ಒಟ್ಟು 234 ಕಡೆಗಳಲ್ಲಿ , 57 ದಾಸರು , 213 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಜೆಪತಿ ಪ್ರಿಯ ವಿಠಲ | ಪೊರೆಯ ಬೇಕಿವನಾ ಪ ವಾರಿಧಿ ಪೋತ | ಹರಿಯೇ ವಿಖ್ಯಾತ ಅ.ಪ. ಮಂದ ಮಾನವ ನೀದಯಎಂದಿಗೊ ಗತಿ ನೀನೆ | ಯೆಂದು ನಂಬಿಹೆನೋ 1 ತೈಜಸನು ಶ್ರೀ ಹರಿಯೆ | ವಾಜಿವದನನು ಆಗಿನೈಜರೂಪವ ತೋರಿ | ಸೋಜಿಗವ ಬೀರಿ |ಭ್ರಾಜಿಷ್ಣು ಭಯ ತೋರೆ | ಓಜಸವ ಕಳಕೊಂಡುಮಾಜದಲೆ ದುಷ್ಕರ್ಮ | ಗೋಜಿದೊಳಗಿಹನಾ 2 ಪತಿ ಕಲ್ಯಾಣನಿರುತ ಭಕ್ತರು ಗೈವ | ಪರಮ ಸೇವೆಗಳಾ 3 ಸಾರ ನಾಮಾ ಮೃತವಬಾರಿ ಬಾರಿಗೆ ಉಣಿಸಿ | ತಾರಿಸೋ ಭವವಾ 4 ಸತಿ ಸುತರು ಹಿತರಲ್ಲಿ | ವ್ಯಾಪ್ತನಿಹ ಶ್ರೀ ಹರಿಯೇಅತುಳ ಮಹಿಮೆಯ ತಿಳಿಸಿ ವಾತಸುತ ವಂದ್ಯಾ |ಕೃತ ಕೃತ್ಯನೆಂದೆನಿಸಿ | ಭಕ್ತನ್ನ ಪೊರೆಯೆಂದುಹಿತ ಗುರೂ ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ | ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ. ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ 1 ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು 2 ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ 3 ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ 4 ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು 5 ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು 6 ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ 7 ಸಿರಿ ಹರಿಯ ನಮಿಸುತಿರಲು 8 ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ 9 ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ 10 ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ 11 ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್12 ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ 13 ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು 14 ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು 15 ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ16 ಸಂತೈಸಿ ಇತ್ತರಾಶಿಷವ 17 ನೀಲ ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು 18 ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ 19
--------------
ಗುರುಗೋವಿಂದವಿಠಲರು
ಗುರು ರಾಘವೇಂದ್ರ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತ ಕಳೆದು | ವೈರಾಗ್ಯ ಕೊಡುತಾಅ.ಪ. ಪ್ರಾಚೀನ ದುಷ್ಕರ್ಮ | ಮೋಚಕೇಚ್ಛೆಯ ಮಾಡಿಕೀಚಕಾರಿಯ ಮತದಿ | ದೀಕ್ಷೆಯನೆ ಕೊಟ್ಟುನೀಚೋಚ್ಛ ತರತಮವೆ | ವಾಚಿಸುತ ಇವಳಲ್ಲಿವಾಚಾಮಗೋಚರನ | ಭಕ್ತಿಯನೆ ಕೊಡುತಾ 1 ಸಾಧುಸಂಗವ ಕೊಟ್ಟು | ಸಾಧನೆಯ ಗೈಸುವುದುಯಾದವೇಶನ ಪ್ರೀತಿ | ಸಾಧನೆಯ ಗುರಿಯಾಮಾಧವನೆ ಪರನೆಂಬೋ ಬೋದ ಸಂತತಕೊಟ್ಟುಕಾದುಕೋ ಶ್ರೀಹರಿಯೆ | ಬಾದರಾಯಣನೆ 2 ಸರುವ ಕರ್ಮಗಳೆಲ್ಲ ಹರಿ ಮಾಡಿ ಮಾಡಿಸುವಬರುವ ತತ್ಸುಖ ದುಃಖ | ಸಮತೆಯಲಿ ಎಂಬಾವರಮತಿಯ ಕರುಣಿಸುತ | ಪರಿಹರಿಸು ಭವಬಂಧಕರುಣಾಳು ಗುರುರೂಪಿ | ಪೊರೆಯ ಬೇಕಿವಳಾ 3 ಮನಸೀನ ಚಾಂಚಲ್ಯ | ವನೆ ನೀನು ಕಳೆಯುತ್ತಕ್ಷಣಕನಂತಪರಾಧ | ಎಣಿಸದಲೆ ಹರಿಯೆದೀನನಾಥನಾದ ಹರಿ | ಜ್ಞಾನ ದಂಕುರವಿತ್ತುಘನ ದಯಾವಾರಿಧೇ | ಪೊರೆಯ ಬೇಕಿವಳಾ 4 ವ್ರಜ ಕುಂದ ವರದ ಹರಿಯೇನೊಂದವಳಿಗಾನಂದ | ಸಂಧಿಸಲು ಪ್ರಾರ್ಥಿಸುವೆಇಂದಿರಾರಾಧ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗೋದಾವರಿ ಎನಗೆ ಶ್ರೀಧರನ ತೋರೆ ಪ. ನೀ ದಯದಿ ಸಲಹೆನ್ನ ಮಾಧವಗೆ ಪ್ರಿಯೆ ಅ.ಪ. ಸ್ವಚ್ಛವರ್ಣಳೆ ಬಹು ಹೆಚ್ಚಾಗಿ ಪರಿಯುವಳೆ ಮುಚ್ಚಿರುವ ಮಲಗಳನು ದೂರಮಾಡೆ ಅಚ್ಯುತನ ಪದವೀವ ಹೆಚ್ಚಿನಾ ಜ್ಞಾನವನು ಸ್ವಚ್ಛತನದಲಿ ಕೊಟ್ಟು ಮೆಚ್ಚಿ ಎನ್ನನು ಸಲಹೆ 1 ಧರೆಯ ಜನರು ನಿನ್ನೊಳ್ ಬರುತ ಮಲಗಳ ತೊಳೆಯೆ ಅರಿತು ಅದನು ಮನದಿ ಪರಿಹರಿಸಿಕೊಳಲು ಪರಮ ಭಾಗವತರ ವರ ಮಂದಿರಕೆ ಪೋಗಿ ವರಹ ವೆಂಕಟಗಿರಿಯೊಳ್ ಸ್ಥಿರವಾಗಿ ನಿಂತೆ 2 ಬರುತ ದಾರಿಯೊಳೆನಗೆ ಸ್ವಪ್ನದಲಿ ತೋರಿದೆ ವರ ದಿವ್ಯರೂಪವನು ನಾರಿಮಣಿಯೆ ಸರಿಗೆ ಕಂಕಣ ಮುತ್ತಿನಾ ಬುಗುಡಿಯನೆ ಧರಿಸಿ ವರ ಮುತ್ತೈದೆಯರಿಬ್ಬರಂದದಲಿ ತೋರಿದೆ 3 ಮುಕ್ಕೋಟಿ ಗಂಧರ್ವ ದೇವರ್ಕಳೂ ಬರುತಿರಲು ಅಕ್ಕರದಿ ತಂಗಿಯನೆ ಒಡಗೂಡುತ ಲಕ್ಕುಮಿ ಸ್ವಾಮಿ ಶ್ರೀ ಪುಷ್ಕರಣಿ ಸಾರಿರಲು ಉಕ್ಕುವೋ ಉಲ್ಲಾಸದಿಂದ ತೆರಳಿದೆಯೆ 4 ಜಿಷ್ಣು ಸಖನ ದಿವ್ಯ ಪಟ್ಟಣವ ಸೇರಲು ಕೃಷ್ಣವೇಣಿಯ ಒಡಗೂಡಿ ವಿಷ್ಣುಪಾದೋದ್ಭವೆಗೆ ಸರಿಯೆನಿಸಿ ಗೋಪಾಲ ಕೃಷ್ಣವಿಠ್ಠಲನ ಬಹುನಿಷ್ಠೆಯಿಂ ಧ್ಯಾನಿಸುವೆ 5
--------------
ಅಂಬಾಬಾಯಿ
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿಕ್ಕ ತಿರುಪತಿವಾಸ - ಶ್ರೀ ವೆಂಕಟೇಶ ಪ ಅಕ್ಕರದಿ ನೀನೆನ್ನ - ತಕ್ಕೈಸಬೇಕೋ ಅ.ಪ. ಚಕ್ರಧರ ದೇವಾಚೊಕ್ಕ ಮೂರುತಿ ಅಜನ | ಪೊಕ್ಕಳಾದಲಿ ಪಡೆದುಲಕ್ಕುಮಿಗೆ ಮೀರ್ದ ಪೊಂ | ಬಕ್ಕಿ ಧೇರನ ಕಾಯೋ 1 ಸಪ್ತ ಪ್ರಕಾರದಲಿ | ಆಪ್ತ ನೀ ನೆಲಿಸಿದ್ದುಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ |ಕ್ಲುಪ್ತಿಯಿಂದದಿ ಹವಿ | ಭೋಕ್ತø ಯಜ್ಞನಿವೊಲಿದುವ್ಯಕ್ತನಾದೆಯೊ ಜಡದಿ | ಅವ್ಯಕ್ತ ಮೂರ್ತೇ 2 ಮೂರ್ತಿ | ಪ್ರತಿರಹಿತ ದೇವಾ 3 ವರಾಹ | ಸ್ವಾಮಿ ಪುಷ್ಕರಿಣ್ಯಾದಿಆ ಮಹಾ ತೀರ್ಥಗಳ | ವಿಮಾನ ಸ್ಥಿತನಾ |ಈ ಮನೋರೂಪದಲಿ | ನೇಮಾನು ಸಂಧಾನಕಾಮಿಸುವೆ ಶ್ರೀರಮಣ | ಭೂಮಿಗ್ವಲ್ಲಭನೇ 4 ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆಸರ್ವಕುತ್ತಮನೆನಿಪೆ | ಶರ್ವವಂದ್ಯಾಸರ್ವ ಪ್ರೇರಕ ನೀನೆ | ಸರ್ವ ಚೇಷ್ಟಕ ನೀನೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ ಚಿಂತಿಸು ಮನವೆ ನಿರಂತರ ಶ್ರೀಮದ ನಂತಗಿರಿಯಲಿ ನಿಂತು ಭಜಕರ ಚಿಂತಿತಪ್ರದ ನಂತಶಯನನ ಅ.ಪ ಶಾಂತ್ಯಾದಿ ಗುಣಭರಿತ ಮಹಂತ ಮುನಿ ಮಾ ರ್ಕಾಂಡೇಯಗೊಲಿದು ಸತತ ಪರ್ವತದಿ ಲಕ್ಷ್ಮೀ ಕಾಂತನೆಸುರ ಸಹಿತ ಸನ್ನಿಹಿತನೆನುತ ಕಂತುಹರನುತ ನಂತ ಮಹಿಮನ ಸಂತಸದಿ ಸಂತುತಿಸುತಲಿ ತ- ದಿನಕರಾನಂತ ದೇವನ 1 ನಾರ ಶಿಂಹನದರ್ಶನ ಕೊಳ್ಳುತಿರೆ ಮುನಿ ಬಲ ದ್ವಾರದಿಂದಲಿ ಪ್ರತಿದಿನ ವಿರುತಿರೆ ಪ್ರಥಮ ದ್ವಾದಶಿಯೊಳು ಸಾಧನ ತಕ್ಷಣ ಪ್ರಸನ್ನ ಸೂರ್ಯಸುತನ ಉದಯದಲಿ ಭಾಗೀರಥಿಯು ಪು ಷ್ಕರಣಿಯೊಳು ಬರೆ ಪಾರಿಜಾತದ ಭೂರುಹಂಗಳ ಚಾರುರೂಪವ ತೋರಿದಾತನ 2 ನೀರಜಾಸನ ವಂದಿತ ಬಂಗಾರಮಕುಟ ಕೇಯೂರ ಕಂಕಣ ಭೂಷಿತ ಚಕ್ರಾದಿ ಚಿನ್ಹಿತ ಚಾರುಶಿಲೆಯೊಳು ಸನ್ನಿಹಿತ ಭಜಕರನು ಪೊರೆಯುತ ವಾರವಾರಕೆ ಭಕುತಜನ ಪರಿವಾರದಿಂ ಸೇವೆಯನು ಕೊಳ್ಳುತ ಧಾರುಣಿಯೊಳು ಮೆರೆವ ಕಾರ್ಪರ ನಾರಶಿಂಹಾತ್ಮಕ ಸ್ವರೂಪನ3
--------------
ಕಾರ್ಪರ ನರಹರಿದಾಸರು
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ 1 ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ 2 ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ 3 ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಉಪಕಾರಕ್ಕಪಕಾರವೊ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ4 ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಪರಮೇಷ್ಠಿ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ5
--------------
ವಿಜಯದಾಸ
ಜಗದಾದಿವಂದ್ಯನಿಗೆ ಶರಣುಪ ಪನ್ನಗಾನಗದೊಡೆಯ ಶರಣು 1 ತವಪದನಖಾಗ್ರಕೆ ಶರಣು2 ಮೂಡಲಾಗಿರಿಗೆ ಶರಣು ಗಿರಿಯ ಅಡಿದಾವರೆಗಳಿಗೆ ಶರಣು3 ನಡೆರ್ವಡಿಗಳಿಗೆ ಶರಣು4 ಮೆಟ್ಟು ಮೆಟ್ಟಲಿಗೆ ಶರಣು ಮನಮುಟ್ಟ ಮೆಟ್ಟಲೇರುತಿಹ ನಿನ್ನಿಷ್ಟ ಭಕ್ತರಿಗೆ ಶರಣು 5 ತನುಕಷ್ಟ ಹರಿಸಿ ಮನತುಷ್ಟಿಯನು ತೋರ್ವ ಬೆಟ್ಟದಂದಕ್ಕೆಲ್ಲ ಶರಣು 6 ಪರಿವಾರಕ್ಕೆಲ್ಲ ಶರಣು7 ಸ್ವರಶಬ್ದವಾಚ್ಯತವ ಶರಣು 8 ಚೆಲ್ವ ಗಾಳಿಗೋಪುರ ದ್ವಾರಕ್ಕೆ ಶರಣು 9 ಲೀಲೆಯಿಂದಲಿ ನಿನ್ನನೋಲೈಪ ಭಕ್ತರ ಪಾದಪಲ್ಲವಂಗಳಿಗೆ ಶರಣು 10 ಗೋವಿಂದ ಸಚ್ಚಿದಾನಂದ ಮುಕುಂದನೆಂದು- ಚ್ಚರಿಪ ಭಕ್ತರಿಗೆ ಶರಣು11 ಹರಿ ಹರೀ ಹರಿ ಎಂದು ಹರಿದಾರಿ ಪಿಡಿದ ವರ ಅಡಿದಾವರೆಗಳಿಗೆ ಶರಣು 12 ಪರಿಪರಿ ಭಾಧೆಯಿಂ ತರಳನ್ನ ಕಾಯ್ದ ಶ್ರೀ ನರಹರಿಯ ಚರಣಾರವಿಂದಕ್ಕೆ ಶರಣು 13 ತಿರುದಾರಿ ಮೊಣಕಾಲ ಮುರಿಗೆ ಶರಣು 14 ಭಕ್ತರಾಪತ್ತಳಿವ ಶಕ್ತಿಸಂಪತ್ತೀವ ಉತ್ತಮೋತ್ತಮ ಭಕ್ತರಾ ಮಂಟಪಕ್ಕೆ ಶರಣು 15 ಭಕ್ತಿಯಿಂದಲಿ ಸಪ್ತಗಿರಿಯ ದಾಟಿದ ಹರಿ- ಭಕ್ತಜನಸಂದೋಹಗಳಿಗೆ ಶರಣು 16 ಭಕ್ತರುಧ್ಧರಿಸಲು ನಿಂದ ಸಮೀರನಿಗೆ ಶರಣು17 ಜೀವರಿವರೆನ್ನುವರು ದರುಶನವನೀಯೆಂದು ಕ- ರವ ಮುಗಿದು ಹರಿಯ ಸ್ತುತಿಸುವಗೆ ಶರಣು 18 ಪಾವನಾ ಮೂರ್ತಿಯನು ಮಾನಸದಿ ಧೇನಿಸಲು ಭಾವಶುಧ್ದಿಯನೀವ ಜೀವೇಶನಿಗೆ ಶರಣು 19 ಸಚ್ಚಿದಾನಂದಾತ್ಮ ಶ್ರೀ ಮುಕುಂದನ ದಿವ್ಯ ಅರಮನೆಯ ಮಹಾದ್ವಾರಕ್ಕೆ ಶರಣು 20 ಸಿರಿ ಅವ್ಯಾಕೃತಾಕಾಶಾವರಣಕ್ಕೆ ಶರಣು 21 ತೀರ್ಥಮಹಿಮೋಪೇತ ಸ್ವಾಮಿಪುಷ್ಕರಣೀ- ತಟವಿರಾಜಿತ ಅಶ್ವತ್ಥವೃಕ್ಷರಾಜನಿಗೆ ಶರಣು22 ಭೂದೇವಿಯಾರಮಣ ಆದಿಭೂವರಹ ಮೂರ್ತಿಯ ಶ್ರೀಪಾದಯುಗ್ಮಕ್ಕೆ ಶರಣು 23 ಬ್ರಹ್ಮಾಂಡದೊಡೆಯನ ದಿವ್ಯ ನಿಲಯದೊಳಿರುವ ಬಹಿರಾವರಣಕ್ಕೆ ಶರಣು 24 ಸರ್ವಗುಣಸಂಪೂರ್ಣ ವೈಕುಂಠಮಂದಿರನ ಸ್ವರ್ಣಮಯ ಸುಪರ್ಣಸ್ಥಂಭಕ್ಕೆ ಶರಣು 25 ಗಮನ ನಿರ್ಗಮನವುಳ್ಳ ಸುಮನಸರ ಭಕ್ತಜನಸಂಘಕ್ಕೆ ಶರಣು26 ಅಂತರಾವರಣಕ್ಕೆ ಶರಣು 27 ಕಾಂಚನರೂಪ ಸುವರ್ಣಮುಖರೀನದಿ ವಿ- ರಾಜಿತ ತೊಟ್ಟಿತೀರ್ಥ ಸಮಸ್ತ ತೀರ್ಥಗಳಿಗೆ ಶರಣು 28 ಸುಮನಸರು ಹೃನ್ಮನದಿ ಧೇನಿಸುವ ಕಾಂಚನ ವಿಮಾನದಲಿ ಬೆಳಗುತಿಹ ಶ್ರೀ ಶ್ರೀನಿವಾಸನಿಗೆ ಶರಣು 29 ಭೂಗಿರಿಯ ಸೇರಿದ ಶ್ರೀಹರಿಗೆ ಶರಣು 30 ವಾರಿಯೊಳಗ್ಯೋಲಾಡಿ ಶ್ರೀಶೈಲದೊಳು ನಿಂ- ತ ಶ್ರೀಲೋ¯ನಾಗಿರ್ಪಗೆ ಶರಣು31 ಶೇಷ್ಠನೆನಿಸಿದ ದಿಟ್ಟ ಮೂರುತಿಗೆ ಶರಣು 32 ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ ಮರುಳುಮಾಡಿದ ಮಾಯಾರಮಣನಿಗೆ ಶರಣು 33 ತರಳರೂಪವ ಕೆಡಿಸಿ ಗಿರಿಯ ಹುದರಯೊಳಡಗಿ ಸುರಜೇಷ್ಠನೆಂದೀಗ ಪೂಜೆ ಗೊಂಬುವಗೆ ಶರಣು 34 ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ- ವಾಟವಿಯ ದಾಟಿಸಲು ನಿಂದವಗೆ ಶರಣು 35 ಪೆತ್ತಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು ಉತ್ತಮಾಗತಿಪ್ರದ ಸರ್ವೋತ್ತಮಗೆ ಶರಣು 36 ಕ್ಷಿತಿಸುತೆಯ ಮಾತನು ಹಿತದಿ ಪಾಲಿಸೆ ವೇದ- ವತಿಯ ಪತಿಯಾಗಿ ನಿಂದವಗೆ ಶರಣು 37 ಗುಟ್ಟಾಗಿ ಪಾಲ್ಕುಡಿದು ಪೆಟ್ಟಿನಾ ನೆಪದಲ್ಲಿ ದೃಷ್ಟಿಗೋಚರನಾದ ಬೆಟ್ಟದೊಡೆಯನಿಗೆ ಶರಣು38 ಉತ್ತಮಾಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ ಹುತ್ತದೊಳು ಅಡಗಿಯೆ ಮೆರೆದವಗೆ ಶರಣು 39 ಸಿರಿಯ ಹಯವನು ಮಾಡಿ ಚರಿಸಿ ಹರಿಸಿಕೊಂಡವನಿಗೆ ಶರಣು 40 ಹಿರಣ್ಯಗರ್ಭನ ಜನಕ ಸನ್ಮಹಿಯ ಸನ್ನಿಧಿಯ ಕನಕಮಯಕವಾಟಕ್ಕೆ ಶರಣು 41 ತಟಿಕ್ಕೋಟಿನಿಭ ಪೂರ್ಣ ಸಂಪೂರ್ಣ ಲಕ್ಷಣ ಸನ್ಮಾಂಗಳಾ ಸುಂದರ ಮೂರ್ತೇ ತವ ಶರಣು42 ಮುಕ್ತಾಮುಕ್ತಗಣ ವಂದಿತಾ ತವ ಶರಣು43 ನಂದಸುನಂದನ ಜಯವಿಜಯಾದಿ ಪಾ- ಸಂಸೇವ್ಯಮಾನ ತವ ಶರಣು44 ಸರ್ವಾಂಗುಳ್ಳಂಗುಷ್ಠದಳ ವಿಲಸಿತ ಸತ್ ಪಾದ- ಪಂಕಜ ಧ್ವಜ ವಜ್ರಾಂಕುಶಾದಿ ಸುಚಿಹ್ನ ಚಿಹ್ನಿತ ತವ ಶರಣು 45 ಗುಲ್ಫಾರುಣನಖ ಧೃತಾ ದೀಧಿತಿಯುಕ್ತ ತವ ಶರಣು 46 ಬೃಹತ್ ಕಟಿತಟಶ್ರೋಣಿ ಕರಭೋರು ದ್ವಯಾನಿಶ್ರ ತವ ಶರಣು 47 ವೈಜಯಂತಿ ವನಮಾಲ ತವ ಶರಣು 48 ಪ್ರಲಯ ಪೀವರಭುಜ ತುಂಗಂಶೋರಸ್ಥ ಲಾಶ್ರಯ ತವ ಶರಣು 49 ನ್ವಿತ ತವ ಶರಣು50 ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು- ಭದ್ರನಾಸ ಚಾರುಸುಕರ್ಣ ಸುಕಪೋಲಅರುಣ ತವ ಶರಣು 51 ಸಹಸ್ರ ಫÀಣಶಿರೋಮಣಿಪ್ರಭಾನ್ವಿತ ಶೇಷಶೈಲಸ್ಥ ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣು 52 ಅನಂತವೇದೋಕ್ತ ಮಹಿಮೋಪೇತ ಸರ್ವಸ್ವರವರ್ಣ ಸರ್ವಶಬ್ದವಾಚ್ಯ ಪ್ರತಿಪಾದ್ಯ ಶರಣು 53 ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ ಹೃತ್ಕಮಲಸ್ಥಿತ ತವ ಶರಣು 54 ಅಣುತ್ರ್ಯಣು ತೃಟಿಲವ ಕ್ಷಣಾದಿಕಾಲ ಮಹ- ತ್ಕಾಲಾತ್ಮಕ ನಿತ್ಯನಿರ್ಮಲಮೂರ್ತೇ ತವ ಶರಣು 55 ಪರ ಮೇಷ್ಟಿವಂದಿತ ತವ ಶರಣು 56 ತೈಜಸ ಪ್ರಾಜ್ಞ ತುರ್ಯಾ ದ್ಯಷ್ಟರೂಪಾತ್ಮಕ ತವ ಶರಣು57 ಕಂಸಾರಿ ಮುರಾರಿ ಶ್ರೀಹರಿಯೆ ಶರಣು58 ಭವರೋಗಭೇಷಜ ಭಕ್ತಜನಬಂಧೋ ಮುಚುಕುಂದವರದ ಗೋವಿಂದ ಶರಣು 59 ಮುಕ್ತಾಮುಕ್ತಾಶ್ರಯ ಭಕ್ತಜನಸಂರಕ್ಷಣಾ ವ್ಯಕ್ತಾವ್ಯಕ್ತ ಮಹಿಮ ತವ ಶರಣು 60 ತತ್ತದಾಕಾರ ಜಗದಾಪ್ತ ಶರಣು 61 ಚೇತನಾಚೇತನ ವಿಲಕ್ಷಣ ಸ್ವಗತಭೇದವಿವ- ರ್ಜಿತ ಪತಿತಪಾವನಮೂರ್ತೇ ತವ ಶರಣು 62 ಕ್ಷರಾಕ್ಷರ ಪರುಷಪೂಜಿತ ಪಾದ ಪುರಾಣಪುರುಷೋತ್ತಮನೆ ಶರಣು 63 ರವಿಕೋಟಿಕಿರಣ ರತ್ನಕನಕಮಯ ಮುಕು- ಟಾನ್ವಿತ ತವಶಿರಸ್ಸಿಗೇ ತವ ಶರಣು 64 ಸುಂದರಾನಂದ ಆನನಕೆ ಶರಣು 65 ಶ್ರೀಲೋಲ ಶರಣು 66 ಪೂವಿಲ್ಲನಾ ಬಿಲ್ಲ ಪೋಲ್ವ ಹುಬ್ಬು ಕಂಜ - ದಳದೋಲ್ ಚಂಪಕಾಮುಗುಳಿಗೆಣೆನಾಸಿಕಕೆ ಶರಣು 67 ಮಕರ ಕರ್ಣಕುಂಡಲಾನ್ವಿತ ತವ ಕರ್ಣಕ್ಕೆ ಶರಣು 68
--------------
ಉರಗಾದ್ರಿವಾಸವಿಠಲದಾಸರು
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ ತಿರುಪತಿಯಾತ್ರೆಯ ಮಾಡಿ ಮನದ ದುರಿತಪಾಪಗಳನೀಡಾಡಿ ಆಹ ಸ್ಮರಕೋಟಿ ತೇಜನ ದರುಶನಲಾಭವು ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ ಸುಟ್ಟು ಹೋಗುವದಿದು ಚಂದ ಮೆಟ್ಟು ಮೆಟ್ಟಿಲನೇರುವ ವೃಂದ ಜನ ಸೃಷ್ಟಿಗೊಡೆಯ ಗೋವಿಂದ ಆಹಾ ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ ಗಟ್ಯಾಗಿ ಗೋವಿಂದ ಗೋವಿಂದನೆನುವರು1 ಗಾಳಿಗೋಪುರವನ್ನೆ ದಾಟಿ ಭಕ್ತ- ರಾ ಮಂಟಪಕೆ ಉಂಟೆ ಸಾಟಿ ತಾಳ ಮೇಳದವರ ಗಲಾಟೀಯಿಂದ ಶೋಭಿಪ ಪವನನಕೋಟಿ ಕೇಳಿ ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ- ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2 ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ ಆ ಮಹವರಹದೇವರನ್ನ ಕಾಮ- ಧೇನೆಂಬ ಶ್ರೀ ಗುರುಗಳನ್ನ ನೋಡಿ ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ ಶ್ರೀಧರನಾಲಯ ದ್ವಾರಕ್ಕೆ ಪೋಗಲು 3 ಮೂರು ದ್ವಾರಗಳನ್ನೆ ದಾಟಿ ಮು- ರಾರಿಯ ಗುಡಿಸುತ್ತ ಕೋಟೆಯಲ್ಲಿ ಸಾರುವ ಭಕುತರ ಭೇಟಿಯಿಂದ ಅ- ಪಾರ ಜನುಮದ ಪಾಪಮೂಟೆ ಪೋಗಿ ಬೇಗದಿ ವಿಮಾನ ಶ್ರೀನಿವಾಸನ ನೋಡಿ ಸಾಗರಶಯನನ ದರುಶನ ಕೊಡುಕೊಡು ಎಂದು 4 ಕೊಪ್ಪರಿಗೆಯು ಮನೆಯಂತೆ ಹಣ ತಪ್ಪದೆ ಸುರಿಯುವರಂತೆ ನ- ಮ್ಮಪ್ಪ ವೆಂಕಟಸ್ವಾಮಿಯಂತೆ ತಪ್ಪನಾಡುವರ ಶಿಕ್ಷಿಪನಂತೆ ಆಹಾ ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ ಅಪ್ರಮೇಯನ ಸೇವೆಗೊಪ್ಪುವ ಸುಜನರು 5 ಹೇಮದ್ವಾರದಿ ನಿಂತ ಜನರು ನಮ್ಮ ಸ್ವಾಮಿ ಶೃಂಗಾರ ನೋಡುವರು ಶ್ರೀನಿ- ವಾಸನೆ ಸಲಹು ಎಂಬುವರು ಪಾಹಿ ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ ಗೋವಿಂದ ಗೋವಿಂದ ಗೋವಿಂದ ಮಾಧವ ಮಾತುಳಾಂತಕ ದೇವ ಮಾತು ಲಾಲಿಸು ಎಂದು6 ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ ಸರಪಳಿ ಪಾಡಗ ನಲಿಯೆ ಒಳ್ಳೆ ಜರದ ಪೀತಾಂಬರ ಹೊಳೆಯೆ ಪಟ್ಟೆ ವರವಲ್ಲಿ ಹೊಳೆಯುತ್ತ ಮೆರೆಯೆ ಆಹ ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7 ವರಶಂಖು ಚಕ್ರ ಹಸ್ತದಲಿ ದಿವ್ಯ ಸಿರದಿ ಕಿರೀಟ ಮೆರೆಯುತಲಿ ಪಟ್ಟೆ ತಿಲುಕ ಕಸ್ತೂರಿ ಹೊಳೆಯುತಲಿ ಥಳ ಥಳ ಹೊಳೆವ ಮುಖಕಾಂತಿಯಲಿ ಅಹ ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ ಅಗಣಿತ ಮಹಿಮನ ಸುಗುಣವ ಪಾಡುತ್ತ 8 ಕರುಣಿಗಳರಸನೆ ದೇವ ತನ್ನ ಶರಣು ಹೊಕ್ಕವರನ್ನೆ ಕಾವ ತನ್ನ ಭಜಕರಿಗಭಯವ ನೀವ ಇನ್ನು ಸರಿಯುಂಟೆ ಶ್ರೀರಮಾದೇವ ಅಹ ಪರಿಸರನೊಡೆಯನ ನಿರುತದಿ ಧ್ಯಾನಿಸಿ ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9 ಕಾಲಹರಣ ಮಾಡದಂತೆ ತ್ರಿ- ಧಾಮನ ಸ್ಮರಿಸುವ ಚಿಂತೆಯಲ್ಲಿ ಆಲಸ್ಯ ತೊರೆದಿಹರಂತೆ ಶ್ರೀನಿ- ವಾಸನೆ ಇದಕ್ಹೊಣೆಯಂತೆ ಅಹ ಕಾಲಕಾಲಕೆ ತಕ್ಕ ಲೀಲೆಯ ತೋರುವ ಪಾದ ಧ್ಯಾನಿಪ ಸುಜನರು 10 ಹತ್ತವತಾರದ ಹರಿಯು ತನ್ನ ಭಕ್ತರು ಸ್ತುತಿಸುವ ಧ್ವನಿಯ ಕೇಳಿ ಚಿತ್ತದಿ ನಲಿಯುವ ಪರಿಯು ಸುರರು ವಿಸ್ತರಿಸುವ ದಿನಚರಿಯು ಅಹ ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11
--------------
ನಿಡಗುರುಕಿ ಜೀವೂಬಾಯಿ
ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ ತಿರುಪತಿ ವೇಂಕÀಟರಮಣ ಪ ಸ್ವಾಮಿ ಪುಷ್ಕರಿಣಿಯ ತಟದಿ ವಾಸ ಮಾಡಿಕೊಂಡಿರುವೆಯೊ ನೀನು | ಭೂಮಿಯೊಳಗೆಲ್ಲ ಸಾಧು ಸಜ್ಜನರು ನೇಮದಿಂದಲಿ ನಿನ್ನ ಸೇವಿಪರು 1 ಮಂಜುಗುಣಿಯ ಪುರದೊಳಗೆ ಬಂದು ಕಂಜಾಕ್ಷ ವರ ಚಕ್ರ ಶಂಖ ಮತ್ತೆ ಶರಚಾಪಗಳನ್ನೆತ್ತಿ ಮೆರೆದೀ 2 ಜಗಕೆಲ್ಲ ಶೇಷಾದ್ರಿಯಂಥ ಕ್ಷೇತ್ರವಿಲ್ಲೆಂದು ತೋರಿಸುತಿರುವಿ | ಖಗವರನನ್ನೇರಿ ತಿರುಗಿ ಬಂದು ತಿರುಪತಿ ಕ್ಷೇತ್ರದೊಳಿರುವಿ 3 ಪಾದ ಮುಟ್ಟದೆ ಜಾನುಗಳಿಂದ | ಬಂದು ಸಾಲಿಗ್ರಾಮದ ಮಾಲೆಯನ್ನು ಪಾದಕರ್ಪಿಸಿ ಸ್ತುತಿಸಿದರು ನಿನ್ನ 4 ಬಂದು ರಾಜೇಶ ಹಯಮುಖ ನಿನಗೆ | ಮಾಲೆ ಹಾಕುತ ಮುಂದೆ ನಿಂದಳು ಶಂಕೆಯಿಲ್ಲದೆ ನಮಿಸಿದಳು ಮುದದಿ 5
--------------
ವಿಶ್ವೇಂದ್ರತೀರ್ಥ
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ತ್ಯಜಿಸದಲೆ ಸಂಸಾರ ಭಜಿಸಬಹುದು ಪ ಅಜಭವಾದಿಗಳೆಲ್ಲ ತ್ಯಜಿಸಿ ಭಜಿಸುವರೇ ಅ.ಪ ಅರ್ಣವವ ಪೋಲುವ ಭವವನ್ನು ನೀಗಲು ವರ್ಣಾಶ್ರಮಗಳ ಧರ್ಮಗಳನರಿತು ಪೂರ್ಣ ಸುಖಜ್ಞಾನ ಪೊಂದಿದ ಹರಿಯ ಗುಣಗಳನು ನಿರ್ಣಯದ ಭಕುತಿಯಲಿ ವರ್ಣಿಸುವ ನರನು 1 ಜನ್ಮವನು ಕಳೆವುದಕೆ ತೀರ್ಮಾನ ಮಾಡಿ ದು ಷ್ಕರ್ಮಗಳ ತ್ಯಜಿಸಿ ಸತ್ಕರ್ಮಗಳನು ಮರ್ಮವರಿಯುತ ರಚಿಸಿ ಹೆಮ್ಮೆಯಿಂದಲಿ ತನ್ನ ಧರ್ಮದಲಿ ಸತಿಸುತರ ಭೋಗ ಉಣುವವರು2 ಅನ್ಯಾಯಗಳ ಬಿಟ್ಟು ಮಾನ್ಯರೆಂದೆನಿಸುತಲಿ ಘನ್ನ ಮಹಿಮನ ಸೇವೆಯೆಂದರಿಯುತ ಕನ್ಯಾದಿ ದಾನಗಳ ಮಾಡುತಲಿ ಮುದದಿಂದ ಚೆನ್ನಾಗಿ ಹರಿಯ ಪ್ರಸನ್ನತೆಯ ಪಡೆಯುವರು 3
--------------
ವಿದ್ಯಾಪ್ರಸನ್ನತೀರ್ಥರು