂಗಳು ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ 2 ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ ಮನ್ನಿಸಿ ಕರೆದು ನಿನ್ನ ಕರಕಂಜದಿಂದ ಪೂರ್ಣವಮಾಡು ಭುಜಿಸೊ ಹಯವದನ ಕೃ- ಪಾಳು ಸಕಲಲೋಕಪಾಲ ಸುರರೊಡೆಯನೆ 3
--------------
ವಾದಿರಾಜ
ಆರೋಗಣೆಯ ಮಾಡು ಶ್ರೀವೆಂಕಟೇಶ ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ ಗಂಗೆಯ ಜನಕಗೆ ಮಂಗಳ ಅಭಿಷೇಕ ಸಂಭ್ರಮದಲಿ ಮಾಡಿ ತವಕದಲಿ ಶಂಭುವಂದಿತಗೆ ಪೀತಾಂಬರನುಡಿಸಿ ಪಾ- ದಂಗಳನೆ ಪೂಜಿಸುತ ಸ್ತುತಿಪರು ಇಂದಿರಾಪತಿ ಶೀಘ್ರದಿಂದಲಿ 1 ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ ವಪ್ಪಾದ ವಡೆದೋಸೆ ಚಿತ್ರಾನ್ನವೂ ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ ಮತ್ತೆ ಪಾಯಸ ಮೊಸರು ಬುತ್ತಿ ವಿ- ಚಿತ್ರದಲಿ ತಂದರ್ಪಿಸಿಹರು2 ಕನಕ ಮಂಟಪದೊಳು ಕರ್ಪೂರದಾರತಿ ವಿನಯದಿ ಮಾಡುತ್ತ ನಮಿಸುವರು ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ ಘಮ ಘಮಿಪ ತಾಂಬೂಲ ವೀಳ್ಯವ ತವಕದಲಿ ಸ್ವೀಕರಿಸು ಶ್ರೀಶಾ 3
--------------
ನಿಡಗುರುಕಿ ಜೀವೂಬಾಯಿ
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಆರೋಗಣೆಯ ಮಾಡೋ ಮುಕುಂದಾ ಪ ಆರೋಗಣೆಯ ಮಾಡೋ ವಾರಿಜರಮಣಾ ಸಾರಿದವರಿಗೆ ಭಯನಿವಾಕರದಿ 1 ಪೊಂಬ್ಹರಿವಾಣದಿರನ್ನ ಬಟ್ಟಲುಗಳು ಅಂಬುಜಾನನಸಿರಿ ಲಕುಮಿಯವೇರಿಸಿ 2 ಶಾಲ್ಯೋದನಸೂಪಘೃತ ಪರಿಪರಿಯಾ ಶಾಲ್ಯಾಶಾಖಂಗಳಸವಿಯನೆ ಕೊಳುತಾ3 ಪಂಚಭಕ್ಷವು ಕೆನೆಹಾಲು ಸೀಖರಿಣಿಯಾ ಮುಂಚೆ ಪಾಯಸಪರಿಪರಿಶರ್ಕರದಲಿ4 ದದ್ಯೋದನದಲುಪಗಾಯಿಸ್ವಾದಿಸುತ ದಮನ ಕಲ್ಪಿತರುವೆಲ್ಲಾ5 ಪತ್ರಸುಮನತೋಯ ಭಕ್ತರು ಕೊಟ್ಟು ದರ್ಥಲಿ ಕೊಂಬ ದಯಾಳುತನದಲಿ6 ತಂದೆ ಮಹಿಪತಿ ನಂದನ ಸಾರಥಿ ಎಂದೆಂದು ಸ್ಮರಣೆ ಗೊದಗಿ ಮುದ್ದು ಮುಖದಿ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು