ಒಟ್ಟು 1347 ಕಡೆಗಳಲ್ಲಿ , 97 ದಾಸರು , 1063 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವದ ಪೊಂಬ್ಹರಿವಾಣ ಭಕುತಿಯಾ | ತೀವಿದಾರತಿ ಜ್ಞಾನಜ್ಯೋತಿಯಾರುತಿಯಾ ಪ ಆರುತಿ ಬೆಳಗುವೆನಾ | ನಮ್ಮಯ್ಯಗೆ ಆರುತಿ ಬೆಳಗುವೆನಾ | ಶ್ರೀ ಗುರುವಿಗೆ ಆರುತಿ ಬೆಳಗುವೆನಾ 1 ಮುಖದಲಿ ನುಡಿಯುತ ನಾಮಾವಳಿಯಾ | ಸಕಲರು ಪ್ರೇಮದಿ ಹಾಕಿ ಚಪ್ಪಾಳೆಯಾ 2 ನಯನದಿ ನೋಡಿ | ಶರಣವ ಮಾಡಿ | ಭಯವ ನೀಡಾಡಿ | ಶೃುತಿಗಳಪಾಡಿ3 ಇಂದಿನದಿನದಾನಂದವು ನಮಗೆ | ಹಿಂದಿನ ಪುಣ್ಯ ಇದಿರಿಟ್ಟಿತು ಈಗ4 ಒಡಲ್ಹೊಕ್ಕು ಮಹೀಪತಿ ನಂದ ನೊಡೆಯನಾ | ಪಡೆವ ಬನ್ನಿರೋ ಬೇಗ ಮುಕುತಿಯ ಸದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾಸ್ಕರ ಗುರು ನಮ್ಮ ಪಕ್ಷ ಭಾಸುತಿಹ ಪ್ರತ್ಯಕ್ಷ ಧ್ರುವ ಪೂರಿಸಿ ಮನದಾಪೇಕ್ಷ ಬೀರಿದ ಕರುಣಾಕಟಾಕ್ಷ ತೋರಿದ ನಿಜಲಯ ಲಕ್ಷ ಅರುಹಿದ ಅನುಭವ ಸಾಕ್ಷ 1 ಮಾಡಿಙÁ್ಞನ ಸುದೀಕ್ಷ ನೀಡಿದ ನಿಜ ಸುಭಿಕ್ಷ ದÀೃಢಭಕ್ತರ ಕಲ್ಪವೃಕ್ಷ ಒಡೆಯನಹುದು ಸಂರಕ್ಷ 2 ಮೂಢ ಮಹಿಪತಿಪಕ್ಷ ಬಿಡದೆ ಮಾಡುವ ಸಂರಕ್ಷ ಪುಂಡರೀಕಾಕ್ಷ ಕುಡುವ ಸದ್ಗತಿ ಸುಮೋಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ | ಹರಿ ಭಕುತಿ ಎಂಬಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ ಪ ತ್ರ್ಯಕ್ಷಸು ಸನ್ನುತೆ | ಮೋಕ್ಷದ ಶ್ರೀಹರಿಶಿಕ್ಷಿಸುಭಕುತಿಯ | ಪಕ್ಷಿಯ ಮಾತೇ ಅ.ಪ. ಪತಿ ಸಿರಿ | ವಸುದೇವ ಸುತನನಯಶವ ನುಡಿ ಪದ | ಬಿಸಜದಿ ಭಕುತಿಯ 1 ಮೂರ್ತಿ | ಕೇಳ್ವುದು ಶರಣಾರ್ತಿಮಾನಾಭಿಮಾನ ನಿನ್ನದು ಗಾಯತ್ರಿ | ನರಹರಿ ಗುರು ಭಕ್ತಿ ||ಕ್ಷೋಣಿಯೊಳಗೆ ಸ | ತ್ತ್ರಾಣಿ ಭಾರತಿಯೆಮಾಣದೆನಗೆ ಜಗ | ತ್ರಾಣನ ಭಕುತಿಯ 2 ಸತಿ ಕಾಳೀ||ಸಾರತ ಮನು ಗುರು | ಗೋವಿಂದ ವಿಠಲನಚಾರು ಚರಣ ಸ | ದ್ಭಕುತಿಯು ಎಂಬ 3
--------------
ಗುರುಗೋವಿಂದವಿಠಲರು
ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ ಹಗಲು ಇರಳು ಎಡೆಬಿಡದಲೆ ಪೊಗಳುತ ತವ ನಾಮ ಮಹಿಮೆಯ ಜಗದೀಶನೆ ನಿನ್ನ ಚರಣ ಯುಗಳಲಿ ಬಹು ಭಕ್ತಿ ಮನ ಬಗಿ ಬಗಿಯಲಿ ನಲಿದಾಡುವ 1 ನಿತ್ಯನೆ ಸರ್ವೋತ್ತಮನೇ ಮುಕ್ತಿಪ್ರದನೇ ಪರಮಾತ್ಮನೇ ಉತ್ತಮ ವೃತ್ತಿಯಾನಿತ್ತು ನೇತ್ರದಿ ತವ ನೋಡುತ ವರ ಸ್ತೋತ್ರ ದಿನಾ ಪಾಡುತಿರುವೆ 2 ಎನ್ನಪರಾಧಗಳನ್ನು ಮನ್ನಿಸಿ ಸಲಹಯ್ಯಾ ಜೀಯಾ ಹನುಮೇಶವಿಠಲರಾಯಾ ನಿನ್ನ ಸ್ಮರಣೆಯಲ್ಲಿ ಕಾಲ ವನ್ನು ಕಳೆಯುತಿರುವ ದಿವ್ಯ 3
--------------
ಹನುಮೇಶವಿಠಲ
ಭಿಕ್ಷೆ ನೀಡೆನಗೆ ಪಕ್ಷಿಗಮನ ನಿಮ್ಮ ನಾಮ ಭಿಕ್ಷೆನೀಡಿ ರಕ್ಷಿಸೆನ್ನ ಮೋಕ್ಷಪದಕಧ್ಯಕ್ಷ ನಾಮ ಪ ಅಂಬರೀಷನ ಕಾಯ್ದ ನಾಮ ಇಂಬು ಇವಗಿತ್ತ ನಾಮ ಶಂಭು ಕುಣಿದು ಕುಣಿದು ಪೊಗಳ್ವ ಕುಂಭಿನಿಯೊಳು ಮೆರೆವ ನಾಮ 1 ಕರಿಯ ಕಷ್ಟಕ್ಕಾದ ನಾಮ ತರಳನ್ನೆತ್ತಿ ಪೊರೆದ ನಾಮ ಪರಮಪಾವನೆ ಪರಮೇಶ್ವರಿ ಅರಸಿ ಶಿರವದೂಗ್ವ ನಾಮ 2 ಯಮನ ಬಾಧೆ ಗೆಲಿಪ ನಾಮ ಸುಮನಸರೊಳಾಡಿಸುವ ನಾಮ ಅಮಿತ ಶ್ರೀರಾಮ ನಿಮ್ಮಾನಂದ ನಾಮ 3
--------------
ರಾಮದಾಸರು
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭೀಮಾ ತಟಗ ವಿಠಲ | ಕಾಪಾಡೊ ಇವಳಾ ಪ ಸನ್ನುತ ದೇವಾ | ಪ್ರಾರ್ಥಿಸುವೆ ಹರಿಯೇ ಅ.ಪ. ಮರುತದಲ್ಲಿಹಳು | ತರುಣಿ ಬಹು ಭಕ್ತಿಯಲಿಹರಿದಾಸ್ಯ ಕುಂಕ್ಷಿಪಳು | ಕರಿವರದ ದೇವಾ |ಗುರುಕರುಣ ಸ್ವಪ್ನದಲಿ | ಹರಿದಾಗಿ ಪಡೆದಿಹಳುತರಳೆಜ್ರಪತಿ ವರದ | ಪರಿಪಾಲಿಸಿವಳಾ 1 ಪಂಚ ಪಂಚಿಕೆಯ ಪ್ರ | ಪಂಚ ಸತ್ಯತ್ವವನುಪಂಚ ಭೇದಗಳರುಹಿ | ಕಾಪಾಡೊ ಹರಿಯೇ |ಅಂಚೆ ವಹ ಪಿತನೆ ಸ | ತ್ತರತ ಮತ ತಿಳಿಸುತ್ತಪಂಚರೂಪಾತ್ಮಕನೆ | ಕೈಪಿಡಿಯೊ ಇವಳಾ 2 ಭೋಗಗಳ ಉಂಬಾಗ | ಭೋಗಿರಥೀ ಪಿತನಜಾಗುಮಾಡದೆ ಸ್ಮರಿಪ | ಭಾಗ್ಯವನೆ ಕೊಟ್ಟೂ |ಆಗುಹೋಗುಗಳೆಂಬ | ದ್ವಂದ್ವ ಸಹನೆಯನಿತ್ತುನೀಗೊ ಭವಸಾಗರವ | ಕಾರುಣ್ಯಮೂರ್ತೇ 3 ಪತಿಯೇ ಪರದೈವವೆಂ | ಬತುಳ ಶುಭಮತಿಯಿತ್ತುಗತಿಗೋತ್ರ ನೀನೆಂದು | ಸತತ ಚಿಂತಿಸುತಾ |ಮತಿವರಾಂ ವರರಂಘ್ರಿ | ಶತಪತ್ರಸೇವೆಯನುರತಿಯಿಂದ ಗೈವಂಥ | ಮತಿನೀಡೊ ಹರಿಯೇ4 ಸಂತಾನ ಸಂಪತ್ತು | ಶಾಂತಿಪತಿ ನೀನಿತ್ತುಕಾಂತುಪಿತ ಸೇವೆನೈ | ರಂತರದಿ ಗೈವಾ |ಪಂಥದಲಿ ಇರಿಸು ಗುರು | ಗೋವಿಂದ ವಿಠ್ಠಲನೆಇಂತಪ್ಪ ಪ್ರಾರ್ಥನೆಯ | ಸಲಿಸೋ ಶ್ರೀ ಹರಿಯೇ5
--------------
ಗುರುಗೋವಿಂದವಿಠಲರು
ಭೂತರಾಜರು ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ. ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ. ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ 1 ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ 2 ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ 3
--------------
ಸಿರಿಗುರುತಂದೆವರದವಿಠಲರು
ಭೂತರಾಜರು ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ ಪ ಭಾವಿರುದ್ರ ಜೈ ಜೈ ಜೈ ಅ.ಪ. ವಿನುತ ಗುರುವಿನಲ್ಲಿ ಮುನಿಗೆ ಜೈ ಜೈ ಜೈ 1 ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ | ಬೊಮ್ಮರಕ್ಕಸ ಜೈ ಜೈ ಜೈ 2 ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ | ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ3 ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ4 ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ | ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |5 ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ | ಸುಖದಿ ಬಾಳೆಂದು6 ಗಾತ್ರ ಕೆಂಪು ನೇತ್ರ | ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ 7 ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು | ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ 8 ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ 9 ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ10 ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ11 ಭಂಗ ಗೈದು ನಿಂತೆ ಅಲ್ಲ ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ12 ಕುಣಿದು ಮುದದಿ ಭಜಿಪೆ ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ13 ವೈರಿ ವೃಂದ ಮೋದ ಕೊಡಿಸು ತಿರ್ಪೆಭೂಪ |ಜೈ14 ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ ಅಳಿಯೆ ಸಿಗದು ಜೈ 15 ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ | ಇಂದು ಉಂಬೆ ದಿವ್ಯ ಪದವಿ16 ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ | ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ17 ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ18 ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು | ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ19 ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ20 ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ | ನಲಿವ ಜೈ ಜೈ ಜೈ 21
--------------
ಕೃಷ್ಣವಿಠಲದಾಸರು
ಭೃಂಗ ಕುಂತಳೆಯರು ಮುಯ್ಯ ತಂದಾರೆಂದು ಪ. ಅಂದದ ವಸ್ತವಧರಿಸಿ ದೂತೆ ಚಂದದ ಸೀರೆ ಶೃಂಗರಿಸಿಇಂದಿರೇಶಗೆ ನಮಸ್ಕರಿಸಿತಾನು ಬಂದಾಳೆ ದ್ರೌಪತಿ ಸ್ಮರಿಸಿ 1 ಬಾಗಿಲಿಗೆ ಬಂದಾಳು ನೋಡಿದ್ವಾರಪಾಲಕಗೆ ಉಚಿತವ ಹೇಳಿಹೊನ್ನುಂಗುರಆತಗೆ ನೀಡಿಒಳಗೆ ಪೋದಳು ಹರಿಯ ಕೊಂಡಾಡಿ2 ವಂದಿಸಿ ಯದುನಾಥನಢಿಗೆಮಂದಹಾಸವ ಬೀರಿದೂತೆಯಡೆಗೆಬಂದಾರೈವರೆಂಬೊ ನುಡಿಗೆಆನಂದ ಬಟ್ಟ ಕೃಷ್ಣ ಬ್ಯಾಗನೆ3 ವೇಗದಿ ರುಕ್ಮಿಣಿಗೆಬಾಗಿ ಸುದ್ದಿ ಹೇಳಿ ಮುಯ್ಯದ ಬಗಿ ಬಗಿನಾಗವೇಣಿಯು ಹರುಷಾಗಿಕರೆಯ ಬರತೇವಂತ್ಹೇಳೆ ಹೋಗಿ4 ಪುತ್ಥಳಿ ಮನಕೆ ತಾರೆಂದು 5 ಗುರ್ತು ಹೇಳುವೆ ಕೇಳೊ ದೊರೆಯೆ ಕೃಷ್ಣಚರ್ಚೆ ಮಾತಿನ ಚಮತ್ಕಾರಿಯೆಶೃತ್ಯರ್ಥದಾ ಮಳೆಗರಿಯೆಪ್ರತಿಯುತ್ತರವಕೊಡೋದು ಮರಿಯೆ 6 ಕೋಕಿಲ ಸ್ವರದಂತೆ ಅಳಕು ಹರುಷಾಗಿರಾಮೇಶಗ್ಹಾಕಿ ಮಲಕುಆಗಮಾ ತರತಾಳೆ ಮಲಕುಎಲ್ಲಾ ನಾರಿಯರು ಅಕೆಗೆ ಅಳಕು 7
--------------
ಗಲಗಲಿಅವ್ವನವರು
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ ನರರ ಸಂದಣಿಯಲಿ ವಿರತಿ ಮಾತಾಡಿಸಿ ಮಾರನಾಟದಿ ಮನವೆರಗುವಂದದಿ ಮಾಡಿ 1 ಕಾಷಾಯ ದಂಡಿ ವೇಷವ ಧರಿಸಿ ಮುನ್ನ ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2 ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ ಕಾಳಿಮರ್ಧನ ದೇವ ಮಲಿನ ಮನವನಿತ್ತು 3 ಕರವಶವನೆ ಮಾಡಿ ಸರಸದಿಂದ ಕಲೆಹಾಕಿ ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4 ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5 ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ ಮಾಧವ 6 ಪತಿತಾಗ್ರಣಿಯು ನಾನು ಪತಿತ ಪಾವನ ನೀನು ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7 ದ್ವಿಜ ಅಜಮಿಳ ನಿಜನಾಮದಿಂದಲಿ ಸುಜನನೆಂದೆನಿಸಿದ್ದು ನಿಜತೋರದಲೆನ್ನ 8 ಹೀನರೊಳೆನ್ನೆಂಥ ಹೀನ ಜನರ ಕಾಣೆ ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
--------------
ಪ್ರದ್ಯುಮ್ನತೀರ್ಥರು
ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ. ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ ತುಪ್ಪಾಕಜ್ಜಾಯ ಕೊಡುವೆನೂ 1 ಅಂದಿಗೆ ಕಿರುಗೆÉಜ್ಜೆ ಅಲಗೊತ್ತು ಕೈಯೊಳಗಿದ್ದು ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ ಅಂದವಾದ ಒಂದು ಮುದ್ದು ತಾರಯ್ಯ 2 ಓಡಿಓಡಿ ಬಾರೋ ವಸುದೇವನಂದನಾ ಕಂದ ನೋಡಿ ನೋಡಿ ನಗುತ ಬಾರೊ ರಂಗಯ್ಯ ಕೋಡಗಲ್ಲವಾಸ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಲವಾ ಪಾಡುವೆನಾ ಮಂಗಲಾಂಗ ಗುರುದೇವಗೆ ಸಂಗರಹಿತ ಸಂಪೂರ್ಣಗೆ ಕಂಗೊಳಿಸುವ ಪರಮಾತ್ಮಗೆ ಪ ಬೋಧಿಸುತಲಿ ಪ್ರೇಮದಿಂದ ಸಾಧನೆ ಸಾಧ್ಯಗಳ ಮರ್ಮ ಛೇದಿಸುತಲಿ ಭವಜಾಲವ ಮೋದವೀವ ಘನ ಮಹಿಮಗೆ 1 ಬಲು ಶಾಸ್ತ್ರದ ತೊಡಕಿಲ್ಲದೆ ಸುಲಭದಿಂದ ಬೋಧಿಸುವಾ ತಿಳಿ ಆತ್ಮನೇ ನೀನೆನ್ನುತ ಘನ ಶಾಂತಿಯ ನೀಡಿದವಗೆ 2 ನಾರಾಯಣ ಗುರುದೇವನ ಪರಮ ಪ್ರೀತಿ ಪಾತ್ರನೀತ ಧರೆಯೊಳಗವತರಿಸಿದ ಶ್ರೀ ಗುರುಶಂಕರದೇವನಿಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ