ಒಟ್ಟು 3078 ಕಡೆಗಳಲ್ಲಿ , 118 ದಾಸರು , 1747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಮಂಗಳಂ ಪ್ರಸನ್ನ ವಾಸುದೇವಗುರುವೆ ಪರಮಮಂಗಳಂ ಗುರುವೆಪಅನಾಥನಾದವನಿಗಾನಂದ ಮಂಗಳಂ ನಿನ್ನಧ್ಯಾನಗೈವ ಧನ್ಯರಿಗೆ ದಿವ್ಯ ಮಂಗಳಂಮಾನಸ ನಿನ್ನೊಳಗೆರಗೆ ಬಹು ಮಂಗಳಂ ಸರ್ವವೂ ನೀವೆಂದರಿತ ಮ'ಮರಿಗಖಿಲ ಮಂಗಳಂ 1ಕಂಗಳು ನಿನ್ನೊಳಿದ್ದರೆ ಶುಭಕಾರ ಮಂಗಳಂ ಭವಭಂಗಗೈವ ನಿನ್ನ ನೋಡೆ ಭವ್ಯ ಮಂಗಳಂಅಂಗಪ್ರತಿಸೇವೆಯೆ ಸರ್ವಾದಿ ಮಂಗಳಂ ಕಷ್ಟ'ಂಗುವಂಥ ನಿನ್ನ ಕೃಪೆ ಕೋಟಿ ಮಂಗಳಂ 2ಪಾದುಕೆಯೂಳಿಗವೇ ಪ'ತ್ರ ಮಂಗಳಂ ನಿನ್ನಪಾದಪದ್ಮ ಸೇವೆ ದೊರಕೆ ಬಹು ಮಂಗಳಂಓದಿದರೆ ನಿನ್ನ ಕಥೆಯ 'ಶ್ವ ಮಂಗಳಂ ನೀನಾದರಿಸಿ ಕರೆಯಲೆಮಗತ್ಯಂತ ಮಂಗಳಂ 3ನಿನ್ನ ಮುಂದೆ ಕುಣಿಯಲೆಮಗೆ ನಾನಾ ಮಂಗಳಂ ಗುಣವನ್ನು ಪಾಡಿ ಪೊಗಳಿದರಪಾರ ಮಂಗಳಂನಿನ್ನ ಚರಣತೀರ್ಥಪಾನ ಅನಂತ ಮಂಗಳಂನಿನ್ನ ದಿವ್ಯಪ್ರಸಾದವೆ ಭುವನ ಮಂಗಳಂ 4ದಾಸಾನುದಾಸನಪ್ಪುದೆ ದೊಡ್ಡ ಮಂಗಳಂ ಗುರುವಾಸುದೇವಾರ್ಯ ನಿನ್ನವರಿಗೆಲ್ಲಾ ಮಂಗಳಂಪೋಷಕನೀನಾದುದರಿಂ ಪಂತು ಮಂಗಳಂ ತ್ರಿಭುವನೇಶ ಚಿಕ್ಕನಾಗಪುರವಾಸ ಮಂಗಳಂ5
--------------
ವೆಂಕಟದಾಸರು
ನಿತ್ಯ ಶುಭಮಂಗಲಂ ಪ ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ 1 ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ 2 ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ 3
--------------
ಕನಕದಾಸ
ನಿತ್ಯ ಶುಭಮಂಗಳಂ ಪ ಚಾರು ಮರಕಟರೂಪ ತಾಳಿದಾ ಮೂರ್ತಿಗೆ ಚೋರ ದಶಕಂಠನನು ದಣಿಸಿದವಗೆ ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ ಶ್ರೀರಾಮ ಧ್ಯಾನದೊಳು ತತ್ಪರಾದವಗೆ 1 ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ ಕೀಚಕರ ಕಿರ್ಮೀರ ಬಕಕಾಲಗೆ ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ ಆ ಚಕ್ರ ಸೇವೆಯಲಿ ನಿರತನಾದವಗೆ 2 ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ ಮಗುವಾಗಿ ಮಧ್ಯಗೇಹದಿ ಜಾತಗೆ ನಿಗಮ ಗೋಚರ ಶ್ರೀ ನರಸಿಂಹವಿಠಲನ ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ 3
--------------
ನರಸಿಂಹವಿಠಲರು
ನಿತ್ಯ ಶುಭಮಂಗಳ ಪ ಶ್ರೀರಂಗನಾಥನಿಗೆ ಮೂರಂಗವೇಷನಿಗೆ ಮಾರಾರಿಸಖನೆಂಬ ಮದನಪಿತಗೆ ನೂರೆಂಟುತಿರುಪತಿಗೆ ಕಾರಣನು ನಿಜದಿವ್ಯ ವೀರವೈಷ್ಣವನೆಂಬೊ ಮಹಾರಾಜಗೆ 1 ನೀಲಕಂಠನಪ್ರಿಯಗೆ ಮೇಲುಕೋಟೆಯ ಧೊರೆಗೆ ಏಳುಸುತ್ತಿನ ಕೋಟೆಯೊಳಗಿರುವಗೇ ಕಾಳೆಕೊಂಬುಧ್ವನಿಯ ಕೇಳುವಾನಂದನಿಗೆ ವಾಲಿಯನು ಕೊಂದಂತ ವೋಂಕಾರಗೆ 2 ಶಂಕರಪ್ರಿಯನಿಗೆ ಶ್ರೀಪಂಕಜಾಕ್ಷನಿಗೆ ಕುಂಕುಮಾಂಕಿತ ಪಕ್ಷಿವಾಹನನಿಗೆ ಕಂಕಣವು ಕರದೊಳಗೆ ಕಟ್ಟಿ ವೊ ಶ್ರೀಗುರು [ವಂಕ]ತುಲಸಿರಾಮದಾಸ ಪೋಷಿತನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ
ನಿತ್ಯ ಶುಭಮಂಗಳಂ | ಪ್ರಿಯಕರಾನಂದ ಶ್ರೀ ತುಲಸಿ ಮಾತೆ ಪ ದಿನಕರನು ಉದಯಿಸಲಾಕ್ಷಣದಿ ಭಕ್ತರು ನಿನ್ನ | ನೆನೆದು ಭಕುತಿಯಲಿ ಜೀವನ ನೀಡುತಾ | ಪಣೆಗೆ ಮೃತ್ತಿಗೆ ತೀಡಿ ಪ್ರಣೀತರಾಗುತ ಪ್ರದ ಕ್ಷಣೆ ಮಾಡಿದವರ ಫಲವೆಣೆಸಲಳವೇ 1 ಹರಿಯನಾಗ್ರದಿ ತ್ರಿಪುರಹರನು ಮಧ್ಯದಿ ಬ್ರಹ್ಮ | ನಿರುವ ಮೂಲದಿನಾಕಚರರು ಮುದದೀ | ನಿರುತ ಶಾಖಂಗಳಲಿ ಚರಿಸುತ್ತಲಿಹರೆಂದು | ಧರಣಿ ಸುರರರ್ಚಿಪರು ಹರುಷದಿಂದಾ2 ಕಾರ್ತಿಕಶುದ್ಧ ಸುಮುಹೂರ್ತ ದ್ವಾದಶಿಯಲ್ಲಿ | ಅರ್ತಿಯಿಂದಲಿ ಸುಜನರರ್ತುತ್ವರದೀ | ನರ್ತನದಿ ತವನಾಮ ಕೀರ್ತನೆಯ ಪಾಡುತಲಿ | ಬೆರ್ತುನಿಂದವರ್ಗೆ ನೀ ಸಾರ್ಥಿ ಎನಿಪೆ 3 ಕಾಂತೆ ನಿನ್ನ ನುದಿನವನಂತ ಜನ ವಂದಿಸುತ | ಅಂತರಂಗದಿ ನಲಿದು ನಿಂತರವರಾ | ಚಿಂತೆಪರಿಪರಿಪೆ ಅಳಕಾಂತೆ ದುರಿತಘನಿಚಯ | ಪಾವಕ ಸುಸಂತ ವಿನುತೆ 4 ಅದಿಗಿಂದಿಗೆ ನೀನು ವೃಂದಾವನದಿ ಮಹಿಮೆ | ನಿಂದು ತೋರಿದೆ ಯೋಗಿವೃಂದ ವಂದ್ಯೆ | ತಂದೆ ಶ್ರೀ ಗಿರಿಧರನ ಕಂದನನುದಿನ ಸಲಹು | ಮಂದರೋದ್ಧಾರ ಪ್ರೀಯ ಕುಂದವದನೆ 5 ಅಂಕಿತ-ಗಿರಿಧರಕಂದ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಶುಭಮಂಗಳಂ ಪ ಜಗದೇಕ ವೀರನಿಗೆ ಜಗದುದರ ದೇವನಿಗೆ ಜಗವ ಬಾಯೊಳು ತೋರ್ದ ಮಹಮಹಿಮಗೆ ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ 1 ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ ಪರಮಪದ್ಮಾವತಿಯ ಮನದಿ ಕಂಡು ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ ಕೊರವಂಜಿ ರೂಪದಿಂ ಕಣಿಯ ಹೇಳಿದಗೆ 2 ಆಕಾಶರಾಜನಿಗೆ ಅಳಿಯನೆನಸಿಕೊಂಡು ಆಕೆ ಪದ್ಮಾವತಿಯ ಕೂಡಿದವ ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ 3
--------------
ನಿಡಗುರುಕಿ ಜೀವೂಬಾಯಿ
ನಿತ್ಯ ಶುಭಮಂಗಳಂ ಪ ಮಂಗಳಂ ದಶರೂಪಧರನಿಗೆ ಮಂಗಳಂ ವರ ದೂರ್ವಾಪುರದಲಿ ನಿತ್ತ ಕೇಶವಗೇ ಅ.ಪ. ಹರಿಕಥೆಯ ಶ್ರೋತ್ರಗಳು ಆನಂದದಿಂ ಕೇಳೆ ಹರಿಯ ಕೀರ್ತನೆಯನ್ನು ನಾಲಿಗೆಯು ಮಾಡೇ ಹರಿನಾಮ ಸ್ಮರಣೆಯನು ಮನವು ತಾ ಮಾಡುತಿರೆ ಚರಣಗಳ ಭಕ್ತಿಯಲಿ ಭಜಿಸುತ್ತಲಿರಲು 1 ಹರಿಯೆ ಮಹಿಮೆಯ ನಂಬಿ ವಂದನೆಯ ಮಾಡುತಿರÉ ಹರಿಯೆ ರೂಪವ ಕಂಡು ಪೂಜೆಯನು ಮಾಡೇ ಹರಿಯೆ ದಾಸ್ಯತ್ವವನು ಶ್ರದ್ಧೆಯೊಳು ಗಳಿಸುತಿರೆ ಹರಿಯೆ ಮಿತ್ರತ್ವವನು ಪಡೆಯುತ್ತಲಿರಲು 2 ಹರಿ ಚರಣದಲ್ಲಾತ್ಮವನ್ನು ಅರ್ಪಿಸುತಿರಲು ಹರಿ ಸೇವೆ ದಾಸರೀರೀತಿ ಗÉೈಯುತಿರೇ ಹರುಷದಿಂ ಕಾರ್ಯವನು ನೆರವೇರಿಸುತಲೀಗ ಹರಿಯ ಪ್ರೀತಿಗೆ ಸಿಲುಕಿ ಮುಕ್ತಿಯನು ಪಡೆಯೇ 3
--------------
ಕರ್ಕಿ ಕೇಶವದಾಸ
ನಿತ್ಯ ಶುಭಮಂಗಳಂ ಪ. ವಸುದೇವತನಯನಿಗೆ ವೈಕುಂಠನಿಲಯನಿಗೆಕುಸುಮನಾಭನಿಗೆ ಕೋಮಲರೂಪಗೆಯಶೋದೆನಂದನಗೆ ವಸುಧೆಯ ರಮಣನಿಗೆನಸುನಗೆಯೊಳೊಪ್ಪುವ ನರಸಿಂಹಗೆ1 ಕೌಸ್ತುಭ ಹಾರಗೆಕನಕಾಂಬರಧರನಿಗೆ ಕಾರುಣ್ಯರೂಪನಿಗೆಸನಕಾದಿ ಮುನಿವಂದ್ಯ ನರಸಿಂಹಗೆ2 ಪಂಕಜನಾಭನಿಗೆ ಪಾಂಚಾಲಿರಕ್ಷÀಕಗೆಲಂಕೆಯನು ವಿಭೀಷಣನಿಗಿತ್ತವಗೆಕುಂಕುಮಾಂಕಿತನಿಗೆ ಕುವಲಯನೇತ್ರನಿಗೆಬಿಂಕದಿಂದಲಿ ಮೆರೆವ ನರಸಿಂಹಗೆ 3 ಪಕ್ಷಿವಾಹನನಿಗೆ ಪರಮಪಾವನನಿಗೆಕುಕ್ಷಿಯೊಳು ಜಗವನಿಂಬಿಟ್ಟವನಿಗೆಲಕ್ಷುಮೀಕಾಂತನಿಗೆ ಲಕ್ಷಣವಂತನಿಗೆಲಕ್ಷಣದೊಳೊಪ್ಪುವ ನರಸಿಂಹಗೆ4 ಭಕ್ತವತ್ಸಲನಿಗೆ ಭವದುಃಖದೂರನಿಗೆಮುಕ್ತಿದಾಯಕಗೆ ಚಿನ್ಮಯರೂಪಗೆಮಿತ್ರೆರುಕ್ಮಿಣಿ ಸತ್ಯಭಾಮೆಯರರಸನಿಗೆನಿತ್ಯಕಲ್ಯಾಣ ಶ್ರೀಹಯವದನಗೆ 5
--------------
ವಾದಿರಾಜ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ
ನಿತ್ಯ ಶುಭಮಂಗಳಮಂ ಪ ಧರೆಯೊಳು ನಿನ್ನಂಥಾ ತರುಣಿ ಮಣಿಯಳಾ ಕಾಣೆಹರಿಯ ವಕ್ಷಸ್ಥಳದಿ ಇರುವೆ ನೀನುಕರವೆತ್ತಿ ಮುಗಿಯುವೆನು ಸಿರಿಯೆ ತವ ಸೌಭಾಗ್ಯಎರಡು ಕಣ್ಣಿಗೆ ತೋರೆ ವರಮಹಾಲಕ್ಷ್ಮಿ1 ಜರದ ಪೀತಾಂಬರವು ಚರಣದೊಳಗಲಿಯುತಲಿಸಿರಿವಂತೆ ಮೂರು ಹೆಜ್ಜೆ ಬರುವಳಾಗಿಸೆರಗೊಡ್ಡಿ ಬೇಡುವೇನು ಹೆರಳಿನಲಿ ಮುಡಿದಿರುವಮರುಗು ಮಲ್ಲಿಗೆ ಚಂಪಕ ಸರಗಳನ್ನು ನೀಡೆ 2 ಇಂದುಮುಖಿ ನಿನ್ನಗಾರ್ತಿಯ ತಂದು ನಿಂದಿಹೆ ನಿಜಸುಂದರಾ ಮೃದು ಕೀರ್ತಿ ಪಾಡುತಿಹೆನೆಚಂದ್ರಶೇಖರ ಸುರರಿಂದ ವಂದಿತ ಚರಣಇಂದಿರೇಶನ ಸಹ ಬಂದಿಲ್ಲೆ ತೋರಿಸುಮುಖ3
--------------
ಇಂದಿರೇಶರು
ನಿತ್ಯ ಸು- ಮಂಗಳೆಗತಿಶಯದಿ ಪ ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ. ಕಡಲೊಳು ಸುಧೆ ಹಿಡಿದು | ಬಂದನು ಕಡು ಕರುಣಿಯು ಒಲಿದು ಕುಡಿಗಣ್ಣಿನ ಜಲ ಸಡಿಲಲು ಕಲಶದಿ ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ 1 ಸುರರು ಪೂಮಳೆಗರೆಯೆ | ಹರುಷದಿ ಕರವ ಪಿಡಿಯೆ ವರವನು ಪಡೆದಳು ಶರಣರ ಪೊರೆಯಲು ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ 2 ನಿತ್ಯ | ಸೇವಿಪ ಸಕಲ ಜನಕೆ ಸತ್ಯ ಭಕುತಿ ಮುಕುತಿಯಿತ್ತು ಸುಕೃತರ ಮಾಡುವ ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ 3
--------------
ಲಕ್ಷ್ಮೀನಾರಯಣರಾಯರು
ನಿತ್ಯ ನಿಗಮನಿಕರ ನಿಶ್ಚಿತ ನಿರ್ಮಲ ನಿನ್ನವನ್ನಸತ್ಯಸಂಧ ಹಯವದನ್ನ ಸಲಹಬೇಕೆನ್ನ ಪ. ಸುಜನ ಸುಖಕÀರಮಧುರವಚನ ಮಾನ್ಯರಚನ ಮೃತ್ಯುಮೋಚನಕದನಕರ್ಕಶ ಕಲಿಮಲ‌ಘ್ನ ಕಮಲಲೋಚನ 1 ಮಂಗಳಾಂಗ ಮಧ್ಯರಹಿತ ಮದನಮೋಹನಕಣ್ಗೆ ಎನಗೆ ಕಾಣಿಸು ನಿನ್ನ ಕಾಯಕಾಂತಿಯಭಂಗರಹಿತ ಭವ್ಯಚರಿತ ಭಯಕೆ ಭಯಹರರಂಗರಾಯ ರಸಿಕರರಸ ರಕ್ಷಿಸಬೇಕೆನ್ನ 2 ಮಧುಕೈಟಭರ ಮರ್ದಿಸಿ ಮತಿಯ ಮಗಗಿತ್ತನಅದರಿಂದ ಅಮರರೆಲ್ಲ ಅರಿತುಕೊಂಡರುಇದಿರುಗೊಂಡು ಇವನ ನೋಡಿ ಇರವ ಮರೆತರುಹೃದಯಸದನ ಹಯವದನ್ನ ಹೊರೆಯಬೇಕೆನ್ನ 3
--------------
ವಾದಿರಾಜ
ನಿತ್ಯಂ ಪುರುಷೋತ್ತಮಂ ನ್ಯಾಯಂ - ಅಪಮೃತ್ಯುಂ ಸಂಕಟ ಹರಣಂ ಪ ಪರಲೋಕ ಸಾಧನ ಕರುಣಾಕರಂಶರಣಾಗತ ಜನಾಧಾರಂಸರಸಿಜಭವ ಭವರೋಗ ಸಂಹಾರಂಪುರುಷೋತ್ತಮ ಘೋರವಿಹಾರಂ1 ಜ್ಞಾನಭಕ್ತಿ ವೈರಾಗ್ಯ ಸುಜಾತಂಜನನ ಮರಣ ರಹಿತ ಜಲನಿಧಿ ಪೋತಂಘನ ದಾರಿದ್ರ್ಯ ರವಿ ತಾರಾನಾಥಂಅನುಶ್ರುತ ವೈಭವ ಮಂಗಲಗೀತಂ2 ಭೂರಿಭುವನ ಜೀವನಗುಣಂ - ಗಂಭೀರಸಾರ ಪಲ್ಲವ ನಿಕರಾಭರಣಂನಾರದ ವಾಲ್ಮೀಕ್ಯಂತಃಕರಣಂವರದಾದಿಕೇಶವ ನಾದ ನಿತ್ಯಸ್ಮರಣಂ3
--------------
ಕನಕದಾಸ
ನಿತ್ಯ ಶುಭ ಮಂಗಲಂ ಮಂಗಲಂ ಮಾರುತಿಯ ಪೆಗಲೇರಿ ಬರುವನಿಗೆ ಪ. ಮಂಗಲಂ ಮಾರೀಚ ವೈರಿಹರಿಗೆ ಮಂಗಲಂ ಸೀರಜಾ ಮುಖಪದ್ಮ ಭೃಂಗನಿಗೆ ಮಂಗಲಂ ವೀರ ರಾಘವ ದೇವಗೆ ಅ.ಪ. ರಾವಣಾದಿಗಳಿಂದ ಲಾಹವದಿ ಬಹು ನೊಂದ ದೇವತೆಗಳನು ಬೇಗ ಕಾವೆನೆಂದು ತಾ ಒಲಿದು ಕೌಸಲ್ಯದೇವಿ ಗರ್ಭದಿ ಬಂದು ಸಾವಧಾನದಿ ಸಕಲ ಸಜ್ಜನರ ಸಲಹಿದಗೆ 1 ಮಂದಮತಿಗಳೊಳಧಿಕ ತುಂಡಿಲನು ಮಾತ್ಸರ್ಯ ದಿಂದ ಮಾಡಿರುವ ಪ್ರತಿ ಬಂಧಕವನು ಇಂದಿಲ್ಲಿ ಬರಲು ಸಮಂಧಗೈಸದೆ ದಾಸ ನೆಂದೆನ್ನ ಮೇಲೆ ದಯದಿಂದಲೊಲಿದವಗೆ 2 ಇಂಗಿತಾಭೀಷ್ಟದ ಕುರಂಗ ಮರ್ದನ ರಾಮ ಶೃಂಗರಿಸಿ ಸರ್ವಪರಿವಾರ ಸಹಿತಾ ಮಂಗಲಾರತಿ ಕೊಂಡು ಮಂಗಳವ ಬೆಳೆಸುವ ಭು ಜಂಗ ರಾಜೇಂದ್ರ ಗಿರಿಶೃಂಗನಾಥನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ