ಒಟ್ಟು 767 ಕಡೆಗಳಲ್ಲಿ , 99 ದಾಸರು , 661 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಪೂತನಾ ಅಸುಹಾರಿಣಿ ನಮಃ ಪದ್ಯ ಪೊಡವಿಯಲಿ ಎಲ್ಲರಿಗೆ ಒಡಿಯನಾಗಿರುವಂಥ ಖಡು ಪಾಪಿ ಕಂಸಗೆ ಬಿಡದೆ ಪ್ರತಿವರ್ಷಕ್ಕೆ ಕೊಡತಕ್ಕ ಕಪ್ಪವನು ಕುಡಬೇಕು ಎಂತ್ಯೆಂದು ನಡದು ತಾ ಮಥುರೆಯಲಿ ಖಡುನಂದಗೋಪಾ| ಒಡಿಯನಪ್ಪಣಿಯಿಂದ ಗಡಬಡಿಸೆ ಪೂತನಿಯು ಹುಡುಗರನ್ನು ಹುಡುಕುತಲೆ ಬಡಿವಾರ ತೋರುತಲೆ ನÀಡದು ಬಂದುಳು ಹಾದಿ ಹಿಡಿದು ಗೋಕುಳಕೆ|| 1 ಧಡಿಯ ದಿವ್ಯಾಂಬರವು ಶಡಗರದಿ ಉಟ್ಟಿಹಳು ಕಿಡಿಯಂಥ ಕುಪ್ಪುಸವು ದೃಢ ಬಿಗಿದು ತೊಟ್ಟಿಹಳು| ಬಿಡÀದೆ ಸರ್ವಾಭರಣ ಜಡದಿಹಳು ತಾ ಮಿಂಚು ಹೊಡದಂತೆ ತೋರುವಳು ಉಡುರಾಜ ಮುಖಿಯು| ಎಡಬಾರಿ ದುರಬಿನಲಿ ದೃಢವಾಗಿ ಮಲ್ಲಿಗಿಯು ಮುಡಿದಿಹಳು ಉರದಲ್ಲಿ ದೃಢವಾದ ಕುಚವೆರಡು ನಡವುದಾ ಕಾಲಕ್ಕೆ ನಡಗುತಿಹವು 2 ಬಿಂಬೋಷ್ಟಿ ಮಾಯ ಅವಲಂಬಿಸುತ ಗೋಕುಲದ ತುಂಬ ಬೆಳಕವು ಮಾಡಿ ಜಂಭದಲಿ ಬರುತಿಹಳು ಗಂಭೀರಳಾಗಿ ತನಗುಂಭ ತಿಳಿಗುಡದೆ ಕುಚ ಕುಂಭಗಳವಳಗ ವಿಷ ತುಂಬಿಟ್ಟು ಕೊಂಡು ಅಂಬುಜಾಕ್ಷಿಯ ಕಂಡು ಸಂಭ್ರಮದಿ ಗೋಕುಲದ ಜಗದಂಬಿಯೊ ಎಂದೂ 3 ಮುಂದ ಆ ಪೂತನಿಯು ನಂದಗೋಪನ ಮನಿಗೆ ಬಂದು ದೇವೇಚ್ಛಿಯಲಿ ನಂದನಂದನನ ಕಣ್ಣಿಂದ ನೋಡಿದಳಾಗ ಛಂದದ್ಹಾಸಿಕೆಯಲಿ ಛಂದಾದ ಲೌಕೀಕದ ಕಂದನಂತೆ| ಮುಂದವನ ತೊಡಿಯ ಮ್ಯಾಲೆ ಛಂದಾಗಿ ಧರಿಸಿದಳು ಕಂದರ್ಪನೈಯನೆ ಕಂದನಾಗಿರುವನೆಂತ್ಯೆಂದು ತಿಳಿಯದೆ ನಿದ್ರಿ ಯಿಂದಿರುವ ಸರ್ಪ ಕರದಿಂದ್ಹಿಡಪರಿ ರಜ್ಜು ಎಂದುಬ್ಯಾಗೆ 4 ಶ್ರೀನಿವಾಸನ ಜನನಿ ಮೌನ ಹಿಡಿದಳು ಕಪಟತನ ತಿಳಿಯದೆ ಬುದ್ಧಿಹೀನ ಪೂತನಿಯು ಸ್ತನಪಾನ ಮಾಡಿಸಿದಳಾ ದಾನವಾರಿಗೆ ಅವನು ಪ್ರಾಣಸಹಿತಾಗಿ ವಿಷಪಾನ ಮಾಡಿದನು| ದ್ರೂಣನಾಗಿರುವವನ ಪಾಣಿಯಲಿ ಸಿಕ್ಕು ಗತಿಗಾಣದಲೆ ಉತ್ಕøಷ್ಟ ವಾಣಿಯಿಂದಲೆ ಒದರಿ ಭ್ರೂಣಹನನಕ ಬಹಳ ಜಾಣಿ ಎಂತ್ಯೆನಿಸುವಳು ಪ್ರಾಣ್ಹೋಗಿಬಿದ್ದಳಾ ಪ್ರಾಣಿ ಪೂತನಿಯು. ಪದ:ರಾಗ :ಶಂಕರಾಭರಣ ಅಟತಾಳ, ಸ್ವರಷಡ್ಜ ಬಿದ್ದಾಳು ಪ್ರಾಣ ಹೋಗಿ ಪೂತನಿ ಜನ್ಮಗೆದ್ದಾಳು ಬಾಲಕ ಘಾತಿನಿ| ಬಂತುದೆವಾಯಿತು ಮತ್ತಲ್ಲೆ|| 1 ಗಿರಿಯಂತೆ ಆ ದೇಹ ಇರುವೋದು ಆರು ಹರದಾರಿ ಪರಿಯಂತೆ ಬಿದ್ದಿಹದು| ಕರಚರಣಗಳ್ಹರವಿ ಇರವದು ಅಲ್ಲಿ ಇರವೂ ವೃಕ್ಷಗಳೆಲ್ಲಾ ಮುರದಿಹದು|| 2 ಎರಡು ಕಣ್ಣುಗಳು| ದಾಡುವರಲ್ಲೆ ನದಿಗಳು|| 3 ಭಾವಿಯಪರಿ ತೋರುವುದು ಹೇಳುವದಿನ್ನು ಉಳದಿಹುದು ದಾನವಾರಿಯಕೊಂಡು ಕರದಿಂದ ವಿಷಪಾನ ಮಾಡಿಸಿದ ಕಾರಣಿದಿಂದ | ಹಾನಿತನಗೆ ಬಂತು ತ್ವರದಿಂದ| ಅಚುತಾನಂತಾದ್ರೀಶ ಕರದಿಂದ|5 ಪದ್ಯ ಬಾಲಕಾಕಿಯ ಎದಿಯಮ್ಯಾಲೆ ನಿರ್ಭಯದಿಂದ ಲೀತಿಯನ ಮಾಡುತಿಹ ಬಾಲಿಯರು ಬ್ಯಾಗ ಆ ಬಾಲಕನ ಕರಕೊಂಡು ಮ್ಯಾಲೆ ಗೋಮೂತ್ರದಲಿ ಬಾಲಗ್ಯರದರು ಅವರು ಭಾಳ ಸಂಭ್ರಮದಿ| ಕಾಲ ಆ ಕಾಲಕಿಟ್ಟರು ನಂದ ಬಾಲಕರನೆನಿಸುವ ಜಗತ್ಪಾಲಕಗ ರಕ್ಷಾ|| 1 ಬಾಲ ನಿನ್ನನ್ನು ಜಗತ್ಪಾಲಕನು ರಕ್ಷಿಸಲಿ| ಪದಾಗಳು ಆ ಮೂರು ಪಾದದವ ರಕ್ಷಿಸುತಾ ಜಂಘವನು ಮತ್ತ ಶ್ರೀರಂಗ ತಾ ರಕ್ಷಿಸಲಿ ಜಾನುವನು ರಕ್ಷಿಸಿ ಜಾನ್ಹವಿಜನಕಾ | ಉರುಗಳಾ ರಕ್ಷಿಸಲಿ ಉರ್ವೀಶ ಹರಿತಾನು ನಾಭಿಯನು ಶ್ರೀಪದ್ಮನಾಭ ಸಂರಕ್ಷಿಸಲಿ ಹೃದಯಗತ ಶ್ರೀ ಹರಿಯು ಭುಜಗಳನು ರಕ್ಷಿಸಲಿ ಭುಜಗಶಯನಾ||2 ಕಂಠವನು ಮತ್ತ ವೈಕುಂಠಪತಿ ರಕ್ಷಿಸಲಿ ಮುಬವನ್ನು ರಕ್ಷಿಸಲಿ ಮುಕುಟವರ್ಧನ ಹರಿಯು| ಶಿರವನ್ನು ರಕ್ಷಿಸಲಿ ಶಿರಿಯರಮಣನನು ತಾನು ಅಂಗಜನ ಜನಕ ಸರ್ವಾಂಗ ರಕ್ಷಿಸಲಿ| ಜಲಜಾಕ್ಷಿಯರು ಹೀಂಗ ಹಲವು ದೇವತಿಗಳನ ಬಲಗೊಂಡು ಮತ್ತವರ ಬಲದಿ ರಕ್ಷೆಯ ನೀಡಲು| ಜಲಜಮುಖಿ ಜನನಿ ತನ್ನ ಚಲುವ ಬಾಲಕಗ ತಾ ಮೊಲಿಕೊಟ್ಟು ಮಂಚದಲಿ ಮಲಗಿಸಿದಳವನಾ| ಖಳಕಂಸಗಾ ಕಪ್ಪುಗಳ ಕೊಟ್ಟು ನಂದ ತಾ ಇಳದ ಮನಿಯಲಿ ಇರಲು ತಿಳದು ಆ ಸುದ್ದಿ ತನ್ನ ಸ್ಥಳವನ್ನು ಬಿಟ್ಟು ಆ ಸ್ಥಳಕ ಬಂದನು ಪರಮ ಗೆಳೆಯ ವಸುದೇವ ಮನದೊಳಗ ಹಿಗ್ಗುತಲೆ|| 3 ಆರ್ಯಾ ಜಾಣನು ಆತನ ಕಾಣುತಲ್ಯದ್ದನು ಪ್ರಾಣಬರಲು ದೇಹದ ಪರಿಯು| ಪ್ರಣಾಮಮಾಡಿ ಆ ಪ್ರಾಣಯನಪ್ಪಿದ ಪಾಣಿಹಿಡಿದು ಗೋಕುಲ ಧೊರಿಯು|| 1 ಆಮ್ಯಾಲಿಬ್ಬರು ಪ್ರೇಮದಿ ಕುಳಿತರು ಕ್ಷೇಮವಿಚಾರ ಮಾಡುತಲೆ| ಆಮ್ಯಾಲ ಶೌರಿಯು ಕೋಮಲ ಹೃದಯದಿ ತಾ ಮಾತಾಡಿದ ಪ್ರೇಮದಲೆ|| 2 ಪದ:ರಾಗ:ಶಂಕರಾಭರಣ ತಾಳ:ಭಿಲಂದಿ ಸ್ವರ:ಪಂಚಮ ಸಕಲ ಜನರು ನಂದಗೋಪ ಸುಖದಲಿರುವರೆ ಸಖನೆ ನಿನ್ನ ಮನಿಗೆ ಭಾವುಕರು ಬರುವರೆ|| ಪ ದೃಷ್ಟ ವಿಷಯನಾದಿ ನೀ ಅದೃಷ್ಟಯೋಗದಿ| ವೃಷ್ಟಿ ಮಾಡಿದಿ|| 1 ನಿನಗ ಪುತ್ರನಾದ ಸುದ್ದಿ ಎನಗ ಮುಟ್ಟಿತು | ನನಗೆ ಕಡೆಯ ಪುತ್ರನವನೆ ನಿನಗೆ ಒಪ್ಪಿತು|| 2 ಸಕಲರಿಂದ ಕೂಡಿ ಅವನು ಸುಖದಲಿರುವನೆ ಸಕಲ ಜನರಿಗ್ಯವನು ಪ್ರಾಣಸಖನು ಆದನೆ|| 3 ಅಲ್ಯೆ ಗೋಗಳೆಲ್ಲ ರೋಗ ಇಲ್ಲದಿರುವವೆ| ಹುಲ್ಲು ನೀರಿನಿಂದ ಸೌಖ್ಯದಲ್ಲಿ ಇರುವವೆ|| 4 ಚನ್ನಿ ಗಾನಂತಾದ್ರೀಶನ್ನ ನೆನುವರೆ 5 ಆರ್ಯಾ ಛಂದಾಗ್ಯವ ಹೀಗೆಂದ ಮಾತು ಆನಂದಗೋಪ ತಾ ಕೇಳುತಲೆ| ಮುಂದಾ ಶೌರಿಯಮುಂದ ನುಡದನು ಮಂದಹಾಸ್ಯದಲಿ ನಗುವುತಲೆ|| 1 ಪದ, ರಾಗ :ಮುಖರಿ ತಾಳ :ಆದಿ ದುಃಖವು ಸುಖಕಾರಿಯೆ ಪ ಎನಗೆ ತಿಳಿನೀನು|| 1 ಹಿಂದಿನ ದುಃಖ ಹಿಂದೆ ಹೋಯಿತು | ತಿಳಿ ಮುಂದ ನಿನಗೆ ಸೌಖ್ಯವಾದೀತು|| 2 ಚಿಂತಿಮಾಡಲಿ ಬ್ಯಾಡಾ ವಸುದೇವಾ| ಚಲುವಾನಂತಾದ್ರೀಶನೆ ದಯ ಮಾಡಿರುವಾ|| 3 ಆರ್ಯಾ ನಂದ ಗೋಪನಾನಂದ ವಚನಗಳ ಛಂದದಿ ಕೇಳುತ ವಸುದೇವಾ | ಮುಂದ ನುಡದ ಹೀಗಂದು ಮತ್ತ ತ್ವರದಿಂದ ತನ್ನ ಹೃದ್ಗತ ಭಾವಾ || 1 ಪದ ರಾಗ:ಸಾರಂಗ ಆದಿತಾಳ ಸ್ವರ:ಷಡ್ಜ ಭಿಡಯಾ ಬಿಟ್ಟ ಹೇಳುವೆ ಎನ್ನ ನುಡಿಯು ಲಾಲಿಸಿ|| ಪ ಉತ್ತಮ ಕೇಳಿನ್ನಾಮಗನಾ ಉತ್ಪತ್ತಿ ಕಿವಿಯಿಂದ ಕೇಳಿ| ಉತ್ಪನ್ನವಾದಾವು ಬಹಳ ಉತ್ಪಾತಗಳು|| 1 ಕಂಸನ ಅಂಜಿಕೆಯಿಂದ ಸಂಶಯ ಬಿಡುವÀಲ್ಲದಿನ್ನು| ಸಂಸಾರದೋಳ್ಸುಖವು ಸ್ವಲ್ಪಾ ಸಂಶಯವೆ ಭಾಳಾ||2 ಮುಟ್ಟಿತು ಕಂಸಗ ಕಪ್ಪ ಭೆಟ್ಟಿ ಆಯಿತು ನಿಮ್ಮನು| ಘಡ್ಯಾಗಿ ಅನಂತಾದ್ರೀಶನ ಮುಡ್ಡಿ ಭಜಿಸುತ|| 3 ಪದ್ಯ ಯಾದವನ ಮಾತಿಗ್ಯನು ಮೋದವನು ಬಟ್ಟು ನಂದಾದಿಗಳು ಗೋಕುಲದ ಹಾದಿಯನು ಹಿಡಿದು ಪರಮಾದರದಿ ನಡದರು. ಅಗಾಧವಾಗಿಹ ದೇಹ ಹಾದಿಯಲಿ ಬಿದ್ದಿಹುದು ಹಾದಿಯನು ಕಟ್ಟಿ| ಆ ದೇಹ ನೋಡುತ ಅಗಾಧ ಬಟ್ಟವರು ಅಲ್ಯಾದದ್ದು ಮನದಲ್ಲಿ ಶೋಧಿಸ್ಯಂದರು ಹೀಗೆ | ಸಾಧು ವಸುದೇವ ಹುಸಿ ಆದದ್ದು ಉಂಟೇ| 1 ಪರಿ ಅವರು ಕೊಡಲಿಯನು ಕೊಂಡು ಕಡಕಡದು ಈ ದೇಹವನು ಸುಡಲು ದೂರದಲಿಟ್ಟು ಕಡೆ ಬಿಡದೆ ಆಕಾಶಕ್ಕೆ ಅಡರಿತಾಗೆ| ಖಡುಪಾಪಿ ಪೂತನಿಯು ಕುಡಲು ವಿಷ ಮೊಲಿಯನ್ನು ಕುಡುದು ಸದ್ಗತಿಕೊಟ್ಟ ತಡವಿಲ್ಲದಲೆ ಹರಿಯು ದೃಢಭಕ್ತಿಯಿಂದಲೆ ಕಡಿಗೆ ಕ್ಷೀರಾದಿಗಳು ಕೊಡಲು ಸದ್ಗತಿಯನ್ನು ಕುಡವದೇನÀದು|| 2 ಶೌರಿಸಖನಂದ ಪರಿವಾರ ಸಹಿತಾಗಿ ತಾ ಈ ರೀತಿ ಉತ್ಪಾತ ಮೀರಿ ಮನಿಯಲಿ ಬಂದು ಪೂರ್ವದಲಿ ಆಗಿಹ ಅಪೂರ್ವ ವೃತಾಂತವನು ಪೂರ ಕೇಳ್ಯಾಶ್ಚರ್ಯ ಪೂರಿತನು ಆಗಿ ವೈರಿ ಪೂತನಿಯ ಸಂಹಾರಿಯಾ ಕರಕೊಂಡು| ಚಾರುಮುಖ ನೋಡಿ ಸುಖಪೂರನಾದಾ | ಈ ರೀತಿ ಚರಿತವನು ಆರು ಕೇಳುವರು ಅವರ ಘೋರ ದುರ್ಷಟವೆಲ್ಲ ದೂರಾಗಿ ಹೋಗುವದು ಶುಭಚನ್ಹ ಚಾರ್ವನಂತಾದ್ರೀಶ ಮೂರುತಿಯು ಮುಗಿಸಿದಿದು ಭಾಗವತ ದಶಮಸ್ಕಂಧ 3 ಪೂತನಾದಧೋ ನಾಮ ತೃತಿಯೋಧ್ಯಾಯಃ| || ಶ್ರೀ ಕೃಷ್ಣಾರ್ಪಣಮಸ್ತು|| || ಮೂರನೆಯ ಅಧ್ಯಾಯವು ಸಂಪೂರ್ಣ||
--------------
ಅನಂತಾದ್ರೀಶ - ಕಥನಕಾವ್ಯಗಳು
ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಅಮ್ಮನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಾಣರೇನೆ ಪ ಸುಮ್ಮನೆ ಮಲಗಿರುಯೆಂದು ಗಮ್ಮನೆ ನಾ ನೀರಿಗೋದೆ ಈಮಹೀಪಾಲ ಶ್ರೀರಂಗಾ ಗಮ್ಯವಾಗಿ ಹೋದ ಕಣೇ 1 ನಿದ್ರೆಯ ಮಾಡುತ್ತಲಿದ್ದೂ ಕದ್ದು ಪೋದಾ ನಮ್ಮ ರಂಗಾ ಇದ್ದ ಮಾತಂತಿರಲಿ ಎನ್ನ ಮುದ್ದು ಕಂದಾ ಪೋದಾಕಾಣೆ 2 ಕದ್ದು ಬೆಣ್ಣೆ ಮೆದ್ದನೆಂದು ಸುದ್ದಿಯತಂದಾನು ಗುರುವೂ ಗೆದ್ದು ತುಲಶಿರಾಮಾದಾಸಾರಿದ್ದು ಪೋದಾರಂತೆ ಕಣೇ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಮ್ಮಬಾರೆ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ ಧ್ರುವ ಅಮ್ಮಬಾರೆ ನಮ್ಮಮ್ಮನೆ ನೀ ನಮ್ಮ ಬೊಮ್ಮನ ಪಡೆದಮ್ಮ ನೀ ಪರ ಬ್ರಹ್ಮ ನೀನಹುದಮ್ಮ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ 1 ಉಮ್ಮ ಸವಿದೊಮ್ಮೆ ಅಮ್ಮೆ ನಾ ನಿನ್ನ ಸುಮ್ಮನಿರುವೆ ನಾ ಒಮ್ಮನದಲೆಮ್ಮೆ ಇಮ್ಮನಡಿಬೇಡೆ ಅಮ್ಮೆ ನಾನ ನಿಮ್ಮ ಒಮ್ಮೆ ಅಮ್ಮಿಯಾಲಮೃತ್ಯೆರಿ ಅಮ್ಮಾ 2 ಒಮ್ಮೆ ದಯವೆಂಬ ಅಮ್ಮನುಣಿಸಮ್ಮಾ ನಮ್ಮ ಕರುಣದಾ ಅಮ್ಮನುಣಿಸಮ್ಮಾ ಒಮ್ಮೊಮ್ಮುಣಿಸ ನಮ್ಮಮ್ಮ ನೀನಮ್ಮಾ ರಮ್ಮಿಸಿ ಮಹಿಪತಿ ಬಾಲಕಗ ನಿಮ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೆವೆ ಶರಣಾ ಪ ಗುರುಗರಡಿಯ ಮನಿಯೊಳು ಬೆರೆದು | ಗುರುದಾಸರ ಸಂಗವ ಬಲಿದು | ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1 ಹರಿದಾಡುವ ಚಂಚಲ ನೀಗಿ | ಗುರುಸೇವೆಯಲಿ ತತ್ಪರನಾಗಿ | ಕರುಣವ ಬೀರ್ವನು ಅರಿಸಖರೊಳಗಾಗಿ2 ಆರಿಗೆ ಹೊಲ್ಲೆಯ ತಾ ನುಡಿಯಾ | ಆರಿಂದು ನಿಷ್ಟುರ ಪಡಿಯಾ | ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3 ದೋರಗಡುದೆ ಬಲ್ಲವಿಕೆಯನು | ಪರರವಗುಣವನು ಅರಿಸನು | ನೀರು ಹಾಲಿನ ಸಖ್ಯಕ ಪರಿಲಿಹನು4 ತನುಧನ ಮದದೊಳು ಬೆರಿತಿರದೇ ಘನದೆಚ್ಚರಿಕೆಯ ಮರೆದಿರದೇ ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಕಳ ಕಾಯುವ ಗೊಲ್ಲನ ಪರಿಯಲಿ ತಾ ಕೋಲನು ಪಿಡಿಯನು ಹರಿಯು ಪ ಸಾಕಲು ಬಯಸುವ ಜನರಿಗೆ ದೇವನು ತಾ ಕರುಣಿಸುವನು ಸನ್ಮತಿಯ ಅ.ಪ ಸಂಸಾರದ ಸಾಗರವನು ದಾಟಲು ಹಿಂಸೆಗಳೆಲ್ಲವ ಸಹಿಸುವರ ಸಂಶಯ ಭ್ರಾಂತಿಯ ತೊಲಗಿಸಿ ಪೊರೆಯಲು ಕಂಸಾರಿಯು ತಾ ಕೊಡುವ ವಿವೇಕವÀ 1 ನೀರಿನ ಮೇಲಿನ ಗುಳ್ಳೆಗಳಂದದಿ ಭವ ಭೋಗಗಳು ಯಾರಲಿ ಕರಣವ ತೋರ ಬಯಸುವನೊ ದೂರ ಮಾಡುವನು ಧನಕನಕಗಳ 2 ಶಾಂತಿಯೇ ಸೌಖ್ಯಕೆ ಕಾಣವೆಂಬುವ ಅಂತರಂಗವನು ಗಮನಿಸಿರಿ ಶಾಂತಿಗೆ ಸಾಧನ ಜ್ಞಾನವ ಪಡೆಯಲು ಸಂತತ ಸನ್ಮತಿ ಕೊಡಲಿ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಆಕಾರದಿ ತೋರಿರೆ ಜಗವೆಲ್ಲವು |ಓಂಕಾರದ ಹೊರತು ಏನಿಲ್ಲ ಪ ಆದಿ ಶೂನ್ಯದಿಂದ ಅಕಾರ ಪುಟ್ಟಿತು |ದಂಡಕ ಉಕಾರ ಪಡೆಲಿಲ್ಲ 1 ಶೂನ್ಯ ದಶನಾದೆಲ್ಲ 2 ಇದರ ಮೂಲವು ಸಿದ್ಧರು ಬಲ್ಲರು |ಗೋರಖ ಮತ್ಸ್ಯೇಂದ್ರಾದಿಯರೆಲ್ಲ 3 ಆದಿಸಿದ್ಧ ಬಾಬಾ ಚೈತನ್ಯನು |ತುಕಾ ವಾಣಿಗೆ ಹೇಳಿದನಲ್ಲ 4 ಮನಿಹಾಳ ವಾಸಿ ಎಮ್ಮ ಶಿವನು |ಗಿರಿಜೆಗೆ ಉಪದೇಶಿಸಿದನಲ್ಲ 5
--------------
ಅಜ್ಞಾತ
ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ ಪ. ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆಅ.ಪ. ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ 1 ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ 2 ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ 3 ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ 4 ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ 5 ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ6
--------------
ವಾದಿರಾಜ
ಆತ್ಮನನು ತಿಳಿಯದುದೇ ಕೇಡು ಅವನ ಜನ್ಮವ ಸುಡುಆತ್ಮನನು ಅರಿಯದುದೆ ಪಾಪ ಅಹುದು ಜನ್ಮನಿರೂಪ ಪ ಸರ್ವಶಾಸ್ತ್ರವನೋದಿ ಸಕಲರೊಳಗೆ ವಾದಿಸರ್ವವನೇಕವ ಕೂಡಿಟ್ಟು ಘನ ಅಹಂಕಾರದಿ ಕೆಟ್ಟು 1 ಕೋಪ ತಾಪವ ಗಳಿಸಿ ಕೊನೆಬನೆ ಅನುಗೊಳಿಸಿವ್ಯಾಪಾರ ಸ್ತ್ರೀಯರ ಚಿಂತೆ ಊರ ಶ್ವಾನನು ಎಂಬಂತೆ 2 ಹಿರಿಯರ ನಿಂದೆಯ ಮಾಡಿ ಹೀನತ್ವದಿ ಹಾಡಿಗುರು ಚಿದಾನಂದ ಕಾಣ ಪಾಪರಾಶಿಯಲಿ ಕೂಡಿ 3
--------------
ಚಿದಾನಂದ ಅವಧೂತರು
ಆತ್ಮನಿವೇದನಾ ಸ್ತುತಿಗಳು ಅಗಲಿಸದಿರು ಎನ್ನನು ನಿನ್ನ ಬಿಟ್ಟಗಲಿಸದಿರು ಎನ್ನನು ಪ ಅಗಣಿತ ನಿಗಮಗೋಚರ ನಿನ್ನ ಪಾದವ ಬಿಟ್ಟು ಅ.ಪ ವ್ಯಾಕುಲವನು ಬಿಡಿಸಿ ಅನೇಕ ಸೇವೆಗಳಿತ್ತು ಲೋಕನಾಯಕ ಎನ್ನ ಸಾಕಿಸಲಹಿಕೊ 1 ನಿತ್ಯ ಸಂಸಾರವನು ರಂಗಯ್ಯ ನಾ ಸತ್ಯವೆಂದು ತಿಳಿದು ಸತ್ಯಮೂರುತಿ ನಿಮ್ಮ ಪಾದಪದ್ಮದ ಭಕ್ತಿ ಹತ್ತದೆ ಈ ಮನಸು ವ್ಯರ್ಥವಾಯಿತು ದೇವ 2 ತಂದೆತಾಯಿಯು ನೀನೆ ರಂಗಯ್ಯ ಬಂಧುಬಳಗವು ನೀನೆ ಆ ನಂದದಿಂದಲೆ ರಕ್ಷಿಪ ಜಗತ್ಪತಿ ನೀನೇ ಬಂಧನವನು ಬಿಡಿಸಿ ಮುಕ್ತಾನಂದವ ತೋರಿಸು 3 ವಾಸವ ಮಾಡಿಸಿಲ್ಲಿ ರಂಗಯ್ಯ ಘಾಸಿಯ ಪಡಿಸದೆ ಅನಾ ಯಾಸದ ಮರಣವನಿತ್ತು ಎನಗೆ ವಸುದೇವನೆ ನಿಮ್ಮ ಪಾದವಾಸವ ಮಾಡಿಸು 4 ನಿಂದೆನ್ನ ಹೃದಯದೆ ವಾಸಮಾಡಿ ಆ ನಂದದಿಂದಲೆ ರಕ್ಷಿಸು ವೆಂಕಟರಂಗ 5
--------------
ಯದುಗಿರಿಯಮ್ಮ
ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆತ್ಮನಿವೇದನೆ ಅಗಲದಿರೆಲೋ ನೀನೆನ್ನ ಬಿಟ್ಟು ಅಗಲದಿರೆಲೋ ನಿಗಮಾತೀತ ನಿರ್ಜರೇಶ ಪ ಹಗಲು ಇರುಳು ನಿನ್ನ ಬಿಟ್ಟು ಅಗಲಿ ಇರಲಾರೆ ನಾನು ಸುಗುಣ ಸಂತರಾತ್ಮನೆನ್ನ ಬಗೆಗೊಂಡು ರಕ್ಷಿಸಭವ 1 ಮುಟ್ಟಿಭಜಿಪೆ ನಿನ್ನ ಚರಣ ಕೆಟ್ಟಗುಣಗಳೆಣಿಸದೆನ್ನ ನಿಷ್ಠೆಯೊಳಗೆ ನಿಂತು ಸಲಹೋ ಕಷ್ಟಹರಣ ಕರುಣಾಶರಧಿ 2 ಶ್ರೀಶರಾಮ ನಿನ್ನ ಚರಣ ದಾಸ ನಾನು ಮನ್ನಿಸೆನ್ನ ಧ್ಯಾನದಲ್ಲಿ ನೀ ವಾಸನಾಗಿ ಪೋಷಿಸನುಮೇಷ ಬಿಡದೆ 3
--------------
ರಾಮದಾಸರು
ಆತ್ಮನಿವೇದನೆ ಅಗಲಿ ನಾ ಸೈರಿಸಲಾರೆ ಪ-À್ನಗರಾಜಶಯನನ ತೋರೆ ಪ. ಖಗರಾಜಗಮನ ನಿಗಮಗೋಚರನಜಗದೇಕವಂದ್ಯನ ಜಾಣೆ ರಂಗಯ್ಯನ ಅ.ಪ. ಮಾರನು ಮನೆಗ್ಹೋದÀನಮ್ಮ ಎನ್ನಸೇರದೆ ಮುನಿದ ಕಾಣಮ್ಮಯಾರಿಗೆ ಉಸುರಲೆ ನೀರಜಾಕ್ಷಿಯೆ ಎನ್ನಬಾರದೆ ಮುನಿದು ತಾಳಲಾರೆ ನೋಡಮ್ಮ 1 ಹೆಣ್ಣುಜನ್ಮ ವ್ಯರ್ಥಕಾಣಮ್ಮ ಎನ್ನಪುಣ್ಯವಿನ್ನಿಂತಾಯಿತಮ್ಮಬಣ್ಣ ಸರವನೀವೆ ಭಾಮಿನಿರನ್ನಳೆಕಣ್ಣಾಣೆ ಕರೆತಾರೆ ಪುಸಿಯಲ್ಲ ಕೃಷ್ಣನ 2 ಅಂತರಂಗವ ತಿಳಿದೇನಮ್ಮ ಪ್ರಾಣ-ಕಾಂತ ಮನೆಗೆ ಬಂದನಮ್ಮಪಂಥವ ಬಿಟ್ಟೀಗ ಬಂದೆ ನಾ ಪಾಲಿಸುವಕಂತುಜನಕ ಹಯವದನ ರಂಗಯ್ಯನ 3
--------------
ವಾದಿರಾಜ