ಒಟ್ಟು 58 ಕಡೆಗಳಲ್ಲಿ , 18 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂದೆನುತ ಬಂದೆನು ನಾ ಪ ಬಂದಾ ಬಂದಜನಕಾನಂದ ಕೊಡುತಲಿ ವಂದಿಸಿ ಭಜಿಪರಘಂಗಳ ಕಳೆದು ಸಲಹುವಿಯೋ ಸದ್ಗುರು ರಾಘವೇಂದ್ರಾ 1 ಭೀತರಾಗುತ ನಿನ್ನಡಿಗಳ ಸೇವಿಸಲು ಆದರದಿಂದಲವರ ಭವ-ಭಯವ ಪರಿಹರಿಸಿ ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2 ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು ಜೀವ ವಿದ್ದವನ ನಿರ್ಜೀವನೆನುತ ತರಲು ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3 ಕುಹಕಿ ಜನರು ಎಲ್ಲಿ ವನಕೆತುಂಡನು ತಂದು ಚಿಗುರಿಸ ಬೇಕೆನುತಲಿ ಕೇಳಲು ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4 ಮಾವಿನರಸದೊಳು ಮುಳುಗಿ ಮೃತನಾದಾ ಬಾಲಕನಿಗೆ ಪ್ರಾಣಗಳನಿತ್ತೆ ದಯದೀ ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ ಮಂತ್ರಾಲಯದೊರೆ ಗುರು ರಾಘವೇಂದ್ರಾ 5 ``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ ಮನುಜನು ಪ್ರತಿದಿನ ಭಜಿಸುತ್ತಲಿರಲು ಘೋರ ದುರಿತಗಳೆಲ್ಲ ದೂರವ ಮಾಡಿ ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6 ಶ್ರೀ ರಘುರಾಮನ ಪ್ರಿಯಭಕ್ತನಾದ ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ ನಂಬಿದ ಭಕ್ತರ ಬೆಂಬಿಡದೆ ಸಲಹುವ ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
--------------
ರಾಧಾಬಾಯಿ
ಶ್ರೀಶ ಕೇಶವ ವಿಠಲ ಸಲಹೊ ಇವನಾ ಪ ದೋಷದೂರನೆ ದೇವ | ರಾಶಿಪಾಪಂಗಳನುನಾಶಗೊಳಿಸುತ್ತ ನಿರ್ದೊಷನ್ನ ಗೈಯ್ಯೋ ಅ.ಪ. ಮೋದತೀರ್ಥರ ಮತದಿ | ಮೋದವನೆ ಪಡುತಿಪ್ಪಸಾಧುಜೀವಿಯು ನಿನ್ನ | ಪಾದಾಬ್ಜ ನಮಿಪವೇದೋದಿತವು ಎನ್ನೆ | ಬೋಧಗಳ ತಿಳಿಸುತ್ತಸಾಧನದಲ್ಲಿರಿಸಿವನ | ಕಾದುಕೋ ಹರಿಯೇ 1 ಮೂರ್ತಿ ಉಪ-ದೇಶಿಸಿಹೆನೋ ಸ್ವಾಮಿ | ಶ್ರೀಶ ನರಹರಿಯೇ 2 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾಯೋ | ಶರ್ವವಂದ್ಯನಿರ್ವಿಘ್ನತೆಯಲಿವಗೆ | ಸರ್ವಶಾಸ್ತ್ರಾರ್ಥಗಳಸರ್ವಸಾರವ ತಿಳಿಸೊ | ಸರ್ವಾಂತರಾತ್ಮ 3 ನಿತ್ಯ ಮಂಗಳನೇ 4 ಆವ ಸಂಸೃತಿಯೆಂಬ | ದಾವಾಗ್ನಿ ಪರಿಹರಿಸೆಶ್ರೀವರನೆ ನಿನ್ನ ಸ್ಮøತಿ | ಸರ್ವಕಾಲದಲಿದೇವ ಹಯ ಮುಖ ಗುರು | ಗೋವಿಂದ ವಿಠ್ಠಲನೆಈವುದೆನೆ ಬಿನ್ನಪವ | ಮಾವಿನುತ ಸಲಿಸೋ 5
--------------
ಗುರುಗೋವಿಂದವಿಠಲರು
ಸನುಮತವೆಂಬುದಿಲ್ಲ ಅನುನಯವಿಲ್ಲ ಪ ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ ಪಂಚದ ಸುಖದೊಳು ಪಂಚೇಂದ್ರಿಯಗಳಾ ಹಂಚುತೆ ಮನವನು ಚಂಚಲಗೈದುವಲ್ಲ ಅಂಚೆಯಿಲ್ಲದ ಸರಸಿಯಂತಾಗಿಯೆನ್ನ 1 ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು ಹರಿಗೆರಗುವ ಶಿರವು ಗರುವವ ಬಯಸಿದೆ 2 ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ ಕರ್ಣ ಠಕ್ಕು ಕೌಳಿಯ ಮೆದುಳು ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ 3 ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರೋಜದಳ ನೇತ್ರೀ | ಅಜಸತಿ ಗಾಯತ್ರೀಪದ | ಸರೋರುಹವ ನಮಿಪೆ | ಸುರ ಜೇಷ್ಠನ ಪ್ರಿಯೆಮುರಾರಿ ಪದ ತೋರು || ಕರುಣವ ನೀ ಬೀರು ಪ ನಿತ್ಯ ಹರಿಯ ಪದಚಿತ್ತದೊಳಗೆ ಇರಸು | ಗುಣವ ಪೊಗಳಿಸು ಅ.ಪ. ವೀಣೆ ಹಸ್ತಳೆ | ಗಾನಲೋಲ ಪ-ದಾನುರಾಗದಿ | ಗಾನ ಗೈವೆ ವೇ |ದಾನುಸಾರ ಬ್ರ | ಹ್ಮಾಣಿ ತುತಿಸುತವೇಣುಗೋಪನ | ಪ್ರೀಣ ನವ ಗೈವೇ 1 ಹಂಸವಾಹಳೆ ಹಂಸ ಹರಿಪದ ಪಾಂಸು ಶಿರದಿ ಅ | ಸಂಶಯದಿ ಧೃತ ಅಂಶ ಅವತಾ ರಾಂಶದೊಳು ನಿ-ಸ್ಸಂಶಯಳೆ ಪzಸÀ | ಪಾಂಸು ಯಾಚಿಪೆ 2 ನಾಲಿಗಿಂದಲಿ | ಬಾಲ ಗೋಪನ |ಶೀಲ ಗುಣಕ್ರಿಯ ಜಾಲ ನುಡಿಸು ವಿಶಾಲಫಣೆ ಕಮ | ಲಾಸನನ ಪ್ರಿಯೆ |ಪೇಳಲಳವೆ ವಿ | ಶಾಲ ತವಗುಣ3 ಪಾದ ನಂಬಿದೆ 4 ಕಾವ ಕೊಲ್ವನು | ಮಾವಿನೋದಿಯಭಾವ ಬಲ್ಲಳೆ | ದೇವ ಮಾತೆಯ |ಭಾವದೊಳು ಗುರು | ಗೋವಿಂದ ವಿಠಲನಪಾವನದ ಪದ | ಭಾವವನು ಕೊಡು 5
--------------
ಗುರುಗೋವಿಂದವಿಠಲರು
ಸ್ಥಿರವೆಂದು ನಂಬಿ ಕೆಡಬೇಡ ಮನುಜಾ ಧರಣಿ [ಬಾಳು] ಕರುಣೆಯಿಹುದು ಮಾ[ಂಗಿರೀಶನ] [ನಂಬಿದರೆ] ಪ ಕ್ಷೀರಾಬ್ಧಿಗೈದು ಮುದದಿ ಪೊರೆವನು ಸ್ತನ್ಯದಿಂ ಹೀರಿ ತೇಲುತ ಬೆಳೆದು ತೋರಮುತ್ತುಗಳಾ ಹಾರ ಪದಕಗಳಿಂದ ಚಾರುಭೂಷಣದಿಂದ ಮಾರಸುಂದರನೆನಿಪ | ಮೂರು ದಿನದ ಬಾಲ 1 ಬಾಲತನ ಪೋಗಲು ಮೇಲೆ ಯೌವನವೊದಗಿ ಬಾಲೆಯೋರ್ವಳಕರವ ಘಳಿಲದೊಳು ಹಿಡಿದು ಮೇಲಾದ ಸೌಭಾಗ್ಯವಲ್ಪಕಾಲವಿರುವಾಗ ಕಾಲದೂತರು ಪಿಡಿಯಲೊಡನೆ ಬ[ರುವ]ವರಿಲ್ಲ 2 ಉಕ್ಕುವ ಯೌವನದ ಸೊಕ್ಕಿಲ್ಲ ಮರುದಿನ ಉಕ್ಕುಕ್ಕಿ ಬಸವಳಿದು ಶಕ್ತಿಗುಂದಿ ಸುಕ್ಕು ಸುಕ್ಕಿನ ದೇಹ[ಭಾ]ವವಿಲ್ಲದ ಬಾಳ ಭಕ್ತಿಗೆ ಮನಮರೆಯೆ ಭಕ್ತಗತಿಯದರಿಂದ 3 ಧನವ ದಾಯಾದಿಗಳು ಮನವ ಕಾಮಾದಿಗಳು ಸನುಮತ ಜ್ಞಾನವನ್ನು ದುರಿತಕಾರ್ಯ ತನುಜ ತನುಜೆಯರೆಲ್ಲರವರವರ ಸೌಖ್ಯವನು ಸನಿಹದಿಂ ಸೂರೆಗೈವರಿನ್ನೇತರಾಸೆ 4 ಕುಂಟು ಜೀವವಿರುವನಕ ನೆಂಟರಿಷ್ಟರು ಹಣವ ಗಂಟನುಂಗಲು ಬರುತಲೆಂಟೆಂಟುದಿನವಿಹರು ಗಂಟು ತೀರಿದ ಬಳಿಕ ಪಾಪಪುಣ್ಯಗಳ ಹೊರತು [ಏ ನುಂಟು ಈಭವದ ನಂಟಿನಲಿ ಯದರಿಂದ 5 ಜೀವ ತಾ ಜನಿಪಂದು ರವೆಯಷ್ಟು ತರಲಿಲ್ಲ ಅವನಿಯಾ ಬಿಡುವಂದು ಜವೆಯಷ್ಟ ಹೊರಲಿಲ್ಲ ಭಾವಶುದ್ಧಿ ಬೇಕನಿಶ ಮಾವಿನಾಕೆರೆರಂಗನ ಸೇವಿಸಿದೊಡಾ ರಂಗ ಭವವೆಲ್ಲ ಕಳೆವಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹಣ್ಣು ಕೊಂಬುವ ಬನ್ನಿರಿ - ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆ ಬಾಳೆಹಣ್ಣುಅ ಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು 1 ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣುಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು 2 ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣುಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು 3
--------------
ಕನಕದಾಸ
ಆಕಳ ಕಾಯ್ದ ಗೋಕುಲವಾಸನುಆಕಳ ಕಾಯ್ದ ಗೋಕುಲವಾಸನನೇಕ ಗುಣನಿಧಿನಾಕೇಶವಿನುತಪುರದಲ್ಲಿದ್ದಂಥ ಕೇರಿಯ ಮಕ್ಕಳ ನೆರಹಿ ಯಾದವ ಪರಿವಾರವೆಲ್ಲನಳಿನಕೇತಕಿ ಎಳೆಯ ಮಾವಿನ ತಳಿಲ ವನದ ಒಳಗೆ ರಂಗನುತೊಂಡರೊಡಗೂಡಿಪುಂಡರೀಕಾಕ್ಷಗೋವಿಂದ ಕಾಳಿಯ ದಂಡೆಯಲ್ಲಿರಿಸಿಕಡು ತೃಷದಿ ಆ ಮಡುವಿನುದಕ ಕುಡಿದು ಗೋವುಗಳೆಲ್ಲ ನಡುಗಿ ಬೀಳಲುಹೊಕ್ಕ ಭರದಿ ದೇವಕಿ ಸುತನ ಸಿಕ್ಕಿಸಿಕೊಂಡು ಬಾಲಕೆ ಬಿಗಿಯಲುಇಂದಿರಾಪತಿ ಆನಂದದಿಂದಾಡಲು ಬಂದುಬೊಮ್ಮವಾಯುಉರಗಾಂಗನೆಯರ ಮೊರೆಯ ಲಾಲಿಸಿ ಕರುಣಿ ಅವರಿಗೆ ಗರುಡನ ಭಯಗರಳಭಯದಿ ಧರೆಗೆ ಬಿದ್ದಂಥ ತುರುಗಳಿಗೆಲ್ಲ ಸ್ಮರಣೆ ಬಪ್ಪಂತೆಮಂಗಳ ಮೂರುತಿ ಪೊಂಗೊಳಲೂದುತ್ತ ತಿಂಗಳಿನಂದದಿ
--------------
ಗೋಪಾಲದಾಸರು
ಏನು ಫಲ ಇದು ಏನು ಫಲಏನು ಫಲ ಇನ್ನೇನು ಫಲಪಬೇವಿನ ಮೂಲಿಕೆ ಬೆಲ್ಲವ ಸುರಿದರೆಹಾವಿಗೆ ಹಾಲೆರೆದಷ್ಟೆ ಫಲಮಾವಿನ ಮರದಡಿ ಗಾಯನ ಹಾಡಲುಸಾವಿನ ಮನೆಯೊಳಗತ್ತ ಫಲ1ಕೋಣನ ಮುಂದೆ ವೀಣೆಯ ನುಡಿಸಲುಮಾಣಿಕ್ಯ ಮರ್ಕಟಗಿತ್ತ ಫಲಶ್ವಾನನ ಬಾಲವ ನಳಿಗೆಯೊಳಿಟ್ಟರೆಹೀನ ಕುಲಜ ಮಡಿಯುಟ್ಟ ಫಲ2ಮೂರ್ಖಗೆ ಬುದ್ಧಿಯ ಮಾತನು ಪೇಳಲುಗೋರ್ಕಲ್ಲ ಮೇಲೆ ಮಳೆ ಹೊಯ್ದ ಫಲಊರ್ಕತಿ ಕಂಟಕನಾಗಿಹ ಮನುಜನುನೂರ್ಕಾಲ ಬದುಕಿದರೇನು ಫಲ3ಸೂಳೆಯ ಬಳಿಯಲಿ ಅಂತರ್ಯ ನುಡಿದರೆಗಾಳಿಗೆ ಕಸ್ತೂರಿ ಇಟ್ಟ ಫಲಕೋಳಿಯ ಕಾಲಿಗೆ ಗೆಜ್ಜೆಯ ಕಟ್ಟಲುನೀಲಿಯ ನೀರೊಳು ತೊಳೆದ ಫಲ4ಹಂದಿಯ ಕೊರಳಿಗೆ ಹಾರವ ಹಾಕಲುಅಂಧಗೆ ಕನ್ನಡಿ ಕೊಟ್ಟ ಫಲಮಂಧರಧರ ಗೋವಿಂದನೋಳ್ವೈರದಿಇಂzÀ್ರನು ಮಳೆ ಸುರಿದ ಫಲ5<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ ಪಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪಸಲಿಲಜೋದ್ಬವನವದನನಿಲಯಳೇಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |ತಳಿರ ಪೋಲುವ ದಿವ್ಯಪಾದ| ಚೆಲ್ವಪೆಂಡೆಯ ಭೇದ ||ನಲಿವಯುಗಳಜಂಘೆ| ಜಲಗುಳ್ಳೆಯಂತೆಜಾನು|ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ 1ದಿನಕರಕೋಟಿ ತೇಜದಿ ಹೊಳೆವ ಅನುಪಮವಾದ |ಕನಕವಸನದಿಂದಲಿ ಎಸೆವ | ಘನವಾದ ಜಘನಗ-ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||ತನು ಜಠರವುಜಾಹ್ನವಿಸುಳಿನಾಭಿಯು |ಘನಸ್ತನಯುಗಳ ಚಂದನಲೇಪಿತಳೆ 2ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |ಸೊಂಡಿಲಿನಂತೆ ಭುಜದಭಾರನಡೆವ ಒಯ್ಯಾರ ||ಮಂಡಿತವಾದ ಕಂಕಣ ತೋಳ್ಬಳೆಗಳು |ದುಂಡು ಹವಳ ಕೈಕಟ್ಟುಳ್ಳವಳೆ 3ನಸುನಗು ಮುಖವು ನಾಸಾಭರಣ | ಎಸೆವಕಪೋಲ|ಹೊಸಕುಂಡಲಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||ಶಶಿಸೂರ್ಯರ ಆಭರಣ ಸುಶೋಭಿತೆ |ಕುಸುಮಮುಡಿದ ಮೂರ್ಧಜವುಳ್ಳವಳೇ4ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |ಹಿಂಗದೆ ಭಕ್ತರ ಸಲಹುವಭಾರ| ಕಂಗಳ ಮನೋಹರ ||ರಂಗಪುರಂದರವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ 5
--------------
ಪುರಂದರದಾಸರು
ಪರಮದೇಶಿಕ ಮಾವಿನೋದಾ ದಿವ್ಯಪರಮಾರ್ಥಮುನು ವೇಗಾ-ಬೋಧಿಂಚರಾದಾ ಪಸುರಮುನೀಂದ್ರ ವಿಚಾರ-ಸೋಹಮಸ್ಮಿಧಿಯೇರಾವರಮುಲಡಗಿತಿನಿಚ್ಚಿ-ದಾರಿದೇರ್ಚುಕೋರಾ 1ನೀದು ಶೇವಕುಡೈತಿ-ನಿಚ್ಚಯಿಂಚಿನ ಚಾಲೂವಾದಿ ಭೀಕರು ಡೈನ-ವೈಷ್ಣವಾಗ್ರಜುಡೇ 2ಆಳ್ವಾರೆಂಬೇರುಮಾನಾರ್ ಜೀಯರ್ ಸ್ವಾಮುಲೆ ಗಾದಾತಾಳ್ವೋಯ ಚೂಡಿದಿ ಯನುಚು ಪಾಲಿಂಚಲೇದಾ 3ಮಂತ್ರಜ್ಞಾನ ರಹಸ್ಯಮಂತ್ಯಮಾದಿಗ ಜೂಪೆಅಂತರಂಗುಡೆ ಸ್ವತಂತ್ರಸ್ಯ ತಂತ್ರ 4ಯೇಲೆ ವಾಡನಿ ವಚ್ಚಿ-ಅಲಗಿಂಚಿನದಿಚ್ಚೆಕೋಲುಪೇಟೇಶ ಮಾಂಪಾ ಅತುಲ ಶ್ರೀರಾಮಾ 5
--------------
ತುಳಸೀರಾಮದಾಸರು
ಫಲಾಹಾರವನು ಮಾಡೊ ಪರಮಪುರುಷ ಭೂಲಲನೆಲಕ್ಷ್ಮೀ ಕಂದರ್ಪರ ಸಹಿತಪ.ಕದಳಿ ಕೆಂಬಾಳೆ ಕಿತ್ತಳೆ ಕಂಚಿ ಫಲಗಳುಬದರಿ ಬೆಳುವಲ ಜಂಬೀರ ದ್ರಾಕ್ಷಿಗಳು ||ಮಧುರದ ಮಾದಾಳ ಮಾವಿನ ಹಣ್ಗಳುತುದಿ ಮೊದಲಿಲ್ಲದ ಪರಿಪರಿ ಫಲಗಳ 1ಉತ್ತತಿ ಜಂಬುನಾರಂಗ ದಾಳಿಂಬವುಮುತ್ತಾದೌದುಂಬರ ಕಾರಿಯು ಕವಳಿ ||ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ 2ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯುಹಾಲು ರಸಾಯನ ಬೆಣ್ಣೆ ಸೀಯಾಳು ||ಮೂಲೋಕದೊಡೆಯ ಶ್ರೀ ಪುರಂದರವಿಠಲನೆಪಾಲಿಸೋ ನಿನ್ನಯ ಕರಕಂಜದಿಂದಲಿ 3
--------------
ಪುರಂದರದಾಸರು
ಹಣ್ಣು ಕೊಂಬುವ ಬನ್ನಿರಿ ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ.ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆಬಾಳೆಹಣ್ಣು ಅಪಸುತ್ತೇಳು ಲೋಕದಿಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯಮಾಧವನೆಂಬ ಅಚ್ಚಮಾವಿನ ಹಣ್ಣು1ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣುಸುಜನಭಕ್ತರೆಲ್ಲಕೊಳ್ಳಬನ್ನಿರಿ ಹಣ್ಣು2ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು
--------------
ಪುರಂದರದಾಸರು