(37ನೇ ವರ್ಷದ ವರ್ಧಂತಿ)
ದಯದೋರೊ ದೀನಾನುಕಂಪಾ ಲಕ್ಷ್ಮೀಶಾ
ಭಯಹಾರಿ ಭಾಮಾ ಮುಖಾಬ್ಜ ದಿನೇಶ ಪ.
ಒಂದೊಂದುಪಾಧಿ ಸಂಬಂಧಿಸಿ ಬರುವಾ
ಮಂದಾಭಿಲಾಷಗಳಿಂದ ನಿಂದಿಸುವ
ಕುಂದ ನಾನೆಂದಿಗು ಹೊಂದದಂದದಲಿ
ನಿಂದು ಮನದಿ ಪೂರ್ಣಾನಂದ ಸಂತಸದಿ 1
ನಾವಿಬ್ಬರೊಂದೆ ವೃಕ್ಷದಿ ಸೇರಿರುವೆವು
ಕೋವಿದ ನೀನಾದರಿಂದ ಎನ್ನಿರವು
ಜೀವ ಕರ್ತೃತ್ವಾದಿ ಬಳಲುವದೈತು
ತಾವಕನೆಂಬ ಭಾವನೆ ದೂರ ಹೋಯ್ತು 2
ಮತ್ತೇಳು ಮೂವತ್ತು ವತ್ಸರಗಳನು
ಎತ್ತಿನಂದದಿ ಕಳೆವುತ್ತ ಬಾಳಿದೆನು
ಎತ್ತಾಲು ಹೊಂದದೆ ಎರಡೇಳು ವಿಧದ
ಭಕ್ತಿಯ ಬಯಸುವ ಭಯ ದೂರ ವರದ 3
ಮನಸಿನ ದೌರಾತ್ಮ್ಯವನು ಪೇಳಲಾರೆ
ತನುವ ದಂಡಿಸಿ ಕರ್ಮಗಳ ತಾಳಲಾರೆ
ಅನುಕೂಲವಲ್ಲದಿಂದ್ರಿಯಗಳನೆಲ್ಲ
ವನಜಾಕ್ಷ ನಾನೆಂತು ಗೆಲ್ಲುವೆ ಶ್ರೀನಲ್ಲ 4
ಈರೇಳು ಭುವನಾಧಿನಾಥ ನಿನ್ನನ್ನು
ಸೇರಿದೆ ಶೇಷಾದ್ರಿ ಶಿಖರವಾಸ
ಸಾರಿದೆ ಸರ್ವಾಭೀಷ್ಟದ ಶ್ರೀನಿವಾಸ 5