ಒಟ್ಟು 177 ಕಡೆಗಳಲ್ಲಿ , 42 ದಾಸರು , 159 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾನಕೀಮನೋಹರಾ ಜನಪಕುಮಾರಾ ಭಾನುವಂಶಭಾಸ್ಕರಾ ದುರಿತವಿದೂರಾ ಪ ಮಾರಕೋಟಿಸುಂದರ ಶರಧಿಗಂಭೀರ ಶೂರ ದೈತ್ಯಭೀಕರ ಪರಮ ಉದಾರ 1 ವಾನರೇಂದ್ರ ವಂದಿತ ಮೌನಿನಿಕರ ಸೇವಿತ ಸನ್ನುತ 2 ಪಾಹಿ ಪಾಹಿ ರಾಘವೇಶ ಪಾಹಿ ಲೋಕೇಶ ಪಾಹಿ ಪಾಹಿ ಮಾಂಗಿರೀಶ ಸುಪ್ರಕಾಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜೋ ಜೋ ಸುಚರಿತ್ರ ಪರಮ ಪವಿತ್ರಾ ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ ಜೋ ಜೋ ವಟಪತ್ರಶಯನ ವಿಚಿತ್ರ ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ ಸನ್ನುತ ಸ್ವರರೂಪ ಚಿತ್ರ ನಿಶಿಚರಹರ ನಿತ್ಯಸುಖದಾತ ಮಿತ್ರಾ [ತ್ರಿಶಿರಾದ್ಯಸುರ ಸಂಹಾರಕನೇತ್ರ] 1 ಕರುಣಾಕಾರ ದಿವ್ಯ ಶಶಿಬಿಂಬವದನಾ ಶರಣಜನಾನತ ಮರಕತವದನಾ ಧರಣಿಜಲೋಲ ಭಾಸ್ಕರವಂಶಮದನಾ ನಿತ್ಯ ಮಾಂಗಿರಿಸದನಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜ್ಞಾನಭ್ಯಾಸವ ಮಾಡಿ ಹೀಗೆ ತಾನೊಲಿದು ಜ್ಞಾನ ಗುರು ಖೂನಾಗುವ್ಹಾಂಗೆ ಧ್ರುವ ಮನದಲಿ ಬಾವ್ಹಾಂಗ ನೆನೆದಲಿ ಕಾಂಬ್ಹಾಂಗೆ ತನುವಿನಲಿ ನಿಜಗೊಂಡು ತಾ ನೆಲೆಯಗೊಂಬ್ಹಾಂಗೆ ಅನುದಿನನದಲ್ಯನುಭವಿಸುವ್ಹಾಂಗೆ ಕನಗರಸಿದಲಿ ಮನೋಹರ ಮಾಡುವ್ಹಾಂಗೆ 1 ಅರ್ವಿನಲಿರುವ್ಹಾಂಗೆ ಕುರುಹುದೋರುವ್ಹಾಂಗೆ ಇರುವ್ಹ ನೆಲೆಗೊಂಡು ತಾನೆವೆ ಸ್ಥಿರವಾಗುವ್ಹಾಂಗೆ ಮರವು ಮರದೀಡ್ಯಾಡುವ್ಹಾಂಗೆ ಗುರು ಚರಣ ಕಮಲವನು ಗುರುತಾಗುವ್ಹಾಂಗೆ 2 ಧ್ಯಾಸ ನೀಜ ಬಲುವ್ಹಾಂಗೆ ವಾಸನೆ ಪೂರಿಸುಹಾಂಗೆ ಭಾಸ್ಕರ ಕೋಟಿ ಪ್ರಕಾಶ ಭಾಸಿಸುವ್ಹಾಂಗೆ ಭಾಸ್ಕರ ಬಾಹ್ಯಾಂತ್ರಲಿವ್ಹಾಂಗೆ ಲೇಸಾಗಿ ಮಹಿಪತಿ ಸ್ವಾಮಿಒಲುವ್ಹಾಂಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತತ್ತೆ ್ವೀಶರಿಗೆ ನಮಸ್ಕಾರ ಪ ಸತ್ತ ್ವಗುಣಿಗಳಾದ ಸಾಧುಜನರಿಗೂ ಅ.ಪ ಮರತನುತ್ವಕ್ಕಿಗೆ ಶ್ರವಣದಿ ದಿಗ್ದೇ ವರು ಕಣ್ಣಲಿ ಭಾಸ್ಕರನಿರುವಾ ಕರ ಇಂದ್ರನು ಪದಕಿಂದ್ರಜ ವೈಶ್ವಾ ನರವಾಕ್ಕಿಗೆ ಗುಹ್ಯದಿ ಮನುಪತಿ1 ಗುದಕೆ ಮಿತ್ರ ರಸನದಿ ವರುಣನು ಘ್ರಾ ದಸ್ರರು ಯೀಪತ್ತು ಜನಂ ವಿದುಧರ ಹಂಕಾರದಿ ಮನಕಿಂದು ಮ ತಿದಾತ ಚಿತ್ತದೊಳುದಧಿಜೆ ಕರ್ತಳು 2 ಐದು ಭೂತದೊಳಗೈದುರೂಪ ಮ ತ್ತೈದು ವಿಷಯದೊಳು ತದ್ರೂಪ ವೈದುತಲಿಪ್ಪತ್ತೈದಕೆ ಸಾಕ್ಷಿಯು ಮೋದಮಯನು ಶ್ರೀಗುರುರಾಮ ವಿಠಲನು 3
--------------
ಗುರುರಾಮವಿಠಲ
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1 ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2 ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3 ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4 ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ ಪತಿ ನಿನ್ನ ಬ್ರಹ್ಮ ಪಾ ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ. ನಮಿಪ ಜನರ ಕಲ್ಪದ್ರುಮ ದುಷ್ಟದಾನವ ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು ಕಾಯ ಹೃ ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ ಗಮವೇದ್ಯ ವೇದವ್ಯಾಸ ಕಪಿಲ ದತ್ತ ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ ಸಮುದಾಯಕೀಯೋ ಲೇಸಾ ಆನತ ಬಂಧು ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ 1 ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ ಜನ ಮನೋರಂಜನ ಜನಕಜಾರಮಣ ಪೂ ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ ಕೌಸ್ತುಭ ಮಣಿ ವೈಜಯಂತೀ ಸ ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ ಚನ ಭಕ್ತಜನಮಂದಾರಾ ವಂದಿಸುವೆ ಮ ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ 2 ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ ನೆವದಿಂದ ದಾಶರಥೀ ಸಂಗಡ ಯುದ್ಧ ತವಕದಿ ಮಾಡಿ ಭೀತಿ ಬಟ್ಟವನಂತೆ ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ3 ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ ಭೃತಸಾರ ಸರ್ವೋತ್ತಮ ನೀನೆ ಪಾಂಡು ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ 4 ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ ಫಲ ಚತುಷ್ಟಯನಾಮ ಫಲಸಾರ ಭೋಕ್ತø ಶಂ ಬಲನಾಗಿ ಭಕತರ ಸಲಹುವ ಕರುಣಿ ಶಂ ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ ನಿಲಯ ನಿರ್ಗತ ದುರಿತಾ ಮನ್ಮನದ ಚಂ ಚಲವ ಬಿಡಿಸೋ ನಿರುತಾ ಬೇಡಿಕೊಂಬೆ ತಲೆ ಬಾಗಿ ಸರ್ವಗತಾ ನೀನಹುದೆಂದು ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ 5 ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ ಉದರ ನಾಮಕ ನೀನು ಉದರದೊಳಿದ್ದೆನ್ನ ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ ಬದಿಗನಾಗಿರಲು ಪಾಪ ಕರ್ಮಗಳು ಬಂ ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ ಬುಧ ಜನರಂತಸ್ತಾಪಾ ಕಳೆದು ನಿತ್ಯ ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ 6 ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ ವಣನ ಬಾಹುಬಲ ಗಣಿಸಿದೆ ನಿಶಿತ ಮಾ ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ 7 ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ ಸಶರೀರದೊಳು ಸುಮನಸರ ಪಡೆದು ನಿನ್ನಾ ಪೆಸರಿಟ್ಟು ಅವರವರೊಶನಾದೋಪಾದಿ ತೋ ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ವಾಸಿಸುತ ರ ಕ್ಕಸರನಂಧಂತಮದಿ ದಣಿಸುತಿಪ್ಪ ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ 8 ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ ತಾಪಸ ಜನರ ಹೃತ್ತಾಪದರ ಧರ್ಮ ಸುಜನ ಲೋ ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು ಣೋಪಾಸಕರ ಸಲಹಲೋಸುಗದಿ ಸ ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ ಕೂಪಾರ ನಾವಿಕ ಭೂಪತಿ ವರಹಾ 9 ಕೂರ್ಮ ಕ್ರೋಡ ವಪುಷ ಹಿರಣ್ಯಕ ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ ನೃಪರ ಸಂಹರಿಸಿದ ಕಪಿವರ ಪೂಜಿತ ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ ಅಮಿತ ರೂಪಾತ್ಮಕ ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ 10 ವಟಪತ್ರಶಯನ ವೆಂಕಟಗಿರಿ ನಿಲಯ ನಿ ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ ಪರಿಸುತ್ತ ಸತಿಗೆರಸಿ ಕುಣಿದನೆಂದು ತ್ಕಟದಿ ಕೈಗಳ ಬಾರಿಸಿ ಜಗನ್ನಾಥ ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ11
--------------
ಜಗನ್ನಾಥದಾಸರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಿವಿಜ ಪ ಓ ಗುರುಮಾನ್ಯ ಕಾಮಿತ ನೀರಜ ತ್ಯಾಗಿ ಶುಭಾಂಗ ಭಾಸ್ಕರತೇಜ ಅ.ಪ ಕಂಗಳ ನೀಡಿದೆ ಚರಣವ ತೋರಿದೆ ಬಂಗಾರವ ನೀ ಪಡೆದೆ | ಪಂಗುತಾ ನಡೆಯಲಾದ ಮಂಗನ ಸಿಂಗಗೈದೆ | ಇಂಗಿತಜ್ಞನೀನೆಲೆ ಮಾಂಗಿರಿರಂಗನ ಪ್ರೇಮದಿಂದರ್ಚಿಸುವ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವ ಬಂದ ದೇವಕಿ ಕಂದ ಧ್ರುವ ದೇವ ಬಂದ ದೇವತಿಗಳ ಪ್ರಿಯ ಭುವನತ್ರಯಕಾಗಿಹ್ಯಾಶ್ರಯ 1 ಮಾಧವ ಮುರಾರಿ ಸಾಮಜ ವರದ ಸದಾ ಸಹಕಾರಿ 2 ಉರಗ ಶಯನ ಹರಿಕರುಣಾನಂz ಗರಡುವಾಹನ ಗೋಪಾಲ ಗೋವಿಂದ 3 ಸರ್ವಾನಂದ ಶ್ರೀ ಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ 4 ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರ ಕೋಟಿ ಸುತೇಜ ಪ್ರಕಾಶ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದ್ವಾರಪಾಲಕರಿಗಾನಮಿಪೆ ನಿತ್ಯ ಶ್ರೀ ರಮಣ ನಾರಯಣನ ಪುರತ್ರಯದೊಳಿಹ ಪ ಜಯ ವಿಜಯ ಬಲಪ್ರಬಲ ಚಂಡ ಪ್ರಚಂಡ ನಿ ರ್ಭಯ ನಂದ ಸುನಂದ ಕುಮುದ ಕುಮುದಾ ಧಾಮ ಸುಧಾಮ ಸಂ ಪ್ರಿಯ ತಮನ ಆಜ್ಞಾಧಾರಕರೆಂದೆನಿಸುವ 1 ಲಸದೂಧ್ರ್ವಪುಂಡ್ರ ದ್ವಾದಶನಾಮ ಶಂಖ ಸುದ ರುಶನ ಸುಗದಾ ಪದ್ಮ ನಾಮ ಮುದ್ರಾ ಕುಸುಮ ಮಾಲಿಕೆ ಧರಿಸಿ ನಸುನಗುತಹರ್ನಿಶಿಗಳಲಿ ಹರಿಯ ತುತಿಪಾ 2 ಕುಂಡಲ ಹಾರ ಪದಕ ಕಂ ಕಣ ನಡುವಿನೊಡ್ಯಾಣ ಪೀತಾಂಬರ ಕ್ವಣಿತನೂಪುರ ಗೆಜ್ಜೆ ಚರಣಾಭರಣ ಸುಲ ಕ್ಷಣರಾದ ಸರ್ವಾಂಗ ಸುಂದರರೆನಿಸುವಾ 3 ಕರದೊಳೊಪ್ಪುವ ಗದಾಯುಧ ಕುಂದರದನ ಕ ಸ್ತುರಿನಾಮ ಮಾಣಿಕಕ್ಷತೆಯ ಧರಿಸಿ ಕುಸುಮ ಕೇಸರಿ ಗಂಧದಿಂ ಭಯಂ ನಿತ್ಯ 4 ಮೂರು ಬಾಗಿಲಲಿ ಶ್ರೀ ದೇವಿಯಿಪ್ಪಳು ವಾಯು ಭಾರತಿ ಆಜ್ಞದಿಂದೀ ದೇವರು ವೀರಜಯ ವಿಜಯಾದಿಗಳಿಗೆ ವಿಷ್ವಕ್ಸೇನ ಪ್ರೇರಕನು ತಾನಾಗಿ ಶ್ರೀಶನರ್ಚಿಪನೆಂದು 5 ಹೃದಯ ಶ್ರೋತ್ರ ಚಕ್ಷುವದನಾದಿ ಕರಣದೊಳು ನದನದಿಗಳೊಳು ಮಹೋದಧಿಗಳೊಳಗೆ ಉದಿತ ಭಾಸ್ಕರ ಮಂಡಲದಿ ದೇವಗೃಹದಿ ಸದಸದ್ವಿಲಕ್ಷಣ ಸುದತಿಸಹ ಪೂಜಿಸುವ 6 ದ್ರುಹಿಣ ಮೊದಲಾದ ಸುಮನಸ ಪೂಜ್ಯ ಚರಣಾಬ್ಜ ಮಹಿಮ ಮಂಗಳಚರಿತ ಸುಗುಣ ಭರಿತ ಅಹಿರಾಜ ಶಯನ ಜಗನ್ನಾಥವಿಠಲನ ಸ ನ್ಮಹಿಮೆಗಳ ತಿಳಿಸಿ ತೋರಿಸಲಿ ಮನ್ಮನದೀ 7 ತೀರ್ಥಕ್ಷೇತ್ರ
--------------
ಜಗನ್ನಾಥದಾಸರು
ಧನ್ಯವಾಯಿತು ಜೀವವಿಂದು ಚೆನ್ನಾಗಿ ಪೂರ್ಣ ದಿವಸಕೆ ನಡೆದು ನಾ ಬಂದು ಧ್ರುವ ತೋರುತಿಹುದು ಸಂತೋಷ ಮನದೊಳತಿವುಲ್ಹಾಸ 1 ಕಣ್ಣಾರೆ ಕಂಡೆವು ನಿಧಾನ ಭಿನ್ನವಿಲ್ಲದೆ ಭಾಸ್ಕರ ಗುರುಚರಣ ಮುಕ್ತವಾಯಿತು ಜೀವನ 2 ಪುಣ್ಯಚರಣ ಸೇವೆಮಾಡಿ ಪಾದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ ಬ್ರಹ್ಮಾನಂದ ವಸ್ತು ನೀನೆ ಸಮಸ್ತ ಜನಪ್ರಿಯ ಧ್ರುವ ಮೊರೆಯನಿಟ್ಟ ಧ್ರುವಗೆ ನೀನು ಕೊಟ್ಟ್ಯೋ ಪದ ಆಢಳ ಕರಿಯ ಮೊರೆಯ ಕೇಳಿ ನೀನು ಸೆರಿಯ ಬಿಡಿಸಿದ್ಯೊ ದಯಾಳು ಶರಣು ಹೊಕ್ಕ ತರಳಗಿನ್ನು ಪಡದ್ಯೊ ಪ್ರಾಣ ನಿಶ್ಚಳ ಸ್ಮರಣೆಗೊದಗಿ ಬಂದ್ಯೊ ಪಾಂಡವರಿಗೆ ತಾತ್ಕಾಳ 1 ಮೊರೆಯನಿಟ್ಟ ದ್ರೌಪದಿಗೆ ವಸ್ತ್ರ ಪೂರಿಸಿದ್ಯೊ ಪೂರ್ಣ ಧರೆಯೊಳು ಶಿಲೆಯಾಗಿದ್ದ ಸತಿಗೆ ಮಾಡಿದ್ಯೊ ಉದ್ದರಣ ಪರಿ ಹೊರೆವ ಪೂರ್ಣ ಭಕ್ತರ ಪ್ರಾಣ ವರ್ಣಿಸಲಾಗದೊ ನಿಮ್ಮ ದಯವೃತ್ತಿ ನಿಜಗುಣ 2 ವಾಸುದೇವ ನಿಶ್ಚಯ ಭಾಸ್ಕರ ಕೋಟಿ ತೇಜ ಭಾಸುತಿಹ ನಿಮ್ಮ ದಯ ಲೇಸಾಗಿ ಪಾಲಿಸೊ ಪೂರ್ಣ ದಾಸ ಮಹಿಪತಿಯ ವಿಶ್ವದೊಳಾನಂದದಿಂದ ರಕ್ಷಿಸುವ ನಿಮ್ಮ ಭಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧ್ಯಾನಿಸು ಮನವೆ ನೀ ಧ್ಯಾನಿಸು ಪ. ಧ್ಯಾನಿಸು ಮನವೆ ಶ್ರೀಹರಿಯ ಪಾದಧ್ಯಾನನಿರುತ ಈ ಪರಿಯ ಆಹಾಪ್ರಾಣಾಪಾನವ್ಯಾನೋದಾನಸಮಾನರ್ಗೆ ಪ್ರಾಣನಾಗಿಪ್ಪ ಮುಖ್ಯ ಪ್ರಾಣಾಂತರ್ಗತನ ನೀ ಅ.ಪ. ಪರಮಾಣು ಪ್ರದೇಶದಲ್ಲಿ ಪ್ರಾಣರಾಶಿ ಅನಂತುಂಟಲ್ಲಿ ಹೀಗೆಒರಲುತಿದೆ ವೇದದಲ್ಲಿ ದೃಷ್ಟಾಂತವ ಪೇಳ್ವೆ ಕೇಳು ದೃಢದಲ್ಲಿ ಆಹಾಪರಮಸೂಕ್ಷ್ಮ ವಟಮರನಾಗಿ ಅದರಲ್ಲಿಪರಿಮಿತಿಲ್ಲದರ ಫಲದಬೀಜವನರಿತು ನೀ 1 ನಿರುತ ಸುವರ್ಣಬ್ರಹ್ಮಾಂಡದಲ್ಲಿ ಹರಿ ಪೂರ್ಣವ್ಯಾಪ್ತ ಅಖಂಡನಾಗಿಮಿರುವುತಲಿಪ್ಪ ಮಾರ್ತಾಂಡ ತೇಜೋಕಿರಣದಂತಿರುವ ಪ್ರಚಂಡ ಆಹಾಹೊರಗೆ ಒಳಗೆ ಸರ್ವತ್ತರದಲ್ಲಿ ಹರಿಮಯ-ವರಿತು ನಿನಗೆ ಎಲ್ಲಿ ದೊರಕಿದ ಸ್ಥಳದಿಂದ 2 ಸಲಿಲಭೂಗಿರಿಲತೆ ನಾನಾವೃಕ್ಷಫಲಖಗಮೃಗ ಕಾನನತೃಣ ಪೊಳೆವಪಾವಕತರುಪವನ ಮುಕ್ತಸ್ಥಳ ಅವ್ಯಾಕೃತ ಗಗನ ಆಹಾಒಳಗೆ ಹೊರಗೆ ಹರಿ ಚಲಿಸದೆ ಇರುತಿಪ್ಪಸ್ಥಳದ ನಿಲುವಿನಂತೆ ತಿಳಿದು ನೀ ಅದರಂತೆ 3 ತೈಜಸ ನಿತ್ಯ 4 ಸಪ್ತಾವರಣ ಶರೀರದಿ ದಶಸಪ್ತದ್ವಿಸಹಸ್ರ ನಾಡಿಯಲಿ ದಶ-ಸಪ್ತದ್ವಿಸಹಸ್ರ ರೂಪದಲ್ಲಿ ಹರಿವ್ಯಾಪ್ತ ನಿರ್ಲಿಪ್ತಸ್ಥಾನದಲ್ಲಿ ಆಹಾಆಪ್ತನಂತಿರುವ ಸುಷುಪ್ತಿ ಸ್ವಪ್ನ ಜಾಗ್ರದಿತಪ್ತಕಾಂಚನದಂತೆ ದೀಪ್ತಿಸುತಿಪ್ಪನ 5 ಜೀವರಿಂದತ್ಯಂತ ಭೇದ ಪ್ರತಿಜೀವಾಂತರದಲಿ ಪ್ರಮೋದನಾಗಿಆವಾಗ ಚರಿಸುವ ವೇದ ಪೇಳುವುದು ಸತ್ಯಂಭಿದಾ ಆಹಾಈ ವೇದಾರ್ಥವು ಸಾವಧಾನದಿ ತಿಳಿದುಶ್ರೀವಾಯುಮತವ ಕೋವಿದರೊಡಗೂಡಿ6 ಶ್ರೀ ಕೇಶವನೆ ಮೂಲಾಸಿ ಶ್ರುತಿ ಏಕೋನಾರಾಯಣಾಸಿ ನಾನಾಲೋಕ ಸೃಷ್ಟಿಪದ ತಾನಾಸಿ ತಾರಕಮಂತ್ರ ಉಪದೇಶಿ ಆಹಾನೀ ಕೇಳು ನಿಗಮಾರ್ಥ ನೀಕರಿಸು ಸಂಶಯಏಕಮೇವಾದ್ವಿತೀಯನೆಂಬೊ ಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉತ್ತುಂಗಗುಣಗಣತರಂಗ ಕಾ-ಳಿಂಗಸರ್ಪನ ಮದಭಂಗ ಭುಜಂಗಶಯನ ಅಮಲಾಂಗ ಆಹಾಪಿಂಗಳ ಇಡಾ ಮಂಗಳ ಸುಷುಮ್ನ ಸುಸಂಗಮ ಮಧ್ಯದಿ ತಿಮಿಂಗಿಲಂತಿಪ್ಪನ 8 ಮೂರ್ತಿ ಬಲು ಅದುಭುತದಿವ್ಯಕೀರ್ತಿಅದೆ ಪದುಮಜಾಂಡದಿ ಪರಿಪೂರ್ತಿ ದೊರೆವುದಕೆ ಬೇಕು ವಾಯುಸಾರ್ಥಿ ಆಹಾಅದೆ ಬಿಂಬಮೂರ್ತಿ ಜೀವದಾಕಾರವಾಗಿ ತಾಪದುಮಜಾಂಡದಲಿಪ್ಪ ಸದಮಲಾತ್ಮಕನ 9 ಧರೆಯನಳೆದ ದಿವ್ಯಚರಣ ಅದು ಮೆರವುತಿಪ್ಪುದು ಕೋಟಿ ಅರುಣನಂತೆಪರಿಪೂರ್ಣಭರಿತವು ಕಿರಣ ತನ್ನ ಸ್ಮರಿಸುವರಿಗೆ ಮಾಳ್ಪ ಕರುಣ ಆಹಾತರುಣಿಯಂದದಿ ನಖದಿ ಸುರನದಿಯ ಪೆತ್ತ ನೂ-ಪುರ ಗೆಜ್ಜೆಪೆಂಡೆಯ ಎರಡೈದು ಬೆರಳನು 10 ಹರಡು ಜಂಘೆಯುಗಜಘನ ಸುರುಚಿರ ರೇಖಧ್ವಜವಜ್ರ ನಾನಾ ದಿವ್ಯ ವರರೇಖೆಯಿಂದಲೊಪ್ಪುವನ ಜಾನು ಪರಮಶೋಭಿಸುವ ಸುಂದರನ ಆಹಾಉರುಟುಕದಳಿಸ್ತಂಭದಂತಿರುವೊ ಊರುದ್ವಯಸರಿಗಾಣೆ ಹರಿ ಉಟ್ಟ ವರಪೀತಾಂಬರವನು 11 ಕುಕ್ಷಿ ನಿಜ ಸುಖಪೂರ್ಣನ 12 ವೈಜಯಂತಿ ಮಂದಾರವನ್ನು ಮುದದಿಂದ ಧರಿಸಿದ ಧೀರ ಆಹಾಪದುಮಜಭವರಿಂದ ತ್ರಿದಶರು ತಿಳಿದಿನ್ನುಸದಾಕಾಲ ಧೇನಿಪರು ಹೃದಯಾಂಬರದಲ್ಲಿ 13 ಕಂಬುಕಂಧರ ಅತಿಗುರುತರ ಭುಜವು ಚತುರ ಆಹಾಮರಿ ಆನೆ ಸೊಂಡಿಲಂತಿರುವ ಬಾಹುಕೀರ್ತಿ ಕೇತಕಿಬೆರಳು ನಕ್ಷತ್ರದರಸಿನಂದದಿ ನಖ14 ಸಿರಿ ಭುಜಕೀರುತಿ15 ಕಂಬು ಅಗಣಿತ ಮಹಿಮನ16 ಮುಗುಳು ಮಲ್ಲಿಗೆ ಮೊಗ್ಗೆ ದಂತಪಂಕ್ತಿ ಜಗವಮೋಹಿಸುವ ಸುಶಾಂತ ಜಿಹ್ವೆನಿಗಮಕ್ಕೆ ವೇದ್ಯವಾದಂಥ ಬಹು ಬಗೆಯಲ್ಲಿ ಮೆರೆವ ಸುಪಂಥ ಆಹಾನಗುವ ವದನ ಝಗಝಗಿಸುವ ಕುಂಡಲಕರ್ಣಮಿಗೆ ಕೂರ್ಮಕದಪು ಸಂಪಿಗೆನಾಸಿಕವನ್ನು 17 ಕರುಣಶಾಂತಶುಭನೋಟ ಕಂಗಳೆರಡರ ಚೆಲ್ವಿಕೆ ಮಾಟ ಇನ್ನುಅರವಿಂದದಳವೆನ್ನು ದಿಟ ಇನ್ನು ತರಣಿಚಂದ್ರಮರ ಕೂಟ ಆಹಾಶರಣಜನರ ಮನೋಹರ್ಷವಾರ್ಧಿಗೆ ಚಂದ್ರದುರುಳ ದಿತಿಜತಿಮಿರಕ್ಕೆ ಭಾಸ್ಕರನ 18 ಚಾಪ ತಲೆಯ ತಗ್ಗಿಸುವಂಥಾ ರಚನಾಫಾಲದಲಿಟ್ಟ ತಿಲಕ ಸುಂದರ ಲೋಕ ಕಳವಳಗೊಳಿಸುವ ಸುಗುಣ ಆಹಾನಳಿನವದನದಲ್ಲಿ ಅಳಿಗಳಂತೊಪ್ಪುವಸುಳಿಗುರುಳಿನ ಮ್ಯಾಲೆ ಒಲೆವ ಅರಳೆಲೆಯನ್ನು 19 ನಿತ್ಯ ನಖ ಲಲಾಟ ಪರಿಯಂತ್ರನೋಟದಿಂದಲಿ ಈಶಕೋಟಿ ಸಹಿತನ 20 ನಿತ್ಯ 21
--------------
ಗೋಪಾಲದಾಸರು
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಪ ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಅ.ಪ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ನಿತ್ಯ 1 ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು ದೊರಕಿದ ಸ್ಥಳದಲ್ಲಿ 2 ಸಲಿಲ ಭೂಗಿರಿ ಲತೆ ನಾನಾ-ವೃಕ್ಷ ಮೃಗ ಪಕ್ಷಿ ಕಾನನ-ಮುಕ್ತ ಸ್ಥಳಗಳವ್ಯಾಕೃತ ಗಗನ, ತೃಣ- ಪಾವಕ ತರು ಪವನ-ಆಹ ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ ನೆಲೆಯ ನೀ ನಲವಿಂದ ತಿಳಿದು ಆವಾಗಲು3 ವಿಶ್ವ ಮತ್ಸ್ಯಾದಿ, ತೇಜೊ ರಾಶಿ ಹಯಗ್ರೀವಾದಿ, ಜೀವ ರಾಶಿಯೊಳಿದ್ದು ಅನಾದಿ ಸರ್ವ ದೇಶ ಭೇದಿಸುವಂಥ ವೇದಿ-ಆಹ ಮೂರ್ತಿ ಶ್ರೀಶ ರಂಗನೆಂದು ನಿತ್ಯ 4 ಸಪ್ತಾವರಣ ದೇಹದಲ್ಲಿ, ದಶ ಸಪ್ತ ದ್ವಿಸಹಸ್ರ ನಾಡಿಯಲಿ, ದಶ ಸಪ್ತ ದ್ವಿಸಹಸ್ರ ರೂಪದಲಿ ಹರಿ ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ5 ಜೀವರಿಂದತ್ಯಂತ ಭೇದ, ಪ್ರತಿ ಜೀವಾಂತರದಲ್ಲಿ ಮೋದನಾಗಿ ಯಾವಾಗಲಿರುತಿಹ ವೇದ-ದಲ್ಲಿ ಪೇಳುವುದು ಸತ್ಯಂಭಿದಾ-ಆಹ ಈ ವಿಧ ವೇದಾರ್ಥ ಸಾವಧಾನದಿ ತಿಳಿದು ಶ್ರೀ ವಾಯುಮತದ ಸುಕೋವಿದರೊಡಗೂಡಿ 6 ಶ್ರೀಕೇಶವನೆ ಮೂಲರಾಶಿ, ಶ್ರುತಿ- ಏಕೋ ನಾರಾಯಣ ಆಸೀತ್ ನಾನಾ ಲೋಕ ಸೃಷ್ಟಿಪ ಧಾತನಾಸೀತ್, ಜಗ ದೇಕತಾರಕ ಉಪದೇಶೀ-ಆಹ ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉ- ತ್ತುಂಗ ಗುಣಾಂತರಂಗ, ಕಾ ಳಿಂಗ ಸರ್ಪನ ಮದಭಂಗ, ಭು ಜಂಗಶಯನ ಅಮಲಾಂಗ-ಆಹ ಮಂಗಳ ಇಡಾ ಪಿಂಗಳ ಸುಷುಮ್ನ ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ 8 ಹೃದಯಸ್ಥಾನದಲಿದ್ದ ಮೂರ್ತಿ, ಬಲು ಅದುಭುತಾತನ ದಿವ್ಯಕೀರ್ತಿ, ಅದು ಪದುಮುಜಾಂಡದಿ ಪರಿಪೂರ್ತಿ ತರು ವುದಕೆ ಬೇಕು ವಾಯು ಸಾರಥಿ-ಅಹಾ ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ ಪದುಮಕೋಶದಲ್ಲಿ ಸದಮಲಾತ್ಮಕನನ್ನು 9 ಧರೆಯನಳೆದ ದಿವ್ಯ ಚರಣ, ಅದು ಮೆರೆವುತಿಹುದು ಕೋಟಿ ಅರುಣನಂತೆ ಪರಿಪೂರ್ಣ ಭರಿತವು ಕಿರಣ, ಸ್ಮರಿ- ಪರಿಗೆ ಮಾಡುವುದು ಕರುಣ-ಆಹ ತರಣಿಯಂಥ ನಖದಿ ಸುರನದಿಯನು ಹೆತ್ತ ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು 10 ಪೆರಡು ಜಾನು ಜಂಘೆ ಘನ್ನ ಸುರು- ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ ವರ ರೇಖೆಯಿಂದಲೊಪ್ಪುವನ, ಜಘನ ಪರಮ ಶೋಭಿತ ಸುಂದರನ-ಆಹ ಕದಳಿ ಕಂಬ ಇರುವೂರು ಶೋಭಿಸೆ ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು 11 ಗಜವೈರಿಯಂತಿಪ್ಪ ಮಧು ಬಲು ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ ನಿಜಘಂಟೆ ಘಣರೆಂಬೊ ವಾದ್ಯ, ಕು ಬುಜೆ ಡೊಂಕ ತಿದ್ದದನಾದ್ಯ-ಆಹ ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ ಕುಕ್ಷಿ ನಿಜಪೂರ್ಣ ಸಖನನ್ನು 12 ಉದರ ತ್ರಿವಳಿ ನಾನಾ ಹಾರ ದಿವ್ಯ ಪದಕ ಪವಳದ ವಿಸ್ತಾರ ರತ್ನ ಮುದದಿಂದ ಧರಿಸಿದ ಧೀರ ಸುಂದರ ವಾದ ಕಂಬುಕಂಧರ-ಆಹಾ ಪದುಮಜ ಭವರಿಂದ ತ್ರಿದಶರು ತಿಳಿಯುತ್ತ ಸದಾಕಾಲ ಧ್ಯಾನಿಪ ಹೃದಯಾಂಬರವನ್ನು 13 ಸಿರಿವತ್ಸ ಕೌಸ್ತುಭಹಾರ, ಮೇಲೆ ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ ವೈಜಯಂತಿ ಮಂದಾರ, ಗುರು ತರವಾದ ಭುಜ ಚತುರ-ಆಹ ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ ಬೆರಳು ನಕ್ಷತ್ರದ ಅರಸಿನಂತೆ ನಖ14 ಕರಚತುಷ್ಟಯದಲ್ಲಿ ಶಂಖ, ಚಕ್ರ ವರಗದೆ ಪದುಮು ನಿಶ್ಶಂಕನಾಗಿ ಧರಿಸಿ ಮೆರೆವೊ ಅಕಳಂಕ, ದುರು ಳರ ದಂಡಿಸುವ ಛಲದಂಕ ಆಹ ಬೆರಳು ಮಾಣಿಕದುಂಗುರ ಕಡಗ ಕಂಕಣ ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ15 ಅಗರು ಚಂದನ ಗಂಧÀಲೇಪ, ಕಂಬು ಸೊಗಸಾದ ಕಂಠಪ್ರತಾಪ, ಮಾವು ಚಿಗುರಲೆ ಕೆಂದುಟಿ ಭೂಪ, ನಸು ನಗುವ ವದನ ಸಲ್ಲಾಪ-ಆಹ ಮಗನಾಗಿ ತಾನು ಗೋಪಿಗೆ ವದನದೊಳು ಅಗಣಿತ ಮಹಿಮನ್ನ 16 ಮುಗುಳು ಮಲ್ಲಿಗೆ ಮೊಗ್ಗೆ ದಂತ ಪಙÂ, ಜಗವ ಮೋಹಿಸುವ ಸುಶಾಂತ ಜಿಹ್ವೆ ನಿಗಮಕೆ ವೇದ್ಯವಾದಂಥ ಬಲು ಬಗೆಯಿಂದ ನಡೆಸುವ ಪಂಥ-ಆಹ ಪೊಗಳಲಾರದು ವೇದ ಖಗವಾಹನನ ಮಹಾ ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು 17 ಪೊಳೆವೊ ವಿದ್ಯುತ ಕಪೋಲ, ನೀಲೋ- ತ್ಪಲದಳ ನೇತ್ರ ವಿಶಾಲ, ದಿವ್ಯ- ತಿಲಕವನಿಟ್ಟ ಸುಫಾಲ, ನೀಲಾ- ಚಲಕಾಂತಿ ತನುರುಹ ಜಾಲ-ಆಹ ಕುಂಡಲ ಕರ್ಣದೊಲುಮೆಯ ಚೆಲುವಿಕೆ ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ 18 ಶುಭ ನೋಟ, ಕಂಗ- ಳೆರಡ ಚೆಲುವಿಕೆ ಮಾಟಕಿನ್ನು ಅರವಿಂದ ಸರಿಯಿಲ್ಲ ದಿಟ ಅಲ್ಲಿ ತರಣಿ ಚಂದ್ರಮರ ಕೂಟ-ಆಹ ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ 19 ಹೊಳೆವ ಹುಬ್ಬುದ್ವಯ ಸ್ಮರನ ಚಾಪ- ತಲೆ ತಗ್ಗಿಸುವಂಥ ರಚನ ಫಾಲ- ದಲ್ಲಿಟ್ಟು ತಿಲಕ ಸುಂದರನ ಲೋಕ- ಕಳವಳಗೊಳಿಸುವ ಸುಗುಣ-ಆಹ ನಲಿವ ವದನದಲ್ಲಿ ಅಳಿಗಳಂತೊಪ್ಪುವ ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು 20 ರೂಪ ಶೃಂಗಾರ ವಿಲಾಸ ಉಡು- ಭೂಪ ನಾಚುವ ಮುಖಹಾಸ ವಿಶ್ವ ರೂಪ ಧೃತ ಸ್ವಪ್ರಕಾಶ ಸರ್ವ ವ್ಯಾಪಕಾಖಿಳ ಜಗದೀಶ-ಆಹ ತಾಪಸರಿಗೆ ಕರುಣಾಪಯೋನಿಧಿ-ಅಣು ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ21 ಕೋಟಿಮಾರ್ತಾಂಡ ಸಂಕಾಶ ಕಿ ರೀಟಕ್ಕೆ ಅಸಮ ಪ್ರಕಾಶ ಎಲ್ಲು ಸಾಟಿಗಾಣೆನು ಲವಲೇಶ ಕಪಟ- ನಾಟಕ ಶ್ರೀ ಲಕುಮೀಶ-ಆಹ ನಖ ಲಲಾಟ ಪರಿಯಂತ ನೋಟದಿಂದಲೆ ಈಶ ಕೋಟಿ ಸಹಿತನಾಗಿ 22 ಕಾಮಾದಿಗಳನೆಲ್ಲ ತರಿದು ಮುಕು- ತೀ ಮಾರ್ಗವನ್ನೆ ನೀನರಿದು ಅತಿ- ಪ್ರೇಮದಿ ಗುರುಗಳ ನೆನೆದು ಹೇಮ ಭೂಮಿ ಕಾಮಿನಿಯರ ಜರಿದು-ಆಹ ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ ಯುಗ್ಮ ನಿತ್ಯ 23
--------------
ವಿಜಯದಾಸ