ಒಟ್ಟು 51 ಕಡೆಗಳಲ್ಲಿ , 11 ದಾಸರು , 49 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮ ರಾಮ ರಾಮ ರಾಮವೆನ್ನಿರೊ |ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು1ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5
--------------
ಪುರಂದರದಾಸರು
ಶರಣು ಸಕಲ ಪ್ರಾಣನಾಥಸರಸಿಜಭವ ಪದವಿಭೋಕ್ತಮೂರವತಾರಿಮುಖ್ಯಪ್ರಾಣಹರಿಪರಾಯಣ ತೇ ನಮೊ ಪ.ತುತ್ತಿಸಿನನ ಬಿಸುಟು ಜಗದಕರ್ತರಘು ಪುಂಗವನ ಪದದಿಭಕ್ತಿ ಬಲಿದು ಇತರ ವಿಷಯಚಿತ್ತನಾಗದ ಸುಗುಣಧೀಹತ್ತು ಹೆಡಕಿನವನ ವನವಕಿತ್ತು ಸಭೆಯನುರುಹಿ ಭಯವಬಿತ್ತಿಜನನಿಕುಶಲ ಒಡೆಯಗಿತ್ತ ಹನುಮ ತೇ ನಮೊ 1ಮುಪ್ಪಿನವಳ ಮಗನನರಿದು ಕೃಷ್ಣಾರ್ಪಣವನೆ ಮಾಡಿನೃಪರಕಪ್ಪಹೊರಿಸಿ ತಂದು ಮಖಕೆಒಪ್ಪಿಸಿದ ಅಗ್ರಜಾತಗೆಭೂಪನಣ್ಣನ ಅಣುಗರನ್ನುಅಪ್ಪಳಿಸಿ ತಮಸಕೆ ಕಳುಹಿತಪ್ಪದೆಂದೂ ರಂಗ ಸೇವೆಯೊಳಿಪ್ಪ ಶ್ರೀಭೀಮ ತೇ ನಮೊ 2ವಿಷ್ಣುಭಟರ ಮತಿಗೆ ಕಲಿಯುವೇಷ್ಟಿಸಿರಲು ಬ್ರಹ್ಮಸೂತ್ರಸ್ಪಷ್ಟ ತಿಳುಹಿ ತಾತ್ವಿಕ ಜನಶ್ರೇಷ್ಠಿ ನೆರಹಿ ಮಿಥ್ಯರಭ್ರಷ್ಟವಚನ ನೀಕರಿಸಿ ನಿಜೇಷ್ಟಮತರ ಹೊರೆದೆ ಗುರುವರಿಷ್ಟ ಮಧ್ವಪ್ರಸನ್ನವೆಂಕಟಕೃಷ್ಣ ಮತ್ಯ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಶ್ರವಣಮನನ ನಿಧಿ ಧ್ಯಾನವು ಯೋಗಕ್ಕೆಸಮನಿಸೆ ಸಾಧಕಂಗೇತಕೆ ಈ ಮೂರುಪನಿತ್ಯಗುರುಮುಖದಿಂದ ನಿಜವೇದಾಂತ ಸಾರವ-ನಿತ್ಯಕಾಲದಲ್ಲಿ ಕೇಳುತಲಿ ಇದ್ದುನಿತ್ಯಜೀವರಪರಮನಿಲುಗಡೆಗಳ ತಿಳಿದುಸತ್ಯತಾನೆಂದು ಕಂಡು ನಿಶ್ಚೈಸಿದುದೆ ಶ್ರವಣ1ವಾಸನೆಹರವಾಗಿ ಬಲಿದು ಆತ್ಮಾನಂದಕೆಸೂಸದೆ ಮನವನು ನಿಲ್ಲಿಸುತದೇಶಿಕೋತ್ತಮನಿಂದ ತನಗಾವ ಉಪದೇಶಬೇಸರಿಸದೆ ಮತ್ತೆ ಮತ್ತೆ ನೆನೆವುದೆ ಮನನ2ದಧಿಮಥನವ ಮಾಡೆನವನೀತತೇಲುವೊಲುಉದಧಿಮಥಿಸೆ ಅಮೃತ ತಾ ಬಂದಂತೆಮಥಿಸೆ ಕಾಷ್ಟಕ್ಕೆಕಾಷ್ಠಅಗ್ನಿ ತಾ ಪುಟಿದಂತೆವಿಧಿಸೆ ಈ ತೆರದಲಿ ತಾನದುವೆ ನಿಧಿಧ್ಯಾಸ3ಈ ಮೂರು ಸಾಧನಗಳಿರಬೇಕು ಯೋಗಕ್ಕೆಈ ಮೂರು ಸಾಧಿಸಲು ರಾಜಯೋಗಿ ತಾನುಇವರೊಳು ಒಂದು ಕಡಿಮೆಯಾದರು ಯೋಗಿಯಾಗನುಇಂತಿಲ್ಲದಿರೆ ನಿಜಮುಕ್ತಿ ದೊರಕದು4ಶ್ರವಣವೆಂಬುದು ಅದು ಸರ್ವಸಾಧನವಯ್ಯಶ್ರವಣ ಮನನವಾಗೆ ಶ್ರಮ ಪರಿಹಾರವುಶ್ರವಣ ಮನನ ನಿಧಿಧ್ಯಾಸ ಮೂರಾಗೆಶಿವನೆ ಆತನು ಚಿದಾನಂದ ದೇವನವನು5
--------------
ಚಿದಾನಂದ ಅವಧೂತರು
ಸುಳಾದಿಧ್ರುವತಾಳರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1ಮಠ್ಯತಾಳಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2ತ್ರಿಪುಟತಾಳನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3ಅಟ್ಟತಾಳಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4ಆದಿತಾಳಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5ಜತೆಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
--------------
ಪ್ರಸನ್ನವೆಂಕಟದಾಸರು