ಒಟ್ಟು 783 ಕಡೆಗಳಲ್ಲಿ , 82 ದಾಸರು , 637 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿರತನತಿಮತಿಯುತನೆರÀತಿಪತಿಪಿತ ಸೇವಾರತನೆ ಮರುತಮತ ಭಕುತಿಪೂರಿತನೆನಾಥ ಸತ್ಯಾಭಿನುತ ನವ? ತೀರಥÀನೆ ಪ.ಶ್ರುತಿಸ್ಮøತಿಇತಿಹಾಸಾರ್ಥ ನೀಜ್ಞಾತತೆಗತಿ ಸಮರ್ಥಕ್ಷಿತಿಸತಿವಿತ್ತ ವಿರಹಿತನೆ ಮನ್ಮಥ ಜಿತಕಾಂತಿ ಶೋಭಿತನೆನೀತಿ ಚತುರತೆ ಸುವಿರತಿ ನಿಸ್ಸೀಮ ವಿಖ್ಯಾತ ರಘುಪತಿ ಅರ್ಚಿತ ಪಥಗಮ್ಯಸತತ ವಿದ್ವತ್ತ ಪ್ರತತಿಗೆ ವಿತ್ತರಣ ಶೂರೋನ್ಮತ್ತ ದುರ್ಮತ್ತಕಾಂತಾರಕುಠಾರ1ಧ್ಯಾನ ಮೌನ ಪೂರ್ಣ ಗಂಭೀರ ಗೀರ್ವಾಣ ವಾಣಿನಿರುತ ಉಚ್ಚಾರಜ್ಞಾನಿಜನರಿಗೆ ಘನ್ನಗುರುವೆ ನಿದಾನಗುಣಕಲ್ಪತರುವೆಮಾನಾಥನ ಪೂಜೆ ಮನ ಮನೆಯೊಳು ಮಾಡಿನೀಣ್ಯವಿನಾನೆಸದು ? ನಲಿನಲಿದಾಡಿದೀನಜನರಿಗೆ ತತ್ವಜ್ಞಾನಸುಧೆಯನುದಿನದೊಳೆರೆದೆ ಕಾಮಧೇನುವಿನಂತಯ್ಯ 2ತ್ರ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀಸೀತಾಪತಿ ಅತಿಮುದಬಡಿಸಿಮತ್ತಮಾಯಿಮೊತ್ತಗಜಸಿಂಗ ನಿನ್ನಪ್ರತಿಎಂತೊ ಗುರುಕುಲೋತ್ತುಂಗಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲಸತ್ಯನಾಥಸುತ ಸತ್ಯಾಭಿನುತ ನವ? ತೀರಥನೆಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತನ್ಯಥಾಗತಿಕಾಣೆನೆನ್ನ ರಕ್ಷಿಸಯ್ಯ ಪಿತನೆ3
--------------
ಪ್ರಸನ್ನವೆಂಕಟದಾಸರು
ಯಶೋದೆ ನಿನ್ನ ಮಗಗಿದು ಥರವೇವಸುಧೆಯೊಳಗಿಂಥ ಶಿಶುವಿಲ್ಲವೇ ಪಪೆಟ್ಟಿಗೆಯೊಳುತುಂಬಿರೊಟ್ಟಿಯ ದೇವರು |ಇಟ್ಟನೆ ಕಚ್ಚಿನ ಚಟ್ಟಿಗೆಯೊಳು 1ಸಡಗರದಿಂದ ಬೆಣ್ಣೆ ಗಡಿಗೆ ಕಾಯಲಿಟ್ಟರೆ |ಬಡಧಾನ ಕೇದಿಗೆ ಪಡಿಯೊಳಗೆ2ಆ ಸಣ್ಣ ಕರು ತೊಟ್ಟಿಲ ಹಾಸಿಕೆಯೊಳಗಿಟ್ಟು |ಕೂಸು ಸೋರಿಯೊಳಿಟ್ಟುಘಾಸಿಮಾಳ್ಪ 3ಚಿನ್ನಗುಣಲಿಟ್ಟರೆ ಅನ್ನದೊಳಗಿಟ್ಟನೆ |ಸುಣ್ಣದಕಲ್ಲು ಏನ್ಮಣ್ಣು ಹೇಳಲಿ 4ನಿದ್ರೆಯೊಳಿರೆ ಸೀರೆ ಒದ್ದಲ್ಲಿ ಬೆಣ್ಣೆಯ |ಮುದ್ದೀನಿಡುವನಿದು ಮುದ್ದುಯೇನೆ 5ಬೆಕ್ಕಾನಲ್ಲಿಗೆಹಚ್ಚಿಇಕ್ಕಿಸಿ ಚಪ್ಪಾಳೆ |ಇಕ್ಕಿಸುವನೆಹಿಂಡುಚಿಕ್ಕವರನ್ನಾ 6ನನ್ನ ಪ್ರಾಣೇಶ ವಿಠಲನ್ನಾಟ ಈ ಊರೊಳು |ಘನ್ನವಾಯಿತು ಬಿಡಿಸಿನ್ನು ಮಾತ್ರ 7
--------------
ಪ್ರಾಣೇಶದಾಸರು
ಯೋಗಿಯಹುದಹುದೋ ಚಿದಾನಂದಯೋಗಿಯಹುದುಹುದೋ ದಯಾಸಾಗರ ಕಾರಣ್ಯದಾಗರ ನಿತ್ಯಾತ್ಮಪಅಷ್ಟಮದಂಗಳನ್ನು ಸುಟ್ಟು ಭಸ್ಮವ ಮಾಡಿಹಅಷ್ಟ ಪ್ರಕೃತಿಯನ್ನು ಕಾರಿ ಕಾರಿ ಮಹದಷ್ಟ ಯೋಗವ ಸಾಧಿಸಿ ಶ್ರವಣವನ್ನುಕೊಟ್ಟುನಾದವ ಭೇದಿಸಿ ಆತ್ಮದಲ್ಲಿದೃಷ್ಟಿ ಎಂಬುದ ನಿರಿಸಿ ಸರ್ವಕಾಲಶಿಷ್ಟರೆಂದೆನಿಪ ಉತ್ಕøಷ್ಟಮಾರ್ಗದವಾಸಿ1ಆರು ಅರಿಯ ಮೀರಿದರು ಭ್ರಮೆಯ ವಿಕಾರವ ತರಿದುತರಿದು ಹೀರಿ ಆರು ಚಕ್ರದ ಮೇಲೆಏರಿ ಸಹಸ್ರಾರ ಸ್ಥಳದಿನಿಂದುಜ್ಯೋತಿರ್ಮಯಸಾರವ ಸೇವಿಸುತಲಂದು ನಿತ್ಯಾನಿತ್ಯಘೋರತಪದಿಯೋಗಿಶೂರ ಭಕ್ತರ ಬಂಧು2ಸಪ್ತವ್ಯಸನರೂಪಕೆಡಿಸಿ ಬಳಿಕ ದುಷ್ಟಸಪ್ತಾವರಣವನ್ನು ತುಳಿದು ಪಾದದಲೊದ್ದುಗುಪ್ತವಾಗಿಹ ಪ್ರಭೆಯ ಶೋಧಿಸಿಘನತೃಪ್ತ ಅಮೃತ ಸುಧೆಯ ಸುರಿದು ಮೇರುಕಾಂಚನ ಗಿರಿಯ ಸೇರಿಯೆ ಜ್ಯೋತಿವ್ಯಾಪಕಭಾಸ್ಕರದೀಪ್ಯಮಾನ ಪ್ರಭಾ3ಕರ್ಮಪಾಪವು ಪುಣ್ಯಹಮ್ಮುವಾಸನಕ್ಷಯದುರ್ಮತಿ ದುರ್ಗುಣವೆಲ್ಲ ದೊಡ್ಡಬ್ರಹ್ಮಾನಂದದ ಲಕ್ಷಣ ತಿಳಿದಾ ನಿತ್ಯಾನಿರ್ಮಳ ನಿರಾವರಣ ರೂಪಿತ ಆತ್ಮಸ್ವರ್ಮಣಿ ಸುಗುಣನಿರ್ಗುಣಪರಬ್ರಹ್ಮವೇ ತಾನಾಗಿ ಬೆಳಗುವ ಯತಿ ಜಾಣ4ಸಾಧನ ನಾಲ್ಕನು ಸಾಧಿಸಿನಾದವ ಭೇದಿಸಿ ಜ್ಯೋತಿ ಸಂಪಾದಿಸಿ ಆತ್ಮನಭೇದವೆಂಬುದನರಿತ ಬಳಿಕಘನಸಾಧನಗುಣಚರಿತಯೋಗಿ ತಾನೆನಿಸಿ ಕೈವಿಡಿಯೆನ್ನಬೋಧಸದ್ಗುರು ಚಿದಾನಂದಅವಧೂತ5
--------------
ಚಿದಾನಂದ ಅವಧೂತರು
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು
ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು 1ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು 2ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು 3ಕಾಲಿಕೆಕಟ್ಟಾಣಿಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು 4ಹೇಳಿದರೆ ಮಾತುಕೇಳಿಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು 5ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು 6ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||ಆ ದಿನ ನಾವೇಕತ್ರದಲ್ಲಿರೆಗಂಡಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು7ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||ನೆತ್ತಿಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು 8ಒಂದಾಡುತೊಂದಾಡುವರುನಿಂದುನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು 9ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆವೇಣುಕೇಳಿಸುವುದು ||ಪನ್ನಗಶಯನನಾಜೆÕಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು 10ಕರಿಸಿಂಹಗಳು ಹುಲಿತುರುತುರುಗಮಹಿಷಿ|ಮರೆದು ವೈರತ್ವ ಹರಿಸ್ವರ ಕೇಳುತಿಹವು ||ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು11ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರುನಿಂದುಪ್ರಾರ್ಥಿಸುವರು ||ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು 12ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು13ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು 14ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು 15ಹರಿಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತುಕ್ಲೇಶ|ಹರದೆರಚ್ಯುತನರಸುತವನಹೊಕ್ಕರು 16ಹರಿಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿಹರಿ! ಜೀವಿಸುವದೆಂತು ಹೇಳಿರೆಂಬೊರು 17ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು 18ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನಸುಖ ಬಡಿಸುತ ದಕ್ಕಿದಂತಿರುವನು 19ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||ಮಾವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ20ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು 21ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆನವನೀತ|ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||ಘೋರಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರುಮಾಡಿದರೆ ಬಟ್ಟಬವಣೆಹೇಳಿದಳು22ಸಮದುಃಖಿಗಳಾಗಿಹರಿಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶಮುಂಚಿನಂತೆಲ್ಲರೊಳಾಡಿದನು 23
--------------
ಪ್ರಾಣೇಶದಾಸರು
ರಂಗನಮ್ಮನೆಗೆ ತಾ ಬಂದಮತ್ತೇನು ತಂದ ಪ.ಜಗದೋದ್ದಾರ ಸಭೆಗೆ ಬಂದನಗುವ ಪರಿಯ ಹೇಳಿದ್ದು ತಂದಬಗೆ ಬಗೆ ವಸ್ತ್ರ ಕೊಳ್ಳಿರೆಂದಪಗಡಿ ಧರ್ಮಗೆ ತರಲಿಲ್ಲೆಂದ 1ವಾಣಿ ಮಾವ ಮನೆಗೆ ಬಂದಜಾಣತನವ ಹೇಳಿದ್ದು ತಂದಮಾಣಿಕ ಮುತ್ತು ಕೊಳ್ಳಿರೆಂದಕ್ವಾಣನ ಧರ್ಮಗೆ ತರಲಿಲ್ಲೆಂದ 2ಕೃಷ್ಣರಾಯಸಭೆಗೆ ಬಂದಎಷ್ಟು ಜಂಬ ಹೇಳಿದ್ದು ತಂದಪಟ್ಟಾವಳಿಕೊಳ್ಳಿರೆಂದಹುಟ್ಟು ಭೀಮಗೆತರಲಿಲ್ಲೆಂದ 3ನಳಿನಾಕ್ಷ ಸಭೆಯೊಳು ಬಂದಹೊಳೆವೊ ಎಷ್ಟು ಹೇಳಿದ್ದು ತಂದಝಳಿಸೋವಸ್ತ್ರ ಕೊಳ್ಳಿರೆಂದಬಳೆಯ ಪಾರ್ಥಗೆ ತರಲಿಲ್ಲೆಂದ 4ರಾಜ್ಯ ಲಕ್ಷಣ ನಿನಗಿಲ್ಲೆಂದಮಾಜುದಾ ಕುಲ ಧರ್ಮಕುಂದತೇಜಿ ಮುಂದೆ ಓಡಿದ್ದು ಚಂದಸೋಜಿಗವಲ್ಲ ನಕುಲನೆಂದ 5ಸುಮನಸರು ನಗುವೊರೆಂದಭ್ರಮೆಯ ಕಳೆದ್ಯೊ ಸಹದೇವ ಎಂದಅಮಿತ ದನವ ಕಾಯ್ದ್ಯೊಛಂದರಮಿಯ ಅರಸು ನಗುವ ನೆಂದ 6ಅಂದ ಮಾತಿಗೆ ಬಲರಾಮ ಹೀಗೆಂದಚಂದ ವಾಯಿತು ಕುಶಲವೆಂದನಿಂದ್ಯವ ನೀ ಮಾಡಿಕೊ ಎಂದಇಂದಿರೇಶಗೆ ತಿಳಿಸಿರೆಂದ 7
--------------
ಗಲಗಲಿಅವ್ವನವರು
ರಾಮ ಮಂತ್ರವ ಜಪಿಸೊ - ಏ ಮನುಜಾ ಶ್ರೀರಾಮ ಮಂತ್ರವ ಜಪಿಸೊ ಪಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪಕುಲಹೀನನಾದರೂ ಕೂಗಿ ಜಪಿಸುವ ಮಂತ್ರಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||ಹಲವು ಪಾತಕಗಳ ಹಸನಗೆಡಿಸುವ ಮಂತ್ರಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ 1ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರಮನುಮುನಿಗಳಿಗೆಲ್ಲ ಮೌನ ಮಂತ್ರ ||ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ 2ಸಕಲ ವೇದಗಳಿಗೆ ಸಾರವಾಗಿಹ ಮಂತ್ರಮುಕುತಿ ಪಢಕೆ ಇದು ಮೂಲ ಮಂತ್ರ ||ಶಕುತ ಪರಕೆ ಇದು ಬಟ್ಟೆದೋರುವ ಮಂತ್ರಸುಖನಿಧಿ ಪುರಂದರವಿಠಲ ಮಹಾಮಂತ್ರ 3
--------------
ಪುರಂದರದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು
ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯವಿಠಲ ಭಕ್ತವತ್ಸಲ ವಿಠಲಹರಿವಿಠಲಪ.ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನಮುಟ್ಟಿ ಪೂಜಿಸಲು ಚಿತ್ತಗೊಟ್ಟು ಬಂದೆಯೊ ವಿಠಲಬಿಟ್ಟು ಬರದಲೆ ಒಡನಿಟ್ಟಿ ನೀಡಲು ಚೆಲುವಇಟ್ಟಂಗಿ ಮ್ಯಾಲಂಘ್ರಿಪದ್ಮವಿಟ್ಟು ನಿಂತ್ಯಯ್ಯ ವಿಠಲ 1ಕೊಟ್ಟ ಭಾಷೆಗೆ ಭಕ್ತರ ಕಟ್ಟಲಿ ಸಿಲುಕಿದೆಯೊ ಕಂಗೆಟ್ಟೆನೊ ಭವದಿ ನಿನ್ನಗುಟ್ಟುತೋರಯ್ಯ ವಿಠಲಪಟ್ಟಗಟ್ಟ್ಟ್ಯಜಭವರ ಕಟ್ಟಿಲೆ ಇದ್ದ ವೈಕುಂಠಪಟ್ಟಣ ಭೀಮಾತೀರದಿ ನಟ್ಟು ನಿಂತ್ಯಯ್ಯ ವಿಠಲ 2ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯ ಪೊತ್ತಿಸಿಟ್ಟು ತಾಳ್ದೆವಟುಖಳರೊಟ್ಟಿಲೊದ್ಯೈಯ್ಯ ವಿಠಲಕಟ್ಟಿದೆ ಕಡಲ ಜಗಜಟ್ಟಿ ಗೋಪ ಬೌದ್ಧ ಕಲಿಯಮೆಟ್ಟಿ ಆಳ್ದೆ ಪ್ರಸನ್ವೆಂಕಟ ಕೃಷ್ಣಯ್ಯ ವಿಠಲ 3
--------------
ಪ್ರಸನ್ನವೆಂಕಟದಾಸರು
ವೃಂದಾವನ ದೇವಿ ನಮೋ ನಮೋಗುಣ|ವೃಂದೆ ಸುಂದರಿ ಲೋಕಮಾತೆ ನಮೋ ನಮೋ ||ಬಂದು ಸೇವಿಸಿ ನಿನಗುದಕವ ನೆರೆಯಲುಇಂದುನಾವು ಮಾಡಿದ ಪಾಪ ಹೋಗುವುದೂಪಚಂದದಿಂದಲಿ ನಮ್ಮ ಕುಲದವರಿಗೆಲ್ಲಸುಂದರ ವೈಕುಂಠ ಪದವೀವಳೇ1ಹನ್ನೆರಡು ಪ್ರದಕ್ಷಿಣೆ ಬಂದು ವಂದನೆ ಮಾಡಿಚೆನ್ನಾಗಿ ಸ್ಮರಿಸೆ ಕಂಡು ಪರಸುವಳೆ |ಘನತರ ಭಕ್ತಿಯೊಳ್ ಬಂದು ಕೈ ಮುಗಿದವರನ್ನುಪನ್ನಂಗಶಯನ ಸ್ವಾಮಿ ಕರೆದೊಯ್ಯುವನೂ2ಭವಭವದಲಿಗೈದ ದೋಷನಿವಾರಿಸಿಭವಭಂಗಬಿಡಿಸೆನಗೊಲಿದು ತಾಯೆ |ದಯದಿ ಗೋವಿಂದನ ದಾಸನೆನಿಸೆಂದೆಂನ್ನ |ಭುವನಮೂರರೊಳ್ ಖ್ಯಾತಿ ಪಡೆದವಳೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶಾಂತ ಶಾಂತವು ಎಂದು ಎಂಬರಿ ನಿಮ್ಮನುಶಾಂತವಿಂತಿರುತಿರೆ ಶಾಂತಶಾಂತವಿಂತಿರೆ ಜೀವ ಮುಕ್ತನುಶಾಂತಿಲಿ ಭ್ರಾಂತಿರೆ ಭಯವುಕೃತಾಂತಪಸತಿಜಾರೆಯಾಗಲು ಗುರುನಾಥಲೀಲೆಯೆಂದುಸತಿಗನುಕೂಲವೇ ಶಾಂತಖತಿಯ ಮಾಡಲು ನಾನಾಜನರು ಚಂಚಲವಾಗದಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆಸಂಗವಿಲ್ಲದಿಹುದೇ ಶಾಂತಅತಿ ಚೋರ ಸುಲಿದೊಯ್ಯೆ ಆನಂದದಲಿನಸುನಗುತಿರುವುದೇ ಶಾಂತ1ವಿಷವನಿಕ್ಕಿದವರನ್ನು ಕಾಣಲು ಅವರೊಳುವಿಶ್ವಾಸವಿಹುದೇ ಶಾಂತದುಶ್ಮನನು ತನ್ನನ್ನು ಕಡಿಯಬರೆ ಇದುಮೋಕ್ಷವೆಂಬುದೆನೆ ಶಾಂತಮುಸುಕಿನ ಮಾತ ಊರ ಮುಂದಿಕ್ಕಲುಮತಿಗೆಡದಿಹುದದು ಶಾಂತಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆಕುಸಿದು ಬೀಳದೊಡದು ಶಾಂತ2ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆಕೊಟ್ಟಿಲ್ಲವೆಂಬುದೇ ಶಾಂತಭ್ರಷ್ಟರು ನಾನಾ ನಿಂದೆಯ ಮಾಡಲುಭಯ ಹುಟ್ಟದಿರುವುದೇ ಶಾಂತಬಿಟ್ಟುಹೋಗಲು ತನ್ನಸತಿಸುತರೆಲ್ಲರುಭ್ರಾಂತಿಯ ತೋರುವುದೇ ಶಾಂತದಿಟ್ಟ ಚಿದಾನಂದ ಸದ್ಗುರು ತಾನಾಗಿದೃಢನಾಗಿಹುದದು ಶಾಂತ3
--------------
ಚಿದಾನಂದ ಅವಧೂತರು
ಶಿವಸುಖ ದಾರಿಯ ನೋಡಣ್ಣಾ |ಅದು ಕೂದಲ ಎಳೆಕಿಂತ ಬಲು ಸಣ್ಣಾಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ |ಘವ ಘವಿಸುವ ಚಿನ್ನದ ಬಣ್ಣಾಅ.ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ |ಭಾಸುರಪರಮಣು ದ್ವಾರಣ್ಣಾ1ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು |ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವುಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ2ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ |ಚಿನುಮಯ ಗುರುತವೆ ನಿಜವಣ್ಣಾ3
--------------
ಜಕ್ಕಪ್ಪಯ್ಯನವರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು