ಒಟ್ಟು 51 ಕಡೆಗಳಲ್ಲಿ , 27 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಲ್ಲದೆನಗಾರಿಲ್ಲ ಗೋವಿಂದನೀನಲ್ಲದೆ ಇಹಪರವಿಲ್ಲ ಪಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
--------------
ಪುರಂದರದಾಸರು
ರಾಮನೆನ್ನಿ ರಾಮನೆನ್ನಿವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.ಪಾತಕವನು ಮಾಡಿ ಪಾತಕರೊಡನಾಡಿಸೂತಕಾಗಿ ವಿಪ್ರಘಾತಕಾಗಿಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀಸೀತಾಕಾಂತನ ನಾಮಪೂತಕಾರಣ 1ಕದ್ದು ಬಂಗಾರವ ಮೆದ್ದು ಅಭಕ್ಷಣಒದ್ದು ದುರ್ಬಲರ ಸೊಕ್ಕಿದ್ದುನಿತ್ಯಶ್ರದ್ಧಾವಿಹೀನನಾದ ಮದÀ್ಯಪ್ರಾಶನಿಯಾದಶುದ್ಧಾತ್ಮಕನಿಗೆ ಶುದ್ಧಕರನು ಮೂಲ 2ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿಪರತಾಪೇಕ್ಷಿಸದೆ ಪಾಮರನಾಗಿಹನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕಟರಸನೆ ತುದಿಯಲಿಹೊರೆವಬಿಡದೆ ರಘು3
--------------
ಪ್ರಸನ್ನವೆಂಕಟದಾಸರು
ರಾಯನ ಭಯವಿಲ್ಲ ಮನಕೆ ಪಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪನೀನೆ ನೀಡುವಿ ಎಂಬ ಙ್ಞÕನ ದಿಂ -ದನು ಸಂಧಾನ ಮಾಡುತಲಿಪ್ಪನರಗೆ 1ಸತಿಸುತ ಹಿತಜನ ವಿತತವೃತ್ತಿಕ್ಷೇತ್ರವ್ರತತೀಜ ಯುಗಕೀವ ಮತಿಯುಳ್ಳ ನರಗೆ 2ಪಾತಕಕರ್ಮವ ಮಾಡಲೇನುಯಾತನಮಯಭವಪಾಥೋನಿಧಿಯೋಳನೀತಗುರುಜಗನ್ನಾಥವಿಠಲಗತಿಪ್ರೀತನಾದಗುರುದೂತನಾದವಗೆ3
--------------
ಗುರುಜಗನ್ನಾಥದಾಸರು