ಒಟ್ಟು 58 ಕಡೆಗಳಲ್ಲಿ , 30 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರವೃಂದ ವಾರಿಧಿಶಯನ ಗೋವರ್ಧನೋದ್ಧರಣ ಚಾರುಚರಣ ಪ ವಾರಿಜದಳ ನಯನ ವಾರಿಧಿಶಯನ ಉರ್ವಿಭಾರಾಪಹರಣ ಸಾರಿದಜನ ಸಂಸಾರಿಸಿರಿಯಣ 1 ಭಂಜನ ಹರಣ ಪಾರ್ಥಿವ ಕುಲರಂಜನ ಚಾತುರ್ಯತರ ಜಾಣ ಚೇತನಾತ್ಮಕ ಸುಗುಣ ಜಾತ ರಹಿತ ಜನಜಾತ ಸಂಜೀವನ 2 ದೇವಕಿ ವರನಂದನ ದಿವಿಜನುತ ರಾವಣಾಸುರ ಬಂಜನ ಮಾವ ಕಂಸಾಂತಕ ಮಾವಧುನಾಯಕ ಸೇವಿತ ರಕ್ಷಕ ಶರ್ವಾಣೀವರ ಸಖ 3 ಭಂಜನ ನಾರದ ನುತ ವಾನರಪತಿ ಪರಿಪಾಲನ ದೀನಜನರ ಪೋಷ ಭಾನು ಕೋಟಿ ಪ್ರಕಾಶ ಮನಮೋಹನ ರೂಪ ಲೀಲಾರ ಮಾಲೋಲ 4 ಚಿಂತತ ಫಲದಾಯಕ ಭಕ್ತರ ಹೃದಯಾಂತರಂಗದ ನಾಯಕ ಕಂತು ಜನಕ ಲಕ್ಷ್ಮೀಕಾಂತ ಭೀಮನ ಕೋಣೆ ಸಂತತವಾಸ ತಕ್ಷಕಾಂತಕಾರೂಢ ಹರಿ 5
--------------
ಕವಿ ಪರಮದೇವದಾಸರು
ಸೂರ್ಯ | ಕಾಯೊಯತಿ ಸತ್ಯ ಧ್ಯಾನಾಖ್ಯವರ್ಯಾ ಪ ಧೃತ - ಕ್ಷಿತಿಯೊಳಗೆ ದುರ್ಮತವ ಖಂಡಿಸಿ | ಅತಿಹಿತದಿ ದ್ವೈತವನೆ ಬೋಧಿಸಿವಿತತ ಹರಿ ಪರನೆಂದು ಸಾಧಿಸಿ | ಮತಿಯ ಮನುಜರ್ಗೊರೆದ ತಾಪಸಿ ಅ.ಪ. ಪಾದ ವನಜಾ |ಸಾಪರೋಕ್ಷೀಕೃತ ಯತಿಜ | ತೋರೊಸುಪಥ ಮುಕ್ತಿಗೆ ಹತ ದಿತಿಜ |ಶ್ರೀ ಪತಿಯ ಚರಣಾಬ್ಜ ಮಧುಪನೆ | ಕೋಪ ಸಲ್ಲದು ಕೃಪೆ ಪಯೋನಿಧಿಪಾಪ ರಹಿತನ ಮಾಡಿಯನ್ನನು | ಪ್ರಾಪಿಸೆನಗೆ ಜ್ಞಾನಖ್ಯ ಸೂರ್ಯನ 1 ಕಾಶಿ ರಾಮೇಶ್ವರ ಕುಂಭ | ಕೋಣದೇಶ ಯಾತ್ರೆಗಳ್ಮಾಡಿ ಡಿಂಬಾ |ಮೀಸಲೆನಿಸಿ ಜಯಸ್ತಂಭಾ | ಹೂಡಿಶ್ರೀಶ ಸರ್ವೋತ್ತಮನೆಂಬಾ ||ಭಾಷೆಯನು ಕೈಗೊಂಡು ಚರಿಸುತ | ಕೃಷಿಯ ಮಾಡಿದೆ ಹರಿಯ ಮತವನುತೋಷಿಸಿದೆ ಸದ್ವೈಷ್ಣ್ವವೃಂದವ | ವಿಶದ ವಿದ್ವತ್ಸಭೆಯ ನೆರೆಸೀ 2 ಚಿತ್ತ ವಿಡುತ ಲಯದಿ ಚಿಂತನಾ | ಸಾರಿಸತ್ಯ ಪಾಂಡುರಂಗ ವಿಠಲನಾ |ಹತ್ತಿರ ಕಿತ್ತೊಗೆದೆ ತನುವಿನ ವರಚೈತ್ರ ಶುಕ್ಲದಿ ಆರೆಡನೆ ದಿಣ |ಕ್ಷಾತ್ರ ತೇಜದಿ ಮೆರೆದೆ ಗುರುವರ | ಕ್ಷಿತಿಯೊಳಗೆ ಸುರಾರು ನಿಮಗೆವಿತತ ಗುರುಗೋವಿಂದ ವಿಠಲನ | ಚಿತ್ತದಲಿ ಸ್ಮರಿಸುತ್ತ ಪೊರಟ 3
--------------
ಗುರುಗೋವಿಂದವಿಠಲರು
ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ ಧ್ರುವ ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ ನಿತ್ಯವಾಗಿಹದ ಸತ್ಯ ಸುಪಥ ಕೂಡೊ 1 ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ ಮಣ್ಣೆÀಂದರಿಯದೆ ಕಣ್ಣಗೆಟ್ಟಿರಬ್ಯಾಡ 2 ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ ತಿಳಿದು ನೋಡೊ ಶ್ರೀ ಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕಲಾರೆ ಕೈಯಂಜಲು - ಚಿಕ್ಕಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆನಡೆನಡೆ ಕರಕರೆ ಮಾಡದೆ ದಾಸಯ್ಯ 1ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆಹೊಟ್ಟೆನೋವು ಕಾಣು ಹೋಗೋ ದಾಸಯ್ಯಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ 2ವೀಸದ ಕಾಸಿದ ದವಸವ ತಂದಾರೆಕೂಸಿಗೆ ಸಾಲದು ಹೇಗೋ ದಾಸಯ್ಯಆಸೆ ಮಾಡಲು ದೋಷಕಾರ್ತಿ ಬೇಡ ನಾನುಶೇೀಷಾದ್ರಿ ಪುರಂದರವಿಠಲದಾಸಯ್ಯ 3
--------------
ಪುರಂದರದಾಸರು
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
--------------
ಪುರಂದರದಾಸರು
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು
ಬಂದರದಕೊ ಬಲರಾಮ ಮುಕುಂದರುಬಂದರಕೊಭಾವೆಕೆಲೆಯುತ ನಲಿಯುತಪ.ನೀರಜಸಖನುದಯಾಗದ ಮುನ್ನ ಝೇಂಕಾರದೊಳಳಿ ಮೊತ್ತವೇಳದ ಮುನ್ನಸಾರಸಕೀರಮಯೂರಸ್ವನದ ಮುನ್ನನಾರಿಯರು ಮೊಸರ ಮಥಿಸುವುದರಿತು 1ನವ ನವನೀತಕೆ ಮಚ್ಚಿ ಮನವಿಟ್ಟುತವಕದಿ ಗೋಡೆಯ ಧುಮುಕುತಲಿಯುವತಿ ಗೊಲ್ಲತಿಯರ ಮರುಳು ಮಾಡುವರು ಸಣ್ಣವರೊಳು ತಾಳ ಮೇಳದ ಅಬ್ಬರದಲಿ 2ಸಾರಗೋರಸ ಚೋರರು ಗೋಪಿಮಕ್ಕಳುಸೂರಿಡುವರು ಮನೆ ಮೀಸಲನುಸಾರಿಸಾರಿಗೆ ಪ್ರಸನ್ವೆಂಕಟ ಕೃಷ್ಣರಚಾರುಒಡ್ಯಾಣಘಂಟಾರವವನಾಲಿಸವ್ವ3
--------------
ಪ್ರಸನ್ನವೆಂಕಟದಾಸರು
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೆಮುಕ್ತಿ ಸದನಕೇರುವೆ ನೋಡೇಪದೇಹವೆಂಬ ಮನೆಯ ಸಾರಿಸೆಮೋಹವೆಂಬ ತಂಗಳ ಮಡಕೆ ಹೊರಗಿರಿಸೆಸೋಹಂ ಎಂಬ ರಂಗವಲ್ಲಿಯನಿಡೆಜ್ಯೋತಿಯನು ಬೆಳಗಿಸೆ ನೀನು1ನಾನಾವಾಸನೆಯ ಮೈಲಿಗೆಯನು ಬಿಡೆಮನಮೈಲಿಗೆಯನು ತೊಳೆಸ್ವಾನುಭವದ ಪೀತಾಂಬರವನುಡೆನಾನು ಎಂಬ ಕಸವನು ಗುಡಿಸೆನಾದದ ಸುಖವನು ಅನುಭವಿಸೆ ನೀನು2ಧ್ಯಾನ ಮನನೆನಪಿಲ್ಲದಾಗಿಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ ನೀನುನಾನು ಎಂಬುದು ಅಳಿದು ನೀನೆಚಿದಾನಂದನಾಗಿ ಪೂಜಿಸು3
--------------
ಚಿದಾನಂದ ಅವಧೂತರು
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
--------------
ಪುರಂದರದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು