ಒಟ್ಟು 252 ಕಡೆಗಳಲ್ಲಿ , 61 ದಾಸರು , 239 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ 1 ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಿತ್ಯ 2 ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ ನಾದಿದೈವವೆಂದು ಎಣಿಸುವ ಜಪಶೀಲ 3
--------------
ವಿಜಯದಾಸ
ಕರವೀರಪುರವ ಸೇರಿದಳು ಹದಿನಾರು ಸಾವಿರ ನಾರಿಯರ ಭಾಗ್ಯವ ನೋಡಿ ಸೇರಿದಳುಲಕುಮಿ ಜರಿದಾಳು ಪ. ಶ್ರೀವೈಕುಂಠಕ್ಕೆ ಸರಿಯೆಂದು ದ್ವಾರಕೆಹರಿ ಬ್ರಹ್ಮ ಕೇಳಿ ಹರುಷಾಗಿಹರಿ ಬ್ರಹ್ಮ ಕೇಳಿ ಹರುಷಾಗಿ ತಮ್ಮ ತಮ್ಮಪುರದಿಂದ ಇಳಿದು ಬರುತಾರೆ 1 ವೃಂದಾರಕರೆಲ್ಲ ಬಂದರು ದ್ವಾರಕೆಗೆ ಚಂದ್ರ ನೊಬ್ಬ ಬರಲಿಲ್ಲಚಂದ್ರ ತಾನೊಬ್ಬ ಬರಲಿಲ್ಲ ತನ್ನಕಾಂತಿ ಕುಂದೀತೆಂಬೊ ಭಯದಿಂದ2 ಸಾರು ದೇವತೆಗಳು ದ್ವಾರಕೆಗೆ ಬರಲುಸೂರ್ಯ ತಾನೊಬ್ಬ ಬರಲಿಲ್ಲಸೂರ್ಯ ತಾನೊಬ್ಬ ಬರಲಿಲ್ಲ ತನ್ನತೇಜ ಕುಂದೀತೆಂಬೊ ಭಯದಿಂದ 3 ಜಾಣ ನಾರದ ತಮ್ಮ ವೀಣೆ ನುಡಿಸುತ ವಾಣಿ ಮಾವನ ಸ್ತುತಿಸುತವಾಣಿ ಮಾವನ ಸ್ತುತಿಸುತ ತಾಒಂದು ಓಣಿಯ ಹಿಡಿದು ಬರುತಾನೆ4 ವಶಿಷ್ಠ ಮೊದಲಾದ ಮಹಾಶಿಷ್ಠರು ಮುನಿಗಳು ತಮ್ಮ ಕೃಷ್ಣ್ಣಾಜಿನ ಕಾಷ್ಠ ಸಹಿತಾಗಿಕೃಷ್ಣ್ಣಾಜಿನ ಕಾಷ್ಠ ಸಹಿತಾಗಿ ಬಂದರು ಧಿಟ್ಟ ರಾಮೇಶÀನರಮನೆಗೆ 5
--------------
ಗಲಗಲಿಅವ್ವನವರು
ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ ಪ. ನರಹರಿ ಭಕ್ತರ ಪೊರೆಯುವೆ ನೀನೆಂ- ಇಂದು ಅ.ಪ. ನಾರಸಿಂಹ ನಿನ್ನ ಸಾರಿ ಭಜಿಸುವೆನು ತೋರೊ ನಿನ್ನ ಪದವ ಬಾರಿಬಾರಿಗೆ ಸ್ತುತಿಸಲು ಬಾಲನು ಘೋರ ದೈತ್ಯನ ಸೀಳಿ ಪೊರೆದೆಯೊ 1 ಶೇಷಾಂತರ್ಗತ ನಾರಸಿಂಹ ವಿ- ಶೇಷ ಮಹಿಮೆ ತೋರೊ ಶೇಷಶಯನ ಮಹರುದ್ರಾಂತರ್ಗತ ಪೋಷಿಸೊ ಭಕ್ತರ ಶಾಂತರೂಪದಿ 2 ಲೀಲೆಯಿಂದ ಶ್ರೀ ಲಕುಮಿ ಹಿತದಿ ವ್ಯಾಳಶಯನನಾಗಿ ಪಾಲಿಸಬೇಕೆನ್ನನು ಸತತದಿ ಗೋ- ಪಾಲಕೃಷ್ಣವಿಠ್ಠಲ ನೀ ದಯದಿ 3
--------------
ಅಂಬಾಬಾಯಿ
ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ 1 ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ 2 ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ 3 ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ 4 ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿ ಕಾಯಬೇಕೆನ್ನ ಲಕುಮಿ ಪ. ಕಾಯಬೇಕೆನ್ನ ನೋಯುವೆ ಭವದಲಿ ಕಾಯಜಪಿತನನು ಕಾಯದಿ ತೋರಿ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ ಪಾರುಗಾಣಿಸೆ ಜನನಿಯೆ ತೋರೆ ನಿನ್ನ ಪತಿಯ ಪಾದವ ಮನದೊಳು ಸೇರಿಸೆ ಸುಜನರ ಸಂಗದೊಳೀಗ1 ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ ಮುಕ್ತಿಮಾರ್ಗವ ನೀನೀಯೆ ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ ಮುಕ್ತರೊಡೆಯನೊಳು ಭಕ್ತಿಯ ನೀಡೆ 2 ಅಷ್ಟಭುಜದ ಶಕ್ತಿಯೆ | ಶ್ರೀ ಭೂಮಿ ದುರ್ಗೆ ಅಷ್ಟ ಐಶ್ವರ್ಯದಾಯಿನಿಯೆ ಶ್ರೇಷ್ಠ ಶ್ರೀಗೋಪಾಲಕೃಷ್ಣವಿಠ್ಠಲನೊಳು ಪಟ್ಟವಾಳ್ವೆ ಜಗಸೃಷ್ಟಿ ಪ್ರಳಯದಿ 3
--------------
ಅಂಬಾಬಾಯಿ
ಕಾವುದೆÉಮ್ಮನು ಜಗವ ಕಾವ ಕರುಣಿಯೆ ಪ. ಈವುದೆಮಗೆ ಸಕಲಸುಖವÀ ದೇವ ಲಕುಮಿನಾರಾಯಣ ಅ.ಪ. ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿಕಮಲಭವನು ಬಿಡದೆ ಪೂಜಿಪ ಅಮರಕುಲಲಲಾಮ ವಿಭುವೆ 1 ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣಗೆದ್ದು ಕುಜನತತಿಯ ಸುಜನರುದ್ಧರಿಸುವ ಗುಣನಿಧಿಯೆ 2 ಶಂಖಚಕ್ರ ಗದಾಪದುಮ ಆಂಕಗಳಿಂದ ಶೋಭಿತ ಕರಪಂಕಜಾಕ್ಷ ಪಯೋಧಿಶಯನ ಶಂಕೆಯಿಲ್ಲದೆ ಹಯವದನ3
--------------
ವಾದಿರಾಜ
ಕುಣಿ ಕುಣಿಯಲೋ ಬಾಲಗೋಪಾಲ ಪ ಗೋಪಾಲ ನೀರದ ನೀರ ಅ.ಪ ಯಮುನಾ ತೀರದಿ ಹಿಮಕಿರಣನು ತಾ ಮಮತೆಯ ತೋರಲು ಬೆಳಗುತಿಹ ಘಮಘಮಿಸುವ ಈ ಸುಮಗಳು ಸೂಸಿರೆ ಪ್ರಮದೆಯರೆಲ್ಲರ ಪ್ರೇಮಾಂಗಣದಲಿ 1 ಗಂಧವ ಮಾರುತ ಬೀರುತಲಿರುವನು ಇಂದಿರೆ ಕೊಳಲಿನ ರೂಪದಲಿ ಚಂದದಿ ನಾದವ ತುಂಬಲು ಪರಮಾ ನಂದವು ಮಾನಸ ಮಂದಿರದಲಿ ನೀ 2 ಕಾಯವು ರೋಮಾಂಚಿತವಾಯ್ತೊ ಮಾಯಾವಾದವೊ ಮೋಹಗಳು ತಾಯಿ ಮಡಿಲು ಸೇರಿದ ಶಿಶುವಂದದಿ ಹಾಯವೆನಿಸಿತೊ ಜೀವನ ಯಾತ್ರೆಯು 3 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ ಭವ ಪಾರ ಸೇರಿಸೋ 4 ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು ತಕಿಟ ತಕಿಟ ಎಂದು 5
--------------
ವಿದ್ಯಾಪ್ರಸನ್ನತೀರ್ಥರು
ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ ಪ ಕಾಲಕಾಲಕೆ ನಿನ್ನ ಕಾಲಿಗೆರಗುವೆ ಕರುಣಾಲಯತೋರೋ ಕರುಣಾಳುಗಳರಸನೆ ಅ.ಪ. ತುಳಸಿಗೆ ಕಳಸೀದರೆನ್ನ ತುಳಸಿಯ ತಾರದೆ ನಾ ಹೊಲಸಿನೊಳಳುತಿರೆ ಘಳಿಗೆಯಾ ತಾಳದೆ ಘಳಿಸಿದೆ ತುಳಸಿಯಾ ಕಳಸವ ಕಳ್ಳ ನಾ ಗೆಳೆಯನೆ ಕಳವಳಿಗಳು ಕಳುಹಿಸಿ ಕಾಳ್ವಗೈಸುವ ಕಾಳಿರಮಣ ನಿನ್ನ ಧೂಳಿ ಧರಿಸುವಂತೆ ಖೂಳನಾ ಮಾಡದೆ 1 ಚಲುವ ಚನ್ನಿಗ ನೀನಹುದೋ ಚಂಚಲ ನಯನಾ ಕರುಣಾ ಚಲ ನೀನಹುದೊ ಚಾಲೂವರಿಯಲು ಎನಗೆ ಕಾಲವು ತಿಳಿಯದು ಶೂಲಿ ಚಂಚಲ ಎನ್ನ ಸಂಚಿತಗಾಮಿ ವಂಚಿಸದೆ ಕಾಯ್ವುದೊ ಇದೇ ಕೊಡುವುದೋಕಂಬು ಕಂಧರಮಣಿ ಹಂಚುವುಗಾಣದೆ ಚಂಚಲೂ ನಯನದಿ ಸುರವಂಚಕನಾಗಿ ಪ್ರಪಂಚದಿ ಶರಪಂಚನ ಚಿಂತಿಸಿಸಂತೆಯಾನರುಹಿದ 2 ಅಕಳಂಕ ಮಹಿಮನೆ ದೋಷದೂರ ನೀ ಗುಣವಂತನೇ ಸಹಸ ಬಲವಂತನೆ ಕಾಂತಿಯ ತಂದನೆ ಕಾಂತಿಯುಳ್ಳ ಕಂತಿಯು ಧರಿಸಿದ ದಿಗಂತ ನಿಷ್ಕಿಂಜನರ ಕಾಂತನೆ ಭುಜಬಲ ಮಹಬಲವಂತನೆ ಕುರುಕಂತನೆ ಅಂತು ಇಂತು ತಂತು ಬಿಡದೆ ನಿಜ ಕುಂತಿಯ ಮಗನನ ಕಂತೆಯುಪೂಜಿಪ ಮಂತ್ರಿಯೆನಿಸಿ ಸುಖತಂತ್ರ ಪಠಿಸಿ ಶೃತಿಪಂಶವಿಂಶತಿ ದ್ವಿಪಿಂಚಕಲ್ಪವ ಮಿಂಚಿನಂದದಿ ತಪವಗೈದು ಪಂಚಪದವಿಯ ಪೊ0ದುಕೊಂಡು ಪಂಚ ಬಾಣನ ಪಿತನು ಯನಿಸಿದ ಮಾಂಗಲ್ಯ ಲಕುಮಿಯ ರಮಣ ಯೆನ ತಂದೆವರದಗೋಪಾಲವಿಠ್ಠಲನ ಆತಂಕವಿಲ್ಲದೇ ಚಿಂತಿಸುವ ನಾರಾಯಣಾಚಾರ್ಯನೇ3
--------------
ತಂದೆವರದಗೋಪಾಲವಿಠಲರು
ಕೊಡು ತಾಯೆ ವರವ ಧೃಡವಾಗಿರುವ ಕೊಡು ತಾಯೆ ವರವಾ ಪ. ಕೊಡೆ ವರ ತಡಮಾಡದೆ ಧೃಡ ಭಕ್ತಿ ಎಂಬ ಮಾಂಗಲ್ಯ ಭಾಗ್ಯ ಧೃಡವಾಗಿರುವಂತೆ ಅ.ಪ. ಪರಿಪರಿ ಧ್ಯಾನಿಸೆನ್ನ ಮನಮಂದಿರವೆಂಬ ವರಗೃಹದಲಿ ಯೆನ್ನಯ ಭಕ್ತಿಮಂಟಪದಿ ಹರದಿ ಲಕುಮಿ ನಿನ್ನ ಪೂಜಿಸಿ ನಮಿಸಲು ವರ ಅಘ್ರ್ಯಪಾದ್ಯ ಆಚಮನವಿತ್ತು ನಲಿವೆ 1 ನವವಿಧ ಭಕ್ತಿಯೆಂಬ ನವರತ್ನ ಮಂಟಪದಿ ನವವಧು ಹರಿಗೆ ನೀನೆಂದು ಕುಳ್ಳಿರಿಸಿ ನವವಿಧ ಪಂಚಾಮೃತ ಸ್ನಾನಗೈಸಿ ನವನೀತಚೋರ ನಿನಗೆ ವಸ್ತ್ರಾಭರಣವನಿಟ್ಟು ನವವಿಧ ಭಕುತಿಲಿ ಪೂಜಿಪೆ 2 ಜಾಜಿ ಮಲ್ಲಿಗೆ ರೋಜ ಸಂಪಿಗೆ ರಾಜಿಪಲಕ್ಷ್ಮಿಗೆ ಮಲ್ಲಿಗೆ ದಂಡೆ ಮುಡಿಸಿ ಜಡೆಗೆ ಕಮಲ ಕೆಂಪಿನ ತಿರುಪಿನ ಹೂವ ತಿರುಗಿಸಿ 3 ಅರಿಶಿನ ಕುಂಕುಮ ಪರಿಮಳ ಗಂಧದಿ ವರಮಹಾಲಕ್ಷ್ಮಿಗೆ ಪೂಜಿಸುವೆ ವರಲಕ್ಷ್ಮಿಗೆ ಪರಿಪರಿ ಪುಷ್ಪ ಅಷ್ಟೋತ್ತರಗಳಿಂದರ್ಚಿಸೆ ಕೊಡು ವರ ದೃಢಭಕ್ತಿಯೆಂದು ಬೇಡುವೆ 4 ಷಡ್ರಾಸಾನ್ನ ಪಾಯಸ ಭಕ್ಷ್ಯಗಳ ಷಡ್ವಿಧ ದದಿಘೃತ ಪಾಲು ಸಕ್ಕರೆ ಬಗೆಬಗೆ ಉಂಡೆಗಳ ಷಡ್ವಿದ ಫಲಗಳನರ್ಪಿಸಿ ಧೂಪ ದೀಪದಿ ವರ ಅಷ್ಟ ಮಂಗಳಾರತಿ ಬೆಳಗಿ ಪಾಡುತ ನಮಿಸುವೆ 5
--------------
ಸರಸ್ವತಿ ಬಾಯಿ
ಕೊಲ್ಹಾಪುರದ - ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ. ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ - ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು - ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ 1 ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ - ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ 2 ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ 3
--------------
ಗುರುಗೋವಿಂದವಿಠಲರು
ಗರುತ್ಮಂತ - ಗರುತ್ಮಂತ ಪ ಸೂತ್ರಾಭಿಧನಿಗೆ | ಪುತ್ರನೆಂದೆನಿಸಿದಅ.ಪ. ಅಮೃತಕಲಶಾಮೃತ | ಹಸ್ತವು ನಿನ್ನದುಕೃತಕೃತ್ಯನ ಗೈ | ಸುತ ಕಶ್ಯಪಗೇ 1 ಹರಿಪದ ಯುಗ್ಮವ | ಕರದಲಿ ಧರಿಸಿರೆವರ ತವ ನಖದಲಿ | ಹರಿ ಬಿಂಬೋದ್ಛವ2 ಓಂಕಾರಾಭಿಧ | ಏಕಾತ್ಮನ ವಹನೀ ಕಾಯ್ವುದು ಎನ | ಓಕರಿಸದಲೆ 3 ಪನ್ನಗ | ನಗಧೀಶಾಖ್ಯಗೆಬಗೆ ಬಗೆ ಸೇವೆಯ | ಲಕುಮಿಗೆ ಗೈವೆ 4 ವೇದೋದಿತ ಕ್ರಿಯ | ಕಾದ್ಯಭಿಮಾನಿಯೆಪಾದ ಭಜಕ ಗುರು | ಗೋವಿಂದ ವಿಠಲನ 5
--------------
ಗುರುಗೋವಿಂದವಿಠಲರು
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ | ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ. ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ 1 ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು 2 ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ 3 ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ 4 ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು 5 ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು 6 ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ 7 ಸಿರಿ ಹರಿಯ ನಮಿಸುತಿರಲು 8 ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ 9 ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ 10 ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ 11 ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್12 ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ 13 ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು 14 ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು 15 ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ16 ಸಂತೈಸಿ ಇತ್ತರಾಶಿಷವ 17 ನೀಲ ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು 18 ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ 19
--------------
ಗುರುಗೋವಿಂದವಿಠಲರು
ಗುರುರಾಘವೇಂದ್ರರ ಚರಣವ ಸ್ಮರಿಸಿರೊ ಪ ಗುರುರಾಘವೇಂದ್ರರ ಚರಣವ ಸ್ಮರಿಸಲು ದುರಿತ ರಾಶಿಗಳೆಲ್ಲ ಕರಗಿ ಪೋಗುವುವುಅ.ಪ. ಮಧ್ವ ಮತಾಬ್ಧಿಯೊಳುದ್ಭವಿಸಿದಂಥ ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ 1 ಸುಧೀಂದ್ರ ಯತಿಕರ ಪದುಮ ಸಮುದ್ಭವ ಸದೆಯ ಸದಾರ್ಚಿತ ಪದ ನುತ ಖ್ಯಾತ2 ಬಂದಂಥ ಭಕುತರ ವೃಂದವ ಪೊರೆಯಲು ಕುಂದದೆ ವರಮಂತ್ರ ಮಂದಿರದೆಸೆವ 3 ನಿರುತದಿ ಭಜಿಸುವ ವರಗಳ ಕೊಡುವ 4 ಸಕಲಾತರ್ಯಾಮಿಯು ಲಕುಮಿಕಾಂತನೆಂದು ಪ್ರಕಟಿಸಿ ಮೆರೆದರ್ಭಕನಂಶಜರೆಂದು 5
--------------
ಲಕ್ಷ್ಮೀನಾರಯಣರಾಯರು
ಗೋಕುಲಕ್ಹೋಗು ನೀ ಶೋಕವಿನಾಶಿನಿ ಲೋಕೇಶ ಪಾರ್ವತಿ ಶ್ರೀಕರೆ ಶ್ರೀಮತಿ ಪ. ದೇವಕೀಗರ್ಭದ ಕೇವಲೆಂಟಂಶದ ದೇವಶೇಷಾಖ್ಯನ ದೇವಿಗೈ ದರ್ಶನ 1 ಶಶಿಮುಖಿ ರೋಹಿಣಿ ಬಸುರೊಳಗಿಡು ನೀ ಬಿಸರುಹಲೋಚನಿ2 ಸುಂದರಿ ದೇವಕೀ ಕಂದನಾಗುವೆ ಸುಮುಖಿ ನಂದನ ನಂದಿನಿಯೆಂದೆನಿಸು ಭವಾನಿ 3 ಜಗದಂಬಿಕೆ ಜಯೆ ಸುಗುಣೆ ವೈಷ್ಣವಿ ವಿಜಯೆ ಜಗದೊಳು ನಿನ್ನ ಪೂಜೆ ಅಗಲದ ಗೈವರಗಜೆ 4 ಲಕುಮಿನಾರಾಯಣನ ಯುಕುತಿಯಂತಾಕ್ಷಣ ಸುಖದೆ ಗೈದಳು ಶಿವಸಖಿ ತಾನೆಲ್ಲವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೋಕುಲಕ್ಹೋಗು ನೀ ಶೋಕವಿನಾಶಿನಿ ಲೋಕೇಶ ಪಾರ್ವತಿ ಶ್ರೀಕರೆ ಶ್ರೀಮತಿ ಪ. ದೇವಕೀಗರ್ಭದ ಕೇವಲೆಂಟಂಶದ ದೇವಶೇಷಾಖ್ಯನ ದೇವಿಗೈ ದರ್ಶನ 1 ಶಶಿಮುಖಿ ರೋಹಿಣಿ ಬಸುರೊಳಗಿಡು ನೀ ಬಿಸರುಹಲೋಚನಿ 2 ಸುಂದರಿ ದೇವಕೀ ಕಂದನಾಗುವೆ ಸುಮುಖಿ ನಂದನ ನಂದಿನಿಯೆಂದೆನಿಸು ಭವಾನಿ 3 ಜಗದಂಬಿಕೆ ಜಯೆ ಸುಗುಣೆ ವೈಷ್ಣವಿ ವಿಜಯೆ ಜಗದೊಳು ನಿನ್ನ ಪೂಜೆ ಅಗಲದ ಗೈವರಗಜೆ4 ಲಕುಮಿನಾರಾಯಣನ ಯುಕುತಿಯಂತಾಕ್ಷಣ ಸುಖದೆ ಗೈದಳು ಶಿವಸಖಿ ತಾನೆಲ್ಲವ5
--------------
ತುಪಾಕಿ ವೆಂಕಟರಮಣಾಚಾರ್ಯ