ಒಟ್ಟು 57 ಕಡೆಗಳಲ್ಲಿ , 24 ದಾಸರು , 55 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುವ್ವಿಮಟ್ಟು ಶರಣು ರಾಘವೇಂದ್ರ ಗುರುವೆ ಶರಣು ವ್ಯಾಸರಾಜ ಪ್ರಭವೆ ಶರಣು ನಾರಸಿಂಹ ಭಕ್ತ ಶರಣು ಶರಣು ಶಂಕು ಕರ್ಣನೆ ಪ ನಿರುತ ನಿಮ್ಮ ಚರಣ ಕಮಲ ಗೆರಗಿ ಎರಗಿ ಬೇಡಿ ಕೊಂಬೆ ದುರಿತ ರಾಶಿ ಭರದಿ ಹರಿಯ ಕರುಣ ಕೊಡಿಸು ಕರುಣಿಯೆ ಅ.ಪ ವಿಧಿಯ ಶಾಪ ಧರಿಸಿ ಮುದದಿ ಉದಿಸಿ ಬಂದು ದೈತ್ಯ ಕುಲದಿ ಹೃದಯ ಗತನೆ ವಿಶ್ವವ್ಯಾಪ್ತ ಪದುಮನಾಭನೆಂದು ತೋರ್ದೆಹೋ ಬುಧರ ಮಕುಟ ಭಕ್ತಿ ಶರಧಿ ಮದನ ತೇಜ ಬೋಧ ಮಧ್ವ ಚೇಲ ತ್ರಿದಶ ಮಾನ್ಯ ಪ್ರಹ್ಲಾದ ಬಾಹ್ಲೀಕ 1 ತುಳಿದು ಶೃತಿ ವಿರೋಧ ಬೋಧೆ ಸುಜನ ತತಿಯ ಸುಮತಿ ಚಲುವ ಕುವರ ನೆನಿಸಿ ಬಂದೆ ಹೋ ಬಲಿಸಿ ಕೃಷ್ಣನನ್ನು ಕುಣಿಸಿ ಬಲಿಸಿ ವಾಯು ಮತವ ಮೆರಸಿ ಒಲಿದು ನೃಪಗೆ ರಾಜ್ಯವಾಳಿ ಹಳಿದೆ ವಿಧುವ ಕೀರ್ತಿ ವಿಭವದಿ 2 ಮತ್ತೆ ಬಂದೆ ರಾಘವೇಂದ್ರ ಹತ್ತು ಆರು ಮತ್ತೆ ನಾಲ್ಕು ಮೊತ್ತ ಕಲೆಗಳೆಲ್ಲ ಬಲ್ಲ ಸತ್ಯ ಪ್ರಾಣ ಶಾಸ್ತ್ರ ಮೆಲ್ಲನೆ ಎತ್ತ ಸಾಟಿ ಕಲ್ಪವೃಕ್ಷ ನಿತ್ಯ ವಿವಿಧ ಮಹಿಮೆ ತೋರ್ಪೆ ಇತ್ತು ಪೊರೆವೆ ಜನರ ಬಿಢೆಯ ವಿತ್ತ ನೀಡು ಭೃತ್ಯಗೆ 3 ನಾರಸಿಂಹ ವೇದ ವ್ಯಾಸ ಮೂರುತೀಶ ರಾಮಚಂದ್ರ ಸೂರಿಗಮ್ಯ ಕೃಷ್ಣ ದೇವ ಸುರರು ಎಲ್ಲರು ಸೇರಿ ನಿಮ್ಮ ನಡಿಸಿ ಕಾರ್ಯ ಸೂರೆ ಗೈಸುತಿರಲು ಕೀರ್ತಿ ಪಾರವಿಲ್ಲ ಮಹಿಮೆಗೆಂಬೆ ಈರ ಪಿತನ ಕರುಣ ಭೂಷಿತ 4 ರಾಘವೇಂದ್ರ ನಿಮ್ಮ ನಾಮ ಯೋಗ್ಯ ಜಪಿಸೆ ಭಕ್ತಿಯಿಂದ ಶ್ರೀಘ್ರನಾಶ ಅಘಸಮೂಹ ಹಾಗೆ ಸಿದ್ಧಿ ವಾಂಛಿತಂಗಳು ಯೋಗ ಸಿದ್ಧಿ ಭೋಗ ಸಿಧ್ಧಿ ಯೋಗ ಪತಿಯ ಭಕ್ತಿ ಸಿಧ್ಧಿ ಬೇಗ ಪಡೆದು ಕ್ರಮದಿ ಭವದ ಬೇಗ ನೀಗಿ ಮುಕ್ತಿ ಕಾಂಬುವ 5 ದಾನ ಗೈದನಿಷ್ಟ ಪುಣ್ಯ ಸುಜನ ಶಿಷ್ಯ ತತಿಗೆ ಶ್ರೀನಿವಾಸನನ್ನು ಯಜಿಪ ದಾನ ಶೌಂಡ ನಿಮಗೆ ಸಾಟಿಯ ಕಾಣೆ ಕಾಣೆ ಸತ್ಯ ಸತ್ಯ ನಾನು ಮೂಢ ಪಾಪಿ ಕೃಪಣ ಏನು ಸೇವೆ ಮಾಡಲಾಪೆ ಕಾಯ ಬೇಕೆಂಬೆ 6 ನಿನ್ನ ನೆನೆದ ಮಾತ್ರಕಿನ್ನು ಅನ್ನ ವಸನ ಎಲ್ಲ ಸಿಧ್ಧ ಹೊನ್ನು ಹೆಣ್ಣು ಮಣ್ಣು ಮಿಷಯ ನಿನ್ನ ಕೇಳ್ವ ಜ್ಞಾನಿ ಆಹನೆ ಮನ್ನಿಸೆನ್ನ ದೋಷರಾಶಿ ನಿನ್ನ ಶಿಷ್ಯನೆಂದು ಗ್ರಹಿಸು ಮನ್ನ ಮಾಡು ಭವವ ಬೇಗ ಕಣ್ಣು ನೀಡು ಜ್ಞಾನ ದೆಂಬುವೆ 7 ಜಯ ಸುಧೀಂದ್ರ ಪ್ರೇಮ ಪುತ್ರ ಜಯ ವಿಜೀಂದ್ರವರ ಸುಪೌತ್ರ ಜಯ ಜಯೇಂದ್ರ ಕರುಣ ಪಾತ್ರ ಜಯ ಕವೀಂದ್ರ ಮಧ್ವ ಛಾತ್ರನೆ ಜಯ ಭವಾಭ್ದಿ ಪೋತ ಚರಣ ಜಯ ದಯಾಭ್ದೆ ಸುಗುಣ ಕೋಶ ಜಯ ಯತೀಂದ್ರ ಕಾಮಧೇನು ಜಯವು ಜಯವು ಜ್ಞಾನ ಭಾಸ್ಕರ 8 ಸತ್ಯಸಂಧ ಸತ್ಯ ಸ್ತಂಭ ಭೃತ್ಯ ಸತ್ಯ ವೇತ್ತ ಸತ್ಯನಾಥ ನೊಲಿ ಮೆಯಿಂದ ನಿತ್ಯ ಕಾಂಬನೆ ಸತ್ಯ ಮಾತೆ ಸಿರಿಯ ನಾಳ್ವ ಮುಕ್ತಿದಾತ ಕೃಷ್ಣವಿಠಲ ಚಿತ್ತದಲ್ಲಿ ಸುಳಿಯಲೆಂಬಭೃತ್ಯ ಬಯಕೆ ಸತ್ಯ ಮಾಡ್ಪ್ರಭೋ 9
--------------
ಕೃಷ್ಣವಿಠಲದಾಸರು
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಹರಿ ಎನ್ನಿ ಸಿರಿಲೋಲ ಎನ್ನಿ ಧ್ರುವ ಹರಿ ಹರಿ ಎನ್ನಿ ಹರಿ ಹರಿ ಎನ್ನಿ ಹರಿ ಎಂದು ಮನದೊಳು ಸ್ಮರಿಸುವ ಬನ್ನಿ 1 ಹರಿ ಎಂದು ಪಡೆದ ಪ್ರಹ್ಲಾದ ಪ್ರತ್ಯಕ್ಷ ಹರಿ ಎಂದು ಪಾಂಡವರಿಗಾದ ಸುಪಕ್ಷ 2 ಹರಿ ಎಂದು ಉಪಮನ್ಯು ಪಡೆದ ಸುಕಾಲ ಹರಿ ಎಂದು ಧ್ರುವ ಏರಿದ ಅಢÀಳ 3 ಹರಿ ಎಂದು ಮುನಿಜನರಾದರು ಧನ್ಯ ಹರಿ ಎಂದವರಿಗೆ ಸರ್ವವು ಮಾನ್ಯ 4 ಹರಿ ಹರಿ ಎಂದು ಕೊಂಡಾಡುವ ಬನ್ನಿ ಹರಿ ಮಹಿಪತಿ ಗುರು ತಾಯಿ ತಂದ್ಯೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸರಿಗೆ ಒಬ್ಬರ ಗೊಡವೆ ಯಾತಕೆ ಅರಿವೆ ಅನ್ನಾಭರಣ ದ್ರವ್ಯ ಸರ್ವವು ಶ್ರೀ ವರನೆ ಎಂಬ ಪ ನಿತ್ಯಾನಂದ ನಿತ್ಯಜ್ಞಾನಾನಿಮಿತ್ತ ಬಂಧು ಭಕ್ತರಿಗೆ ಇತ್ತದ್ದೆ ಸಂಪತ್ತು ಎಂದು ಕೀರ್ತಿಸುತ್ತ ನರ್ತಿಸುವ 1 ದೋಷದೂತರನೊಬ್ಬ ಪೋಷ್ಯ ಪೋಷಕಾಧಾರ ಧೇಯ ದೋಷಕಾರಿ ತ್ರೈ ಲೋಕ್ಯ ವಿಭೂಷಣ ವಿಭೂತಿದನೆಂಬ 2 ಎನ್ನ ಸ್ವಾಮಿ ಸರ್ವರಿಗೆ ಎನ್ನ ಬಿಂಬ ಎಲ್ಲರಿಗೆ ಮಾನ್ಯ ಮಾನದನು ಜಗದ್ಭಿನ್ನನೆಂದು ತುತಿಸುತಿಪ್ಪ 3 ಜನನೀ ಜನಕ ಲಕ್ಷ್ಮೀ ನಾರಾಯಣನೆ ಪುತ್ರಮಿತ್ರನೆಂದು ಕ್ಷಣಶ ಕೊಂಡಾಡುತನ್ಯರ ಗಣನೆ ಮಾಡದಿಪ್ಪ ನಿಜ4 ಹಾನಿ ಲಾಭ ಕೀರ್ತಿ ಅಪಮಾನ ಮಾನ ಪುಣ್ಯಪಾಪ ಶ್ರೀನಿವಾಸಗರ್ಪಿಸಿ ಮದ್ದಾನೆಯಂತೆ ಚರಿಸುತಿಪ್ಪ 5 ಅನಂತ ಜೀವರಿಗಿನ್ನು ಅನಾದಿ ಅನ್ನದನಾಗಿ ಅನಿರ್ವಿಣ್ಣ ನಾಮಕನೆಂದು ಸನ್ನುತಿಸಿ ಹಿಗ್ಗುತಿಪ್ಪ 6 ಸರ್ವ ಜೀವ ದೇಹಾಂತಸ್ಥ ಸರ್ವ ಜಗನ್ನಾಥ ವಿಠಲ ಸರ್ವರೂಪ ಸರ್ವನಾಮ ಸರ್ವವೇದೋದಿತನೆಂಬೊ 7
--------------
ಜಗನ್ನಾಥದಾಸರು
ಹರಿಯೆ ನಿನಗನ್ಯ ದೈವರು ಸರಿಯೆ ಮೂರ್ಲೋಕ ದೊರೆಯೆ ಪ. ಭೂತಿದೇವತಿಯು ನಿನ್ನರಸಿಯು ಮೂರ್ಲೋಕದೊಳು ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು ಭೂತೇಶನ ಪಡೆದವನಣುಗನು ಪುರು ಹೂತ ಮುಖ್ಯರು ಸಕಲೋತ್ತಮನೆಂಬರು 1 ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ ಅನ್ಯಾಯ ಘಟಿತ ಕರ್ಮಗಳನ್ನ ಮಾಡುವ ಎನ್ನನ್ನ ಮನ್ನಿಸಿ ಪಾವನ ಮಾಡುವದನ್ನ ಅನ್ಯರು ತಿಳಿವರೆ ಸುರಗಣ ಮಾನ್ಯ 2 ಪಾತಕ ಬಂಧ ನಿರ್ಮೋಕಗೈವ ವಿತತಾಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ ಕ್ಷಿತಿವರಗತ ಬಹು ಮತಿಯನು ಕರುಣಿಪ ಹಿತ ಶೇಷಾಚಲಪತಿ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
126 - 3ಚತುರ್ಥ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಸತ್ಯಬೋಧಾರ್ಯರು ಭಾಗೀರಥಿ ಕುರಿತುಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳುಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ 1ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿಸಮೀಪಸ್ತ ಔದುಂಬರತರುಮೂಲದಿಂಅಮರ ತಟನೀ ಬರುವ ವೇಳೆಯು ತಿಳಿಯಿತು 2ಶ್ರೀಗುರು ನವಾಬನಿಗೂ ಖಂಡೇರಾಯನಿಗುನಗರಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆಗಂಗಾವತರಣವು ಆಯಿತು ಸೂಚಿತವೇಳೆಕಂಗೊಳಿಸುವ ಬಾಗೀರಥೀ ಧಾರಾಸುರಿದು 3ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾತ್ರಿದಶೇಶ್ವರಿ ನಳಿನಿ ಸೀತಾನಮಸ್ತೆತ್ರಾಹಿಜಾಹ್ನವಿಭಾಗೀರಥೀ ನಮೋ ಭೋಗವತಿತ್ರಿಪಥ್‍ಗಾಮಿನಿಪಾಹಿಮಾಲತಿ ನಂದಿನಿ4ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲದೇವ ತಟಿನಿ ಧಾರಾ ಸುರಿದದ್ದು ನೋಡಿದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪಸೇವೆದಾನಾದಿಗಳ ಮಾಡಿದರು ಮುದದಿ 5ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ 6ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದುಶ್ರೀ ಸತ್ಯಬೋಧರ ಬಹು ಇಂಥ ಮಹಿಮೆವಸುಮತಿಯಲಿ ಹರಡಿ ದೇಶ ದೇಶಗಳಿಂದಭೂಸುರರು ಸಜ್ಜನರು ಬಂದು ಸೇವಿಪರು 7ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿಕಟ್ಟಡವು ಶ್ರೀಮಠ ವಿಸ್ತಾರವಾದ್ದುಮಠದಲ್ಲೇ ಉಂಟೊಂದು ಸೋಪಾನ ಭಾವಿಯುಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ 8ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವುಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವಭಾಗಣ್ಣಾನುಜರು ಈರ್ವರು ಪ್ರಭಾವವಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು 9ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರುಆ ದಾಸವರ್ಯರ ಅನುಜರು ಈರ್ವರುದೇವತಾಂಶದವರುಅಪರೋಕ್ಷಪ್ರಚುರರುಎಂದು ಜನರಿಗೆ ನಿದರ್ಶನ ತೋರಿಸಿದರು 10ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮಘೋಟಕಾಸ್ಯ ಮಧ್ವೇಶನ್ನರಾಧಿಪಂತಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು 11ಅಮಲ ವೈದಿಕ ತತ್ವ ಮಧ್ವಸಿದ್ಧಾಂತವಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗುಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು 12ಒಳ್ಳೆರೀತಿಯಲಿ ಚತ್ವಾರಿವತ್ಸರಮಠಆಳಿ ಶಾಲಿಶಕ ಹದಿನೇಳ್ ನೂರೈದುಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು 13ಸತ್ಯಬೋಧರ ವೃಂದಾವನದಿ ಅವರೊಳಿಹನುಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯವಾತಸೇವಿತ ರಾಮಕೃಷ್ಣನೃಹರಿ ವ್ಯಾಸಭೃತ್ಯವತ್ಸಲ ವಾಮದೇವನುತನಾಗಿ 14ದರ್ಶನ ಪ್ರದಕ್ಷಿಣೆ ನಮನ ಪಾದೋದಕಸಂಸ್ಕøತಿಸುಚರಿತ್ರೆ ಪಾರಾಯಣಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳುವಾಂಛಿತಪ್ರದ ಸರ್ವ ಪೀಡಹರವು 15ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯತಾಪತ್ರಯ ಪರಿಹಾರ ರೋಗ ನಿವೃತ್ತಿಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ 16ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರುಸತ್ಯಬೋಧರ ಆರಾಧನ ಭಕ್ತಿಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರುಭಕ್ತರು ಸೇವಿಸುತಿಹರು ಪ್ರೇಮದಲಿ 17ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 18 ಪ|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ ಸಾಗಿನ್ನ ಕಡುಛÀಲ ಮಾಡಲಿ ಬನ್ನಬಡುವೆ ನಮ್ಮನಳಿನಾಕ್ಷನಾಣೆ ನೀ ಕೆಡುವೆ ಪ.ಪಾಪಿ ನಾನೆಂದು ಸೋಂಕ ಬಂದೆ ನಮ್ಮಶ್ರೀಪತಿ ಕರುಣಿಸಿದಿಂದೆ ಇನ್ನಾಪರೆ ನಿಲ್ಲು ಮುಂದೆ ನಿನ್ನಾಟೋಪವ ಮುರಿವೆನು ಇಂದೆ 1ಪರುಸ ಮುಟ್ಟಿದ ಲೋಹಚಿನ್ನಸಿರಿಅರಸನ ಭಟನೆ ಮಾನ್ಯ ಇನ್ನೊರೆದೆ ನೋಡೆಲೆ ಬಲುವೆಡ್ಡೆ ನಮ್ಮಸರಸವ ಬಿಡು ಕೈಕಡ್ಡೆ 2ಲೇಸು ಬೇಕಾದರಿನ್ನುಳಿಯೈಹರಿದಾಸರ ಸಂಗವ ಕಳೆಯೈ ಭೃತ್ಯಾವಾಸೆಯ ಬಿಡುವವನಲ್ಲ ಶ್ರೀಪ್ರಸನ್ವೆಂಕಟ ಚೆಲ್ವ 3
--------------
ಪ್ರಸನ್ನವೆಂಕಟದಾಸರು
ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ವರದಚಿನ್ಮಯ ಗರುಡಗಿರಿಯ ಮಾನ್ಯ ತಿಮ್ಮ್ಮಯ್ಯ ಪ.ನಿಜರಾಣಿಗಂಘ್ರಿನಖನಿಜವು ತಿಳಿಯದ ಮಹಿಮೆವ್ರಜದಿ ವದನದಿ ತಾಯ್ಗೆತ್ರಿಜಗತೋರಿದ ಮಹಿಮೆಅಜಫಣಿಗಳುಗ್ಘಡಿಪ ಮಹಿಮೆಮಂದಅಜಮಿಳ ಬೆದರ್ಯೊದರೆ ಭಜಕನಾದ ಮಹಿಮೆ 1ನಿಲ್ಲದಾ ಮುನಿಮನದಿ ಚೆಲ್ವ ಚರಣದ ಮಹಿಮೆಬಲ್ವಿಂದ ಉಂಗುಟದಿ ತಳ್ವೆಂಗದ ಮಹಿಮೆದುರ್ಲಭ ಮಮರಿಗೆ ನೋಟ ಮಹಿಮೆ ಆಗೊಲ್ವೆಂಗಳೇರ ನೋಡಿ ಭುಲ್ಲೈಪ ಮಹಿಮೆ 2ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆಗೋಕುಲದಿ ಗೊಲ್ಲರೊಳು ಆಕಳ ಕಾಯುವ ಮಹಿಮೆ ಅನೇಕಜಾಂಡದಿ ಪೂರ್ಣ ಮಹಿಮೆ ಪ್ರಸನ್ವೆಂಕಟಾದ್ರಿಯ ಮೇಲೆ ಏಕೈಕ ಮಹಿಮೆ 3
--------------
ಪ್ರಸನ್ನವೆಂಕಟದಾಸರು
ನೋಡಿರೆ ಯಶೋದೆಯ ಪುಣ್ಯಪಡೆದಿಹ್ಯಳೆಂಥ ಮಾನ್ಯ ಪಪೊಡವಿ ಈರೇಳನ್ನು ಒಡಲೊಳಿಟ್ಟವನನ್ನುತೊಡೆಮೇಲಾಡಿಸುವಳು ಅ.ಪವಿಲಸಿತಮಹಿಮನ ಕಳೆಯ ತಿಳಿಯಲು ವೇದಬಲುವಿಧ ಪೊಗಳುತ ನೆಲೆಯುಗಾಣದಘನಕಳವಳಗೊಳುತಿಹ್ಯವಭವನ ದೆಸೆಯಿಂಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ 1ಭುಜಗಭೂಷನು ತನ್ನ ನಿಜಪದವನುದಿನಭಜಿಸಿ ಬೇಡಲು ಕಾಣರಜಸುರಮುನಿಗಣಸುಜನಗುಣಾಂತರಂಗ ತ್ರಿಜಗವ್ಯಾಪಕನನಿಜವನು ಮನದಣಿ ಕಂಡು ಹಿಗ್ಗಿದಳೀಕೆ 2ಸೀಮರಹಿತಮಹಿಮ ನಾಮರೂಪಿಲ್ಲದ ನಿಸ್ಸೀಮ ಸುಗುಣಸುಖಧಾಮ ಭೂಮಿಜೆಪತಿಸ್ವಾಮಿ ಶ್ರೀರಾಮನ ವಿಮಲದಾಟದಲಿಭೂಮಿಯೊಳ್ಮಿಗಿಲಾದಾನಂದೊಳಿಹÀಳೀಕೆ 3
--------------
ರಾಮದಾಸರು
ಲೊಳಲೊಟ್ಟೆ - ಬದುಕು - ಲೊಳಲೊಟ್ಟೆ ಪ.ಆನೆ ಕುದುರೆ ಮಂದಿ ಲೊಳಲೊಟ್ಟೆ - ಬಲು |ಸೈನ್ಯ ಭಂಡಾರವು ಲೊಳಲೊಟ್ಟೆ ||ಮಾನನಿಯರ ಸಂಗ ಲೊಳಲೊಟ್ಟೆ - ಮಹಾ |ಮಾನ್ಯ - ವಿಜಯರೆಲ್ಲ ಲೊಳಲೊಟ್ಟೆ 1ಮುತ್ತು - ಮಾಣಿಕ - ಚಿನ್ನ ಲೊಳಲೊಟ್ಟೆ - ಬಲು |ಛತ್ರ - ಚಾಮರಗಳು ಲೊಳಲೊಟ್ಟೆ ||ಸುತ್ತಗಳು ಕೋಟೆಯು ಲೊಳಲೊಟ್ಟೆ - ಅಲ್ಲಿ |ಸುತ್ತುವ ಜನವೆಲ್ಲ ಲೊಳಲೊಟ್ಟೆ 2ನೆಂಟರು - ಇಷ್ಟರು ಲೊಳಲೊಟ್ಟೆ - ದೊಡ್ಡ |ಕಂಟಕಾನಾಹೊದು ಲೊಳಲೊಟ್ಟೆ ||ಉಂಟಾದ ಗುಣನಿಧಿ ಪುರಂದರವಿಠಲನ |ಬಂಟನಾಗದವ ಲೊಳಲೊಟ್ಟೆ 3
--------------
ಪುರಂದರದಾಸರು