ಒಟ್ಟು 58 ಕಡೆಗಳಲ್ಲಿ , 31 ದಾಸರು , 55 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವ -ಮಾಧವ - ಗೋವಿಂದ ವಿಠಲೆಂಬದಾಸಯ್ಯ ಬಂದ ಕಾಣೆ ಪ.ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆಘಳಿಲನೆ ಕೂರ್ಮ ತಾನಾಗಿ ಗಿರಿಯಪೊತ್ತ ದಾಸಯ್ಯ ಬಂದ ಕಾಣೆಇಳೆಯಕದ್ದ ಸುರನ ಕೋರೆದಾಡಿಯ ಅಳಿದ ದಾಸಯ್ಯ ಬಂದ ಕಾಣೆಛಲದಿ ಕಂಬದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ 1ಬಲಿಯ ದಾನವಬೇಡಿ ನೆಲವನಳೆದು ನಿಂದ ದಾಸಯ್ಯ ಬಂದ ಕಾಣೆಮತಿತ ಕ್ಷತ್ರಿಯರ ಕು¯ವ ಸಂಹರಿಸಿದ ದಾಸಯ್ಯ ಬಂದ ಕಾಣೆಲಲನೆಯ ನೊಯ್ಯೆ ತಾ ತಲೆ ಹತ್ತಾರನು ಕೊಂದ ದಾಸಯ್ಯ ಬಂದ ಕಾಣೆನೆಲ ಕೊತ್ತಿಕಂಸನ ಬಲವನಳಿದ ಮುದ್ದು ದಾಸಯ್ಯ ಬಂದ ಕಾಣೆ 2ಪುಂಡತನದಿ ಪೋಗಿ ಪುರವನುರುಪಿಬಂದ ದಾಸಯ್ಯ ಕಾಣೆಲಂಡರಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದದಾಸಯ್ಯ ಬಂದ ಕಾಣೆಪಾಂಡುರಂಗ ನಮ್ಮಪುರಂದರ ವಿಠಲದಾಸಯ್ಯ ಬಂದ ಕಾಣೆ 3
--------------
ಪುರಂದರದಾಸರು
ಜಯಮಂಗಳಂ ಮಹಾ ಶುಭಮಂಗಳಂಮಂಗಳಂಮದನಜನಕಂಗೆನಿತ್ಯಪ.ಶಂಕಾಸುರನ ಸೀಳಿ ಶ್ರುತಿಯ ತಂದವನಿಗೆಬಿಂಕದಿಂ ಮಂದರಕೆ ಬೆನ್ನಾಂತಗೆಪಂಕಜಾಸನಗೊಲಿದು ಪ್ರತ್ಯಕ್ಷನಾದವಗೆಶಂಕೆಯನು ಬಿಡಿಸಿ ಶಿಶುವನು ಹೊರೆದಗೆ 1ವಿತರಣಕೆ ಬಂದು ಬಲಿವಿಭವನಪಹರಿಸಿದಗೆಪತಿತ ಕ್ಷತ್ರಿಯರ ಸಂಹರಿಸಿದವಗೆಸತಿಯ ಕದ್ದವನ ದಶಶಿರಶತಖಂಡಿಸಿದಗೆಪಿತ ಮಾತೆ ಬಂಧನವ ಪರಿಹರಕಗೆ 2ಮುಪ್ಪುರದ ನಾರಿಯರ ಮನವ ಗೆದ್ದವಗೆತಪ್ಪದೆ ಕಲಿಬಲವ ತರಿದಾತಗೆಸರ್ಪಗಿರಿಯಲಿ ನಿಂತು ನಿತ್ಯಸುಖದಾತನಿಗೆಶ್ರೀಪ್ರಸನ್ವೆಂಕಟೊಡೆಯನೆನಿಪಗೆ 3
--------------
ಪ್ರಸನ್ನವೆಂಕಟದಾಸರು
ತಾರಿಸೊ ಶ್ರೀಹರಿ ತಾರಿಸೊ ಪತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
--------------
ಪುರಂದರದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ
ನೀನೆನ್ನ ಪೆತ್ತಿಲ್ಲವಂತೆ-ಅಮ್ಮಾ |ನಾನಿನ್ನ ಮಗನಲ್ಲವಂತೆ ||ಧೇನುಕಾಯುವರಿಲ್ಲವೆಂದು ನೀನು |ಸಾನುರಾಗದಿ ಸಲಹಿದೆಯಂತೆ 2ವಿಷವು ತುಂಬಿದ ಮೊಲೆಯ-ಕೊಟ್ಟ |ಅಸುರೆಯ ಸಂಹರಿಸಿದೆನಂತೆ ||ಅಸುರನಾದ ಶಕಟನನಾಕ್ಷಣದಲಿ |ಶಿಶುವಾಗಲೆ ಒರೆಸಿದೆನಂತೆ 3ವತ್ಸಾಸುರನನು ಕೆಡಹಿದೆನಂತೆ |ಕಿಚ್ಚನೆಲ್ಲವನು ನುಂಗಿದೆನಂತೆ ||ಕಚ್ಚಬಂದ ಕಾಳಿಂಗನಾ ಹೆಡೆ-|ಚಚ್ಚಿ ತುಳಿದು ಓಡಿದೆನಂತೆ 4ಕುಸುಮಗಂಧಿಯರಡುವ |ವಸನಕದ್ದು ಓಡಿದೆನಂತೆ ||ಹಸುಗೂಸು ಅಲ್ಲ ಇವ |ಅಸುರ ಮಗನು ಎಂತೆಂಬುವರೆ 5ಒರಳನೆಳೆತಂದು ಮತ್ತಿ-|ಮರವ ಮುರಿದೋಡಿದೆನಂತೆ ||ತರಳೆಯರ ವಸ್ತ್ರವ ಕದ್ದು |ತರುವನೇರಿದೆನಂತೆ 6ಪರಮಗಾಡಿಕಾರನಿವ |ಪುರಂದರವಿಠಲರಾಯ ||ತರುಣಿಯರ ವಂಚಿಸುತ್ತ |ಠಕ್ಕಿಸಿ ಪೋದನೆಂತೆಂಬುವರು7
--------------
ಪುರಂದರದಾಸರು
ವೇಣುನಾದ ಬಾರೊ, ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
--------------
ಪುರಂದರದಾಸರು
ಶರಣು ನಿನ್ನ ಚರಣಗಳಿಗೆ ಭಾರತೀಶನೆ |ಕರವಪಿಡಿದು ಸಲಹೋ ಬಿಡದೆ ಭಾರತೀಶನೆ ಪಎಲ್ಲ ಕಡೆಗೆ ವ್ಯಾಪ್ತ ನೀನೆ ಭಾರತೀಶನೆ |ಅಲ್ಲಿ ವಿಷವ ಕುಡಿದೆಯೆಂದು ಭಾರತೀಶನೆ ||ಗೆಲ್ಲಿಸಿದೆಯೊ ಸರ್ವ ಸುರರ ಭಾರತೀಶನೆ |ಬಲ್ಲಿದನು ನಿನಗೆಣೆ ಯಾರೋ ಭಾರತೀಶನೆ1ಅಂಜನಾ ಕುಮಾರನಾಗಿ ಭಾರತೀಶನೆ |ಕಂಜನಾಭನಂಘ್ರಿ ಭಜಿಸಿ ಭಾರತೀಶನೆ ||ಲಿಂಜದುದಧಿದಾಟಿ ಪೋಗಿ ಭಾರತೀಶನೆ |ಸಂಜಿ ಚರರ ಸಂಹರಿಸಿದೆಯೊ ಭಾರತೀಶನೆ2ಕುಂತಿ ಜಠರದಿಂದ ಜನಿಸಿ ಭಾರತೀಶನೆ |ಹಂತ ಕೌರವರನ ತರಿದಿ ಭಾರತೀಶನೆ ||ಕಂತುಪಿತನ ಕರುಣ ಪಡೆದೆ ಭಾರತೀಶನೆ |ಅಂತಗಾಣೆ ನಿನ್ನ ಮಹಿಮೆಗೆ ಭಾರತೀಶನೆ 3ಯತಿಯರೂಪಇಳಿಯೊಳಾಗಿ ಭಾರತೀಶ£ É |ಮತಿಯ ಸರ್ವ ಬುಧಂಗಿತ್ತೆ ಭಾರತೀಶನೆ ||ಸತತ ನಿನ್ನ ಪೂಜಿಪರಿಗೆ ಭಾರತೀಶನೆ |ಗತಿಯ ಕೊಡುವೆ ದೋಷ ಕಳೆದು ಭಾರತೀಶನೆ 4ಘನ್ನ ಪ್ರಾಣೇಶ ವಿಠಲ ನಾಳೆ ಭಾರತೀಶನೆ |ಬಿನ್ನಪವನು ಲಾಲಿಸುವದೋ ಭಾರತೀಶನೆ ||ನಿನ್ನ ದಾಸನೆನಿಸಬೇಕೋ ಭಾರತೀಶನೆ |ಅನ್ಯ ವಿಷಯವೊಂದನೊಲ್ಲೆ ಭಾರತೀಶನೆ 5
--------------
ಪ್ರಾಣೇಶದಾಸರು
ಶ್ರೀ ಸೌಭಾಗ್ಯ ಸಪ್ತತ್ರಿಂಶತಿ71ಶರಣುವಿಧಿವಾಣೀಶ ಶರಣು ಧೃತಿ ಶ್ರಧ್ದೇಶ |ಶರಣು ಋಜುವರ್ಯರಲಿ ಶರಣು ಶರಣಾದೆ ಪಮೀನಕೂರ್ಮಕ್ರೋಡನರಸಿಂಹ ವಟುರೂಪರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |ಅನುಪಮ ಜೀವೋತ್ತಮರ ಚರಣಕಾನಮಿಪೇ 1ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||ನಾರಾಯಣ ನಾಭಿ ಕಮಲಜ ಚತುರ್ಮುಖನು |ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ 2ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |ಶೋಣಿತಸಂಬಂಧ ಇಲ್ಲವೇ ಇಲ್ಲ ||ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ 3ಭಯವು ಅಜ್ಞಾನವು ಸಂಶಯವು ಇವಗಿಲ್ಲಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |ತೋಯಜಾಕ್ಷಕೇಶವನ ಪ್ರಥಮ ಪ್ರತಿಬಿಂಬ4ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |ಅಘರಹಿತತಾರಕಗುರುಶತಾನಂದ5ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |ಭಾವಿ ಬ್ರಹ್ಮನು ಮುಖ್ಯವಾಯುದೇವ ||ದೇವೀಜಯಾ ಸಂಕರುಷಣಾತ್ಮಜನು ಈ |ಭುವಿಯಲ್ಲಿ ತೋರಿಹನು ಹರಿಯಪ್ರಥಮಾಂಗ6ಧೃತಿಪ್ರಭಂಜನವಾಯುಸ್ಮರಭರತ ಗುರುವರನು |ಮಾತರಿಶ್ವನುಸೂತ್ರಪವಮಾನ ಪ್ರಾಣ ||ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |ಸದಾ ನಮೋ ಭಾರತೀರಮಣ ಮಾಂಪಾಹಿ 7ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |ಪ್ರತಿಷ್ಠಿತವೂ ಜೀವರ ದೇಹಕಾಧಾರ ||ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |ತತ್ವಾದಿ ದೇವ ವರಿಷ್ಠ ಚೇಷ್ಟಕನು 8ಶ್ರೀಶ ಹಂಸಗೆ ಪ್ರಿಯಶ್ವಾಸಜಪ ಪ್ರವೃತ್ತಿಸುವ |ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |ಶಾಸ್ತನಾಗಿಹ ಪಂಚಅವರಪ್ರಾಣರಿಗೆ9ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |ಎಲ್ಲ ಅವತಾರಗಳು ಸಮವು ಅನ್ಯೂನ ||ಶುಕ್ಲಶೋಣಿತಸಂಬಂಧ ಇಲ್ಲವೇ ಇಲ್ಲ |ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 10ವಾಯುದೇವನ ಒಲಿಸಿಕೊಳ್ಳದ ಜನರಿಗೆ |ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||ಮಾಯಾಜಯೇಶನಪರಮಪ್ರಸಾದವು |ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 11ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |ಮಾರುತಿಯ ಒಲಿಸಿಕೊಂಡವನವನೆಂದು ||ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |ಕರ್ಣನೂ ಹಾಗೇವೇ ಅರ್ಜುನನು ಗೆದ್ದ 12ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |ಶ್ರಮರಹಿತನು ಸುರಸೆಯನು ಜಯಿಸೆಸುರರು||ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ 13ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |ರಾಮಗೋಸ್ಕರ ಕೊಂಡು ವನವ ಕೆಡಹಿ ||ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |ರಾಮ ದೂತನು ಹನುಮ ಲಂಕೆಯ ಸುಟ್ಟ 14ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||ಸರಿಯಾದ ಬಹುಮಾನ ಯಾವುದು ಇಲ್ಲೆಂದು |ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ 15ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |ಕೈಲಾಗದೆ ರಾವಣನು ಸೆಳೆಯೆ ಆಗ ||ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |ಬಲವಂತ ಹನುಮ ಶೇಷಗುತ್ತಮತಮನು 16ಮೃತ ಸಂಜೀವಿನಿಯಾದಿ ಔಷಧಿ ಶೈಲವನು |ತಂದು ಸೌಮಿತ್ರಿ ಕಪಿಗಳಿಗೆಅಸುಇತ್ತ ||ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |ಕಾಯ್ದ ರಾಮಾನುಜನ ಅಗ್ನಿ ಮುಖದಿಂದ 17ಇತರರು ಮಾಡಲು ಅಶಕ್ಯ ಸೇವೆ ಹನುಮ |ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು 18ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |ತುಂಡು ನೂರಾಯಿತು ಕಂಡಿಹರು ಅಂದು ಬೋ - ||ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ 19ಉಂಡು ತೇಗಿದಗರಳತಿಂಡಿಯ ಭೀಮನು |ಉಂಡು ಹಾಲಾಹಲವ ಹಿಂದೆ ಈ ವಾಯು ||ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |ಬಂಡುಮಾತಲ್ಲವಿದುಕೇಳಿವೇದವನು20ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |ಕ್ರೂರ ಹಿಡಿಂಬನ ಕೊಂದವನ ಸೋದರಿ ||ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯಕರಪಿಡಿದ ಭೀಮನು ಅನುಪಮ ಬಲಾಢ್ಯ 21ಬಕ ಕೀಚಕ ಜರಾಸಂಧಾದಿ ಅಸುರರು |ಲೋಕ ಕಂಟಕರನ್ನ ಕೊಂದು ಬಿಸುಟು ||ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |ವಿಕ್ರಮಭೀಮನಿಗೆ ಸಮರಾರು ಇಲ್ಲ22ಕಲಿಕಲಿಪರಿವಾರ ದುರ್ಯೋಧನಾದಿಗಳ |ಬಲವಂತ ಭೀಮನು ಬಡಿದು ಸಂಹರಿಸಿದ ||ಕಲಿಹರ ಸುಜನಪಾಲ ಭೀಮ ಸಮ್ರಾಟನ |ಕಾಲಿಗೆ ಎರಗುವೆ ದ್ರೌಪದೀ ಪತಿಗೆ 23ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||ಕಲಿಯುಗದಿ ಈ ಭೀಮ ಅವತಾರ ಮಾಡಿಹನು |ಕಲಿಮಲಾಪಹ ಜಗದ್ಗುರು ಮಧ್ವನಾಗಿ 24ಹನುಮಂತನ ಮುಷ್ಠಿ ಭೀಮಸೇನನ ಗದೆ |ದಾನವಾರಾಣ್ಯವ ಕೆಡಹಿದ ತೆರದಿ ||ಆಮ್ನಾ ಯಸ್ಮøತಿ ಯುಕ್ತಿಯುತ ಮಧ್ವ ಶಾಸ್ತ್ರವು |ವೇನಾದಿಗಳ ಕುಮತ ತರಿದು ಸುಜನರ ಕಾಯ್ತು 25ಇಳೆಯ ಸುಜನರ ಭಾಗ್ಯಶ್ರುತಿಪುರಾಣಂಗಳು |ಪೇಳಿದಂತೆಕೊಂಡಯತಿರೂಪ ವಾಯು ||ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |ತೊಲಗಿಸಿದನು ಈ ಮಧ್ವಾಖ್ಯಸೂರ್ಯ26ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |ತತ್ವವಾದವ ಅರುಪಿ ಸಜ್ಜನರ ಪೊರೆದ ||ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |ಸುವರ್ಣಕುಂದಣಪದಕ ಯೋಗ್ಯರಿಗೆ ಇತ್ತ27ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |ಸಚ್ಛಾಸ್ತ್ರಪೀಯೂಷಗೋಕಲ್ಪ ತರುವು28ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||ಬಡತನದಿ ನರಳುವ ಸಜ್ಜನರ ಪೋಷಿಪುದು |ನೋಡಿ ಈಸುರಧೇನುಮಾಧ್ವ ಮೂವತ್ತೇಳ29ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |ಚೆಲ್ವಉಡುಪಿಕ್ಷೇತ್ರದಲಿ ನಿಲ್ಲಿರಿಸಿ ||ಎಲ್ಲ ಭಕ್ತರಕಾವಸುಖಮಯ ಜಗತ್ಕರ್ತ |ಮೂಲ ರಾಮನ ಸಾಧು ಜನರಿಗೆ ಕಾಣಿಸಿದ 30ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |ಮಹಂತಪೂರ್ಣಪ್ರಜÕಬದರೀಗೆ ತೆರಳಿ ||ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ 31ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |ರುಕ್ಮಿಣೀಅಂಭ್ರಣಿಪ್ರಿಯತಮ ಹನುಮ ||ಭೀಮ ಮಹಾ ಪುರುಷೋತ್ತಮ ದಾಸರಿಗೆ |ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ 32ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |ಸಾಧಾರಣವಲ್ಲ ಋಜುಗಳ ಮಹಿಮೆ 33ಋಜುಗಳರಾಜೀವಚರಣಗಳಿಗಾ ನಮಿಪೆ |ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||ಭುಜಗಭೂಷಣಾದಿಗಳಿಗಧಿಕತಮ ಬಲಜ್ಞಾನ |ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು 34ಅಪರೋಕ್ಷಋಜುಗಣಕೆ ಅನಾದಿಯಾಗಿಯೇ ಉಂಟು |ತಪ್ಪದೇ ಶತಕಲ್ಪ ಸಾಧನವ ಗೈದು ||ಶ್ರೀಪನಅಪರೋಕ್ಷಇನ್ನೂ ವಿಶೇಷದಿ |ಲಭಿಸಿ ಕಲ್ಕ್ಯಾದಿಸುನಾಮಧರಿಸುವರು35ಕಲ್ಕ್ಯಾದಿ ಪೆಸರಲ್ಲಿಪ್ರತಿಒಂದು ಕಲ್ಪದಲು |ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |ಮುಖ್ಯ ವಾಯು ಬ್ರಹ್ಮಪದವ ಪೊಂದುವರು 36ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |ಹರಿವಾಯು ನುಡಿಸಿದಿದು ಜಯತು ಹರಿವಾಯ 37
--------------
ಪ್ರಸನ್ನ ಶ್ರೀನಿವಾಸದಾಸರು
ಹನುಮಂತ ನೀ ಬಲು ಜಯವಂತನಯ್ಯ |ಅನುಮಾನವಿಲ್ಲ ಆನಂದತೀರ್ಥರಾಯ ಪರಾಮಸೇವಕನಾಗಿ ರಾವಣನ ಪುರವ ನಿರ್ಧೂಮವ ಮಾಡಿದೆ ನಿಮಿಷದೊಳಗೆ ||ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ 1ಕೃಷ್ಣಾವತಾರದಿ ಭೀಮನಾಗಿ ಬಂದುದುಷ್ಟ ದೈತ್ಯರನೆಲ್ಲ ಸಂಹರಿಸಿದೆ |ದೃಷ್ಟಿಹೀನ ಧೃತರಾಷ್ಟ್ರನ ವಂಶವನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ 2ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲುಮತಿ ಹೀನರಾದ ಸಜ್ಜನರಿಗೆಲ್ಲ ||ಅತಿ ಬೇಗದಲಿ ಮಧ್ವಯತಿರೂಪಧರಿಸಿ ಸದ್ಗತಿಪಾಲಿಸಿದೆಪುರಂದರವಿಠಲನ ದಾಸ3
--------------
ಪುರಂದರದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು