ಒಟ್ಟು 654 ಕಡೆಗಳಲ್ಲಿ , 99 ದಾಸರು , 588 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬೆ ಶಿರಿ ವಿಹಾರಾ | ಜಗದಂಬೆ ಶಿರಿ ವಿಹಾರಾ | ಜಯ | ಶ್ರೀ ಬಿಂಬ ಪ್ರಾಣಾದಿ ರೂಪಿ ಬಹುರೂಪಿ ಪ ಜನಿತ ಪಾದ | ಶ್ರೀ ಕುಮದಾಪ್ತ ಕುಲಜ | ಭೋಸುದೀಪ್ತ ಅನಂತ ಅಚಿಂತ್ಯ 5Àುಹಿಮೋಪೇತ ಸುವ್ಯಾಪ್ತಅ.ಪ. ತುಂಬಿದಾಂಗ | ಸಿಂಧುಜೆ ಶಿರಿ ಸು | zs5iÁ | ಪ್ರತಿಬಿಂಬ ನೆನಿಪ | ಜಂಭಾರಿಯಾ | ಪ್ರೇಮಾ | ಸ್ಪದಕಂಬುಧರ ಘನ | ಶ್ಯಾಮಾ ವರ್ಣ ಸ | ನ್ನಾಮಾಜಾಂಬೂನದ | ದಾಮಧರ ಸು | ವೇಷಾ | ದು-ರ್ಗಾಂಬೆ ರಮಣ | ಭಕುತ ಸಂ | ತೋಷಾ | ನೀ-ಲಾಂಬುದಾಭ | ಸತಿರಕ್ಷಕ | ದಯೆ ಭೂಷಾ | ಭೂಮಾಂಬೆ ಸುತನ | ಹರಣ ಹರ ಸು | ವಿಶೇಷಾ | ಶ್ರೀಅಂಬುಜನಾಭ ಗೋವಿಂದ | ಅಂಬೆಯ ಅಗ್ರಜ ಮುಕುಂದನಂಬೀದವರನು ಕಾವ | ಗುರು ಗೋವಿಂದ ವಿಠಲ 1
--------------
ಗುರುಗೋವಿಂದವಿಠಲರು
ಅರವಿದೂರನೆ ತವ ಮಹಿಮೆಯು ಘನ್ನ ಪ ಬಂಡಿಕಾಲನು ಪಿಡಿದೆಯಂತೆ | ಹತ್ತು ಬಂಡಿರಾಯಗೆ ಸುತ ನೀನಾದಿಯಂತೆ ಬಂಡಿ ಅಸುರನ ಕೊಂದಿಯಂತೆ | ಧುರದಿ ಬಂಡಿ ನಡಸಿ ನರನ ಸಲಹಿದೆಯಣತೆ 1 ತಂದೆ ತಂದೆಗೆ ತಂದೆಯಂತೆ | ಜಗದ ತಂದೆ ನಿನಗೆ ತಂದೆ ತಾಯಿಗಳಂತೆ ತಂದೆ ನೃಪಾಲನ ಸುತೆಗೀಶನಂತೆ 2 ಸಿಂಧೂರದ್ವಯ ವರದನಂತೆ | ಮಧ್ಯ ಸಿಂಧೂರವದನವು ನಿನಗಿಹುದಂತೆ ಸಿಂಧು ಮಂದಿರ ನಿನಗಂತೆ ಶಾಮ ಸುಂದರ ನಿನಗೆ ಭಕ್ತರ ಚಿಂತೆಯಂತೆ 3
--------------
ಶಾಮಸುಂದರ ವಿಠಲ
ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಅಹುದಹುದನಾಥ ಬಂಧು ಅಹುದಹುದನಾಥ ಬಂಧು|ಅನುಪಮ್ಯ| ಮಹಿಮೆ ಕಾರುಣ್ಯಸಿಂಧು| ಏನೆಂದು ಪೇಳೆಲೆಮ್ಮಾ|ಈ ದಯಕ| ತಾನು ಪಮೆ ಇಲ್ಲವಮ್ಮಾ| ನ್ಯೂನಾರಿಸದೆ ಬಂದನು,ಕ್ಷಮೆಯಿಂದ| ತಾನಾಗಿ ಸಲಹುತಿಹನು| ಜ್ಞಾನವಿಲ್ಲದೆ ತರಳನೆಂದಪೇಕ್ಷಿಸದೆನ್ನ| ಮನ ನೆನೆವಿನೊಳಗಿಟ್ಟು ತನ್ನ ಅಂಘ್ರಿಯದಾ 1 ಪತಿತರೊಳು ಪತಿತ ಅಧಮಾ|ಅಮೂಲ್ಯ| ಪತಿಹೀನ ಮೂಢ ಪರಮಾ| ಸುತ್ತ-ಭಕುತಿ ಮಾಡಲರಿಯೆ|ಚತೆರ ಸಂ| ಸ್ಕøತ ಮಾತನಾಡಲರಿಯೇ| ಗತಿಗೈದರೊಂದೊಂದು ವೃತದಿ ಮೊದಲಾದವರು| ಕ್ಷಿತಿಯೊಳಗೆ ಎನ್ನಂಥ ಶೂನ್ನರಾರಮ್ಮ 2 ನೆಲಿಗೆ ಮುಯ್ಯಕ ಮುಯ್ಯವು|ಈ ತೆರದಿ| ಸಲೆ ನಡೆತಿ ಉಂಟು ಕೆಲವು| ಕೊಳದೆ ಕೊಡುವವರಿಂದಿಗೆ|ಆರಿಲ್ಲಾ| ನಳಿನಜೇಂದ್ರಾದ್ಯರೊಳಗೇ ಒಲಿದು ಮಹೀಪತಿ ಸುತನ ಕರವಿಡಿದು ತನ್ನ| ದಾಸರ ದಾಸ ದಾಸನೆನಿಸಿದ ಬಿರದಿಗಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆ ಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ಪ. ನೀರೊಳು ಬಹುಕಾಲ ಪೊಕ್ಕು ಮುಳುಗಿದವ ಭಾರದ ಗಿರಿಯನುದ್ಧರಿಸಿರುವ ಈರೇಳು ಲೋಕದ ಹೊರೆಯನೆಲ್ಲವ ಹೊತ್ತು ಹಾರುವ ಹಕ್ಕಿಯ ಹೆಗಲನೇರಿ ಬಹ 1 ಜಲಚರ ಸ್ಥಲಚರ ಯಾಚಕನೆನಿಸಿ ಮ- ತ್ತಲಸದೆ ಮಾತೃವಧೆಯ ಮಾಡಿದ ಛಲದಿಂದಸುರರ ಕೊಂದು ಸಿಂಧುವ ದಾಟಿ ಬಲುಗಳ್ಳನೆನಿಸಿ ಮಾವನ ಸೀಳ್ದವ 2 ಸತಿಯರ ವ್ರತವ ಕೆಡಿಸಿ ಕುಮಾರ್ಗವ ತೋರಿ ಕ್ಷಿತಿಯೊಳು ಯುಗದ ರಾಯರ ಕೊಲ್ಲುವ ಶ್ರುತಿನಿಷಿದ್ಧಪಥದಿ ನಡೆದು ಪಾಪಕಂಜದೆ ಯತಿಶ್ರುತಿತತಿಗಳೆಲ್ಲರ ಹೊಂದಿದ 3 ಸಾವಿರ ಫಣದ ಫಣಿಯೊಳ್ಕಟ್ಟುವಡೆದಾಗ ಹಾವಿನ ಮೈಮೇಲೆ ಒರಗಿದವ ಜೀವರೆಲ್ಲರ ಕೊಂದು ಧರೆಯನೆಲ್ಲವ ನುಂಗಿ ಸ್ಥಾವರದೊಂದೆಲೆಯನೆ ಪೊಂದಿಹ 4 ಉರಿವ ಕಿಚ್ಚ ನುಂಗಿ ಜ್ವಲಿಸುವಗ್ನಿಯೊಳು ಸ್ಥಿರವಾದ ಪ್ರಬಲದೈತ್ಯರ ವೈರವ ಸಿರಿ ಹಯವದನನ್ನ ದಾಸರ ದಾಸನು ಚರಣಸೇವಕನೆಂಬ ಮತವೆ ಲೇಸು 5
--------------
ವಾದಿರಾಜ
ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ ಪ. ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆಅ.ಪ. ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ 1 ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ 2 ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ 3 ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ 4 ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ 5 ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ6
--------------
ವಾದಿರಾಜ
ಆಡುತ್ತಾ ಬಾರಮ್ಮಾ ನಲಿದಾಡತ್ತಾ ಬಾರಂಮಾ ಆಡುತ್ತವರಗಳಾ ನೀಡುತ್ತಾ ಕರುಣಾದಿ ನೋಡುತ್ತಾ ದಯದಿಂದಾ ಲಕ್ಷ್ಮಿ ಆಡುತ್ತಾಬಾರಮ್ಮಾ ಪ. ಬೇಸರವು ಬೇಡಮ್ಮಾ ದಾಸರ ದಾಸಿಯು ನಾನಿಂವÀು ವಾಸನಪೂರಿತೆ ವನರೂಹ ನೇತ್ರೆ ಸಾಸಿರನಾಮದ ವಾಸುದೇವನ ಸತಿ ಆಡುತ್ತಾಬಾರಮ್ಮಾ ನಲಿದಾಡುತ್ತಾ ಬಾರಮ್ಮಾ 1 ಕರದಾರವೊಯೆಂದು ತಾಯೆಯಂನಾ ಮೊರೆಯಲಾಲಿಸೆ ನೀ ಬಂದು ದುರಿತಗಳಾನೆಲ್ಲಾ ಪರಿಹರಿಸುವ ನಿಂಮ ಅನುದಿನ ಆಡÀುತ್ತಾ ಬಾರಮ್ಮಾ2 ಧರಣಿಯೊಳುನ್ನತವಾದ ಹೆಳವನಾಕಟ್ಟೆ ಗಿರಿಯೊಳು ನೆಲಸಿದ ಪರಮ ಪವಿತ್ರಳ ಕರುಣಾ ಸಿಂಧುವೆ ವರವನು ಕೊಡುತ್ತಾ ಬೇಗಾದಿಂದಲಿ ಆಡುತ್ತಾ ಬಾರಮ್ಮಾ3
--------------
ಹೆಳವನಕಟ್ಟೆ ಗಿರಿಯಮ್ಮ
ಆತ್ಮನಿವೇದನೆ ಆತನೇ ದಾತನು ಯೆತ್ತಿಕೊಡುವವನು ಭೂತದಯೆಯುಳ್ಳಂಥ ಪುಣ್ಯಾತ್ಮನು ಪ ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ ಸಿಂಧು ಜಲದಲಿ ಮಿಂದು ಭಜಿಸಲಾಗ ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ ಬಂದಿರುವ ಕಷ್ಟಗಳ ನೀಗುವರು ಯಾರೋ 1 ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ ತಾತನೇ ಗತಿಯೆಂದು ಪಾದದಲಿ ಬೀಳೇ ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ ಯೆತ್ತಿ ಮೋಕ್ಷವ ಬೇಗನೀವ ನಾರೋ 2 ನಾನು ಬಡವನು ಜಗದಿ ದೀನಹೀನನು ಹರಿಯೆ ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ ಪಾನ ಮಾಡುತಲೆನ್ನ ಅವಗುಣವ ನೀಗೆನಗೆ ತಾನೆ ಭಿಕ್ಷವು ಬೇಗನೀವ ನಾರೋ 3 ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ ಸುಜನರನು ಪೊರೆವಂತೆ ಸಲಹುವನು ಯಾರೋ 4 ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ ಇನ್ನು ಮರೆಯದೆ ನಿನ್ನ ದಾಸನಾಗುವೆನು ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ ಪ್ರಾಣವನು ಯತ್ತೆನ್ನ ಸಲಹುವನು ಯಾರೋ 5
--------------
ಕರ್ಕಿ ಕೇಶವದಾಸ
ಆದಿಕೇಶÀವನ ಪಾಡಿ ಸುಜನರು ಮೋದದಿಂದಲಿ ಕೂಡಿ ಭವ ಬೇಡಿ ಪ ಅಸ್ಥಿರ ಸಂಸಾರ ಮೇಲು ದುಃಖಪಾರವಾರ ಇಲ್ಲಿ ವಸ್ತಿ ತ್ರಿವಾಸರಾ ಸ್ವಸ್ಥ ಚಿತ್ತದಿಂದ ಹರಿಯ ನೆನೆಯದಾಗ ಬ್ಯಾಡಿರಿ ಭೂಭಾರ 1 ಪರಿ ಜಾರಿ ಬೀಳುವುದಕ್ಕೆ ನೀರೊಳು ತೊಳೆದು ಪರಿಮಳತೊಡೆ ಮಲಸೋರದೆ ಪೇಳಿದರೆ 2 ಮಡದಿ ಮಕ್ಕಳು ಬಂದು ನಿನ್ನ ಕಡೆ ಹಾಸೋಕೆ ಬಂದು ನಿಮಗೆ ಕೆಡಬ್ಯಾಡಿರಿ ಹರಿಪರಮ ದಯಾಸಿಂಧು 3 ಸಂಗಡ ಬಂದು ರಕ್ಷಿಪರೇನು ಕಷ್ಟಬಟ್ಟು ನೀವು ಘಳಿಸಿ ಹೂಳಿದರೆ ಹುಟ್ಟಿದ್ದಾಯಿತೇನು 4 ನಗೆಗೇಡು ನಿಮ್ಮ ಬಟ್ಟಿ ಮೂರಾಬಟ್ಟಿ 5 ಅರಮಾಯಾ ಇನ್ನು ಪರಿ ಆದೀತು ನಿಮ್ಮ ಕಾಯಾ 6 ಇದು ಘಟ್ಟಿಯೆ ಸಂಸ್ಕøತಿಯು ಬಿಟ್ಟಿಗಾರರು ನಿಮ್ಮ ಕಟ್ಟುವನಿತರೊಳು ಮುಟ್ಟಿ ಭಜಿಸೆ ಹರಿಯಾ 7 ಮೇಲು ಸರಿಪರಿವಾರಗಳಾ ನರಸಿಂಹವಿಠಲಗರ್ಪಿಸಿ ಸುಖಿಸುವ ನರವರ ಜನ್ನವೇ ಸಫಲಾ 8
--------------
ನರಸಿಂಹವಿಠಲರು
ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ ಆನೆಂತು ತುತಿಪೆ ನಿನ್ನಾ ಪ ಆನೆಂತು ತುತಿಪೆ ಪಂಚಾನನಸುತ ಪವ ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ. ಸನಕನಂದನ ಸನತಕುಮಾರಾದಿ ಮುನಿಗಳು ಹರಿ ದರುಶನವ ಮಾಡುವೆವೆಂದು ಘನಹರುಷದಿ ಮೋಕ್ಷವನು ಕುರಿತು ಬಂದೊ ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ ರನ ನೋಡಿ ಎರಡೊಂದು ಜನುಮದಲಿ ಕ್ರೂರ ಸಿರಿ ವನಜಾಕ್ಷರಗೋಸ್ಕರಾ ಅವತರಸಿ ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ ವನದೊಳು ಮೆರೆದೆ ಅಸಮಶೂರಾ ಹರಿಹರಾ 1 ಕೋತಿ ಕಟಕಮಾಡಿ ಜಾತರಹಿತ ಹರಿ ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ ಜಾತನ ಸಲಹಿ ಅತೀ ತೀವ್ರದಿಂದಲಿ ವಾತವೇಗದಿ ವನಧಿಯ ತಡಿಲ್ಲದೆ ದಾಟಿ ಮಾತೆಗುಂಗುರವಿತ್ತ ಶೋಕತರುಗಳ ಭೀತಿ ಬಡದಲೆ ಕಿತ್ತಿ ರೋಮ ಬಳ ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ ಜಾತವೇದಸಗೆ ಇತ್ತೀ ಹನುಮಶಿರಿ ನಾಥನಿಗೆರಗಿ ಪಡೆದ ಬಹುಕೀರ್ತಿ 2 ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ ಚರಿಸುತ್ತ ಇರಲಾಗಿ ಮರುತದೇವನು ಅವ ತರಿಸಿ ಅವನಿಯೊಳು ದುರಿಯೋಧನುಣಲಿತ್ತ ಗರಳವ ಭುಂಜಿಸಿ ಅರಗಿನ ಸದನದಿ ಪುರೋಚನಾದಿಗಳನ್ನು ಉರುಹಿ ಏಕಚಕ್ರಾ ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ ವರ ಪತಿಕರಿಸಿ ಮಗಧದೇಶ ದರಸನ ಸಂಹರಿಸೀ ರಾಜಸೂಯಜ್ಞ ಹರಿಗೆ ಅರ್ಪಿಸಿದಿ ಮೆರೆಸೀ 3 ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ ಧಿಕವ ತರುವೆನೆಂದು ವೃಕೋದರ ಪೋಗಲು ಅಕುಟಿಲ ಹನುಮಂತನನು ಅವಲೋಕಿಸ್ಯಂ ಜಿಕೆಯಿಂದ ನಿಂದು ಮಾರಕಜನರಿಗೆ ಮೋ ಕುಪಥ ಖಳರನೊರಿಸಿ ನೀ ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ ಳುಕದೆ ಯುದ್ಧವ ಮಾಡಿದೆ ದುಶ್ಯಾಸನ ರಕುತ ವೆರಿಸಿ ಕುಡಿದೆ ಉಭಯಗಳ ರ ಥಿಕರ ಬಲವಕರೆದೆ ಭಯದಲಿ ಉ ದಕದಲಿರ್ದ ದುರ್ಯೋಧನನೂರು ಕಡಿದೆ 4 ಭೀಮ ಭಯಂಕರ ಕಾಮಕೋಟಿ ಚಲ್ವ ಧೀಮಂತಜನ ಮನೋಪ್ರೇಮ ಪಾವನ ಗುಣ ಸ್ತೋಮ ಸರ್ವಾಧಾರ ಭ್ರಾಮಕಜನ ವನ ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ ಸಾಮಜ ಹರಿಗುರು ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ ಲಾಮ ಭವ್ಯ ಚರಿತಾ ಸೋಮಕುಲ ಸೋಮ ಸುಖ ಭರಿತಾ ಭಕುತ ಪ್ರೀತಾ ಕಾಯ ಹಿತದಿಂದ ನಿರುತಾ 5 ಮಣಿಮಂತನೆಂಬವನಿಯೊಳು ಪುಟ್ಟಿ ವೇ ನನ ಮತ ಪಿಡಿದು ಜೀವನೆ ಪರಮಾತ್ಮನೆಂ ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ ಅನಿಮಿಷರೆಲ್ಲರು ವನಜಜಗುಸುರಲು ಮುನಿಗಳು ಸಹ ನಾರಾಯಣನ ಪದಕೆ ದಂಡ ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ ಅನಿಲನ ಅವಲೋಕಿಸಿ ಪೇಳಲು ಹರಿ ಮನ ಭಾವವನು ಗ್ರಹಿಸಿ ಮಧ್ಯಗೇಹ ಮನೆಯೊಳಗವತರಿಸಿ ಮೆರೆದೆ ಗುರು ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ 6 ವಾಸುದೇವನೆಂಬ ಭೂಸುರನಾಮದಿ ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ ಶೇಷದಿಂದಲಿ ವಿರಚಿಸುವುದೆನಲು ಉ ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ ತೋಷ ಮನದಲಿ ತಾಳಿ ಮೋಹಕವ ಪರಿಹ ಆಶೆ ಪೂರೈಸಿದ ಘನನಿನ್ನ ಲೀಲೆ 7 ತರಳತನದಲಿ ಬದರಿಗೈದಿ ಪಾರಾ ಶರ ನಾರಾಯಣನ ಸಂದರುಶನ ಕೊಂಡು ತೀ ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ ವಿರಚಿಸುವುದಕಿನ್ನು ವರವ ಪಡೆದು ಬಂದು ದುರುಳ ಭಾಷ್ಯಗಳೆಂಬ ಗರಳ ತರುಗಳ ಮುರಿದಿಕ್ಕಿ ನೀ ಮೂವ ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ ಪರನೆಂಬ ಯುಕುತಿಜಾಲ ಹರಿದು ಹರಿ ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು 8 ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು ನಮೋ ನಮೋ ಗುಣಶೀಲ ನಮೋ ಭಾರತಿಲೋಲ ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ ನಮೋ ಗುರುಕುಲ ತಿಲಕ ಪಾಲಿಸು ಎನ್ನ ತಮಹರದೂರಶೋಕ ಸಜ್ಜನರಿಗೆ ಅಮಿತ ಮೋದದಾಯಕ ಶ್ರೀಭೂ ದುರ್ಗಾ ರಮಣ ಜಗನ್ನಾಥವಿಠಲ ಭಕ್ತಾಧಿಕಾ 9
--------------
ಜಗನ್ನಾಥದಾಸರು
ಆರುತಿ ಮಾಡೆವೆವು ನಾವು ಆನಂದನಿಲಯಗೆ ಆನಂದದಿಂದಲಿ ಪ ಗೋಕುಲದಲಿ ಪುಟ್ಟಿ | ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ 1 ನಂದಕುವರಗೆ | ಸಿಂಧುಶಯನಗೆ | ಇಂದೀವರಾಕ್ಷನಿಗೆ ನಾವು 2 ಶಾಮಸುಂದರಗೆ ದಾಮೋದರನಿಗೆ | ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ 3
--------------
ಶಾಮಸುಂದರ ವಿಠಲ
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಆವ ನ್ಯಾಯವೋ ಭಾವಜರಿಪುವಿನುತ ನಿಂದು ದಾವ ನ್ಯಾಯವೊ ಪ ಆವ ನ್ಯಾಯವೋ ದೇವ ದೇವ ಮಾವಕಂಸಜೀವಘಾತಕ ಅ.ಪ ಕಪ್ಪು ವರ್ಣನು ಭಕ್ತಜನರ ಲ್ಲಿರ್ಪೆ ಸದಾ ನೀನು ನಿ ನ್ನ ಪಾದದಿ ತಪ್ಪು ಎಲ್ಲನು ಒಪ್ಪಿಬಂದಿಹ್ಯ ಭಕ್ತಜನರ ತಪ್ಪು ಒಪ್ಪಿ ಕ್ಷಮಿಸಿ ದಯದಿ ದುರಿತ ನಿವೃತ್ತಿಗೈದು ಅಪ್ಪಿಕೊಂಡು ಸಲಹದಿರುವಿ 1 ತಂದೆ ತಾಯಿ ನೀನು ಎಂದು ನಂಬಿ ಬಂದು ಬಿದ್ದೆನು ನಿನ್ನ ಪಾದಕೆ ಮಂದಭಾಗ್ಯನು ನೊಂದು ಬೆಂದು ಸಂಸಾರವೆಂಬ ಸಿಂಧುವಿನೊಳು ತಾಪಬಡುತ ಬಂದು ಮೊರೆಯಬಿದ್ದ ಕಂದನ ಮಂದರಮಂದಿರ ಸಲಹದಿರುವಿ 2 ನಿನ್ನನರಿಯದ ಅಜಮಿಳನು ಬಿನುಗನೆನಿಸಿದ ಪಾಪಗೈದವ ಗಣನೆಯಿಲ್ಲದ ಕನಿಕರದಿಂದ ವನಿಗೊಲಿದು ಘನಪದವನಿತ್ತು ಪೊರೆದೆ ಚಿನುಮಯಾತ್ಮ ಸಿರಿಯರಾಮ 3
--------------
ರಾಮದಾಸರು
ಇತ್ತ ಬಾರೊ ಒಲವುತ್ತ ಬಾರೊಹತ್ತವತಾರದ ಚಿತ್ರಚಾರಿತ್ರ ಎನ್ನತ್ತ ಬಾರೊಪ. ಒದ್ದು ಶಕಟನ ಮುರಿದ ಶಿಶುವೆ ನೀನೆದ್ದು ಬಾರೊ ಅ-ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆಸಾಲದ್ದೆÉ ಬಾರೊಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರವೆ ಮುದ್ದೆ ಬಾರೊ ಆಡು-ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ 1 ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ 2 ಮಂಥನ ಮಾಡಲು ನಿಂತೆÀ ಕಡೆಗೋಲ ನೇಣಾಂತೆ ಬಾರೊಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊಅಂತಿಂತೆನದೆ ಮಾಕಾಂತ ಹಯವದನನನಂತ ಬಾರೊ3
--------------
ವಾದಿರಾಜ