ಒಟ್ಟು 4883 ಕಡೆಗಳಲ್ಲಿ , 127 ದಾಸರು , 3275 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ಪ ನಿರ್ದೋಷ ಗುಣವಾರುಧಿ ನಿರ್ಧಾರವಾಗಿ ನುಡಿವೆ ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು 1 ಅಜ ಭವಾದ್ಯರು ನಿನ್ನ ಭಜಿಪರಾರು ದೋಷ ಮಾನವ ತಿಳಿದು ಭಜಿಸಬಲ್ಲೆನೆ ದೇವಾ 2 ಮಧ್ವ ಸರೋವರದಲ್ಲಿ ಇದ್ದು ಪೂಜೆಯಗೊಂಬ ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ 3
--------------
ವಿಜಯದಾಸ
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ ದುಷ್ಟಮರ್ದನ ಶಿಷ್ಟಜನಪಾಲಕ ಧ್ರುವ ಮಾಧವ ಮಧುಸೂದನ ಮಧುಸೂದನ ಪಂಕಜನಾಭ ಪತಿತಪಾವನ ಶಂಖಚಕ್ರಧರ ಸಂಕರುಷಣ ಸಂಕುರಷಣ ಪತಿ ರಾಜೀವನಯನ 1 ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ ಮಸ್ತಕ ಮುಗುಟ ಮದನಮೋಹನ ಭಕ್ತವತ್ಸಲ ಹರಿ ನಾರಾಯಣ ನಾರಾಯಣ ವಸ್ತುಪರಾತ್ಪರ ನಿಜನಿರ್ಗುಣ 2 ಗರುಡಗಮನ ಉರಗಶಯನ ಉರಗಶಯನ ಸುರಬ್ರಹ್ಮಾದಿ ವಂದಿತಚರಣ ಕರುಣಾನಂದ ಪರಿಪೂರಣ ಪರಿಪೂರಣ ತರಳ ಮಹಿಪತಿ ಜೀವಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಕೃಷ್ಣ ಬೇಡಿಕೊಂಡೆ ಕೃಪೆಯ ಪಾಲಿಸೋ ಪ ಎಷ್ಟು ಎಷ್ಟು ಕೇಳಿಕೊಂಡೆ ಎಳ್ಳಷ್ಟು ದಯಬಾರದೇ ಅ.ಪ ಬಳಲುತಿಹೆನು ಎತ್ತೋ ಕರುಣಿ 1 ನಿನ್ನ ಬಿಟ್ಟು ಇರುವೆನೆನೋ ನಿನ್ನದಯದಿ ನನ್ನ ಬದುಕು ನಿನ್ನ ಮರೆತೆ ತಪ್ಪುಕ್ಷಮಿಸು ನಿನ್ನ ದಾಸ ಪ್ರಾಣರಾಣೆ2 ಈಗ ಆಗ ಎಂದು ಹೇಳಿ ಭೋಗದಲ್ಲೇ ರತಿಯ ನೀಡಿ ನಾಗಶಯನ ನಾಮಸುಧೆಯ ಬೇಗ ಕೊಡದೆ ಬಿಡುವರೇನೋ3 ದಾಸನೆಂದು ಭಕ್ತಿಯಿತ್ತು ನಾಶಮಾಡೋ ಕುಂದುಗಳ ನೀ4 ಲೋಕವೆಲ್ಲ ಪೊರೆದ ನಿನಗೆ ಸಾಕೆ ಎನ್ನ ಕಷ್ಟವೇನೋ ನಾಕ ದೊರೆಯೆ ಪುಣ್ಯಶ್ಲೋಕ 5 ಬರಿಯ ಶುಂಠ ನಾನು ಹರಿಯೆ ಅರಿಯೆದಾರಿ ವಲಿಸೆನಿನ್ನ ಶರಣ ಜನರ ಬಿಡನು ಎಂಬ ಬಿರುದೊಂದೆ ಧೈರ್ಯವೆನಗೆ 6 ಶಿರಿಯರಮಣ “ಕೃಷ್ಣವಿಠಲ” ಶರಣು ಜ್ಞಾನ ಸುಖದ ಚರಣವೆರಡು ತೋರಿಸೆನಗೆ ನಿರುತ ಹೃದಯ ಕಮಲದಲ್ಲಿ 7
--------------
ಕೃಷ್ಣವಿಠಲದಾಸರು
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೃಷ್ಣ ನಿನ್ನ ಸ್ಮರಣೆ ಎನಗೆ ಮರೆಸಬೇಡವೋ ಎನಗೆ ಮರೆಸಬೇಡವೊ ಯನಗೆ ಮರಿರೆಸಬೇಡವೊ ಪ. ಮಂದ ಮತಿಯಳ ಬಂದು ಕಾಯೋ ನೀ ಬಂದು ಕಾಯೋ ನೀ ಮಂದರೋದ್ಧರ ಸಿಂಧುಶಯನ ಇಂದಿರೆ ರಮಣ 1 ಹಗಲು ಇರಳು ನಿನ್ನ ಸ್ಮರಣೆ ಎನೆಗೆ ಮರೆಸ ಬೇಡವೋ ಹಗರಣ ಮಾಡಿಸಿ ಎನಗೆ ನಿನ್ನ ಸ್ಮರಣೆ ಮಾಡಿಸೋ 2 ರಮಾ ವಲ್ಲಭ ವಿಠಲ ನಿನ್ನ ನಾಮ ನಿರಂತರ ನುಡಿಸೋ ಯನೆಗೆ ಸ್ವಾಮಿ ನಿರಂತರ ನುಡಿಸೋ 3
--------------
ಸರಸಾಬಾಯಿ
ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು ಶಿಷ್ಟ ನುಡಿವುದ ನಂಬಿಹೆನು ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ ಬಟ್ಟೆ ಒಂದನು ಕಾಣೆ 1 ಊರ ಜನರ ಮುಂದೆ ಸೇರಿದ ಪದವನ್ನು ದೂರಗೊಳಿಸಿ ಬಹು ಗಾರಾದೆನು ಮಾರಮಣ ನೀನ್ನುದಾರ ಗುಣವ ನಂಬಿ ಚೀರುವ ಎನಗೆ ಬೇರಾರು ರಕ್ಷಕರಿನ್ನು 2 ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು ವಿಶ್ವಾಸದಿಂದ ನಾನಿರುವದನು ತೈಜಸ ಪ್ರಾಜ್ಞ ತುರ್ಯರೂಪಗಳಿಂದ ವಿಶ್ವವ್ಯಾಪಕನಾದ ನಿನಗರುಪುವುದೇನೊ 3 ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ ತಲ್ಲಣಗೊಳಿಸುವುದುಚಿತವೇನೊ ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ- ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4 ಇಂದ್ರಾದಿ ದಿವಿಜರ ಪದಗಳನವರಿಗೆ ಪೊಂದಿಸಿ ಪಾಲಿಪ ಕರುಣಿ ನೀನು ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣ ಪಾಲಿಸು ಪರಮ ಕೃಪಾಲಯ ಪ. ಪಾಲಿಸು ನಿನ್ನಯ ಬಾಲನು ಬೇಡುವ ಬಯಕೆಯ ಲಕ್ಷ್ಮೀ- ಲೊಲ ನೀ ಕರದು ತಾರಾಕೆಯ ಅ.ಪ. ತುರುವು ಮೊಲೆಯನುಂಬ ಕರುವಿನ ಬೆನ್ನನು ತುರಿಸುತ ತಿರುಗುವ ತೆರದಲಿ ನೀ- ನಿರುವಿಯೆಂದರಿದೆನು ಮನದಲಿ ಚರಣ ಪಂಕಜಗಳ ಶರಣ ಹೊಕ್ಕೆನ್ನನು- ದ್ಧರಿಸು ಶ್ರೀಕಾಂತ ಗುಣದಲಿ ಸ್ವೀ- ಕರಿಸುತ ನನ್ನ ನಿನ್ನ ಕೆಲದಲ್ಲಿ 1 ಖಗರಾಜ ಭೂಧರವರ ನಾಗಭೂಷಣ ಶಕ್ರ ಪೂಜಿತ ನಿನ್ನಾ- ವಾಗ ಕಾಂಬೆನು ಗೃಹರಾಜಿತ ಮೂಗಭಾವದ ತಪ್ಪ ಮನಕೆ ತರುವರೆ ಮ- ಹಾ ಗಣಪತಿ ಶಬ್ದ ವಾಚ್ಯನೆ ಎನ್ನ ಬೇಗ ಕರೆಸು ಸರ್ವಾಧ್ಯಕ್ಷನೆ 2 ಎಲ್ಲವು ನಿನಗೊಪ್ಪಿಸುವೆ ಎಂಬುದ ನೀ ಬಲ್ಲಿ ಶ್ರೀಭೂರಮೆನಲ್ಲನೆ ಎನ- ಗಿಲ್ಲ ಭಾರವು ಜಗಮಲ್ಲನೆ ತಲ್ಲಣ ಬಿಡಿಸಿ ಪಾಲಿಸು ಶಿರದಲಿ ಪದ ಪಲ್ಲವನನು ವೆಂಕಟೇಶನೆ ಸರಿ- ಯಲ್ಲ ನಿನಗೆ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣ ಮುರಾರಿ ಕೇಶವ ಮುರಾರಿಅಚ್ಚುತಾನಂತ ಗೋವಿಂದ ಮುರಾರಿಪ. ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ 1 ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ 2 ಮಾಧವ ಮುರಾರಿ3 ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿಗೋಪಿಯರರಸ ಗೋವಿಂದ ಮುರಾರಿ 4 ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-ದಿಷ್ಟಾರ್ಥವನೀವ ವಿಷ್ಣು ಮುರಾರಿ 5 ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊಮನಸಿಜನಯ್ಯ ಮಧುಸೂದನ ಮುರಾರಿ 6 ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು ನಸುನಗೆಯ ತ್ರಿವಿಕ್ರಮ ಮುರಾರಿ7 ಕಾಮಿನಿ ಅಗಲಿಬಂದು ಸೀಮೆನಾಳುವೆÀನೆಂದುನೇಮವಾಕ್ಯದಿ ನಿಂದ ವಾಮನ ಮುರಾರಿ 8 ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿಸಿಂಧುಶಯನ ಶ್ರೀಧರನೆ ಮುರಾರಿ 9 ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದುಹರುಷವಾರಿಧಿ ಹೃಷಿಕೇಶ ಮುರಾರಿ 10 ಪಾವನ್ನ ಮೂರುತಿ ಪರಮದಯಾಳು ನೀನೆಪಾಲಿಸೊ ಶ್ರೀಪದ್ಮನಾಭ ಮುರಾರಿ11 ದಾನವರ ಮರ್ದಿಸಿ ಸುಮನಸರಿಗೊಲಿದದಾನದತ್ತನೆ ದಾಮೋದರನೆ ಮುರಾರಿ 12 ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧÀರಿಸಿ ಅ-ಲಂಕಾರವಾದ ಸಂಕರ್ಷಣನೆ ಮುರಾರಿ 13 ವಾಸುದೇವ ಮುರಾರಿ 14 ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ 15 ಅನಿರುದ್ಧ ಮುರಾರಿ16 ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ 17 ಅವನಿ ಅಧೋಕ್ಷಜ ಮುರಾರಿ 18 ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು ನಾರಸಿಂಹ ಮುರಾರಿ 19 ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚುಮರೆಗಳ್ಯಾಕೊ ಅಚ್ಚುತ ಮುರಾರಿ 20 ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ ಆಡಿದ ಜನಾರ್ದನ ಮುರಾರಿ21 ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ 22 ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ ಬಂದಗರುವದಿಂದಲೆ ನರಹರಿಯೆ ಮುರಾರಿ 23 ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿಪಟ್ಟಣಕಾಗಿ ಬಾರೊ ಕೃಷ್ಣಮುರಾರಿ 24 ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ ಶ್ರೀಹಯವದನ ಮುರಾರಿ 25
--------------
ವಾದಿರಾಜ
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ. ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ. ಜನನವಾದ ಕಾಲದಿಂದ ಇನಿತು ಪರ್ಯಂಕಾರದಲ್ಲಿ ಅನುಭವಿಸಿದಂಥ ಕರ್ಮ ಗುಣನಿಧಿಯಾಧೀನವೆಂದು1 ಕಷ್ಟದಲ್ಲಿ ಕಳೆದ ಕಾಲ ಅಷ್ಟರಲ್ಲೆ ಪಟ್ಟ ಸುಖ ಕೊಟ್ಟ ಹರಿಯು ಎನಗೆ ಎನುತ ಕೆಟ್ಟ ವಿಷಯ ಮನಕೆ ತರದೆ 2 ಕಾಮ ಕ್ರೊಧ ಲೋಭ ಮೋಹ ಆ ಮಹಾ ಮದ ಮತ್ಸರಗಳು ಕಾಮಿಸಿ ಮನ ಕೆಡಿಸುತಿರಲು ಶ್ರೀ ಮನೋಹರನಾಟವೆಂದು 3 ಪೊಂದಿದಂಥ ಮನುಜರಿಂದ ಕುಂದು ನಿಂದೆ ಒದಗುತಿರಲು ಇಂದಿರೇಶನ ಕರುಣವೆಂದು ಒಂದು ಮನಕೆ ತಾರದಂತೆ 4 ಮಾನ ಅಪಮಾನಗಳು ದೀನನಾಥನಧೀನವೆಂದು ಜ್ಞಾನಿಗಳ ವಾಕ್ಯ ನೆನೆದು ಮಾನಸದ ದುಃಖ ಕಳೆದು 5 ಹೊಟ್ಟೆ ಬಟ್ಟೆಗೊದಗುವಂಥ ಅಷ್ಟು ಕಷ್ಟ ಸುಖಗಳೆಲ್ಲ ವಿಷ್ಣುಮೂರ್ತಿ ಕೊಟ್ಟನೆಂದು ಮುಟ್ಟಿ ಮನದಿ ಹರಿಯ ಪದವ 6 ಹರಿಯ ಧ್ಯಾನ ಮಾಡುವುದು ಹರಿಯ ಧ್ಯಾನ ಅರಿಯುವುದು ಮೂರ್ತಿ ಕಾಣುವುದು ಹರಿಯಧೀನವೆಂದು ತಿಳಿದು 7 ಗುರುಕೃಪೆಯಿಂ ದತ್ತವಾದ ವರ ಸುಜ್ಞಾನವರೆಯ ತಿಳಿದು ಹರುಷ ಕ್ಲೇಶಾ ಮನಕೆ ತರದೆ ಮೂರ್ತಿ ಮನಕೆ ತಂದು 8 ನಿಷ್ಟೆಯಿಂ ಗೋಪಾಲ ಕೃಷ್ಣವಿಠ್ಠಲಾಧೀನ ಜಗವು ಇಟ್ಟ ಹಾಗೆ ಇರುವೆನೆಂದು ಗಟ್ಟಿಮನದಿ ಹರಿಯ ಪೊಂದಿ 9
--------------
ಅಂಬಾಬಾಯಿ
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆಕಷ್ಟವ ಪರಿಹರಿಸೀಷ್ಟವನೀವನ ಅ.ಪ ಶಿಷ್ಯನ ನೋಡಿದೆ - ವರ ನಿರ್ದುಷ್ಟನ ನೋಡಿದೆಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನ ಶಿಷ್ಟರ ಕಷ್ಟ ನಿವಿಷ್ಟನ - ದೇವನ 1 ಭವ ಭಂಗನ ನೋಡಿದೆ 2 ದೇವನ ನೋಡಿದೆ ಮುಕುತಿಯೀವನ ನೋಡಿದೆಗೋವ ಕಾವ ಭೂದೇವ ವಂದಿತ ಬಲ-ದೇವಾನುಜ ಹಯಗ್ರೀವನ ನೋಡಿದೆ 3 ಧೀರನ ನೋಡಿದೆ- ಜಗದ ಉದ್ಧಾರನ ನೋಡಿದೆವೀರ ಶೂರ ಪರಾತ್ಪರ ತಾನ-ಕ್ರೂರ ವರದ ಸಿರಿಧಾರನ ನೋಡಿದೆ 4 ಶ್ಯಾಮನ ನೋಡಿದೆ - ಬಲು ನಿಸ್ಸೀಮನ ನೋಡಿದೆವಾಮನ ರಾಮನ ಕಾಮನ ಅಯ್ಯನಸಾಮನ ಸೀಮನ ಸೋಮನ ನೋಡಿದೆ 5 ಕಾಲ ವನಮಾಲನ ನೋಡಿದೆ 6 ಅಗಣಿತ ಪ್ರಾಣರ ಪ್ರಾಣನವೇಣುಗೋಪಾಲ ವಿಠ್ಠಲ ಕಲ್ಯಾಣನ 7
--------------
ವೇಣುಗೋಪಾಲದಾಸರು
ಕೃಷ್ಣನು ನೆಲಸಿರಲು ನಾಕದ ಸಿರಿಯ ನಿರಾಕರಿಸುವ ಸಿರಿತಾಹರ್ಷದೊಳು1 ಮೋಹಿಸಿ ಮನದಿ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನ ನಂದಾದಿಗಳಾ ನಂದಾನ್ವಿತಮತಿ ವೃತ್ತಿಯಲಿ ಒಂದಾಗಿ ಧರಾ ವೃಂದಾರಕರನುವಿಂದಾರಾಧಿಪ ಭಕ್ತಿಯಲಿ 4 ಬಂದರು ವರಕಾಳಿಂದಿಯ ತೀರದಿ ನಂದನದಂತಿಹ ವನದೆಡೆಗೆ ಮುಕುಂದನ ಧ್ಯಾನಿಸುತಡಿಗಡಿಗೆ 5 ಗೋಧನ ದಾನದಲ್ಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖದಲ್ಲಿರುತಿರಲಾಸಮಯದಲಿ 6 ಸುಜನ ಸ್ತುತದಿನಕರ ನೈದಿರಲು ನಿಸ್ತುಲತಮದಿ ಸಮಸ್ತರದೃಷ್ಟಿಗಳಸ್ತಗೊಳಿಸೆ ಜನಭಯಗೊಳಲು 7 ರಾಧೆಯತಾನೋಡಿ ಕಂದನ ನೀನೇ ಮಂದಿರಕೈದಿಸು ಎಂದರೆ ಬಂದಳು ನಗೆಗೂಡಿ 8 ಬಾ ಕಮಲಾಸನನ ತೊರುವೆ ಶಶಿವದನಾ 9 ನೀನೊಲಿದುದನು ಬೇಡನಿನ್ನನೆ ಕೂಡಿಹೆನು 10 ತನ್ನಯಮನದೊಳಗೆ ಚರಿತ್ರನು ಕಾಮಿನಿಗೆ11 ಬಲು ಸಡಗರದಿ ವೃತ್ತಕುಚಗಳಿಂದೊತ್ತಿಮನೊಭವನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೇ ಬೆರೆದು ಬರುತಿರ್ದಳು ನಲಿದು 13
--------------
ಸರಗೂರು ವೆಂಕಟವರದಾರ್ಯರು
ಕೃಷ್ಣವೇಣಿ ಕಲ್ಯಾಣಿ ನಿತ್ಯ ಸಾಗರನ ರಾಣಿ ಪ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1 ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2 ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3 ಪೋಗದ ಪಾಪಗಳಿರಲು ನಿನ್ನ ದರುಶನವು ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4 ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು ಒಲಿದು ಕೊಂಡಾಡುವರು ಸತತದಲ್ಲಿ ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5
--------------
ವಿಜಯದಾಸ
ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟ್ಟಿ ಮಿಸುಕಬಾರದು ನೋಡಬ್ಯಾಡ ಇಷ್ಟರಮೇಲೆ ತಿಳಿಯದ ನಾ ಮೂಢ 1 ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ 2 ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ ನಿಜಪದಕ ಯೋಗ್ಯಳ ಮಾಡಲಿಲ್ಲಿ ಅಜಮಿಳನೆಷ್ಟೆಂದು ಅರಿಯಲಿಲ್ಲಿ ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ 3 ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು ನಿಮ್ಮ ಮಾತು ಒಡಿಯದು ಉದ್ದಂಡು ಇಮ್ಮನಾಗದಲ್ಲಿಂದ ಮನಗಂಡು ಬ್ರಹ್ಮಾನಂದ ಕೊಂಡಾಡುವೆ ಘನನುಂಡು 4 ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ ಇಂದು ನಾ ಕೊಡುವದೇನು ಹೇಳಯ್ಯ ಕಂದ ಮಹಿಪತಿ ನಾ ನಿಮ್ಮ ನಿಶ್ಚಯ ಎಂದು ಬಿಡದೆ ಸಲಹೊ ನೀ ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ಕೆಡಬೇಡವೋ ಎಲೆ ಕರ್ಮಿ ಮನುಜ ನೀಕೆಡದಿಹ ಪಥವ ಕೇಳಿನ್ನು ಪ ಹಿಂಡು ಹಿಂಡು ಸಂದಳಿಯ ಬಿಡು ಇನ್ನು 1 ಬಹುಗೃಹ ಕಟ್ಟಿದೆ ದಿಕ್ಕಿಲ್ಲವೆಂಬೆ ಬಹು ಗೃಹವನು ಸುಡಲೆನ್ನುಇಹುದಿದು ದ್ರವ್ಯವು ಇದಕೇನೆಂಬೆಯ ಇಹುದನು ಧರ್ಮವ ಮಾಡಿನ್ನುದಾಹದಿ ಗಳಿಸಿದೆ ಆಸ್ತಿಯನೆಂಬೆಯ ಸಜ್ಜನರಿಗೆ ಕೊಳ್ಳೆನ್ನುಇಹೆ ನಾಲಕು ದಿನ ಎಂಬ ಭ್ರಮೆಯನು ಇಡು ಪಾದರಕ್ಷೆಯೊಳಿನ್ನು 2 ಮತಿವಂತರು ಆರಿಲ್ಲವೆಂಬೆಯ ಮತಿಗೆ ಶಿವ ತಾನಿಹೆನೆನ್ನುಗತಿಯೇನಿನ್ನು ಈ ಕುಟುಂಬಕೆಂಬೆಯ ಗತಿಯಿದ್ದಾಗುವುದೆನ್ನುಅತಿ ಋಣ ಭಾರವು ಆಗಿಹುದೆಂಬೆಯ ಆರಿಗೆ ಋಣ ಎಂದೆನ್ನುಸುತರಿಲ್ಲ ತನಗೆ ಗತಿಯಿಲ್ಲವೆಂಬೆಯ ಸುತರಿಂದ ಗತಿಯು ಸಾಕಿನ್ನು 3 ಪರ ಬ್ರಹ್ಮವ ನೋಡುತ ಸುಖದಲಿ ಆನಂದದಿ ಮಲಗಿನ್ನು4 ನಿರಂಜನ ನಿರವಯ ನಿತ್ಯನು ಬೇರಿಲ್ಲೆನ್ನುಪ್ರತ್ಯಗಾತ್ಮ ಪರಾತ್ಪರ ಪರತರ ಪ್ರತ್ಯಗೆ ತಾನಹುದೆನ್ನುಚಿತ್ತಿನ ಪ್ರಭೆಯದು ಢಾಳಿಸುತಿರುತಿರೆ ಚಿತ್ತವಲಯ ಮಾಡಿನ್ನುಪ್ರತ್ಯಗಾತ್ಮ ಚಿದಾನಂದನ ನೆನೆಯುತ ಪ್ರಾಣವ ಕಳೆಯಿನ್ನು 5
--------------
ಚಿದಾನಂದ ಅವಧೂತರು