ಒಟ್ಟು 726 ಕಡೆಗಳಲ್ಲಿ , 89 ದಾಸರು , 652 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷಆನಂದತೀರ್ಥಗುರು ಚಿಂತಾಮಣಿ ಪ.ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾವೇತ್ತøಜನಕಾ ಸಂತತಕಿಂಪುರುಷವರುಷದಿ ಉಣಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು 1ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು 2ಹಂತ ಭಾಷ್ಯಧ್ವಾಂತದಿ ವೇದಾಂತವಡಗೆಪೋಕಮಣಿಮಂತನ ಮುರಿದನು ಮೂವತ್ತೆರಡು ಲಕ್ಷಣದಿಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು 3
--------------
ಪ್ರಸನ್ನವೆಂಕಟದಾಸರು
ಹನುಮದ್ಭೀಮ ಮಧ್ವನಾಮ ಪ್ರಣತಕಲ್ಪದ್ರುಮಘನಕೃಪಾಳು ಭಕ್ತಚಿಂತಾಮಣಿ ಯೋಗೀಂದ್ರಲಲಾಮ ಪ.ಭಾರತಿಪತಿ ನಿಖಿಲವಿಶ್ವಾಧಾರ ಭಾವೀಬ್ರಹ್ಮಸಾರತತ್ತ್ವ ವೇದಾರ್ಥಕೋವಿದ ಧೀರಜೀವೋತ್ತಮ1ಭರ್ಗವಾಸವಾದಿ ದಿವಿಜವರ್ಗಸುಖಧಾಮನಿರ್ಗುಣೋಪಾಸಕ ಮೋಕ್ಷಮಾರ್ಗದರ್ಶಿನಿಷ್ಕಾಮ2ಸೂತ್ರನಾಮಕ ವಾಯುದೇವ ವಿಚಿತ್ರಕರ್ಮನಿಸ್ಸೀಮಕರ್ತಲಕ್ಷ್ಮೀನಾರಾಯಣನಭೃತ್ಯಸಾರ್ವಭೌಮ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು
ಹರಿಯಲ್ಲಿ ಧನ್ಯರು ಪೊರೆಯರು ಸತ್ಯಸ್ಥಿರವೀ ಮಾತಿಗೆ ಸದ್ಭಕ್ತರು ಸಾಕ್ಷಿಯಿಹರು ಪಪುಣ್ಯಾತ್ಮ ಪ್ರಿಯ ವೃತ ಸಾಕ್ಷಿ ಜಗನ್ಮಾನ್ಯ ನಾರದ ದೇವ ಋಷಿ ಶ್ರೇಷ್ಠ ಸಾಕ್ಷಿಧನ್ಯ ಧೃವರಾಯನು ಸಾಕ್ಷಿ ಹರಿಯಪೂರ್ಣ ವ್ಯಾಪ್ತಿಯ ತೋರ್ದ ಪ್ರಲ್ಹಾದ ಸಾಕ್ಷಿ 1ದೊರೆ ಅಂಬರೀಷನು ಸಾಕ್ಷಿಹರಿಗುರುಭಕ್ತಿ ನಾಮಕೆ ದ್ರೌಪದಿ ಸಾಕ್ಷಿಸ್ಥಿರ ವಿಭೀಷಣ ರಾಜ ಸಾಕ್ಷಿ ತನ್ನಮರಣ ಕಾಲದಿ ನೆನೆದ ಅಜಮಿಳ ಸಾಕ್ಷಿ 2ದೊರೆ ಧರ್ಮ ದೇವರು ಸಾಕ್ಷಿ ಜಗದ್ಗುರುವಾದ ಮಹ ರುದ್ರದೇವರು ಸಾಕ್ಷಿಗರಳಕಾಳಿಂಗನು ಸಾಕ್ಷಿ ಪ್ರಾಣಾತುರದಿಹರಿಯ ಕರೆದ ಗಜರಾಜ ಸಾಕ್ಷಿ 3ಶಿಲೆಯಾದ ಅಹಲ್ಯೆಯ ಸಾಕ್ಷಿ ಗರ್ವವರ್ತಿಸಿದ ನಹುಷನೃಗರು ಸಾಕ್ಷಿಚೆಲುವೆ ಗಂಡಿಕಾ ವೇಶ್ಯ ಸಾಕ್ಷಿ ಭಕ್ತಿಗೊಲಿದುನಲಿದಜ್ಞಾನಿವಿದುರನು ಸಾಕ್ಷಿ 4ಮೊರೆ ಹೊಕ್ಕ ಸುಗ್ರೀವ ಸಾಕ್ಷಿ ಬಾಲ್ಯಪರಮಮಿತ್ರನಾದ ಕುಚೇಲ ಸಾಕ್ಷಿಶರಬಿಟ್ಟ ಭೃಗುವಾದ ಸಾಕ್ಷಿ ಶ್ರೇಷ್ಠಹರಿದಿನ ವೃತದ ರುಗ್ಮಾಂಗ ಸಾಕ್ಷಿ 5ಪುಂಡಲೀಕ ಋಷಿಸಾಕ್ಷಿ ಆ ಮೃಕಂಡಮುನಿಜ ಮಾರ್ಕಾಂಡೇಯ ಸಾಕ್ಷಿಪಂಡಿತಸಾಂದೀಪ ಸಾಕ್ಷಿ ಕುರುಪಾಂಡವರ ಪಿತಾಮಹ ಭೀಷ್ಮನು ಸಾಕ್ಷಿ 6ಪಿರಿದು ಕಷ್ಟದ ನಳ ಸಾಕ್ಷಿ ಕೃಷ್ಣಕರುಣಿಕೆ ಪಾತ್ರಪರೀಕ್ಷಿತಸಾಕ್ಷಿನಳಕೂಬರು ಸಾಕ್ಷಿ ಸತ್ಯದ್ಹರಿಶ್ಚಂದ್ರಾದಿ ಪುಣ್ಯ ಶ್ಲೋಕರು ಸಾಕ್ಷಿ 7ನಿದ್ದೆಯ ಮುಚುಕುಂದ ಸಾಕ್ಷಿ ಆತ್ಮಬದ್ಧಭಕ್ತಿಯಲರ್ಪಿಸಿದಬಲಿಸಾಕ್ಷಿಶುದ್ಧಜ್ಞಾನಿಶುಕಸಾಕ್ಷಿ ಹರಿಯಸದ್ಯದಣನಾದ ಬಲಭದ್ರ ಸಾಕ್ಷಿ 8ಅರ್ಕಾದಿ ಋಷಿಗಳು ಸಾಕ್ಷಿ ವಿಶ್ವಾಮಿತ್ರದಕ್ಷ ಪ್ರಜೇಶ್ವರೆಲ್ಲ ಸಾಕ್ಷಿಮಿತ್ರೆ ಕುಬ್ಜಾ ತ್ರಿಜಟಿ ಸಾಕ್ಷಿ ಮಹಾಮೈತ್ರೇಯ ಪರಾಶರ ಮುನಿಶರು ಸಾಕ್ಷಿ 9ಇಂದ್ರಾದಿದಿವಿಜರುಸಾಕ್ಷಿ ಕೃಷ್ಣನ್ಹೊಂದಿ ಸೇವಿಸಿದುದ್ಧವಕ್ರೂರ ಸಾಕ್ಷಿಸುಂದರ ಗೋಪಿಯರು ಸಾಕ್ಷಿ ಪಾಪಸಂದೋಹದ್ಯುದೃತ ವಾಲ್ಮೀಕಿ ಸಾಕ್ಷಿ 10ಸರ್ವಮುಕ್ತಜೀವರು ಸಾಕ್ಷಿಯಾ ದೇವರು ವಸುದೇವ ದೇವಕಿಯರು ಸಾಕ್ಷಿಹರಿದಾಸರೆಲ್ಲರು ಸಾಕ್ಷಿ ಫಲಸಿರಿವಿಠಲಗೆ ಕೊಟ್ಟ ಶಬರಿಯ ಸಾಕ್ಷಿ 11
--------------
ಸಿರಿವಿಠಲರು
ಹರಿಯೆ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
--------------
ಪ್ರಸನ್ನವೆಂಕಟದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚುಹುಚ್ಚು ತಿಳಿವುದಲ್ಲ ಹುಚ್ಚನ ಗುರುವೇ ಬಲ್ಲಪನಿರ್ಮಳಾಂಗದ ಹುಚ್ಚುನಿಗಮಶಿರದ ಹುಚ್ಚುಕರ್ಮರಹಿತನ ಹುಚ್ಚುಕಮನೀಯಹುಚ್ಚು1ಸಜ್ಜನ ಸಂಗದ ಹುಚ್ಚು ಸಂತೋಷಪೂರಿತ ಹುಚ್ಚುವೆಚ್ಚವಿಲ್ಲದ ಹುಚ್ಚು ಎಣಿಸಬಾರದು ಹುಚ್ಚು2ಬ್ರಹ್ಮಾನಂದದ ಹುಚ್ಚು ಭೇದರಹಿತದ ಹುಚ್ಚುಹಮ್ಮನಳಿದ ಹುಚ್ಚು ಪರಿಪೂರ್ಣ ಹುಚ್ಚು3ಮತವ ಕಡಿದಾ ಹುಚ್ಚು ಮಹತ್ತೆನಿಪಾ ಹುಚ್ಚುಸತತ ಶಾಂತಹ ಹುಚ್ಚು ಸಹಜಾನಂದದ ಹುಚ್ಚು4ಲೋಕ ಸಾಕ್ಷಿಕ ಹುಚ್ಚು ಲೋಕವುತಾನಾದ ಹುಚ್ಚುಏಕವೆಂಬ ಹುಚ್ಚು ಯಮನ ಗೆಲಿದಾ ಹುಚ್ಚು5ಆರರ ಮೇಲಣ ಹುಚ್ಚು ಅನ್ಯಮನಸ್ಕದ ಹುಚ್ಚುಚಾರುತಾಮಸಹುಚ್ಚು ಚಲನೆಯಿಲ್ಲದ ಹುಚ್ಚು6ಗುರುಭಕ್ತಿಯ ಹುಚ್ಚು ಗುರೂಪದೇಶದ ಹುಚ್ಚುಸ್ಮರಣೆ ಬಲಿದ ಹುಚ್ಚು ಸಮನಿಸಿದ ಹುಚ್ಚು7ಜ್ಯೋತಿರ್ಮಯದ ಹುಚ್ಚು ಜಾತಿ ನಿರ್ಮೂಲದ ಹುಚ್ಚುಖ್ಯಾತಿಯಾಗಿಹ ಹುಚ್ಚು ಭೇದರಹಿತದ ಹುಚ್ಚು8ಚಿನ್ಮಯ ಚಿದ್ರೂಪದ ಹುಚ್ಚು ಚಿದಾನಂದನ ಹುಚ್ಚುತನ್ಮಯವಾಗಿದೆ ಹುಚ್ಚು ತಿಳಿಯಲರಿಯುವುದು ಹುಚ್ಚು9
--------------
ಚಿದಾನಂದ ಅವಧೂತರು