ಒಟ್ಟು 666 ಕಡೆಗಳಲ್ಲಿ , 92 ದಾಸರು , 589 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು ಪ.ಮಂದರಧರಗೋವಿಂದನ ಶರಣರಸಂದೋಹಕಾವ ವೃಂದಾರಕತರು ಅ.ಪ.ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವಪ್ರೇಮದಿ ಕೇಳ್ವರು ಸಾತ್ವಿಕರು 1ವಿಘ್ನಹರನು ನಿನ್ನಗ್ರಜನು ವಿಬು-ಧಾಗ್ರಣಿಯೆನಿಸುವೆಯೊ ನೀನುಉಗ್ರ ತ್ರಿಯಂಬಕತಾತನು ಖ್ಯಾತನುದುರ್ಗಾದೇವಿಯೆಜನನಿನಿರುಪಮಳು2ತಾರಕಾಂತಕ ನಿಶ್ಯೋಕ ಲಕ್ಷ್ಮೀ-ನಾರಾಯಣನಿಗೆಸಖಭೂರಿನಿಗಮಾರ್ಥಸಾರ ಕೋವಿದನೆಧೀರನೆ ವೀರ ಮಹಾರಣಶೂರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ಥಳವಿಲ್ಲವೈ ಭಾಗವತರೇ - ಈಗಒಳಗೆ ಹೊರಗೆಸಂದಣಿತುಂಬಿದೆ ನೋಡಿಪ.ಆಯ್ದೊಕ್ಕಲಿದರೊಳಗುಂಟು - ಮತ್ತೆಆಯ್ಕು ಮಂದಿಯ ಬೇರೆ ಉಂಟುಆಯ್ದು ನಾಲ್ಕು ಇದರೊಳಗುಂಟು - ನೀವುಬೈದರೆ ಏನು ತೆಗೆಯಿರಿ ನಿಮ್ಮ ಗುಂಟು 1ಆರುಮಂದಿ ಕಳ್ಳರುಂಟು - ಮತ್ತಾರು ಮಂದಿಗೆ ಮತ್ತೆ ಪ್ರೇರಕರುಂಟುಪ್ರೇರಕರಿಗೆ ಕರ್ತರುಂಟು - ವಿಚಾರಿಸುವುದಕೆ ನಿಮಗೇನುಂಟು ? 2ಅತ್ತೆಯವಳು ಬಲುಖೋಡಿ - ಎನ್ನಒತ್ತಿ ಆಳುವ ಪುರುಷನು ಬುಲುಹೇಡಿಮತ್ತೆ ಮಾವನು ಅಡನಾಡಿ - ಸರಿಹೊತ್ತಿಗೆಬರುವ ಮೈದುನ ಬಲುಕೇಡಿ3ನಗೆಹೆಣ್ಣು ಎಂಬುವಳು ಕೋಪಿ - ಮಲಮಗಳು ಕಂಡರೆ ಸೇರಳು ಬಲು ಪಾಪಿಹಗೆಗಾತಿಅತ್ತಿಗೆ ಶಾಪಿ - ಸುತ್ತಬೊಗಳುವಳು ತಾಳೆನು ನಾನು ಮುಂಗೋಪಿ 4ಎಷ್ಟು ಹೇಳಲಿ ನಿಮಗೆಲ್ಲ - ಈಕಷ್ಟ ಸಂಸಾರದೊಳಗೆ ಸುಖವಿಲ್ಲಸ್ಪಷ್ಟವಾಗಿ ಪೇಳ್ಪೆ ಸೊಲ್ಲ - ದೇವಸೃಷ್ಟೀಶ ಪುರಂದರವಿಠಲ ಬಲ್ಲ 5
--------------
ಪುರಂದರದಾಸರು
ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನುವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನುತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು 1ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನುಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು 2ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನುಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು 3ಏನೆಂದು ಹೇಳಲಿ ಆನಂದಸಂಭ್ರಮಇನ್ನೇನಿನ್ನೇನುಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು 4ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನುಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು 5
--------------
ಪುರಂದರದಾಸರು
ಹರಿಯಲ್ಲಿ ಧನ್ಯರು ಪೊರೆಯರು ಸತ್ಯಸ್ಥಿರವೀ ಮಾತಿಗೆ ಸದ್ಭಕ್ತರು ಸಾಕ್ಷಿಯಿಹರು ಪಪುಣ್ಯಾತ್ಮ ಪ್ರಿಯ ವೃತ ಸಾಕ್ಷಿ ಜಗನ್ಮಾನ್ಯ ನಾರದ ದೇವ ಋಷಿ ಶ್ರೇಷ್ಠ ಸಾಕ್ಷಿಧನ್ಯ ಧೃವರಾಯನು ಸಾಕ್ಷಿ ಹರಿಯಪೂರ್ಣ ವ್ಯಾಪ್ತಿಯ ತೋರ್ದ ಪ್ರಲ್ಹಾದ ಸಾಕ್ಷಿ 1ದೊರೆ ಅಂಬರೀಷನು ಸಾಕ್ಷಿಹರಿಗುರುಭಕ್ತಿ ನಾಮಕೆ ದ್ರೌಪದಿ ಸಾಕ್ಷಿಸ್ಥಿರ ವಿಭೀಷಣ ರಾಜ ಸಾಕ್ಷಿ ತನ್ನಮರಣ ಕಾಲದಿ ನೆನೆದ ಅಜಮಿಳ ಸಾಕ್ಷಿ 2ದೊರೆ ಧರ್ಮ ದೇವರು ಸಾಕ್ಷಿ ಜಗದ್ಗುರುವಾದ ಮಹ ರುದ್ರದೇವರು ಸಾಕ್ಷಿಗರಳಕಾಳಿಂಗನು ಸಾಕ್ಷಿ ಪ್ರಾಣಾತುರದಿಹರಿಯ ಕರೆದ ಗಜರಾಜ ಸಾಕ್ಷಿ 3ಶಿಲೆಯಾದ ಅಹಲ್ಯೆಯ ಸಾಕ್ಷಿ ಗರ್ವವರ್ತಿಸಿದ ನಹುಷನೃಗರು ಸಾಕ್ಷಿಚೆಲುವೆ ಗಂಡಿಕಾ ವೇಶ್ಯ ಸಾಕ್ಷಿ ಭಕ್ತಿಗೊಲಿದುನಲಿದಜ್ಞಾನಿವಿದುರನು ಸಾಕ್ಷಿ 4ಮೊರೆ ಹೊಕ್ಕ ಸುಗ್ರೀವ ಸಾಕ್ಷಿ ಬಾಲ್ಯಪರಮಮಿತ್ರನಾದ ಕುಚೇಲ ಸಾಕ್ಷಿಶರಬಿಟ್ಟ ಭೃಗುವಾದ ಸಾಕ್ಷಿ ಶ್ರೇಷ್ಠಹರಿದಿನ ವೃತದ ರುಗ್ಮಾಂಗ ಸಾಕ್ಷಿ 5ಪುಂಡಲೀಕ ಋಷಿಸಾಕ್ಷಿ ಆ ಮೃಕಂಡಮುನಿಜ ಮಾರ್ಕಾಂಡೇಯ ಸಾಕ್ಷಿಪಂಡಿತಸಾಂದೀಪ ಸಾಕ್ಷಿ ಕುರುಪಾಂಡವರ ಪಿತಾಮಹ ಭೀಷ್ಮನು ಸಾಕ್ಷಿ 6ಪಿರಿದು ಕಷ್ಟದ ನಳ ಸಾಕ್ಷಿ ಕೃಷ್ಣಕರುಣಿಕೆ ಪಾತ್ರಪರೀಕ್ಷಿತಸಾಕ್ಷಿನಳಕೂಬರು ಸಾಕ್ಷಿ ಸತ್ಯದ್ಹರಿಶ್ಚಂದ್ರಾದಿ ಪುಣ್ಯ ಶ್ಲೋಕರು ಸಾಕ್ಷಿ 7ನಿದ್ದೆಯ ಮುಚುಕುಂದ ಸಾಕ್ಷಿ ಆತ್ಮಬದ್ಧಭಕ್ತಿಯಲರ್ಪಿಸಿದಬಲಿಸಾಕ್ಷಿಶುದ್ಧಜ್ಞಾನಿಶುಕಸಾಕ್ಷಿ ಹರಿಯಸದ್ಯದಣನಾದ ಬಲಭದ್ರ ಸಾಕ್ಷಿ 8ಅರ್ಕಾದಿ ಋಷಿಗಳು ಸಾಕ್ಷಿ ವಿಶ್ವಾಮಿತ್ರದಕ್ಷ ಪ್ರಜೇಶ್ವರೆಲ್ಲ ಸಾಕ್ಷಿಮಿತ್ರೆ ಕುಬ್ಜಾ ತ್ರಿಜಟಿ ಸಾಕ್ಷಿ ಮಹಾಮೈತ್ರೇಯ ಪರಾಶರ ಮುನಿಶರು ಸಾಕ್ಷಿ 9ಇಂದ್ರಾದಿದಿವಿಜರುಸಾಕ್ಷಿ ಕೃಷ್ಣನ್ಹೊಂದಿ ಸೇವಿಸಿದುದ್ಧವಕ್ರೂರ ಸಾಕ್ಷಿಸುಂದರ ಗೋಪಿಯರು ಸಾಕ್ಷಿ ಪಾಪಸಂದೋಹದ್ಯುದೃತ ವಾಲ್ಮೀಕಿ ಸಾಕ್ಷಿ 10ಸರ್ವಮುಕ್ತಜೀವರು ಸಾಕ್ಷಿಯಾ ದೇವರು ವಸುದೇವ ದೇವಕಿಯರು ಸಾಕ್ಷಿಹರಿದಾಸರೆಲ್ಲರು ಸಾಕ್ಷಿ ಫಲಸಿರಿವಿಠಲಗೆ ಕೊಟ್ಟ ಶಬರಿಯ ಸಾಕ್ಷಿ 11
--------------
ಸಿರಿವಿಠಲರು