ಒಟ್ಟು 66 ಕಡೆಗಳಲ್ಲಿ , 21 ದಾಸರು , 61 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಸೂರ್ಯಾಂತರ್ಗತ ಹರಿ ನಮೋ ನಮೋ ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ ಪ ತೋಯಜಾಕ್ಷನ ವಿಷ್ಣು ನಮೋನಮೋ ಜೀಯ ಪಾಲಿಸುದೇವ ನಮೋನಮೋ ಮಮಬಿಂಬ ಅ.ಪ ಆನಂದ ಪರಿಪೂರ್ಣ ನಮೋನಮೋ ಏನೆಂಬೆ ಪರಮೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ಏನೆಂಬೆ ಪರದೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ 1 ನಾಲ್ಕರು ನಿಜರೂಪಿ ನಮೋನಮೋ ಕಾಲಾದಿಗಳ ನಾಳು ನಮೋನಮೋ ಏಳೆರಡು ಜಗಪಾಲ ನಮೋನಮೋ ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ 2 ಸರ್ವಾಂಗರ್ಬಹಿವ್ಯಾಪ್ತ ನಮೋನಮೋ ಸರ್ವಾಶ್ರಯನೆಗೋಜ ನಮೋನಮೋ ದೇವಾದಿದೇವ ವಿಭು ನಮೋನಮೋ ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ 3 ಸರ್ವದೋಷವಿದೂರ ನಮೋ ನಮೋ ಸರ್ವಸುಗುಣ ಪರಿಪೂರ್ಣ ನಮೋನಮೋ ಜೀವ ಜಗದಿಂದ ಬಿನ್ನ ನಮೋ ನಮೋ ಶ್ರೀ ವಿಧೀರ ಪರಿಪಾಲ ನಿಸ್ಸೀಮ 4 ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ ತುಷ್ಠಿ ಪುಷ್ಠಿಯ ನೀಡು ನಮೋನಮೋ ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ ದೃಷ್ಠಿ ಬೀರುತ ಬೇಗ ಕಾಣಿಸೈ ತವರೂಪಮೋಕ್ಷದನೆ 5
--------------
ಕೃಷ್ಣವಿಠಲದಾಸರು
ಹರಿ ಹರಿ ಹರಿ ಹರಿಯಂದು ನೆನೆದವನೆ ಧನ್ಯ | ಹರಿಯ ಮರದವನೇ ಮೂರು ಲೋಕದೋಳಾಮಾನ್ಯ ಪ ಹರಿಯ ಬಲಗೊಂಡಾ ಪ್ರಹ್ಲಾದಾ ಸುಖಿಯಾದಾ | ಹರಿಯ ಕೂಡ ಮರೆತು ಹಿರಣ್ಯಕನು ದುಃಖಿಯಾದಾ 1 ಹರಿಶರಣನಾಗಿ ವಿಭೀಷಣನು ನೆಲೆಗೊಂಡಾ | ಹರಿಗೆ ಬಾಗದವೆ ದಶಾನನನು ಕಲುಷವುಂಡಾ 2 ಹರಿಯ ನಂಬಿದ ಪಾಂಡವರು ಕೀರ್ತಿ ಧರಿಸಿದರು | ಹರಿಯನ್ನದೆ ವ್ಯರ್ಥ ಕೆಟ್ಟರು ನೋಡು ಕೌರವರು 3 ಗುರು ಮಹಿಪತಿ ಸ್ವಾಮಿ ಭಕ್ತ ಸಹಕಾರಿ | ದುರುಳ ದುರ್ಮಾರ್ಗದಲಿ ನಡೆದ ದುಷ್ಟ ಜನವಿದಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತದಿಂದ ಪೊರೆಯೆನ್ನ | ವಿತತ ಮಹಿಮ ಹರಿಯೇ ಹಿತ ಅಹಿತವೆರಡನ್ನು | ಸಹಿಸುವಂತೇ ಪ ಅತಿ ದಯಾಪರನೆಂದು | ಖತಿದೂರನೆಂದೆನುತಶ್ರುತಿ ನಿಚಯ ಸಾರುತಿದೆ | ಗತಿ ಪ್ರದನೆ ದೇವಾ ಅ.ಪ. ವೇದ ವೇದ್ಯನೆ ದೇವ | ಆದ್ಯಂತ ರಹಿತನೇಕಾದುಕೋ ಎನ್ನನು | ಮೋದಗಳನಿತ್ತೂ ||ಸಾಧನ ಸುಮಾರ್ಗದಲಿ | ಹಾದಿಯನು ಕಾಣದಲೆಬಾಧೆಗೊಳಗಾಗಿಹನ | ಆದರಿಸು ದಯವನಧೀ 1 ಪ್ರಾಣಪತಿಯೇ ಎನ್ನ | ಪ್ರಾಣಗಳು ವಶವಿಲ್ಲಧ್ಯಾನ ಮಾಡುವೆನೆನ್ನ | ಮನನಿಲ್ಲಧ್ಹರಿಯೇ ||ಜ್ಞಾನ ಕರ್ಮೇದ್ರಿಗಳು | ಏನೊಂದು ನಿನ್ನಯಾಧೀನವಿರಲೂ ನಾನು | ಏನು ಮಾಡಲು ಸಾಧ್ಯ 2 ಗೋವರ್ಧನೋದ್ಧರನೆ | ಗೋವುಗಳ ಪರಿಪಾಲಕಾವ ಕರುಣೀ ನಮ್ಮ | ದೇವರ ದೇವಾ ||ಗೋವಿದಾಂಪತಿ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಾರು | ಕಾವರನು ಕಾಣೆನಯ್ಯಾ 3
--------------
ಗುರುಗೋವಿಂದವಿಠಲರು
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ 1 ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು 2 ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ |ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ 3
--------------
ಜ್ಞಾನಬೋದಕರು
126-1ದ್ವಿತೀಯಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡುವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1ತಿರುಪತಿಯಲಿ ಹನುಮದಾದಿ ಲಕ್ಷ್ಮಣಸೇವ್ಯಶ್ರೀರಾಮಸೀತಾ ಸಮೇತನಿಗೆ ನಮಿಪೆಉರುಗೇಶಶಯ್ಯ ಶ್ರೀ ಗೋವಿಂದರಾಜನಿಗುಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2ಒಂದು ಗಾವುದ ದೂರದೊಳಗೇವೆ ಇರುತಿಹುದುಪದ್ಮ ಸರೋವರವು ತತ್ತೀರದಲ್ಲಿವೇದವಿಗ್ರಹ ಘೃಣಿ ಆದಿತ್ಯ ಸೂರ್ಯನುನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3ಸಮೀಪದಲಿ ದೊಡ್ಡ ಆಲಯವಿಹುದಲ್ಲಿಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣರಾಮನ ಸಹಕುಳಿತು ವಂದಿಸುವ ಸಜ್ಜನರಕ್ಷೇಮಲಾಭವ ಸದಾ ಪಾಲಿಸುತಿಹನು 4ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜಲಕ್ಷ್ಮೀಸಮೇತನು ಕಾರುಣ್ಯಶರಧಿಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿವಿಷ್ಣು ಭಕ್ತರ ಸದಾಕಾಯುತಿಹನು 5ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿವನಜಆಸನದಲ್ಲಿ ಶ್ರೀ ಪದ್ಮಾವತಿಯುದೀನ ಕರುಣಾಕರಿಯುವರಅಭಯನೀಡುತ್ತಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿಪಾದ್ಯಳು ಪದ್ಮಾವತಿ ಕಮಲವಾಸಿನಿಯುಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7ವೇಂಕಟಾಚಲದ ಅಡಿವಾರದಲಿ ಇರುತಿದೆಅಕಳಂಕ ಸುಪವಿತ್ರ ಕಪಿಲತೀರ್ಥಲಿಂಗ ಆಕಾರದಲಿ ಕಪಿಲೇಶ್ವರ ಇಹನುಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿಗೋಪುರಾಲಯದಲ್ಲಿ ನೃಸಿಂಹನ ನಮಿಸಿಶ್ರೀಪವರಾಹವೇಂಕಟನ ಕಾಣಿಸುವಂತಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9ಸ್ವಾಮಿವೇಂಕಟನ ಆಲಯದ ಗೋಪುರಕಂಡುಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂನಮಿಸುವೆ ಅಶ್ವತ್ಥನಾರಾಯಣಗು 10ಕಪಿಲೇಶ್ವರಾನುಗ್ರಹದಿ ಹನುಮಂತನಅ ಪವನಜನ ದಯದಿ ಭೂಧರಾ ವರಾಹನಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆದೇವ ದೇವಶಿಖಾಮಣಿಕೃಪಾನಿಧಿ ಸುಹೃದನವರತ್ನ ಖಚಿತ ಆಭರಣ ಕಿರೀಟಿಯುಶಿವದವರಅಭಯಕರಕಟಿ ಚಕ್ರಿಶಂಖಿ12ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡುಪದುಮ ಸರೋವರಾಲಯಗಳ ಐದಿದರು 13ವೇಂಕಟಗಿರಿಯಿಂದ ಕರ್ನೂಲು ಗದ್ವಾಲಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿಭಕುತರಿಗೆ ದರ್ಶನ ಉಪದೇಶ ಕೊಟ್ಟರುಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸುಧೈರ್ಯವು ನಿರ್ಭಯತ್ವವು ಆರೋಗ್ಯವುದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 ಪ|| ಇತಿ ದ್ವಿತಿಯ ಕೀರ್ತನೆ ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಚೀನ ಕರ್ಮವು ಬಿಡಲರಿಯದುಯೋಚನೆಯ ಮಾಡಿ ನೀ ಬಳಲಬೇಡ ಪ.ಮುನ್ನಮಾಡಿದಕರ್ಮ ಬೆನ್ನಟ್ಟಿ ಬರುತಿರಲುತನ್ನಿಂದ ತಾನೆ ತಿಳಿಯಲರಿಯದೆಇನ್ನು ದೇಹವನು ಆಶ್ರಯಿಸಿ ಫಲವೇನುಉನ್ನತ ಹರುಷದಲಿ ಮನದಿ ಯೋಚಿಸುವ 1ಲೋಕಾದಿ ಲೋಕಗಳ ತಿರುಗುವರವಿ ರಥಕೆಏಕಗಾಲಿಗೆ ಏಳು ಕುದುರೆಕಟ್ಟಿಆಕಾಶ ಮಾರ್ಗದಲಿ ತಿರುಗುವ ಅರುಣನಿಗೆಬೇಕಾದ ಚರಣಗಳ ಕೊಡಲಿಲ್ಲ ಹರಿಯು 2ಸೇತುವೆಯುಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯನೆ ಮಾಡಿ ರಾವಣನ ಗೆದ್ದುಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು 3ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನುಹೊತ್ತುಕೊಂಡು ಇದ್ದ ಜಗವರಿಯಲುಅತ್ಯಂತ ಸೇವಕನೆಂದು ಮೂಗಿನಡೊಂಕುಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ 4ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದುಭ್ರಾಂತನಾಗದೆ ಬಯಕೆಗಳನುಜರಿದುಶಾಂತ ಮೂರುತಿಸಿರಿ ಪುರಂದರವಿಠಲನ
--------------
ಪುರಂದರದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಜಯೀಂದ್ರ ತೀರ್ಥರ ಚರಿತೆ110ಪ್ರಥಮ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿ ಯಿಂ ಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಹಂಸ ಲಕ್ಷೀಮಶ ನಾಭಿಭವ ಸನಕಾದಿಮಹಂತರ ಸೂರಿಗಳಗುರುಪರಂಪರೆಯಮಹಾ ಪುರುಷೋತ್ತ ಮದಾಸ ಶ್ರೀಮಧ್ವವನದೃಹ ಪಾದಗಳಲ್ಲಿ ನಾ ಶರಾಣು ಶರಣಾದೆ 1ಅರವಿಂದನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರವಿದ್ಯಾಕುಶಲ ಶ್ರೀ ವಿದ್ಯಾದಿರಾಜರಜಯೀಂದ್ರರ ಚರಣಂಗಳಲಿ ನಾ ಶರಣು 2ಕೋವಿದಶಿರೋಮಣಿ ಕವೀಂದ್ರ ವಾಗೀಶರುಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರದೇವ ಹರಿಪ್ರಿಯ ಜಿತಾಮಿತ್ರ ಯತಿವರರು ರಘುನಂದನದೇವಿ ತುಳಸೀಪತಿಯ ಒಲಿಸಿಕೊಂಡ ಸುರೀಂದ್ರರು 3ಈ ಸರ್ವ ಗುರುಗಳಚರಣಕಮಲಗಳಲ್ಲಿನಾ ಸರ್ವದಾ ಶರಣು ಶರಣೆಂಬೆ ಮುದದಿವ್ಯಾಸಮುನಿ ಪ್ರಿಯಮಿತ್ರ ಶ್ರೀಸುರೇಂದ್ರರಕರಸರಸಿಜದಿಜಾತ ವಿಜಯೀಂದ್ರರಲಿ ಶರಣು ನಾ 4ವಿದ್ಯಾಧಿರಾಜ ಸುತ ರಾಜೀಂದ್ರತೀರ್ಥರಪದ್ಮ ಕರದುದಯ ಜಯಧ್ವಜರಹಸ್ತವೃತತಿಜೋತ್ಪನ್ನ ಪುರುಷೋತ್ತಮ ಮಹಾಮಹಿಮಯತಿಕುವರ ಸೂರಿವತ ಬ್ರಹ್ಮಣ್ಯತೀರ್ಥ 5ಬ್ರಹ್ಮಣ್ಯತೀರ್ಥಾಖ್ಯ ಖಗಕರದಿ ಅರಳಿತುಮಹಿಯಲಿ ಪ್ರಖ್ಯಾತ ವ್ಯಾಸಮುನಿಅಬ್ಜಬಹುಮಂದಿ ಈ ಸುಮನ ಪರಿಮಾಳಾಕರ್ಷಿತರುಬ್ರಹ್ಮವಿದ್ಯಾ ಮಕರಂದದಿ ಮೋದಿಸಿದರು 6ಪೂರ್ವಜನ್ಮದಿ ನಾರದರಿಂದ ಉಪದಿಷ್ಟವ್ಯಾಸರಾಜರು ಶ್ರೀಪಾದರಾಜರಲಿಸರ್ವವಿದ್ಯಾ ಕಲಿತು ವಾದಿಗಜಹರಿ ಆಗಿತತ್ವ ಬೋಧಿಸಿ ಸಜ್ಜನರ ಕಾಯ್ದಿಹರು 7ಋಜುಮಾರ್ಗದಲಿ ಇರುವ ಯತಿವಟು ಗೃಹಸ್ಥರುನಿಜಭಕ್ತಿ ಶ್ರದ್ಧೆಯಿಂದಲಿ ಶ್ರೀವ್ಯಾಸ-ರಾಜರಲಿ ವಿದ್ಯಾಭ್ಯಾಸ ಮಾಡಲು ಆಗಪ್ರಜಾಪೇಕ್ಷೆ ಭಿನೈಸಿದ ವಿಪ್ರಶಿಷ್ಯ 8ಆವಿಪ್ರೋತ್ತಮನಿಗೆ ಪ್ರಜಾ ಅನುಗ್ರಹ ಮಾಡಿಪ್ರವರ ಪುತ್ರನ ತಮ್ಮ ಮಠಕ್ಕೆ ಕೊಡಬೇಕುಅವರಜರು ಸಂತತಿ ಅಭಿವೃದ್ಧಿಗೆ ಇರಲುಈ ವಿಧದಿ ಹೇಳಿದರು ಶ್ರೀ ವ್ಯಾಸಮುನಿಯು 9ಕೊಟ್ಟವರ ತಪ್ಪದೇ ವಿಪ್ರಪತ್ನಿಗೆ ಶಿಶುಹುಟ್ಟುವ ಸಮಯದಲಿ ಗುರುಗಳು ಕೌಶೇಯತಟ್ಟೆಯ ಕಳುಹಿಸಿ ಭೂಸ್ಪರ್ಶ ಇಲ್ಲದÀಲೇಹುಟ್ಟಿದ ಮಗುವನ್ನು ಹಿಡಿಯ ಹೇಳಿದÀರು 10ಶ್ರೀಮಠಕ್ಕೆ ವಿಪ್ರನು ಆ ಬಾಲಕನನ್ನುನೇಮಿಸಿದ ರೀತಿಯಲಿ ಒಪ್ಪಿಸಿ ಅಲ್ಲಿರುಕ್ಮಿಣಿನಾಥ ವಿಠಲನ ಪೆಸರಿಂದವಿಮಲವಟು ವಿದ್ಯಾರ್ಥಿ ಸನ್ಯಾಸಿ ಆದ 11ವಿಟ್ಠಲಾಚಾರ್ಯನು ಶ್ರೀ ವ್ಯಾಸರಾಜರಲಿಶಿಷ್ಠವಿಲ್ಲದೇ ಅಷ್ಟು ಶಾಸ್ತ್ರ ಕಲಿತು ಚತುಃಷಷ್ಟಿ ವಿದ್ಯಾದಲ್ಲಿ ಸಹನಿಪುಣನಾಗಿಅಷ್ಟ ದಿಕ್ಕುಗಳಲ್ಲಿ ಪ್ರಖ್ಯಾತನಾದ 12ಇದರಲ್ಲೇನು ಆಶ್ಚರ್ಯ ಇಲ್ಲ ಸ್ವಾಭಾವಿಕವುದೇವತೆಗಳು ಧರಣಿಯಲ್ಲಿ ಜನಿಸಿದರೂಶಕ್ಯಾತ್ಮನ ಸರ್ವ ಅಣಿಮಾದಿ ಐಶ್ವರ್ಯಇದ್ದು ಸುವ್ಯಕ್ತ ವಾಗುವವು ಗುರುಕೃಪದಿ 13ಈ ವಿಠಲನೇವೇ ವಿಜಯೀಂದ್ರ ನಾಮದಲಿಭುವಿಯಲ್ಲಿ ಬೆಳಗಿದನು ಸುರರಲ್ಲಿ ಶ್ರೇಷ್ಠದೇವತಾ ಕಕ್ಷದವರಾದ ಶ್ರೀವ್ಯಾಸಮುನಿಪ್ರವರ ಸುರಗಣ ವಾದಿರಾಜರ ಸಮೇತ 14ಸರಸಿಜಾಸನಪಿತ &ಟಜquo; ¥ಸÀನ್ನ ಶ್ರೀ ನಿವಾಸನು&ಡಿಜquo;ಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ15 ಪ-ಇತಿ ಪ್ರಥಮ ಕೀರ್ತನೆ ಸಂಪೂರ್ಣಂ-ದಿತೀಯ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂದ ಶರಣಾದೆಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಶ್ರೀಮನೋಹರ ರಂಗನಾಥನ ಸೇವಿಸಲುಶ್ರೀಮಠ ಜರುಗಿತು ರಂಗ ಕ್ಷೇತ್ರಕ್ಕೆಸೋಮಪುಷ್ಕರಿಣಿಯಲಿ ಕಾವೇರಿ ಮಧ್ಯದಲಿಕಾಮಿತಪ್ರದ ಶ್ರೀಶರಂಗ ಇರುತಿಹನು 1ಕಾವೇರಿ ತೀರದಲ್ಲಿ ಶ್ರೀತುಳಸಿವನ ಬೆಳಸೆಆವನಸಮೀಪದಲಿ ವ್ಯಾಸಮುನಿ ಮಠವುದುರ್ವಾದ ಖಂಡನ ಸಿದ್ಧ್ದಾಂತ ಸ್ಥಾಪನದೇವತಾರ್ಚನೆ ಹರಿಕೀರ್ತನೆ ವೈಭವವು 2ಒಂದು ದಿನ ಶ್ರೀ ವ್ಯಾಸರಾಯರು ನೋಡಿದರುತಂದು ಪೂಜೆಗೆ ಇಟ್ಟ ತುಳಸೀದಳಗಳುಇಂದಿರಾಪತಿಗರ್ಪಿತವಾದ ನಿರ್ಮಾಲ್ಯಎಂದು ತಿಳಕೊಂಡರು ವಿಚಾರ ಮಾಡಿದರು 3ತಿಳಿಯ ಬಂತು ಅಂದು ಪ್ರಾತಃಕಾಲದಲಿತುಳಸೀಗೆ ಬಂದುರು ಸುರೇಂದ್ರ ಮಠದವರುತುಳಸಿ ಕೊಡುವುದಿಲ್ಲ ಎನೆ ಪೋದರು ಆ ಬಾಹ್ಮಣರುಪೇಳಿದರುಗುರುಸುರೇಂದ್ರರಿಗೆವೃತ್ತಾಂತ4ಭಾವುಕ ಶಿರೋಮಣಿವಿಜ್ಞಾನಸೂರಿಗಳುತಾವು ಕುಳಿತಲ್ಲೇ ಸುರೇಂದ್ರ ಸ್ವಾಮಿಗಳುಭವಜನಯ್ಯನಿಗೆವನತುಳಸಿ ಪೂರಾವುಭಾವಶುದ್ಧದಿ ಅರ್ಪಿಸಲು ಹರಿಕೊಂಡ 5ಶ್ರೀ ಸುರೇಂದ್ರರ ಈ ಮಹಿಮೆಯ ಶ್ಲಾಘಿಸಿಬೇಗವ್ಯಾಸರಾಯರು ತಾವೇವೆ ಪೋಗಿಕುಶಲ ಸಂಭಾಷಿಸಿ ತಮ್ಮ ಮಠಕ್ಕೆ ಬಂದುಶ್ರೀಶಾರ್ಚನೆ ಚರಿಸಲು ಆಹ್ವಾನ ಮಾಡಿದರು 6ಸೂರಿವರ ರಾಜೇಂದ್ರ ರವೀಂದ್ರರುಎರಡು ಈ ಗುರುಗಳಿಂದಲಿ ಬಂದ ಮಠಗಳುಎರಡು ಸ್ವಾಮಿಗಳು ಶ್ರೀವ್ಯಾಸ ಸುರೇಂದ್ರರಹರಿಪೂಜೆ ವೈಭವವು ವರ್ಣಿಸಲು ಅಶಕ್ಯ 7ಥಳಥಳಿಪ ಬ್ರಹ್ಮವರ್ಚಸ್ಸು ಮುಖಕಾಂತಿಯುಎಲ್ಲ ಶಾಸ್ತ್ರಜ್ಞಾನ ಪ್ರವಚನ ಪಟುತ್ವಶೀಲತ್ವ ಸೌಲಭ್ಯ ಬಾಲ್ಯ ಚಟುವಟಿಕೆಯುಸೆಳೆದವು ಸುರೇಂದ್ರರ ವಿಠಲನ ಬಳಿಗೆ 8ರಮೆಯರಸನ ಪೂಜೆತತ್ವಬೋಧÀವು ಮಾಳ್ಪತಮ್ಮ ಸಂಸ್ಥಾನದ ಉನ್ನತ ಸ್ಥಾನಕ್ಕೆತಮ್ಮ ನಂತರ ವಿಜಯೀಂದ್ರರೇ ಸರಿ ಎಂದುನೇಮಿಸಿದರು ಮನದಿ ಸುರೇಂದ್ರ ಗುರುವು 9ಅಪರೋಕ್ಷದಲು ಈವಿಠಲನ ಯೋಗ್ಯತೆಆ ಪುಣ್ಯ ಶ್ಲೋಕರು ಅರಿತು ತಾವುಅಪೇಕ್ಷಿಸುವಂತ ವಸ್ತು ಬÉೀಕೆಂದರುಶ್ರೀಪನ ಇಚ್ಫೆಯನರಿತು ವ್ಯಾಸರಾಯರಲ್ಲಿ 10ಕೇಳುವ ವಸ್ತು ಬಿಟ್ಟು ಬೇರೆ ಏನೂ ಕೊಡುವೆಕೇಳÉಲಾರೆನು ಬೇರೆ ಕೊಳ್ಳೆನು ಬೇರೆಇಲ್ಲ ವೆಂದರೆ ಊಟ ಮಾಡಿಕೊಡುತ್ತÉೀನೆ ಈಲೀಲಾ ವಿನೋದ ಮಾತುಗಳು ಕ್ರೀಡಾರ್ಥ 11ವಿಮಲ ವಿರಜಾ ಸಮ ಕಾವೇರಿ ಮಧ್ಯದಲಿರಮಾಯುಕ್ ರಂಗನಾಥನು ಹನುಮಸೇವ್ಯರಾಮ ಪೂಜಿಸಿದಂಥ ರಾಮನು ಪಟ್ಟಾಭಿರಾಮ ಶ್ರೀ ಗೋಪಾಲಕೃಷ್ಣನ ಮುಂದೆ 12ಶ್ರೀಶನ ಈ ಬಹುರೂಪ ಸನ್ನಿಧಿಯಲ್ಲಿಭೂಸುರ ವಿದ್ವಾಂಸರ ಸಭೆ ಮಧ್ಯದಲಿವ್ಯಾಸಮುನಿದತ್ತ ವಿಠಲನ ಸುರೇಂದ್ರರುಸುಸ್ವಾಗತದಿಂದ ಸ್ವೀಕಾರ ಮಾಡಿದರು 13ವಿಜಯೀಂದ್ರ ತೀರ್ಥ ಶುಭತಮ ನಾಮವಿತ್ತರುವಿಜಯಶೀಲರಾಗಿ ವಿಜಯೀಂದ್ರರುನಿಜತತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತದುರ್ಜನ ದುರ್ವಾದ ಚೂರ್ಣ ಮಾಡಿದರು 14ಬ್ರಹ್ಮ ದಶರಥ ರಾಮಚಂದ್ರನು ಅರ್ಚಿಸಿದಭೂಮಾದಿ ಗುಣಗಣಾರ್ಣವ ದಯಾನಿಧಿಯುಕಮಲೆ ಸೀತಾಸೇವ್ಯ ಮೂಲರಾಮನ್ನಸಮ್ಮುದದಿ ಶ್ರೀವಿಜಯೀಂದ್ರರು ಪೂಜಿಸಿದರು 15ಸರಸಿಜಾಸನಪಿತ &ಟಜquo; ಪ್ರಸÀನ್ನ ಶ್ರೀನಿವಾಸ&ಡಿಜquo; ನುಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ16-ಇತಿದ್ವಿತೀಯಕೀರ್ತನೆ ಸಂಪೂರ್ಣಂ-ವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿಹರಿದ್ವೇಷಿಯ ಗೆದ್ದು ಅವನ ಮಠ ತೋಟಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡಧೀರ ವಿಜಯೀಂದ್ರರ ಚರಣಕಾನಮಿಪೆ 1ಸಾರಂಗಹಸ್ತವರಾಹಚಕ್ರಪಾಣಿ ರಾಮಮಂಗಳಾಂಬಿಕೆಯುತ ಕುಂಭೇಶ್ವರತುಂಗಮಹಿಮಳು ಕಾವೇರಿ ಸುಧಾಸರಸ್ಸುಈ ಕುಂಭಕೋಣದ ಮಹಿಮೆ ಏನೆಂಬೆ 2ಸಂಕ್ರಂದಸ್ಮರಮೊದಲಾದ ಜಗತ್ತಿಗೆ ಗುರುವಾದಮಂಗಳಾಂಬಿಕೆ ಕುಂಭೇಶ್ವರರ ನೃಹರಿ ಸಾನಿಧ್ಯರಭಂಗವಿಲ್ಲದೆ ಪ್ರತಿದಿನ ಸೇವಿಸುವರುಸುರೇಂದ್ರಮಠ ಗುರುವು ವಿಜಯೀಂದ್ರರು 3ಭಸ್ಮಧರನು ಸರ್ವೊತ್ತ ಮನೆಂದು ವ್ಯರ್ಥದಿದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿಅಪ್ಪಯ್ಯನ ಮತವ ತೃಣದಂತೆ ಮಾಡಿದತತ್ವವಾದ ಅಸಿಯಿಂದ ವಿಜಯೀಂದ್ರ ಜಯಶೀಲ 4ಸ್ವಪಕ್ಷ ಪರಪಕ್ಷ ಸರ್ವವಿದ್ವಾಂಸರುಈ ಪುಣ್ಯಶ್ಲೋಕರ ಮಹಿಮೆ ಕೊಂಡಾಡಿತಪ್ಪದೇ ಆಗಾಗ ಬಂದು ಮರ್ಯಾದೆಅರ್ಪಿಸಿ ಪೋಗುವರು ಕೃತಕೃತ್ಯಮನದಿ 5ಬಾದರಾಯಣಿ ಮಾಧ್ವ ಗ್ರಂಥಗಳನುಸರಿಸಿವೇದ ವಿರುದ್ಧ ಮತ ಖಂಡನ ಗ್ರಂಥಗಳುಚತುರೋತ್ತರ ಶತಮೇಲ್ ತತ್ವ ಬೋಧಕವಾದಗ್ರಂಥಗಳ ರಚಿಸಿದರು ಉತ್ತಮ ರೀತಿಯಲಿ 6ಅಂಬುಶಾಯಿ ಸರ್ವ ಮುಕ್ತಾಮುಕ್ತ ಆಶ್ರಯನುಅಂಭ್ರಣೀಪತಿ ಶ್ರೀಮನ್ನಾರಾಯಣಗಂಭೀರ ಶಬ್ದಾರ್ಥ ನಿರ್ವಚನ ಮಾಡಿಹರುಅಂಬುಜನಾಭ ಒಲಿವ ಪಠಿಸಿದರೆ 7ಮಧ್ವಮತ ಪರಿಮಳ ಸುಗಂಧ ಭುವಿಯಲಿ ಹರಡೇಸುಧಾದಿ ಉದ್ಗ್ರಂಥ ಪ್ರವಚನದಿ ಪಟುವುಸುಧೀಂದ್ರ ಯತಿವರಗೆ ಸಂಸ್ಥಾನ ಕೊಟ್ಟರುಮಧ್ವಮತೋದ್ಧಾರ ವಿಜಯೀಂದ್ರ ಗುರುರಾಟ್ 8ಸದ್ಭಕ್ತಿಯಿಂಶುಚಿ ಅಧಿಕಾರಿ ಇವರ ನರಸಿಂಹಾಷ್ಟಕವಪಠಿಸೆ ಭೂತ ಪ್ರೇತ ಪಿಶಾಚಾದಿಗಳ ಉಚ್ಫಾಟನವುಚೋರ ವ್ಯಾಧಿ ಮಹಜ್ವರ ಭಯಾದಿ ಕಷ್ಟಗಳು ನಿವಾರಣಸಂಧ್ಯಾಕಾಲ ಪಠನದಿ ಸದ್ಭಕ್ತಿಗೆ ಒಲಿದು ಕಾಯ್ವ ಶ್ರೀ ನರಸಿಂಹ 9ಐವತ್ತು ಮೇಲೈದು ವರ್ಷ ಸಂಸ್ಥಾನದಿನಿರ್ವಿಘ್ನ ಪೂಜಾ ಶಿಷ್ಯೋ¥ದೇಶದೇವ ಲಕ್ಷೀಶಗೆ ತಮ್ಮ ಸೇವೆ ಸಮರ್ಪಣೆ ಮಾಡಿಪವಿತ್ರತಮ ಸುಸಮಾಧಿಯನ್ನು ಹೊಂದಿದರು 10ಶಾಲಿವಾಹನಶಕ ಹದಿನೈದು ನೂರು ಹದಿನಾಲ್ಕನೇ ವರ್ಷ ಜೇಷ್ಠಬಹುಳಶೀಲತಮ ಭವದಿತ್ರಯೋದಶಿ ದಿನದಿಮಾಲೋಲ ನಾರಾಯಣಪುರಯೈದಿದರು 11ಮತ್ತೊಂದು ಅಂಶದಲಿ ಕುಳಿತು ವೃಂದಾವನದಿಉತ್ತಮ ಶ್ಲೋಕ ನಾರಾಂiÀiಣನ ಧ್ಯಾನಿಸಿಒಲಿದು ಸೇವಿಸುವರಿಗೆ ಸÀತತ ಔದಾರ್ಯದಲ್ಲಿಇತ್ತು ವರಗಳ ಸದಾ ಸಂರಕ್ಷಿಸುತಿಹರು 12ಮೂಲರಾಮನ ವಿಮಲ ಭಾವದಲಿ ಅರ್ಚಿಸಿಕುಳಿತು ವೃಂದಾವನದಿ ಧ್ಯಾನಿಸುವ ಇವರುಮೂಲ ವೃಂದಾವನ ಮಾತ್ರದಿ ಅಲ್ಲದೇಅಲ್ಲಲ್ಲಿ ಇವರು ಮೃತಿಕೆಯಲ್ಲಿಯೂ ಇಹರು 13ವಿಜಯೀಂದ್ರರಾಯರ ವೃಂದಾವನದಲಿವಿಜಯಸಖ ಸರ್ವ ಜಗಜ್ಜನ್ಮಾದಿಕರ್ತಅಜಭವಾದಿಗಳಿಂದಸೇವ್ಯಶ್ರೀನರಹರಿ ಇಹನುವಿಜಯೀಂದ್ರಗುರುಅಂತರ್ಯಾಮಿವಾಂಛಿತಪ್ರದನು14ಶ್ರೀಶನ ಸಾನಿಧ್ಯ ಪೂರ್ಣ ಇರುವುದರಿಂದಶ್ರೀಶನೊಲಿಮೆ ಪೂರ್ಣಪಾತ್ರ ಇವರಲ್ಲಿಶ್ರೀ ಸುಧೀಂದ್ರಾದಿಗಳು ದೇವವೃಂದದ ಜನರುಭೂಸುರರು ಪ್ರತಿದಿನ ಬಂದು ವಂದಿಪರು 15ವೃಂದಾವನ ದರ್ಶನ ಸೇವೆ ಪಾದೋದಕಕುಂದುಕೊರತೆ ಇರುವ ಧಾರ್ಮಿಕ ಇಷ್ಟದವುಎಂದಿಗೂ ಎನ್ನ ಕುಂದುಗಳ ಎಣಿಸದೆಬಂದು ಪ್ರತಿಕ್ಷಣ ಕಾಯುತಿಹರು ಶರಣು ಶರಣಾದೆ 16ವಿ ಎಂದರೆ ವಿಠಲ ಜ್ಞಾನಮುದವೀವಜ ಎಂದರೆ ಜಯವು ಪುಟ್ಟು ಸಾವಿಲ್ಲಯೀ ಎಂದರೆ ಜ್ಞಾನಕರ್ಮ ಪೂಜಾಫಲವುಇಂದ್ರ ಎಂದರೆ ಐಶ್ಚರ್ಯ ಸುಖವೀವ 17ಸಿಂಧೂರವರದ ಶ್ರೀಕರ ಪುರುಷೋತ್ತಮಬಿಂದುಮಾಧವ ಶ್ರೀಧರ ರಾಮಚಂದ್ರಸೈಂಧವಾಸ್ಯನು ಅಚ್ಯುತಾನಂತ ಗೋವಿಂದಎಂದಿಗೂ ಎಮ್ಮನು ಕಾಯ್ವ ಗುರುಚರಿತೆ ಪಠಿಸೆ 18ಅಂಬರೀಷ ರಕ್ಷಕನು ಅಜಾಮಿಳ ವರದನುಕಂಬದಲಿ ತೋರಿ ಪ್ರಹ್ಲಾದನ್ನ ಕಾಯ್ವವನುಈ ವೃಂದಾವನ ಗುರುಚರಿತೆ ಪಠಿಸುವರಿಗೆಸೌಭಾಗ್ಯವೀವನು ಸುಧಾಮಗೊಲಿದವನು 19ನಾರಾಯಣವಾಸುದೇವ ಸಂಕರುಷಣಪ್ರದ್ಯುಮ್ನ ಅನಿರುದ್ಧ ಲಕ್ಷ್ಮೀ ಸಮೇತವರವಾಯು ಭಾರತೀ ಸುರವೃಂದ ಸಹಿತಇರುತಿಹ ವಿಜಯೀಂದ್ರರಲಿ ಅಭಯವರದ 20ಸೌಂದರ್ಯಸಾರ ಜಗದೇಕವಂದ್ಯನು ಭೈಷ್ಮೀಸತ್ಯಾಸಮೇತವರಅಭಯದ ಅಜಿತಇಂದಿರಾಪತಿ ಕೃಷ್ಣಗರ್ಪಿತ ಈ ಗುರುಚರಿತೆಸುದರ್ಶನ ಕಂಬುಧರ ಅಖಿಲಪ್ರದ ಹರಿಗೆ 21ಸರಸಿಜಾಸನಪಿತ &ಟಜquo; ಪ್ರಸನ್ನ ಶ್ರೀ ನಿವಾಸ &ಡಿಜquo; ನುಬರೆಸಿದ ಶ್ರೀ ಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ128ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿನಾ ಶರಣು ಎನ್ನ ಪಾಲಿಪರು ಎಡಬಿಡದೆಅಸಮ ಅನುಪಮ ಸರ್ವಗುಣ ಗುಣಾರ್ಣವಅನಘಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪಹಂಸನಾಮಕ ವಿಷ್ಣುವನರುಹಾಸನಸನಕದೂರ್ವಾಸಮೊದಲಾದ ಗುರುವಂಶಜಾತದಶಪ್ರಮತಿಸರಸಿಜನಾಭನರಹರಿ ತೀರ್ಥಬಿಸಜಚರಣಂಗಳಲಿ ಸತತ ನಾ ಶರಣು1ಮಾಧವಅಕ್ಷೋಭ್ಯಜಯ ವಿದ್ಯಾಧಿರಾಜರಾಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸುತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆವೇದನಿಧಿಗಳಿಗೆ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವಸತ್ಯಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4ಸತ್ಯವರತೀರ್ಥರಿಗೆ ಸತ್ಯವರ ಕರಜಾತಸತ್ಯಧರ್ಮರಿಗೆ ನಾ ಮನಸಾ ಆನಮಿಪೆಸತ್ಯಧರ್ಮರ ಮಹಿಮೆ ಬಹು ಬಹು ಬಹಳವುಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5ಉದ್ದಾಮ ಪಂಡಿತರು ನವರತ್ನ ವಂಶಜರುವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರುವೈದಿಕ ಸದಾಚಾರಿ ತ್ರಿಕರಣದಿ ಶುದ್ದರುನಂದಿನಿಧರ ಮಧ್ವಮಾಧವ ಪ್ರಿಯರು 6ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆಸತ್ಯಧರ್ಮದಿರತರು ಸಂತತ ಇವರುಸದಾಗಮಿಕಭಾಗವತಮಾಧ್ವ ಸಚ್ಛಾಸ್ತ್ರದಿಮುದದಿಂದಕಾಲಉಪಯೋಗ ಮಾಡುವರು7ಇಂಥಾ ಭಾಗವತರಲ್ಲಿ ಗಂಗಾಧರನೇವೇಬಂದು ಔತಣ ಉಂಡು ಉಡುಗೊರೆಯಕೊಂಡುಸಂತತ ತಾ ಧ್ಯಾನಿಸುವ ರಾಮನ್ನ ಇವರುಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿಉಣಲಿಕ್ಕೆ ಸಾಲದೆ ಇರುವಾಗ ಬಂದಬ್ರಾಹ್ಮಣ ಓರ್ವನು ಭಸ್ಮಧರ ಅವನುಅನ್ನಬೇಕೆಂದನು ಮಧ್ಯಾಹ್ನಕಾಲ 9ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತಅಣ್ಣಾಚಾರ್ಯರು ಅಡಿಗೆ ತಾಮಾಡಿಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರುಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನಮಂದಿರದಿವಿಪ್ರಅಂತರ್ಧಾನನಾದಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳುಚಂದದಿ ಇದ್ದವು ದಕ್ಷಿಣೆ ಸಮೇತ 11ಸವಣೂರು ರಾಜ್ಯದ ಮಂತ್ರಿ ಖಂಡೇರಾಯದಿವಿಜರ ಲೋಕಯಾತ್ರೆಯು ಮಾಡಲಾಗದೇವರ ನೈವೇದ್ಯಯಕ್ಕಾದರಣೆ ತಪ್ಪಲುಸವಣೂರು ಪ್ರಾಂತವ ಬಿಟ್ಟು ತೆರಳಿದರು 12ದೇವತಾಂಶರು ಇವರು ಮಾನುಷ ಜನ್ಮವಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13ಔದಾರ್ಯಗುಣನಿಧಿ ಶ್ರೀ ರಾಘವೇಂದ್ರತೀರ್ಥರ ವೃಂದಾವನ ಸೇವೆ ಮಾಡಿಕೃತಕೃತ್ಯರಾದರು ಅಣ್ಣಾಚಾರ್ಯರುಒದಗಿ ಅನುಗ್ರಹಿಸಿದರು ಗುರುಗಳು ಬೇಗ 14ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳುತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆದೊರೆಯುವುದು ಇಷ್ಟಾರ್ಥ ಎಂದು ಪೇಳಿದರುಹೊರಟರು ಆಚಾರ್ಯರು ಸತ್ಯವರರಲ್ಲಿ 15ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂಶ್ರೀ ಸ್ವಾಮಿ ಮಂಜೂಶ ಕಳವು ಆಗಿವ್ಯಸನದಲಿ ಉಪೋಶಣದಿ ಸತ್ಯವರರಿದ್ದರುಭಾಸವಾಗದೆ ಮೂರ್ತಿಗಳಿರುವ ಸ್ಥಳವು 16ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರುಹೇಗೆ ವರ್ಣಿಸುವೆ ಆ ಗುರುಗಳ ಆನಂದ 17ನಿಗಮಘೋಷಂಗಳು ವಿಪ್ರಜನ ಮುಖದಿಂದಮಂಗಳ ಧ್ವನಿ ಮೇಳ ತಾಳವಾದ್ಯಗಳುಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆಗಂಗಾಜನಕನ ಮೂರ್ತಿಗಳ ತಂದರು 18ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳುಸತ್ಯವರರ ಅಮೃತ ಹಸ್ತಾಭಿಷೇಕಯತಿ ಆಶ್ರಮ ಸತ್ಯಧರ್ಮತೀರ್ಥರೆಂದು ನಾಮಾಪ್ರಣವಉಪದೇಶಕೊಂಡರು19ಪ್ರಣವೋಪದೇಶಗುರುಹಸ್ತದಿಂ ಅಭಿಷೇಕಘನಮಹಾವೇದಾಂತ ಪೀಠವು ಲಭಿಸಿಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯಜ್ಞಾನೋಪದೇಶ ಹರಿಪೂಜಾ ಮಾಡಿದರು 20ಭಾವುಕರ ಪ್ರಿಯತಮಸನತ್ಸುಜಾತೀಯವುಭಾವದೀಪಿಕ ಶ್ರೀಮದ್ ಭಾಗವತಕೆತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21ವಾಗ್ವಜ್ರ ಧಾರಾವುದುರ್ವಾದಿಗಿರಿಕುಲಿಶಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶಜಗಕ್ಷೇಮಕರ ಪೂಜಾ ವರವು ದೀನರಿಗೆ 22ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠಸುವಿತರಣಿಯಿಂದ ಆಡಳಿತ ಮಾಡಿಸುವರ್ಣ ರತ್ನಾಭರಣ ಮಠತೋಟಂಗಳದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23ಹದಿನೇಳನೂರು ಐವತ್ತೆರಡು ಶಾಲಿಶಕತ್ರಯೋದಶಿಶ್ರಾವಣಕೃಷ್ಣಪಕ್ಷಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯಪಾದವನೈದಿದರು ಹರಿಯಧ್ಯಾನಿಸುತ 24ಮತ್ತೊಂದು ಅಂಶದಲಿ ವೃಂದಾವನದಲ್ಲಿಬಂದು ಸೇವಿಸುವವರ ವಾಂಛಿತವೀಯುತ್ತನಂದಿನಿಧರ ಮಧ್ವ ಮಾಧವನ ಒಲಿಮೆಯಿಂನಿಂತಿಹರು ಸ್ಮರಿಪರ ಗೋಕಲ್ಪತರುವು 25ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆಹೊನ್ನೂರು ಕ್ಷೇತ್ರದಲಿ ವೃಂದಾವನಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳುಜಾಹ್ನವಿಧರ ಉಸುವು ಕಣರೂಪದೊಳಗೆ 26ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲುಒಲಿವರು ಮಧ್ವಮುನಿ ಶಿವನು ನಮಗೊಲಿಯೆಒಲಿವನುಅಜಪಿತ`ಶ್ರೀ ಪ್ರಸನ್ನ ಶ್ರೀನಿವಾಸನು'ಒಲಿವ ಬೋಧರು ಮಧ್ವಮುನಿ ಒಲಿದರೇವೇ 27 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು