ಒಟ್ಟು 1493 ಕಡೆಗಳಲ್ಲಿ , 102 ದಾಸರು , 1221 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡುವೆ ಪರಿಪಾಲಿಸೆನ್ನ ಪ ಅಗಣಿತ ಮಹಿಮ ಜಗವನುದ್ಧರಿಸುವ | ಘನ ಗುಣಧಾಮ 1 ಪಶುಪತಿ ಪ್ರೇಮ || ಕೌಶಿಕ ಮಖಪರಿ | ಪಾಲಕ ರಾಮ 2 ಪಾವನ ರಾಮ | ಶ್ರೀವರ ರಾಮ || ಪವನಜಸೇವಿತ| ರವಿಕುಲಸೋಮ 3 ದಶರಥರಾಮ | ವಸುಧೀಶ ರಾಮ || ಋಷಿಪತ್ನಿಯಹಲ್ಯೋ| ದ್ಧಾರಕ ರಾಮ 4 ಅಸುರಾರಿ ರಾಮ | ಬಿಸಜಾಕ್ಷ ರಾಮ || ದಶಮುಖಭಂಜನ | ಕೋದಂಡರಾಮ5
--------------
ವೆಂಕಟ್‍ರಾವ್
ಬೇರೊಬ್ಬರನು ಕಾಣೆನೋ ಪ ಗರ್ಭದೊತ್ತಿನಲಿ ಇರಿಸಿದವರಾರೋ ಕೈಕಾಲಸುತ್ತಿನರದಲಿ ಬಿಗಿದವರಾರೋ ನೇತ್ರವನು ರಚಿಸಿದವರಾರೋ ತುಂಬಿ ತುತ್ತುಗಳ ನಡಸಿದವರಾರೋ 1 ನೇಮದಲಿ ಕಲ್ಪಿಸಿದವರಾರೋ ಪಲ್ಲವೋರಣದಿ ಪವಣಿಸಿದವರಾರೋ ನಿರ್ಮಿಸಿ ನವದ್ವಾರವನು ತಿದ್ದಿದವರಾರೋ ಪಾಪಗಳ ಕಾವಲನೆ ಮಾಡಿದವರಾರೋ 2 ನೀಲ ಕುರುಳಿಸಿದವರಾರೋ ಪಲ್ಲವಿಸಿ ಪಸರಿಸಿದರಾರೋ ಅಲ್ಲಿ ತೊಟ್ಟಿಲೊಳಿಕ್ಕಿದವರಾರೋ ಮೈಮರೆತಿಹರು ಮೂಢಜನರು 3 ಪ್ರತಿಬಿಂಬಿಸುತ ಪರಿಪೂರ್ಣನೆನಿಸಲಾರೋ ನೆಂಬುದಲ್ಲದೆ ಮತ್ತದಾರೋ ಅಂಬರೀಶನೆ ಸಾಕ್ಷಿಯಲ್ಲದಾರೋ 4 ಪತ್ತು ಬಿಡಸದೇನೋ ನೀ ಪರೀಕ್ಷಿಸಿದ ಮಾತ್ರದಿಂದೆನ್ನ ಪಾಪಗಳು ಪೋಗವೇನೋ ಶ್ರೀ ಲಕ್ಷ್ಮೀ ರಮಣಗರಿದೇನೋ 5
--------------
ಕವಿ ಪರಮದೇವದಾಸರು
ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
--------------
ಗೋಪಾಲಾರ್ಯರು
ಬೋಧಕರಾರೊ ಲೋಕದೀ ದಾಸಗೆ ಬಾಧಿಪ ದುರಿತಗಳ ದೂರ ಮಾಡಿ ಮಾಧವ ನೀನೆ ದಯವು ಮಾಡಲಿ ಬೇಕೊ ಸಾಧಕ ಸಾಧ್ಯನೊ ನೀನು ಸ್ವಾಮಿ ಪ ಓದಲು ಮೊದಲಿಲ್ಲ ಕೇಳಿ ಶಾಸ್ತ್ರಗಳಿಲ್ಲ ಮೋದಿಸುವ ಮಾತ್ರ ಭಕ್ತರ ಕಡು ಮೋದತೀರ್ಥರ ಮತ ಇವನಿಗೆ ತಿಳುವಂತೆ ಕರವ ಪಿಡಿಯೊ 1 ಆಲಸಬಟ್ಟನು ಇವ ನಿನ್ನ ಪೂಜಿಗೆ ತಕ್ಕ ಕೆಲಸವ ಮಾಡಲು ಮೊದಲರಿಯ ಒಲಿಸಬೇಕೆಂದು ಮನದಿ ಹಂಬಲಿಸು ಚಲಿಸದ ಮನ ಮಾತ್ರಕೆ ಕೊಡಲಿಬೇಕು 2 ಭಾರ ನಿನ್ನದು ಸ್ವಾಮಿ ಆಸರಾಗಲಿ ಬೇಕು ಒಬ್ಬರಿಗೆ ದಾಸ ಮತ್ತೊಬ್ಬ ಎಂದು ನಿನ್ನಯ ಕ್ಲಪ್ತ ವಾಸುದೇವವಿಠಲ ನೀನರಿಯದೇನೊ 3
--------------
ವ್ಯಾಸತತ್ವಜ್ಞದಾಸರು
ಬ್ರಹ್ಮಕೊರವಂಜಿ ಸುರರು ಕಿನ್ನರರು ಸ್ಮರಣೆ ಮಾಡುವ ಪಾದ ಕುರುಪತಿಯ ಗರ್ವವನು ಪರಿಹರಿಸುವ ಪಾದ ಪರಮ ಯೋಗಿಗಳ ಹೃತ್ಕಮಲದಲ್ಲಿಹ ಪಾದ ಪಾದ ಪದ್ಮವನು ನೆನೆವೆ ನಾನು 1 ದಾನವಾರಿಯ ಚೆಲ್ವ ಜಾನು ಜಂಘೆಗಳೆಸೆವ ಮೀನ ಖಂಡಗಳ ಪೆರ್ದೊಡೆಯ ಸೊಬಗಿನ ಭಾನುಕೋಟಿ ಪ್ರಕಾಶದಂತೆ ವರಕಾಂತಿಯಲಿ ಆನಂದದಿಂದಲಿ ಮೆರೆವ ಮೂರುತಿಯ ನೆನೆವೆÀ ನಾನು 2 ಮಿಸುನಿ ಒಡ್ಯಾಣ ಕಾಂಚಿಯದಾಮ ತೆಳ್ವಸುರ ಬಿಸಜನಾಭನ ಬಾಹುಪುರಿಯ ಸೊಬಗಿನ ಎಸೆವ ಗದೆ ಶಂಕಚಕ್ರವು ಪದ್ಮಕರದಿ ಶೋ ಭಿಸುತಿರುವ ಕಂಬುಕಂಧರದ ಮೂರುತಿಯ ನೆನೆವೆ ನಾನು 3 ಕದಪು ಕಂಗಳು ಎಸೆಯೆ ಕರ್ಣಕುಂಡಲದ ಸಂಪಿಗೆಯ ನಾಸಿಕದ ರನ್ನ ತುಟಿ ಝಗಝಗಿಸೆ ಕುಡಿಹುಬ್ಬುಗಳು ಎಳೆಯ ಮನ್ಮಥನ ಚಾಪದಂತೆಸೆವ ಮೂರುತಿಯ ನೆನೆವೆÀ ನಾನು 4 ಅರೆದಿಂಗಳಂತೆಸೆವ ನೊಸಲ ಕಸ್ತೂರಿತಿಲಕ ಹೊಳೆÀವ ಕಿರೀಟ ಮಸ್ತಕದಿ ಢಾಳಿಸುವ ಅಲಸದೀರೇಳ್ಜಗವ ಕರುಣದಲಿ ರಕ್ಷಿಸುವ ಹೆಳವನಕಟ್ಟೆ ಶ್ರೀ ವೆಂಕಟೇಶ್ವರನ ನೆನೆವೆ ನಾನು 5 ಕಂಸಾಸುರನಿಟ್ಟ ಸೆರೆಯ ಮನೆಯೊಳು ಕಷ್ಟಪಡುತಲಿ ದೇವಕಿನಿ- ಮಿಷ ಯುಗವಾಗಿ ಕಳೆಯುತಿದ್ದಳು ನಿತ್ಯಾನಂದನ ನೆನೆಯುತಾ ಕಂಸರಿಪು ನಾರಾಯಣನು ಜನಿಸುವನೆಂದು ಅರುಹುವೆನೆನುತಲಿ ಧರಿಸಿದ ಆದನೆ ಕೊರವಿ 6 ಮಲ್ಲಿಗೆಯ ವನಮಾಲೆಯ ಚಂದ್ರಗಾವಿಯನುಟ್ಟು ಪಣೆಯೊಳು ತಿದ್ದಿತಿಲಕವನಿಟ್ಟನು ಗಂಧ ಕಸ್ತೂರಿ ಪರಿಮಳವನು ಲೇಪಿಸಿ ಸರ್ವಾಂಗದಿ ಭಾಸ್ಕರನಂದದಿ ಆದನೆ ಕೊರವಿ 7 ಗುಂಜಿಯ ದಂಡೆಯು ತೋಳಭಾಪುರಿ ಗಲ್ಲಕೊತ್ತಿದ ವೀಳ್ಯವು ಮಂಜಾಡಿಯಸರ ಹವಳ ಸರ ಹತ್ತೆಸರವಾ ಕೊರಳಲಿ ಹೊಳೆಯಲು ಅಂಜನವನಿಟ್ಟು ಅಲರಗಣ್ಣಿಗೆ ಅತಿಹರುಷದಿಂದ ಬೇಗದಿ ಆದನೆ ಕೊರವಿ 8 ಮುತ್ತು ಮಾಣಿಕ ಹೊನ್ನಗೂಡೆಯ ಪಿಡಿದು ಉತ್ತಮ ಶಿಶುವ ಬೆನ್ನಲಿ ಕಟ್ಟಿ ಚಿತ್ತದೊಳಗೆ ನರಹರಿ ಶರಣೆನುತ ಸತ್ಯಲೋಕದಿಂದಿಳಿದಳೆ ಕೊರವಿ 9 ಮಧುರಾ ಪಟ್ಟಣಕಾಗಿ ಬಂದಳೆ ಕೊರವಿ ಹದಿನಾರು ಬಾಗಿಲ ದಾಟಿ ನಡೆದಳು ಮದಗಜದಂತೆ ಮೆಲ್ಲಡಿಗಳನಿಡುತ ಬೆದರದೆ ಕೇರಿಕೇರಿಯಲಿ ಸ್ವರಗೈದು 10 ಮನೆಮನೆ ಬಾಗಿಲಗಳ ಮುಂದೆ ನಿಂತು ವನದ ಕೋಗಿಲೆಯಂತೆ ಯವ್ವಾ ಯವ್ವಾ ಎನುತ ವಿನಯದಿ ಸ್ವರಗೈವ ಕೊರವಿಯ ಕಂಡು ವನಿತೆ ದೇವಕಿ ಸನ್ನೆಮಾಡಿ ಕರೆದಳು 11 ಸನ್ನೆಮಾಡಿ ಕರದರೆ ಚೆನ್ನಕೊರವಂಜಿ ಬಂದು ಎನ್ನವ್ವ ಎನ್ನಕ್ಕ ಎನ್ನ ತಂದೆಯ ಹೆತ್ತವ್ವ ನಿನ್ನ ಮನದಾಯತವ ಹೇಳೇನು ಬಾರವ್ವ ಎನ್ನ ಕೂಸಿಗೆ ಒಂದಿಷ್ಟನ್ನವನಿಕ್ಕವ್ವ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 12 ಮಲೆಯಾಳ ಕೊಂಕಣದೇಶ ಮಹಾರಾಷ್ಟ್ರ ಗುಜ್ಜರದೇಶ ಚೆಲುವ ಕಾಶ್ಮೀರ ಕಳಿಂಗ ಕರ್ನಾಟಕದೇಶ ತುಳುವ ತಿಲುಗ ದೇಶವನ್ನು ತಿರುಗಿ ಸೊಲ್ಲ ಹೇಳಿ ಬಂದೆ ಒಲುಮೆಯ ಕೊರವಂಜಿ ನಾನಲ್ಲವೆಯಮ್ಮ ಸೊಲ್ಲ ಕೇಳೆ ಸೊಲ್ಲ ಕೇಳೆ ಸಿರಿವಂತೆ ಬಾರೆ13 ಛಪ್ಪನ್ನ ದೇಶವನೆಲ್ಲ ಸುತ್ತಿ ಸೊಲ್ಲ ಹೇಳಿಬಂದೆ ತಪ್ಪ ಹೇಳುವ ಕೊರವಿ ನಾನಲ್ಲವೆಯಮ್ಮ ಕರ್ಪೂರ ವೀಳ್ಯವ ತಾರೆ ಕಾಂತೆ ನಿನ್ನ ಕೈಯ ತೋರೆ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 14 ವಚನ :ಇತ್ತಿತ್ತ ಬಾರವ್ವ ವಿವರಿಸಿ ಹೇಳೇನು ಮುತ್ತಿನ ಮುಡಿಯವ್ವ ಮುದ್ದುಮುಖವ ತೋರೆ ಮತ್ತಗಜಗಮನೆ ಮಂದಹಾಸವದನೆ ರತ್ನದ ಸೆಳೆಗೋಲ ಪಿಡಿಯೆ ರಾಜೀವನೇತ್ರೆ ನಿನ್ನ ಚಿತ್ತದೊಳಗಣ ಮಾತ ಛಂದವಾಗಿ ಹೇಳ್ವೆನು ಕೇಳೆ ಅಮ್ಮಯ್ಯ ಬರಿಯ ಡಂಬಕದ ಕೊರವಿ ನಾನಲ್ಲ ಅರುಹುವೆನು ಮುಂದಣ ಕಥಾಂತ್ರವೆಲ್ಲವ ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ15 ಎಂದ ಮಾತ ಕೇಳಿ ಹರುಷದಿಂದ ದೇವಕಿ ಮಿಂದು ಮಡಿಯನುಟ್ಟು ಕಾಂತೆ ಬಂದು ಕುಳಿತಳು ಇಂದುಮುಖಿಯು ಮೊರನ ತುಂಬ ಮುತ್ತನಿಟ್ಟಳು ತಂದು ಕೈಯತುಂಬ ಹೊನ್ನ ಕಾಣಿಕಿಟ್ಟಳು 16 ಗುಣಿಸಿ ಮುತ್ತಿನ ಅಕ್ಷತೆಯಿಟ್ಟು ಗುಪಿತದಿಂದಲಿ ನೆನೆದಳು ಮನದಭೀಷ್ಟವೀವ ಕೃಷ್ಣನ ಜನಿಸಿದೆನು ಮಧುರಾಪುರದ ಅರಸನುದರದಿ ಎನ್ನ ಸೋದರನೆಂಬ ಪಾಪಿ ಸೆರೆಯೊಳಿಟ್ಟನು17 ಎನ್ನ ಸುತನು ತನ್ನ ಕೊಲುವನೆಂಬ ಮಾತಿಗೆ ಎನ್ನ ಅಗ್ರಜ ಎನ್ನ ಮೇಲೆ ಖಡ್ಗವೆತ್ತಲು ಎನ್ನ ಪತಿಯು ಎನ್ನ ಮೇಲಣ ಮಮತೆಯಿಂದಲಿ ತನ್ನ ಸುತರ ಕೊಡುವೆನೆಂದು ಕೊಲೆಯನುಳುಹಿದ18 ಒಡನೆ ಹುಟ್ಟಿದ ಅಣ್ಣ ಎನಗೆ ವೈರಿಯಾದನು ಪಡೆದ ಪಡೆದ ಸುತರನರೆಯಲಪ್ಪಳಿಸಿದನು ಒಡೆಯ ಕೃಷ್ಣಸಲಹೊ ಎಂದು ಸ್ತುತಿಸಿ ದೇವಕಿ ಗಡಣದಿಂದ ಕೊರವಿ ತಾನು ಹೇಳ ಕುಳಿತಳು 19 ವಚನ :ತಿರುಪತಿ ತಿಮ್ಮಪ್ಪ ಚಳ್ಳಪಿಳ್ಳೆರಾಯ ಸುರಪುರವಾಸ ಲಕ್ಷ್ಮೀವರ ಕರುಣವಾಗು ವಂದನೆ ಸೊಲ್ಲ ಚಂದಾಗಿ ಹೇಳೇನು ಕೇಳೆಯಮ್ಮಯ್ಯಾ ಉರ್ಬಿಯೊಳತಿ ದಿಟ್ಟನಮ್ಮ ನಿಮ್ಮ ಮಗನು ಗರ್ಭದೊಳಿಹನು ಕಾಣಮ್ಮ ಕೊಬ್ಬಿದ ಕಂಸನ ಹಮ್ಮ ಮುರಿದು ನಿಮ್ಮ ನಿರ್ಬಂಧ ಬಿಡಿಸುವನಮ್ಮ 20 ಎಂಟನೆ ಗರ್ಭವಿದಮ್ಮ ನಿಮ್ಮುದರದಿ ಅಂಟಿಹ ಮಗನು ಕಾಣಮ್ಮ ಗಂಟಲ ಮುರಿವ ಕಾಣಮ್ಮ 21 ನಿಷ್ಕರುಣಿ ನಿಮ್ಮಣ್ಣನಮ್ಮ ನೀ ಪಡೆದಂಥ ಮಕ್ಕಳ ಕೊಲ್ಲುವ ಕಾಣಮ್ಮ ಚಕ್ರಧರನ ಕೈಯೊಳಮ್ಮ ಈ ಕಂಸನು ಸಿಕ್ಕುವುದು ತಡವಿಲ್ಲವಮ್ಮ 22 ವಚನ : ಈ ಮಾತು ಪುಸಿಯಲ್ಲ ಸ್ವಾಮಿಯ ಕರುಣ ಉಂಟು ಕೈಗೂಡಿತು ಕೇಳೆಯಮ್ಮಯ್ಯಾ ಕೈಯ ತೋರೆ ಕೈಯ ತೋರೆ ಕೈಯ ತೋರೆ ಅಮ್ಮಯ್ಯ ಕೈಯ ತೋರೆ ನಿನ್ನ ಮನದ ಕುರುಹ ಹೇಳುವೆ ಸೈಯೆನಿಸಿಕೊಂಬೆ ನಿನಗೆ ಸುಖವಾಕ್ಯವನು ಹೇಳಿ ಭಯ ಬೇಡವೇ ಅಮ್ಮಯ್ಯ ನಿನಗೆ ಭಾಷೆಯ ಕೊಡುವೆ 23 ಸಟೆಯ ಮಾತುಗಳಾಡಿ ಸೆಳೆದುಕೊಂಡು ಹೋಗಿ ಹೊಟ್ಟೆಯ ಹೊರೆವ ಕೊರವಿ ನಾನಲ್ಲವಮ್ಮ ನೆಟ್ಟನೆ ಸದಾಶಿವನ ತಟ್ಟಿ ಬಂದ ಕೊರವಿಯ ಮಾತ ದಿಟ್ಟವೆಂದು ಸೆರಗ ಗಂಟಿಕ್ಕಿಕೊಳ್ಳಮ್ಮ 24 ಅಂಗನೆ ನಿನ್ನ ಮನದ ಆಯಿತವ ಹೇಳೇನು ಮಾನಿನಿ ರನ್ನೆ ಬಂಗಾರದ ಕೈಯ ತೋರೆ ಬೊಗಸೆಗಂಗಳ ನೀರೆ ಹಿಂಗುವದು ನಿನ್ನ ಕಷ್ಟ ಹುಸಿಯಲ್ಲವಮ್ಮ 25 ವಚನ :ಚಂದ್ರವದನೆಯ ಚೆಲ್ವ ವಾಮಹಸ್ತವ ಚಂದದಿಂದಲಿ ಕೊರವಿ ವಿವರಿಸಿ ಹೇಳಿದಳು ಹಿಂದಣ ಕಷ್ಟವೆಲ್ಲ ಪರಿಹಾರವಾಯಿತು ಶುಭ ಶ್ರಾವಣ ಬಹುಳಾಷ್ಟಮಿ ರಾತ್ರೆಯ ನಡುವಿರುಳು ರೋಹಿಣಿ ನಕ್ಷತ್ರದಲ್ಲಿ ನಿಮ್ಮುದರದಿ ಕೃಷ್ಣ ಜನಿಸುವನು ಕಾಣೆ ಕೇಳಮ್ಮಯ್ಯ 26 ಪಂಕಜ ಪೀತಾಂಬರ ಅ- ಲಂಕಾರ ಮೂರುತಿಯಾಗಿ ಪುಟ್ಟುವ ಕೃಷ್ಣ ಶಂಕೆಯಗೊಳದಿರೆ ಕೇಳಮ್ಮಯ್ಯ 27 ಅಮ್ಮಾ ನಿಮ್ಮುದರದಿ ಬ್ರಹ್ಮನಪಿತ ಬಂದು ನಿಮ್ಮ ನಿರ್ಬಂಧವ ಬಿಡಿಸುವನು ಕಾಣೆ ಉಮ್ಮಯಗೊಳಬೇಡವೆ ಕೇಳಮ್ಮಯ್ಯ 28 ಆದಿಮೂರುತಿ ನಿಮ್ಮುದರದೊಳವತರಿಸಿ ಮೇದಿನಿ ಭಾರವನಿಳುಹಲು ಕಂಸನ ಭೇದಿಸುವನು ಕಾಣೆ ಕೇಳುಮ್ಮಯ್ಯ 29 ಏಳು ಮಕ್ಕಳ ಕಂಸ ಅರೆಯಲಪ್ಪಳಿಸಿದನೆ ಚಳ್ಳೆ ಬೀಜದಂತೆ ನುಣಿಚಿ ತಪ್ಪಿಸಿಕೊಂಬ ಕಳ್ಳಮಗನು ಪುಟ್ಟುವ ಕೇಳಮ್ಮಯ್ಯ 30 ವಚನ : ಇಂಥಾ ಮಗನು ನಿಮ್ಮುದರದಿ ಜನಿಸಲು ಕಾಂತ ವಸುದೇವರು ಗೋಕುಲಕೆ ಒಯ್ಯಲು ಸಂತೋಷದಿಂದಲ್ಲಿ ಬೆಳೆವನೆ ಕೃಷ್ಣ ಕೇಳಮ್ಮಯ್ಯ ಗೋಕುಲದೊಳಗೆ ಶ್ರೀ ಕೃಷ್ಣನನಿಟ್ಟು ದುರ್ಗೆಯ ಈ ಕಡೆಗೆ ಕೊಂಡುಬಹ ನಿಮ್ಮ ಪತಿಯು ಕಾಕು ಕಂಸಾಸುರನು ಆಕೆಯ ಪಿಡಿಯೆ ಗಗ- ನಾಕೆ ಹಾರಿ ಹೋಗುವಳು ಮಾಯಾಕಾರಿಯು 31 ಕ್ರೂರ ರಕ್ಕಸ ಎನ್ನ ಕೊಲ್ಲುವದೇತಕೋ ನಿನ್ನ ವೈರಿ ಕೃಷ್ಣ ಹೋಗಿ ಗೋಕುಲದೊಳಗೆ ಧೀರನಾಗಿ ಬೆಳೆದು ಸಂಹಾರವ ಮಾಡುವನೆಂದು ಸಾರಿ ಹಾರಿ ಹೋಗುವಳಂಬರಕೆ ದುರ್ಗಿ 32 ನಂದನ ಗೋಕುಲದಿ ಆನಂದದಿ ಬೆಳೆದಾನು ಕೃಷ್ಣ ಸಂದೇಹ ಬೇಡವವ್ವ ನಿಮ್ಮ ಮನದೊಳಗೆ ಬಂದು ಮz
--------------
ಹೆಳವನಕಟ್ಟೆ ಗಿರಿಯಮ್ಮ
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಬ್ರಹ್ಮವು ನೀನೇಬ್ರಹ್ಮವು ನೀನೆಂದು ನಂಬಲೋ ದೊರೆಯೇ ಪ ವ್ಯಾಪಾರ ಮೂಗಿನಲ್ಲಲ್ಲ ಮೂಗಿನವ್ಯಾಪಾರ ಕಣ್ಣಿನಲ್ಲಿಲ್ಲನಿನ್ನ ವ್ಯಾಪಾರ ಸಕಲವು ಎಲ್ಲನಿನ್ನ ಹೊರತು ಬೇರೆ ಏನಿಲ್ಲ1 ಜಾಗೃತ ವ್ಯಾಪಾರ ಸ್ವಪ್ನದಲಿಲ್ಲಸ್ವಪ್ನದ ವ್ಯಾಪಾರ ಜಾಗೃತದಲ್ಲಿಲ್ಲಜಾಗೃತ ಸ್ವಪ್ನವೆರಡು ಸುಷುಪ್ತಿಯಲ್ಲಿಲ್ಲಸುಷುಪ್ತಿ ತುರೀಯವು ಜಾಗೃತದಲ್ಲಿಲ್ಲ 2 ನಾದದ ವ್ಯಾಪಾರ ಬಿಂದುವಿನಲ್ಲಿಲ್ಲಬಿಂದು ವ್ಯಾಪಾರ ನಾದದಲ್ಲಿಲ್ಲನಾದ ಬಿಂದು ಕಳೆ ಮೂರಕೆ ಇಲ್ಲಬೋಧ ಚಿದಾನಂದ ಹೊರತಿಹನಲ್ಲ 3
--------------
ಚಿದಾನಂದ ಅವಧೂತರು
ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ ಮಂದಭಾಗ್ಯನು ನಾನು ವೃಂದಾರಕ ವಂದ್ಯ ತಂದೆ ಎನಗೆಂದೆಂದು ಅನಿಮಿತ್ತಬಂಧೂ ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ- ದೊಂದನಾದರು ಇತ್ತು ಬಂಧವ ಪರಿಹರಿಸೊ ಹಿಂದೆ ನಿನ್ನಯ ನಾಮ ಒಂದೇ ಬಂಧಹರಿಸಿತು ಭಕುತವೃಂದಕೆ ಅಂದು ಅವರೇನೆಂದು ಕರೆದರೋ ಮಂದರೋದ್ಧರ ಬಂಧಮೋಚಕ1 ಓಲೈಪರೋ ಮುಕ್ತಜಾಲ ನಿನ್ನ ಕಾಲನಾಮಕ ಆಪತ್ಕಾಲಬಾಂಧವನೆಂದು ಕಾಲಿಗೆರಗುವೆ ಕೃಪಾಳು ನೀನಲ್ಲವೆ ಸೊಲ್ಲಲಾಲಿಸೊ ಲಕುಮಿನಲ್ಲ ನೀ ನಲ್ಲದಲೆ ಇನ್ನಿಲ್ಲವೆಂದಿಗೂ ಬಲ್ಲಿದರಿಗತಿಬಲ್ಲಿದನು ಆ- ವಲ್ಲಿ ನೆನೆದರೆ ಅಲ್ಲೇ ಪೊರೆವೆ 2 ಪುರಾಣಪುರುಷನೆ ಪರಮ ಕರುಣಿ ಎಂದು ಪುರಾಣದೊಳು ನೀನೆ ಪ್ರತಿಪಾದ್ಯನೊ ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ ಸ್ಮರಿಪರಘ ಪರಿಹರಿಪ ಶ್ರೀಪ ಸುರಪಹರಮುಖವಿಬುಧವಂದ್ಯ ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ಭಕುತೋದ್ಧಾರ ಪರಿಭವದ್ವೈದ್ಯ ನಿಖಿಲಬ್ರಹ್ಮಾಂಡ ಸುಸೂತ್ರ ಸಿರಿಬಾಧ್ಯ ನಿಖಿಲವ್ಯಾಪಕ ನಿಖಿಲರಕ್ಷ ಭಕುತರಾತ್ಮಕ ಭಕುತಪಕ್ಷ ಪ್ರಕಟರಕ್ಕಸಕುಲ ನಿರ್ಮೂಲನೆ ಮುಕುಟಮಾನಸ ಮನದಿ ಭಜಿಪರ ಮುಕುತಿದಾಯಕ ಮಣಿವೆನೈ ಮಹ ಮುಕುತಿಸಂಪದ ಕರುಣಿಸಭವ ಪ ಕಲ್ಪನೆಯಿಂದೊಂದೆತ್ರಯವೆನಿಸಿ ಕಲ್ಪ ಕಲಿಸಿ ಕಲ್ಪನೆಯಿಂದ ನಾಲ್ಕುಘೋಷ ರಚಿಸಿ ಕಲ್ಪನಿಲ್ಲದೆ ಕಲ್ಪಕಲ್ಪದರರ್ಹೊಗಳಿಸಿ ಕಲ್ಪಿತದಿ ನೆಲಸಿ ಕಲ್ಪಿತದಿ ಸಂಕಲ್ಪ ತೋರಿಸಿ ಕಲ್ಪಿತದಿಂ ಸಂಕಲ್ಪ ಮುಳುಗಿಸಿ ಕಲ್ಪ ಕಲ್ಪಾಂತರದಿ ಉದಿಸಿ ಕಲ್ಪತಕೆ ನೀ ಬೇರೆಯೆನಿಸಿ ಕಲ್ಪನದೊಳು ಕಲ್ಪ ಕೂಡಿಸಿ ಕಲ್ಪನಕೆ ಮಹಪ್ರಳಯವೆನಿಸಿ ಕಲ್ಪನೆಯನು ಮತ್ತು ತಿರುಗಿಸಿ ಕಲ್ಪಿಸಿದಿ ಪುನ:ಸಫಲವೆನಿಸಿ ಕಲ್ಪನೆಯನು ಪೊಗಳಲಿನ್ನಾವ ಕಲ್ಪನಕೆ ತುಸು ಶಕ್ಯವಲ್ಲವು ಕಲ್ಪ ಕಲ್ಪಾಂತರದಿ ಎನ್ನನು ಕಲ್ಪಿಸದಿರು ಕಲ್ಪತರುವೆ 1 ಕಲ್ಪಿಸಿದೆ ಕೋಟಿ ತ್ರಿದಶತ್ರಯೆನಿಸಿ ಕಲ್ಪ ಕಲ್ಪಕೆ ಕಲ್ಪಿತೀಯುವ ಮಂತ್ರ ಕಲ್ಪಿಸಿ ಕಲ್ಪಿಸಿದಿಯೊ ಕಲ್ಪ ಕಲ್ಪದಿ ಐದು ಮೇಲೆನಿಸಿ ಕಲ್ಪಸಾರೆನಿಸಿ ಕಲ್ಪನೆ ಮಹತಾರಕೆನಿಸಿ ಕಲ್ಪನೆ ಘನಗಾಯತ್ರೆನಿಸಿ ಕಲ್ಪನೆಯಲಿ ಸ್ಥೂಲವೆನಿಸಿ ಕಲ್ಪನೆ ಬಹುಸೂಕ್ಷ್ಮವೆನಿಸಿ ಕಲ್ಪನೆಯ ಮಹಕಾರಣೆನಿಸಿ ಕಲ್ಪನದಿ ಈ ಕಲ್ಪವಿರಿಸಿ ಕಲ್ಪನಕೆ ನೀನೆ ಸೂತ್ರನೆನಿಸಿ ಕಲ್ಪನಕೆ ನೀನೆ ಚೈತನ್ಯನೆನಿಸಿ ಕಲ್ಪ ಕುಣಿಸುವಿ ಕಲ್ಪನಿಲ್ಲದ ಕಲ್ಪದ ನೆಲೆಬುಡ ನೀನೆನ್ನಯ ಕಲ್ಪನೆಯೊಳುದಯನಾಗಿ ಕಲ್ಪನೆಯ ಕಡೆಗಾಣಿಸಭವ 2 ಕಲ್ಪ ಕಲ್ಪಕೆ ಆಚೆ ನೀನೆನಿಸಿ ಕಲ್ಪ ನಿರ್ಮಿಸಿ ಕಲ್ಪ ಕಲ್ಪದಿ ನೀನೆ ಆವರಿಸಿ ಕಲ್ಪ ನಡೆಸಿ ಕಲ್ಪ ಕಲ್ಪದಮೂಲ ನೀನೆನಿಸಿ ಕಲ್ಪದಿಂ ನುಡಿಸಿ ಕಲ್ಪದಲಿ ಮಿಥ್ಯಕಲ್ಪ ಪುಟ್ಟಿಸಿ ಕಲ್ಪದಲಿ ನಿಜಕಲ್ಪ ಸೃಷ್ಟಿಸಿ ಕಲ್ಪದಿಂ ತ್ರಿಕಲ್ಪ ರಕ್ಷಿಸಿ ಕಲ್ಪದಿಂ ಕಲ್ಪಕ್ಕೆ ಶಿಕ್ಷಿಸಿ ಕಲ್ಪವೇ ಮಹ ಮಾಯವೆನಿಸಿ ಕಲ್ಪದಿಂದಲೇ ಅದನು ಗೆಲಿಸಿ ಕಲ್ಪದಿಂ ಕಲ್ಪವನು ಬೆಳಗಿಸಿ ಕಲ್ಪದಿಂ ಕಲ್ಪವನು ತೊಲಗಿಸಿ ಕಲ್ಪನರಿಯುವ ಕಲ್ಪಕೆ ಮಹ ಕಲ್ಪನಿದು ಬಹು ಸುಲಭವೆನಿಸಿ ಕಲ್ಪಿತದಿಂ ರಕ್ಷಿಸುವ ಮಮ ಕಲ್ಪನಿಲ್ಲದವರ ಶ್ರೀರಾಮ 3
--------------
ರಾಮದಾಸರು
ಭಕ್ತನಾಗೋ ಹರಿಗೆ ಓ ಮನುಜ ಪ ನಾಲಗೆಯಲಿ ಶ್ರೀಲೋಲನ ನಿಜಗುಣ ಜಾಲವ ಕೊಂಡಾಡೋ ಓ ಮನುಜ 1 ಮಾನಸದಲಿ ಸದಾ ಜಾನಕಿ ರಮಣನ ಧ್ಯಾನವ ಮಾಡುತಿರೋ ಓ ಮನುಜ2 ಕರಯುಗಳಗಳಿಂ ವರಗೋಪಾಲನ ಚರಣ ಪೂಜೆಮಾಡೋ ಓ ಮನುಜ 3 ರವಿಕುಲ ತಿಲಕನ ಸುವಿಮಲ ಚರಿತೆಯ ಕಿವಿಯಲಿ ಕೇಳುತಿರೋ ಓ ಮನುಜ4 ಶ್ರೀಹರಿಯ ಜಗನ್ಮೋಹನ ಮೂರ್ತಿಯ ಊಹಿಸಿ ನೋಡುತಿರೋ ಓ ಮನುಜ 5 ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ ಯಾತ್ರೆಯ ನೀಮಾಡೋ ಓ ಮನುಜ 6 ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ ನಾಸಿಕದಲಿ ಮೂಸೊ ಓ ಮನುಜ7 ಸಾಧುಜನಗಳಿಗೆ ಮೋದವೀವ ಶ್ರೀ ಪಾದಗಳಿಗೆ ನಮಿಸೋ ಓ ಮನುಜ 8 ಭೋಗಿಶಯನಗನುರಾಗದಿಂದ ಶಿರ ಬಾಗಿ ಸತತ ನಡೆಯೋ ಓ ಮನುಜ 9 ಈಜಗದಲಿ ತಾ ಜಾಜಿ ಶ್ರೀಶನು ರಾಜಿಪುದನು ಕಾಣೋ ಓ ಮನುಜ 10
--------------
ಶಾಮಶರ್ಮರು
ಭಕ್ತವತ್ಸಲ ಭಾರಕರ್ತಾ | ಕರುಣವಂತ ನಿತ್ಯ ನಿರ್ಮಲ ಸರ್ವ ಶಕ್ತ | ಶಾಂತಾತ್ಮಕ ಪ. ಸುತ್ತ ವಿರಜೆ ಉನ್ಮತ್ತ ಮುಕ್ತರ ನೃತ್ಯ ಗೀತೆ ವೈಚಿತ್ರದೋಲಗವು ಇತ್ತಂಡದಿ ಮೈಹತ್ತಿ ಕುಳಿತ ಸತಿಯ ರೆತ್ತಲಿತ್ತ ಬಂದ ಚಿತ್ರ ಮಹಿಮ ಹೇ ಅ.ಪ. ವಿಹಂಗ ಗಮನ ತು- ರಂಗರೂಪನೆ ಅಂತರಂಗದಿ ನೆಲಸಿ ಸು- ಸಂಗದಿಂದಲಿ ಲಿಂಗ ಭಂಗಗೈಸುತ ಜ- ನ್ಮಂಗಳ ಕಡೆ ಮಾಡು ರಂಗ ಕರುಣಾಪಾಂಗ ಇಂಗಡಲಳಿಯನೆ ತುಂಗ ಮಹಿಮ ನರ- ಸಿಂಗ ನಿನ್ನಯ ಚರಣಂಗಳ ತೋರಿಸೋ ಭಂಗಪಡುವೆ ಭವಹಿಂಗಿಸಿ ಪೊರೆ ಕಾ- ಳಿಂಗ ಮಥನ ಯದುಪುಂಗವ ಕರುಣಿ 1 ಗತಿ ನೀನೆ ಎಂದು ಶ್ರೀಪತಿ ನಿನ್ನ ಮೊರೆಹೊಕ್ಕೆ ಹಿತದಿಂದ ಕಾಯೊ ದ್ರೌಪದಿಯ ಕಾಯ್ದಂಥ ದೈವ ಚ್ಯುತದೂರ ಮುಕ್ತರ ಸ್ತುತಿಪ್ರಿಯ ಶ್ರೀ ವಾಯು- ಪಾದ ಪ್ರತಿ ಕಾಣೆ ನಿನಗೆಣೆ ಕರ್ಮ ಸು- ಪಥ ಕಾಣೆನು ಗತಿಯಿಲ್ಲದೆ ಶ್ರೀ- ಪತಿ ಕೃಪೆ ಮಾಡುತ ತತುವ ಮಾನಿಗಳ ಕೃತಿ ತಿಳಿಸುತ ನಿನ ತುತಿಸುವ ಮತಿಕೊಡು 2 ಗೋಪಿಕಂದನೆ ಬಾಲರೂಪಧಾರಕ ಮಧ್ವ- ರಪಾರ ಸ್ತುತಿ ಕೇಳಿ ಗೋಪೀಚಂದನದಿ ಬಂದು ಪರಿ ನಿಂತ ದೇವಪತಿ ಜನಗಳ ಪೊರೆದು ಕಾಪಾಡುವ ಕರ್ತ ಗೋಪಾಲಕೃಷ್ಣವಿಠ್ಠಲ ಶ್ರೀಪದ್ಮಜಮುಖ ಸುರಾಪ ಧರೇಂದ್ರರು ತಾಪಸಿಗಳೂ ನಿನ್ನ ವ್ಯಾಪಾರ ತಿಳಿಯದೆ ಗೋಪ್ಯಾದಿ ನುತಿಸಿ ಸ್ವರೂಪ ಯೋಗ್ಯತೆಯಂತೆ ವ್ಯಾಪಕ ನಿನ್ನಯ ರೂಪವ ಕಾಂಬರು 3
--------------
ಅಂಬಾಬಾಯಿ
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜರೆ ಮಾನಸ ದ್ವಿಜವರಗಮನಂ ಪ ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ ವಿಜಯ ಸಾರಥಿಂ ಭಜಕೃಷ್ಣಮೂರುತಿಂ ಭಜಕಾಮರತರುಂ ಕುಜನಕುಠಾರಂ 1 ಹರಿಪದ ಸ್ಮರಣಂ ದುರಿತನಿವಾರಣಂ ಭವ ಮುಖಸುರನುತ ಚರಣಂ 2 ಜಲಧಿಜಾರಮಣಂ ಬಲಿಕೃತ ಕರುಣಂ ವಿಲಸತ್ಕಾರ್ಪರ ನಿಲಯ ನರಹರಿಂ 3
--------------
ಕಾರ್ಪರ ನರಹರಿದಾಸರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ. ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1 ಭೃಂಗಕುಂತಳ ನೀಲಕೇಶ | ಹುಬ್ಬು | ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳವೀಳ್ಯ ಕರ್ಪೂರ | ಇಟ್ಟು | ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ 3 ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4 ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ವೈಜಯಂತಿ ಮಂಜರಹೀರ ಹಾರನ್ನ5 ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6 ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7 ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8 ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9 ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10 ಪಾದ | ಪಾಪ ಪಾದ | ಕಾಮ ಪಾದ | ಬಹು ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ11 ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸÀ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ 12 ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು 13 ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14 ನಿತ್ಯ | ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ 15
--------------
ವಿಜಯದಾಸ