ಒಟ್ಟು 169 ಕಡೆಗಳಲ್ಲಿ , 53 ದಾಸರು , 154 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಕೇಶ ವಿನುತೆ | ರ ತ್ನಾಕರನ ತಾಯೆ ಪ ಗೋಕುಲದೊಳಿದ್ದು | ಆಕಳ ಕಾಯ್ದಗೆ ಲೋಕಪಾವನೆ ಸಿರಿಯೆ ಅ.ಪ ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು ಬೇರು ಮೆಲ್ಲುವನಿಗೆ | ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ ದ್ವಾರ ಕಾಯ್ದವಗೆ | ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ ಹಾರಮಾಡಿದವಗೆ | ಭೂರುಹಚರ ಪರಿವಾರ ದೊಳಗಿದ್ದು ದಧಿ ಚೋರನೆನಿಸಿದವಗೆ 1 ಸಂದೇಹವಿಲ್ಲದೆ ವಸನ ತ್ಯಜಿಸುತ ಬಂದು ನಿಂದವನಿಗೆ | ಇಂದಿರಾಧವ ನಿನ್ನ ಹಿಂದೆ ಬಂದವನ ಅಂದು ಕೊಂಡವನಿಗೆ | ಕುಂದರದನೆ ನಿನ್ನ ಪೊಂದದೆ ಛಂದದಿ ಕಂದರ ಪಡೆದವಗೆ 2 ಜಾತಿಯನರಿಯದೆ ಶಬರಿಯ ಎಂಜಲ ಪ್ರೀತಿಲಿ ಉಂಡವಗೆ ಶ್ವೇತವಾಹನಜಗೆ ತಾ ಸೂತನೆಂದೆನಿಸುತ ಖ್ಯಾತಿ ಪಡೆದವಗೆ ನೀತಿ ಇಲ್ಲದೆಯ ಮಾತೆಯ ಅನುಜನ ಘಾತಿಸಿದಾತನಿಗೆ || ವಾತಾಶನವರ ತಲ್ಪದೊಳು ಮಲಗಿದ ಶಾಮಸುಂದರ ಧೊರೆಗೆ 3
--------------
ಶಾಮಸುಂದರ ವಿಠಲ
ನಾರಾಯಣಾ ಹರಿನಾರಾಯಣಾ ಕೃಷ್ಣಾ ನಾರಾಯಣಾ ಸ್ವಾಮಿ ನಾರಾಯಣಾ 1 ಅಚ್ಯುತಾನಂತ ಗೋವಿಂದ ಪರಬ್ರಹ್ಮ ಸಚ್ಚಿದಾನಂದ ಶ್ರೀ ನಾರಾಯಣಾ 2 ಭಕ್ತವತ್ಸಲ ದೇವಾ ಪಂಡವಾಪಕ್ಷಕಾ ಮುಕ್ತಿ ದಾಯಕ ಶ್ರೀ ನಾರಾಯಣಾ 3 ನಂದನಂದನ ಆನಂದ ಶಂಕರ ಪ್ರೀಯಾ ವಂದಿತಾ ಮುನಿಜನರ ನಾರಾಯಣ 4 ಇಂದಿರಾರಮಣ ಮುಕುಂದ ಮುರಹರಿ ಮಂದರಧರ ಹರಿನಾರಾಯಣ 5 ದ್ರೌಪದಿ ರಕ್ಷಕಾ ದಾನವಾ ಶಿಕ್ಷಕಾ ಕವಿಜನ ಪೋಷಕ ನಾರಾಯಣಾ 6 ರಾವಣ ಮರ್ದನಾ ಆಜೀವಲೋಚನಾ ಯದುಕುಲಾಬ್ದಿ ಚಂದ್ರ ನಾರಾಯಣಾ 7 ಅಕ್ರೂರವರದಾ ನಿಜಾನಂದ ಮೂರುತಿ ಚಕ್ರಧರ ಹರಿ ನಾರಾಯಣಾ 8 ಭವ ನಾಯಕ ವಿಷ್ಣು ನಾರಾಯಣಾ 9 ಗಂಗಜನಕ ದೇವೋತ್ತುಂಗ ಮಹಾನುಭಾವ ಶೃಂಗಾರ ಮೂರುತಿ ನಾರಾಯಣಾ 10 ಅಂಬುಜಾದಳ ನೇತ್ರಾ ಅಜಮಿಳಾರಕ್ಷಕ ಪತಿ ನಾರಾಯಣ 11 ಪಕ್ಷಿವಾಹನ ಜಗದೃಕ್ಷಾ ಸುಲಕ್ಷಣಾ ಲಕ್ಷ್ಮೀರಮಣ ಶ್ರೀ ನಾರಾಯಣಾ 12 ಕಮಲಸಂಭವಪಿತಾ ಕರುಣಪಯೋನಿಧಿ ಅಮಿತ ಪರಾಕ್ರಮ ನಾರಾಯಣಾ 13 ಮೂರ್ತಿ ಪೂಜಿತ ಸರ್ವತ್ರಾ ಪೂತನ ಸಂಹಾರ ನಾರಾಯಣಾ 14 ದಿನಕರಾ ಕುಲದೀಪಾ ದೀನ ದಯಾಪರ ಅನಿಮಿತ್ತ ಬಂಧು ದೇವಾ ನಾರಾಯಣಾ 15 ಕಾಲಿಯಾ ಮರ್ದನಾ ಗಂಗಾಧರಾರ್ಚಿತ ಕಲ್ಮಷರಹಿತ ಶ್ರೀನಾರಾಯಣಾ 16 ಪಾಲಿತಾ ಸುರಮುನಿ ಪಾಪವಿನಾಶನಾ ವಾಲಿ ಸಂಹಾರಕಾ ನಾರಾಯಣ 17 ದಶರಥನಂದನ ಧರಣಿರಕ್ಷಕಾ ಲವ ಕುಶಪಿತಾ ಶ್ರೀಹರಿನಾರಾಯಣಾ 18 ವೇದಗೋಚರ ನಿಗಮಾಗಮ ವೇದ್ಯ ಸು- ನಾದ ವಿನೋದ ಶ್ರೀನಾರಾಯಣ 19 ಕೋಟಿದರ್ಪಕ ರೂಪಲಾವಣ್ಯ ಭಕ್ತ ಸಂಕಟ ಪರಿಹಾರ ನಾರಾಯಣಾ 20 ವಾರಿಧಿ ಬಂಧನಾ ವನಚರ ಪಾಲನಾ ವೈಕುಂಠ ಶ್ರೀನಾರಾಯಣಾ 21 ಗಜರಾಜ ವರದಾ ಕಾಮಿತಫಲದಾಯಕಾ ಅಜಭವ ಪೂಜಿತಾ ನಾರಾಯಣಾ 22 ಸಾಧುಜನ ಪ್ರಿಯಾ ಸಾಮಗಾನವೇಣು ನಾದ ಲೋಲ ಕೃಷ್ಣ ನಾರಾಯಣಾ 23 ಯಾದವ ಕುಲದೀಪಾ ಯಶೋದಾನಂದನಾ ಯಜ್ಞರಕ್ಷಕಾ ಹರಿನಾರಾಯಣಾ 24 ಕೇಶವಾ ಮಾಧವಾ ಕೃಷ್ಣ ದಾಮೋದರಾ ವಾಸುದೇವ ಹರಿನಾರಾಯಣ 25 ಸುಂದರ ವಿಗ್ರಹಾಸುಗುಣ ವಿಲಾಸ ಆನಂದ ನಿಲಯಾ ಹರಿನಾರಾಯಣಾ 26 ವ್ಯಾಸಾಂಬರೀಷ ವಾಲ್ಮೀಕ ನಾರದಾ ಪಾರಾಶರ ವಂದಿತ ನಾರಾಯಣ 27 ದೋಷದೂರಾ ನಿರ್ದೋಷಾ ಪರಮಪುರಷ ಪೋಷಿತ ಜಗತ್ರಯ ನಾರಾಯಣಾ 28 ಮಕರಕುಂಡಲಧರಾ ಮಹಿಮಾ ಚರಾಚರಾ ಸಕಲಂತರ್ಯಾಮಿ ನಾರಾಯಣ 29 ಲೋಕನಾಯಕಾ ವಿಲಾಸ ಮೂರುತಿ ತ್ರೀಲೋಕ ವಂದ್ಯ ಹರಿನಾರಾಯಣಾ 30 ವಿಶ್ವವ್ಯಾಪಕಾ ಘನ ವಿಶ್ವರೂಪಾ ಮಹಾ ವಿಶ್ವೇಶ್ವರಾ ಹರಿನಾರಾಯಣಾ 31 ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ದೇವ ಸಕಲ ಕರ್ತ ನೀನೆ ನಾರಾಯಣಾ 32 ಆಪನ್ನ `ಹೆನ್ನೆ ವಿಠ್ಠಲ ' ನಾರಾಯಣಾ 33
--------------
ಹೆನ್ನೆರಂಗದಾಸರು
ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತ ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ 1 ಉದಧಿ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ 2 ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ 3 ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ 4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಿತ್ಯದುದಯಾಸ್ತಮಾನದಲಿ ಸ ರ್ವೋತ್ತಮ ಹರಿನಾಮ ಬರೆದೋದಿ ಭಕ್ತಿಯಿಂದಾಲಿಪರ ಭವತಾಪ ಜರೆ ಮೃತ್ಯುನೀಗಿ ನಿತ್ಯಮುಕ್ತಿ ಕೈಸೇರುತಿಹ್ಯವು ಪ ನರಿಹರಿ ಹಯವದನ ಜನಾರ್ದನ ವಾಸುದೇವ ವಾರಿಜಾಕ್ಷ ಮುರಧ್ವಂಸಿ ಮುಪ್ಪುರಾಂತಕ ಮುಕ್ಕುಂದ ಹರಿ ಸರ್ವೇಶ ಉರಗಪರ್ಯಂಕ ನಿರಂಜನ ನಿರ್ಜರೇಶ ಶರಣಜನಮಂದಾರ ಸಿರಿಯರಸ ಪರಮಪ್ರಕಾಶ ಪರತರೇಶ ಪರಮಪುರುಷ ಪರಾತ್ಪರನೆಂದು 1 ಮಾಧವ ದೇವದೇವೇಶ ದನುಜರಸಂಹರ ಶ್ಯಾಮಸುಂದರ ಘನಮೇಘಶ್ಯಾಮ ಸಚ್ಚಿದಾನಂದ ಚಿನುಮಯಾತ್ಮ ತಚ್ಚೈತನ್ಯರೂಪ ವೇಣುಧರ ಗೋಪಾಲ ಗೋವ ರ್ಧನೋದ್ಧಾರ ಗಾನಾಂದಧೋಕ್ಷಜಪಿತ ಧ್ಯಾನಗಮ್ಯ ತ್ರಿಭುವನೇಶ ತ್ರಿವಿಕ್ರಮನೆಂದು 2 ನಿತ್ಯಗುಣಾರ್ಣವ ನಿಜಗುಣ ನಿಷ್ಕಲಂಕ ನಿತ್ಯಾತ್ಮ ನಿರುಪಮ ಪರಂಜ್ಯೋತಿ ನಿತ್ಯನಿರ್ಮಲ ಸತ್ಯಭಾಮಾಕಾಂತ ಚಿದ್ರೂಪ ಚಿತ್ಕಳಂಕ ಕಮಲಾಕ್ಷ ಲಕುಮೀಶ ಶೌರಿ ಸೂತ್ರಧಾರಿ ಭಕ್ತವತ್ಸಲ ಭಯನಿವಾರ ನರಸಿಂಹ ಮುಕ್ತಿದಾಯಕ ಮಧುಸೂದನ ರಮಾರಮಣ ಮೃತ್ಯುಂಜಯ ವಿಶ್ವೇಶ ವಿಶ್ವವ್ಯಾಪಕನೆಂದು 3 ಕಾಲಾರಿ ಚಕ್ರಿ ಚತುರ್ಭುಜ ಭವನಾಶ ನೀಲಾಂಗ ರಂಗ ರಾಘವ ಭುವನೇಶ ನೀಲಲೋಚನ ನಗಧರ ಜಗಮೋಹ ಮೇಲುನಿಲಯ ನಿಗಮಾತೀತ ಪದ್ಮನಾಭ ಕಾಲೀಮರ್ದನ ಕೌಸ್ತುಭಾಂಬರ ವಿಷ್ಣು ಪಾಲಸಾಗರಕನ್ನಿಕಾಪ್ರಿಯನಾಥ ಲೀಲಜಾಲ ಜಾಹ್ನವೀಜನಕ ಕೇಶವ ಶೂಲಪಾಣಿಸಖ ಶಾಂತಾಕಾರನೆಂದು4 ಪರಮಾನಂದ ಗೋವಿಂದ ಗಜರಕ್ಷ ಶರಧಿಮಥನ ಕೂರ್ಮಮತ್ಸ್ಯ ಕರುಣಾಂಗ ವಾಮನ ಧ್ರುವಪಾಲ ದುರಿತಾರಿ ಕೃಷ್ಣ ವೆಂಕಟ ವಿಠಲ ಶರಣಾಗತವರದ ನುತಪಾಲ ವರದಾತ ವೇದಾಂಗ ಸುಖಧಾಮ ವರ ಶ್ರೀರಾಮ ಪರಮ ಪುಣ್ಯನಾಮ ಧರೆಮೂರರೊಳತ್ಯಧಿಕಮೆಂದು 5
--------------
ರಾಮದಾಸರು
ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ ಇನಚಂದ್ರ ಮಂಗಳಬುಧಗುರು ಭಾರ್ಗವ ಶನಿರಾಹುಕೇತು ನವಮಹರ್ದಶನು ನೀನೆ ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ ದೊನರುಹ ಭುವನಂಗಳಾಳುವವ ನೀನೆ 1 ನಕ್ಷತ್ರಯೋಗಾದಿಕರಣಂಗಳು ನೀನೆ ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2 ಪರಮವೇದ ಪುಣ್ಯಪುರಾಣಕಥೆ ನೀನೆ ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3
--------------
ರಾಮದಾಸರು
ನೇತ್ರ - ತ್ರಯನೇ | ಅಹಿಪದ ಪಾತ್ರಾ ||ಗೋತ್ರಾರಿ ಪಂಕೇರುಹ ಮಿತ್ರಾ | ಸ್ತೋತ್ರ ಪಾತ್ರ ಶತಪತ್ರ ಪ ಚಿತ್ರ ಚರಣ ಭುವನತ್ರಯ ದೊಳಹಂತತ್ವ ವ್ಯಾಪ್ತ ಗೌರವ ಗಾತ್ರಾ ಅ.ಪ. ಸ್ಥಾಣು ವೃಷಭೇಕ್ಷಣ ನೀರಕ್ಷ 1 ಪಾವಕ ಶ್ವೇತ ಗಿರೀಶ ಉಗ್ರೇಶ 2 ಸಿರಿ ಲೋಲನ ತೋರ್ವುದು3
--------------
ಗುರುಗೋವಿಂದವಿಠಲರು
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ ಈಡು ಇಲ್ಲದುತ್ಸವಂಗಳ ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1 ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2 ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3 ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4 ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5 ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6 ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
--------------
ಹರಪನಹಳ್ಳಿಭೀಮವ್ವ
ನೋಡಿದೆ ವೆಂಕಟರಮಣನ | ದ್ವಾರ ವಾಡ ಗ್ರಾಮದಿ ನಿಂತ ದೇವನ ಪ ರೂಢಿಪ ದಾಸರಿಗೆ ನೀಡಲು ದರುಶನ ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ಅ.ಪ ಈತನೆ ವೈಕುಂಟನಾಥನು ನಿಜ | ಶಾತಕುಂಭೋದÀರ ತಾತನು ಮಾತಂಗ ವರದಾತ ಶ್ವೇತವಾಹನ ಸೂತ ಜಾತರಹಿತ ದನುಜಾತ ಕುಲಾಂತಕ 1 ತೋಡ ಜನಕೆ ಸುಖದಾತನ | ಅಂಡಜಾತ ಪ್ರಕಾಂಡ ವರೂಥ ಬ್ರ ಹ್ಮಾಂಡನಾಯಕನಾದ ಪಾಂಡವಪಾಲನ 2 ಇಂದು ಧರಾಮರ ವಂದ್ಯನ ಶಾಮ ಸುಂದರ ವಿಠಲನ ಮುಕುಂದನ ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ ಇಂದು ಬೆಂದು ಪೋದವು ಘನ 3
--------------
ಶಾಮಸುಂದರ ವಿಠಲ
ಪಂಚೀಕರಣಮಾಡಿ ತಾ ಸಂಚರಿಸುವ ಪ ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ- ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1 ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ ರಜಕೆ ಭೂದೇವಿ ತಮಕೆ ದುರ್ಗಾದೇವೇರು ಸತ್ಯಜ್ಞಾನಾನಂದದಯೆ ಮೌನಪಂಚೇಂದ್ರಿಯ ಜಯ ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2 ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ ಡಂಭ ಸ್ವಚ್ಛಂದರಜದ ಕಾರ್ಯವು ತಮದ ಕಾರ್ಯ ಅಜ್ಞಾನ ಮೋಹ ನಿದ್ರಾಲಸ್ಯ ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3 ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ ಅಹಂಕಾರ ತತ್ವವೆಂಬುದೇರ್ಪಟ್ಟಿತು 4 ತೈಜಸ ತಾಮಸ ಅಹಂಕಾರ ವೆನುತಲಿ ಮೂರಹಂ- ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು ಶೇಷರಿಂದುದಯಿಸಿದರು5 ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು ತೈಜಸದಿಂದ ದಶೇಂದ್ರಿಯ ಹುಟ್ಟಿತು ತಾಮಸಾಹಂಕಾರದಿಂದುತ್ಪನ್ನವಾದುವು6 ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ ಹರಿಯು ಪದ್ಮನಾಭರೂಪದಿಂದ ಶಯನಗೈದನು ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7 ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ ಜೀವಯೋಗ್ಯತಾ ಕಾರ್ಯ ನಡೆಸುತಿರುವನು ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ- ಶರಿಂದಲೆ ಕಾರ್ಯನಡೆಯತಿರುವುದು8 ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9 ಈ ಪರಿವಿರಾಟದಿಂದುಯಿಸಿದವು ಆಕಾಶ ಕೊಂದೆ ಶಬ್ದಗುಣವು ಮಾತ್ರ ಇರುವುದು ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10 ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು ಪರಿ ಭೂತಪಂಚಕಗಳ ಅರಿವುದು 11 ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ- ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ ಪಾದ ಪಾದವೆನ್ನೆ ಜೀವಕೋಟಿಗೂ12 ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ ಪಾದ ಭಾಗ ಜೀವಕೋಟಿಗೂ ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13 ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ ರ್ಧದೊಳ್ ಪಾದಭಾಗ ಜೀವಕೋಟಿಗೂ14 ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು ಸೂಕ್ಷ್ಮರೂಪದಿಂದೆರಡೆರಡಾದವು ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15 ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16 ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17 ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ರೂಪವು ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18 ನಾಮರೂಪ ವರ್ಣಗುಣ ಸ್ವಭಾವ ತೇಜ ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು ಉಪಾಸನ ಮಾಳ್ಪಾದೂ ಬುಧರು ಎಲ್ಲರು 19 ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ ಮುಖವೇ ಈಶಾನ ದೇವತೆ ಪರಶಿವಶಕ್ತಿ ಪರಾಶಕ್ತಿ ಅಕ್ಷರವೇ ನಾದವು20 ನಾಮ ವಾಯುರೂಪ ಷಟ್ಕೋಣ ವರ್ಣನೀಲ ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ ಅಕ್ಷರ ಬಿಂದುವೆನಿಪುದು 21 ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ ಅಕ್ಷರ ಮಕಾರ 22 ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ ಸ್ವಭಾವದ್ರವ ಗುಣ ಮಾಧುರ್ಯ ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23 ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ ಗುಣವೆ ಗಂಧವು ಮುಖಸದ್ಯೋಜಾತ ದೇವತೆ ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24 ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ- ಕ್ಕೆತಿಳಿದು ಈ ಜ್ಞಾನೇಂದ್ರಿಯಗಳೆಂತಾದವು ಎಂದರಿವುದು ಆಕಾಶಸಮಾನಾಂಶ ಅಗ್ನಿಯು ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25 ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ ತ್ವಗೇಂದ್ರಿಯವು ತಾನೆ ತೋರುತಿರುವುದು ಜಿಹ್ವೇಂದ್ರಿಯವು ತೋರುತಿರುವುದು26 ಘ್ರಾಣೇಂದ್ರಿಯವು ತಾನೆ ತೋರುತಿರುವುದು ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು ಹಿಂದೆಯೇ ಈ ವಿವರ ಪೇಳಿರುವುದು27 ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ ಘ್ರಾಣೇಂದ್ರಿಯವು ತಾನೆ ತೋರುವುದು 28 ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ ಪಾದೇಂದ್ರಿಯವು ತಾನೆತೋರುತಿರ್ಪದು ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ ಪಾಯೇಂದ್ರಿಯವೆಂದು ತೋರುತಿರ್ಪುದು29 ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ ರ್ವೋಕ್ತ ರೀತಿಗಣನೆ ತರುವುದು ಈ ರೀತಿ ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ- ರ್ಪಟ್ಟು ಬೆಳಗುತಿರುವುದು30 ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು ಅಪ್ಪು ಮುಖ್ಯಾಂಶದಿಂದಲೆ31 ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು ವಾಯುತತ್ವವೇ ಅದಕೆ ಮುಖ್ಯಕಾರಣ32 ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು ವ್ಯಾನ ವಾಯು ಎಂತೆಂದೇರ್ಪಟ್ಟಿತು 33 ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ ಅಪಾನವಾಯುವೆಂತೆಂದೇರ್ಪಟ್ಟಿತು ವಾಯು ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು ಪ್ರಾಣ ವಾಯು ಉತ್ಪನ್ನವಾಯಿತು34 ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು ಮುಂದೆ ವಿವರಿಸುವುದು ಜ್ಞಾನ ಪಂಚಕ ಈ ಜ್ಞಾನ ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು ಬುಧರು ಪೇಳ್ವರು35 ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ ದಾಗಲೆ ಮನಸು ಎಂಬುವುದು ಹುಟ್ಟಿತು ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36 ಸೇರೆ ಚಿತ್ತವೆಂಬುದು ವ್ಯಕ್ತವಾಯಿತು ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ ಸೇರಿ ಅಹಂಕಾರವೆಂಬುದೇರ್ಪಟ್ಟಿತು 37 ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು ಈಪರಿಯ ತಿಳಿವುದು ಜ್ಞಾನಪಂಚಕ ಜ್ಞಾನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38
--------------
ಉರಗಾದ್ರಿವಾಸವಿಠಲದಾಸರು
ಪಂಪತಟಗನ ಹೃದಯ | ಸಂಪುಟದಲಿಹ ಸದಯಶಂಫಲಿಯ ಪುರವಾಸಿ | ಭಕುತ ಜನ ತೋಷೀ ಪ ಬೋಧ ತೀರ್ಥರ ಸದನಮಾಧವನೆ ಹಯವದನ | ಸುಗುಣ ಗಣಪೂರ್ಣಾ ||ಹೇ ದಯಾಂಬುಧೆ ಚೆನ್ನ | ಯಾದವೇಶನೆ ಎನ್ನಕಾದು ಕೊಳ್ಳೆಲೊ ಘನ್ನ | ಶೀಲ ಸಂಪನ್ನಾ 1 ಕೃಷ್ಣ ಪದ ಸರಸಿಜವ | ನಿಷ್ಠೆಯಲಿ ಭಜಿಸಿದವಜಿಷ್ಣು ಸಖನಿಗೆ ಪ್ರೀತ | ಮಧ್ವಮುನಿ ಭ್ರಾತಾ ||ವಿಷ್ಣು ತೀರ್ಥರ ಹಸ್ತ | ಇಷ್ಟ ಪೂಜೆ ಸಮಸ್ತಅಷ್ಟ ವಿಭವದಿ ಗೊಂಡ | ಶ್ರೀಲಕುಮಿ ಗಂಡಾ2 ಕಾಲ ||ವಸುಮತಿಯ ಶ್ರೀಲೋಲ | ಕಿಸಲಯಾವಳಿ ಮಾಲವಸುದೇವ ಮುದ ಬಾಲ | ಪರಿಪಾಹಿ ಕೋಲಾ 3 ನಿಜಭೃತ್ಯ ಭಾಷಿತವ | ನಿಜವ ಮಾಡಲು ದೇವನಿಜ ವ್ಯಾಪ್ತಿ ಸ್ತಂಭದಲಿ | ನಿಜದಿ ತೋರುತಲಿಸುಜನ ಜನರುದ್ದರಣ | ಕುಜನರಸು ವಿಹರಣಅಜ ಜನಕ ವಿಶ್ವೇಶ | ಕರುಣಿಸೆಲೊ ಶ್ರೀಶಾ 4 ನಿಟಿಲ ನೇತ್ರನ ಬಿಂಬ | ಪಟವು ವಡವೆಗಳೆಂಬಕಟು ಸವಿಯನುಂಬುವನು | ಸಕಲ ಕ್ರಿಯಗಳನೂಧಿಟ್ಟ ಗುರು ಗೋವಿಂದ | ವಿಠಲ ನಿನ್ನಾನಂದದಿಟವೆಂಬ ವರ ಮತಿಯ | ಪಾಲಿಸೆಲೊ ಜೀಯ 5
--------------
ಗುರುಗೋವಿಂದವಿಠಲರು
ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ ಪಾದ ಸಮೀಪದ ಸೇವಕ ಅ.ಪ. ಹರಿಪಾದೋದಕ ಶಿರದಲಿ ಧರಿಸಿದ ಹರಿಕಥಾಮೃತ ಮಳೆಗರೆವೆ ನೀ ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ- ರೀರ ಲೇಪನದಿಂದ ವರ ತೇಜಯುತನೆ ಮುರಹರಗೆರಗದ ನರನಿಗೆ ನರಕವು ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ ನಿರುತ ಅವನ ಪದ ಮೆರೆಯದೆ ಮನಗೊಂಡೆ ಶರಣು ಅಮರನುತ ಗುರು ಶಿರೋಮಣಿಯೆ1 ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ- ಶೇಷ ಸ್ಥಳದೊಳು ವಾಸವಾಗಿ ಅ- ದೋಷನಾಶನ ಸಂತೋಷದಿ ಗಿರಿಜೆಗೆ ಶ್ರೀಶನ ಮಂತ್ರೋಪದೇಶವ ಮಾಡಿದೆ ದಾಶರಥಿಯ ನಿಜದಾಸರೆನಿಸುವರ ಪೋಷಿಪೆ ಶಿವ ಪರಮೇಶ ಕೃಪಾಳೊ 2 ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ ಕಂದರ್ಪಹರ ಭಕ್ತಬಾಂಧವ ಕಾಯೊ ಇಂದಿರೆರಮಣ ಗೋವಿಂದನ ಪಾದಾರ- ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ ನಂದಿವಾಹನ ಎನ್ನ ಹಿಂದಣ ಕಲುಷಿತ ವೃಂದಗಳೋಡಿಸುವ ಇಂದುಧರ ಅರ- ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು 3
--------------
ವಿಜಯದಾಸ
ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ ವರ ತಂದೆ ಮುದ್ದುಮೋಹನರೊಡೆಯನೆ ಪ. ಸಿರಿಯರಸ ಶ್ರೀ ಶ್ರೀನಿವಾಸ ಶ್ರೀ ಕೃಷ್ಣಹರೆ ಪರಮದಯಾಳು ದೇವ | ದೇವಅ.ಪ. ನಿರುತ ನೀ ಸ್ವಪ್ನದಲ್ಲಿ ಪರಿಪರಿಯ ರೂಪದಲಿ ತ್ವರಿತದಲಿ ತೋರಿ ಕಾಯ್ದೆ ಪರಮಪಾವನಮೂರ್ತಿ ಗುರು ಅಂತರ್ಯಾಮಿಯೆ ಕರಕರೆಯ ಬಿಡಿಸಿ ಸಲಹೊ | ದೇವ 1 ವಿಶ್ವತೈಜಸ ಪ್ರಾಜ್ಞ ತುರಿಯ ರೂಪಗಳಿಂದ ನೀ ಸ್ವಪ್ನಗಳನೆ ತೋರ್ವೆ ವಿಶ್ವೇಶ ಎನ್ನೊಳಗೆ ಸಾಕ್ಷಿಯಾಗಿರುತ್ತಿರ್ದು ವಿಶ್ವಮಯ ಚೇಷ್ಟೆ ಮಾಳ್ಪೆ | ದೇವ 2 ಈ ಶರೀರದೊಳಗೆ ಶ್ರೀ ತೈಜಸನೆ ನೀನು ವಾಸವಾಗಿರುತಲಿರ್ದು ನಾಶರಹಿತನೆ ಮೋಹಪಾಶದಲಿ ಸಿಲುಕಿಸಿ ಮೋಸಪಡಿಸುವರೆ ಎನ್ನ | ದೇವ 3 ಬಿಡಿಸೊ ದುರ್ವಿಷಯಗಳ ತಡವಾಕೊ ಹರಿ ಇನ್ನು ಒಡಲಿಗೊಡೆಯನೆ ಶ್ರೀಹರಿ ಕೊಡು ನಿನ್ನ ಪದಸೇವೆ ನುಡಿಸು ನಿನ್ನಯ ನಾಮ ಪಡಿಸು ಸುಖ ಅನವರತದಿ | ದೇವ 4 ಸ್ವಪ್ನ ವ್ಯಾಪಾರದಲಿ ಅಪ್ರತಿಮಮಹಿಮೆಗಳ ಕ್ಷಿಪ್ರದಿಂದಲಿ ತೋರಿದೆ ಸಪ್ತಫಣಿಮಂಡಿತನೆ ಒಪ್ಪದಿಂದಲಿ ಎನ್ನ ತಪ್ಪನೆಣಿಸದಲೆ ಕಾಯೋ | ದೇವ 5 ನೀತ ಗುರುಗಳ ದ್ವಾರ ಪ್ರೀತನಾದ ಹರಿಯೆ ಪಾತಕವÀ ಕಳದೆ ಸ್ವಾಮಿ ವಾತಜನಕನೆÀ ನಿನ್ನ ಖ್ಯಾತಿ ಪೊಗಳಲು ಅಳವೆ ಪ್ರೀತನಾಗಿದ್ದು ಸಲಹೊ | ದೇವ 6 ಶ್ರೀಪತಿಯೆ ಪರಮಪಾವನಮೂರ್ತಿ ವಿಖ್ಯಾತ ನೀ ಪ್ರೀತಿಲೀಲೆ ತೋರ್ದೆ ಕಾಪಾಡಿದೆಯೊ ಎನ್ನ ಶ್ರೀ ಗುರುಗಳೊಳಗಿರ್ದು ಗೋಪಾಲಕೃಷ್ಣವಿಠ್ಠಲ ದೇವ 7
--------------
ಅಂಬಾಬಾಯಿ
ಪಾರ್ಥನ ಸಾರಥಿಯಾ ನೋಡಿದೆಯಾ ಪ ಆರ್ತ ಜೀವನಿಗೆ ಕರ್ತವ್ಯವನುಗುರ್ತಿಸಿ ಪೇಳ್ವುದ ಪೂರ್ತಿಯ ರೀತಿಯಾ ಅ.ಪ. ಗೀತೆಯ ಪೇಳಲು ವೇದಾಗಮಗಳಸಾರಧಾರೆಯ ಕರೆವನೆಂಬಂತೆಶ್ವೇತಾಶ್ವಂಗಳ ಕಡಿವಾಣಗಳಪ್ರೀತಿಲಿ ಪಿಡಿದಿಹ ಕೃಷ್ಣ ಮೂರುತಿಯ 1 ಭವದ ತೇರಿನಲಿ ಜೀವನನಿರಿಸಿ ನಾಲ್ಕರ್ಥಗಳನು ಜೋಡಿಸುತತವಕದಿ ತಾ ಹೊರಗಿರುತಲೆ ನಡೆಸಿಪ್ರೇರಿಪನೆಂಬಂತಿಹ ಶ್ರೀಪತಿಯ 2 ನೇತ್ರಕೆ ಜೀವನಯಾತ್ರೆಯ ಸಡೆಸುವಸೂತ್ರಧಾರನೆನೆ ತೋರುತಲಿರುವಕ್ಷೇತ್ರ ಗದುಗಿನ ವೀರನಾರಾಯಣನಪಾತ್ರ ವಹಿಸಿದ ದಿವ್ಯಾಕೃತಿಯ 3
--------------
ವೀರನಾರಾಯಣ
ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ ಪ ಪದ್ಯ ನಿತ್ಯ ನಿರ್ಧೂತಮಾಯಾ ಕವಿಜನ ವರಗೇಯಾ, ಕಾಮಿತಾರ್ಥಾಭಿಧೀಯಾ ದಿವಿಭುವಿ ನಿಜಗೇಯಾ, ನೀತ ಸದ್ಭಕ್ತ ಪ್ರೀಯಾ ತ್ರಿವಿಧಜನ್ವ ಸುಕಾಯಾ ನಿಲಯ ವಾಙ್ಮನೋ ಪ್ರೀಯಾ ನಿಗಮ ವಂದಿತ ಮುಖ್ಯಗುಣಧಾಮಾ ಸ್ವಾಶ್ರಿತಪ್ರೇಮಾತೋಷಿತ ಶ್ರೀರಾಮಾ ಜಗಕೆ ಜೀವನÀನಾದ ಹನುಮಾ ಕಾಮದ ಭೀಮಾ ಮೋಕ್ಷದ ಮಧ್ವನಾಮಾ ಮುಗಿವೆ ಕರದ್ವಯ ನಿಮಗಯ್ಯಾ ನಮೋ ನತಜೀಯಾ ಸಂತತ ಪಿಡಿ ಕೈಯಾ 1 ಪದ್ಯ ಜಲರುಹಭವಪೋತಾ ಭೂತನಾಥೈಕತಾತಾ ಸುಲಲಿತಜನದಾತಾ ಶುದ್ಧಸತ್ತಾ ್ವಧಿನಾಥಾ ಕಲಿಮಲ ಪ್ರವೀಫಾತಾ ವಿಶ್ವಕೋಶವ್ಯತೀತಾ ವಿಲುಲಿತ ದಿತಿಜಾತಾ ಧೂತ ಸರ್ವತ್ರಾಭೀತಾ ಪದ ಏಕವಿಂಶತಿ ಸಹಸ್ರ ಷಟ್‍ಶತಾ ಜಪಮಾಡುತಾ ತ್ರಿವಿಧರೊಳಿರುತ ಎಕೋ ನಾರಾಯಣನುತ್ತಮಾ ಸರ್ವ ಸುರೋತ್ತಮ ಜೀವಗಣವೆಂಬೋದು ಅಥವಾ ಎಕೋ ಭಾವಭಕ್ತಿವಿಜ್ಞಾನಾ ಭವದೊಳು ಜ್ಞಾನಾ ಕಲ್ಪಿಸಿ ಅಜ್ಞಾನಾ ಏಕವಾಗಿತ್ತು ಸತ್ವರಾ ಭವದಿಂದ ಮುಕ್ತರಾ ಮಾಡುವಿ ಸತ್ವರಾ 2 ಪದ್ಯ ಶ್ರುತಿತತಿಸ್ಮøತಿವೇದ್ಯಾ ಸೂತ್ರನಾಮಾಮರಾದ್ಯಾ ವಿತತವಿಮಲಗಾತ್ರಾ, ವೀಶಶೇಷತ್ರಿನೇತ್ರಾ ಶತಮಖ ಮುಖಧ್ಯಾತಾ, ಧೀತವೇದಾಂತಜಾತಾ ಪದ ವಿಶ್ವೇಶ ವಿಶ್ವಾಂತರಾತುಮಾ ಚಿÉಚ್ಛುಕಾತುಮಾ ಸರ್ವಜೀವರುತ್ತಮಾ ವಿಶ್ವಾಸದಿಂದಲಿ ತವಪಾದಾ ಮೋದ ದಾಯಕ ಮುಕ್ತಿಫಲದಾ ವಿಶ್ವನಾಟಕ ವಿಷ್ಣುಪದ ಭಕ್ತಾ ಸಜ್ಜನಸಕ್ತ ಪಾಲಿಸು ನಿನ ಭಕ್ತಾ ವಿಶ್ವೇಶÀ ಗುರುಜಗನ್ನಾಥ ಮೋದ 3
--------------
ಗುರುಜಗನ್ನಾಥದಾಸರು