ಒಟ್ಟು 1457 ಕಡೆಗಳಲ್ಲಿ , 99 ದಾಸರು , 1157 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮೂಲ್ಕಿಯ ನರಸಿಂಹ ದೇವರು) ರಕ್ಷಿಸು ಮನದಾಪೇಕ್ಷೆಯ ಸಲಿಸುತ ಲಕ್ಷ್ಮೀನರಹರಿ ರಾಕ್ಷಸವೈರಿ ಪ. ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ. ಉಭಯ ಶುಚಿತ್ವವು ಊರ್ಜಿತವೆನೆ ಜಗ- ದ್ವಿಭು ವಿಶ್ವಂಭರ ವಿಬುಧಾರಾದ್ಯ ಶುಭಮತಿ ಸಂಸ್ಥಿತಿಯಭಯವ ಪಾಲಿಸೊ ತ್ರಿಭುವನಮೋಹನ ಪ್ರಭು ನೀನನುದಿನ1 ಸಿಂಧುಶಯನ ನಿತ್ಯಾನಂದ ಗುಣಾಬ್ಧೇ ಹಿಂದಣ ಪಾಪವು ಮುಂದೆಸಗದ ರೀತಿ ಮಂದರಾದ್ರಿಧರ ಮಾಮವ ದಯಾಕರ 2 ಪಾಪಾತ್ಮರಲಿ ಭೂಪಾಲಕನು ನಾ ಶ್ರೀಪತಿ ಕರುಣದಿ ಕಾಪಾಡುವುದು ಗೋಪೀರಂಜನ ಗೋದ್ವಿಜರಕ್ಷಣ ಕಾಪುರುಷರ ಭಯ ನೀ ಪರಿಹರಿಸಯ್ಯ 3 ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು ಸರ್ವಾಂತರ್ಯದೊಳಿರುವನೆ ಸಲಹೊ ದುರ್ವಾರಾಮಿತ ದುರ್ವಿಷಯದಿ ಬೇ- ಸರ್ವೇನು ಪನ್ನಗಪರ್ವತವಾಸನೇ 4 ಶರಣಾಗತನಾಗಿ ಸೆರಗೊಡ್ಡಿ ಬೇಡುವೆ ವರ ಮೂಲಿಕಪುರ ದೊರೆಯೇ ಹರಿ ಲಕ್ಷ್ಮೀನಾರಾಯಣ ತ್ರಿಜಗ ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ತುಪಾಕಿ ವೆಂಕಟರಮಣಾಚಾರ್ಯ
(ಲಾವಣಿ ಧಾಟಿ) ಕರುಣಾಳು ಕರುಣಾಳು ನಾನಿನಗೆ ಶರಣ್ಯನಾಗಿರೆ ದುರಿತದ ಭಯವ್ಯಾಕೆ ಬಲು ಜೋಕೆ ಪ. ಬಲು ಜೋಕೆಯಿಂದ ನೀ ಸ್ವೀಕರಿಸೆನ್ನ ದ- ಯಾಕರ ತ್ವರೆಯಿಂದ ಸುರವಂದ್ಯ 1 ಪಾದ ಮನ್ಮಂದಿರದ ಲಾ- ನಂದ ಬೀಜಬಿತ್ತು ಫಲವಿತ್ತು 2 ಫಲವಿತ್ತು ಸಲಹು ಪುರುಷೋತ್ತಮ ಸುಲಲಿತ ವರ್ತುಳ ಶುಭನಾಭ ಕರಶೋಭ 3 ಚಕ್ರಧರ ವಾರಿತದಾನವ ವೀರ ವಿದ್ಯಾಧೀರ ಜಲಧಾರಾ 4 ಜಲಧಾರಾಕರ ನಿಭ ಭೂರಮೇಶ ದು- ರ್ವಾರ ದುರಿತನಾಶ ಸರ್ಪೇಶ 5 ಸರ್ಪೇಶ ಗಿರೀಂದ್ರ ಸಮರ್ಪಿತ ವಿಗ್ರಹ ನಿತ್ಯದಿ ಕಾಪಾಡೊ ದಯಮಾಡು 6 ದಯಮಾಡು ದುರ್ಮತಿಯ ದೂಡು ಕಟಾಕ್ಷದಿ ನೋಡುತ ನಲಿದಾಡು 7
--------------
ತುಪಾಕಿ ವೆಂಕಟರಮಣಾಚಾರ್ಯ
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
* ಶ್ರೀ ಪರಾತ್ಪರವಿಠಲ ಪಾಲಿಸಿವರ ಪ ಚರಾಚರಾತ್ಮಕದೇವ ಪರಮ ಪ್ರೀತಿಯಿಂದ ಅ.ಪ. ಮೂರ್ತಿ ಭಾಗವತ ಪ್ರಧಾನ ಸಾಗರೋಪಮ ಭಕ್ತಿ ಪ್ರದದೇವ ಬಾಗಿ ಬೇಡುವೆ ವಿಜ್ಞಾನರೂಪದಿ ನಿನ್ನ 1 ಭಾಗವತೋತ್ತಮರ ಪದ್ಧತಿಯಲಿ ಗುಪ್ತಸಾಧನ ಪಾಲಿಸು ಶುಕಾನುಬಂಧದಿ ಶುಕಪ್ರೇಮ ಪಾತ್ರನಾಗಿ ಸುಖಮಯನ ಭಜಿಸುತಿರಲಿ 2 ಆಪ್ತತಮ ಗುಣಸಮುದ್ರ ಶ್ರೀಜಯೇಶ- ವಿಠಲ ಪೂರ್ಣ ಪ್ರೀತಿಯಲಿ ನಿತ್ಯ ಭಾಗವತರ ಸಂಗದಲಿಟ್ಟು ನಿರುಪಮ ಸುಖನೀಡು 3 ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲಶೀಲಗಳನ್ನು ಎಂದೊ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆನೆಲವಿತ್ತ ದಯವಂತ ಶ್ರೀಕಾಂತ 3
--------------
ಜಯೇಶವಿಠಲ
2. ನಮ್ಮಾಳ್ವಾರ್ ವಕುಳಾಭರಣನೆ ಶರಣೆಂಬೆ ಸಕಲ ಬಂಧು ನೀ ಸಲಹೆಂಬ ಪ ನಿಖಿಲ ಲೋಕಿಗರ ಶಿಶುನಡೆನೂಕಿದೆ ಅಕಳಂಕನೆ ಶಠಗೋಪ ನೀನಾದೆ ಅ.ಪ ನಾಥನಾಯಕಿಯೆ ಕಾರಿಕುಮಾರ ಪೂತನೆ ಸೇನಾಪತಿಯವತಾರ ಪಾತಕಹರ ತಾಮ್ರಪರ್ಣಿತೀರ ಕೀರ್ತಿ ಪಡೆದ ಸುರಪೂಜ್ಯನುದಾರ 1 ಪದುಮ ಪವಿತ್ರನಂದದ ಪ್ರಭೆನೋಡಿ ಮಧುರಕವಿಯು ಬರೆ ಮುದಗೂಡಿ ಅದುಭುತ ಮಂತ್ರವನೊರೆದೆ ಹರಿಯಪಾಡಿ ಸದಮಲ ಸೇವಕನಲಿ ಮನೆಮಾಡಿ2 ಹದಿನಾರು ವರುಷಾಹಾರವಿಲ್ಲದೆ ಬದಿರಾಂಧ ಮೂಕನಾದ ಮುನಿ ವಿಧಿ ಪಿತನದುಭುತಧ್ಯಾನ ಮೈಗೂಡಿ ಸುಧೀಂದ್ರ ಶುಭದ ಅಮೃತಪದ 3 ನಾಥಗೊಲಿದು ತಿರುವಾಯ್ಮೊಳಿಯನು ಪ್ರೀತಿಯೊಳುಪದೇಶವ ಗೈದು ಪಾತಕ ಹರಿಸುತ ಪರಿಸರ ಪೊರೆಯುತ ದಾತಾರಂ ಸುಖದಾತಾರಂ 4 ಮಧುರಾಪೀಠವು ನೀರೊಳು ಮುಳುಗಲು ವಿಧಿಯಿಲ್ಲದೆ ಪಂಡಿತರೊರಲಿ ಅಧಿಕರಿಸುತ ತವ ಪದಗಳಿಗೆರಗೆ ಮಧುರವಾಣಿಯಿಂ ಹಾಡಿದ 5 ಹತ್ತಾಳ್ವಾರರ ಶರೀರವಾಗಿ ಪೆತ್ತಿಹ ಪರಮೌದಾರ ಮುನಿ ಎತ್ತಲು ಹರಿಗುರು ಸರ್ವೋತ್ತಮರೆನು ತುತ್ತುಮಪದವಿಯ ಮಾರ್ಗವತೋರಿದ6 ಆದಿವೈಷ್ಣವ ದೀಕ್ಷಾಚಾರ್ಯ ವೇದವ ದ್ರಾವಿಡದೊಳು ಪೇಳ್ದೆ ಶ್ರೀಧರಸನ್ನಿಧಿಯೊಳಗಿದ ಪಠಿಸಲು ಸಾದರದೊಲಿವಂ ಜಾಜೀಶಂ 7
--------------
ಶಾಮಶರ್ಮರು
3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
4. ಆಂಡಾಳ್ ಶ್ರೀಗೋದಾದೇವಿ ಶ್ರೀಭೂ ನೀಳಾ ಅಂಡಾಳ್ ದೇವಿ ಭೋಗಿಶಯನನ ಭಾಗ್ಯದ ರಾಣಿ ಪ ಸರಿತುಳಸಿಯ ಮೂಲದಳುದಿಸಿದಳೆ ಪೆರಿಯಾಳ್ವಾರರ ಪ್ರೇಮಕುಮಾರಿ ಪರಮಾತ್ಮಗೆ ಹೂ ಮುಡಿದು ಮುಡಿಸಿದೆ ಕರಣತ್ರಯದೊಳಗವನೊಳು ಬೆರೆದೆ 1 ಧನುರ್ಮಾಸದವ ವ್ರತಾಚರಿಸಿದೆ ತಾಚರಿಸಿದೆ ಅನುಮತಿಸಿದ ಗೆಳತಿಯರೊಡಗೂಡಿ ವಿನಯದಿಂದ ತಿರುಪ್ಪಾವೈ ಪಾಡುತ ಕನಸೊಳು ಶ್ರೀರಂಗನೊಳು ಕೂಡಿದೆ 2 ಕಡುತ್ವರೆಯಿಂ ತಿರುಮೊಳಿಯಿಂ ತುತಿಸಿ ಸಡಗರದಿಂದವನಂ ಕೈವಿಡಿದೇ ಒಡೆಯನೊಡಲೊಳಗೆ ಎಡೆಯಂ ಪಡೆದೆ ಪೊಡವೀಶ ಜಾಜಿಕೇಶವನ ಮಡದಿ 3
--------------
ಶಾಮಶರ್ಮರು
7. ಸಂಪ್ರದಾಯದ ಹಾಡುಗಳು ಏಳೈಯ್ಯ ಬೆಳಗಾಯಿತು ಏಳೈಯ್ಯ ರಾಮಾನಂತ ರಂಗ ನರಸಿಂಗ ಏಳೈಯ್ಯ ಪ ಅರುಣೋದಯವಾಗುತಲೆ ಸುರಮುನಿ ಭಕುತರು ಹರಿನೀನೆಗತಿಯೆಂದು ಆನಂದದಿ ನೆರೆದು ನಿಮ್ಮಯ ದಿವ್ಯ ಪಾಡುತಿರಲಿನ್ನು 1 ಕಿನ್ನರ ಸಿರಿಭೂದುರ್ಗಾದೇವಿಯರು ಹರುಷದಲಿ ಅವರವರು ಸೇವೆಗಳನುಸರಿಸಿ ಕಮಲ ಬಳಿಯಲ್ಲಿ ಸ್ಥಿರವಾಗಿ ನಿಂತಿರಲು 2 ಗೂಡಿನ ಕರುಗಳು ಗೋಗಳಿಗಾಗಿ ನೋಡುತಿರೆ ಮಾರ್ಗವನು ಗಾಢನಿದ್ರೆಯೊಳಿರುವ ಕಾರಣವು ಏನೊ 3 ಅಜಮಿಳ ಅಂಬರೀಷ ಅಕ್ರೂರ ವರದನೆ ಗಜರಾಜನು ಕಾಯಿದ ಕರುಣಾವಿಲಾಸನೇ ಪೊರೆವ ಸಂಪನ್ನ ಮಾಧವ ಗೋವಿಂದ 4 ಸಿಂಧು ಶಯನನಾದ ಸಿರಿಹೆನ್ನೆವಿಠ್ಠಲ ಛಂದದಿಂದಲಿ ನಿಮ್ಮ ಶೇವೆಯ ಮಾಳ್ಪರೊಳ್ ಸಂದೇಹಯಾತಕೆ ಶೀಘ್ರದಿಂದಲಿ ಇನ್ನು 5
--------------
ಹೆನ್ನೆರಂಗದಾಸರು
ಅ. ಶ್ರೀಹರಿಸ್ತುತಿಗಳು ಉಯ್ಯಾಲೆಯ ನೀರಜೋದರನಾಡಿದಾ ನಿಗಮಾಂತ ನಾರೀಜನರು ಪಾಡಲೂ ಪ ಮೆರೆವ ಯೌವನದ ವಸಂತಾ ನಾದ ಶ್ರೀ ಧರಣಿಯರ ಮಧ್ಯದಲ್ಲೀ1 ಭಿಸುವೊಡಲ ನೀಡು ಮಾಡೀ 2 ಮೈಯನುರದಾ ಲೊರಗಿಸೀ ಕೈಯೊಡನೆ ತನುವ ತೀಡೇ 3 ಎಡದ ಧರಣಿಯ ನೋಡಲೂ ಬಲದ ರಮೆ ಕಡುಮುನಿಯೆ ಸಂತವಿಸುತಾ ಒಡನೆ ಭೂದೇವಿ ಮುನಿಯೇ ಮನ್ನಿಸುವ ಸಡಗರದಿ ಜಗವ ಮೋಹಿಸೀ 4 ಎಡದ ಕೈಯಿಂದಿಂದಿರೇ ಧರಣಿ ತಾ ಪಿಡಿದು ಬಲಗೈಯಿಂದಲೇ ಕಡಲ ಮಧ್ಯದಿ ಮುಳುಗುತಾ 5 ಅರಿ ಶಂಖ ಕೌಮೋದಕೀ ಸರಸಿರುಹ ವರಕರ ಚತುಷ್ಟಯಗಳೂ ಕುಂಡಲ ಕಿರೀಟಾ ನಗೆಮೊಗದ ಸುರರತಾತನ ಜನಕನೂ 6 ಅಂಬುಜಾಂಘ್ರಿಯ ತಡೆಯದಾ ಪೊಂಬಣ್ಣ ದಂಬರದ ಸಿರಿಯ ನಡುವಿನಾ ಕಂಬುಕಂಠದ ಚೆನ್ನಿಗಾ 7 ಹರಿಯ ಮೈಸೋಂಕಿನಿಂದಾ ಶರೀರಗಳ ಗೊರೆವನ್ನಲು ಪರಿಶೋಭಿಸೀ 8 ಹೂತ ಹೊಂಬಳ್ಳಿಗಳನೇ ತೊಡಿಗೆಯಿಂ ಜೋತೊರಗುತಿಕ್ಕೆಲದಲೀ ಶ್ರೀತರುಣಿ ಧರಣಿ ಮೆರೆಯೇ ವೈಕುಂಠ ಪ್ರೀತ ಚನ್ನನಾಡಿದನುಯ್ಯಲಾ 9
--------------
ಬೇಲೂರು ವೈಕುಂಠದಾಸರು
ಅಂಕಿತ ಪದ ಕನಕಾದ್ರಿ ಹರಿ ವಿಠಲ | ಕಾಪಾಡೊ ಇವಳಾ ಪ ಪಾದ | ವನಜ ಸೇವಿಪಳಾ ಅ.ಪ. ನಿತ್ಯ ತೈಜಸ ಸೂಚ್ಯ | ಇತ್ತಿಹೆನೊ ಅಂಕಿತವಸಾರ್ಥಕೆನಿಪುದು ಇದನ | ಭಕ್ತನಾಭಯದನೇ 1 ಪತಿಸೇವೆ ದೊರಕಿಸುತಾ | ಮುಕ್ತಿ ಮಾರ್ಗದಿ ನಡೆಸಿಕೃತಕೃತ್ಯಳೆಂದೆನಿಸೊ | ಕೃತಿರಮಣದೇವಾ |ಹಿತವಹಿತ ವೆರಡುಗಳಾ | ಸಮತೆಯಲಿ ಉಂಬಂಥಧೃತಿಯನ್ನೆ ನೀಕೊಟ್ಟು | ಸತತ ಕೈ ಪಿಡಿಯೋ 2 ಮಧ್ವಮತ ತತ್ವಗಳ | ಶುದ್ಧಭಾವದಿ ತಿಳಿದುಅಧ್ವಯನು ಹರಿಯೆಂಬ | ಬುದ್ಧಿವೃದ್ಧಿಸುತಾಶ್ರದ್ದೆ ಭಕ್ತಿ ಜ್ಞಾನ | ಸಿದ್ಧಾಂತ ಅನುಸರಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ 3 ಕಾಮಿತ ಪ್ರದನಾಗಿ | ಕಾಮಿತಂಗಳನಿತ್ತುಭೂಮಿಯೊಳು ಸದ್ವøಂದ್ಯ ಸ್ತೋಮದಲಿ ಮೆರೆಸೋಶ್ಯಾಮಸುಂದರ ಹರಿಯೆ | ಶ್ರೀಮಹೀ ಸೇವಿತನೆನೀ ಮನವ ಮಾಡೆ ಹರಿ | ಆವುದಾ ಸಾಧ್ಯಾ 4 ಭಾವ ಜ್ಞಾನೀನಿರಲು | ಪೇಳ್ವುದೇನಿಹುದಿನ್ನುಭಾವುಕಳ ಪೊರೆಯಿಂದು | ಓವಿ ಪ್ರಾರ್ಥಿಸುವೆ |ಭಾವಜನಯ್ಯಗುರು | ಗೋವಿಂದ ವಿಠ್ಠಲನೆ ನೀವೊಲಿಯದಿನ್ನಿಲ್ಲ | ಕಾವಕೊಲ್ಲುವನೆ 5
--------------
ಗುರುಗೋವಿಂದವಿಠಲರು
ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ. ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1 ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2 ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3 ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4 ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು