ಒಟ್ಟು 84 ಕಡೆಗಳಲ್ಲಿ , 31 ದಾಸರು , 81 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಬರವಲ್ಲಿ ಭಕುತನವಸರಕೆ ಪ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ ಹರಿ ನಿನ್ನ ದಾನಮಾಡೆ ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1 ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು ಪೋತ ಧ್ರುವ ಅರಣ್ಯ ಪೋಗೆ ಕಾಯ ಪೋದ್ಯಾ 2 ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ ಸರಸಿಜಾಕ್ಷಿಯ ಸೀರೆಯ ಕಾಯ ಪೋದ್ಯಾ 3 ಹಿರಣ್ಯಾಕ್ಷನನುಜ ತರಳನ ಬಾಧಿಸೆ ಥೋರ ಕಂಬದಿ ಒಡೆದು ನರಮೃಗ ರೂಪನಾಗಿ ಪೋದ್ಯಾ 4 ನೀರಡಿಸಿ ಗಜರಾಜ ಸರೋವರಕೆ ಬರಲು ನಕ್ರ ಪಿಡಿದೆಳೆಯೆ ಕಾಯ ಪೋದ್ಯಾ 5 ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ ಮರಣ ಕಾಲದಲ್ಲಜಮಿಳ ನಾರಗನೆಂದು ಕರೆಯೆ ಪೋದ್ಯಾ 6 ಕರುಣಿ ವಿಜಯ ರಾಮಚಂದ್ರವಿಠಲ ಅವರ ಸರಿ ನಾನಲ್ಲವೊ ತವ ಚರಣ ಸೇವಕರ ಸೇವಕನೊ 7
--------------
ವಿಜಯ ರಾಮಚಂದ್ರವಿಠಲ
ವೃಂದಾವನವ ನೋಡಿರೊ - ನೀವೆಲ್ಲಾನಂದವನ್ನೇ ಪೊಂದಿರೊ ಪ ರಾಮಾಚಾರ್ಯರ ಪುತ್ರರೊ - ಅವರುಮಾಮನೋಹರ ನೃಹರಿ ದಾತರೋ |ಜನ್ಮ ಅಷ್ಟಕೆ ಬ್ರಹ್ಮಚರ್ಯ - ಪೊಂದಿಬ್ರಹ್ಮ ವಿದ್ಯೆಯ ಪಡೆದರೋ |ಧೃತ - ಪ್ರೇಮದಿಂದಲಿ ಬಂದು ತಾವ್ ಪುರುಷೋತ್ಮ ತೀರ್ಥರ ಸಾರ್ದರಾ 1 ಕಾಯಜ ಪಿತನ ತಾನ್ವಲಿಸೀ - ದೇಶಂಗಳಪ್ರೀಯದಿಂದಲಿ ಸಂಚರಿಸೀ |ಮಾಯಾರಮಣನು ಜೀವನೂ - ಒಂದೆಂಬಮಾಯಾವಾದೀಗಳ ತರಿದೂ |ಧೃತ - ವಾಯುಮತ ಪ್ರೀತಿಯಲಿ ಅರುಹುತಪ್ರೀಯ ಅಬ್ಬೂರಲ್ಲಿ ನೆಲೆಸಿದ 2 ವಿಠಲ ನೃಹರಿ ಪೂಜೆಗೇ - ನೇಮಿಸಿತಮ್ಮಪಟ್ಟ ಶಿಷ್ಯರು ವ್ಯಾಸತೀರ್ಥರ |ಅಟ್ಟ ಹಾಸದಿ ಸರ್ವಜಿತೂ - ಸಂವತ್ಸರಕೃಷ್ಣೈಕಾದಶಿ ವೈಶಾಖ |ದಿಟ್ಟ ಗುರುಗೋವಿಂದ ವಿಠಲನದೃಷ್ಟಿಸೀ ತನು ಬಿಟ್ಟು ಪೊರಟನ 3
--------------
ಗುರುಗೋವಿಂದವಿಠಲರು
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ವಾಸಮಾನಿಯೆ ನಿನ್ನ - ಆಶ್ರಯಿಸಿರುವವನಕೋಶದೊಳಿರುವಂಥ - ದೋಷಗಳಳಿಯೋ ಪ ಹಂಸೋಪಾಸನೆಯಿಂದ | ಶಂಸಿಸಿ ಹರಿಪದಪಾಂಸುವ ಧರಿಸುವನೇ ||ವಿಂಶತ್ಯೇಕವು ಸಾ | ಹಸ್ರದಾರುನೂರುಹಂಸ ಮಂತ್ರ ಗಳ್ಜಾಪಕಾ 1 ಶ್ವಾಸೋಚ್ಛ್ವಾಸಾಶ್ರಯ | ಕೋಶಗತಗಳಾದದೋಷಗಳನೆ ಕಳೆದೂ ||ವಾಸರ್ವಾಸರಕ್ಷಯ | ದೋಷಕಾರಣ ಕ್ರಿಮಿನಾಶವ ಗೈಯ್ಯುವುದೋ 2 ಪತಿ ನಿನ್ನಅಣತಿಯಿಂ ಸುರರೂ ||ತ್ರಾಣ ಪೊಂದುತ ಜಗ ತ್ರಾಣರಾಗಿಹರಯ್ಯಪ್ರ್ರಾಣ ಭಕ್ತನ ಪೊರೆಯೋ 3 ಮೊರೆ ಹೊಕ್ಕಿರುವನನ್ನ | ಪೊರೆವಂಥ ಸಂಪನ್ನಮರಳಿ ಅನ್ಯರ ಕಾಣೆನೋ |ಮರುತ ಪ್ರಾಣಗಳೊಡೆಯ | ನಿರುತಿಹೆನೀನೆಂದುಅನು ಮೊರೆಯನಿಡುವೆನೋ 4 ನೊಂದಿಹ ಶರಣನ್ನ | ಚಂದದಿ ಸಲಹಯ್ಯನಂದ ಕಂದನ ದೂತನೋ ||ಸುಂದರ ಗುರು ಗೋ | ವಿಂದ ವಿಠ್ಠಲ ಭಕ್ತಮಂದಾರ ಸುರ ತುರುವೇ 5
--------------
ಗುರುಗೋವಿಂದವಿಠಲರು
ಸಂತೆಯ ನೋಡಲು ಬಂದವನಾ | ಭ್ರಾಂತತನವ ನೋಡಿ ಮಾನವನಾ ಪ ಪರಿ ವಾಸನೆಕಾರರು ವಿಷಯದ | ಸರಕಿನ ಚಟ್ಟೆಯ ರಂಗಡಿಯು | ದುರುಳತ ನವಗುಣ ಭೂಸಿನ ರಾಶಿಯು | ನೆರೆದಿಹ ಸಂದಣಿ ಜನದೊಳಗ 1 ಇಂತಿಹ ನರದೇಹ ಪ್ಯಾಟೆಯ ಸಡಗರ | ಪ್ರಾಂತವ ಕಾಣದೆ ಮರುಳಾಗಿ | ನಿಂತಲ್ಲಿ ನಿಲ್ಲದೆ ನೋಡುತ ತಿರುಗುತ | ಕಂಥಿಯ ಕಳೆದನು ಹೆಗಲಿನಾ 2 ಗುರುಮಹೀಪತಿ ಸ್ವಾಮಿಯ ಗಡಚಿನ | ಶರಣಿರವಳಿಹುಗದೆವೆ ಮರೆದು | ಧರಿಯೊಳು ಉಣಲಿಲ್ಲ ಉಡಲಿಲ್ಲ ಬಂದಿವ | ಬರುದೆವೆ ಮುಮ್ಮಳಿ ಘಳಿಸಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಗುರು ಭಕ್ತಿ ಲೇಸು ಲೇಸು ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಧ್ರುವ ಒಂದೆ ಸುಪಥ ಲೇಸು ಹೊಂದಿ ಬಾಳುವದು ಲೇಸು ಪಾದ ಕಾಂಬುವದೆ ಲೇಸು 1 ನಡೆ ನುಡಿ ಒಂದೆ ಲೇಸು ದೃಢಭಾವನೆಯು ಲೇಸು ಪಿಡಿಯುವನು ಸಂಧಾನಧ್ಯಾತ್ಮದ ಲೇಸು 2 ಗುರುದೈವೆಂಬುದೆ ಲೇಸು ಅರಿತು ಬೆರೆವುದು ಲೇಸು ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು 3 ಒಳಮುಖನಾಗುವದೆ ಲೇಸು ತಿಳಿಯುವಾತನ ಮನ ಲೇಸು ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು 4 ತನ್ನ ತಾ ತಿಳಿವದೆ ಲೇಸು ಉನ್ಮನವಾಗುದೆ ಲೇಸು ಪಾದ ನಂಬುದೆ ಲೇಸು 5 ಅರ್ತರೆ ಗುರುವಾಕ್ಯ ಲೇಸು ಬೆರ್ತರೆ ಗುರುಪಾದ ಲೇಸು ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು 6 ಗುರುಶರಣ್ಹೋಗುದೇ ಲೇಸು ಕರುಣ ಪಡೆವದೆ ಲೇಸು ತರಳ ಮಹಿಪತಿಗಿದೆ ಸುಖವೆ ಲೇಸು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಸಾಧನಕೆ ಸಾಧನಾಖ್ಯಾನ ವೃಂದಾವನಾ ಪ ಸೋದೆ ಪುರವಾಸಿ ಶ್ರೀ ವಾದಿರಾಜರ ಕರುಣಾ ಅ.ಪ. ಕುರುಡು ಶುನಕವು ತಾನು ನೆರೆದ ಸಂತೆಗೆ ಬಂದುಸರಕು ವಿನಿಮಯ ಮಾಡಿ ಮರಳಿ ಬರುತಿರುವಾ |ಪರಿಯ ಮಾಡದಲೆನ್ನ ಇರುವ ಸ್ವಪ್ನದಿ ತಿಳುಹಿಕರುಣಿಸಿಹೆ ಮಹ ಮಹಿಮ ಗುರು ಸಾರ್ವಭೌಮಾ 1 ಕಾರ್ಯ ವೃಂದಾವನಚಾರ್ಯರೊಡೆವೆರಸುತ್ತಧೈರ್ಯದಿಂದಲಿ ಗೈಸಿ ಭಾರ್ಯಸಹಕೃತದಿ |ಪ್ರೇರ್ಯ ಪ್ರೇರಕ ಹೃದಯ ಧಾರ್ಯಮಾರ್ಗವನರುಪಿಸ್ಥೈರ್ಯವನು ಎನಗಿತ್ತ ಆಯ್ ಲಾತವ್ಯಾ2 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರನೀವೆ ಎಮ್ಮೊಳು ನಿಂತು ಸರ್ವ ಕಾರ್ಯಗಳಾ |ಓವಿ ಗೈವುತ ದೇವ ದೇವ ಹಯ ಮೊಗ ಗುರುಗೋವಿಂದ ವಿಠಲಂಗಿತ್ತು ತಾವಕನ ಸಲಹುವುದು 3
--------------
ಗುರುಗೋವಿಂದವಿಠಲರು
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲಭಕ್ತವತ್ಸಲ ದೇವನು ಪ ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿಘಕ್ಕನೆ ಕೈ ಚಪ್ಪಾಳಿಕ್ಕಿ ನಗುವ ರಂಗ ಅ.ಪ. ಹೆಣ್ಣುಮಕ್ಕಳು ಬಚ್ಚಲೆಣ್ಣೆ ಮಂಡೆಯೊಳುಬಣ್ಣ ವಸ್ತ್ರವ ಬಿಟ್ಟು ಬರಿಮೈಯೊಳಿರಲುಚೆನ್ನಿಗ ಬಿಸಿನೀರ ಚೆಲ್ಲಿ ಸೀರೆಗಳೊಯ್ದುಉನ್ನಂತವಾದ ವೃಕ್ಷವೇರಿ ಕಾಡುವನಮ್ಮ 1 ಪರಿ ಎಷ್ಟೆಂತೆ ಪೇಳಲೆ2 ಸಡಗರದೊಳು ಸೋಳಸಾಸಿರ ಗೋಪೇರಒಡಗೂಡಿ ಕೊಳಲನು ಪಿಡಿದು ತಾ ಮೊಸರಕಡೆವೊ ಗೊಲ್ಲತಿಯರ ಕೈ ಪಿಡಿದಾಡುವಒಡೆಯನೆ ಇವನಮ್ಮ ಉಡುಪಿನ ಶ್ರೀಕೃಷ್ಣ3
--------------
ವ್ಯಾಸರಾಯರು
ಹಾರುವರಿಗೆ ಭೂಮಿಯಾ ನೀಡಿದೆನೆಂದು | ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1 ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2 ಶರಣ ವಸರಕ ಎಡತಾಕಲಾರೆನೆಂದು ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
--------------
ಪ್ರಸನ್ನವೆಂಕಟದಾಸರು
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯಎನ್ನ ದಯದಿ ಪಾಲಿಸಯ್ಯ ಪನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪಅಮರೇಂದ್ರವಂದಿತನೆ ಅನಂತಮಹಿಮನೆಕಮಲಸಖಾನಂತಕರನೆ ||ಕಮಲಾಯತಾಂಬಕನೆ ಕಾಮಿತದಾಯಕನೆವಿಮಲಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ1ಅಜಮಿಳ ಅಂಬರೀಷ ಅಕ್ರೂರ ವಿದುರಗೆಗಜರಾಜ ಗಿರಿಜೇಶಗೆ ||ನಿಜಭಕ್ತ ಪ್ರಹ್ಲಾದಅಜ ಧ್ರುವ ಅರ್ಜುನಗೆದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ2ಅವರಂತೆ ನಾನಲ್ಲಅವರ ದಾಸರ ದಾಸಸವರಿ ಬಿಸುಟೆನ್ನ ದೋಷ ||ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತುಎಂದೆಂದು ನಿನ್ನ ನಾಮಭಜನೆ ||ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನುಚಿಂತೆಗಳ ಪರಿಹರಿಸೊ ||ಸಂತತ ಪಾಲಿಸೊಪುರಂದರ ವಿಠಲನೆಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ 5
--------------
ಪುರಂದರದಾಸರು
ಎಚ್ಚರ ಮನವೇ ಯದುಪತಿಯನೆಚ್ಚದಿರು ಚೋಹದನಿಕೆ ತನುವ ಪ.ವೇಳ ವೇಳಾಯು ವೃಥಾ ಹೋಯಿತೆಚ್ಚರಕಾಲಪಮೃತಿ ವೃಕ ಕೊಲುವೆಚ್ಚರಕೋಳು ಹೋಗುತದಲ್ಪ ಕೃತ ಪುಣ್ಯವೆಚ್ಚರನಾಲಿಗೆಯಲಿ ಸಿರಿನಾಥನೆಚ್ಚರ 1ಸತಿಸದನಾತ್ಮಜಸ್ಥಿರವ್ಯರ ವೆಚ್ಚರತಿಥಿ ಪೂಜೆಗಳಲಿ ಸತ್ವರ ಎಚ್ಚರಪ್ರತಿದಿನ ತತ್ವದಿ ಪ್ರವೀಣನಾಗೆಚ್ಚರಾಹಿತಲ್ಪನ ಕೀರುತಿ ಹೊಗಳೆಚ್ಚರ 2ಹರಿಭಟರೌಘದಿ ಹಿಂಗದಿರೆಚ್ಚರದುರಿತಭಯ ದಂದುಗದೆಚ್ಚರಪರಾಪರದ ವಚನವಟ್ಟಿಸದಿರೆಚ್ಚರಪರಿಪರಿ ಸದ್ವ್ವ್ರತ ಪಿಡಿದೆಚ್ಚರ 3ಸಂತವರಿಯರನುಸರಣಿಗಳೆಚ್ಚರೇಕಾಂತ ಬೀರುವ ಗುರುಕೃಪೆಯೆಚ್ಚರಸಂತ್ಯಿರಲಾಗಿ ಶಾಂತಸರಕುಕೊಳ್ಳೆಚ್ಚರಕಂತುಪಿತನ ನಾಮ ಕಡೆಗೆಚ್ಚರ 4ವಿಷಯಗತೇಂದ್ರಿಯವಿಡಿದಾಳುವೆಚ್ಚರಮೀಸಲು ವೈರಾಗ್ಯ ಮುರಿಯದೆಚ್ಚರಬಿಸಜನಾಭನ ಭಕ್ತಿ ಬಲಿದಿರುವೆಚ್ಚರಪ್ರಸನ್ನವೆಂಕಟಪತಿ ಪದದೆಚ್ಚರ 5
--------------
ಪ್ರಸನ್ನವೆಂಕಟದಾಸರು
ಎಚ್ಚರಿಕೆ ಎಚ್ಚರಿಕೆ ಮನವೆ - ನಮ್ಮಅಚ್ಯುತನ ಪಾದಾರವಿಂದ ಧ್ಯಾನದಲಿ ಪ.ಆಶಾಪಾಶದೊಳಗೆ ಸಿಲುಕಿ - ಬಹುಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿಹೇಸಿ ಸಂಸಾರದಲಿ ಸಿಲ್ಕಿ -ಮಾಯಾಕ್ಲೇಶಅಂಬರಕೇಳಾಗೆ ಮೈಮರೆತು ಸೊಕ್ಕಿ1ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈತನುವಿಗೆ ಯಮಪುರ ಪಯಣವೇನಿತ್ಯಮೂರು ಶೃಂಗಾರಗಳುಮಿಥ್ಯ - ಅಂತಕನ ಯಾತನೆಗಳಿಗೆ ಹರಿನಾಮ ಪತ್ಯ 2ತೊಗಲ ಚೀಲ ಒಂಬತ್ತು ಹರುಕು -ನರಬಿಗಿದುಕಟ್ಟಿ ಒಳಗೆ ಎಲುವುಗಳ ಸಿಲುಕುಬಗೆರಕ್ತ - ಮಾಂಸದ ಹುಳುಕು - ಒಳಗೆ ಮಲ - ಕಫ -ವಾತ- ಪಿತ್ತದಸರಕು3ದುಷ್ಟರ ಸಹವಾಸ ಹೀನ - ಬಲುಇಷ್ಟ ಜನಸಂಗವು ಹರಕೆ ಬಹುಮಾನಎಷ್ಟು ಓದಿದರಷ್ಟು ಜ್ಞಾನ - ಆದರಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ 4ನಾಲಿಗೆಯ ಹರಿಯ ಬೀಡಬೇಡ - ತಿಂಡಿವಾಳರ ರುಚಿವಾತಗಳನೊರಿಸಬೇಡಹಾಳು ಮಾತು ಗೊಡಬೇಡ -ಶ್ರೀಲೋಲ ಪುರಂದರವಿಠಲನ ಬಿಡಬೇಡ 5
--------------
ಪುರಂದರದಾಸರು
ಎಂದಿಗೆ ಬಿಡಿಸುವೆದಂದುಗಗೋವಿಂದ ದಣಿಸುತಿದೆದಂದುಗಪ.ಸುಳ್ಳನಾಡಿಸುತಿದೆದಂದುಗನೇಮಗಳ್ಳನ ಮಾಡಿತುದಂದುಗಎಲ್ಲೆಂಜಲುಣಿಸಿತುದಂದುಗಕೈವಲ್ಯವ ಮರೆಸಿತುದಂದುಗ1ಹರಿಸೇವೆ ಬಿಡಿಸಿತುದಂದುಗಗುರುಹಿರಿಯರನ್ವಂಚಿಪದಂದುಗಸರಕುಮಾಡಿತು ಎನ್ನದಂದುಗಯಮಪುರದಾರಿವಿಡಿಸ್ಯದೆದಂದುಗ2ನೀಚಗಂಚಿಸುತಿದೆದಂದುಗಕ್ಷುದ್ರಯಾಚನೆವಿಡಿಸ್ಯ್ಕದೆದಂದುಗಆಚಾರ ಚರಿಸಿತುದಂದುಗದುಷ್ಟ್ಯೋಚನೆ ತ್ಯಜಿಸದುದಂದುಗ3ಕಾಂಚನದಾಸೇಲಿದಂದುಗಕೆಟ್ಟಹಂಚಿಗ್ಹಲ್ದೆರೆಸಿತುದಂದುಗಪಂಚಗಂಗೆಯ ಬಿಟ್ಟುದಂದುಗಜೊಂಡುಬೆಂಬಿಲಿ ಮೀಯಿಸಿತುದಂದುಗ4ನಿನ್ನೊಲುಮ್ಯೊದರಿದಂದುಗಕಾಡಿಎನ್ನಾಳೋದುಂಟೇನೊದಂದುಗಪ್ರಸನ್ವೆಂಕಟೇಶ ನಾಮಜಿಹ್ವೆಪೂರ್ಣಗಲ್ಲಾದ್ಯಂತದಂದುಗ5
--------------
ಪ್ರಸನ್ನವೆಂಕಟದಾಸರು