ಒಟ್ಟು 878 ಕಡೆಗಳಲ್ಲಿ , 102 ದಾಸರು , 778 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಲಕ್ಷ್ಮೀ ದೇವಿಯರು ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ ಕಾಯೆ ಕಾಯೆ ಸಂತೋಷವೀಯೆ ಮೂರು ಜಗ ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ ನಿಗಮತತಿಗೇಯೆ ಮಾಯೆ ಅ.ಪ. ಶರಣು-ಶರಣು-ಶರಣು ಗುಣಭರಣಿ ಭವ ತರಣೀ ಶರಣು ತ್ರಿಗುಣ ಧಣಿ ಶರಣು ಸೊಬಗು ಖಣಿ ಶರಣು ನಿಗಮಧ್ವನಿ ಮಣಿ ಸಿರಿ 1 ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ- ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ ವಿಧಿ ಯಿಂಬೆ ತ್ರಿಗುಣ ಹರಿ ಕೃತಿ 2 ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ ಶ್ರೇಣಿ ಪಂಕಜಪಾಣಿ ಭುಜಂಗ ಸು- ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3 ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ ವಿಧಿಗುರುವಮ್ಮ ಭುಜಿಸೊಸೆಯಮ್ಮ ಹರಿಗ್ಹೇಳಮ್ಮ ದಕ್ಷಣೆ 4 ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ ವಾಲೆ ಇಟ್ಟಹೆ ಬಾಲೇ, ಚಂಚಲ ಲೀಲೆ ನತಜನ ಪಾಲೆ ಖಳರೆದೆಶೂಲೆ ಹರಿಗಿಹೆಮಾಲೆ 5 ಹೇತು-ಹೇತು-ಕಾರ್ಯ ಕಾರಣ ನೀ ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ ಧೊರೆವಶಳಾಗಿ ಗಂಡನ ಭಜಿಪೆ 6 ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ ಸರಿಯಾರಿಲ್ಲ ಮುಕ್ತರಿಗೆಲ್ಲ ಒಡೆಯಳೆ ಚೆಲ್ವೆ ನೀ ಆಕಾಶೆ7 ನೀರೆ-ನೀರೆ-ಹರಿ ಸಮಾಸಮನೀರೆ ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ ಧೀರೆ ಹರಿಮನಸಾರೆ-ಪೊಗಳುವೆ ಬೇರೆ ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8 ಕಂದ-ಕಂದ-ನಾನಿಹೆ ನಿನ್ನ ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ ಕುಂದುಗಳಳಿಸೆ ತಂದೆಯ ತೋರೆ ಚೆಂದದ ಭಕುತಿ ಮುಂದಕೆ ತಂದೂ 9
--------------
ಕೃಷ್ಣವಿಠಲದಾಸರು
ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಶ್ರೀ ವೆಂಕಟೇಶ ಪಾಹಿ-ತಾವಕ ಭಕ್ತಿಂದೇಹಿ ಪ ವಾರಿಜನೇತ್ರಾ-ವಾರಿದಗಾತ್ರಾ ನಾರದಸನ್ನುತ ಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ-ಕುಂಡಲಿ ಶಯನ | ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ವೆಂಕಟರಮಣ ಪಂಕಜಚರಣ ಸಂಕಟಮೊಚನಕಾರಣ ಭವತಾರಣ ಗುಣಪೂರಣ 3 ದಶರಥ ಬಾಲಾ ದಶಮುಖ ಕಾಲ ದಶಶತ ಲೋಚನ ಪಾಲಾ-ಭೂಪಾಲಾ-ಸುರಮುನಿಲೋಲ4 ನಂದ ಕುಮಾರ-ನವನೀತ ಚೋರ ಬೃಂದಾವನ ವಿಹಾರ-ಬಹುದಾರಾ-ಧುರಧೀರ5 ಅಜನುತ ಪಾದ-ಅಪಹೃತ ಖೇದ ಸುಜನಕಲುಷ ನಿರ್ಭೇದ ನುತದೇವ ಸುರಮೋದ 6 ವರವ್ಯಾಘ್ರಾಚಲವಿಹರಣ ಶೀಲ ವರದ ವಿಠಲ ಗೋಪಾಲ-ಶ್ರೀ ಲೋಲ-ಬಹು ಲೀಲಾ 7
--------------
ಸರಗೂರು ವೆಂಕಟವರದಾರ್ಯರು
ಶ್ರೀ ವೆಂಕಟೇಶಮಾಂ ಪಾಲಯ ಸುಗುಣಾಲಯ ಪ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ. ಕಮಲಲೋಚನ ಭಕ್ತ ಶಮಲ ಲೋಚನ ಶಕ್ತ ವಿಮಲ ಚರಿತಪೂರ ಕಮನೀಯಶರೀರ 1 ಧೀರ ದಶರಥಕುಮಾರಾ ಬುಧಜನವಿಹಾರ ವೀರಹರಿ ಪರಿವಾರ ಕ್ರೂರಾಸುರವಿದಾರ 2 ಸರಸಿಜಾಸನನುತ ಸುರಮುನಿಸೇವಿತ ಹರಿಣಾರಿಧರಾಗಾರ ವರದ ವಿಠಲಾಕಾರ 3
--------------
ಸರಗೂರು ವೆಂಕಟವರದಾರ್ಯರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಶ್ರೀ ಸತ್ಯಪರಾಯಣರು ನೋಡು ಮನವೆ ಸತ್ಯಪರಾಯಣರ ಪದಗಳ ಬೇಡು ಬೇಡು ಬೇಡಿದಿಷ್ಟವೀವ ಯತಿಗಳ ಪ ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾ ಸಾರಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾ ನಾರಾಯಣನ ಜಗತ್ಕಾರಣನೆನಿಸಿದಾ ಧೀರ ಸತ್ಯಸಂತುಷ್ಟ ಕುವರನೆನಿಸಿದಾ 1 ಭೀಮಸೇನ ಸನ್ಮತ ಸರಿಯಾಗಿ ನಡಿಸಿದಾ ಪ್ರೇಮದಿಂದ ರಘುಜಿಗೆ ವನಮಾಲೆ ಮುಡಿಸಿದಾ ತಾಮಸ ಮತದವರ ಮತವ ಮುರಿದು ಹಾಕಿದಾ ರಾಮನ್ನಾಮ ನುಡಿಸಿ ನುಡಿಸಿ ಹರುಷಬಡಿಸಿದಾ2 ವರ ಕದರುಂಡಲಗೀಶನ್ನೊಡೆಯ ರಾಮನ್ನ ನಿರುಪಮಾನಂದ ತೀರ್ಥ ಸುಪ್ರೇಮನ್ನ ಕರುಣದಿಂದ ಶಿಷ್ಯನಾಗಿ ಸಂದೋಹಪಾಲನ್ನ ಸ್ಮರನ ಜನಕಾ ಪಾಂಡುರಂಗನ ಸ್ಮರಿಪ ಲೋಲನ್ನ 3
--------------
ಕದರುಂಡಲಗೀಶರು
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ. ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ ಫಣಿವೇಣಿ ಮಂಜುಳವಾಣಿ ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1 ದೂರೆ ಶುಭ್ರಾಂಬರೆಧಾರೇ ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ ಕರಪಲ್ಲವ ಚತುರೇ 2 ವರದೇ ರಸನದೆ ನಿಂತವಸರದೇ ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ ತೆರದಿಂ ಕುಡುವರಮಂ 3
--------------
ನಂಜನಗೂಡು ತಿರುಮಲಾಂಬಾ
ಶ್ರೀ ಸುಮಧ್ವ ವಿಜಯಸ್ಥ ಅಷ್ಟೋತ್ತರ ಶತನಾಮಾವಳಿ ನಮಿಸುವೆ ಜಗದ್ಗುರುಗಳೇ ಪ ಅಮಿತ ಮಹಿಮನ ವಿಮಲ ಪದಪದ್ಮ ತೋರ್ವುದೆಮಗೇ ಅ.ಪ. ಭೂರಿ ವಿಶ್ವ ಭೂಷಣರೇ ಪಾಹಿಮಾಂ ಪಾಹಿ 1 ಪರಿಪೂರ್ಣ ಪ್ರಮತಿಯೇ | ಪುರುಸಂಖ್ಯ ಪೂರ್ಣೇಕ್ಷ ಅರವಿಂದ ಲೋಚನರೆ | ಗುರುಮತ್ಯಮಿತ ಬುದ್ಧಿ ಮರುದಂಶ ಪ್ರಚುರಧೀ | ಪುರು ಕರುಣ ಆಂಬುಧಿಯ ಮೇರೆಯನು ಮೀರಿದವರೆ || ಸರುವಿತ್ ಪೂರ್ಣದೃಕ್ | ಉರುಮತಿಯೆ ಸಕಲಜ್ಞ ಸರುಧೀ ಪೃಥು ಹೃದಾ | ಪುರುಧೀ ಪ್ರಭೂತಧೀಃ ಪರಮ ಆನಂದ ಸತ್ತೀರ್ಥ ಸೂರಿರಾಜಾಧಿ ರಾಜರೆ ಪಾಹಿ ಪಾಹಿ 2 ಫುಲ್ಲ ಬೋಧ ಬಹುಲ ಪ್ರಬೋಧರೇ | ಮಹೀಷ್ಟ ಸುಹೃದಯರೇ ಬಹುಲ ಬೋಧಾಖ್ಯರೇ | ಮಹಾ ಪುರುಷೋತ್ತಮನ ದಾಸರೊಳಧಿಕನೆ ಪಾಹಿ 3 ನಮೊ ನಮೋ ಧೀರಮತಿ | ನಮೊ ಪೃಥೂ ದರ್ಶನರೆನಮೊ ನಮೋ ಸುಖ ತೀರ್ಥ | ನಮೊ ಪೃಥುಲ ಚೇತಾತ್ಮನಮೊ ನಮೋ ಪೃಥುಮತಿಯೆ | ನಮೊ ನಮೊ ಸಮಗ್ರ ಧೀರ್ಸುಸ್ಮಿತೇಂದುಗಳೆ ಪಾಹಿ || ನಮೊ ವಿಪುಲ ಹೃದಯರೇ | ಅಮಂದಧಿಯೆ ಶುದ್ಧಧೀಃ ನಮೊ ನಮೋ ಸುವಿಚಾರ | ನಮೊ ದಾನವರ್ಭೀಮ ನಮೊ ಪುಷ್ಟ ಬುದ್ಧಿಯೇ | ನಮೊ ಪೃಥುಲ ಹರಿ ನಿಗೂಢ ಮೂರ್ತಿಯೆ ಪಾಹಿ ಪಾಹಿ4 ಆನಂತ ಬೋಧಾಖ್ಯ | ಅನೂನ ಬೋಧರು ಎನಿಪಆನಂದ ತೀರ್ಥಾಖ್ಯ | ಅನುಮಾನ ತೀರ್ಥರೇಸ್ವರ್ಣವರ್ಣಾಭಿಧರೆ | ಧನ್ಯ ಪ್ರವರರು ಎನಿಪ ಆದೀನ ಸತುವಾಭಿಧರೆ ||ಅನಂತಧಿಯ ಮಧ್ವ ಸು | ಪೂರ್ಣ ಸಂಖ್ಯ ಧೀರದಿಹನುಮಂತ ಕೃಷ್ಣೇಷ್ಟ | ಪ್ರಾಣೇತ ಪ್ರಾಜ್ಯೇಕ್ಷಆನಮಿಸಿ ಬೇಡ್ವೆ ಸಂ | ಪೂರ್ಣ ಪ್ರಮತಿಯೆ ತವ ಚರಣ ತೋರಿಸಿ ಸಲಹುವುದೂ 5 ಪಾಹ್ಯದ ಭ್ರಮನೀಷ | ಪಾಹಿ ಪ್ರಚುರ ಪ್ರಜ್ಞಪಾಹಿ ವಿಪುಲ ಪ್ರಮತಿ | ಪಾಹಿ ಆಯುತ ಚೇತಪಾಹಿ ಪೃಥು ಪ್ರಬೋಧಾ | ಪಾಹಿ ಪ್ರಬರ್ಹ ಬೋಧಾಖ್ಯರೇ ಪಾಹಿ ಪಾಹಿ ||ಪಾಹ್ಯ ಮಂದಮನೀಷ | ಪಾಹ್ಯದ ಭ್ರಸುಸಂಖ್ಯಪಾಹಿ ಬೃಹತು ಪ್ರಬೋಧ | ಪಾಹ್ಯತಿ ಭದ್ರ ಭಾಷಣಪಾಹ್ಯ ಪೂರ್ವ ಪುರುಷ | ಪಾಹಿ ದಶಧಿಷಣಾರ್ಯಾ ವರ್ಯ ಚರ್ಯರೇ ಪಾಹಿ 6 ಸಿರಿ ಮಾಧವನ | ಗುಣ ಸಾಧಕಾಗ್ರಣಿಯೆ ಪಾಹಿಮಾಂ ಪಾಹಿ ಪಾಹಿ 7 ವಾಸುದೇವ ಪರಿ | ಶಿಕ್ಷಣದಿ ದಕ್ಷನೆನಿಸುವನಿಗೇ ಜಯವಾಗಲಿ ||ಜಯ ಹರಿಗಧಿಷ್ಠಾನ | ಜಯ ಮುಖ್ಯ ಪ್ರತಿ ಬಿಂಬಜಯ ಜಯತುದಾರಮತಿ | ಜಯ ಹರಿದಯಿತ ವರನೆಜಯ ಶ್ರೀ ಮದಾನಂದ | ತೀರ್ಥಾರ್ಯವರ್ಯ ಜಯ ಜಯತು ನಿಮ್ಮ ಪದಗಳಿಗೇ 8 ಮಧ್ವಾಖ್ಯ ಶೃತಿಪ್ರತೀ | ಪಾದ್ಯರೆಂದೆನಿಸುತಲಿಮಧ್ವ ವಿಜಯಾಖ್ಯ ಪ್ರ | ಸಿದ್ಧ ಗ್ರಂಥದಿ ಪೊಳೆವಮಧ್ವಗುರು ತವನಾಮ | ಶಬ್ದಾಖ್ಯ ಮಣಿಗಳಷ್ಟೋತ್ತರದ ಮಾಲೆಯನ್ನೂ ||ಮುದ್ದು ಮೋಹಜ ತಂದೆ | ಮುದ್ದು ಮೋಹರಲಿರುವಮಧ್ವಗುರುವೇ ನಿಮ್ಮ | ಹೃದ್ಗುಹದಲಿರುವಂಥಮುದ್ದು ಗುರುಗೋವಿಂದ | ವಿಠ್ಠಲನಿಗರ್ಪಿಸುವೆ ಉದ್ಧರಿಪುದೆಮ್ಮ ಸತತ 9
--------------
ಗುರುಗೋವಿಂದವಿಠಲರು
ಶ್ರೀ ಹನುಮ ಮಾಂ ಪಾಹಿ ಪವನ ಜ ಖಗ ವಾಹನನ ದಾಸ ನೇಹದಲಿ ಬಿಂಬರೂಪ ತೋರೆನಗೆ ಪ ಭಾನುಸುತ ಪವಮಾನ ನಂದನ ನೀನೆ ಸಲಹಿದೆ ಮಾನನಿಧಿ ರಾಮಬಾಣದಲಿ ಇಂದ್ರ ಸೂನುವಿನ ಪ್ರಾಣ ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ ವಾನರೇಂದ್ರಗೆ ನಾನಾ ಪರಿಯಲ್ಲಿ ಆನಂದವಿತ್ತ ಜ್ಞಾನಿ ನಿನ್ನ ಅಧೀನದವನೆಂದೆಂದು 1 ಸುರೇಶನಂದನ ಮಾರುತನೆ ನಿನ್ನ ಕರುಣವು ಎನ್ನೊ ಳಿರದ ಕಾರಣ ಹರಿ ಮುನಿದನೆಂದು ಅರಿದು ಮನದಿ ದ್ವಾ ಪರದಲ್ಯವ ತರಿಸಿ ಗುರುವರ್ಯ ನಿಮ್ಮ ಚರಣ ಸೇವಿಸೆ ಪೊರೆದೆ ಅಂದು ಸಮರದಿ ಕೃಷ್ಣನ ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ 2 ಮೂರನೆಯ ಅವತಾರದಿಂದಲಿ ಧಾರುಣಿಯೊಳು .......... ಬೀರಿದ್ದ ಶಾಸ್ತ್ರವ ಬೇರೊರಿಸಿ ಕೀಳ್ದು ತೋರಿಸಿದಿ ಹರಿಯ ಆರು ನಿನ್ನನು ಆರಾಧಿಪರೊ ಆ ಧೀರರಿಗೆ ದೋಷ ಸೇರಲಮ್ಮವು ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ 3
--------------
ಜಗನ್ನಾಥದಾಸರು
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ
ಶ್ರೀನರಹರಿ ಕರುಣಾಜಲಧೆ ತವಚರಣವ ನಂಬಿದೆ ಪ ದೀನಜನರು ಪ್ರತಿದಿನ ಮೊರೆಯಿಡುತಿರೆ ನಿಕರ ಕುಲಿಶಾಯುಧ ಧುರಧೀರಾ ಶೂರಾ ಹಿರಣ್ಯ ಕಶಿಪು ಪುರಂದರ ಸನ್ಮುನೀಂದ್ರ ನುತಿ ಪಾತ್ರಸುಚರಿತ 1 ಉಗ್ರರೂಪ ಸಕಲಗ್ರಹಭಯ ಪರಿಹಾರೀ ಶೌರೀ ಮುರ ವೈರಿ ಜಲಜನಾಭ ನಿನ್ನಯ ಚಿಂತನೆ ಕೊಡು 2 ಕ್ಷುದ್ರರೋಗಗಳುಪದ್ರಪಡಿಸುತಿಹದೈಯ್ಯ | ಜೀಯಾ ಕ್ಷೇಮವಿತ್ತು ನಿನ್ನವರ ದಾಸನೆನಿಸೈಯ್ಯಾ ರುದ್ರಾಂತರ್ಗತ ಗುರುರಾಮ ವಿಠಲ ಭದ್ರಮೂರುತಿ ಘಟಿಕಾಚಲನಿಲಯ 3
--------------
ಗುರುರಾಮವಿಠಲ
ಶ್ರೀನಿವಾಸ ತವಚರಣಸರೋರುಹಮಾನತೋಸ್ಮಿ ಸತತಂ ಸಾನುರಾಗ ಮನಸಾ ವಚಸಾ ಶಿರ ಸಾನುಕೂಲಫಲದಂ ಶುಭಚರಿತಂ ಪ ಶ್ರೀಶವಾಸ ಹಿರಣ್ಮಯ ವಾಸ ಸಮಸ್ತಾವಾಸ ತರಣಿಶತ ಭಾಸ ಸುಮನೋಲ್ಲಾಸ ವಿಜಿತರೋಷ ಭೂಷಿತಾಂಗ ವಿಶೇಷ ಕರುಣ ಮೃದು ಭಾಷಣ ಸಜ್ಜನ ಪೋಷಣ ನಿರ್ಜಿತ ದೂಷಣ ಭವಜಲ ಶೋಷಣ ಪೂಷಣ 1 ಪುಂಡರೀಕಾಸನ ಖಂಡಪರಶು ಅ ಖಂಡಲ ಮುಖ ಸುರಮಂಡಲ ಸೇವಿತ ಪಂಡಿತ ರಣಶೌಂಡ ಪುಂಡರೀಕನಯ- ನಾಂಡಜವಾಹನ ಖಂಡಿತಕೇಶ ಕೋ ದಂಡ ಕೃತಾರ್ಚನ ಪುಂಡರೀಕಗಿರಿ ಮಂಡನ ಹಿಮಕರ ಮಂಡಲ ಸನ್ನಿಭಕುಂಡಲಾಭರಣ 2 ವಾರಿದನೀಲಶರೀರ ಧರಾರ ಧೀರ ಸುಮಂದರಧಾರಣ ಚತುರ ಕರಾಗ್ರವಿ ದಾರಿತ ಶೂರ ಹಿರಣ್ಯಕವೀರ ನರಮೃಗೇಂದ್ರಾ ಮಾರಜನಕ ಸುರವಾರ ವಂದ್ಯಪದ ಪರಿ ವ್ಯಾಘ್ರಗಿರಿ ವರದವಿಠಲ ಹರಿ 3
--------------
ವೆಂಕಟವರದಾರ್ಯರು
ಶ್ರೀನಿವಾಸ ನಿನ್ನ ನಂಬಿದ ದಾಸನ ಎನ್ನನು ಕಾಯೋ ಶ್ರೀವಾಸುಕಿಶಯನ ಪ ರೂಪರಹಿತ ಬಹುರೂಪ ಧರಿಸಿಹ ಶ್ರೀಪತಿ ಎನ್ನನು ನೀಪರಿಪಾಲಿಸು 1 ಕಾಲರೂಪ ಬಹುಲೀಲೆಯ ತೋರುವ ಮೂಲಪುರುಷ ಸುರಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸ ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿ ಕಲ್ಪಿತ ಸುರನರ ಕಲ್ಪಭೋಜ ಹರಿ 4 ಖಂಡಪರಶು ಅಖಂಡಲಾದಿ ಸುರ ಪುಂಡರೀಕ ಪದ 5 ಮಂದರಧರ ಗೋವಿಂದ ಮುಕುಂದ ಸ ನಂದನಾದಿ ಮುನಿಬೃಂದ ಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾಧಾರ ಧೀರವರದವಿಠಲ ಹರಿ 7
--------------
ವೆಂಕಟವರದಾರ್ಯರು
ಶ್ರೀನಿವಾಸ ನಿನ್ನ ನಂಬಿದ ದಾಸನ ಶ್ರೀನಿವಾಸುಕಿಶಯ ಕಾಯೋ ಯನ್ನನು ಪ ನೀಪರಿಪಾಲಿಸು 1 ಮೂಲಪುರುಷಸುರ ಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸಮಸ್ತವಸ್ತುವ ಸುವ್ಯಕ್ತಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿಕಲ್ಪಿತಸುರನರ ಕಲ್ಪಭೋಜಹರಿ4 ಪುಂಡರೀಕಪದ 5 ಮಂದರಧರ ಗೋವಿಂದ ಮುಕುಂದ ಸನಂದನಾದಿ- ಮುನಿಬೃಂದಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾ ಧಾರಧೀರವರದ ವಿಠಲಹರಿ7
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸ ಪಾಹಿಮಾಂ ಸದಾ ಶ್ರಿತಜನಾಮೋದ ಮೌನಿಜನ ಚಾತಕಾಂಭೋದ ಪ ಸಾನುರಾಗ ಯುಗಮುನಿ ಮಾನಿತಾವರಾರವಿಂದ ಭಾನುಕೋಟಿ ತೇಜ ಸಾಮಗಾನಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ ವಂ ದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ ಭೂಷಾ ಸುಪವಿತ್ರ 1 ಸರ್ವಲೋಕಪಾಲಕೇಶ್ವರಸೇವಿತಸುಪರ್ವಗಣಸದ್ಗುಣಾಕಾರ ಶರ್ವ ಸುರಪತಿ ಮುಖ್ಯ ಸರ್ವದೇವವರವರ್ಯ ಸೂರ್ಯ ಪರ್ವತಾಧಿರಾಜ ಧೈರ್ಯ 2 ಸೃಷ್ಟಿ ರಕ್ಷಣಾಂತಕಾರಕ ಸರ್ವಾತ್ಮಕ ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಶ್ರೀಕರ ಶೃಂಗಾರಶೇಖರ ಶ್ರೀಕರಗೃಹ ಶ್ರೀಕರಧಾರಿತ ಮಂದರ ಪಾಕವೈರಿ ಮಣಿನೀಲ ಪಾವನ ಸುಗುಣಶೀಲ ಶೋಕ ಮೋಹ ಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿಪೂರ ವ್ಯಾಘ್ರಾಧ್ರಿವಿಹಾರ ಧೀರ ವರದವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
--------------
ವೆಂಕಟವರದಾರ್ಯರು