ಒಟ್ಟು 1056 ಕಡೆಗಳಲ್ಲಿ , 98 ದಾಸರು , 887 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ದುರಿತ | ಉದ್ಧರಿಸೊ ಇವನಾ ಅ.ಪ. ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ 1 ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ2 ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ 3 ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ 4 ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ ಜ್ಞಾನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ 1 ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಪುರಂದರ ರಾಯಾ 2 ವಜ್ರ ಪಂಜರಾ ಕೂವಾದಿ ಮತಹರ ನಂಬಿದವರಾಧಾರ ಪಾವಮಾನಿಯ ಮತದಲಿಪ್ಪ ಮನೋಹರ ಶ್ರೀ ವಿಜಯನಗರ ಮಂದಿರದೊಳಗುಳ್ಳ ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ 3
--------------
ವಿಜಯದಾಸ
ವಿಧಿ ಪ ಪುರಾರಿನುತ ಚರಣಾ ನಾರಾಯಣಾ ಅ.ಪ ಸರಸಿಜಾಪ್ತ ಕುಲಚಂದ್ರಮ ರಾಮ | ಮ- ಹಾರಾಜ ರಾಜಲಲಾಮ ನಿಸ್ಸೀಮ 1 ಎನ್ನಪರಾಧಗಳೇನಿದ್ದರು ಸರಿ ಮನ್ನಿಸುವರು ನೀನಲ್ಲದಾರು 2 ಅಜಿತಾದ್ಯನಂತರೂಪಾಪ್ರಮೇಯಭಜಕ ಪೋಷ ಗುರುರಾಮ ವಿಠ್ಠಲ ರಾಯಾ 3
--------------
ಗುರುರಾಮವಿಠಲ
ವಿಸ್ಫುರಿತಾನನ ಪಂಕೇಜಲೋಚನ ಪ ಶರನಿಧಿ ಶಯನ ಸಿರಿಸತಿ ಸದನ ತ್ರಿಭುವನ ಮೋಹನ ನಿಶಾಚರ ದಹನ ಅ.ಪ ಶೌರಿ ಮುರಾರೀ ರಾಧಾ ಮನೋಹಾರಿ ಶಂಖ ಚಕ್ರಧಾರಿ ನಿಶಾಚರಾರಿ ಜನೋಪಕಾರಿ ಕರುಣಾಲಹರಿ ಶ್ರೀಹರಿ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೀಣೆ ಧರಿಸಿದ ಕಾರಣೇನೊ ಹನುಮಾ ಜಾಣತನವಿದು ಏನು ಪೇಳೊ ಬಲಭೀಮ ಪ. ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1 ಮೂರು ಅವತಾರದಲಿ ತೋರದಂತ್ಹರಿ ದಾಸ್ಯ ಆರಾಧಿಸುತ ಮೀಸಲಾಗಿ ಚಲಿಸೇ ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2 ದಾಸರನುಭವಿಪ ಆನಂದ ನೋಡುತ ಭಾರ ತೀಶ ನೀ ಮೊದಲು ದಾಸನು ಎನಿಸಲು ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3
--------------
ಅಂಬಾಬಾಯಿ
ವೆಂಕಟೇಶ ನಿನ್ನ ನಂಬಿದೆ ಎನ್ನ ಸಂಕಟವನು ಪರಿಹರಿಸಯ್ಯ ನೀನು ಪ ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು 1 ಅಣುರೇಣು ತೃಣಕಾಷ್ಠದೊಳಗಿದ್ದು ನೀನು ಕ್ಷಣ ಕ್ಷಣ ಆರೈವ ಗುಣ ನಿನ್ನದೇನು ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು ಮಣಿವೆನು ಮನ್ನಿಸು ವರ ಕಾಮಧೇನು 2 ನಾರಾಯಣ ನರಹರಿ ಜಗನ್ನಾಥ ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ ಸಾರಿದವರ ಸಂಸಾರದ ದಾತ ಮಾರಿದ ಮನವಕೊಂಬರೆ ನೀನೆ ಪ್ರೀತ 3 ಉತ್ತಮವಾದ ಶ್ರೀಶೈಲ ನಿವಾಸ ಭಕ್ತರ ಸಲಹುವ ಬಿರುದುಳ್ಳ ಈಶ ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ 4 ವರಾಹತಿಮ್ಮಪ್ಪನು ಒಲಿದೆನ್ನ ಕರೆದು ಆರಿದ ಬÁಯೊಳು ಅಮೃತವನೆರೆದು ದೂರವಾಗದೆ ಅಡಿಗಡಿಗೆನ್ನ ಹೊರೆದು ಏರುಗಂಡಪರಾಧ ಎಲ್ಲವ ಮರೆದು 5
--------------
ವರಹತಿಮ್ಮಪ್ಪ
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ 1 ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ 2 ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನೊಂದೆ | ಬಂದೆನೊ ಕೊನೆಯಲಿ 3 ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ಪೋರ ಬುದ್ಧಿಗಳ ಬಿಡದೆ4 ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ5 ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ6 ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಪಾದವನು ಕಾಣಿಸಯ್ಯಾ7
--------------
ವಿಜಯದಾಸ
ವೇದವೇದ್ಯರೂಪ ವಿಶ್ವವ್ಯಾಪಕನೇ (ರಾಮ) ನಾದರೂಪಪ್ರೀತ ವಿಶ್ವರಕ್ಷಕನೇ ರಾಮ ಪ ಆದಿಮಧ್ಯರಹಿತದೇವ ನಾದರಂಜಿತನೇ ರಾಮ | ಮಾಧವಾ ಮಧುಸೂದನ ಹರೇ ಮಧುರಭಾಷಿತನೇ ರಾಮ ಅ.ಪ ಕಮಲಸದನ ಕಮಲಶೋಭಿತ ಕಮಲಜಾಪ್ರಿಯನೇ ಕಮಲಸಂಭವಾದಿ ನಮಿತ ಕಮಲಾರಾಧಿಕನೇರಾಮ 1 ಸನ್ನುತ ಭೃಂಗಕುಂತಳ ಮಾಂಗಿರೀಶ ರಂಗನಾಥನೇ ರಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವ್ಯಾಸರ ದಿವ್ಯಪಾದ ಪದುಮಯುಗಲ ಆರಾಧಿಸುತಿರು ಮನುಜಾ ಪ ವೇದಗಳಿಗೆ ಸಮ್ಮತವಾದ ಪುರಾಣಗಳ ಸಾದರದಲಿ ರಚಿಸಿ ಮೋದವ ಬೀರಿದ ಅ.ಪ ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು ಸುರಮುನಿ ಪ್ರಾರ್ಥನದಿ ಭಾಗವತ ಗ್ರಂಥ ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ 1 ವಾಸಿಪ ಮುನಿಗುಣ ಭೂಷಿತ ಬದರಿಯೋಳ್ ತೋಷ ತೀರ್ಥರ ಕರೆದು ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ ಭಾಷ್ಯವರಚಿಸೆಂದಾದೇಶವ ನೀಡಿದ2 ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ ಕರಗಳಿಂದಲಿ ಶೋಭಿತ ಸುರತರು ವೆನಿಸಿ ಧರೆಯೊಳು ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ 3
--------------
ಕಾರ್ಪರ ನರಹರಿದಾಸರು
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ ಸಂಕರುಷಣ ದೇವ ಶಂಖಾರಿಧರನೆ 1 ಕಂಬದಿ ಬಂದಚ್ಯುತನೆ ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2 ಅಖಿಳ ಅಸುರರ ಶಕುತಿಯ ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3 ಶಾಮಲ ಶರೀರ ವರ್ಣ ವಿನುತ ರೋಮ ರೋಮ ಕೂಪದಿ ಆನಂದ ಭರಿತ ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4 ಸನ್ನುತ ಚರಣ ಅನಿರುದ್ಧ ದೇವನೆ ಅಸುರ ಸಂಹರಣಾ ಕನಕಗರ್ಭಾದಿ ಸುರಕಟಕ ಪಾಲಕನೆ ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5 ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ ಸನ್ನವದನಾ ರಣರಂಗ ಭೀಮಾ ಭಕುತ ಜನ ಮೋದನಾ ಅಣು ಸ್ಥೂಲದಲಿ ಗಮನ 6 ಶ್ವೇತವಾಹನನ ಸಮರದಿ ಕಾಯಿದಾ ಅಖಿಳ ಜೀವ ಭೇದಾ ದರ ಪರಮ ಸುಮೋದಾ ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
--------------
ಜಗನ್ನಾಥದಾಸರು
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ. ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1 ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2 ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ ಕರುಣಾಲವಾಲ ಮಹೇಶ್ವರ ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3 ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ ಮೃಡ ನಮೋ„ಸ್ತು ಸುಮನನಿಯಾಮಕ 4 ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5 ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6 ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7 ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1 ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2 ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3 ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4 ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5
--------------
ಹನುಮೇಶವಿಠಲ
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು